Saturday, March 22, 2014

ಪ್ರಥಮ ಶ್ರೀಸಾಹಿತ್ಯ ಪ್ರಶಸ್ತಿ ವಿಜೇತ -ಎನ್‌ ಎಸ್‌. ಎಲ್‌


ನವೋದಯ ಕಾವ್ಯಕ್ಕೆ  ಮರುಜೀವ ನೀಡಿದ ಕವಿ

ನವೋದಯದ ಹರಿಕಾರರಾದ ಬಿ.ಎಂ. ಶ್ರೀ ಅವರ ಸ್ಮಾರಕ  ಪ್ರಥಮ ಶ್ರೀಸಾಹಿತ್ಯ ಪ್ರಶಸ್ತಿ ನವೋದಯ ಕವಿತೆಯ ಪುನರ್‌ಜೀವನ ನೀಡಿದ ಕವಿಗೆ ಸಂದಿರುವುದು ಬಹಳ ಸಂದೋರ್ಭಚಿತ. ಭಾವಗೀತೆಯಲ್ಲಿ ಗೇಯತೆಗೆ ಬಹುದೊಡ್ಡ ಸ್ಥಾನವಿದೆ. ಓದುವ ಕವನವನ್ನುಆಲಿಸುವ ಕವನವಾಗಿಸಿ, ವ್ಯಕ್ತಿಕೇಂದ್ರಿತ ಅನುಭವವನ್ನು ಸಮುದಾಯ ಕೇಂದ್ರಿತವಾಗಿಸುವ, ಸುಗಮ ಸಂಗಿತದ ಜನಪ್ರಿಯತೆಗೆ ಕಾರಣರಾದವರಲ್ಲಿ ಪ್ರಮುಖಕವಿ ಎನ್‌.ಎಸ್‌. ಲಕ್ಷೀನಾರಾಯಣಭಟ್ಟರು ಪ್ರಮುಖರು.


 ಕ್ಯಾಸೆಟ್‌ಯುಗಕ್ಕೆ ಕಾರಣೀಭೂತರೆಂದು ಹಲವರ ಅನಿಸಿಕೆ. ಅವರು ದ್ವನಿಸುರುಳಿಗಾಗಿ ಬರೆದವರಲ್ಲ. ಅವರ ಕವಿತೆಗಳು ಹಾಡುಗಾರಿಕೆಗೆ ಲಘು ಸಂಗಿತಕ್ಕೆ ಹೇಳಿ ಮಾಡಿಸಿದಂತೆ ಇದ್ದುದುರಿಂದ  ಒಂದು ದೊಡ್ಡ ಅಭಿಮಾನಿ ವೃಂದವೇ ಸೃಷ್ಟಿಯಾಯಿತು. ನವ್ಯ ಕಾವ್ಯದ  ತುಟ್ಟ ತುದಿಯ ಅವಧಿಯಲ್ಲಿ ಭಾವಗೀತೆಯಲ್ಲಿನ ಭಾವಕ್ಕೆ ಆಭಾವ ಬಂದಿತು.. ವಿಚಾರ ಪ್ರಧಾನವಾಗಿರುವ ‘ಕವಿತೆಯಲ್ಲಿ ಹಾಡಲು ಅನುಕೂಲವಾಗುವ ಗೇಯಂತೆ,ಛಂದೋಬದ್ದತೆಎರಡೂ ಗೌಣವಾದವು. .ಕವನವು ಮೆಚ್ಚಿಗೆಯಾಗುವುದು  ಅದು ಅರ್ಥವಾಗದಿದ್ದಾಗ ’ ಎಂಬ ಮಾತು ಕನ್ನಡದ ಮಟ್ಟಿಗೂ ಸತ್ಯವಾಗಿತ್ತು  ಕಾವ್ಯವಿಚಾರ ಪರವಾಗಿರಬೇಕೆಂದವರು ಹಲವರಾದರೆ, ಕೆಲವರು ಪ್ರಚಾರ ಪ್ರಧಾನವಾಗಿರಬೇಕೆಂದೂ ಬಯಸಿದರು ಈ ಸಂದಿಗ್ದ ಸಮಯದಲ್ಲಿ ಸಾಹಿತ್ಯ ಮತ್ತು ಸಂಗೀತಗಳ ಸಂಗಮದ ಸಾಧ್ಯತೆಯನ್ನು ಹೊಸ ತಂತ್ರಜ್ಞಾನ ತೋರಿಸಿತು.ಅದನ್ನು ಮೊದಲು ಮನಗಂಡು ಅದರ ಸದುಪಯೋಗ ಮಾಡಿಕೊಂಡವರಲ್ಲಿ ಭಟ್ಟರೂ ಪ್ರಮುಖರು.
