Monday, May 5, 2014

ಕುದುರೆಸಹಾಯದಿಂದ ರೋಗ ಪರಿಹಾರ

         ಹಿಪ್ಪೋ ಥೆರಪಿ

ಕುದುರೆಗಳು ಅಮೇರಿಕಾದ ಜನಜೀವನದಲ್ಲಿ ಶತಮಾನಗಳಿಂದಲೂ ಹಾಸುಹೊಕ್ಕಾಗಿವೆ. ಮೊಟ್ಟ ಮೊದಲ ಸಾರಿಗೆ ಸಾಧನವೇ ಕುದುರೆಯಾಗಿತ್ತು. ಕೃಷಿಯಲ್ಲೂ ಅದರ ಬಳಕೆ ವ್ಯಾಪಕವಾಗಿತ್ತು ಪಶುಪಾಲನೆಯಲ್ಲಂತೂ ಅದರ ಪಾತ್ರ ಬಹು ಹಿರಿದು. ಕೌ ಬಾಯ್‌ ಎಂದರೆ ಸದಾ ಕುದುರೆಯ ಮೇಲೆ ಇರುವ ದನಗಾಹಿ. ಯಾಂತ್ರೀಕರಣ,ರೈಲು ಮತ್ತು ಆಟೊಮೊಬೈಲ್‌ಗಳ ಆಗಮನದಿಂದ ಕ್ರ ಣ ಅವುಗಳು ಹಿನ್ನೆಲೆಗೆ ಸರಿದವು.  ಪಶುಗಳ ಸಾಕಣೆ ಕೇಂದ್ರಗಳಳಲ್ಲಿ ನೂರಾರು ಎಕರೆ ವಿಸ್ತೀರ್ಣದ ರಾಂಚ್‌ಗಳಲ್ಲಿ ಕುದರೆ ಸವಾರರೇ ಪಶುಪಾಲನೆಯ ಕೆಲಸನಿಯಂತ್ರಿಸುತಿದ್ದರು.  

ಆಧುನೀಕರಣದಿಂದ  ಮೊದಲಿನ ಕುದುರೆಗಳಿಗೆ ಪ್ರಾಮುಖ್ಯತೆ ಉಳಿಯದಿದ್ದರೂ ಈಗ ಕುದುರೆಗಳನ್ನು  ಇನ್ನೊಂದು ರೂಪದಲ್ಲಿ ಬಳಕೆ ಮಾಡಲಾಗುತ್ತಿದೆ.ಒಂದು ದೈಹಿಕ ಮತ್ತು ಮಾನಸಿಕ ವಿಶೇಷ ಸವಾಲು ಎದುರಿಸುತ್ತಿರುವ ಮಕ್ಕಳ ಯುವಕರಆರೋಗ್ಯ ಸುಧಾರಣೆಗೆ  ಸಾಧನವಾಗಿವೆ.

