Monday, August 20, 2012

ಹೊಯ್ಯಕೊಂಡ ಬಾಯಿಗೆ ಹೋಳಿಗೆತುಪ್ಪ


ಹೋ
ಳಿ ಹುಣ್ಣಿಮೆ ಬಂದರೆ ಅಗಸರಿಗೆ ಆ ಹದಿನೈದು ದಿನ ಅರೆ ನಿದ್ದೆಯ ಸಮಯ. ಹುಡುಗರು ಬರಿ ಕತ್ತೆಯ ಮೇಲೆ ಹತ್ತಿ ಸವಾರಿ ಮಾಡಿದರೆ ಅವರು ಚಿಂತೆ ಮಾಡುತ್ತಿರಲಿಲ್ಲ. ಆದರೆ ಅವರ ತುಂಟಾಟ ಜಾಸ್ತಿ. ಅದರ ಬಾಲಕ್ಕೆ ಖಾಲಿಡಬ್ಬ ಕಟ್ಟಿ ಅದರಲ್ಲಿ ಕಲ್ಲುಗಳನ್ನು ಹಾಕಿ ಓಡಿಸುತ್ತಿದ್ದರು. ಅದು ಓಡಿದಾಗ ಡಬ್ಬ ಕಾಲಿಗೆ ಬಡಿದು ಅದು ಗಡಗಡ ಶಬ್ದ ಮಾಡುತ್ತಿತ್ತು. ಅದು ಗಾಬರಿಯಾಗಿ ದಿಕ್ಕೆಟ್ಟು ಓಡುತ್ತಿತ್ತು. ಅದರ ಜೊತೆ ಬಾಯಿ ಬಡಿದುಕೊಳ್ಳುತ್ತಾ ಹುಡುಗರ ಪಡೆ ಸಾಗುತಿತ್ತು. ಕೆಲವು ಕಿಡಿಗೇಡಿಗಳು ಆ ಡಬ್ಬದಲ್ಲಿ ಪಟಾಕಿ ಹಚ್ಚಿ ಹಾಕಿದರಂತೂ ಅದರ ಸ್ಥಿತಿ ದೇವರೆ ಗತಿ.  ಹಾಗಾದಾಗ ಓಡಿ ಹೋದ ಕತ್ತೆಯನ್ನು ಹುಡುಕುವುದಕ್ಕೆ ಅಗಸರು ಕೆಲಸ ಬಿಟ್ಟು ದಿನವೆಲ್ಲ ಅಲೆಯಬೇಕಿತ್ತು. ಸಾಧಾರಣವಾಗಿ ಅವರು ಕೆಲಸದ ದಣಿವನ್ನು ಮರೆಯಲು ಸೇಂದಿ ಕುಡಿದು ಮಲಗುವರು. ಅವರು ಕತ್ತೆ ಕಾಯುತ್ತಾ ರಾತ್ರಿಯೆಲ್ಲ ಜಾಗರಣೆ ಮಾಡಲಾಗುವುದೆ. ಮೇಲಾಗಿ ರಾತ್ರಿ ಮೇಯಲು ಬಿಡಲೇಬೇಕಲ್ಲ. ಆಗ ನಮಗೆಲ್ಲ ಚಿನ್ನಾಟ.
ಕಾಮದಹನ ಇನ್ನೂ ಆರೆಂಟು ದಿನ ಇರುವ ಮುನ್ನವೆ ಪ್ರತಿಸಂಜೆ ಮನೆ ಮನೆಗೆ ಕುಳ್ಳು ಕಟ್ಟಿಗೆ ಬೇಡಲು ಗುಂಪಿಗೆ ಗುಂಪೆ ಹೊರಡುವುದು. ಪ್ರತಿ ಮನೆಯ ಮುಂದೆ ನಿಂತು ಕಾಮನ ಮಕ್ಕಳು ಬಂದಿದ್ದೇವೆ. ಕುಳ್ಳು, ಕಟ್ಟಿಗೆ ಕೊಡಿ ಎಂದು ಬಾಯಿ ಬಡಿದುಕೊಳ್ಳುವುದು. ಈ ಗದ್ದಲ ತಾಳಲಾರದೆ ಅವರು ಕೊಟ್ಟು ಕಳುಹಿಸುವರು. ಸಾಧಾರಣವಾಗಿ ಎಲ್ಲರ ಮನೆಯಲ್ಲಿ ಕಟ್ಟಿಗೆ ಕುಳ್ಳನ್ನೆ ಮುಖ್ಯ ಉರುವಲಾಗಿ ಬಳಸುತಿದ್ದರು. ಸೀಮೆ ಎಣ್ಣೆಯನ್ನು ದೀಪಕ್ಕೆ ಬಳಸುವರು. ಹೀಗಾಗಿ ಉರುವಲು ಸಾಕಷ್ಟು ಸಂಗ್ರಹವಾಗುತಿತ್ತು. ಈಗ  ಕಾಮದಹನ ಬಹು ವಿರಳವಾಗುತ್ತಿದೆ. ಎಲ್ಲರ ಮನೆಯಲ್ಲೂ ಗ್ಯಾಸ್‌. ಸ್ಟೋವ್ಗಳು. ಇನ್ನು ಕಟ್ಟಿಗೆ ಒಲೆ ಎಲ್ಲಿ. ಅದರಿಂದ ಕಾಮದಹನದ ಖದರು ಕಡಿಮೆಯಾಗಿದೆ.
ನಾವು ಸಂಜೆ ಕುಳ್ಳು ಕಟ್ಟಿಗೆ ಬೇಡಲು ಹೋದಾಗ ಕಿರಿ ಕಿರಿ ಮಾಡಿದ ಮನೆಯ ಗುರುತು ಮಾಡಿಕೊಂಡು ಸರಿ ರಾತ್ರಿ ದಾಳಿ ಮಾಡುತಿದ್ದೆವು. ಅವರ ಮನೆಯ ಮುಂದೆ ಇದ್ದ ಕೊರಡು, ಕುಂಟೆಗಳನ್ನು, ಹಿತ್ತಲಲ್ಲಿನ ಆವರಣದ ಬಾಗಿಲು ಕದ್ದು ಸಾಗಿಸಲಾಗುವುದು. ಬೆಳಗ್ಗೆ ನೋಡಿದಾಗಲೆ ಅದರ ಸುಳಿವು ದೊರೆಯುತಿತ್ತು. ಅನ್ನುವ ಹಾಗಿಲ್ಲ. ಅನುಭವಿಸುವ ಹಾಗಿಲ್ಲ. ಬಾಯ್ತುಂಬ  ಬೈದು ಸಮಾಧಾನ ಮಾಡಿಕೊಳ್ಳುತಿದ್ದರು.
ಆ ಸಮಯದಲ್ಲಿ ಇನ್ನೊಂದು ಮೋಜು ಜರುಗುತಿತ್ತು. ಅಷ್ಟೇನು ಆಧುನಿಕವಲ್ಲದ ಊರಿನಲ್ಲಿ ಎರಡೋ ಮೂರೋ ಬೋರ್ಡುಗಳು. ಅವೂ ಹಜಾಮತಿ ಅಂಗಡಿಗಳವು ಮತ್ತು ವೈದ್ಯರವು. ಬೆಳಗಾಗುವದರೊಳಗೆ ಡಾಕ್ಟರ ಷಾಪು ಮಾಡರ್ನ್ ಸೆಲೂನ.. ಸೆಲೂನಿನ ಹೆಸರು ಧನ್ವಂತರಿ ಚಿಕಿತ್ಸಾಲಯ. ಮಧ್ಯಾಹ್ನ ಅವನ್ನು ಬದಲಾಯಿಸುವವರೆಗೆ ನೋಡುಗರಿಗೆ ಮೋಜೆ ಮೋಜು.
ಹೋಳಿ ಹುಣ್ಣಿಮೆ ಬಂದರೆ ಪುಸ್ತಕ ಪರೀಕ್ಷೆ ಪರಿಗಣನೆಗೆ ಬರಿತ್ತಲಿರಲಿಲ್ಲ. ಕಾಮನನ್ನುಕೂಡಿಸಿದ ಮೇಲೆ ನಿತ್ಯ ರಾತ್ರಿ ಅದರ ಮುಂದೆ ಹದಿ ಹರೆಯದವರ, ಗಂಡುಮಕ್ಕಳ ಜಂಗುಳಿ. ಹಿರಿಕಿರಿಯರೆನ್ನದೆ  ಹಾಸ್ಯಮಾಡುವ ಹಾಡುಗಳು, ತಪ್ಪಡಿ ಬಡಿತ. ಹಾರವಯ್ಯ, ಜಂಗಮಯ್ಯ, ಶಾನುಭೋಗ, ಊರ ಶೆಟ್ಟಿ ಯಾರಿಗೂ ಉಳಿಗಾಲವಿಲ್ಲ. ಆ ಹಾಡುಗಳೋ ಶೀಲ, ಅಶ್ಲೀಲದ ಅಂಚು ದಾಟಿದವು. ಕುಣಿಯುವುದು ಕೇಕೆ ಹಾಕುವುದು ಮಾತು ಮಾತಿಗೆ ಅಯ್ಯೋ! ಈಗ ಇದ್ದ, ಸತ್ನಲ್ಲಪ್ಪೋ ಎಂದು ಬಾಯಿ ಬಡಿದುಕೊಳ್ಳುವುದು. ಸಂಬಂಧಪಟ್ಟವರು ಸುಮ್ಮನಿದ್ದರೆ ಸರಿ. ಅವರೇನಾದರೂ ಗದರಿದರೆ ಒಂದಕ್ಕೆ ನಾಲಕ್ಕುಪಟ್ಟು ಹೆಚ್ಚು ಮಾಡಿ  ಹಾಡಾಡಿಕೊಂಡು ಅಳುವುದು, ಬಾಯಿ ಬಡಿದುಕೊಳ್ಳುವುದು. ಅದೂ ಸಾಮೂಹಿಕವಾಗಿ. ಬೇಸಿಗೆ ಎಂದು ಅಂಗಳದಲ್ಲಿ ಹೊರಸುಹಾಕಿ ಮಲಗಿದವರನ್ನು ಅನಾಮತ್ತು ಹೊರಸಿನ ಸಮೇತ ಎತ್ತಿ ಕಾಲುವೆ ದಂಡೆಯಲ್ಲಿ ಇಡುವುದು ಬಹು ಮೋಜಿನ ವಿಷಯ.. ಅವರು ಬೆಳಗ್ಗೆ  ಎದ್ದು ಕಣ್ಣು ಬಿಟ್ಟಾಗ ಎಲ್ಲಿರುವೆ ಎಂದು ತಿಳಿಯದೆ ಕಕ್ಕಾಬಿಕ್ಕಿ. ಮುಂಜಾನೆ ಎದ್ದು ಹೊರಸು ಹೊತ್ತುಕೊಂಡು ಮನೆಗೆ ಬರುತ್ತಿರುವ ಅವರನ್ನು ನೋಡಿ ಎಲ್ಲ ಗೊತ್ತಿದ್ದರೂ ಎಲ್ಲಿಗೆ ಹೋಗಿದ್ದಿರಿ? ಎಂದು ಕುವಾಡ ಮಾಡುತಿದ್ದರು.
ವರ್ಷದಲ್ಲಿ ಮುನ್ನೂರು ಐವತ್ತು ದಿನ ತಗ್ಗಿ ಬಗ್ಗಿ ಹೆದರಿ ನಡೆಯುತಿದ್ದವರು, ಆಚಾರ ವಿಚಾರಕ್ಕೆ ಹೆಸರಾದವರ ಮನೆಯ ಹರೆಯದ ಹುಡುಗರು, ಪಡ್ಡೆಗಳು ಯಾವುದೆ ಎಗ್ಗಿಲ್ಲದೆ ಎಲ್ಲರಲ್ಲಿ ಒಂದಾಗುತಿದ್ದರು. ಹಿರಿಯರು ಹುರಿದುಂಬಿಸಲು ಮುಗಳ್ನಗುತ್ತಾ ಕಟ್ಟೆಯ ಮೇಲೆ ಕೂತಿರುತಿದ್ದರು. ಹೆಂಗಸರಿಗೆ ಇಲ್ಲಿ ಪ್ರವೇಶ ಇಲ್ಲ. ಹಿರಿಯ ಹೆಂಗಸರು ಧೈರ್ಯವಾಗಿ ಬಾಗಿಲಿಗೆ ಬಂದರೆ, ಹರೆಯದವರು ಬಾಗಿಲ ಸಂದಿಯಿಂದ ಕಿಟಕಿಯ  ಮರೆಯಲ್ಲಿ ನಿಂತು ಕಿಸಿ ಕಿಸಿ ನಗುತ್ತಾ ಸ್ವಾರಸ್ಯವನ್ನು ಸವಿಯುತಿದ್ದರು.  ವರ್ಷ ಪೂರ್ತಿ ಅದುಮಿಟ್ಟಿದ್ದ ಭಾವನೆಗಳು ಮಹಾಪೂರದಂತೆ ಆ ಸಮಯದಲ್ಲಿ ಮಾತಿನ ಮೂಲಕ, ಹಾಡಿನ ಮೂಲಕ ಹರಿದು ಬರುತಿದ್ದವು. ಒಂದು ರೀತಿಯಲ್ಲಿ ಈಗಿನ ವಾರಾಂತ್ಯದ ಪಾರ್ಟಿಗಳಲ್ಲಿ ಗಂಡು ಹೆಣ್ಣು  ಎಗ್ಗಿಲ್ಲದೆ ಕುಣಿದು ಕುಪ್ಪಳಿಸುವಂತೆ. ಆಗ ವರ್ಷಕೊಮ್ಮೆ ಗಂಡಸರು ಮಾತ್ರ ಸರ್ವ ಸ್ವಾತಂತ್ರ್ಯ ಅನುಭವಿಸುತ್ತಿದ್ದರು ಅದು ಮಾತಿನಲ್ಲಿ ಮಾತ್ರ.. ಕಾಮ ದಹನವಾದ ಮೇಲೆ ಎಲ್ಲ ಕಡೆ ಶಾಂತಿ. ಎಲ್ಲರೂ ಎಂದಿನಂತೆ ಸಾಮಾಜಿಕ  ಕಟ್ಟು ಕಟ್ಟಳೆಗಳಿಗೆ ತಲೆ ಬಾಗಿ ನಡೆಯುತ್ತಿದ್ದರು.
ಅರ್ಧ ರಾತ್ರಿಯ ನಂತರ ಕಾಮದಹನವಾಗುತಿತ್ತು. ಆಗಿನ ಸಂಭ್ರಮ ಮುಗಿಲು ಮುಟ್ಟುತಿತ್ತು. ಎಲ್ಲರೂ ಸತ್ತನಲ್ಲೋ ಎಂದು ಬಾಯಿ ಬಡಿದುಕೊಳ್ಳುವುದು. ಆದರೆ ಅದರ ಅಡಿಯಲ್ಲಿ ಖುಷಿಯ ಕೇಕೆ. ಇದು  ನಿಜಕ್ಕೂ ಸಾಮಾಜಿಕ ಅಧ್ಯಯನಕ್ಕೆ ಇದು ಒಂದು ಅತಿ ಮುಖ್ಯವಾದ ವಿಷಯವಾಗಬಹುದು. ಎಲ್ಲ ವಿಡಂಬನೆ. ಎಲ್ಲ ಕುಚೋದ್ಯ. ಒಬ್ಬನನ್ನು ಸತ್ತವನಂತೆ ಚಟ್ಟದ ಮೇಲೆ ಮಲಗಿಸಿ ಅದನ್ನು ನಾಲಕ್ಕು ಮಂದಿ ಹೊತ್ತು ಉಳಿದವರು ಜತೆಗೂಡಿ ಊರಲ್ಲಿ ಬಾಯಿ ಬಡಿದುಕೊಳ್ಳತ್ತಾ ಮೆರವಣಿಗೆ ಮಾಡುವುದು. ಅದರಲ್ಲೆ ಒಬ್ಬನಿಗೆ ಸೀರೆ ಉಡಿಸಿ ವಿಧವೆ ವೇಷದ ಅನುಕರಣೆ  ಬೇರೆ. ದುಃಖದ ನಟನೆಯಿಂದ ಸುಖಿಸುವುದು ವಿಪರ್ಯಾಸ ಎನಿಸಿದರೂ  ಸುಖ ದುಃಖಗಳು ಒಂದೆ ನಾಣ್ಯದ ಎರಡು ಮುಖಗಳು ಎಂಬುದರ    ಸಂಕೇತ ಈ ಆಚರಣೆಯಲ್ಲಿ ಇರಬಹುದೇನೋ ಎನಿಸುವುದು. ಅಲ್ಲದೆ ಎಲ್ಲರ ಜೀವನದಲ್ಲಿ ಬರಬಹುದಾದ ಸಾವಿಗೆ ಮಾನಸಿಕವಾಗಿ ಸಿದ್ಧ ಮಾಡುವ ಅಪರೋಕ್ಷ  ಪ್ರಯತ್ನ ಎಂದರೂ ತಪ್ಪಲ್ಲ.
ಕಾಮನನ್ನು ಸುಟ್ಟ ಮೇಲೆ ಅದರ ಬಿಸಿ ಬೂದಿಯಲ್ಲಿ ಉಳ್ಳಾಗಡ್ಡಿ, ನೆನಗಡಲೆ ಕೊಬ್ಬರಿ ಸುಟ್ಟುಕೊಂಡು ತಿನ್ನುವುದ ರೂಢಿ. ಅದು ಆರೋಗ್ಯಕ್ಕೆ ಒಳ್ಳೆಯದು ಎಂಬ ನಡೆಯು ಬಹು ಅರ್ಥಪೂರ್ಣ. ಮಾನವನ ಮನಸ್ಸುನ ಒಳಿತು ಕೆಡುಕಗಳ ಮಿಶ್ರಣದ ಮೂಟೆ. ನೋವು ನಲಿವುಗಳ ಆಗರ, ನಿಸರ್ಗದತ್ತ ಬಾಳಿನಲ್ಲಿ ಕೆಟ್ಟದ್ದು, ಆಡಬಾರದ್ದು, ಮಾಡಬಾರದು ಎಂದು ಯಾವುದು ಇಲ್ಲ. ಅದೆಲ್ಲ ಸುಗಮ ಸಾಮಾಜಿಕ ವ್ಯವಸ್ಥೆಗಾಗಿ ನಾವೆ ಹಾಕಿಕೊಂಡ ಕಟ್ಟುಪಾಡು. ಒತ್ತಿಟ್ಟ ಭಾವನೆ ಒಂದಲ್ಲ ಒಂದು ಸಲ ಕಿತ್ತು ಬರುವುದು ಸಹಜ. ಅದಕೆಂದೆ ಹಬ್ಬದ ಹೆಸರಲ್ಲಿ ಆ ಹತ್ತು ದಿವಸ, ಕಟ್ಟಿಗೆ ಕುಳ್ಳುಗಳ ಕಳ್ಳತನ, ಕೆಟ್ಟ ಕೊಳಕು ಮಾತುಗಳಿಂದ  ಮನದಲ್ಲಿದ್ದ ದುರ್ಭಾವನೆಗಳು ಮೊಳಕೆಯಲ್ಲೆ ನಾಶ ಮಾಡುವ ಯತ್ನ.
ಮಾರನೆ ಬೆಳಗ್ಗೆ ಓಕುಳಿ ಆಟ. ಅದೂ ಸಾಮೂಹಿಕವಾಗಿ. ಎಲ್ಲರೂ ಪಟ್ಟಿ ಹಾಕಿಕೊಂಡು ಬಣ್ಣವನ್ನು ತರುತಿದ್ದರು. ಆಗ ಇನ್ನೂ ಪೇಂಟುಗಳ ಹಾವಳಿ ಇರಲಿಲಿಲ್ಲ. ಚಿಕ್ಕಮಕ್ಕಳು ಮನೆಯಲ್ಲೆ ಬಣ್ಣದ ಪುಡಿತಂದು ನೀರಲ್ಲಿ ಕಲಸಿ ಒಬ್ಬರ ಮೇಲೆ ಒಬ್ಬರು ಹಾಕಿ ಖುಷಿಪಡುವರು. ಅದು ಮುಗಿದರೆ ಸುಣ್ಣ ಮತ್ತು ಅರಿಸಿನ ಸೇರಿಸಿದರೂ ಕಂಪು ಬಣ್ಣ ಬರುವುದು. ಅದನ್ನೆ ಬಳಸುವವರು.  ಯಾರಲ್ಲಾದರೂ ಪಿಚಕಾರಿ ಇದ್ದರೆ ಅವನೆ ನಾಯಕ. ಉಳಿದವರು ಸಾಮೂಹಿಕ ಓಕಳಿಯಲ್ಲಿ ಭಾಗಿಗಳಾಗುವರು. ಎತ್ತಿನ ಗಾಡಿಯಲ್ಲಿ ಡ್ರಮ್ಮುಗಳನ್ನು ಹಂಡೆಗಳನ್ನು ಓಕಳಿಯಿಂದ ತುಂಬಿರುವರು. ಸಾಧಾರಣ ಕೆಂಪು ಮತ್ತು  ಹಸಿರುಬಣ್ಣಗಳೆ ಜಾಸ್ತಿ. ಹಾದಿಯುದ್ದಕ್ಕೂ ಬರುವವರ ಹೋಗುವವರ ಮೇಲೆ ಬಣ್ಣ ಎರಚುವರು. ಸುಮ್ಮನೆ ಇದ್ದರೆ ಸರಿ. ಸ್ವಲ್ಲ ಪ್ರತಿರೋಧ ತೋರಿದರೆ ಬಟ್ಟೆ ಪೂರ್ತಿ ಬಣ್ಣ. ವಿಶೇಷವಾಗಿ ಯಾರಾದರೂ ತಾವು ಗಣ್ಯರು, ಬೇರೆಯವರಿಗಿಂತ ಭಿನ್ನರು ಎಂದು ಬಿಂಕದಿಂದ ಮನೆಯಲ್ಲೆ ಇದ್ದರೆ, ಹುಡುಕಿಕೊಂಡು ಹೋಗಿ ಅವರಿಗೆ ಬಣ್ಣದ ಸ್ನಾನ ಮಾಡಿಸುವರು. ಆಗ ಹೆಂಗಸರು ಭಾಗವಹಿಸುತಿರಲಿಲ್ಲ. ರೈತಾಪಿ ಜನರು ಹೆಚ್ಚಾಗಿ ಬರುತಿರಲಿಲ್ಲ. ಅವರು ಯುಗಾದಿ ಮಾರನೆ ದಿನ ಬಣ್ಣ ದಾಟ ಆಡುತಿದ್ದರು ಅವರ ವಿಶೇಷವೆಂದರೆ ಅದರಲ್ಲಿ ಗಂಡು ಹೆಣ್ಣು ಭೇದವಿಲ್ಲದೆ ಭಾಗವಹಿಸುತಿದ್ದರು. ಅದರಲ್ಲೂ ಮದುವೆಯಾಗದವರು ಮಾಮ, ಸೊಸೆ ಎಂದು ಹುಡುಕಿ ಹುಡುಕಿ ಬಣ್ಣ ಹಾಕುತಿದ್ದರು. ಈಗ ಹಿನ್ನೋಟದಲ್ಲಿ ನನಗೆ ಅನಿಸುತ್ತಿದೆ. ದಿನನಿತ್ಯದ ಜಂಜಡದಲ್ಲಿ ನೀರಸ ಬದುಕಿಗೆ ಬಣ್ಣ ತರಲು, ಆನಂದ ಮೂಡಿಸಲೆಂದೆ ಇರುವುದು ಈ ಹಬ್ಬ. ಭೇದ ಭಾವ ಮರೆಸಿ ಎಲ್ಲರು ನಗುನಗುತ್ತಾ ಇರಲಿ ಎಂಬುದೆ ಆಚರಣೆಯ ಹಿಂದಿನ ಉದ್ದೇಶ ಎನಿಸುವುದು.. ಅದು ಸಾಸಿರ ಸಾಸಿರ ವರ್ಷದಿಂದ ಬಂದಿದೆ. ಜನ ಜೀವನದಲ್ಲಿ ಹಾಸು ಹೊಕ್ಕಾಗಿದೆ ಎಂದರೆ ನಮ್ಮ ಸಂಸ್ಕೃತಿಯ ಹಿರಿಮೆಯ ಬಗ್ಗೆ ಹೆಮ್ಮೆಯಾಗುವುದು. ಆದರೆ ಈಗ ಅದರ ಜೋರು ಕಡಿಮೆಯಾಗಿದೆ.
ಬಣ್ಣ ಆಡಿದವರೆಲ್ಲ ಮಧ್ಯಾಹ್ನದ ಹೊತ್ತಿಗೆ ಕಾಲುವೆ, ಬಾವಿಗೆ ಹೋಗಿ ಮನದಣಿಯೆ ಬಣ್ಣ ಹೋಗುವಂತೆ ನೀರಾಟ ಆಡುವರು. ಅಂದು ಎಲ್ಲರ ಮನೆಯಲ್ಲೂ ಸಿಹಿ ಊಟ. ಹೊಯ್ಯಕೊಂಡ ಬಾಯಿಗೆ ಹೋಳಿಗೆ ತುಪ್ಪ ಎಂದೆ ಅದರ  ಆಚರಣೆ. ಅಂದು ರಾತ್ರಿ ಸಾಮೂಹಿಕ ಭೋಜನ. ಅಲ್ಲಿಗೆ ಮುಗಿಯುತಿತ್ತು ಹೋಳಿಯ ಹಾವಳಿ. ಮತ್ತೆ ಅದಕ್ಕೆ ಒಂದು ವರ್ಷ ಚಾತಕಪಕ್ಷಿಯಂತೆ ಕಾಯುತ್ತಿದ್ದೆವು.
ಏಳನೆ ತರಗತಿಯವರೆಗೆ ನಾನು ನಮ್ಮ ಅತ್ತೆಯ ಮನೆಯಲ್ಲಿಯೇ ಇದ್ದು ಅಲ್ಲಿನ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಮುಗಿಸಿದೆ. ಆಗಲೆ ಸಲೀಸಾಗಿ ನಾಲ್ಕಾರು ಮೈಲು ನಡೆವಷ್ಟು ದೊಡ್ಡವನಾಗಿದ್ದೆ. ಯಥಾರೀತಿ ಒಳ್ಳೆಯ ಅಂಕಗಳೊಂದಿಗೆ ಪಾಸಾಗಿದ್ದೆ. ಹೈಸ್ಕೂಲಿಗೆ ನಮ್ಮ ಊರಿನಿಂದಲೆ ಓಡಾಡಬಹುದು ಎಂದು ಹಳ್ಳಿಗೆ ಹಿಂತಿರುಗಿದೆ.