ಎನ್‌. ಎಸ್‌ ಲಕ್ಷ್ಮಿನಾರಾಯಣ ಭಟ್ಟರು  ತುಂಗೆಯ ತಟದಲ್ಲಿರುವ ಶಿವಮೊಗ್ಗೆಯಲ್ಲ್ಲಿ ೧೯೩೬ ರಲ್ಲಿ  ಜನಿಸಿದರು.ಅವರ ತಂದೆ ಶಿವರಾಮ ಭಟ್ಟರ ಮೂಲ ದಕ್ಷಿಣ.ಕನ್ನಡ. ಓದಿನ ಹಂಬಲದಿಂದ ಶೃಂಗೇರಿಯಿಂದ ನಡೆದು ಬಂದು ಸಂಸ್ಕೃತ ಅಧ್ಯಯನ ಮಾಡಿದರು. ಹೊಟ್ಟೆ ಪಾಡಿಗಾಗಿ ಶಿವಮೊಗ್ಗೆಯಲ್ಲಿ ನೆಲಸಿ ಪೌರೋಹಿತ್ಯದಿಂದ ಸಂಸಾರ ಸಾಗಿಸುತಿದ್ದರು  ಐದು ಮಕ್ಕಳು ಕೊನೆಯ ಗಂಡು ಮಗು ಹುಟ್ಟಿದುದು ೧೯೩೬ ರಲ್ಲಿ. ಎರಡೇ ವರ್ಷದವನಿದ್ದಾಗ ತೀರಿಹೋದರು  ನಾಲ್ವರು ಅಕ್ಕಂದಿರು ಕೊನೆಯ ಗಂಡು ಮಗುವನ್ನು  ಇವರ ತಾಯಿ ಮೂಕಾಂಬಿಕಮ್ಮ ನೆರೆ ಹೊರೆಯವರ ಮನೆಗೆಲಸ ಮಾಡಿ ಗಳಿಸಿದ ಹಣದಲ್ಲಿ ಮಕ್ಕಳನ್ನು ಸಾಕಿದರು.ಮುತ್ತುಗದ ಎಲೆ ಕಿತ್ತು ತಂದು ಎಲೆ ಹಚ್ಚಿ ಮರುವ ಕೆಲಸದಲ್ಲಿ ಮಕ್ಕಳೂ ಸಹಕರಿಸುತಿದ್ದರು.ಇದ್ದಒಬ್ಬಮಗನೂ ಮಾದ್ಯಮಿಕ ಶಾಲೆಯಲ್ಲಿರುವಾಗಲೇ ತನಗಿಂತ ಕೆಳಗಿನ ತರಗತಿಯ ಮಕ್ಕಳಿಗೆ ಮನೆಪಾಠ ಹೇಳಿ ಬದುಕಿನ ಬಂಡಿ ಸುಗಮವಾಗಿ ಸಾಗಲು ಸಹಾಯ ಮಾಡುತಿದ್ದನು. ಮನೆಯಲ್ಲಿ ಒಪ್ಪೊತ್ತಿನ ಊಟಕ್ಕೆ ತತ್ವಾರ. ತಾಯಿ ಮೂಕಾಂಬಿಕಮ್ಮನ ಆತ್ಮಯಜ್ಞದಿಂದ ಜೀವನರಥ ಸಾಗುತಿತ್ತು.. ಇದಕ್ಕೂ ಮಿಗಿಲಾಗಿ ತಾವು ಹೋಗುತಿದ್ದ ಮನೆಗಳಲ್ಲಿನ  ಸಾಹಿತ್ಯ ಕೃತಿಗಳನ್ನು ಎರವಲು ತಂದು ಸಂಜೆ , ರಾತ್ರಿ ಮಕ್ಕಳೊಡನೆ ಒಟ್ಟಿಗೆ ಕುಳಿತು ಅವರಿಂದ ಓದಿಸಿ ಎಲ್ಲರೂ ಕೇಳುತಿದ್ದರು.ಇದರಿಂದ ಹೊಟ್ಟೆಯ ಹಸಿವು ಹಿಂಗದಿದ್ದರೂ ಎಳೆಯ ಮನಸ್ಸಿಗೆ ಸಾಹಿತ್ಯದ ಅಭಿರುಚಿ ಹತ್ತಿತು. ವಿಶೇಷವಾಗಿ ಗಳಗನಾಥರ, ಅನಕೃ ಕಾದಂಬರಿಗಳು.ಪಠನ ಆಗಿದ್ದು ಆಗಲೇ. ಇದೆಲ್ಲ ಮುಂದಿನ ಸಾಹಿತ್ಯ ಸಾಧನೆಗೆ ಅಡಿಪಾಯ ವಾಗಿತ್ತು..