ಕುದುರೆಗಳ ಸಹಾಯದಿದ ದೈಹಿಕ ನ್ಯೂನತೆಯನ್ನು  ಪರಿಹರಿಸುವ ಈ ವಿಧಾನವನ್ನು ಹಿಪ್ಪೋ ಥೆರಪಿ ಎನ್ನುವರು.ಬಹುಶಃ ಇದು ಫಿಜಿಯೋ ಥೆರಪಿಯ ಮುಂದುವರಿದ ಭಾಗ ಎನ್ನಬಹುದು.ಫಿಜಿಯೋ ಥೇರಪಿಯಲ್ಲಿ ದೈಹಿಕ ಸಮತೋಲನ ಸಾಧಿಸಲು ಪ್ರಯತ್ನಿಸಿದರೆ  ಹಿಪ್ಪೋ ಥೆರಪಿಯಲ್ಲಿ ಬಹುಮುಖಿ ಚಿಕಿತ್ಸೆಯನ್ನು ಕೊಡಲಾಗುವುದು. ಈ ಚಿಕಿತ್ಸೆಯಲ್ಲಿ ಕುದುರೆ ಸವಾರಿಯೇ ಪ್ರಮುಖ ಅಂಶವಲ್ಲ. ಅಶ್ವ ಪರಿಣಿತರ ಜೊತೆಗೆ ವೈದ್ಯಕೀಯ ಪರಿಣಿತರೂ ಇರುತ್ತಾರೆ. ಅಲ್ಲದೇ ಈ ಚಿಕಿತ್ಸೆ ನೀಡುವ ಮೊದಲು ಸದ್ರಿ ರೋಗಿಯ ಕುರಿತಾದ ಪೂರ್ಣ ಆರೋಗ್ಯ ತಪಾಸಣೆ ವರದಿ ಅತ್ಯಗತ್ಯ. ನಿರ್ಧಿಷ್ಟ ದೈಹಿಕಸವಾಲುಗಳು ಸಬಲೀಕರಣವಾಗಬೇಕಾದ ಅಂಗಗಳನ್ನು ಗುರುತಿಸಿ ಅದರಂತೆ  ವೈ ಯುಕ್ತಿಕವಾಗಿ ಚಿಕಿತ್ಸಾ ಕ್ರಮವನ್ನು ರೂಪಿಸುತ್ತಾರೆ.ಅಂದರೆ ವ್ಯಕ್ತಿಯಿಂದ ವ್ಯಕ್ತಿಗೆ ಚಿಕಿತ್ಸಾ ವಿವರ ಬೇರೆಯಾಗಿರುತ್ತಾರೆ. ಈ ಕೆಲಸವನ್ನು ತರಬೇತಿಪಡೆದ ಸೂಕ್ತ ವ್ಯಕ್ತಿಗಳು ಮಾತ್ರ ಮಾಡಬಹುದಾಗಿದೆ.

ಇದು ನಿವಾಸಿ ಚಿಕಿತ್ಸೆ. ನಿಗದಿತ ದಿನಗಳಲ್ಲಿ ಬಹಳ ಕಾಲ ಚಿಕಿತ್ಸೆ ಪಡೆಯ ಬೇಕಾಗುತ್ತದೆ.ಹಲವಾರು ದಿನ ಇರಬೇಕಾಗಬಹುದು. ಇಲ್ಲವೆ ನಿಯಮಿತವಾಗಿ ಬರಬೇಕಾಗುತ್ತದೆ. ವಿವಿಧ ದೈಹಿಕ ನ್ಯೂನತೆ ಮತ್ತು ಮಾನಸಿಕ ವಿಕಲತೆಗಳಿಗೆ ಅನುಗುಣವಾಗಿವಿಭಿನ್ನ ಕುದುರೆಗಳೇ ಇರುತ್ತವೆ.ಇದೊಂದು ರೀತಿಯಲ್ಲಿ ಕುದುರೆ ಸವಾರಿ ಆರೋಗ್ಯಕ್ಕೆ ರಹದಾರಿ ಎಂಬ ಸೂತ್ರವನ್ನು ಅನುಸರಿಸುತ್ತದೆ.

ಹಾರ್ಸಪ್ಲೇ ತೆರಪಿಟಿಕ್ ಕೇಂದ್ರಗಳು ಅಂತರಾಷ್ಟ್ರೀಯ ವೃತ್ತಿಪರ ಥೆರಪೆಟಿಕ್‌ ಹಾರ್ಸ ಮೆನ್‌ಷಿಪ್‌ ನ ಅಂಗ ಸಂಸ್ಥೆ(ಪಾಥ್‌ ಇಂಟರ್‌ನೇಷನಲ್‌)
ಸೆರಬ್ರಲ್‌ಪಾಲ್ಸಿ,ಮಾನಸಿಕ ಮತ್ತು ಕಲಿಕಾ ಅಸಮತೋಲನ,ಆಟಿಜಂ, ಖಿನ್ನತೆ.ಕೀಳರಿಮೆ,ನರವ್ಯೂಹ  , ಮೆದುಳುಹಾನಿ,ಶ್ರಾವ್ಯ.ನರ ಮತ್ತು ಸ್ನಾ ಯು ದೌರ್ಬಲ್ಯ ಹಾಗೂ ದೃಷ್ಟಿ ಸಮಸ್ಯಗಳಿಗೆ ಪರಿಹಾರ  ಕೊಡಲಾಗುವುದು. ಇದರಿಂದ ದೈಹಿಕ ಸಮತೋಲನ,ಸಾಮರ್ಥ್ಯ ಹೆಚ್ಚಳ ಮತ್ತು ಆತ್ಮವಿಶ್ವಾಸ ಸುಧಾರಿಸ ಬಹುದು. ವ್ಯಕ್ತಿಯದೈಹಿಕ ಮತ್ತು ಮಾನಸಿಕ ವಿಕಲತೆಯ ಸಮಸ್ಯೆಗೆ ಚಿಕಿತ್ಸೆ ಕೊಡುವರು.

