ಕರ್ನಾಟಕ ಇತಿಹಾಸ
ಅಕಾದಮಿಯ 26ನೆ ವಾರ್ಷಿಕ ಸಮ್ಮೇಳನವು , ಸೆಪ್ಟಂಬರ್ ೨೨, ೨೩ ಮತ್ತು ೨೪ ರಂದು ಮೂರುದಿನ
ಶ್ರೀಮದ್ಶಂಕರಾಚಾರ್ಯರ ದಕ್ಷಿಣಾಮ್ನಯ ಪೀಠದ
ಸಹಯೋಗದಲ್ಲಿ ಶೃಂಗೇರಿಯಲ್ಲಿ ಜರುಗಿತು. ಡಾ. ಎಸ್ವಿ ವೆಂಕಟೇಶಯ್ಯನವರು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮೂರುದಿನದ ಕಾರ್ಯಕ್ರಮ ನಡೆಸಿ ಕೊಟ್ಟರು .ಶ್ರೀ ಡಿ.ಎಚ್.ಶಂಕರ
ಮೂರ್ತಿ, ಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳು, ಶೃಂಗೇರಿ ಮಠದ ಆಡಳಿತಾಧಿಕಾರಿಗಳಾದ ಪದ್ಮಶ್ರೀ ಗೌರಿಶಂಕರ
ಅವರು, ಅಕಾದಮಿಯ ಅಧ್ಯಕ್ಷರಾದ ಡಾ. ದೇವರ ಕೊಂಡಾ ರೆಡ್ಡಿ,” ಇತಿಹಾಸ ಸಂಸ್ಕೃತಿ” ಪ್ರಶಸ್ತಿಯ
ವಿಜೇತರಾದ ಪ್ರೊ. ಲಕ್ಷ್ಮಣ ತೆಲಗಾವಿ ಮತ್ತು ಗೋಪಾಲ್ ರಾವ್ ಪ್ರಶಸ್ತಿ ಪಡೆದ ಡಾ. ಸೀತರಾಮರಾವ್ಜಾಗಿರ್ದಾರ ಮತ್ತು, ನಿಕಟ ಪೂರ್ವ ಸರ್ವಾದ್ಯಕ್ಷರಾದ ಎಚ್ಎಸ್
ಗೋಪಾಲರಾವ್ , ಅನೇಕ ಹಿರಿಯ ಇತಿಹಾಸ ತಜ್ಞರು ಮತ್ತು , ಅಕಾದಮಿಯ ಪದಾಧಿಕಾರಿಗಳು ವೇದಿಕೆಯ ಮೇಲಿದ್ದರು.
ಕರ್ನಾಟಕ ರಾಜ್ಯ ವಿಧಾನ ಪರಿಷತ್ ಸಭಾಪತಿಗಳಿಂದ ಸಮ್ಮೇಳನದ ಉದ್ಘಾಟನೆ
ಈ ಕಾರ್ಯಕ್ರಮದ ವಿಭಿನ್ನತೆ ಎಂದರೆ ಸಮಯಕ್ಕೆ ಸರಿಯಾಗಿ ಆದ ಉದ್ಘಾಟನೆ. ಕರ್ನಾಟಕದ ಮೂಲೆ ಮೂಲೆಮೂಲೆಗಳಿಂದ ಬಂದ ಪ್ರತಿನಿಧಿಗಳಿಗೆ ಉತ್ತಮ ವಸತಿ ಸೌಕರ್ಯ ದೊರಕಿತು ಸುಮಾರು ಅರವತ್ತೈದು ಸುಸಜ್ಜಿತ ಕೊಟ್ಟಡಿಗಳನ್ನು ಕೊಡಲಾಗಿತ್ತು. ಬೆಳಗ್ಗೆ ಎಂಟುವರೆಗ ಸರಿಯಾಗಿ ಬೆಳಗಿನ ಉಪಹಾರ.ಸಹ ಪ್ರಾಯೋಜಕರಾದ ಶ್ರೀ ಮಠದಿಂದ ಏರ್ಪಾಡಾಗಿತ್ತು ಹಾಗಾಗಿ ರಾತ್ರಿ ಪ್ರಯಾಣ ಮಾಡಿ ದಣಿದು ಬಂದವರು ಬಿಸಿ ನೀರ ಸ್ನಾನ ಮಾಡಿ ಗಡದ್ದು ತಿಂಡಿ ತಿಂದು ಕಾರ್ಯಕ್ರಮ ನಡೆವ ವೇದಿಕೆಗೆ ಬಂದು ನೊಂದಾವಣೆ ಮಾಡಿಕೊಳ್ಳಲು ಸರತಿಗಾಗಿ ಕಾದಿದ್ದರು..