ಬಾಲಕ ಲಕ್ಷ್ಮಿನಾರಾಯಣ ಬಲು ಚುರುಕು   ದೇವಾಲಯದ ಹತ್ತಿರವಿದ್ದ ಸಂಪಿಗೆ ಮರವೇರಿ ಹೂವು ಕದ್ದು ದೇವತಾರಾದನೆ ಮಾಡಲು ಸುತ್ತ ಮುತ್ತಲಿನವರಿಗೆ ಕೊಡುತಿದ್ದ ಹುಡುಗನಿಗೆ ಶ್ರದ್ಧೆಯಿಂದ ಸಾಹಿತ್ಯ ಸಮಾರಾಧನೆಯೆಡೆಗೆ ಸೆಳೆದವರು ಕೇಶವ ಘನಪಾಠಿಗಳು.  ಅವರಿಂದ  ಸಂಸ್ಕೃತದ ಮೊದಲಪಾಠ. ಅಮರಕೋಶ,ಕಾಳಿದಾಸ  ಸಂಸ್ಕೃತ ಸಾಹಿತ್ಯದ ಪರಿಚಯ. ಕಾಳಿದಾಸನ ಕಾವ್ಯ ಪ್ರವೇಶ,ಅವರ ಪರಿಸರದ ಪ್ರಭಾವದಿಮದ ಸಂಗಿತದ ಒಲವು. ಕಲಿಕೆಗಿಂತಲೂ ಕೇಳಿಕೆಯು ಪ್ರಭಾವ ಬೀರಿತು. ಮನೆಯ ಎದುರಿನ ಲಕ್ಷ್ಮಿದೇವಸ್ತಾನದಲ್ಲಿ ಸಂಜೆ ಗಮಕ, ಹರಿಕಥೆ,ಸಂಗಿತ ವೆಂಕಟೇಶಯ್ಯನವರ ಭಾರತವಾಚನ ಕುಮಾರವ್ಯಾಸನನ್ನು ಹೃದಯಕ್ಕಿಳಿಸಿತು ಕೀರ್ತನೆ, ಹರಿಕಥೆ,ಸ್ತೋತ್ರಗಳ ನಿರಂತರವಾಗಿ ಆಲಿಸುವದರಿಂದ ಮನಸ್ಸು ಲಯಬದ್ದ ಪದಗಳ ಮೋಡಿಗೆ ಮರುಳಾಯಿತು.

.ತುಂಗೆಯ ದಡದಲ್ಲಿ ಮನೆ. ಬೇಸಿಗೆಯಲ್ಲಿನ ಜುಳುಜುಳುನಾದ , ಮಳೆಗಾಲದ ಅವಳ ಅಬ್ಬರ ಅವರ ಕಾವ್ಯದಲ್ಲಿ  ಪ್ರತಿಬಿಂಬಿಸಿದೆ.. ದೇವರ  ಪೂಜೆಯಲ್ಲಿ ಕುಮಾರವ್ಯಾಸ ಕವಿತೆಗಳೊಂದಿಗೆ ಅರ್ಚನೆ ಮೊದಲು ಮಾಡಿದರು.. ಇಂಟರ್‌ ಮಿಡೀಯಟ್‌ ಶಿವಮೊಗ್ಗದಲ್ಲಿ.ಜಿ.ಎಸ್‌ಎಸ್‌ ಗುರುಗಳು ಪದವಿಯನ್ನು ಮೈಸೂರಲ್ಲಿ ಕಲಿಯುವ ಆಶೆ. ಟಿಕೆಟ್‌ ಇಲ್ಲದೆ ರೈಲಿನಲ್ಲಿ ಮೈಸೂರಿಗೆ ಪ್ರಯಾಣ ಮಾಡಿದರು. ಜೇಬಿನಲ್ಲಿ ಇದ್ದುದು ಪುಡಿಗಾಸು.ಆದರು ಮೊಂಡು ಧೈರ್ಯದಿಂದ ಹೊರಟರು.ಉಚಿತ ವಿದ್ಯಾರ್ಥಿ ನಿಲಯದಲ್ಲಿ ವಸತಿ. ತ. ಸು. ತ.ಸು ಶ್ಯಾಮರಾಯರ ಕೃಪಾಛಾಯೆಯಲ್ಲಿ ಊಟದ ವ್ಯವಸ್ಥೆಯಾಯಿತು. ಹಲವರ ಮನಯಲ್ಲಿ ವಾರಾನ್ನ. ಎಲ್ಲೂ ಇಲ್ಲದಾಗ ಶ್ಯಾಮರಾಯರೇ ಅನ್ನದಾತರು.ಹೀಗೆಸಾಗಿತು ಅವರ ವಿದ್ಯಾರ್ಥಿಜೀವನ.. ಪದವಿಯಲ್ಲಿ  ತಿ.ನಂ ಶ್ರೀ. ಅವರ ಗುರುಗಳು .ಆನರ್ಸನ ಓದುವಾಗಲೇ  ಇಪ್ಪತ್ತಕ್ಕೂ ಅಧಿಕ ಪದ್ಯ ಬರೆದಿದ್ದರು.ಅವರ  ಸಹಪಾಠಿ ಕೆ. ನಾರಾಯಣ  ಅವರ ಮೊದಲ ಓದುಗ ಮತ್ತು ವಿಮರ್ಶಕ.ಪದ್ಯಗಳು ಬಾಲಿಶ ಎಂದು ಹರಿದುಹಾಕಿದರು.