ಕಲಿಕಾ ಸಾಮರ್ಥ್ಯದ ಕೊರತೆ,ಮೆದುಳುಹಾನಿ, ಸೆರಬ್ರಲ್‌ ಪಲಸಿ.ಏಕಾಗ್ರತೆ ಕೊರತೆ ಬುದ್ದಿ ಮಾಂದ್ಯ, ಮಲ್ಟಿಪಲ್‌ಸ್ಕಿಲಾರಸಿಸ್‌ ಮೊದಲಾದ ಸಮಸ್ಯೆಗಳಿಂದ ನರಳುವವರಿಗೆ ಕುದುರೆಆಟ (HorsePlay) ಮೂಲಕ ಚಿಕಿತ್ಸೆಕೊಡಲಾಗುವುದು.

ಕುದುರೆಯ ನಡಿಗೆಯ ಮಾನವರಂತೆ ಇರುವುದರಿಂದ ಚಲನೆಯ ಸಮಸ್ಯೆಇರುವವರ ಪ್ರಮುಖ ಅಂಗಗಳ ಸ್ನಾಯುಗಳು ಬಲಗೊಳ್ಳುತ್ತವೆ.ದೈಹಿಕ ಮಿತಿಯನ್ನು ಪರಿಗಣಿಸಿ ಪ್ರತಿ ಯೊಬ್ಬರಿಗೂ ಕಾರ್ಯಕ್ರಮವನ್ನು ರೂಪಿಸಲಾಗುತ್ತದೆ. ಸ್ವಯಂ ಸೇವಕರು ಅಗತ್ಯ. ಜೊತೆಗೆ ಕುದುರೆಗಳ ನಿರ್ವಹಣಾ ವ್ಯವಸ್ಥೆಯ ವೆಚ್ಚವನ್ನು ಕೊಡುಗೆಯಿಂದ ಭರಿಸಲಾಗುವುದು. ಸ್ಥಳೀಯ ಉದ್ಯಮಿಗಳು ಧಾರಾಳವಾಗಿ ಸಹಾಯ ಮಾಡುವರು.
ಅಮೇರಿಕಾದ್ಯಂತ ವಿಲಚೇತನರ ಪುನಶ್ಚೇತನ ಕ್ಕಾಗಿ ಇಂಥಹ ೭೦೦ ಕೇಂದ್ರಗಳಿವೆ.ಅದರಲ್ಲಿ ಸೇರಲು ಕಾದಿರುವವರ ದೊಡ್ಡ ಪಟ್ಟಿಯೇ ಇರುತ್ತದೆ. ಸರಿಯಾಗಿ ಚಲಿಸಲಾಗದ ಮಗುವ ೧೦೦೦ಪೌಂಡ್‌ತೂಕದ ಕುದುರೆಯ ಮೇಲೆ ಕುಳಿತು ಚಲಿಸುವಾಗ ಬೆನ್ನು, ಹೊಟ್ಟೆ,ಸೊಂಟದ ಮೂಳೆಗಳಿಗೆ ಕುದುರೆಯ ದೇಹದ ಸ್ನಾಯುಗಳಿಗೆ ಈ ಚಲನೆ ವಿಶೇಷವ್ಯಾಯಾಮ ನೀಡುತ್ತದೆ. ವಿಶೇಷವಾಗಿ ದೇಹದ ಸೊಂಟದ ಕೆಳಗಿನ ಭಾಗದ ಸ್ನಾಯುಗಳು ಸಶಕ್ತವಾಗುತ್ತವೆ.  ಅದಕ್ಕಿಂತಲೂ ಮಿಗಿಲಾಗಿ ನಡೆಯಲಾಗದ ದೈನಂದಿನ ಕಾರ್ಯ ನಿರ್ವಹಿಸಲಾಗದ ಮಗು ಕುದರೆಯ ಮೇಲೆ ಕುಳಿತು ಠೀವಿಯಿಂದ ಸವಾರಿ ಮಾಡುತ್ತಾ ಹೆತ್ತವರ ಕಡಗೆ ನಗು ಬೀರುವುದು ನೋವಿನ ಕತ್ತಲಲ್ಲಿರುವ ಕುಟುಂಬದಲ್ಲಿ ಭರವಸೆಯ ಆಶಾ ಕಿರಣವಾಗಿದೆ. 