ಅದೃಷ್ಟ ಎಂದರೆ ಅತಿಥಿಗಳಿಗಾಗಿ ಕಾಯುವ ಗೋಜಿರಲಿಲ್ಲ. ಸಮ್ಹೇಮೇಳನದ ಸ್ಳಳ ದೇವಸ್ಥಾನದ ಆವರಣದಲ್ಲಿನ ಸಭಾಂಗಣ . ಎಲ್ಲರೂ ಪಾದರಕ್ಷೆಗಳನ್ನು ಅದರ ಜೊತೆ ತಮ್ಮ ದುಶ್ಚಟಗಳನ್ನು ಆವರಣದ ಹೊರಗೆ ಬಿಟ್ಟು ಶ್ರದ್ಧೆಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶ್ರೀ ಮಠದ ಆಡಳಿತಾಧಿಕಾರಿಗಳಾದ ಪದ್ಮ ಶ್ರೀ ಗೌರಿಶಂಕರ ಅವರು
ಕಾರ್ಯಕ್ರಮದ ಲ್ಲಿ ಶ್ರೀಗೌರಿ ಶಂಕರ ಅವರು ಸಮ್ಮೇಳನದ ಸಹಯೋಗ ತಮ್ಮಸೌಭಾಗ್ಯ ಎಂದು ತಿಳಿಸಿದರು. ಮಠ ಒಂದು ಶ್ರದ್ಧಾಕೇಂದ್ರ. ಇಲ್ಲಿ ಇತಿಹಾಸ ಮತ್ತು ಪರಂಪರೆಗಳ ಸಮ್ಮಿಳನವಾಗಿದೆ. ಆದ್ದರಿಂದ ಇತಿಹಾಸ ಸಮ್ಮೇಳನ ನಡೆಸುವಲ್ಲಿ ಕೈ ಜೋಡಿಸಲು ತಮಗೆ ಅತೀವ ಆನಂದ , ಎಂದುಹೇಳಿದರು. ಅಲ್ಲದೆ ಈ ಕೆಲಸ ಮಾಡಲೆಂದೆ ತಾವಿರುವುದು. ಇಂಥಹ ಸಹಕಾರ ಭವಿಷ್ಯದಲ್ಲಿಯೂ ನೀಡಲು ಸಿದ್ಧ ಎಂದರು.
ಸಮ್ಮೇಳನ ಉದ್ದೇಶಿಸಿ ಶ್ರೀ ಡಿಎಚ್ಶಂಕರ ಮೂರ್ತಿ ಅವರ ಭಾಷಣ
ಸಮ್ಮೇಳನವನ್ನು ಉದ್ಘಾಟಿಸುತ್ತಾ ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್.ಶಂಕರಮೂರ್ತಿಯವರು ಸುದೀರ್ಘವಾಗಿ ಪರಂಪರೆಯನ್ನು ಉಳಿಸಿಕೊಳ್ಳುವ ಅಗತ್ಯದ ಬಗೆಗೆ ಮಾತನಾಡಿದರು. ಯುವಜನರ ಜಾಗೃತಿಗೆ ಇತಿಹಾಸದ ಅಧ್ಯಯನದ ಅಗತ್ಯವನ್ನು ಒತ್ತಿ ಹೇಳಿದರು.ಸರಿಯಾದ ಇತಿಹಾಸದ ರಚನೆಯ ಪ್ರಾಮುಖ್ಯತೆ ತಿಳಿಸಿದರು ಇದೆ ಸಮಯದಲ್ಲಿ ಇತಿಹಾಸ ತಜ್ಞರರಾದ ಡಾ. ಲಕ್ಷ್ಮಣ ತೆಲಗಾವಿ ಯವರಿಗೆ “ “ಇತಿಹಾಸ ಸಂಸ್ಕೃತಿ ಶ್ರೀ” ಪ್ರಶಸ್ತಿ ಪ್ರದಾನ ಮಾಡಿ ಜೊತೆಗೆ ಒಂದುಲಕ್ಷ ರೂಪಾಯಿ ನಗದು ನೀಡಲಾಯಿತು. ಈ ಪ್ರಶಸ್ತಿಯ ಪ್ರಾಯೋಜಕರಾದ ಲಕ್ಷ್ಮಿ ಪ್ರಿಂಟರ್ಸನ ಶ್ರೀಅಶೋಕಕುಮಾರ್ ಅವರು ತಮ್ಮ ಬಿ.ಆರ್.ಆರ್ ಟ್ರಸ್ಟ ವತಿಯಿಂದ ಬಹುಶಃ ದೇಶದಲ್ಲಿಯೆ ಅತಿ ಹೆಚ್ಚು ಮೌಲ್ಯಯುತವಾದ ಈ ಇತಿಹಾಸ ಪ್ರಶಸ್ತಿಯನ್ನು ಪ್ರತಿವರ್ಷ ಕರ್ನಾಟಕ ಇತಿಹಾಸ ಅಕಾದಮಿಯ ಮೂಲಕ ನೀಡುವುದಾಗಿ ಘೋಷಿಸಿದರು.