ಕಾಲೇಜಿನಲ್ಲಿ .ಹಂ.ಪ.ನಾ, ಎಚ್‌ ಎಂ. ಕೃಷ್ಣಯ್ಯ ,ಸುಜನಾ ಸಹಪಾಠಿಗಳು ಡಿ.ಎಲ್‌.ಎನ್‌., ತಿ.ನಂಶ್ರೀ.ಎಸ್‌ವಿ. ರಂಗಣ್ಣ, ಎಸ್‌ವಿ. ಪರಮೇಶ್ವರಭಟ್ಟರಂಥಹ ಉದ್ದಾಮ ವಿದ್ವಾಂಸರ ಗರಡಿಯಲ್ಲಿ ಕಲಿಕೆ..ಪದವಿ ಮತ್ತು ಎಂ. ಎ ನಲ್ಲಿ  ಪ್ರಪ್ರಥಮ ಸ್ಥಾನ.  ಎಂ ಎ ನಂತರ ಎರಡುವರ್ಷ ಸಂಶೋಧನೆ ವಿಧ್ಯಾರ್ಥಿಯಾಗಿ ಕೆಲಸ ಮಾಡಿದರು. ಸುವ್ಯವಸ್ಥಿತ ಅಧ್ಯಯನಕ್ಕೆಬುನಾದಿ  ಬಿದ್ದ್ದು ಆಗಲೇ. “ಆಧುನಿಕ  ಕನ್ನಡ ಕವಿಗಳಲ್ಲಿ ಪ್ರತಿಮಾವಿಲಾಸ’  ವಿಷಯದ ಮೇಲೆ ಸಂಶೋಧನೆಗೆ ತೊಡಗಿದರು.ಮೊದಲು ಡಿ.ಎಲ್  ಎನ್‌.ಅವರ ಮಾರ್ಗದರ್ಶಿಯಾಗಿದ್ದರು. ಅವರ ನಿಧನಾನಂತರ ಹಾ.ಮಾ.ನಾಯಕರ ಮಾರ್ಗದರ್ಶನದಲ್ಲಿ ಪಿಎಚ್‌ಡಿ ಸಂಪ್ರಬಂಧ ಸಿದ್ಧವಾಯಿತು ಪದವಿಯೂ ದೊರೆಯಿತು..ಅದು ಸೀಮಿತ ಎನಿಸಿದ್ದರಿಂದ ಪ್ರಕಟಿಸಲಿಲ್ಲ. ತುಸು ಸಮಯದ ನಂತರ   ಪ್ರಾಚಿನ ಮತ್ತು ಆಧುನಿಕ ಕಾವ್ಯ ,ಗ್ರೀಕ್‌, ಇಂಗ್ಲಿಷ್‌ ಮತ್ತು ಸಂಸ್ಕೃತದ ಆಳವಾದ ಅಧ್ಯಯನದ ಫಲಸ್ವರೂಪ”  ಕಾವ್ಯ ಪ್ರತಿಮೆ. “  ಕೃತಿ ಹೊರಬಂದಿತು. ಜಿ.ಎಸ್‌ಎಸ್‌ರ ಪ್ರಕಾರ ಕನ್ನಡ ಕಾವ್ಯ ಮಿಮಾಂಸೆ  ಕ್ಷೇತ್ರಕ್ಕೆ ಅದು ಒಂದು ಮೌಲಿಕ ಕೊಡುಗೆ, ಅನಂತಮೂರ್ತಿಗಳು ಈ ಕೃತಿಯನ್ನು  ಆಚಾರ್ಯ  ಕೃತಿ ಎಂದು ಕರೆದರು.