ನಮ್ಮ ಶಾಲೆಯು ಎಮ್ಮದು


ಹೋ
ಳಿ ಹುಣ್ಣಿಮೆ ಬಂದರೆ ಅಗಸರಿಗೆ ಆ ಹದಿನೈದು ದಿನ ಅರೆ ನಿದ್ದೆಯ ಸಮಯ. ಹುಡುಗರು ಬರಿ ಕತ್ತೆಯ ಮೇಲೆ ಹತ್ತಿ ಸವಾರಿ ಮಾಡಿದರೆ ಅವರು ಚಿಂತೆ ಮಾಡುತ್ತಿರಲಿಲ್ಲ. ಆದರೆ ಅವರ ತುಂಟಾಟ ಜಾಸ್ತಿ. ಅದರ ಬಾಲಕ್ಕೆ ಖಾಲಿಡಬ್ಬ ಕಟ್ಟಿ ಅದರಲ್ಲಿ ಕಲ್ಲುಗಳನ್ನು ಹಾಕಿ ಓಡಿಸುತ್ತಿದ್ದರು. ಅದು ಓಡಿದಾಗ ಡಬ್ಬ ಕಾಲಿಗೆ ಬಡಿದು ಅದು ಗಡಗಡ ಶಬ್ದ ಮಾಡುತ್ತಿತ್ತು. ಅದು ಗಾಬರಿಯಾಗಿ ದಿಕ್ಕೆಟ್ಟು ಓಡುತ್ತಿತ್ತು. ಅದರ ಜೊತೆ ಬಾಯಿ ಬಡಿದುಕೊಳ್ಳುತ್ತಾ ಹುಡುಗರ ಪಡೆ ಸಾಗುತಿತ್ತು. ಕೆಲವು ಕಿಡಿಗೇಡಿಗಳು ಆ ಡಬ್ಬದಲ್ಲಿ ಪಟಾಕಿ ಹಚ್ಚಿ ಹಾಕಿದರಂತೂ ಅದರ ಸ್ಥಿತಿ ದೇವರೆ ಗತಿ.  ಹಾಗಾದಾಗ ಓಡಿ ಹೋದ ಕತ್ತೆಯನ್ನು ಹುಡುಕುವುದಕ್ಕೆ ಅಗಸರು ಕೆಲಸ ಬಿಟ್ಟು ದಿನವೆಲ್ಲ ಅಲೆಯಬೇಕಿತ್ತು. ಸಾಧಾರಣವಾಗಿ ಅವರು ಕೆಲಸದ ದಣಿವನ್ನು ಮರೆಯಲು ಸೇಂದಿ ಕುಡಿದು ಮಲಗುವರು. ಅವರು ಕತ್ತೆ ಕಾಯುತ್ತಾ ರಾತ್ರಿಯೆಲ್ಲ ಜಾಗರಣೆ ಮಾಡಲಾಗುವುದೆ. ಮೇಲಾಗಿ ರಾತ್ರಿ ಮೇಯಲು ಬಿಡಲೇಬೇಕಲ್ಲ. ಆಗ ನಮಗೆಲ್ಲ ಚಿನ್ನಾಟ.
ಕಾಮದಹನ ಇನ್ನೂ ಆರೆಂಟು ದಿನ ಇರುವ ಮುನ್ನವೆ ಪ್ರತಿಸಂಜೆ ಮನೆ ಮನೆಗೆ ಕುಳ್ಳು ಕಟ್ಟಿಗೆ ಬೇಡಲು ಗುಂಪಿಗೆ ಗುಂಪೆ ಹೊರಡುವುದು. ಪ್ರತಿ ಮನೆಯ ಮುಂದೆ ನಿಂತು ಕಾಮನ ಮಕ್ಕಳು ಬಂದಿದ್ದೇವೆ. ಕುಳ್ಳು, ಕಟ್ಟಿಗೆ ಕೊಡಿ ಎಂದು ಬಾಯಿ ಬಡಿದುಕೊಳ್ಳುವುದು. ಈ ಗದ್ದಲ ತಾಳಲಾರದೆ ಅವರು ಕೊಟ್ಟು ಕಳುಹಿಸುವರು. ಸಾಧಾರಣವಾಗಿ ಎಲ್ಲರ ಮನೆಯಲ್ಲಿ ಕಟ್ಟಿಗೆ ಕುಳ್ಳನ್ನೆ ಮುಖ್ಯ ಉರುವಲಾಗಿ ಬಳಸುತಿದ್ದರು. ಸೀಮೆ ಎಣ್ಣೆಯನ್ನು ದೀಪಕ್ಕೆ ಬಳಸುವರು. ಹೀಗಾಗಿ ಉರುವಲು ಸಾಕಷ್ಟು ಸಂಗ್ರಹವಾಗುತಿತ್ತು. ಈಗ  ಕಾಮದಹನ ಬಹು ವಿರಳವಾಗುತ್ತಿದೆ. ಎಲ್ಲರ ಮನೆಯಲ್ಲೂ ಗ್ಯಾಸ್‌. ಸ್ಟೋವ್ಗಳು. ಇನ್ನು ಕಟ್ಟಿಗೆ ಒಲೆ ಎಲ್ಲಿ. ಅದರಿಂದ ಕಾಮದಹನದ ಖದರು ಕಡಿಮೆಯಾಗಿದೆ.
ನಾವು ಸಂಜೆ ಕುಳ್ಳು ಕಟ್ಟಿಗೆ ಬೇಡಲು ಹೋದಾಗ ಕಿರಿ ಕಿರಿ ಮಾಡಿದ ಮನೆಯ ಗುರುತು ಮಾಡಿಕೊಂಡು ಸರಿ ರಾತ್ರಿ ದಾಳಿ ಮಾಡುತಿದ್ದೆವು. ಅವರ ಮನೆಯ ಮುಂದೆ ಇದ್ದ ಕೊರಡು, ಕುಂಟೆಗಳನ್ನು, ಹಿತ್ತಲಲ್ಲಿನ ಆವರಣದ ಬಾಗಿಲು ಕದ್ದು ಸಾಗಿಸಲಾಗುವುದು. ಬೆಳಗ್ಗೆ ನೋಡಿದಾಗಲೆ ಅದರ ಸುಳಿವು ದೊರೆಯುತಿತ್ತು. ಅನ್ನುವ ಹಾಗಿಲ್ಲ. ಅನುಭವಿಸುವ ಹಾಗಿಲ್ಲ. ಬಾಯ್ತುಂಬ  ಬೈದು ಸಮಾಧಾನ ಮಾಡಿಕೊಳ್ಳುತಿದ್ದರು.
ಆ ಸಮಯದಲ್ಲಿ ಇನ್ನೊಂದು ಮೋಜು ಜರುಗುತಿತ್ತು. ಅಷ್ಟೇನು ಆಧುನಿಕವಲ್ಲದ ಊರಿನಲ್ಲಿ ಎರಡೋ ಮೂರೋ ಬೋರ್ಡುಗಳು. ಅವೂ ಹಜಾಮತಿ ಅಂಗಡಿಗಳವು ಮತ್ತು ವೈದ್ಯರವು. ಬೆಳಗಾಗುವದರೊಳಗೆ ಡಾಕ್ಟರ ಷಾಪು ಮಾಡರ್ನ್ ಸೆಲೂನ.. ಸೆಲೂನಿನ ಹೆಸರು ಧನ್ವಂತರಿ ಚಿಕಿತ್ಸಾಲಯ. ಮಧ್ಯಾಹ್ನ ಅವನ್ನು ಬದಲಾಯಿಸುವವರೆಗೆ ನೋಡುಗರಿಗೆ ಮೋಜೆ ಮೋಜು.
ಹೋಳಿ ಹುಣ್ಣಿಮೆ ಬಂದರೆ ಪುಸ್ತಕ ಪರೀಕ್ಷೆ ಪರಿಗಣನೆಗೆ ಬರಿತ್ತಲಿರಲಿಲ್ಲ. ಕಾಮನನ್ನುಕೂಡಿಸಿದ ಮೇಲೆ ನಿತ್ಯ ರಾತ್ರಿ ಅದರ ಮುಂದೆ ಹದಿ ಹರೆಯದವರ, ಗಂಡುಮಕ್ಕಳ ಜಂಗುಳಿ. ಹಿರಿಕಿರಿಯರೆನ್ನದೆ  ಹಾಸ್ಯಮಾಡುವ ಹಾಡುಗಳು, ತಪ್ಪಡಿ ಬಡಿತ. ಹಾರವಯ್ಯ, ಜಂಗಮಯ್ಯ, ಶಾನುಭೋಗ, ಊರ ಶೆಟ್ಟಿ ಯಾರಿಗೂ ಉಳಿಗಾಲವಿಲ್ಲ. ಆ ಹಾಡುಗಳೋ ಶೀಲ, ಅಶ್ಲೀಲದ ಅಂಚು ದಾಟಿದವು. ಕುಣಿಯುವುದು ಕೇಕೆ ಹಾಕುವುದು ಮಾತು ಮಾತಿಗೆ ಅಯ್ಯೋ! ಈಗ ಇದ್ದ, ಸತ್ನಲ್ಲಪ್ಪೋ ಎಂದು ಬಾಯಿ ಬಡಿದುಕೊಳ್ಳುವುದು. ಸಂಬಂಧಪಟ್ಟವರು ಸುಮ್ಮನಿದ್ದರೆ ಸರಿ. ಅವರೇನಾದರೂ ಗದರಿದರೆ ಒಂದಕ್ಕೆ ನಾಲಕ್ಕುಪಟ್ಟು ಹೆಚ್ಚು ಮಾಡಿ  ಹಾಡಾಡಿಕೊಂಡು ಅಳುವುದು, ಬಾಯಿ ಬಡಿದುಕೊಳ್ಳುವುದು. ಅದೂ ಸಾಮೂಹಿಕವಾಗಿ. ಬೇಸಿಗೆ ಎಂದು ಅಂಗಳದಲ್ಲಿ ಹೊರಸುಹಾಕಿ ಮಲಗಿದವರನ್ನು ಅನಾಮತ್ತು ಹೊರಸಿನ ಸಮೇತ ಎತ್ತಿ ಕಾಲುವೆ ದಂಡೆಯಲ್ಲಿ ಇಡುವುದು ಬಹು ಮೋಜಿನ ವಿಷಯ.. ಅವರು ಬೆಳಗ್ಗೆ  ಎದ್ದು ಕಣ್ಣು ಬಿಟ್ಟಾಗ ಎಲ್ಲಿರುವೆ ಎಂದು ತಿಳಿಯದೆ ಕಕ್ಕಾಬಿಕ್ಕಿ. ಮುಂಜಾನೆ ಎದ್ದು ಹೊರಸು ಹೊತ್ತುಕೊಂಡು ಮನೆಗೆ ಬರುತ್ತಿರುವ ಅವರನ್ನು ನೋಡಿ ಎಲ್ಲ ಗೊತ್ತಿದ್ದರೂ ಎಲ್ಲಿಗೆ ಹೋಗಿದ್ದಿರಿ? ಎಂದು ಕುವಾಡ ಮಾಡುತಿದ್ದರು.
ವರ್ಷದಲ್ಲಿ ಮುನ್ನೂರು ಐವತ್ತು ದಿನ ತಗ್ಗಿ ಬಗ್ಗಿ ಹೆದರಿ ನಡೆಯುತಿದ್ದವರು, ಆಚಾರ ವಿಚಾರಕ್ಕೆ ಹೆಸರಾದವರ ಮನೆಯ ಹರೆಯದ ಹುಡುಗರು, ಪಡ್ಡೆಗಳು ಯಾವುದೆ ಎಗ್ಗಿಲ್ಲದೆ ಎಲ್ಲರಲ್ಲಿ ಒಂದಾಗುತಿದ್ದರು. ಹಿರಿಯರು ಹುರಿದುಂಬಿಸಲು ಮುಗಳ್ನಗುತ್ತಾ ಕಟ್ಟೆಯ ಮೇಲೆ ಕೂತಿರುತಿದ್ದರು. ಹೆಂಗಸರಿಗೆ ಇಲ್ಲಿ ಪ್ರವೇಶ ಇಲ್ಲ. ಹಿರಿಯ ಹೆಂಗಸರು ಧೈರ್ಯವಾಗಿ ಬಾಗಿಲಿಗೆ ಬಂದರೆ, ಹರೆಯದವರು ಬಾಗಿಲ ಸಂದಿಯಿಂದ ಕಿಟಕಿಯ  ಮರೆಯಲ್ಲಿ ನಿಂತು ಕಿಸಿ ಕಿಸಿ ನಗುತ್ತಾ ಸ್ವಾರಸ್ಯವನ್ನು ಸವಿಯುತಿದ್ದರು.  ವರ್ಷ ಪೂರ್ತಿ ಅದುಮಿಟ್ಟಿದ್ದ ಭಾವನೆಗಳು ಮಹಾಪೂರದಂತೆ ಆ ಸಮಯದಲ್ಲಿ ಮಾತಿನ ಮೂಲಕ, ಹಾಡಿನ ಮೂಲಕ ಹರಿದು ಬರುತಿದ್ದವು. ಒಂದು ರೀತಿಯಲ್ಲಿ ಈಗಿನ ವಾರಾಂತ್ಯದ ಪಾರ್ಟಿಗಳಲ್ಲಿ ಗಂಡು ಹೆಣ್ಣು  ಎಗ್ಗಿಲ್ಲದೆ ಕುಣಿದು ಕುಪ್ಪಳಿಸುವಂತೆ. ಆಗ ವರ್ಷಕೊಮ್ಮೆ ಗಂಡಸರು ಮಾತ್ರ ಸರ್ವ ಸ್ವಾತಂತ್ರ್ಯ ಅನುಭವಿಸುತ್ತಿದ್ದರು ಅದು ಮಾತಿನಲ್ಲಿ ಮಾತ್ರ.. ಕಾಮ ದಹನವಾದ ಮೇಲೆ ಎಲ್ಲ ಕಡೆ ಶಾಂತಿ. ಎಲ್ಲರೂ ಎಂದಿನಂತೆ ಸಾಮಾಜಿಕ  ಕಟ್ಟು ಕಟ್ಟಳೆಗಳಿಗೆ ತಲೆ ಬಾಗಿ ನಡೆಯುತ್ತಿದ್ದರು.
ಅರ್ಧ ರಾತ್ರಿಯ ನಂತರ ಕಾಮದಹನವಾಗುತಿತ್ತು. ಆಗಿನ ಸಂಭ್ರಮ ಮುಗಿಲು ಮುಟ್ಟುತಿತ್ತು. ಎಲ್ಲರೂ ಸತ್ತನಲ್ಲೋ ಎಂದು ಬಾಯಿ ಬಡಿದುಕೊಳ್ಳುವುದು. ಆದರೆ ಅದರ ಅಡಿಯಲ್ಲಿ ಖುಷಿಯ ಕೇಕೆ. ಇದು  ನಿಜಕ್ಕೂ ಸಾಮಾಜಿಕ ಅಧ್ಯಯನಕ್ಕೆ ಇದು ಒಂದು ಅತಿ ಮುಖ್ಯವಾದ ವಿಷಯವಾಗಬಹುದು. ಎಲ್ಲ ವಿಡಂಬನೆ. ಎಲ್ಲ ಕುಚೋದ್ಯ. ಒಬ್ಬನನ್ನು ಸತ್ತವನಂತೆ ಚಟ್ಟದ ಮೇಲೆ ಮಲಗಿಸಿ ಅದನ್ನು ನಾಲಕ್ಕು ಮಂದಿ ಹೊತ್ತು ಉಳಿದವರು ಜತೆಗೂಡಿ ಊರಲ್ಲಿ ಬಾಯಿ ಬಡಿದುಕೊಳ್ಳತ್ತಾ ಮೆರವಣಿಗೆ ಮಾಡುವುದು. ಅದರಲ್ಲೆ ಒಬ್ಬನಿಗೆ ಸೀರೆ ಉಡಿಸಿ ವಿಧವೆ ವೇಷದ ಅನುಕರಣೆ  ಬೇರೆ. ದುಃಖದ ನಟನೆಯಿಂದ ಸುಖಿಸುವುದು ವಿಪರ್ಯಾಸ ಎನಿಸಿದರೂ  ಸುಖ ದುಃಖಗಳು ಒಂದೆ ನಾಣ್ಯದ ಎರಡು ಮುಖಗಳು ಎಂಬುದರ    ಸಂಕೇತ ಈ ಆಚರಣೆಯಲ್ಲಿ ಇರಬಹುದೇನೋ ಎನಿಸುವುದು. ಅಲ್ಲದೆ ಎಲ್ಲರ ಜೀವನದಲ್ಲಿ ಬರಬಹುದಾದ ಸಾವಿಗೆ ಮಾನಸಿಕವಾಗಿ ಸಿದ್ಧ ಮಾಡುವ ಅಪರೋಕ್ಷ  ಪ್ರಯತ್ನ ಎಂದರೂ ತಪ್ಪಲ್ಲ.
ಕಾಮನನ್ನು ಸುಟ್ಟ ಮೇಲೆ ಅದರ ಬಿಸಿ ಬೂದಿಯಲ್ಲಿ ಉಳ್ಳಾಗಡ್ಡಿ, ನೆನಗಡಲೆ ಕೊಬ್ಬರಿ ಸುಟ್ಟುಕೊಂಡು ತಿನ್ನುವುದ ರೂಢಿ. ಅದು ಆರೋಗ್ಯಕ್ಕೆ ಒಳ್ಳೆಯದು ಎಂಬ ನಡೆಯು ಬಹು ಅರ್ಥಪೂರ್ಣ. ಮಾನವನ ಮನಸ್ಸುನ ಒಳಿತು ಕೆಡುಕಗಳ ಮಿಶ್ರಣದ ಮೂಟೆ. ನೋವು ನಲಿವುಗಳ ಆಗರ, ನಿಸರ್ಗದತ್ತ ಬಾಳಿನಲ್ಲಿ ಕೆಟ್ಟದ್ದು, ಆಡಬಾರದ್ದು, ಮಾಡಬಾರದು ಎಂದು ಯಾವುದು ಇಲ್ಲ. ಅದೆಲ್ಲ ಸುಗಮ ಸಾಮಾಜಿಕ ವ್ಯವಸ್ಥೆಗಾಗಿ ನಾವೆ ಹಾಕಿಕೊಂಡ ಕಟ್ಟುಪಾಡು. ಒತ್ತಿಟ್ಟ ಭಾವನೆ ಒಂದಲ್ಲ ಒಂದು ಸಲ ಕಿತ್ತು ಬರುವುದು ಸಹಜ. ಅದಕೆಂದೆ ಹಬ್ಬದ ಹೆಸರಲ್ಲಿ ಆ ಹತ್ತು ದಿವಸ, ಕಟ್ಟಿಗೆ ಕುಳ್ಳುಗಳ ಕಳ್ಳತನ, ಕೆಟ್ಟ ಕೊಳಕು ಮಾತುಗಳಿಂದ  ಮನದಲ್ಲಿದ್ದ ದುರ್ಭಾವನೆಗಳು ಮೊಳಕೆಯಲ್ಲೆ ನಾಶ ಮಾಡುವ ಯತ್ನ.
ಮಾರನೆ ಬೆಳಗ್ಗೆ ಓಕುಳಿ ಆಟ. ಅದೂ ಸಾಮೂಹಿಕವಾಗಿ. ಎಲ್ಲರೂ ಪಟ್ಟಿ ಹಾಕಿಕೊಂಡು ಬಣ್ಣವನ್ನು ತರುತಿದ್ದರು. ಆಗ ಇನ್ನೂ ಪೇಂಟುಗಳ ಹಾವಳಿ ಇರಲಿಲಿಲ್ಲ. ಚಿಕ್ಕಮಕ್ಕಳು ಮನೆಯಲ್ಲೆ ಬಣ್ಣದ ಪುಡಿತಂದು ನೀರಲ್ಲಿ ಕಲಸಿ ಒಬ್ಬರ ಮೇಲೆ ಒಬ್ಬರು ಹಾಕಿ ಖುಷಿಪಡುವರು. ಅದು ಮುಗಿದರೆ ಸುಣ್ಣ ಮತ್ತು ಅರಿಸಿನ ಸೇರಿಸಿದರೂ ಕಂಪು ಬಣ್ಣ ಬರುವುದು. ಅದನ್ನೆ ಬಳಸುವವರು.  ಯಾರಲ್ಲಾದರೂ ಪಿಚಕಾರಿ ಇದ್ದರೆ ಅವನೆ ನಾಯಕ. ಉಳಿದವರು ಸಾಮೂಹಿಕ ಓಕಳಿಯಲ್ಲಿ ಭಾಗಿಗಳಾಗುವರು. ಎತ್ತಿನ ಗಾಡಿಯಲ್ಲಿ ಡ್ರಮ್ಮುಗಳನ್ನು ಹಂಡೆಗಳನ್ನು ಓಕಳಿಯಿಂದ ತುಂಬಿರುವರು. ಸಾಧಾರಣ ಕೆಂಪು ಮತ್ತು  ಹಸಿರುಬಣ್ಣಗಳೆ ಜಾಸ್ತಿ. ಹಾದಿಯುದ್ದಕ್ಕೂ ಬರುವವರ ಹೋಗುವವರ ಮೇಲೆ ಬಣ್ಣ ಎರಚುವರು. ಸುಮ್ಮನೆ ಇದ್ದರೆ ಸರಿ. ಸ್ವಲ್ಲ ಪ್ರತಿರೋಧ ತೋರಿದರೆ ಬಟ್ಟೆ ಪೂರ್ತಿ ಬಣ್ಣ. ವಿಶೇಷವಾಗಿ ಯಾರಾದರೂ ತಾವು ಗಣ್ಯರು, ಬೇರೆಯವರಿಗಿಂತ ಭಿನ್ನರು ಎಂದು ಬಿಂಕದಿಂದ ಮನೆಯಲ್ಲೆ ಇದ್ದರೆ, ಹುಡುಕಿಕೊಂಡು ಹೋಗಿ ಅವರಿಗೆ ಬಣ್ಣದ ಸ್ನಾನ ಮಾಡಿಸುವರು. ಆಗ ಹೆಂಗಸರು ಭಾಗವಹಿಸುತಿರಲಿಲ್ಲ. ರೈತಾಪಿ ಜನರು ಹೆಚ್ಚಾಗಿ ಬರುತಿರಲಿಲ್ಲ. ಅವರು ಯುಗಾದಿ ಮಾರನೆ ದಿನ ಬಣ್ಣ ದಾಟ ಆಡುತಿದ್ದರು ಅವರ ವಿಶೇಷವೆಂದರೆ ಅದರಲ್ಲಿ ಗಂಡು ಹೆಣ್ಣು ಭೇದವಿಲ್ಲದೆ ಭಾಗವಹಿಸುತಿದ್ದರು. ಅದರಲ್ಲೂ ಮದುವೆಯಾಗದವರು ಮಾಮ, ಸೊಸೆ ಎಂದು ಹುಡುಕಿ ಹುಡುಕಿ ಬಣ್ಣ ಹಾಕುತಿದ್ದರು. ಈಗ ಹಿನ್ನೋಟದಲ್ಲಿ ನನಗೆ ಅನಿಸುತ್ತಿದೆ. ದಿನನಿತ್ಯದ ಜಂಜಡದಲ್ಲಿ ನೀರಸ ಬದುಕಿಗೆ ಬಣ್ಣ ತರಲು, ಆನಂದ ಮೂಡಿಸಲೆಂದೆ ಇರುವುದು ಈ ಹಬ್ಬ. ಭೇದ ಭಾವ ಮರೆಸಿ ಎಲ್ಲರು ನಗುನಗುತ್ತಾ ಇರಲಿ ಎಂಬುದೆ ಆಚರಣೆಯ ಹಿಂದಿನ ಉದ್ದೇಶ ಎನಿಸುವುದು.. ಅದು ಸಾಸಿರ ಸಾಸಿರ ವರ್ಷದಿಂದ ಬಂದಿದೆ. ಜನ ಜೀವನದಲ್ಲಿ ಹಾಸು ಹೊಕ್ಕಾಗಿದೆ ಎಂದರೆ ನಮ್ಮ ಸಂಸ್ಕೃತಿಯ ಹಿರಿಮೆಯ ಬಗ್ಗೆ ಹೆಮ್ಮೆಯಾಗುವುದು. ಆದರೆ ಈಗ ಅದರ ಜೋರು ಕಡಿಮೆಯಾಗಿದೆ.
ಬಣ್ಣ ಆಡಿದವರೆಲ್ಲ ಮಧ್ಯಾಹ್ನದ ಹೊತ್ತಿಗೆ ಕಾಲುವೆ, ಬಾವಿಗೆ ಹೋಗಿ ಮನದಣಿಯೆ ಬಣ್ಣ ಹೋಗುವಂತೆ ನೀರಾಟ ಆಡುವರು. ಅಂದು ಎಲ್ಲರ ಮನೆಯಲ್ಲೂ ಸಿಹಿ ಊಟ. ಹೊಯ್ಯಕೊಂಡ ಬಾಯಿಗೆ ಹೋಳಿಗೆ ತುಪ್ಪ ಎಂದೆ ಅದರ  ಆಚರಣೆ. ಅಂದು ರಾತ್ರಿ ಸಾಮೂಹಿಕ ಭೋಜನ. ಅಲ್ಲಿಗೆ ಮುಗಿಯುತಿತ್ತು ಹೋಳಿಯ ಹಾವಳಿ. ಮತ್ತೆ ಅದಕ್ಕೆ ಒಂದು ವರ್ಷ ಚಾತಕಪಕ್ಷಿಯಂತೆ ಕಾಯುತ್ತಿದ್ದೆವು.
ಏಳನೆ ತರಗತಿಯವರೆಗೆ ನಾನು ನಮ್ಮ ಅತ್ತೆಯ ಮನೆಯಲ್ಲಿಯೇ ಇದ್ದು ಅಲ್ಲಿನ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಮುಗಿಸಿದೆ. ಆಗಲೆ ಸಲೀಸಾಗಿ ನಾಲ್ಕಾರು ಮೈಲು ನಡೆವಷ್ಟು ದೊಡ್ಡವನಾಗಿದ್ದೆ. ಯಥಾರೀತಿ ಒಳ್ಳೆಯ ಅಂಕಗಳೊಂದಿಗೆ ಪಾಸಾಗಿದ್ದೆ. ಹೈಸ್ಕೂಲಿಗೆ ನಮ್ಮ ಊರಿನಿಂದಲೆ ಓಡಾಡಬಹುದು ಎಂದು ಹಳ್ಳಿಗೆ ಹಿಂತಿರುಗಿದೆ.