ಇದೆ ಸಮಯದಲ್ಲಿ ಡಾ. ಬಾ.ರಾ. ಗೋಪಾಲ್ ಶಾಸನ ದತ್ತಿ ಪ್ರಶಸ್ತಿಯನ್ನು
ಡಾ. ಸೀತಾರಂ ಜಾಗಿರದಾರ ಅವರಿಗೆ ಪ್ರದಾನ ಮಾಡಲಾಯಿತು..ಮತ್ತು ೨೬ನೆ ವಾರ್ಷಿಕ “ಇತಿಹಾಸದರ್ಶಿನಿ”
ಗ್ರಂಥವನ್ನೂ ಬಿಡುಗಡೆ ಮಾಡಲಾಯಿತು.
ಸಮ್ಮೇಳನದ ಸರ್ವಾದ್ಯಕ್ಷರಾದ ಡಾ. ಎಸ್ವಿ. ವೆಂಕಟೇಶಯ್ಯನವಿಗೆ ಸನ್ಮಾನ.
ಈ ಸಮ್ಮೇಳನದ ಸರ್ವಾದ್ಯಕ್ಷರಾದ ಡಾ. ಎಸ್ವಿ. ವೆಂಕಟೇಶಯ್ಯನವರು ತಮ್ಮ ೩೩ ವರ್ಷದ ಸುದೀರ್ಘ ಮತ್ತು ಸಾರ್ಥಕ ಕಾರ್ಯದಿಂದ ಪ್ರಾಚೀನ ಸ್ಮಾರಕಗಳ ರಕ್ಷಣೆ, ಉತ್ಖನನ ಮತ್ತು ಪ್ರಾಚ್ಯವಸ್ತು ಇಲಾಖೆಯ ಮೂಲಕ ಮಾಡಿದ ಕೆಲಸದ ವಿವರ ನೀಡಿದರು.. ಪುರಾತತ್ವ ಇಲಾಖೆಯ ಕಾರ್ಯವೈಖರಿ, ಪರಂಪರೆಯ ಸ್ಮಾರಕಗಳ ಸಂರಕ್ಷಣೆಗೆ ಇಲಾಖೆಯ ಕಳಕಳಿ ಮತ್ತು ಕಾಳಜಿ ಕುರಿತು ಮಾಹಿತಿ ನೀಡಿದರು.. ಇತಿಹಾಸ ಅಕಾದಮಿಯ ಅಧ್ಯಕ್ಷರಾದ ಡಾ. ದೇವರ ಕೊಂಡಾರೆಡ್ಡಿಯವರು ಸಮ್ಮೇಳನದ ಹಿನ್ನೆಲೆ . ಅದರ ಯಶಸ್ಸಿಗೆ ಕೈ ಜೋಡಿಸಿದವರ ವಿವರ ನೀಡಿ ಎಲ್ಲರನ್ನೂ ಸ್ವಾಗತಿಸಿದರು.ಸರಿ ಸುಮಾರು ಮೂರು ನೂರು ಪ್ರತಿನಿಧಿಗಳು ಭಾಗವಹಿಸಿದ್ದರು ಅದರಲ್ಲಿ ಮಹಿಳೆಯರ ಸಂಖ್ಯೆಯೂ ಗಣನೀಯವಾಗಿತ್ತು ಇತಿಹಾಸ ಮತ್ತು ಸಾಹಿತ್ಯ ರಂಗದಲ್ಲಿನವರು ಜೊತೆಜೊತೆಗೆ ಸಮಾಜದ ವಿವಿಧ ರಂಗದಲ್ಲಿನ ಇಯಿಹಾಸಾಕ್ತರು ಭಾಗವಹಿಸಿದ್ದು