ಅವರ ಉದ್ಯೋಗ ಪರ್ವಪ್ರಾರಂಭವಾದುದು ಆಚಾರ್ಯ ಪಾಠಶಾಲೆ ಕಾಲೇಜಿನಲ್ಲಿ. . ಬೆಂಗಳೂರು ವಿಶ್ವವಿದ್ಯಾನಿಲಯ ಸ್ಥಾಪನೆಯಾದಾಗ ಕನ್ನಡ ವಿಭಾಗದಲ್ಲಿ ಸೇವೆ ಸಂದಿತು.ಅಲ್ಲಿ .ಪ್ರಾಧ್ಯಾಪಕ ವಿಭಾಗ ಮುಖ್ಯಸ್ಥ, ಆರ್ಟಫ್ಯಾಕಲ್ಟಿ ಡೀನ್‌ ,ಸಿಂಡಿಕೇಟ್‌,ಸೆನೇಟ್‌ ಸಮಿತಿ ಸದಸ್ಯರಾಗಿ ಬಹುಮುಖಿ ಸೇವೆ ಸಲ್ಲಿಸಿದರು. ಅವರ ಜೀವನ ಬರಿ ಹೂವಿನ ಹಾಸಿಗೆಯಾಗಿರಲಿಲ್ಲ. ಬಾಲ್ಯದಲ್ಲಿ ಬಡತನದ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿ ಗೆದ್ದರೆ ಕವಿಯಾಗಿಯೂ ಆಧುನಿಕ ತಂತ್ರ ಜ್ಞಾನದ ಬಳಕೆಯಿಂದ ಧ್ವನಿ ಸುರಳಿಗಳ ಸಹಾಯದಿಂದ ಸಾಹಿತ್ಯ ಮತ್ತು ಕಾವ್ಯವನ್ನು ಜನಸಾಮಾನ್ಯರ ಮನೆಯಂಗಳಕ್ಕೆ ಮುಟ್ಟಿಸಿದರ ಪರಿಣಾಮವಾಗಿ ಭಾವ ಗೀತೆಗಳಿಗೆ ಮರು ಹುಟ್ಟು ದೊರೆಯಿತು. ಗೆಳೆಯ ಶಿವಮೊಗ್ಗ ಸುಬ್ಬಣ್ಣ, ಸಿ .ಅಶ್ವತ್ಥ, ಮೈಸೂರು ಅನಂತಸ್ವಾಮಿ,ರತ್ನಮಾಲಪ್ರಕಾಶ್‌ ಅವರ ಇನಿದನಿಯಲ್ಲಿ ಮನೆ ಮನೆಯಲ್ಲೂ ಭಾವಗೀತೆಗಳು ನಿನದಿಸ ತೊಡಗಿದವು. ಇದರಿಂದ ಕೀರ್ತಿಯ ಜೊತೆ ಟೀಕೆ ಟಿಪ್ಪಣಿಗಳೂ ಬಂದವು. ಕಾವ್ಯ ಗುಣದ ಕೊರತೆ ಇದೆ, ಧ್ವನಿ ಸುರಳಿಗಾಗಿಯೇ ಬರೆಯುತ್ತಾರೆ ಎಂಬ ಮಾತೂ ಅಲ್ಲಿಲ್ಲಿ ಕೇಳ ಬಂದಿತು. ಆದರೆ ಕ್ರಮೇಣ ಎಲ್ಲರೂ ಹೊಸ ಸಾಧ್ಯತೆಯನ್ನು ಒಪ್ಪಿಕೊಂಡರು.ಧ್ವನಿ ಸುರಳಿಗಳು ಸಾಹಿತ್ಯ ಪ್ರಸಾರದ ಹೊಸ ಸಾಧನವಾಗಿ ಹೊರ ಹೊಮ್ಮಿದವು. ಈಗ ಲಘು ಸಂಗಿತ ಮಾತ್ರವಲ್ಲದೆ, ಭಕ್ತಗೀತೆಗಳು, ಸಾಹಿತ್ಯ ಉಪನ್ಯಾಸಗಳು, ಕುಮಾರವ್ಯಾಸ ಮತ್ತು .ಪಂಪ. ಲಕ್ಷ್ಮೀಶರ ಕಾವ್ಯಗಳ ವಾಚನ ಮತ್ತು ವಿವರಣೆಗಳ ದ್ವನಿಸುರಳಿಗಳೂ ಜನರನ್ನು ತಲುಪಿವೆ.