ಊರಿಗೆ ಅಪ್ಪ ಉಪಕಾರಿ


ಪ್ಪ ಪೇಟೆಯ ಸಕ್ಕರೆ ಜಿನ್ನಿನಲ್ಲೆ ಫೀಲ್ಡ್‌ ಮೇಸ್ತ್ರಿ. ಅವರಿಗೆ ಜಿನ್ನಿಗೆ ಕಬ್ಬು ಒದಗಿಸುತಿದ್ದ ಸುತ್ತಲ ಹಳ್ಳಿಗಳ ರೈತರ ಗದ್ದೆಯಲ್ಲಿನ ಬೆಳೆಯ ಉಸ್ತುವಾರಿ ಕೆಲಸ. ಕಬ್ಬು ನಾಟಿ  ಮಾಡಿದಾಗ, ಕಟಾವಿಗೆ ಚೀಟಿ ಕೊಡುವಾಗ ಅವರ ಮಾತೆ ವೇದವಾಕ್ಯ. ಅವರಿಗೆ ಕಬ್ಬಿನ  ಚೀಟಿ ಕೊಡೋ ಸಾಮಿ ಎಂದೆ ಅಡ್ಡ ಹೆಸರು. ನಮ್ಮ ಮನೆ ಇದ್ದದ್ದು ಜಿನ್ನಿನಿಂದ ಮೂರು ಮೈಲು ದೂರದ ಹಳ್ಳಿಯಲ್ಲಿ. ಅಲ್ಲಿಂದ ಬೆಳ್ಳಂಬೆಳಗ್ಗೆ ಸೈಕಲ್‌ ಏರಿ ತಮ್ಮ ವ್ಯಾಪ್ತಿಯ ಗದ್ದೆಗಳಿಗೆ ಸುತ್ತು ಹಾಕುತ್ತಿದ್ದರು. ಯಾವ ಗದ್ದೆಯಲ್ಲಿ ಎಷ್ಟು ಪ್ರಮಾಣದಲ್ಲಿ ನಾಟಿಯಾಗಿದೆ ಎಂದು ದಾಖಲು ಮಾಡುವುದು ಅವರ ಕೆಲಸ. ಅವರ ವರದಿಯ ಮೇಲೆ ರೈತರಿಗೂ ಸಕ್ಕರೆ ಜಿನ್ನಿನವರಿಗೂ ಒಪ್ಪಂದವಾಗುತ್ತಿತ್ತು. ಕಬ್ಬು ತುಳಿದ ಮೇಲೆ ಆ ರೈತರಿಗೆ ಉಪ್ಪು, ಹಿಂಡಿ ಕೊಡುತ್ತಿದ್ದರು. ರಸಗೊಬ್ಬರಕ್ಕೆ ಉಪ್ಪು ಎನ್ನವರು. ಎಣ್ಣೆ ತೆಗೆದ ಕಾಳಿನ ಚರಟ ಹಿಂಡಿ. ಅಪ್ಪ ಪ್ರತಿ ರೈತರಿಗೆ ಸಣ್ಣ ಪುಸ್ತಕ ಕೊಡುತ್ತಿದ್ದ. ಅದರಲ್ಲೇ ಅವರ ಕಬ್ಬು ತುಳಿದ ದಿನ, ಭೂಮಿಯ ಅಳತೆ, ಸರ್ವೇ ನಂ., ಗೊಬ್ಬರ ಕೊಟ್ಟ ದಿನಾಂಕವನ್ನು ದಾಖಲಿಸಿಜಿನ್ನಿನವರ ಸಿಕ್ಕೆ ಹಾಕಿ ಕೊಡುತ್ತಿದ್ದರು. ಕಬ್ಬು ತುಳಿಯುವ ಕೆಲಸ ಮೂರು ನಾಲ್ಕು ದಿನ ನಡೆದರೂ, ಒಂದೆರಡು ದಿನ ಮುಂಚೆ ಮಾಡಿದ್ದಾರೆ ಎಂದರೆ ರೈತರಿಗೆ ಕಬ್ಬು ಒದಗಿಸುವ ಅವಕಾಶ ಸ್ವಲ್ಪ ಬೇಗನೇ ಸಿಗುತ್ತಿತ್ತು. ಅಪ್ಪ ಆ ವಿಷಯದಲ್ಲಿ ಬಹು ಉದಾರಿ ರೈತರಿಗೆ ಅನುಕೂಲವಾಗಲಿ ಎಂದು ಹಿಂದಿನ ದಿನಾಂಕವನ್ನೇ ಹಾಕುತ್ತಿದ್ದರಿಂದ ರೈತರಿಗೆ ಅಪ್ಪನ ಬಗ್ಗೆ ತುಂಬಾ ವಿಶ್ವಾಸ. ಅನೇಕ ರೈತರು ಈ ನಾಲ್ಕಾಣೆ ಪುಸ್ತಕಕ್ಕೆ ರೈತರು ಎಂಟಾಣೆ, ರುಪಾಯಿ ಕೊಡುತ್ತಿದ್ದರು. ದುಡ್ಡಿಲ್ಲ ಸಾಮಿ ಅಂದ್ರೆ ಅಪ್ಪನೇ ಕೈಯಿಂದ ದುಡ್ಡು ಹಾಕಿ ಅವರಿಗೆ ದಾಖಲೆ ಪುಸ್ತಕ ಕೊಡುತ್ತಿದ್ದರು. ಈ ಪುಸ್ತಕವನ್ನು ರೈತರು ಜೋಪಾನವಾಗಿ ಇಟ್ಟುಕೊಳ್ಳಬೇಕಿತ್ತು. ಈ ಪುಸ್ತಕ ನೋಡಿಯೇ ಅವರಿಗೆ ಕಬ್ಬಿನ ಚೀಟಿ ಕೊಡುತ್ತಿದ್ದರು. ಹಾಗಾಗಿ ರೈತರು ಚೀಟಿ ಸಾಮಿ ದೇವ್ರಂತ ಮನಸ್ಯಾ ಅಂತಿದ್ರು. ಅವರು ತಾವು ಮನೆಗಂತ ಹೊಲದಲ್ಲಿ ಬೆಳೆದ ಪಟ್ಲಕಾಯಿ, ತುಪ್ಪೀರಿ ಕಾಯಿ, ಹೆಸರುಕಾಯಿ, ಪುಂಡಿಪಲ್ಯ, ಹಕ್ರಿಕಿ, ಕೋಳಿ ಜುಟ್ಟು, ಅಣ್ಣಿ ಸೊಪ್ಪು, ಚಪ್ಪರ ಬದನೆ ಮೊದಲು ಸ್ವಾಮೇರ ಮನಿಗೆ ತಂದು ಕೊಡುತ್ತಿದ್ದರು. ಅವರು ಮನೆಗೆಂದು ತಂದಾಗ ನಮ್ಮ ಮನೆಗೂ ಕಾಯಿಪಲ್ಲೆ  ಬರುತ್ತಿದ್ದವು. ರಾಶಿಯಾದ ಮೇಲೆ ಆಯಗಾರರಿಗೆ ಕೊಡುವಂತೆ ಪುಟ್ಟಿ ಎರಡು ಪುಟ್ಟಿ ಜೋಳ ನೆಲ್ಲು, ಬೆಲ್ಲ ಮನೆಗೆ ತಂದು ಕೊಡುತ್ತಿದ್ದದು ವಾಡಿಕೆಯಾಗಿತ್ತು. ಅಪ್ಪ ದಿಲ್ದಾರಾಗಿ ಎಲ್ಲರಿಗೂ ಖರ್ಚು ಮಾಡುತ್ತಿದ್ದರು.
ಕಬ್ಬು ಬೆಳೆದ ಮೇಲೆ ಬೆಲ್ಲಕ್ಕೇನಾದರೂ ರೇಟು ಬಂದಿದೆ ಅಂತ ಕೆಲ ರೈತರು ಕಬ್ಬು ಕಡಿದು ಗಾಣ ಆಡದಂತೆ ನಿಗಾ ಇಡಬೇಕು. ಸೀಜನ್ನು ಸುರು ಆದಾಗ ಸರತಿ ಮೇಲೆ ಕಬ್ಬು ಒದಗಿಸಲು ಪರ್ಮಿಟ್‌ ಕೊಡುತ್ತಿದ್ದರು. ಅದನ್ನು ಕಬ್ಬಿನ ಚೀಟಿ ಅಂತಿದ್ರು. ಗದ್ದೆಗೆ ಕೊಟ್ಟ ಚೀಟಿಯಷ್ಟೆ ಬಂಡಿ ಕಬ್ಬು ಕಡಿಯಬೇಕು. ಗದ್ದೆಯ ಎಳೆವರಿ ಕಬ್ಬು ಕಡಿದು ಈ ಚೀಟಿಯಲ್ಲಿ ಸಾಗಿಸುವ ಹಾಗಿಲ್ಲ. ಬೆಳಗ್ಗೆ ಇದರ ಉಸ್ತುವಾರಿ ಮಧ್ಯಾಹ್ನ ೨ ಗಂಟೆಯಿಂದ ೫ ರ ವರೆಗೆ ಕಚೇರಿಯಲ್ಲಿ ವರದಿ. ಮತ್ತು ಮರುದಿನದ ಚೀಟಿ ಪಡೆಯುವುದು ರೈತರಿಗೆ ವಿತರಿಸುವರು. ಅಪ್ಪಗೂ, ರೈತರಿಗೂ ಗಳಸ್ಯ ಕಂಠಸ್ಯ, ಮನೆಯಲ್ಲಿ ಚಾ ಮಾಡುವಾಗ ಬಂದವರಿಗೂ ಒಂದು ಕಪ್ಪು. ಕುಡಿಯುತ್ತಿದ್ದರೆ ಅದರಲ್ಲೆ ಅರ್ಧ ಕಪ್ಪು. ಅವರೂ ಎಂಜಲು ಎಂಬ ಎಗ್ಗಿಲ್ಲದೆ ಕುಡಿಯುವರು. ಅಕ್ಕಪಕ್ಕದವರು ಮಳೆ ಬಂದಾಗ ನಮಗೆ ಗವಾಕ್ಷಿ ಮುಚ್ಚಲೂ ಅವಕಾಶ ಕೊಡದೆ ತಾವೆ ಮುಚ್ಚುತಿದ್ದರು. ವರ್ಷಕೊಮ್ಮೆ ಮಾಳಿಗೆಗೆ ಕರಲು ಹಾಕುವಾಗ ನಾಲ್ಕಾರು ಜನ ಬಂದು ಹಾಕುವರು. ಚಾ ವಗ್ಗಣ್ಣಿ ಮಂಡಾಳು ಕೊಟ್ಟರೆ ಸಾಕು. ಅವರಿಗೆ ಖುಷಿ. ಸ್ವಾಮೇರ ಮನೆಯವರು ಹಿಟ್ಟಿನ ಗಿರಣಿಗೂ ಹೋಗಲೂ ಅವರು ಬಿಡುತ್ತಿರಲಿಲ್ಲ. ಯಾರ ಮನೆಯಲ್ಲಿ ದನ ಈದರೂ ಮೊದಲ ಗಿಣ್ಣದ ಹಾಲು ಬರುತಿತ್ತು. ಆ ಪಾತ್ರೆಯಲ್ಲಿ ಜೋಳ ಹಾಕಿ ಕಳುಹಿಸುವರು. ಹೀಗೆ ಎಲ್ಲರೊಡನೆ ಒಂದಾಗಿದ್ದೆವು.
ತಂಗಿಯ ಮನೆಗೆ ಮೊದಲಿನಿಂದಲೂ ಆಗಾಗ ಹೋಗುವರು. ಮಗನನ್ನು ಬಿಟ್ಟ ಮೇಲೆಸಂಜೆಯ ದಿನಾ ಸಂಜೆಗೆ ತಪ್ಪದೆ ಭೇಟಿ. ಅಲ್ಲಿ ಒಂದು ಕಪ್ಪು ಚಹಾ. ಆಗೀಗ  ಮಂಡಾಳು, ವಡೆ ಮೆಣಸಿನ ಕಾಯಿ ತರಸಿ ತಾನೂ ತಿಂದು ಎಲ್ಲರಿಗೂ ಹಂಚಿದಾಗಲೆ ತೃಪ್ತಿ. ಒಂದು ದಿನ ತಂಗಿಯನ್ನು ನೋಡದಿದ್ದರೆ ಮನಸ್ಸಿಗೆ ನೆಮ್ಮದಿ ಇಲ್ಲ. ಕಾರಣ ಇರುವವರು ಅವರಿಬ್ಬರೆ. ನಮ್ಮ ತಾತ ಹೆಣ್ಣು ಮಗು ಹುಟ್ಟಿದಾಗಲೆ ತೀರಿ ಹೋದರು. ಹಾಗಾಗಿ ಅನಾಥ ಮಕ್ಕಳು ಸೋದರ ಮಾವನ ಮನೆಯಲ್ಲಿ ಬೆಳೆದವು. ಬಡತನವಿದ್ದರೂ ಕಡು ಪ್ರೀತಿ. ಅದಕ್ಕೆಂದೆ ನಾನೂ ಅಲ್ಲಿಯೇ ಓದಲು ಇದ್ದದ್ದು. ತಂಗಿಗೆ ತೊಂದರೆಯಾಗಬಾರದೆಂದು ಅಲ್ಲಿಯೆ ಒಂದು ಅಂಗಡಿಯಲ್ಲಿ ಉದ್ದರಿ ಲೆಕ್ಕ ಇತ್ತು. ತಾನು ಬಂದಾಗ ನಗದು ಇದ್ದರೆ ಪರವಾ ಇಲ್ಲ. ಇಲ್ಲದಿದ್ದರೆ ಉದ್ದರಿ ಅಂಗಡಿಯಿಂದ ಸಾಮಾನು ತರಸಿ ತಿಂಡಿ ಮಾಡಿಸುತ್ತಿದ್ದರು. ಅದಕ್ಕೆ ಎಲ್ಲ ಅಳಿಯಂದಿರಿಗೂ ಮಾವ ಎಂದರೆ ಜೀವ.
ಅಪ್ಪ ಬಹು ಧಾರಾಳಿ. ಸಾಲಮಾಡಿ ತುಪ್ಪತಿನ್ನು ಎಂಬ ಮಾತಿಗೆ ಮನ್ನಣೆ ಕೊಟ್ಟವರು. ಹಾಸಿಗೆ ಇದ್ದಷ್ಟು ಕಾಲುಚಾಚು ಎಂಬ ಮಾತಿಗೆ ಅವರಲ್ಲಿ ಕಿಮ್ಮತ್ತಿಲ್ಲ. ಕೊಡುಗೈ ದಾನಿ.  ಬೇಕು ಅಂತ ಬಂದವರಿಗೆ ಇಲ್ಲ ಎಂದು ಹೇಳಿದ್ದೆ ವಿರಳ. ಕೈಯಲ್ಲಿದ್ದರೆ ಕೊಟ್ಟು ಬಿಡುವುದು. ಇಲ್ಲವಾದರೆ ಸಾಲ ಮಾಡಿಯಾದರೂ ಕೊಡುವರು. ಕಾರಣ ಕೇಳಿದರೆ ನನಗಾದರೆ ಸಾಲಹುಟ್ಟುವುದು. ಪಾಪ ಅವರಿಗೆ ಅದೂ ಇಲ್ಲ. ಅಷ್ಟು ಸಹಾಯ ಮಾಡದಿದ್ದರೆ ಹೇಗೆ? ಅವರೇನು ಓಡಿ ಹೋಗುವರೆ? ಕೊಟ್ಟೆಕೊಡುವರು ಎಂಬುದು ಅವರ ಸಮಜಾಯಿಷಿ. ಹಾಗಾಗಿ ಬಂಧು ಬಳಗದಲ್ಲಿ ನೆಂಟರಿಷ್ಟರಲ್ಲಿ ಬಹು ಜನಪ್ರಿಯ. ಅಲ್ಲದೆ ಅವರು ಸಾಲದ ಮರು ಪಾವತಿ ಮಾಡದಿದ್ದರೆ ಸಾಲ ವಸೂಲಿಗೆ ದಣಿಯ ಆಳು ಬರುತಿದ್ದುದು ನಮ್ಮ ಮನೆಗೆ. ಸದಾ ಬಡ್ಡಿ ವಸೂಲಿಗೆ ಬರಿತಿದ್ದವರನ್ನು ನೋಡಿ ನೋಡಿ. ನನಗೆ "ಹೊರ ಬೇಡ ಅಂಗಡಿ ಸಾಲ ಊರ ಹೊಣೆಯ" ಎಂಬ ಮಾತು ಮನದಲ್ಲಿ ನಾಟಿಬಿಟ್ಟಿತ್ತು. ಯಾವುದೆ ಸಮಾರಂಭ ಆದರೂ ಭೀಮಣ್ಣ ಇರಲೇಬೇಕು. ಮದುವೆ ಮುಂಜಿಗೆ ಹೊದಾಗಲಂತೂ ಹೆಂಗಸರ ಕಣ್ಮಣಿ. ಅಲ್ಲಿ ಮಕ್ಕಳು ಹಸಿವೆ ಎಂದು ಆಳುತ್ತಿದ್ದರೆ, ನೋಡು ಭೀಮಣ್ಣ, ಮಗು ಹಟಮಾಡುತ್ತಿದೆ ಎನ್ನುವರು. ಇವರು ಆ ಮಗುನ್ನು ಮಾತ್ರವಲ್ಲ ಅಲ್ಲಿರುವ ಹುಡುಗರನ್ನೆಲ್ಲ ಹೋಟಲಿಗೆ ಕರೆದೊಯ್ಯುವರು. ತಿಂಡಿ ತಿನಿಸಿ ಬರುವರು. ಜೊತೆಗೆ ಬಿಸ್ಕತ್ತೂ ಸಿಗುವುದು.ಆಗಿನ ತಿಂಡಿ ಮೆಣಸಿಕಾಯಿ, ಒಗ್ಗಣ್ಣಿ ಮಾತ್ರ.
ಅವರ ಇನ್ನೊಂದು ಗುಣ ವೆಂದರೆ ತಾವು ಕೊಂಡುತಂದ ಯಾವುದೇ ವಸ್ತುವಿನ ಬೆಲೆ ಎಷ್ಟು ಎಂದರೆ ಸದಾ ಕಡಿಮೆ ಮಾಡಿ ಹೇಳುವರು. ಕೇಳಿದವರು ಪರವಾ ಇಲ್ಲ ನೀನು  ಬಿಡಪ್ಪಾ ಭಾಳ ಸೋವಿಗೆ ಸಿಕ್ಕದೆ, ನಮಗೆ ಒಂದು ತಂದು ಕೊಡು ಎಂದರೆ. ಕಮಕ್‌ ಕಿಮಕ್‌ ಎನ್ನದೆ ತಂದು ಕೊಡುವರು. ಹೆಚ್ಚುವರಿ ದುಡ್ಡು ಕೈಯಿಂದ ಕೊಟ್ಟರೂ ಇದ್ದ ವಿಷಯ ಹೇಳುತ್ತಿರಲಿಲ್ಲ.
