Sunday, March 30, 2014

ಸರಳೀಕೃತ ಹಸ್ತ ಪ್ರತಿ ಅಧ್ಯಯನ



                            

                   ಯುಗಾದಿಯ ಶುಭಾಶಯಗಳು                     


        ರೇವಣ ಸಿದ್ದೇಶ್ವರ ಕಾವ್ಯ                                                  

  

                                ರೇವಣಸಿದ್ಧೇಶ್ವರ ಕಾವ್ಯದ ಮೊದಲ  ಗರಿ ಲಿಪ್ಯಾಂತರ
೧. ಶ್ರೀ ಗಣಾಧಿಪತೇಯೇನಮಃ.  Ii ಶ್ರೀಗುರ ಪರಬ್ರಹ್ಮೇಣೇಮಃ  II ಶ್ರೀ ಗುರು ರಾಮಗಿರಿ ಕರಿಸಿದ್ದೇಶ್ವರಸ್ವಾಮಿಯ ಪಾದಾರವಿಂದವೇ ಗತೀII  ಪೈಂಗಳ ನಾಮ ಸಂವತ್ಸರದ ಮಾಘಶುದ್ಧ ಪಂಚಮಿ --- ಗತಿಸಿದ ಮಠದ ಸಿದ್ಧವೀರಯ್ಯನವರು
 ೨ .ಲಿಖಿಸಿದ ರೇವಣಸಿದ್ದೇಶ್ವರನ ಕಾವ್ಯ ಪಾಡಿಗಳಿಗೆ ಶುಭ ಮಸ್ತು, ಶೋಭನ ಮಸ್ತು  ಆಯುರಾರೋಗ್ಯ ಐಶ್ವರ್ಯವೃದ್ಧಿ ರಸ್ತು Iಐದನೂ- I ಶ್ರೀ ಮದ್ಗುರುರಾಮಗಿರಿಯ  ಸಿದ್ದೇಶನ  ಕೋಮಲ ಪಾದಪದ್ಮಗಳಿಗೆ--- ಅಸ್ತು  
೩. ಹೃದಯ ಕಮಲದಭಿರಾಮ ಕುಸುಮನಿಕೆರಗುವೆನು IIII ಲಂಬೂಜಸಖನನಂಬುIಜಾಕ್ಷನಂಬುಜಸಖ I ಕುಂಬಿನಯೊಳಗುಳ್ಳ ಜನರುII ಜಾಂಬಾರಿ ಮೊದಲಾದ Iಸುರರು ಪೂಜಿಪ ಪಾದಾಂಬುಜಕಾನೆರುಗುವೆನು II  II  ಸಶ್ರಾಗ—
೪. ನನಕ ಪತ್ರನಾಮನ ಪಿತ ಶುಕ್ರಗಾಮನ ಸ್ತೋತ್ರ  ಪಾತ್ರಾ II ಪತ್ರ ಕಾರನಹರಗಾರ್ಧಾಂಗವನಿತತ್ತಾI s ಸತ್ರಾಂಬಕಜಯ ಜಯII  II ಪಾರ್ವತಿ ಸಕಲ ಜನರಿಗೆಲ್ಲ ಮಾತೆಯುII ಸರ್ವೇಶ್ವರನರ್ಧಾಂಗಿ ನೀ II  ಸರ್ನಿಸೆನ್ನಯ ಮಾನದೊಳಗೆ ಸುಮತಿಯಾ
 ೫. ನುI ಪರ್ವತರಾಜ ಕುವರಿ II  IIಮೃಡನುರಿಗಣ್ಣಗಳು ಘುಡು ಘುಡಿಸಿತ ಸುಟ್ಟ Iಖಡ್ಗ ಶೂಲಿಗೆ ಧನು ಶರಧಿII ನಡದು ದಕ್ಷನ ಶಿರ ಕಡಿದ ವೀರೇಶ್ವರI ಕೊಡು ಎನ್ನ ಮತಿಗೆ ಮಂಗಳವಾIIII  ಪಡೆದೇಳು ದಿನದೆಡೆಯೊಳಗೆ ಕಡೆಗಡಿ ಯುತ ತಾರಕನಾ  II ಹೊಡೆದು ಕೆಡವಿದ ಷಣ್ಮುಖನು ಕೊಡು  I
ಯೆಮಗೆ ಈಗ ದೃಡತರ ವರದ ಸನ್ಮತಿಯಾ II II ದಂಡ ಕಮಂಡ ಕಂಕಾ ಉಪಕರ್ಣ ಕುಂಡಲ ಅಸಿತಾವಧಿರಿಸಿIi  ಕಂಡು  ಇಂಧುಧರನ ಲಿಂಗದಲ್ಲಿ ಉದ್ಭವಿಸಿದ ಉದ್ದಂಡ ರೇವಣ ಕೊಡು ವರವಾ IIII
ಜಲಧಿಯುಕ್ಕಿ ಜಗವೆಲ್ಲಾ ನುಂಗಲು ಹಲುಬಿ ಸುರರು ಬಾಯಿ ಬಿಡಲು II ಋಜ ಬಲ್ಪಿಯಲಿ ಎಲ್ಲರ ಕಾಯ್ದ ಶೂಲಿಯ ವೃಷಭ ಕೊಡುವರವಾ  IIII ಸರ್ವಜ್ಞನ ವರ ಕುವರ ಗಣೇಶನೆ ಸರ್ವ ಕಾಲದಿಂದ -----