ಅವರು  ಉತ್ತಮ ವಾಗ್ಮಿ ಮತ್ತು ಆಡಳಿತಗಾರರಾದ ಇವರಮೆಲೆ , ದಲಿತ ವಿರೋಧಿ ಎಂಬ ಆಪಾದನೆ ಬಂದಾಗ ತಕ್ಷಣ ಹುದ್ದೆಗ ತ್ಯಜಿಸಿದರು. ವಿಚಾರಣೆಯಲ್ಲಿ ಸತ್ಯ ಹೊರಬಂದು  ರಾಹು ವಿಮೋಚನೆಯಾದ ಚಂದ್ರನಂತೆ  ಬೆಳಗಿದರು.
 .ಗೋಪಾಲ ಕೃಷ್ಣ ಅಡಿಗರಕಾಲದಲ್ಲಿ  ನವ್ಯ ಕಾವ್ಯ ಏರು ಮುಖದಿಂದಾಗಿ ನವೋದಯ ಕಾವ್ಯ ನವೆದಿತ್ತು. .ಮೂವತ್ತು ವರ್ಷ ಭಾವಗೀತೆಗಳಿಗೆ ಬರಬಿದ್ದಿತು.
ಆ ಸಮಯದಲ್ಲಿವೃತ್ತ, ಸುಳಿ, ಹೊಳೆಸಾಲಿನ ಮರ, ದೆವ್ವದೊಡಗಿನ ಮಾತುಕಥೆ ಮೊದಲಾದ ಕವನಸಂಕಲನ ಪ್ರಕಟವಾಗಿವೆ, ಅವು ಕವಿ ಎಂಬ ಅಧಿಕೃತ ಮುದ್ರ ಒತ್ತಿದರೆ ನಂತರದ  ದ್ವನಿಸುರಳಿಗಳಾದ ಸಂವೇದನೆ, ಪಾಂಚಾಲಿ, ಹಸಿರುತುಂಬಿದ ತೋರಣ, ನಡೆದಿದೆ ಪೂಜಾರತಿ ಮೊದಲಾದ ಕ್ಯಾಸೆಟ್‌ಗಳು ಜನಪ್ರಿಯತೆ ತಂದವು.. ಕವಿ,ವಿಮರ್ಶಕ ಮತ್ತು ಸಾಹಿತಿ  ಕ್ಯಾಸೆಟ್‌ ಕ್ರಾಂತಿಗೆ ಕಾರಣರಾದರು. ದೀಪಿಕಾ,ಭಾವೋತ್ಸವ ಭಾವಸಂಗಮ. ಶಿಶುನಾಳ ಶರೀಫ, ಮೈಸೂರು ಮಲ್ಲಿಗೆ ಮೊದಲಾದ ಹಲವು ಕ್ಯಾಸೆಟ್‌ಗಳಿಂದ ಮನೆ ಮಾತಾದರು.
ತಿ.ನಂ.ಶ್ರೀಯವರಿಗೆ ಶಾಸ್ತ್ರಸಾಹಿತ್ಯದ ಬೆಳೆಯ ಬಗ್ಗೆ ಕೊರಗು ಇತ್ತು.ಎಲ್ಲರೂ ಸೃಜನಶೀಲ ಸಾಹಿತ್ಯ ದೆಡೆಗೆ ಮುಖಮಾಡಿದ್ದರು ಕಾರಣ ಅದರಿಂದ ಹೆಸರು ಮತ್ತು ಹಣಗಳಿಕೆ ಸುಲಭವಾಗಿ ದಕ್ಕುವುದು. ಗುರುಗಳ ಕೊರಗು ಕಳೆಯಲು ಅವರ ನೆನಪಲ್ಲಿ ಶಾಸ್ತ್ರಭಾರತಿ, ಕಾವ್ಯಪ್ರತಿಮೆ, ಭಾರತೀಯ ಗ್ರಂಥಸಂಪಾದನಾ ಪರಿಚಯ, ಹಾಗೆಯೇ ವಿಮರ್ಶಾ ರಂಗದಲ್ಲಿ ಹೊರಳುದಾರಿಯಲ್ಲಿ ಕಾವ್ಯ,ಸಾಹಿತ್ಯ ಸನ್ನಿಧಿ, ಶಿಶುನಾಳ ಷರೀಫ್‌ ವಿವವೇಚನೆ   ಕೃತಿಗಳ ರಚನೆ ಮಾಡಿರುವರು.

