ಬಿ. ಎಂ. ಶ್ರೀ ಸ್ಮಾರಕ ಪ್ರತಿಷ್ಠಾನವು " ಹಸ್ತ ಪ್ರತಿ ಅಭಿಯಾನದ" ಅಡಿಯಲ್ಲಿ
ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆರುದಿನದ ಕಾರ್ಯಾಗಾರವನ್ನು ನಡೆಸಲಾಗುವುದು. ಯುವಜನತೆಯಲ್ಲಿ ಹಸ್ತಪ್ರತಿಗಳನ್ನು ಕುರಿತು ಜಾಗೃತಿ ಮೂಡಿಸುವಸಂರಕ್ಷಣೆ ಮತ್ತು ಅಧ್ಯಯನದಲ್ಲಿ ತೊಡಗಿಸುವ ಉದ್ಧೇಶ ಹೊಂದಲಾಗಿದೆ
ಈ ರೀತಿಯ ತಾತ್ವಿಕ ಬೋಧನೆಗೆ ಆದ್ಯತೆ ಇಲ್ಲದೆ ಆದರೆ ಅದಕ್ಕೆ ಪೂರಕವಾಗಿ ಪೂರ್ಣ ಕೈಮುಟ್ಟಿ ಕೆಲಸ ಮಾಡುವ ಪ್ರಥಮ ಕಾರ್ಯಾಗಾರ ಇದಾಗಿದೆ.
ಸಂಶೋಧನೆಯ ಆಸಕ್ತಿ ಹೊಂದಿರುವ ಎಲ್ಲರಿಗೂ ಮೂಲ ಆಕರವನ್ನೇ ಅಭ್ಯಸಿಸುವ ಅವಕಾಶವನ್ನು ಈ ತರಬೇತಿ ತೆರೆಯುತ್ತದೆ. ಕನ್ನಡ ಮತ್ತು ಪ್ರಾಚೀನ ಇತಿಹಾಸದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಇದರಿಂದ ಬಹಳ ಅನುಕೂಲವಾಗಲಿದೆ
No comments:
Post a Comment