ಬರಬರುತ್ತಾ ಕುದುರೆಯ ಮೆಲೆ ಕುಳಿತಮಕ್ಕಳು ವಿವಧ ಭಂಗಿಯಲ್ಲಿ ಸವಾರಿ ಮಾಡಲು.,ಕಡಿವಾಣನ್ನುಒಂದೆ ಕೈನಿಂದ ಹಿಡಿದು. ಕಡಿವಾಣ ಬಿಟ್ಟು ಬರಿಮಾತಿನ ಮೂಲಕವೆ ಕುದುರೆಯ ಚಲನೆಯನ್ನು ನಿಯಂತ್ರಿಸುವ ಹಂತ ತಲುಪುವರು. ಜೊತೆಗೆ ಫಿಜಿಯೋ ಥೆರಪಿಷ್ಟರು ಕುದುರೆಯ ಮೆಲೆ ಕುಳಿತಿರುವಂತೆಯೇ ಅವರಿಗೆ ವಿವಿಧ ಅಂಗಸಾಧನೆ  ಹೇಳಿಕೊಡುವರು. ಕುದುರೆಯ ಮೇಲೆ ಅಗತ್ಯಕ್ಕೆ ಅನುಗುಣವಾಗಿ ವಿವಿಧ ಬಂಗಿಗಳಲ್ಲಿ ಕುಳಿತು, ಮಲಗಿ. ನಿಂತು ಸವಾರಿ ಮಾಡಿಸಲಾಗುವುದು.  ಇದರಿಂದ  ಸರ್ವಾಂಗೀಣ ಸಬಲೀಕರಣಕ್ಕೆ ನೆರವು ದೊರೆಯುವುದು. ದೈಹಿಕಸವಾಲು ಎದುರಿಸುವ ಮಕ್ಕಳು ಸಾಮಾನ್ಯ ಮಕ್ಕಳಂತೆಯೇ ಕಾರ್ಯ ನಿರ್ವಹಣೆಯ ಸಾಮರ್ಥ್ಯ ಮತ್ತು ಆತ್ಮ ವಿಶ್ವಾಸ ಪಡೆಯುವರು.
ದೈಹಿಕ ಸವಾಲು ಎದುರಿಸುವ ಮಕ್ಕಳಿಗೆ ಮತ್ತು ನೊಂದಹೆತ್ತವರ ಕಣ್ಣಿರು ಒರೆಸುವ ಮಾನವೀಯ ಪ್ರಯತ್ನವಾಗಿದೆ.ಪ್ರತಿ ತರಬೇತಿಯ ಅವಧಿಗೂ ೩೦-೪೦ ಡಾಲರ್‌ಶುಲ್ಕವಿದೆ. ಆದರೆ ಹಣ ಇಲ್ಲವೆಂದವರನ್ನೂ ಅಗತ್ಯ ಬಿದ್ದರೆ ಸ್ಕಾಲರ್‌ಷಿಪ್‌ ನೀಡಿ ನಾಮಮಾತ್ರ ಶುಲ್ಕ ಪಡೆದು ತರಬೇತಿನೀಡುವರು. ಈ ಸೇವಾಕಾರ್ಯದಲ್ಲಿ ಅನೇಕರು ಬಿಡುವು ದೊರೆತಾಗಲೆಲ್ಲ ಸ್ವಯಂ ಸೇವಕರಾಗಿ ಭಾಗವಹಿಸಿ ಸಾರ್ಥಕ ಭಾವ ಪಡೆಯುವರು.
ಹಿಪ್ಪೋ ಥೆರಪಿ ದೈಹಿಕಸಮಸ್ಯೆ ನಿವಾರಣೆಗೆ ಅಧಿಕ ಒತ್ತು ಕೊಟ್ಟರೆ ಇಕಿಯಿನೊ ಥೆರಪಿ ಕುಂಠಿತ ಮಾನಸಿಕ ಬೆಳವಣಿಗೆ,ಬುದ್ದಿಮಾಂದ್ಯ,ಹಿಂಜರಿಕೆ,ಆತ್ಮವಿಶ್ವಾಸದ ಕೊರತೆ, ಚಂಚಲತೆ,  ಏಕಾಗ್ರತೆ ಕೊರತೆ, ಶೀಘ್ರಕೋಪ. ಖಿನ್ನತೆ, ವ್ಯಥೆ, ಕೀಳರಿಮೆಗಳ ನಿವಾರಣೆಗೆ ಸಹಕಾರಿಯಾಗಿದೆ.ಇಲ್ಲಿ ಬರಿ ಕುದುರೆ ಸವಾರಿಗೆ ಮಾತ್ರ ಆದ್ಯತೆ ಇಲ್ಲ. ಕುದುರೆಯೊಂದಿಗಿನ ವ್ಯಕ್ತಿಯಸ್ಪಂದನವೂ ಮುಖ್ಯವಾಗಿದೆ.