 ಭಟ್ಟರು ಅನುವಾದ ಕ್ಷೇತ್ರದಲ್ಲೂ ತೊಡಗಿಸಿಕೊಂಡರು. ಷೇಕ್ಸಪಿಯರ್‌ ಸಾನೆಟ್‌ಚಕ್ರ, ಚಿನ್ನದ ಹಕ್ಕಿ, ಡಬ್ಲ್ಯ.ಬಿ.ಏಟ್ಸನ ಕವನಗಳು, ಟಿ.ಎಸ್‌.  ಈಲಿಯಟ್‌ನ ಕಾವ್ಯ ಸಂಪುಟ ಮೊದಲಾದ ಅನುವಾದಗಳು ಅವರ ಸಾದನೆಗೆ ಗರಿ ಮೂಡಿಸಿದೆ. ಅವು ಡಾ.ಕೀರ್ತಿನಾಥ ಕುರ್ತುಕೊಟಿ.. ಪ್ರೊ.ಜಿಎಸ್‌ ಅಮೂರ್‌ ಮತ್ತು  ಗೋಪಾಲಕೃಷ್ಣಅಡಿಗರ  ಮೆಚ್ಚಿಗೆಗೆ ಪಾತ್ರ.ವಾಗಿವೆ.. .ಸಿ,ಆರ್‌ಸಿಂಹ ಅವರೊಡಗಿನ ಗೆಳೆತನ, ಬಿ.ವಿ ಕಾರಂತರ ಮತ್ತು ಕೆ.ವಿ ಸುಬ್ಬಣ್ಣ ಅವರ ಒಡನಾಟದ ಫಲವಾಗಿ  ಮೃಚ್ಛಕಟಿಕ, ಹಬ್ಬದ ಹನ್ನೆರಡನೆಯರಾತ್ರಿ, .ಊರ್ವಸಿ, ಚಿತ್ರಾಂಗದ ಇಸ್ಪೀಟ್‌ರಾಜ ನಾಟಕಗಳು ರಂಗವೇರಿದವು.
ಅವರ ಇತರ ಬರಹದ ಬೆಳೆಯೂ  ಹುಲುಸಾಗಿತ್ತು ಪ್ರಜಾವಾಣಿಯಲ್ಲಿ ಸತತ ಎಂಟು ವರ್ಷ ಬರೆದ ಅಂಕಣ ಪುಸ್ತಕ ವಿಮರ್ಶೆ
, ಮಕ್ಕಳ ಸಾಹಿತ್ಯದಲ್ಲೂ ಕೃಷಿ ಮಾಡಿದರು. ರಾಜರತ್ನಂ, ಹೊಯ್ಸಳರ ನಂತರ ಮಕ್ಕಳ ಸಾಹಿತ್ಯ ರಂಗ ಸೊರಗಿತ್ತು ಕವಿತೆಗಳಂತೂ ಇಲ್ಲವೇ ಇಲ್ಲ ಎನ್ನಬಹುದು ಆ ಸಮಯದಲ್ಲಿ  ಇವರ ನಂದನ, ಕಿಶೋರಿ,ಕಿನ್ನರಿ ಕವನಸಂಕಲನ ಕುಂತಿ, ಡಿವಿಜಿ, ಕರ್ಣ ಮೊದಲಾದವು ಮಕ್ಕಳ ಮನ ಸೂರೆ ಗೊಂಡಿವೆ.
ಹಲವು ಜನಪ್ರಿಯ ಮಕ್ಕಳ ಕವಿತೆಗಳು ಪ್ರಕಟವಾದವು. ಅವು ಕ್ಯಾಸಟ್ಟಿನಲ್ಲೂ ಬಂದಿವೆ. ಕರ್ನಾಟಕದಲ್ಲಿ ಮಾತ್ರವಲ್ಲ ವಿದೇಶಗಳ್ಲೂ ಅವುಗಳನ್ನು ಮಕ್ಕಳು ಗುಣಗುಣಿಸುತಿದ್ದಾರೆ. ಅವರದು ಚಿಕ್ಕ ಚೊಕ್ಕ ಸಂಸಾರ. ಮನೆವಾರ್ತೆ ಎಲ್ಲ ಮಡದಿ ಜ್ಯೋತಿ ಅವರದು., ಚೈತ್ರ ಅನಿವಾಸಿ ಮಗ ಮತ್ತು ಮನೆ ಹತ್ತಿರವೇ ಇರುವ  ಮಗಳು ಕ್ಷಮಾ..