ವೇಷ ಭೂಷಣದಲ್ಲಿ ಅವರದೆ ಆದ ಛಾಪು. ಯಾವಾಗಲು ತುಂಬುತೋಳಿನ ಅಂಗಿ. ಉಡಲು ಮಲ್ಲು ಧೋತರ. ವಾಚು, ಉಂಗುರ, ಬಂಗಾರದ ಸರ ಯಾವು ಇಲ್ಲ. ಅವರಿಗೆ ಗಂಧೆಣ್ಣಿ ಮಾತ್ರ ಇರಲೆಬೇಕು. ಆಗ ಗಂಧದ ಎಣ್ಣಿಯನ್ನು ಚಿಕ್ಕ ಬಾಟಲಿಯಲ್ಲಿ ಮಾರುತಿದ್ದರು ಅದನ್ನು ಹತ್ತಿಯ ಚೂರಲ್ಲಿ ಅದ್ದಿ ಅಂಗಿಗೆ ಅಂಟಿಸಿಕೊಂಡು ಕಿವಿಯ ಮೇಲ್ಭಾಗದಲ್ಲಿ ಇಡುವುದು ವಾಡಿಕೆ. ಮಗ್ಗುಲಲ್ಲಿ ಬಂದವರಿಗೆ ಘಮ್ ಅಂಬ ವಾಸನೆ ಹೊಡಿಯಬೇಕು. ಎತ್ತರದ ಆಳು. ತಿಳಿ ಕೆಂಪು ಬಣ್ಣ. ಅರ್ಧ ಬಕ್ಕ ತಲೆ. ಕಾಲಿಗೆ ಚಪ್ಪಲಿಯೂ ಇಲ್ಲ. ಎಂಥ ಬಿರು ಬಿಸಿಲು ಇದ್ದರೂ ಬರಿ ತಲೆ, ಬರಿ ಗಾಲು. ಆದರೆ ಸದಾ ಸೈಕಲ್‌ ಮಾತ್ರ ಇರಲೇಬೇಕು. ಕಾರಣ ಅದು ಅವರ ಕೆಲಸದ ಅವಿಭಾಜ್ಯ ಅಂಗ. ಸಿಟ್ಟು, ಸಿಡಿಮಿಡಿ ಗೊತ್ತೆ ಇಲ್ಲ. ಇದ್ದಾಗ ಹಿಂದೆ ಮುಂದೆ ನೋಡದೆ ಕೊಡುವುದು. ಇಲ್ಲದಾಗ ಸಾಲ ಮಾಡವುದು. ಬಡ್ಡಿಯ ಬಗ್ಗೆ ಚೌಕಾಸಿ ಇಲ್ಲ.
ಆಗಾಗ ನಮ್ಮ ಅಮ್ಮ ಅವರ ಜತೆ  ಮಾತಿಗೆ ಇಳಿಯುತ್ತಿದ್ದರು. ಕಚ್ಚೆ ಹಾಕಿದಾಗ ನವಾಬ ಸಾಬ, ಕಚ್ಚೆ ಬಿಚ್ಚಿದಾಗ ಫಕೀರ ಸಾಬರಂತೆ ಆಡುವುದು ಬೇಡ, ಕೈ ತುಸು ಹಿಡಿತವಿರಲಿ ಎಂಬುದು ಅವರ ವಾದ. ಆದರೆ ಅದನ್ನು ನಮ್ಮ ಅಪ್ಪ ಈ ಕಿವಿಯಿಂದ ಕೇಳಿ ಆ ಕಿವಿಯಲ್ಲಿ ಬಿಡುತ್ತಿದ್ದರು. ಆದರೆ ಅವರಿಬ್ಬರ ಅನ್ಯೋನ್ಯತೆ ಬಹಳ. ಏನೇ ಮಾಡಿದರು ಗಂಡನನ್ನು ಬಿಟ್ಟು ಕೊಡುತ್ತಿರಲಿಲ್ಲ. ಗಂಡನಿಗೆ ಹಲವು ಹೆಂಗಸರ ಗೆಳೆತನ ಇರುವುದು ಅವರು ಬಲ್ಲರು. ಆಳುವ ಗಂಡಸಿಗೆ ಅರವತ್ತು ಮಂದಿ ಎಂಬ ಮಾತಿನಲ್ಲಿ ನಂಬಿಕೆ. ಆ ಬಗ್ಗೆ ಮನೆಯಲ್ಲಿ ಕರಿಕಿರಿಯಾದ ನೆನೆಪೆ ಇಲ್ಲ. ಅಗತ್ಯ ಬಿದ್ದಾಗ ಕಿವಿಯಲ್ಲಿನ ಬೆಂಡಾಲೆಯನ್ನೂ   ತುಟಿಪಿಟಕ್‌ ಎನ್ನದೆ ಬಿಚ್ಚಿ ಕೊಡುವರು ಅದರ ಜಾಗದಲ್ಲಿ ತಿಂಗಳುಗಟ್ಟಲೆ ಕಿವಿಯಲ್ಲಿ ಒಣ ಬೇವಿನ ಕಡ್ಡಿ ಇರುತಿತ್ತು.
ಹಳ್ಳಿಯಿಂದ ನಾನು ಪಟ್ಟಣಕ್ಕೆ ಹೋದಾಗ, ಚಿತ್ತವಾಡಿಗೆಯ ಶಾಲೆಯಲ್ಲಿ ಐದನೆ ತರಗತಿಗೆ ಸೇರಿದೆ. ಅಲ್ಲಿನ ಓದು ಅಷ್ಟೇನು ಕಷ್ಟವೆನಿಸಲಿಲ್ಲ. ಸಾಧಾರಣವಾಗಿ ನನಗೆ ಅಲ್ಲಿ ಹತ್ತಕ್ಕೆ ಹತ್ತು ಅಂಕಗಳು ಬರುತಿದ್ದವು.  ಶಾಲೆಗಿಂತ ಮನೆಯಲ್ಲಿ ಮತ್ತು ಹೊರಗೆ ಮಾತ್ರ ನಾನು ಕಲಿತದ್ದು ಬಹಳ ನಮ್ಮ ಊರಿನಲ್ಲಿದ್ದಾಗ ಮನೆಯಲ್ಲಿ ನಾನೊಬ್ಬನೆ. ನಮ್ಮಕ್ಕ ಅಮ್ಮನ ತವರು ಮನೆಯಲ್ಲಿದ್ದಳು ಹಾಗಾಗಿ ನಾನು ಒಂಟಿ ಬಡಕ. ಇಲ್ಲಿ ಹಾಗಲ್ಲ. ಮನೆಯಲ್ಲಿ ಸದಾ ಜನ. ನಾನು ಗುಂಪಿನಲ್ಲಿ ಗೋವಿಂದ. ಅಲ್ಲದೆ ಊಟ ಸ್ನಾನ ಎಲ್ಲ ಸಾಮೂಹಿಕ. ರಜಾದಿನಗಳಲ್ಲಿನಮ್ಮ ಜಳಕದ ಮನೆ ಕಾಲುವೆ. ಗಂಟೆಗಟ್ಟಲೆ ನೀರಾಟ. ಅಲ್ಲಿಯೆ ನಾನು ಈಜು ಕಲಿತದ್ದು. ಹಳ್ಳಿಯಿಂದ ನಾನು ಪಟ್ಟಣಕ್ಕೆ ಹೋದಾಗ. ಚಿತ್ತವಾಡಿಗೆಯ ಶಾಲೆಯಲ್ಲಿ ಐದನೆ ತರಗತಿಗೆ ಸೇರಿದೆ. ಅಲ್ಲಿ ನಾವು ಬೆಳಗ್ಗೆ ಖುಷಿಯಿಂದ ಮಾಡುತಿದ್ದ ಕೆಲಸ ಒಂದಿತ್ತು. ಮನೆಯಲ್ಲಿ ಇಷ್ಟೊಂದು ಜನರಿಗೆ ನೀರು ಕಾಸಬೇಕು. ಜತೆಗೆ ಅತ್ತೆಯ ಬಾಣಂತನದಲ್ಲಿ ಮೂರುತಿಂಗಳು ದಿನವೂ ಅಗ್ಗಿಷ್ಟಿಕೆಗೆ ಕಾಯಿಸಬೇಕು. ಅದಕ್ಕೆ ಬಳಸುತಿದ್ದದು ಕುಳ್ಳು. ಸೆಗಣಿಯನ್ನು ಭತ್ತದ ಹೊಟ್ಟು ಬೆರಸಿ ಉಂಡೆ ಮಾಡಿಕೊಂಡು ಬಿಸಿಲು ಬೀಳುವ ಜಾಗದಲ್ಲಿ ಗೋಡೆಗೆ ತಟ್ಟುವರು. ಮುಖ್ಯವಾಗಿ ನೀರೊಲೆಗೆ ಅದೆ ಉರುವಲು. ಅದಕ್ಕೆ ಸೆಗಣಿ ಬೇಕು. ಮನೆಯಲ್ಲಿ ದನ ಇದ್ದವರಿಗೆ ಸಮಸ್ಯೆ ಇಲ್ಲ. ದಿನವೂ ಅವರಿಗೆ ಸೆಗಣಿ ಸಿಗುವುದು. ಇಲ್ಲದವರು ಸೆಗಣಿ ಸಂಗ್ರಹಿಸಬೇಕು. ನಮ್ಮ ಮನೆ ಮುಂದೆಯೆ ರಸ್ತೆ. ಮತ್ತು ದೊಡ್ಡ ಆಲದ ಮರ. ರಸ್ತೆಯಲ್ಲಿ ಹೋಗುವ ಕಬ್ಬಿನ ಬಂಡಿಯನ್ನು ಎಳೆಯುವ ಎತ್ತುಗಳ ಸೆಗಣಿ ಸಂಗ್ರಹಿಸಲು ನಾ ಮುಂದು ತಾಮುಂದು ಎಂದು ಓಡುತಿದ್ದೆವು. ಅಲ್ಲದೆ ಬೆಳಗು ಮುಂಜಾನೆ ಮನೆ ಮುಂದಿನ ಬಯಲಲ್ಲಿ ಮಲಗಿದ್ದ  ಬೀಡಾಡಿ ದನಗಳು ಹಾಕುವ ಸೆಗಣಿಯನ್ನೂ ಸಂಗ್ರಹಿಸುವೆವು. ಅದಕ್ಕೆ ನಾವು ಕಾದು ನಿಂತಿರುವೆವು. ದನ ಬಾಲ ಎತ್ತಿದರೆ ಸಾಕು ಅದರ ಹಿಂದೆ ಹೋಗಿ ಹಳೆಯ ಮೊರ ಹಿಡಿದು ಸೆಗಣಿ ಕೆಳಗೆ ಬೀಳುವ ಮೊದಲೆ ಸಂಗ್ರಹಿಸುವೆವು. ಆ ಕೆಲಸದಲ್ಲಿ ಅಕ್ಕಪಕ್ಕದ ಹಲವು ಮನೆಯ ಮಕ್ಕಳು ಕೂಡಾ ಜತೆಯಾಗುತಿದ್ದರು.
ಅದರಿಂದ ತಟ್ಟಿದ ಕುಳ್ಳು ಬಾಣಂತಿಗೆ ಮಗುವಿಗೆ ಎರೆಯಲು ಮತ್ತು ಎರಡೂ ಹೊತ್ತು ಬೆಂಕಿ ಕಾಯಿಸಿಕೊಳ್ಳುವ ಅಗ್ಗಿಷ್ಟಿಕೆಗೆ ಆಗುತಿತ್ತು. ಯಾರ ಮನೆಯ ಮುಂದಾದಾರೂ ಬೆಳಗ್ಗೆ ಮತ್ತು ಸಂಜೆ ಅಗ್ಗಿಷ್ಟಿಕೆ ಅಂಗಳದಲ್ಲಿ ಹೊಗೆಯಾಡುತಿದ್ದರೆ ಅಲ್ಲಿ ಹಸಿ ಬಾಣಂತಿ ಇರುವಳು ಎಂದು ಲೆಕ್ಕ. ಅಗ್ಗಿಷ್ಟಿಕೆಯನ್ನು ಹೊತ್ತಿಸಲು ಅರ್ಧ ಗಂಟೆಯಾದರೂ ಹೊರಗೆ ಗಾಳಿಗೆ ಇಡಬೇಕಾಗುವುದು. ಮೊದಲಲ್ಲಿ ಹೊಗೆ ಬಂದರೂ ನಂತರ ನಿಗಿ ನಿಗಿ ಕೆಂಡ. ಬಾಣಂತಿ ಎರೆದುಕೊಂಡ ಕೂಡಲೆ ಮೇಲೆ ಕಾಯಿಸಿಕೊಳ್ಳುವುದು ನಂತರ ಹೊರಸಿನ ಕೆಳಗೆ ಇಟ್ಟರೆ ಬೆಚ್ಚಗೆ ಇರುತಿತ್ತು. ಬಾಣಂತಿಗೆ ಬಿಸಿ ನೀರು, ಕೆಂಡ ಹೆಚ್ಚಾದದ್ದಷ್ಟೂ ಒಳ್ಳೆಯದು ಎಂಬ ಭಾವನೆ ಇತ್ತು.
ನಮ್ಮ ಅತ್ತೆಯ ಮಕ್ಕಳಲ್ಲಿ ಎರಡನೆಯವನು ಆಟಗುಳಿ. ಚಿಣ್ಣಿ ದಾಂಡು, ಬುಗುರಿ, ಲಗೋರಿ, ವಟ್ಟೆಪ್ಪ ಆಟದಲ್ಲಿ ಪರಿಣಿತ. ಮರಕೋತಿ ಆಟದಲ್ಲಿ ಮಂಗನೆ ನಾಚಬೇಕು ಅವನು ಮರ ಏರುವುದನ್ನು. ಕೊಂಬೆಯಿಂದ ಕೊಂಬೆಗೆ ಜಿಗಿಯುವ ಪರಿಕಂಡು. ಅವನ ಚೀಲದಲ್ಲಿ ಪುಸ್ತಕಗಳಿಗಿಂತ ಅನೇಕ ರೀತಿಯ ಗೋಲಿಗಳೆ ಜಾಸ್ತಿ ಇರುತಿದ್ದವು. ಹಿಟ್ಟಿನ ಗೋಲಿ, ಗಾಜಿನ ಗೋಲಿ, ಕಬ್ಬಿಣದ ಗೋಲಿ, ಅದನ್ನು ಚೆರ್ರ ಎನ್ನುತಿದ್ದೆವು. ಕಲ್ಲಿನ ಗೋಲಿಯನ್ನು ಗೇಟಿ ಎನ್ನುವರು. ಅದರಿಂದ ಹೊಡೆದರೆ ಸಾಧಾರಣ ಗೋಲಿಗಳು ಪುಡಿ ಪುಡಿ. ನಾನೂ ಎಲ್ಲ ಆಟದಲ್ಲಿ ಅವನ ಅನುಯಾಯಿ. ಆದರೆ ಗೋಲಿಯಾಟ ಮಾತ್ರ ನನಗೆ ಒಲಿಯಲೆ ಇಲ್ಲ. ಬೆರಳತುದಿಗೆ ಗೋಲಿ ಇಟ್ಟು ಇನ್ನೊಂದು ಕೈನಿಂದ ಮೀಟಿ ಹೊಡೆಯವ ಕಲೆ ನನಗೆ ಸಿದ್ದಿಸಲೇಇಲ್ಲ. ಮಾರು ದೂರವಿರುವ ಗೋಲಿಯನ್ನು ಚಟ್ಟನೆ ಹೊಡೆವ ಅವನ ಪರಿಯನ್ನು ನೋಡಿ ಬೆಕ್ಕಸ ಬೆರಗಾಗುತಿದ್ದೆ. ಇನ್ನು ಬುಗುರಿಯಂತು ಕಲಾತ್ಮಕ ಆಟ. ಅಂಗಡಿಯಲ್ಲಿ ಸಿಗುವ ಬಣ್ಣದ ಬುಗರಿಯನ್ನು ತಂದು ಅದಕ್ಕೆ ತಲೆ ಕತ್ತರಿಸಿದ ಮೊಳೆಯನ್ನು ಹೊಡೆದು ಚಾಟಿಯನ್ನ ಹೊಸೆದು ಅಡಿಸುವುದೆಂದರೆ ಸಣ್ಣ ಮಾತೆ. ಅದರಲ್ಲೂ ಚಾಟಿಯನ್ನು ಸುತ್ತಿ ಅಂತರಿಕ್ಷದಲ್ಲೆ ಅದನ್ನು ರೊಯ್ಯನೆ ಬೀಸಿ ಅಂಗೈ ಮೇಲೆ ಆಡಿಸುವ ನಿಪುಣತೆ ಬಹಳ ಹುಡುಗರಿಗೆ ಇಲ್ಲ. ಬುಗುರಿಯಾಟದಲ್ಲಿ ಎದುರಾಳಿಯ ಬುಗರಿಗೆ ಗಿಚ್ಚ ಕೊಡುವುದೆಂದರೆ ಹೆಮ್ಮೆಯ ವಿಷಯ. ಅದಕ್ಕಾಗಿ ಬುಗುರಿ ತಿರುಗುವ ಕಬ್ಬಿಣದ ಮೊಳೆಯನ್ನು ಬಂಡೆಗೆ ಮಸೆದು ಮಸೆದು ಚೂಪಾಗಿಸಬೇಕಿತ್ತು. ಬುಗುರಿಯಲ್ಲಿ ಪರಿಣಿತರು ಒಂದೆ ಏಟಿಗೆ ತಮ್ಮ ಎದುರಾಳಿಯ ಬುಗರಿಯನ್ನು ಎರಡು ಹೋಳು ಮಾಡುವರು. ಆಗ ನೋಡಬೇಕು ಸೋತವರ ಮುಖ.
ನನಗೆ ಈ ಎಲ್ಲ ಆಟಗಳ ದೀಕ್ಷೆ ಸಿಕ್ಕಿದ್ದು ಅಲ್ಲಿಯೆ. ಚಿಣ್ಣಿ ದಾಂಡು ಇನ್ನೊಂದು ಜನಪ್ರಿಯ ಆಟ. ಒಂದ ಮೊಳದುದ್ದ ಕೋಲು ಅದನ್ನೆ ದಾಂಡು ಎನ್ನವರು. ಗೇಣದ್ದದ  ಚಿಣ್ಣಿ. ದಾಂಡಿನಿಂದ ಚಿಣ್ಣಿಯನ್ನು ಮೊದಲು ಚಿಮ್ಮಬೇಕು. ಅದನ್ನು ಬುತ್ತಿ ಹಿಡಿದರೆ ಆಟಗಾರನು ಸೋತಂತೆ. ಇಲ್ಲದಿದ್ದರೆ ಅಲ್ಲಿಂದ ಅದನ್ನು ಹೊಡೆಯಬೇಕು. ಅದು ಎಷ್ಡು ದೂರ ಹೋಗುವುದೋ ಅಲ್ಲಿಂದ ಎದುರಾಳಿ ಕುಂಟಬೇಕು. ಆ ಅಟವೆ ಇಂದಿನ ಕ್ರಿಕೆಟ್ಟಿನ ಅಪ್ಪ ಎಂದರೂ ಅಡ್ಡಿ ಇಲ್ಲ. ನನಗೆ ಅವುಗಳ ಪರಿಚಯವಾಯಿತೆ ವಿನಃ ಪರಿಣಿತಿ ಬರಲಿಲ್ಲ ಆದರೆ ಒಂದು ರೀತಿಯಲ್ಲಿ ಅದು ಒಳ್ಳೆಯದೆ ಆಯಿತು. ಓದಿನಲ್ಲಿ ನಾನು ಎಷ್ಟೆ ಮುಂದಿದ್ದರೂ ಆಟಗಳಲ್ಲಿ ಅವರೆ ಗೆಲ್ಲುವರು. ನನಗೆ ಸದಾ ಸೋಲು. ಆಗ ಅವರಿಗೆ  ನೆಮ್ಮದಿ. ಶಾಲೆಯಲ್ಲಿ ಹೆಚ್ಚು ಅಂಕ ಪಡೆವ ನನ್ನನ್ನು ಆಟದಲ್ಲಿ ಸೋಲಿಸಿದೆ ಎಂದು  ಅವರು ಹಿಗ್ಗಿ ಹೀರೆ ಕಾಯಿ ಆಗುತಿದ್ದರು. ಸೋಲಿನಲ್ಲೂ ಸುಖವಿದೆ ಎಂದು ಆಗ ನನಗೆ ಗೊತ್ತಾಯಿತು. ಎಲ್ಲದರಲ್ಲೂ ಗೆಲ್ಲಬೇಕೆಂಬ ಹುಚ್ಚು ಹಂಬಲಕ್ಕೆ ಆಗಲೆ ಕಡಿವಾಣ ಬಿದ್ದಿತು.