ಕುದುರೆಯ ಆರೈಕೆಯ ವಿವಿಧ ಕೆಲಸಗಳನ್ನು ಕೈ ಮುಟ್ಟಿ ಮಾಡುವುದರ ಜೊತೆಗೆ ಅದರ ನಿಯಂತ್ರಣವನ್ನು ಕಲಿಯ ಬೇಕಾಗುವುದು. ಕುದುರೆಯೊಂದಿಗೆ ಸಹಜವಾಗಿ ಸಂವಹನ ನಡೆಸಲು ಶಕ್ತನಾದರೆ ಸಾಮಾಜಿಕ ಸಮಸ್ಯೆಗಳ ನಿರ್ವಹಣೆಯ ಶಕ್ತಿ ತನಗೆ ತಾನೆ ಬರುವುದು. ಮಾನವನ ಅನೇಕ ಮಾನಸಿಕ ಸಮಸ್ಯೆಗಳಿಗೆ ಒಂಟಿತನವೇ ಕಾರಣ.ಇನ್ನೊಂದು ಜೀವಿಯೊಂದಿಗಿನ ಹತ್ತಿರದ ಒಡನಾಟ ನೆಮ್ಮದಿ ನೀಡುವುದು. ಇದೂ ಪ್ರಕೃತಿ ಚಿಕಿತ್ಸೆಯಂತೆಯೇ ಮನಸ್ಸು, ದೇಹ, ಮತ್ತು ಭಾವಗಳ ಶುದ್ಧೀಕರಣಕ್ಕೆ ಸಾಧನವಾಗುತ್ತದೆ
     ಈಚಿಕಿತ್ಸೆಯಿಂದ ಆತ್ಮವಿಶ್ವಾಸ,ಜೀವನಪ್ರೀತಿ, ದೃಢನಿರ್ಧಾರ,ಸಹಜೀವನ,ಸಂವಹನ,ಸಾಮಾಜಿಕ ಹೊಂದಾಣಿಕೆ, ನಾಯಕತ್ವ, ಕ್ರೀಡಾ ಮನೋಭಾವ ಅಧಿಕವಾಗಿ ಉತ್ತಮ ಸಮಾಜ ಜೀವಿಯಾಗಲು ಅನುವಾಗುತ್ತದೆ.


No comments:

Post a Comment