                                                     ಹಸ್ತ ಪ್ರತಿ ಅಭಿಯಾನ
                         
, ಹಸ್ತ ಪ್ರತಿ ಅಭಿಯಾನದ ಅಂತಿಮ ಗುರಿಯು  ಗರಿಗಳಲ್ಲಿ  ಪಠ್ಯವನ್ನು ಅಧ್ಯಯನ ಮಾಡಿ ಹೊಸ ಗನ್ನಡದಲ್ಲಿ ದಾಖಲಿಸುವುದು, ವಿದ್ವತ್‌ ಮತ್ತು ತಂತ್ರ ಜ್ಞಾನಗಳ ಸಮ್ಮಿಳನದಿಂದ ವರ್ಷಗಟ್ಟಲೆ ಹಿಡಿಯಬಹುದಾದ ಕೆಲಸವನ್ನು  ಕೆಲವೇ ತಿಂಗಳಲ್ಲೆ ಪೂರೈಸುವ ಪ್ರಯತ್ನಾವಾಗಿ ೧೦೦ ಗರಿಗಳಿರುವ ರೇವಣ ಸಿದ್ದೇಶ್ವರ ಕಾವ್ಯವನ್ನು ಕೈಗೆತ್ತಿಕೊಂಡು  ೬  ಗಂಟೆಯಲ್ಲಿ  ಒಂದು ಗರಿಯ ಲಿಪ್ಯಾಂತರ ಮಾಡಿದೆ..ಅಂದರೆ  ಹತ್ತು ಪಟ್ಟು ಕಡಿಮೆ ಅವಧಿಯಲ್ಲಿ ಗ್ರಂಥ ಸಂಪಾದನಾ ಕಾರ್ಯಮಾಡುವ ಸಾಧ್ಯತೆ ಇದೆ. ಯುವ ಸಂಶೋಧಕರ ಗಮನ ಸೆಳೆಯಲು ಹೊಸವರ್ಷದ ಶುಭಾಶಯ ಕೋರುತ್ತಾ ಈ ಕೊಡುಗೆ ನೀಡಿದೆ. ಕಾಂಪ್ಯೂಟರ್‌ ಹೊಂದಿರುವ  ಮತ್ತು ಕನ್ನಡ ಭಾಷೆಲ್ಲಿ ಪರಿಣತೆ ಇರುವವರು ತಾವು ಇದ್ದ ಜಾಗದಲ್ಲೇ ಈ ಅಭಿಯಾನದಲ್ಲಿ ಭಾಗವಹಿಸಿ ಗ್ರಂಥ ಸಂಪಾದನೆ ಮಾಡಬಹುದು. ಈ ಕಾರ್ಯದಲ್ಲಿ ಸಹಕರಿಸಿದ ಪ್ರತಿಷ್ಠಾನದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು,,ಶ್ರೀ ಗುರುಪ್ರಸಾದ ಮತ್ತು ಅವರ ತಂಡ, ಶ್ರೀಮತಿ ಸೀತಾಲಕ್ಷ್ಮಿ  ಮತ್ತು ಆನ್‌ಲೈನ್‌ ನಲ್ಲಿ ಸಹಕರಿಸಿದ ಸಹೃದಯರು ಹಾಗೂ ಆಸಕ್ತಿತೋರಿದ ಎಲ್ಲರಿಗೂ ಆಭಾರಿ. ಮಾಹಿತಿಗೆ  ಅಭಿಯಾನದ ನಿರ್ದೇಶಕರನ್ನು  ಮಿಂಚಂಚೆಯ  ಮೂಲಕ.ಸಂಪರ್ಕಿಸಿ-
                             -   appaaji@gmail.com
                                          ಹೊಸ ವರ್ಷದ  ಶುಭಾಶಯಗಳೊಡನೆ  
ಎಚ್‌.ಶೇಷಗಿರಿರಾವ್‌.
ನಿರ್ದೇಶಕರು
ಹಸ್ತ ಪ್ರತಿ ಅಭಿಯಾನ        
                                                                              

                       

No comments:

Post a Comment