ಗುಂಪಿನಲ್ಲಿ ಗೋವಿಂದ

ಹೊ
ಸಪೇಟೆಯ ಶಾಲೆಗೆ ಸೇರಿದನಂತರ ಮೂರು ವರ್ಷ ಅಲ್ಲಿ ನಮ್ಮ ಸೋದರ ಅತ್ತೆಯ ಮನೆಯಲ್ಲಿ ವಾಸ. ನಮ್ಮ ತಂದೆಗೆ ಒಬ್ಬಳೆ ತಂಗಿ. ಅವರ ವಾಸ ಚಿತ್ತವಾಡಿಗೆಯಲ್ಲಿ. ಅದು ಹೊಸಪೇಟೆಯ ಭಾಗವೆ ಆದರೂ ಪೇಟೆಯಂತೂ ಅಲ್ಲ. ಆದರೆ ಅಲ್ಲಿ ಏಳನೆ ತರಗತಿಯವರೆಗ ಓದಬಹುದಿತ್ತು. ಅಲ್ಲಿನ ಶಾಲೆಯಲ್ಲಿ ಐದನೆ ತರಗತಿಗೆ ಸೇರಿದೆ. ನಮ್ಮ ಅತ್ತೆಯ ಗಂಡ ಪ್ರಾಥಮಿಕ ಶಾಲಾ ಶಿಕ್ಷಕರು, ಅವರೂ ಅಲ್ಲಿಯೇ ಕೆಲಸ ಮಾಡುತಿದ್ದರು. ಕಟ್ಟುಮಸ್ತಾದ ಆಳು. ಹುಡುಗರಾಗಿದ್ದಾಗ ವ್ಯಾಯಾಮ ಪಟು. ಅದರಿಂದ ಹುರಿಗಟ್ಟಿದ ಮೈ. ಎದೆಯ ಮೇಲೆ ಬಂಡೆ ಇರಿಸಿಕೊಂಡು ಅದನ್ನು ಸುತ್ತಿಗೆಯಿಂದ ಒಡೆಯುವ ತನಕ ಉಸಿರು ಹಿಡಿದು ಜಯಸಿದವರು. ಮರಳು ತುಂಬಿದ ದೊಡ್ಡ ಕೊಡವನ್ನು ಹಲ್ಲಿನಲ್ಲಿ ಕಚ್ಚಿ ಎತ್ತುತ್ತಿದ್ದ ತಾಕತ್ತು ಅವರದು. ಆದರೆ ತುಂಬಾ ಸಾಧು ಪ್ರಾಣಿ. ಹೆಂಡತಿ ಕಂಡರೆ ಅವರಿಗೆ ಕಡು ಮಮತೆ. ಅವರ ಮದುವೆಯಾದ ಹೊಸದರಲ್ಲಿ ಇನ್ನೂ ಕೆಲಸಕ್ಕೆ ಸೇರಿರಲಿಲ್ಲ. ಹಗರಿಬೊಮ್ಮನಹಳ್ಳಿ ಹತ್ತಿರದ ಗ್ರಾಮದಲ್ಲಿ ಅವರ ವಾಸ ಹೊಸದಾಗಿ ಮದುವೆಯಾಗಿದೆ.  ಹೆಂಡತಿ ಕೊಪ್ಪಳದ ಹತ್ತಿರದ ಹ್ಯಾಟಿ ಎಂಬ ಊರಲ್ಲಿ ತಾಯಿಯ ತವರುಮನೆಯಲ್ಲಿ ಇರುತಿದ್ದರಂತೆ. ಅದು ಈಗ ತುಂಗಭದ್ರ ಅಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಿಹೋಗಿದೆ. ಹೆಂಡತಿಯ ನೆನಪದಾಗ ನಡೆದು ಹೋಗುವರು. ವಾಹನ ಸೌಕರ್ಯ ಇರಲಿಲ್ಲ. ಸುಮಾರು ಅರವತ್ತು ಎಪ್ಪತ್ತು ಮೈಲು ದೂರ. ಹೆಂಡತಿಯ ಊರು ಸೇರುವ ಹೊತ್ತಿಗೆ ಸುಸ್ತೋ ಸುಸ್ತು. ಜತೆಗೆ ಸಣ್ಣಗೆ ಮೈ ಬಿಸಿಯಾಗುತಿತ್ತು. ಇದ್ದ ಮೂರು ದಿನ ಕಷಾಯ ಕುಡಿದು ಪಥ್ಯದ ಊಟ ಮಾಡಬೇಕು. ಬಲು ಸಂಕೋಚದ ಪ್ರಾಣಿ, ಬಹಳ ಸ್ವಾಭಿಮಾನ. ಅತ್ತೆಯ ಮನೆಯಲ್ಲಿ ಹೆಚ್ಚುದಿನ ಇರಬಾರದು ಎಂಬ ಬಿಗುಮಾನ ಬೇರೆ. ಆಗ ಅಳಿಯತನದ ಉಪಚಾರ ಬಹಳ ಸಂಭ್ರಮ. ಆದರೆ ಇವರು ಮೊದಲು ಹಾಕು ಮಣೆ. ಎರಡನೆ ದಿನ ನೂಕು ಮಣೆ ಇನ್ನೂ ಹೆಚ್ಚುದಿನ ಇದ್ದರೆ ಯಾಕೆ ಮಣೆ ಎನ್ನುವರೇನೊ ಎಂಬ ಹಿಂಜರಿಕೆಯಿಂದ ಎಷ್ಟು ಒತ್ತಾಯ ಮಾಡಿದರೂ ಕೇಳದೆ ಬಂದ ಮೂರನೆ ದಿನವೆ ಹೊರಟೆ ಬಿಡುವರು. ತಿಂಗಳಿಗೆ ಒಂದೋ ಎರಡೋ ಸಾರಿ ಬರುವರು. ಪ್ರತಿಬಾರಿಯೂ ಇದೆ ಅನುಭವ. ಅದರಿಂದ ವಿಶೇಷ ಅಡುಗೆ ಇಲ್ಲದ ಸಪ್ಪೆ ಅನ್ನಸಾರಿನ ಉಪಚಾರ. ಅದು   ಶಕ್ಕಮ್ಮನ ಗಂಡನ ಅಳಿಯತನ ಎಂದೆ ಹೆಸರುವಾಸಿಯಾಗಿತ್ತಂತೆ. ನೌಕರಿ ದೊರೆತ ಕೂಡಲೆ ಮಾಡಿದ ಮೊದಲ ಕೆಲಸ ಮನೆ ಮಾಡಿದ್ದು. ನಂತರ ಹೆಂಡತಿಯನ್ನು ಬಿಟ್ಟು ಇದ್ದವರೆ ಅಲ್ಲ.
ಇವರು ಶಾಲಾ ಶಿಕ್ಷಕರು. ಮೂರು ಮಕ್ಕಳು. ಹಳ್ಳಿಯಲ್ಲಿ ಆಸ್ತಿ ಇತ್ತು. ತುಂಬು ಕುಟುಂಬ.  ಅವರ ತಂದೆಗೆ ಆರು ಜನ ಮಕ್ಕಳು. ಅವಿಭಕ್ತ  ಕುಟುಂಬ. ಅವರ ತಂದೆ ಮತ್ತು ದೊಡ್ಡಪ್ಪನ ಎರಡೂ ಕುಟುಂಬಗಳು ಜತೆಯಲ್ಲಿಯೇ ಇದ್ದವು. ಅವರು ಹತ್ತು ಹಳ್ಳಿಯ ಶಾನುಭೋಗರಾಗಿ ಇದ್ದರು. ಬಲು ಜೋರಿನ ವ್ಯಕ್ತಿ. ಆ ಕುಟುಂಬದಲ್ಲಿ ಓದಿ ಸರಕಾರಿ ಕೆಲಸ ಹಿಡಿದವರು ಇಬ್ಬರು ಮಾತ್ರ. ಅದಕ್ಕೆ ಇವರ ಮೇಲೆ ಹೆಚ್ಚಿನ ಮಮಕಾರ. ಮನೆಗೆ ಬೇಕಾದ ಜೋಳ ಕಾಳುಗಳನ್ನು ವರ್ಷಕ್ಕಾಗುವಷ್ಟು ಮಗನಿಗೆ ಕಳುಹಿಸುತ್ತಿದ್ದರು. ರಜೆಯಲ್ಲಿ ಎಲ್ಲರೂ ಹಳ್ಳಿಗೆ ಹೋಗುತಿದ್ದರು. ಹೀಗಾಗಿ ನೆಮ್ಮದಿಯಿಂದ ಸಂಸಾರದ ರಥ ಸಾಗುತಿತ್ತು.
ನಾನು ಅಲ್ಲಿದ್ದಾಗ ಅವರ ಮಕ್ಕಳಲ್ಲಿ ಒಬ್ಬ ನನ್ನ ವಾರಗೆಯವ. ಆಟದಲ್ಲಿ ಮುಂದು. ಮಹಾ ಗಟ್ಟಿಗ. ಹುಡುಗನಿದ್ದಾಗ ಹರಿಯುವ ಚೇಳನ್ನೆ ಹಿಡಿದವ. ಇನ್ನೊಬ್ಬ ನನಗಿಂತ ಒಂದೂದುವರೆ ವರ್ಷ ದೊಡ್ಡವನು. ಓದಿನಲ್ಲಿ ಚುರುಕು. ಆಟ ನಾಟಕಗಳಲ್ಲಿ ಮುಂದು. ಮತ್ತೊಬ್ಬನು ಮೂರು ವರ್ಷ ಚಿಕ್ಕವನು ಅವನಿಗೆ ಚಿತ್ರ ಬಿಡಿಸುವ ಖಯಾಲಿ. ನಮ್ಮ ಅಜ್ಜಿ ಸದಾ ಅಲ್ಲಿ ಇರಲೇಬೇಕಿತ್ತು. ನಮ್ಮ ಅತ್ತೆಯದು ಆರು ತಿಂಗಳ ಕೂಸು ಮೂರು ತಿಂಗಳ ಬಸಿರು ಎಂಬ ಲೆಕ್ಕಾಚಾರ. ನಾನು ಅಲ್ಲಿದ್ದ ಮೂರು ವರ್ಷದಲ್ಲಿ ಅವರಿಗೆ ಎರಡು ಹೆರಿಗೆಯಾದ ನೆನಪು. ಹೀಗಾಗಿ ಸದಾ ಮಗಳ ಯೋಗ ಕ್ಷೇಮ ನೋಡಿಕೊಳ್ಳಲು ನಮ್ಮಜ್ಜಿ ಅಲ್ಲೆ ಇರುತ್ತಿದ್ದರು. ಮನೆ ಒಂದು ಛತ್ರದಂತೆ. ಸಾಲಾಗಿ ಊಟಕ್ಕೆ ಕುಳಿತರೆ ಜಿದ್ದಿನ ಮೇಲೆ ಊಟ ಮಾಡುವರು. ಮಲಗಲಂತೂ ಹಜಾರದಲ್ಲಿ ಹಾಸಿದ ಗುಡಾರ ಇರುವುದು. ಎಲ್ಲರೂ ಒಟ್ಟಿಗೆ ಮಲಗುವುದು. ದೀಪ ಅರಿಸಿದರೂ ಗುನುಗುಟ್ಟುವದು ನಡೆದೆ ಇರುತಿತ್ತು. ಒಳಗಿನಿಂದ ಗದರಿಕೆ ದನಿ ಬಂದಾಗಲೆ ಎಲ್ಲ ಸುಮ್ಮನಾಗುವರು.
ಅವರ ಮೂರು ಗಂಡುಮಕ್ಕಳ ಜತೆ ನಾನು ನಾಲ್ಕನೆಯವನು. ಜತೆಗೆ ನಮ್ಮ ಮಾವನ ಅಣ್ಣನ ಮಗನೂ ಸಹಾ ಹಳ್ಳಿಯಿಂದ ಓದಿನ ಸಲುವಾಗಿ ಅಲ್ಲಿಗೆ ಬಂದಿದ್ದ. ಅದರ ಜತೆ ಶಾಸ್ತ್ರಿ ಎಂಬ ವಾರನ್ನದ ಹುಡುಗ. ವಾರದಲ್ಲಿ ಒಂದು ದಿನ ಇಲ್ಲಿಯೆ ಊಟ. ಬಡ ವಿದ್ಯಾರ್ಥಿಗಳು ವಾರಕ್ಕೆ ಒಂದು ದಿನ ಒಬೊಬ್ಬರ ಮನೆಯಲ್ಲಿ ಊಟ ಮಾಡಿ ಶಾಲೆ ಕಲಿಯುತಿದ್ದರು. ಅವರು ಊಟ ಹಾಕುವವರ ಮನೆಯಲ್ಲಿ ಚಿಕ್ಕಪುಟ್ಟ ಕೆಲಸ ಮಾಡಬೇಕಿತ್ತು. ಒಂದು ಮನೆಯಲ್ಲಿ ಅನಾನುಕೂಲವಾದರೆ ಅಥವ ಯಾವುದಾದರೂ  ಮನೆಯವರು ಊರಿಗೆ ಹೋದರೆ ಆ ದಿನದ ಊಟ ನಮ್ಮ ಮನೆಯಲ್ಲೆ ಆಗುತಿತ್ತು. ಕಾರಣ ಅವನು ಮನೆಯ ಹಿರಿಯ ಮಗನ ಸಹಪಾಠಿ. ನಮ್ಮ ಮನೆಯಲ್ಲಿಯೆ ಅವನ ವಾಸ. ಹೀಗೆ ಓದಿ ಮುಂದೆ ಬಂದವರು ಬಹಳ ಜನ. ಹೀಗಾಗಿ ಹೊತ್ತಿಗೆ ಎರಡು ಸೇರು ಹಿಟ್ಟಿನ ರೊಟ್ಟಿ ಚಟ್‌ ಫೈಸಲ್‌. ಶನಿವಾರ, ಭಾನುವಾರ, ಬೇರೆ ಯಾವುದೆ ಹಬ್ಬ ಹರಿದಿನ ಎಂದು ರಜೆ ಬಂದರೆ ಎಲ್ಲ ಟೋಳಿಯು ನಮ್ಮ ಊರಿಗೆ ಹಾಜರು. ಹೇಳಿ ಕೇಳಿ ಎರಡು ಊರುಗಳ ನಡುವಿನ ಅಂತರ ನಾಲಕ್ಕು ಮೈಲು. ಅಲ್ಲಿ ತಿಂಡಿ ತಿಂದು ಬಿಟ್ಟರೆ ಆಟ ಆಡುತ್ತಾ ನಡೆದುಕೊಂಡು ಊಟದ ಹೊತ್ತಿಗೆ ನಮ್ಮೂರಿನಲ್ಲಿ  ಹಾಜರು.
ಸುಗ್ಗಿಯ ಕಾಲವಾದರೆ ಯಾರದಾದರೂ ಹೊಲಕ್ಕೆ ಹೋಗುವದು. ಅಲ್ಲಿ ಹೆಸರು ಅಲಸಂದಿಕಾಯಿಯ ರುಚಿ. ಜೋಳ ಮತ್ತು ಸೆಜ್ಜೆಯ ತೆನೆಯ ಹಾಲುಗಾಳುಗಳ ಬೆಳಸಿ ತಿನ್ನುವದು. ನಮ್ಮ ಗದ್ದೆಗೆ ಹೋದಾಗಲಂತೂ ಕಬ್ಬಿನ ಸಮಾರಾಧನೆ. ಹತ್ತಿರ ಕಬ್ಬಿನ ಗಾಣ ಆಡುತಿದ್ದರೆ ಅಲ್ಲಿಗೂ ಭೇಟಿ. ಜಿನ್ನಿನ ಸೋಮೇರ ಮನೆ ಹುಡುಗರು. ಹಾಗಾಗಿ ನಿರಾಳವಾಗಿ ಓಡಾಟ ಸಾಗುತಿತ್ತು. ಕೆಲವುಸಲ ಮನೆಗೆ ಅನುಕೂಲವಾಗುವ ಕೆಲಸವೂ ಆಗುತಿತ್ತು. ಜೋಳದ ಬೆಳೆ ಕಟಾವು ಆಗಿದ್ದರೆ ಎಲ್ಲರೂ ಸೇರಿ ಎರಡು ಮೂರು ಹೊರೆ ಕೋಲಿಯನ್ನು ತರುವುದಿತ್ತು. ಕೋಲಿ ಎಂದರೆ  ಜೋಳದ ದಂಟನ್ನು ತೆನೆ ಸಮೇತ ಕತ್ತರಿಸಿದ ಮೇಲೆ ಭೂಮಿಯಿಂದ ಮೇಲೆ ಒಂದೆರಡಡಿ ಉಳಿದಿರುವ ದಂಟಿನ ಭಾಗ. ಅದನ್ನು ಬೇರು ಸಮೇತ ಕಿತ್ತು ತಂದರೆ ಅದರಿಂದ ಹೊಲದವರಿಗೂ ಭೂಮಿ ಹಸನಾಗುವುದು. ಅದಕ್ಕೆ ಯಾರು ಬೇಕಾದರೂ ಅವನ್ನು ತೆಗೆದುಕೊಂಡು ಹೋಗಬಹುದಿತ್ತು. ಅದು ನೀರೊಲೆಗೆ ತಿಂಗಳುಗಟ್ಟಲೆ ಉರುವಲಾಗುತಿತ್ತು.
ವರ್ಷಕೊಮ್ಮೆ ಮುತ್ತುಗದ ಎಲೆ ತರಲು ಹೋಗುವುದಿತ್ತು. ಮುತ್ತುಗದ ಮರಗಳು ವರ್ಷದಲ್ಲಿ ಕೆಲವುಕಾಲ ಅಗಲವಾದ ಎಲೆಗಳಿಂದ ಸೊಂಪಾಗಿ ಇರುತಿದ್ದವು. ಗೋಣಿ ಚೀಲ ತೆಗೆದುಕೊಂಡು ಹೋಗಿ ಗದ್ದೆ ಬದುವಿನಲ್ಲಿದ್ದ ಮುತ್ತುಗದ ಮರವನ್ನು ಒಬ್ಬರು ಹತ್ತಿ ಬಲಿತ, ಅಗಲವಾದ ಎಲ್ಲೆಗಳನ್ನು ಕಿತ್ತು ಕಿತ್ತು ಕೆಳಗೆ ಹಾಕಿದರೆ ಉಳಿದವರು ಅವುಗಳನ್ನು ಜೋಡಿಸಿ ಚೀಲದಲ್ಲಿ ತುಂಬುವರು. ಮನೆಗೆ ಹೋದ ಮೇಲೆ ಅವುಗಳನ್ನು ನೀರಿನಲ್ಲಿ ತೋಯಿಸಿ ಒಟ್ಟಾಗಿ ಜೋಡಿಸಿ ಬೀಸುವ ಕಲ್ಲಿನ ಕೆಳಗೆ ಇಟ್ಟು ಅವು ಸಪಾಟಾದ ಮೇಲೆ ಎಲೆ ಸರ ಮಾಡಿ ನೇತು ಹಾಕುತಿದ್ದರು. ಪುರುಸೊತ್ತಾಗಿದ್ದಾಗ ಅಮ್ಮ ಅಜ್ಜಿ ಜೋಳದ ದಂಟಿನ ಸಿಬರು ಮಾಡಿ ಅವುಗಳಿಂದ ಎಲೆ ಹಚ್ಚುತಿದ್ದರು. ಅದರಿಂದ ವರ್ಷಾವಧಿ ಊಟಕ್ಕೆ ಹಬ್ಬ ಹುಣ್ಣಿಮೆ ದಿನ, ಹೆಚ್ಚು ಜನ ಬಂದಾಗ ಅನುಕೂಲವಾಗುತಿತ್ತು. ಮನೆಯಲ್ಲಿ ಸದಾ ಹಚ್ಚಿದ ಪತ್ರೊಳಿ ಎಲೆಗಳ ಪೆಂಡಿ, ದೊನ್ನೆಗಳ ಕಟ್ಟು ಇರುತಿತ್ತು.