ವಿಶೇಷವಾಗಿತ್ತು. . ಅರವತ್ತು-ಎಪ್ಪತ್ತು ವಯೋಮಾನದ ಹಿರಿಯ ತಲೆಗಳೊಡನೆ ಅವರ ಮರ್ಗದರ್ಶನ ಪಡೆಯಲು, ಸಂವಾದ ನಡೆಸಲು . ಸಂಪ್ರಬಂಧ ಮಂಡಿಸಲು ಹೆಚ್ಚಿನ ಸಂಖ್ಯೆಯ ಯುವ ಜನರು ಭಾವಹಿಸಿದುದು ಭವಿಷ್ಯದ ಭರವಸೆಯ ಸಂಕೇತವಾಗಿತ್ತು..ಅಂದಾಜು ೧೪೦ಕ್ಕೂಹೆಚ್ಚು ಮಂದಿ ತಮ್ಮ ಸಂಪ್ರಬಂಧ ಮಂಡಿಸಲು ನೊಂದಾಯಿಸಿ ಕೊಂಡಿದ್ದರು ಅದಕ್ಕಾಗಿ ಮುಖ್ಯ ವೇದಿಕೆಯ ಜೊತೆಗೆ ಸಮಾಂತರವಾಗಿ ಕಾರ್ಯಕ್ರಮ ನಡೆಸಲು ಇನ್ನೊಂದು ವೇದಿಕೆಯನ್ನು ಸಿದ್ಧ ಮಾಡಲಾಗಿತ್ತು. ಅಲ್ಲಿ ಪವರ್ ಪಾಯಿಂಟ್ ಪ್ರಾತ್ಯಕ್ಷಿಕೆ ಕೊಡಲು ಸೂಕ್ತ ವ್ಯವಸ್ಥೆ ಮಾಡಿದುದು ಸಂಪ್ರಬಂಧಗಳನ್ನು ಪರಿಣಾಮಕಾರಿಯಾಗಿ ಚಿತ್ರ ಸಮೇತ ಮಂಡಿಸಲು ಅನುಕೂಲವಾಗಿತ್ತು..ಉದ್ಘಾಟನೆಯ ನಂತರ ಗೋಷ್ಠಿಗಳು ಪ್ರಾಂಭವಾದವು. ಪ್ರತಿ ಗೋಷ್ಠಿಗೂ ತಜ್ಞರೊಬ್ಬರು ಅಧ್ಯಕ್ಷರು ಜೊತೆಗೆ ಒಬ್ಬ ನಿರೂಪಕರು . ಹೆಚ್ಚಿನ ಸಂಖ್ಯೆಯ ಪ್ರಬಂಧಗಳ ಮಂಡನೆ ಆಗಬೇಕಾದುದರಿಂದ ಪ್ರತಿ ಪ್ರಬಂಧ ಮಂಡನೆಗೆ ೮-೧೦ ನಿಮಿಷ ಕಾಲಾವಧಿ ನಿಗದಿ ಮಾಡಲಾಗಿತ್ತು ಜೊತೆಗೆ ೨-೩ ಪ್ರಶ್ನೆಗಳಿಗೂ ಅವಕಾಶವಿತ್ತು. ಆಯ್ದ ಗೋಷ್ಠಿಗಳ ವಿವರವನ್ನು ಒಂದೊಂದಾಗಿ ಬ್ಲಾಗ್ನಲ್ಲಿ ಮುಂಬರುವ ದಿನಗಳಲ್ಲಿ ನಿರೀಕ್ಷಿಸಿ.
No comments:
Post a Comment