ಕ್ಯಾಸೆಟ್‌ ಲೋಕ ಅವರ  ಸೀಮೋಲ್ಲಘನೆಗೆ ಕಾರಣ ವಾಯಿತು.. ಅಮೇರಿಕಾದಲ್ಲಿ. ನಾಲ್ಕುಸಲ ಭೇಟಿ  ಅಮೇರಿಕದ ೨೬ ಪ್ರಾಂತ್ಯಗಳಲ್ಲಿ ಅವರ ಸಾಹಿತ್ಯ ಉಪನ್ಯಾಸ. ಸುಮಾರು ೯೬ ಸ್ಥಳಗಳಲ್ಲಿ ಅನಿವಾಸಿ ಕನ್ನಡ  ರಸಿಕರಿಗೆ ಕಾವ್ಯ ಪರಿಚಯ. ಭಟ್ಟರು ಬಹು ಗಟ್ಟಿಗರು. ಕಾಲದ ಪರಿಣಾಮ ಅವರಮೇಲೆ ಆಗಿಲ್ಲ ಎನ್ನಬಹುದು. ಎರಡೆರಡು ದಿನಗಳ ಸಾಹಿತ್ಯ ಸಮಾವೇಶ. ಟಿಪ್ಪಣಿಗಳ ಹಂಗಿಲ್ಲ ಸಾಹಿತ್ಯದ  ರಸಗಂಗೆಯಲ್ಲಿ ಕೇಳುಗರು ಮುಳುಗಿ ಏಳುವರು. ಹದಿನೈದು ನೂರು ವರ್ಷಗಳ ಕನ್ನಡ ಸಾಹಿತ್ಯ ಚರಿತ್ರೆ ಅವರ ಬಾಯಲ್ಲಿ ಓತ ಪ್ರೋತ. ಅನಿವಾಸಿ ಕನ್ನಡಿಗರಿಗೆ ಭಟ್ಟರೆಂದರೆ ಭಟ್ಟಿ ಇಳಿಸಿದ ಕನ್ನಡ, ಸಂಸ್ಕೃತ ,ಸಾಹಿತ್ಯದ ಪ್ರತಿರೂಪ. ಸಾಹಿತ್ಯ ಮತ್ತು ಸಂಸ್ಕೃತಿ ಕುರಿತ ಅವರ ಉಪನ್ಯಾಸದ ಧ್ವನಿ ಸುರುಳಿಗಳಿಗೆ ಬಹು ಬೇಡಿಕೆ. ಬಿಸಿ ದೋಸೆಯಂತೆ ಹೊರ ಬರುತ್ತಲೇ ಖಾಲಿ.
ಅವರನ್ನು ಕುರಿತು ಅನಿಸಿಕೆಯ ಕೆಲವು ಮಾದರಿ ಇಲ್ಲಿವೆ.
ಬದುಕಿನ ಅರ್ಥ ಪೂರ್ಣತೆಯಲ್ಲಿ ಹುಟ್ಟುವ ಕಾವ್ಯ,- ಕಂಬಾರ,
ಸಮಾಧಾನ ಭಾವ ಸ್ಥಾಯಿಯಾದ ಕಾವ್ಯ-  ಕಿ.ರಂ..
ಬೆಳಕಿನ ಆರಾದನೆಯ ಕಾವ್ಯ -ಎಚ್‌ಎಸ್‌ಎವಿ
ಸಹಜವಾಗಿಯೇ ಇವರನ್ನುß ಬಹುಮಾನÀ, ಪ್ರಶಸ್ತಿಗಳು ಅರಸಿ ಬಂದವು. gÁdå ¸Á»vÀå CPÁqÉ«ÄAiÀÄ §ºÀĪÀiÁ£ÀUÀ¼ÀÄ, ²ªÀgÁªÀÄ PÁgÀAvÀ, ªÀiÁ¹Û, C£ÀPÀÈ f.J¸ï.J¸ï ¤gÀAd£À CªÀgÀ ºÉ¸Àj£À ¥Àæ±À¹ÛUÀ¼À£ÀÆß, J£ï¹EDgïnAiÀÄ ¨Á®¸Á»vÀå ¥ÀÄgÀ¸ÁÌgÀªÀ®èzÉ gÁeÉÆåÃvÀìªÀ ¥Àæ±À¹ÛUÀÆ CªÀgÀÄ ¨sÁd£ÀgÁVzÁÝgÉ.
E¢ÃUÀCªÀgÀ ªÀÄÄrUÉ ಪ್ರಪ್ರಥಮ  ²æøÁ»vÀå ¥Àæ±À¹Û AiÀÄ  UÀj ªÀÄÆrzÉ.

















No comments:

Post a Comment