ಹಂಪೆ ಹತ್ತಿರವಿದ್ದುದರಿಂದ ಬುತ್ತಿ ಕಟ್ಟಿಕೊಂಡು ಬೆಳಗ್ಗೆ ಹಂಪೆಗೆ ನಡೆದು ಹೊರಟರೆ ಹಾಳು ಪಟ್ಟಣ ಸುತ್ತಾಡಿ, ಚಕ್ರತೀರ್ಥ, ಪುರಂದರ ಮಂಟಪದಲ್ಲಿ ಬುತ್ತಿ ತಿಂದು ರಾತ್ರಿಯ ವೇಳೆಗೆ ಮನೆಗೆ ಬರುವುದೂ ಇತ್ತು. ಈ ಪಟಾಲಂ ಇದ್ದಾಗಲೆ ವರ್ಷಕ್ಕೆ ಬೇಕಾಗುವ ಹಪ್ಪಳ ಸಂಡಿಗೆ ತಯಾರಿಯಾಗುತಿತ್ತು. ಆಗ ಮಾಳಿಗೆಯ ಮೇಲೆ ಒಣ ಹಾಕಿದ ಅವನ್ನು ಕಾಯುವ ಕೆಲಸ ನಮ್ಮದು. ಕೋತಿ ಮತ್ತು ಕಾಗೆಗಳಿಂದ ಅವನ್ನು ತಡೆಯಲು ಕೋಲು ಹಿಡಿದು ಕಾಯುತಿದ್ದೆವು. ನಮ್ಮನ್ನು ಕಾಯಲು ಆಗೀಗ ದೊಡ್ಡವರು ಬರುತಿದ್ದರೂ. ಅವರ ಕಣ್ಣು ತಪ್ಪಿಸಿ ನಾವು ಹಸಿಯಸಂಡಿಗೆ ತಿನ್ನುತಿದ್ದೆವು ನಮ್ಮಲ್ಲಿನ ಮೀರ್‌ ಸಾಧಕ್‌ ಚಾಡಿ ಹೇಳಿದರೆ ಬೈಗಳು ಬೀಳುತಿದ್ದವು. ಮಾಳಿಗೆಯ ಮೇಲೆ ಗುಡಾರ ಹೊದಿಕೆಗಳಿಂದ ತಾತ್ಕಾಲಿಕ ತಂಬೂ ಮಾಡಿಕೊಂಡು ಅದರ ನೆರಳಲ್ಲೆ ಅದು ಇದು ಆಡುತ್ತಾ ಕಾಲ ಹಾಕುತಿದ್ದೆವು. ಜತೆಗೆ ಅತ್ತೆ ಬಂದರಂತೂ ಮುಗಿಯಿತು. ಅವರು ಬ್ಯಾಳಿಯಲ್ಲಿ ಬೆಲ್ಲ ಬಿದ್ದರೂ ಬಂದೆ ಬರುತಿದ್ದರು. ಆಗ ಅವಲಕ್ಕಿ, ಅರಳಿಟ್ಟು, ಸ್ಯಾವಗಿ ತಯಾರಿಗೆ ತೊಡಗುತಿದ್ದರು.
ನಮಗಂತೂ ಲಂಗಿಲ್ಲ ಲಗಾಮಿಲ್ಲ. ತೋಟ ತುಡುಗೆ ಎಂದು ತಿರುಗಿದ್ದೆ ಬಂತು. ಹೇಗೆ ಇದ್ದರೂ ಹಂಪಿ ನಮಗೆ ನಾಲಕ್ಕೆ ಮೈಲು. ಪ್ರತಿ ಸಲವೂ ಹಂಪಿಯಲ್ಲಿನ ಒಂದೊಂದು ಜಾಗಕ್ಕೆ ದಾಳಿ ಇಡುತಿದ್ದೆವು. ಅಲ್ಲದೆ ಯಾವುದಾದರೂ ಆರಾಧನೆ ಇದ್ದರೆ ಅದಕ್ಕೆ ನಮ್ಮ ಹಾಜರಿ ಹಾಕುತಿದ್ದೆವು. ಒಪ್ಪತ್ತಿನ ಊಟಕ್ಕೆ ಇಪ್ಪತ್ತು ಮೈಲಿ ನಡೆವ ಕಾಲ ಅದು. ನಿತ್ಯ ಸ್ನಾನಕ್ಕೆ ಪವರ್ ಕೆನಾಲ್‌ಗೆ ಭೇಟಿ. ನಮ್ಮ ಊರಲ್ಲಿ ಕುಡಿಯುವ ನೀರಿನ ಕೊರತೆಯಿದ್ದರೂ ಹತ್ತಿರದಲ್ಲೆ ಇರುವ ಕಾಲುವೆಗಳು ಮೂರು. ಆದರೆ ಇದ್ದದು ಮಾತ್ರ ಮೈಲು ದೂರದಲ್ಲಿ. ಅಲ್ಲಿ ನೀರಿನ ವಿಷಯದಲ್ಲಿ ನಮಗೆ ಬಹು ಸಮೃದ್ಧಿ. ಊರ ಮುಂದೆ ಬಸವನ ಕಾಲುವೆ ಒಂದು ಮೈಲು ಹೋದರೆ ದೊಡ್ಡ ಕಾಲುವೆ. ಅಲ್ಲಿ ಸದಾ ರಭಸದಿಂದ ಹರಿವ ಎಂಟು ಅಡಿ ಆಳದ ನೀರು. ಅದರಲ್ಲಿ ಈಜುವುದೆಂದರೆ ಸಾಹಸದ ಕೆಲಸ. ಅಷ್ಟು ಸೆಳವು. ಕೈ ಸೋತು ಸೆಳವಿಗೆ ಸಿಕ್ಕರೆ ಗೋವಿಂದನೆ ಗತಿ. ಅಲ್ಲದೆ ಅದರಲ್ಲಿ ತಿಂಗಳಿಗೊಮ್ಮೆಯಾದರು ಒಂದು ಹೆಣ ಬಂದೆ ಬರುವುದು. ಅದಕ್ಕೆ ಒಬ್ಬೊಬ್ಬರೆ ಈಜುವುದೆಂದರೆ ಭಯ.
ಆದರೆ ಕಲಿತ ಮೇಲೆ ಅದರ ಮಜವೆ ಬೇರೆ. ಪಣುವಿನ ಮೇಲೆ ನಿಂತು ಹಾರುವ ವೈವಿಧ್ಯ ಹೇಳತೀರದು. ಅದರಲ್ಲೂ ಅಲ್ಲಿಯೆ ಬಟ್ಟೆ ಒಗೆಯಲು ಹರೆಯದ ಹುಡುಗಿಯರು ಕೂತಿದ್ದರಂತೂ ಎಲ್ಲರೂ ಸಾಹಸ ಭೀಮರೆ. ವಯಸ್ಸಿನ ಮಹಿಮೆ. ಬೇಡ ಬೇಡ ಎಂದರೂ ಹುರುಪಿನಿಂದ ಹಾರುವುದು. ನೀರಲ್ಲಿ ಮುಳುಗಿ ಮತ್ತೆಲ್ಲೋ ತೇಲುವುದು ಮೊದಲಾದ ಚೇಷ್ಟೆ ಮಾಡುವರು.
ಒಂದು ರೀತಿಯಲ್ಲಿ ಬಾವಿಯಲ್ಲಿ ಈಜುವುದು ಬಹು ಕ್ಷೇಮ. ಅಲ್ಲಿ ಕೊಚ್ಚಿಕೊಂಡು ಹೋಗುವ ಭಯ ಇಲ್ಲ. ಈಗಿನ ಈಜುಕೊಳದ ತರಹ ಆದ್ದರಿಂದ ಈಜು ಕಲಿಯುವುದಕ್ಕೆ ಬಾವಿಯೆ ಬಲು ಉತ್ತಮ. ಅದಕ್ಕಾಗಿ ವಿಶೇಷ ಶ್ರಮ ಬೇಕಿರಲಿಲ್ಲ. ನುಗ್ಗೆಗಿಡ ಕಡಿದು ಅದರ ಟೊಂಗೆಗಳನ್ನು ಎರಡು ಅಡಿ ಉದ್ದ ವಿರುವಂತೆ ಕತ್ತರಿಸಿ ಆರೆಂಟು ತುಂಡುಗಳನ್ನುಸೇರಿಸಿ ಕಟ್ಟಿದರೆ ಮುಗಿಯಿತು. ನಮ್ಮನ್ನು ತೇಲಿಸುವ ಸಾಧನ ಸಿದ್ಧ. ಅದನ್ನು ನಡಕ್ಕೆಕಟ್ಟಿಕೊಂಡು ನೀರಿಗೆ ಇಳಿದರೆ ಮುಳುಗುವ ಮಾತೆ ಇಲ್ಲ. ಭಯದಿಂದ ಕೈಕಾಲು ಬಡಿದರೂ ಸಾಕುದಂಡೆಗ ಬಂದು ಬಿಡುವೆವು. ಹೀಗೆ ಒಂದು ವಾರ ಮಾಡಿದರೆ ಆಯಿತು, ಈಜು ಬಂದಂತೆ. ಕೆಲವರು ಒಣಗಿದ ಸೋರೆ ಬುರಡೆಗಳನ್ನು ಬಳಸಿ ಈಜು ಬುರುಡೆ ತಯಾರಿಸುವರು. ಇನ್ನು ಹಲವರು ಖಾಲಿ ಸೀಮೆಎಣ್ಣೆ ಡಬ್ಬಿ ಬಳಸುವರು. ಅದರಲ್ಲಿನ ರೂಪಾಯಿಗಿಂತ ಅಗಲವಾದ ಚಿಕ್ಕಬಾಯಿಗೆ ದಪ್ಪನೆಯ ಈರುಳ್ಳಿ ಸಿಕ್ಕಿಸಿದರೆ ಅಯಿತು. ಅದನ್ನು ಕಟ್ಟಿಕೊಂಡರೆ ಆನೆ ಮರಿಯಂತಹವನು ಸಹ ಮುಳುಗಲಾರ. ಹೀಗಾಗಿ ನಮಗೆ ನಿಂತ ನೀರಾಗಲಿ ಹರಿವ ನೀರಾಗಲಿ ಈಜುವುದು ಸಲೀಸಾದ ಕೆಲಸ.
ಹರಿವ ನೀರಲ್ಲಿ ಸೆಳವಿಗೆ ಸಿಲುಕಿ ಅಪಾಯ ಆದದ್ದು ಉಂಟು. ಬಾವಿಯಲ್ಲಿ ಅಸಂಭವ ಬಹುತೇಕ ವಿರಳ. ಆದರೆ ಬಾವಿಯಲ್ಲಿ ಕೆಸರು ಅಥವ ಕಲ್ಲು ಇದ್ದಾಗ ಸುರಂಗ ಹೊಡೆದರೆ ಮಾತ್ರ ಅಪಾಯ. ಸುರಂಗ ಹೊಡೆಯುವುದು ಎಂದರೆ ಬಾವಿಯ ದಡದ ಮೇಲೆ ನಿಂತು ತಲೆ ಕೆಳಗಾಗಿ ಹಾರುವುದು. ಅಪರಿಚಿತ ನೀರಾದರೆ ಆ ಸಾಹಸ ಸಲ್ಲ. ಕಬ್ಬೇರ ಬರಮ ಒಳ್ಳೆ ಈಜುಗಾರ. ನೀರಿನಲ್ಲಿ ಅವನು ಮೀನಿನ ಮರಿಗಿಂತಲು ಚುರುಕು. ಇನ್ನು ಅವನು ಹಾರುವ ವಿಧಾನವಂತೂ ಎಲ್ಲರ ಬೆರಗಿಗೆಕ ಕಾರಣ. ನೀರಿನಲ್ಲಿ ಹಾರುವಾಗ ಪಲ್ಟಿ ಹೊಡೆಯುವುದು, ಬಿಟ್ಟಬಾಣದಂತೆ ನೀರನ್ನು ಸೀಳಿಕೊಂಡು ಹೋಗುವುದು ನಮಗೆಲ್ಲ ಬೆರಗು ಮೂಡಿಸುತಿತ್ತು. ಆದರೆ ಅವನು ನೀರಲ್ಲೆ ಸಾವನ್ನಪ್ಪಿದ. ಒಂದು ಸಲ ಬೇರೆ ಯಾವುದೋ ಬಾವಿಗೆ ಹೋದಾಗ ಅಲ್ಲಿನ ನೀರನ್ನು ನೋಡಿ ಖುಷಿಯಾಗಿ ಮೇಲಿನಿಂದ ತಲೆಕೆಳಗಾಗಿ ಹಾರಿದ್ದೆ ಬಂತು. ನೀರೊಳಗಿಂದ ಗುಳ್ಳೆಗಳು ಬಂದಿವೆ. ಅವನು ಮೇಲೆ ಏಳಲೆ ಇಲ್ಲ. ಜತೆಗಿದ್ದವರು ಗಾಬರಿಯಾಗಿ ನೀರಿಗಿಳಿದು ನೋಡಿದಾಗ ಅವನ ಕಾಲುಗಳು ಅಲ್ಲಾಡುವುದು ಕಾಣಿಸಿವೆ. ಹಾಗೂ ಹೀಗೂ ಅವನ ಕಾಲು ಹಿಡಿದು ಎಳೆದಿದ್ದಾರೆ. ಅಂಥ ಒಳ್ಳೆಯ ಈಜುಗಾರನೂ ಅಕಾಲ ಮರಣಕ್ಕೆ ತುತ್ತಾಗಿದ್ದ, ಆಗಲೆ ಅವನು ನೀರು ಕುಡಿದು ಉಸಿರಾಟ ನಿಂತಿದೆ. ಅವನು ಮೇಲಿನಿಂದ ಹಾರಿದಾಗ ತಳದಲ್ಲಿದ್ದ ಕೆಸರಿನಲ್ಲಿ ಅವನ ತಲೆ ಸಿಕ್ಕಿಹಾಕಿಕೊಂಡು ಹೊರಗೆ ಬರಲು ಆಗಿಲ್ಲ.
ಇರುವ ಮೂರು ವರ್ಷ ಆಡಾಡುತ್ತಾ ಕಳೆದೆ. ಅಲ್ಲಿನ ಒಂದೆ ತೊಡಕು ಎಂದರೆ ಅಭ್ಯಾಸಕ್ಕೆ ಅಲ್ಲಿ ಆದ್ಯತೆ ಇಲ್ಲ. ನಮ್ಮ ಮಾವ ಉತ್ತಮ ಶಿಕ್ಷಕರು. ಪಾಠ ಏನಿದ್ದರೂ ಶಾಲೆಯಲ್ಲಿ ಮಾತ್ರ. ಒತ್ತಾಯದ ಮೇರೆಗೆ ಆ ಊರಿನ ಅತಿ ದೊಡ್ಡ ಶ್ರೀಮಂತರಾದ ಉಳ್ಳಾಗಡ್ಡೇರ ಮನೆಗೆ ಹೋಗಿ ಪಾಠ ಹೇಳುತಿದ್ದರು. ಅವರದು ಅವಿಭಕ್ತ ಕುಟುಂಬ. ಆ ಒಂದು ಮನೆಯಲ್ಲಿಯೆ ಆರೆಂಟು ಮಕ್ಕಳು. ಸಂಜೆ ಆರಕ್ಕ ಹೋದರೆ ರಾತ್ರಿ ಎಂಟಕ್ಕೆ ಬರುವರು ಅಷ್ಟುಹೊತ್ತಿಗೆ ನಮ್ಮ ತಲೆಗಳು ತಕ್ಕಡಿ ತೂಗುತ್ತಿದ್ದವು. ಮನೆಯಲ್ಲಿ ಮಕ್ಕಳಿಗೂ ಅಷ್ಟು ಆಸಕ್ತಿ ಇರಲಿಲ್ಲ. ಅವರಿಗೂ ಪುರುಸೊತ್ತಿರಲಿಲ್ಲ. ಹಾಗಾಗಿ ನಮಗೆ ಮನೆಯಲ್ಲಿ ಓದಲು ಒತ್ತಾಯವಿರಲಿಲ್ಲ. ನಾನೋ ಆಗಲೆ ಓದು ಗುಳಿ. ಆದ್ದರಿಂದ ನಾನು ನಾನು ತರಗತಿಗೆ ಮೊದಲಿಗನಾಗುತ್ತಿದ್ದೆ. ಅದು ತುಸು ದುಸುಮುಸಿಗೆ ಕಾರಣ ಮೇಷ್ಟ್ರ ಮಕ್ಕಳಾದ ಅವರಿಗಿಂತ ಮೇಸ್ತ್ರಿ ಮಗ ನಾನು ಹೆಚ್ಚು ಅಂಕ ಗಳಿಸುವುದು ಎಂದರೆ ಕಣ್ಣು  ಕೆಂಪಾಗಿಸಿತು. ನಮ್ಮ ಅತ್ತೆಗೆ ಬಹಳ ಖುಷಿ. ನನ್ನ ಅಣ್ಣನ ಮಗ ಜಾಣ ಎಂದು. ನಮ್ಮ  ಮಾವ ನಿರ್ಲಿಪ್ತ. ತಾನಾಯಿತು ತನ್ನ ಶಾಲೆಯಾಯಿತು. ಹೊತ್ತಿಗೆ ಸರಿಯಾಗಿ ಊಟವಾದರೆ ಮುಗಿಯಿತು. ಮಕ್ಕಳು ತಾವೆ ಓದಿಕೊಳ್ಳುತ್ತಾರೆ ಎಂಬ ನಂಬಿಕೆ. ಆದರೆ ಸದಾ ಆಟಗುಳಿಯಾಗಿದ್ದ ನನ್ನ ಓರಗೆಯವರೆ ತುಸು ಕಿರಿ ಕಿರಿ ಮಾಡಿಕೊಳ್ಳುತಿದ್ದರು. ಅದೂ ಪರೀಕ್ಷೆ ಮುಗಿದು ಉತ್ತರ ಪತ್ರಿಕೆ ಕೊಟ್ಟಾಗ ಮಾತ್ರ. ನಂತರ ಮತ್ತೆ ಮಾಮೂಲಿನಂತೆ ಆಟ.


