Sunday, September 9, 2012

ಎಲ್ಲ ಎದುರಾದಾಗ



ಎಲ್ಲ ಎದುರಾದಾಗ,ಅದು ಸಹಜ  ಆಗೀಗ
ನೀ ಚಲಿಸುವ ದಾರಿ,ಆಗಿರಲು ಬರಿ ಕಿರಿಕಿರಿ
ಆದಾಯ ಅತಿ ಕಡಿಮೆ ,ಮೈ ತುಂಬಾ  ಸಾಲ 
ನಗ ಬಯಸಿದರು, ಕೂಡ ಬರುತಿದೆ ಬಿಸಿಯುಸಿರು 
ಹೆಗಲೇರಿದ ಹೊಣೆ ,ಅತಿ ಭಾರವಿದ್ದರೂ  ಸರಿ 
ಬೇಕಾದರೆ ವಿಶ್ರಾಮಿಸು ಯತ್ನ  ಬಿಡಬೇಡ 
ಬಾಳು ತುಸು  ತಿಕ್ಕಲು ,ಬರಿ ವಿಸ್ಮಯ ,ಬಹು ತಿರುವು 
ನಮಗೆಲ್ಲ  ಎಂದಾದರು  ಬರುವುದು  ಅ ಅರಿವು 
ಸೋಲು  ಗೆಲವುಗಳಲಿ  ಕೆಲವು, ಅಗುವವು  ತಿರುವು ಮುರುವು 
 ಬಿಡದೆ ಹೋರಾಡಿದರೆ  ದೊರಕಬಹುದು  ಗೆಲುವು 
 ಮಂದವಾಗಿದೆ ಗತಿ  ಎಂದು ಸಲ್ಲ  ನಿರಾಶೆ 
ಮಗದೊಂದು ಯತ್ನದಲಿ  ಪಲಿಸಿತು ಆಶೆ.     

No comments:

Post a Comment