ಗುರುಬಸಯ್ಯನವರ ಒಬ್ಬನೇ ಮಗ!


ಗುರುಬಸಯ್ಯನವರು ನಮ್ಮ ಹೊಸ ಸಾಲಿಯಲ್ಲಿನ ಸಹಾಯಕ ಶಿಕ್ಷಕರು. ಅವರಿಗೆ ಆಗಲೆ ಐವತ್ತರ ಮೇಲೆ ವಯಸ್ಸಾಗಿತ್ತು. ಕೆಂಪು ಬಣ್ಣ, ಸಾಧಾರಣ ಮೈಕಟ್ಟು, ಬಿಳಿ ಮಲ್ಲಿನ ಅಂಗಿ ದೋತರ, ತಲೆಯಲ್ಲಿ ದಟ್ಟ ಬಿಳಿ ಕೂದಲು. ಹಣೆ ತುಂಬ ವಿಭೂತಿಪಟ್ಟಿ. ಅವರು ಕನ್ನಡ ಮತ್ತು ಕೆಳ ತರಗತಿಗಳಿಗೆ ಲೆಕ್ಕ ಹೇಳಿ ಕೊಡುತ್ತಿದ್ದರು. ಅವರು ಮೃದು ಸ್ವಭಾವದವರು. ಮಾತೆತ್ತಿದರೆ ಶಿವ ಶಿವಾ ಎನ್ನುವರು. ಸಾಲಿ ಗುಡಿಯಲ್ಲಿ ಕಲಿತವರಿಗೆ ಅಂತೂ ಅವರು ದೇವರ ಸಮಾನ. ಹೊಡೆತ ಬಡಿತ ಇಲ್ಲ, ಬೈಗುಳೂ ಇಲ್ಲ. ಅವರ ಬಾಯಲ್ಲಿ ಕೆಟ್ಟ ಮಾತೆ ಇಲ್ಲ. ಯಾವಾಗಲೂ ಅಪ್ಪಾ, ಅಣ್ಣಾ, ಮರಿ ಎಂದೆ ಸಂಬೋಧನೆ. ಅದರ ಲಾಭ ಪಡೆದ ಕೆಲವು ಮಕ್ಕಳು ಗಲಾಟೆ ಮಾಡುತ್ತಿದ್ದರು. ಅದು ಹೆಡ್‌ ಮಾಸ್ತರ್‌ ಗಮನಕ್ಕೆ ಬಂದಾಗ ಅವರಿಗೆ ಸರಿಯಾದ ಶಾಸ್ತಿಯಾಗುತ್ತಿತ್ತು. ಇಲ್ಲಿ ಮರಳ ಮೇಲೆ ಬೆರಳು ತೂತು ಬೀಳುವವರೆಗೆ ಬರೆವ ಪದ್ಧತಿ ಇರಲಿಲ್ಲ. ಆಗಲೆ ಸ್ಲೇಟು ಬಳಪ ಬಳಕೆಗೆ ಬಂದವು. ಅಕ್ಷರ ಕಲಿಕೆಯ ಆ ಕಠಿಣ ಪದ್ಧತಿ ಕೊನೆ ಕಂಡಿತು. ಇನ್ನು ಮಗ್ಗಿ ಕಂಠ ಪಾಠಕ್ಕೂ ಮೊದಲಿನ ತರಹದ ಅತಿ ಒತ್ತು ಇರಲಿಲ್ಲ. ಅದರ ಜತೆಗೆ ಶಿಕ್ಷೆಯ ಸ್ಥಾನಮಾನ ಬಹಳ ಬದಲಾದವು. ನಾವು ಹಿಂದೆ ಓದಿದ ಸಾಲಿ ಗುಡಿಯಲ್ಲಿ ಕ್ರಮೇಣ ಮಕ್ಕಳ ಸಂಖ್ಯೆ ಕಡಿಮೆಯಾಗಿ ಆ ಅಯ್ಯನವರು ಊರು ಬಿಟ್ಟರು. ಗುರು ಬಸಯ್ಯನವರು ಕಾಯಕ ಶಾಲೆಯ ಪ್ರಾರಂಭದ ಸಮಯದಿಂದಲೆ ಶುರುವಾಗುತಿತ್ತು. ಅದಕ್ಕೆ ಕಾರಣ ಅವರು ಶಾಲೆ ಇದ್ದ ಊರಲ್ಲೆ ಮನೆ ಮಾಡಿರುವುದು. ಅವರು ಮುಂಚೆಯೆ ಶಾಲೆಗೆ ಬಂದು ದೊಡ್ಡ ಹುಡುಗರನ್ನು ಹಿಡಿದು ಕಸ ಗುಡಿಸಿ ಶಾಲೆಯನ್ನು ನೀಟು ಮಾಡುತಿದ್ದರು. ನಂತರ ಗಂಟೆ ಹೊಡೆಸುವರು. ಪ್ರಾರ್ಥನೆಯಿಂದ ಕೆಲಸ ಮೊದಲಾಗುತಿತ್ತು. ಅದಕ್ಕೆ ಎಲ್ಲ ಮಕ್ಕಳು ಸಾಲೆಯ ಹೊರಗಿನ ಅಂಗಳದಲ್ಲಿ ಸಾಲಾಗಿ ನಿಲ್ಲಬೇಕು. ನಾವೆಲ್ಲ ಕೈಮುಗಿದು ನಿಲ್ಲುತಿದ್ದೆವು ಎಂದು ನೆನಪು. ಅವರು ರಾಗವಾಗಿ ಪ್ರಾರ್ಥನಾ ಪದ ಹೇಳುವರು, ನಾವೆಲ್ಲ ಅವರನ್ನು ಅನುಸರಿಸಿ ಹಾಡಬೇಕು.
ಸ್ವಾಮಿದೇವನೆ ಲೋಕ ಪಾಲನೆ ತೇ ನಮೋಸ್ತುತೆ ನಮೋಸ್ತುತೆ ಪ್ರೇಮದಿಂದಲಿ ಪಾಲಿಸೆಮ್ಮನು ತೇ ನಮೋಸ್ತುತೆ ನಮೋಸ್ತುತೆ ಹಸ್ತ ಪಾದಗಳಿಂದಲೂ ಮನದಿಂದಲೂ ನಾವು ಮಾಡುವ ಪಾಪವೆಲ್ಲವ ಹೋಗಲಾಡಿಸು ದೇವನೆ...  ಪದ ಇನ್ನೂ ದೊಡ್ಡದಿತ್ತು ಎಂದುಕೊಂಡಿರುವೆ. ಆದರೆ ಸದ್ಯಕ್ಕೆ ನನ್ನ ನೆನಪಲ್ಲಿರುವುದು ಇಷ್ಟು ಮಾತ್ರ. ಈ ಪದ್ಯ ಸ್ಕೂಲ್ ಮಾಸ್ಟರ್ ಚಲನಚಿತ್ರದ ಪ್ರಾರ್ಥನಾ ಗೀತೆಯೂ ಆಗಿತ್ತು. ಅದರ ಪುಟ್ಟ ವಿಡಿಯೋ ಇಲ್ಲಿದೆ. ಈ ಕ್ಲಿಪ್ಪಿಂಗಿನಲ್ಲಿ ಅದು 6.30 ನಿಮಿಷದಿಂದ ಆರಂಭವಾಗುತ್ತದೆ.


ಇದರ ಜತೆ ಜನಗಣ ಮನವನ್ನೂ ಹೇಳಬೇಕಿತ್ತು. ಸಿಂಗ್‌ ಮಾಷ್ಟ್ರು ಪ್ರಾರ್ಥನೆ ಸಮಯಕ್ಕೆ ಸರಿಯಾಗಿ ಟಕ್‌ ಅಂತ ಹಾಜರಾಗುವರು. ಅವರು ವಾರಕ್ಕೆಕೊಮ್ಮೆ ಸಂಜೆ ಎಲ್ಲರನ್ನೂ ಹೊರಗೆ ಬಯಲಿನಲ್ಲಿ ನಿಲ್ಲಿಸಿ ಕೈ ಕಾಲು ತಿರುಗಿಸುವುದನ್ನು ಹೇಳಿ ಕೊಡುವರು. ಗುರಬಸಯ್ಯನವರು ನಮಗೆಲ್ಲ ಹೆಚ್ಚು ಹತ್ತಿರವಾದ್ದು ಅವರು ಹೇಳಿಕೊಡುತಿದ್ದ ಪದ್ಯಗಳಿಂದ. ಅವರು ತಮ್ಮ ಸುಮಧುರ ಕಂಠದಲ್ಲಿ ಹಾಡುತಿದ್ದ ಶಿಶುಗೀತೆಗಳು ಇನ್ನೂ ಕಿವಿಯಲ್ಲಿ ಗಂಯ್ ಗುಡುತ್ತಲಿವೆ. ``ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ", "ನಾಗರ ಹಾವೆ ಹಾವೊಳು ಹೂವೆ'', ``ಅಜ್ಜನ ಕೋಲಿದು ನನ್ನಯ ಕುದುರೆ'' ಮೊದಲಾದುವನ್ನು ಅವರು ಅಭಿನಯಿಸಿ ಹೇಳುತಿದ್ದದು ಕಣ್ಣಿಗೆ ಕಟ್ಟಿದಂತೆ ಇದೆ. ಆಗ ಒಂದು ಅನುಕೂಲವಿತ್ತು, ಪ್ರತಿ ತರಗತಿಗೂ ಬೇರೆ ಬೇರೆ ಕೊಠಡಿ ಇರಲಿಲ್ಲ. ಇರುವುದು ಮೂರು ಕೋಣೆಗಳು. ಇಬ್ಬರು ಶಿಕ್ಷಕರು. ಹಾಗಾಗಿ ಯಾರಿಗೆ ಪಾಠ ಮಾಡಿದರೂ ಆಸಕ್ತಿ ಇದ್ದ ಎಲ್ಲರೂ ಕೇಳಬಹುದಿತ್ತು. ಆಗ ಕಿವಿಗೆ ಬಿದ್ದ ಎರಡು ಕಥನ ಕವನಗಳು ಇಂದಿಗೂ ನನಗೆ ನೆನಪಿವೆ..
ತುಂಗಾತೀರದ ಬಲಗಡೆಯಲ್ಲಿ ಹಿಂದಲ್ಲಿದ್ದಿತು ಬೊಮ್ಮನಹಳ್ಳಿ ಅಲ್ಲೇನಿಲಿಗಳ ಕಾಟವೆ ಕಾಟ ಅಲ್ಲಿಯ ಜನರಿಗೆ ಅತಿ ಗೋಳಾಟ ಎಂದು ಪ್ರಾರಂಭವಾಗುವ ಕವನ ಕೊನೆಯ ತನಕ ಗಮನ ಸೆಳೆಯುತಿತ್ತು. ಇದು ಕುವೆಂಪು ಅವರ ಕಿಂದರಿಜೋಗಿಯ ಪದ್ಯ ಎಂದು ಗೊತ್ತಿರಲಿಲ್ಲ. ಆದರೂ ಅದು ನಮ್ಮ ಮನ ಮುಟ್ಟಿತ್ತು. ಇನ್ನೊಂದು ನಮಗೆಲ್ಲರಿಗೂ ಹಿಡಿಸಿದ ಪದ್ಯವೆಂದರೆ: ಪುಣ್ಯ ಕೋಟಿಯ ಕಥೆ.
ಧರಣಿ ಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ನಾಟ ದೇಶದೊಳು ಇರುವ ಕಾಳಿಂಗನೆಂಬ ಗೊಲ್ಲನ ಪರಿಯನಾನೆಂತು ಪೇಳ್ವೆನು ಎಂದು ಪ್ರಾರಂಭವಾಗುವ ಸರಿಸುಮಾರು ಉದ್ದವಿದ್ದ ಈ ಪದ್ಯದ ಕೆಲವು ಭಾಗವನ್ನು ಅವರು ಅಭಿನಯಿಸಿ ತಿಳಿಸುವಾಗ ಕಣ್ಣಲ್ಲಿ ನೀರು ಬರುವುದು.
ಅಮ್ಮ ನೀನು ಸಾಯಲೇಕೆ ನನ್ನ ತಬ್ಬಲಿ ಮಾಡಲೇಕೆ ಸುಮ್ಮನಿಲ್ಲಿಯೆ ನಿಲ್ಲು ಎಂದು ಅಮ್ಮನಿಗೆ ಕರು ಹೇಳಿತು ಎಂಬ ಕರುವಿನ ನುಡಿಯು ನಮ್ಮೆಲ್ಲರ ಭಾವನೆಯೆ ಆಗಿತ್ತು. ನಮಗಂತೂ ಹೇಗೋ ತಪ್ಪಿಸಿಕೊಂಡು ಬಂದ ಹಸು ಮತ್ತೆ ತಾನಾಗಿಯೆ ಹುಲಿಯ ಬಾಯಿಗೆ ಬೀಳಲು ಏಕೆ ಹೋಗುವುದು ಎಂದು ಅರ್ಥವೆ ಆಗಿರಲಿಲ್ಲ.
ಮುಂದೆ ಬಂದರೆ ಹಾಯಬೇಡಿ, ಹಿಂದೆ ಬಂದರೆ ಒದೆಯಬೇಡಿ ಕಂದ ನಿಮ್ಮವನೆಂದು ಕಾಣಿರಿ ತಬ್ಬಲಿಯನೀ ಕರುವನು ಎಂಬ ಹಸುವಿನ ಮನವಿಯನ್ನು ಕೇಳುವಾಗ ನಾವೆ ತಬ್ಬಲಿಗಲಾದಂತೆ ಅನಿಸುತಿತ್ತು. ಈ ಪದ್ಯವು ನಮಗೆ ಗೊತ್ತಿಲ್ಲದಂತೆ ಬಾಯಿ ಪಾಠವಾಗಿತ್ತು. ಇಂದಿಗೂ ಸುಮ್ಮನೆ ಕುಳಿತು ನೆನಸಿಕೊಂಡರೆ ತನ್ನಿಂದ ತಾನೆ ಬಾಯಿಗೆ ಬರುವುದು. ಈ ಹಾಡನ್ನು ನೆನಪಿಸಿಕೊಳ್ಳಲು ಈ ಮುಂದಿನ ವಿಡಿಯೋ ನೋಡಿ.
 

 ಮಕ್ಕಳಿಗೆ ಕಲಿಸಲು ಹಾಡು ಅಭಿನಯ ಬಹು ಉತ್ತಮ ಮಾಧ್ಯಮ ಎಂದು ಹೊಸ ಶೈಕ್ಷಣಿಕ ಸಂಶೋಧನೆಗಳು ಒತ್ತಿ ಹೇಳುತ್ತವೆ. ಆದರೆ ಏಳನೆ ತರಗತಿಯ ವರೆಗೆ ಮಾತ್ರ ಓದಿರಬಹುದಾದ ನಮ್ಮ ಗುರುಗಳು ಅದನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದರು. ಗುರು ಬಸಯ್ಯನವರು ಮಕ್ಕಳಂತೆಯೆ ಅವರ ಹೆತ್ತವರಿಗೂ ಬಹು ಪ್ರಿಯರಾಗಿದ್ದರು. ಅವರು ಸಣ್ಣ ಪುಟ್ಟ ಕಾಯಿಲೆಗೆ ನಾಟಿ ಔಷಧಿ ಕೊಡುತಿದ್ದರು. ಅದೂ ಅಲ್ಲದೆ ಹಟ ಮಾಡಿ ಅಳುವ ಮಕ್ಕಳಿಗೆ ಮಂತ್ರ ಹಾಕಿದರೆ ಅವು ಅಳು ನಿಲ್ಲಿಸುವವು ಎಂಬ ನಂಬಿಕೆ ಇತ್ತು. ಜಾನುವಾರಗಳು ಕಳೆದರೆ ಅವರು ಮಂತ್ರವನ್ನು ಒಂದು ಚೀಟಿಯನ್ನು ಬರೆದುಕೊಡುವರು. ಅದನ್ನು ಆ ರಾಸನ್ನು ಕಟ್ಟುವ ಗೂಟಕ್ಕೆ ಕಟ್ಟಿದರೆ ಜಾನುವಾರು ಎಲ್ಲಿದ್ದರೂ ಬರುವುದು ಎಂಬ ನಂಬಿಕೆ ವ್ಯಾಪಕವಾಗಿತ್ತು. ನಮ್ಮಮನೆಯಲ್ಲಿ ಕರುವೊಂದು ತಪ್ಪಿಸಿಕೊಂಡಿತ್ತು. ನಮ್ಮ ಅಜ್ಜಿ ಅವರಿಂದ ಚೀಟಿ ಬರೆಸಿಕೊಂಡು ಬಂದಳು. ಅದನ್ನು ಗೂಟಕ್ಕೆ ಕಟ್ಟು ಎಂದು ತಿಳಿಸಿದಳು. ನನಗೆ ಕುತೂಹಲ ನಾನು ಚೀಟಿಯನ್ನು ಬಿಚ್ಚಿ ನೋಡಿದೆ. ಅದರಲ್ಲಿ "ಶ್ರೀ ಕಾರ್ತವೀರ್ಯಾರ್ಜುನ ನಮಃ" ಎಂದು ಬರೆದಿದ್ದರು. ಜಮದಗ್ನಿ ಋಷಿಯ ಆಶ್ರಮದಲ್ಲಿದ್ದ ದೇವ ಧೇನುವನ್ನು ಕದ್ದು ನಂತರ ಪರಶುರಾಮನಿಂದ ಹತನಾದ ಆ ರಾಜನಿಗೂ ಕಳೆದುಹೋದ ದನಕ್ಕೂ ಏನು ಸಂಬಂಧ ಎಂದು ನನಗೆ ಗೊತ್ತಾಗಲೆ ಇಲ್ಲ. ಬಹುಶಃ ಅವನು ನಿನ್ನನ್ನೂ ಕದ್ದೊಯ್ಯುವನು ಎಂದು ದನಕ್ಕೆ ಹಾಕುವ ಬೆದರಿಕೆ ಇದಾಗಿರಬೇಕು. ಇದಲ್ಲದೆ ಅವರು ಮನೆಯ ಪಕ್ಕದಲ್ಲೆ ಒಂದು ಚಿಕ್ಕ ಕಿರಾಣಿ ಅಂಗಡಿ ಇಟ್ಟಿದ್ದರು. ಅವರ ಮಗನಿಗೆ ವಿದ್ಯೆ ಹತ್ತಿರಲಿಲ್ಲ. ಅವನನ್ನು ಹಾದಿ ಹತ್ತಿಸಲು ಮಾಡಿದ ಪ್ರಯತ್ನ ಅದಾಗಿತ್ತು. ಶಾಲೆಯ ನಂತರ ಅವರೆ ಕುಳಿತು ವ್ಯಾಪಾರ ಮಾಡುವರು. ಶಾಲೆಯ ಸಮಯದಲ್ಲಿ ಅವರ ಹೆಂಡತಿ ಗಲ್ಲೆಯ ಮೇಲೆ ಕೂಡುವರು. ಅಲ್ಲಿ ಸಿಗುವ ಕಮ್ಮಾರಗಟ್ಟಿ ಮಕ್ಕಳಿಗೆ ಅತಿ ಪ್ರಿಯ. ಅವರದು ಇನ್ನೊಂದು ಹೆಗ್ಗಳಿಕೆ ಎಂದರೆ ಶಾಲೆ ನಡೆಯುವ ಹೊತ್ತಿನಲ್ಲಿ ಯಾವ ಮಕ್ಕಳೂ ಅಂಗಡಿಗೆ ಬರುವಂತಿಲ್ಲ. ಹಾಗೇನಾದರೂ ಬಂದರೆ ತನಿಖೆ ಪ್ರಾರಂಭಿಸಿ ತಂದೆ ತಾಯಿಯರಿಗೆ ಸುದ್ದಿ ಮುಟ್ಟಿಸುತ್ತಿದ್ದರು. ಮಕ್ಕಳಿದ್ದ ತಾಯಿ ತಂದೆಯರಿಗೂ ಅಂಗಡಿಗೆ ಬಂದಾಗ ತಮ್ಮ ಮಕ್ಕಳನ್ನು ಸಾಲಿಗೆ ಹಚ್ಚಲು ತಿಳಿ ಹೇಳುವರು. ಆಗಲೆ ಅವರು ಸರ್ವ ಶಿಕ್ಷಣ ಅಭಿಯಾನದ ಕೆಲಸ ಮಾಡುತಿದ್ದರು. ಇದರಿಂದ ಶಾಲೆಯ ಹಾಜರಾತಿಯೂ ಹೆಚ್ಚಿತು. ಈ ಸರಕಾರಿ ಶಾಲೆ ಶುರುವಾದ ಒಂದೆರಡು ವರ್ಷದ ವರೆಗೆ ಸಾಲಿಗುಡಿ ಕುಟುಕು ಜೀವ ಹಿಡಿದಿತ್ತು. ಬರುಬರುತ್ತಾ ಹುಡುಗರ ಸಂಖ್ಯೆ ಕಡಿಮೆಯಾಗಿ ಒಂದು ದಿನ ಮುಚ್ಚಿಯೂ ಹೋಯಿತು. ಊರಿಗೆ ಹೋಗಿದ್ದ ಅಲ್ಲಿನ ಅಯ್ಯನವರು ಮತ್ತೆ ನಮ್ಮೂರಿಗೆ ಬರಲೇ ಇಲ್ಲ.
 

ಗುರುಬಸಯ್ಯನವರ ಒಬ್ಬನೇ ಮಗ!


ಗುರುಬಸಯ್ಯನವರ ಒಬ್ಬನೆ ಮಗ. ಶಿವಲಿಂಗ ಅವನ ಹೆಸರು. ಅವನನ್ನು ಮುದ್ದಿನಿಂದ ಶಿವಯ್ಯ ಎಂದು ಕರೆಯುತಿದ್ದರು. ಅವರು ಊರಿನ ಮಕ್ಕಳಿಗೆಲ್ಲ ಕಲಿಸುವ ಮೇಷ್ಟ್ರಾದರೂ ಅವನು ಮಾತ್ರ ಪಂಡಿತ ಪುತ್ರ. ಅವನಿಗೆ ಮಾತ್ರ ಓದು ಬರಹ ತಲೆಗೆ ಹತ್ತಲೇಇಲ್ಲ. ಅವನಿಗಾಗಿಯೇ ಅವರು ಅಂಗಡಿ ತೆರದದ್ದು. ದುಡ್ಡು ಬೇಕಾದಾಗ ಅಂಗಡಿಗೆ ಬರುತಿದ್ದ, ಎರಡೋ ಮೂರೊ ರೂಪಾಯಿ ವ್ಯಾಪಾರವಾದೊಡನೆ ಜಾಗ ಖಾಲಿ ಮಾಡುತಿದ್ದ. ಅವನೋ ಗುಂಡ್ರ ಗೂಳಿ. ಎಲ್ಲಿಯೂ ಕಾಲೂರಿ ಕುಳಿತವನಲ್ಲ. ಅವನು ಅಲ್ಲಿ ಇಲ್ಲಿ ಮೋಟಾರು ರಿಪೇರಿ ಕಲಿಯುವೆನೆಂದು ಓಡಾಡಿದ. ಹೊಸಪೇಟೆಯಲ್ಲಿ ವಾಹನ ದುರಸ್ತಿ ಕೆಲಸ ಮಾಡುತ್ತಿರುವೆ ಎಂದು ಹೇಳಿಕೊಳ್ಳುತ್ತಿದ್ದ. ಒಳ್ಳೆ ಕಟ್ಟುಮಸ್ತಾದ ಆಳು. ತಂದೆಯಂತೆಯೆ ಆಕರ್ಷಕ ಬಣ್ಣ. ಜತೆಗೆ ಬಹು ಜರ್ಬಾಗಿ ಉಡುಪು ಹಾಕುತಿದ್ದ. ಅವನೆಂದರೆ ಊರಿನ ಪಡ್ಡೆಗಳಿಗೆ ಅತೀವ ಆಕರ್ಷಣೆ. ಅವನು ಒಂದು ಸೈಕಲ್‌ ಇಟ್ಟಿದ್ದ. ಸೈಕಲ್‌ನ ಹ್ಯಾಂಡಲ್‌ ತೆಗೆದು ಅದಕ್ಕೆ ಮೋಟಾರಿನ ಸ್ಟೀರಿಂಗ್‌ ಜೋಡಿಸಿದ್ದ. ಅವನು ಸೈಕಲ್ಲು ಹತ್ತಿ ಬರುವ ಮೋಡಿಗೆ ಮರುಳಾಗದವರೆ ಇರಲಿಲ್ಲ. ಅದನ್ನು ನೋಡಿದವರೆಲ್ಲ ಕಣ್ಣರಳಿಸುತಿದ್ದರು. ಆದರೆ ಬಸಯ್ಯನವರು ಮಾತ್ರ ಸದಾ ಅವನನ್ನು ಯಾವುದೆ ಉಪಯೋಗಕ್ಕೆ ಬಾರದವನು, ಕೆಲಸಗೇಡಿ ಎಂದೆ ಬಯ್ಯುತಿದ್ದರು. ಅವನು ಅವರಿಗೆ ಒಬ್ಬನೆ ಮಗ. ತಾಯಿಯ ಪ್ರೀತಿಯ ಮಗ. ಹಾಗಾಗಿ ಮಾತು ನಡತೆ ಎಲ್ಲದರಲ್ಲೂ ಉಡಾಫೆ. ಮಜಾ ಉಡಾಯಿಸಿಕೊಂಡು ಓಡಾಡುತಿದ್ದ. ಎಲ್ಲಕ್ಕೂ ಕಳಶವಿಟ್ಟಂತೆ ಅವನು ಊರಲ್ಲಿ ಒಂದು ಘನಂದಾರಿ ಕೆಲಸ ಮಾಡಿದ. ಹೇಗೆ ಹಣ ಹೊಂಚಿದನೋ ತಿಳಿಯದು, ಆದರೆ ಗ್ರಾಮದ ದೇವದಾಸಿಯೊಬ್ಬಳ ಮಗಳನ್ನು ಹೆಣ್ಣು ಮಾಡಿದ. ಆಗ ಇನ್ನೂ ದೇವದಾಸಿ ಪದ್ಧತಿ ಪ್ರಚಲಿತವಿದ್ದಿತು. ಊರಿನ ಹಣವಂತರು, ಕುರುಬಗೌಡರು ಈ ಕೆಲಸದಲ್ಲಿ ನಾಮುಂದು ತಾಮುಂದು ಎಂದು ಬರುತ್ತಿದ್ದರು. ಅದು ಅವರ ಘನತೆಯ ಕುರುಹು. ಹೆಣ್ಣು ಮಾಡುವುದು ಅಂದರೆ ವಿಶೇಷ ಗೌರವ. ಹುಡುಗಿ ದೊಡ್ಡವಳಾದ ಮೇಲೆ ಯಾರು ಹೆಚ್ಚು ಹಣ ಕೊಡುವರೋ ಅವರ ಜತೆ ಅವಳಿಗೆ ಆ ಸಮಾರಂಭ. ಅದೂ ಒಂದು ಸಣ್ಣ ಮದುವೆಯಂತೆ. ಆದರೆ ಬೀಗರು ಬಿಜ್ಜರು ಮಾತ್ರ ಇಲ್ಲ. ಮೊದಲು ದೇವರ ಹೆಸರಲ್ಲಿ ತಾಳಿ ಕಟ್ಟಿಸುವರು. ನಂತರ ಆರತಿ, ಮೆರವಣಿಗೆ ಇತ್ಯಾದಿ ಸಂಭ್ರಮಗಳು. ಒಂದು ವರ್ಷ ಅವಳು ಅವನ ಜತೆ ಮಾಡಿಕೊಂಡ ಹೆಂಡತಿಯಂತೆ ನಿಯತ್ತಿನಿಂದ ಬಾಳಬೇಕು. ಮೊದಲೆ ನಿಗದಿಯಾದಂತೆ ಹಣ, ವಡವೆ, ವಸ್ತ್ರ ಕೊಟ್ಟು ಅವಳ ಎಲ್ಲ ಖರ್ಚನ್ನು ಒಂದು ವರ್ಷ ಅವನು ನಿಭಾಯಿಸಬೇಕು. ಶಿವಲಿಂಗಯ್ಯ ಅದೆಲ್ಲಿ ಹಣ ಹೊಂಚಿದನೋ ಯಾರಿಗೂ ತಿಳಿಯದು. ಪರ ಊರಿನಿಂದ ಬಂದವನಾದರೂ, ಸ್ಥಳೀಯರಾದ ಪ್ರಬಲರ ಮೀಸೆ ಮಣ್ಣಾಗುವಂತೆ ಮಾಡಿದ. ನಿವೃತ್ತಿಯ ಅಂಚಿನಲ್ಲಿದ್ದ ಬಸಯ್ಯನವರಿಗೆ ಇದನ್ನು ಸಹಿಸುವುದು ಆಗಲಿಲ್ಲ. ಸಮಾಜದಲ್ಲಿ ಶಿಕ್ಷಕರು ಆದರ್ಶವಾಗಿರಬೇಕು ಎಂಬುದು ಅಂದಿನ ನಂಬಿಕೆ. ಬೇರೆ ಯಾರು ಏನು ಮಾಡಿದರೂ ಪರವಾ ಇಲ್ಲ, ಅಕ್ಷರ ಕಲಿಸುವರು ಮಾದರಿಯಾಗಿರಬೇಕು. ಅದೆ ಅಳತೆಗೋಲು ಅವರ ಮನೆಯಲ್ಲಿನ ಜನರಿಗೂ ಇರುತಿತ್ತು.

Sunday, August 19, 2012

ರೂಪಾಯಿಗೆ ತೊಂಬತ್ತಾರು ಪೈಸೆಗಳು!


“ ಮಕ್ಕಳನ್ನು ಮಾರಿಯಾದರೂ ಮಾರ್ನವಮಿ ಮಾಡು" ಎಂಬುದು ಒಂದು ಕಾಲದಲ್ಲಿ ಹಳ್ಳಿಗಳಲ್ಲಿ ಇದ್ದ ರೂಢಿಯ ಮಾತು. ಮಾರ್ನವಮಿ ದೊಡ್ಡ ಹಬ್ಬ. ಅದೂ ಹತ್ತು ದಿನದ್ದು. ಅದಕ್ಕೆ ಮಾರ್ನವಮಿಗೆ ಹೊಸ ಬಟ್ಟೆ ಬೇಕೆ ಬೇಕು. ಆಗಿನ್ನೂ ರಾಜಾಸ್ತಾನದ ಮಾರವಾಡಿಗಳು ಬಟ್ಟೆ ಅಂಗಡಿಗಳನ್ನು ಎಲ್ಲೆಂದರೆ ಅಲ್ಲಿ ತೆರದಿರಲಿಲ್ಲ. ಆಗ ವ್ಯಾಪಾರ ಏನಿದ್ದರೂ ಸೆಟ್ಟರ ಸ್ವತ್ತು. ಹೊಸಪೇಟೆಯಲ್ಲಿ ಕಾಕುಬಾಳ ಸೆಟ್ಟರು ಮತ್ತು ಪೆಂಡಕೂರು ಸೆಟ್ಟರ ಅಂಗಡಿ ಬಹು ಹೆಸರುವಾಸಿ. ಆದರೆ ಅವರ ವ್ಯಾಪಾರ ಪಟ್ಟಣಕ್ಕೆ ಸೀಮಿತ. ಅದಕ್ಕೆ ನಮ್ಮ ಹಳ್ಳಿಯಲ್ಲಿ ಯಾರೋ ಆಂಧ್ರದ ಕಡೆಯವರು ರಾಮಯ್ಯ ಅಂತ ಅವರ ಹೆಸರು. ಅವರು ಬಟ್ಟೆ ತಂದು ಉದ್ದರಿಯಲ್ಲಿ ಕೊಡುತ್ತಿದ್ದರು. ಆಗ ಅವರ ಅಂಗಡಿ ದುರುಗಮ್ಮನ ಗುಡಿ. ಆಗ ನಮ್ಮ ಶಾಲೆಗೆ ರಜೆ. ಅದಕ್ಕೆ ನಮಗೆ ದಸರೆಗೆ ಮುಂಚೆ ಹತ್ತು ದಿನದಿಂದ ದೀಪಾವಳಿವರೆಗೆ ರಜೆ. ಕಾರಣ ಆಗ ಗುಡಿಯಲ್ಲಿ ಬಟ್ಟೆ ಅಂಗಡಿ ಬಿಡಾರ ಹೂಡುತಿತ್ತು. ಆದರೆ ನಮ್ಮ ಅಯ್ಯನವರು ನಮ್ಮನ್ನು ಸುಮ್ಮನೆ ಬಿಡುತ್ತಿರಲಿಲ್ಲ. ಆಯ್ದ ಮತ್ತು ಆಸಕ್ತಿ ಇದ್ದವರಿಗೆ ದಸರೆ ಹಾಡುಗಳನ್ನು ಕೋಲಾಟವನ್ನು ಕಲಿಸಿ, ತಾವು ಜತೆಯಲ್ಲಿದ್ದು ಮನೆ ಮನೆಗೆ ಕೋಲು ಹಾಕಲು ಕರೆದೊಯ್ಯುವುದು ವಾಡಿಕೆ. ನಾವೂ ಉತ್ಸಾಹದಿಂದಲೆ ಹೋಗುತ್ತಿದ್ದೆವು. ರೈತರು ತಮ್ಮ ಅಗತ್ಯಕ್ಕೆ, ಯೋಗ್ಯತಾನುಸಾರವಾಗಿ ನೂರು ಇನ್ನೂರು ರೂಪಾಯಿಯ ಬಟ್ಟೆಯನ್ನು ಹಬ್ಬಕ್ಕೆ ಕೊಳ್ಳುತ್ತಿದ್ದರು. ಅವರ ಜೊತೆಯಲ್ಲಿಯೇ ಒಬ್ಬ ಸಿಂಪಿಗನೂ ಬರುತ್ತಿದ್ದ. ಅವನು ಅಲ್ಲಿಯೇ ಹುಡುಗರಿಗೆ ಅಂಗಿ, ಚೊಣ್ಣ; ಹುಡುಗಿಯರಿಗೆ ಪರಕಾರ, ಜಂಪರ್‌, ಪೋಲಕ; ಹೆಂಗಸರಿಗೆ ಕುಬುಸ ಹೊಲಿದು ಕೊಡುತಿದ್ದ. ಆಗ ರೈತ ಮಹಿಳೆಯರಲ್ಲಿ ಏಕ ಬಗಲಿನ ಕುಬಸ ಸಾರ್ವತ್ರಿಕವಾಗಿತ್ತು. ಅದು ಫ್ಯಾಷನ್‌ ಅಂತ ಅಲ್ಲ. ಹೊಲದಲ್ಲಿ ದುಡಿಯುವ, ಮನೆಯಲ್ಲಿ ಕುಟ್ಟಿ ಬೀಸಿ ಮಾಡುವ ಹೆಂಗಸರು ರಟ್ಟೆ ಮುರಿಯುವ ಹಾಗೆ ಕೆಲಸ ಮಾಡುತ್ತಿದ್ದರು. ಅದರಿಂದ ಬೆವರೂ ಜಾಸ್ತಿ. ಹಾಗಾಗಿ ಅದು ಬೇಗ ಹರಿಯದೆ ಬಾಳಿಕೆ ಬರಲೆಂದು ಆ ಉಪಾಯ. ರೈತರು ಕೊಳ್ಳುವಾಗ ಬಟ್ಟೆಯ ಬೆಲೆಯಲ್ಲಿ ಆಗ ಅಷ್ಟೋ ಇಷ್ಟೋ ಕೊಟ್ಟು ಉಳಿದುದನ್ನು ಸುಗ್ಗಿಯಾದ ಮೇಲೆ ಕೊಡುತ್ತಿದ್ದರು. ದಸರೆಗೆ ಕೊಂಡವರ ಬಾಕಿಯನ್ನು ವಸೂಲಿ ಮಾಡಲು ಉಗಾದಿ ಹೊತ್ತಿಗೆ ಬರುತ್ತಿದ್ದರು. ಅದಕ್ಕೆ ಉಗಾದಿ ಉದ್ದರಿ ಎಂಬ ಮಾತು ಚಾಲ್ತಿಯಲ್ಲಿ ಬಂದಿರುವುದು. ಅಷ್ಟು ಹೊತ್ತಿಗೆ ಕಾಳು ಕಡಿ ಹೊಲದಿಂದ ಮನೆಗೆ ಬಂದು ಚೀಲಗಟ್ಟಲೆ ಬಿದ್ದಿರುತಿತ್ತು. ಗಿದ್ನ ಧಾನ್ಯವನ್ನು ಹೊರಗೆ ಹಾಗೆ ಅಟ್ಟಣಿಗೆಯ ಮೇಲೆ ಇಡುತ್ತಿದ್ದರು. ಗಿದ್ನ ಅಂದರೆ ಮೂವತ್ತೆರಡು ಸೇರು, ಗೂಡಿ ಎಂದರೆ ೬೪ ಸೇರು, ಪಲ್ಲ ಎಂದರೆ ೧೦೦ ಸೇರು. ಆಗ ಧಾನ್ಯಗಳನ್ನು ಚಿಟಿಕೆ, ಮುಷ್ಟಿ, ಬೊಗಸೆ, ಅರಪಾವು, ಪಾವು, ಅಚ್ಚೇರು, ಸೇರು, ಗಿದ್ನ, ಗೂಡಿ, ಪಲ್ಲ ಮತ್ತು ಖಂಡುಗ ಎಂಬ ಅಳತೆಗಳಲ್ಲಿ ಕೊಟ್ಟು-ತಗಂಡು ಮಾಡುತ್ತಿದ್ದರು. ಗಿದ್ನ ಎಂಬ ಪದ ಚಿಕ್ಕಪುಟ್ಟ ವ್ಯವಹಾರಕ್ಕೆ ಬಳಕೆಯಾಗುತಿತ್ತು. "ಗಿದ್ನ ಜೋಳ ಕೊಟ್ಟು ಗೌಡನ ಗೆಣಕಾತಿ ಅನಿಸಿಕೊಳ್ಳುತ್ತಾಳೆ" ಎಂದು ಹೆಸರಿನ ಹಪಹಪಿ ಇರುವ ಹೆಂಗಸನ್ನು ಹಂಗಿಸುವರು. ಗೂಡಿಗಟ್ಟಲೆ ಜೋಳ ಇದ್ದರೆ ಹಗೇವು ಬೇಕು. ಜೋಳವನ್ನು ಹಗೇವಿನಲ್ಲಿ ಹಾಕಿದ್ದರೆ, ಉಳಿದ ಧಾನ್ಯಗಳನ್ನು ಪಲ್ಲಗಟ್ಟಲೆ ನೆಲ್ಲನ್ನು ಗುಮ್ಮಿ, ಕೆರಸಿಯಲ್ಲಿ, ಖಂಡುಗಗಟ್ಟಲೆ ಭತ್ತವನ್ನು ಕಣಜದಲ್ಲಿ ಸಂಗ್ರಹಿಸುವುದು ವಾಡಿಕೆ. ಪ್ರತಿ ದೊಡ್ಡ ರೈತನದೂ ಅಂಗಳದಲ್ಲೆ ಒಂದು ಹಗೇವು ಇದ್ದೆ ಇರುತ್ತಿತ್ತು. ನಾಲಕ್ಕು ಅಡಿ ಆಳ ಅಗೆದ ನಂತರ ಕಲ್ಲಿನಲ್ಲಿ ಒಬ್ಬರು ಇಳಿಯುವಷ್ಟು ಬಾಯಿ, ನಂತರ ಅಗಲವಾದ ಭಾವಿಯಂತಹ ಟೊಳ್ಳು ಪ್ರದೇಶ. ಅದರಲ್ಲಿ ನೂರರಿಂದ ನೂರೈವತ್ತು ಚೀಲ ಜೋಳ ಸಂಗ್ರಹಿಸಬಹುದು. ಅದರಲ್ಲಿ ಜೋಳ ಹಾಕಿ ಬಾಯಿಯ ಮೇಲೆ ಭದ್ರವಾದ ಬಂಡೆ ಇಟ್ಟು ಮೇಲೆ ಮಣ್ಣು ಹಾಕಿದರೆ ಮುಗಿಯಿತು. ಅದರ ಮೇಲೆ ಹತ್ತು ಚೀಲ ಹೊತ್ತ ಬಂಡಿ ಓಡಿಸಿದರೂ ಜಪ್ಪಯ್ಯ ಅನ್ನುತ್ತಿರಲಿಲ್ಲ. ಜಡಿ ಮಳೆ ಬಂದು ಮೂರಡಿ ನೀರು ಹರಿದರೂ ಒಂದು ಹನಿಯೂ ಒಳ ಹೋಗುತ್ತಿರಲಿಲ್ಲ. ಮೂರು ತಿಂಗಳಿಗೋ ಆರು ತಿಂಗಳಿಗೋ ಒಮ್ಮೆ ಹಗೇವು ತೆಗೆದು ಮೂರುನಾಲಕ್ಕು ಚೀಲ ಒಟ್ಟಿಗೆ ಜೋಳ ಹೊರತೆಗೆಯುತ್ತಿದ್ದರು. ಎಲ್ಲರಿಗೂ ಹಗೇವೂ ಇರುತ್ತಿರಲಿಲ್ಲ. ಆಗ ಈಗಿನಂತೆ ಹೊಲದಿಂದ ಮಾರುಕಟ್ಟೆಗೆ ಧಾನ್ಯವನ್ನು ಸಾಗಹಾಕಿ ಮಾರುವ ಪದ್ಧತಿಯಿರಲಿಲ್ಲ. ಒಂದು ವರ್ಷ ಒಳ್ಳೆಯ ಮಳೆಯಾಗಿ ಸಮೃದ್ಧಿಯಾಗಿ ಬೆಳೆ ಬೆಳೆದರೆ ಮುಂದಿನ ಮೂರು ವರ್ಷಕ್ಕಾದರೂ ಅದೆ ಧಾನ್ಯವನ್ನು ಬಳಸುತಿದ್ದರು. ಧಾನ್ಯವನ್ನು ಸಂಗ್ರಹಿಸಲು ಹಗೇವು ಅತ್ಯುತ್ತಮ ಗೋಡೌನ್‌ ಆಗಿರುತ್ತಿತ್ತು. ಅದಕ್ಕೆ ಇಲಿಗಳ, ಕ್ರಿಮಿಕೀಟಗಳ ಬಾಧೆ ಇಲ್ಲ. ಕಳ್ಳಕಾಕರ ಭಯ ಇಲ್ಲ. ನೆಲದೊಳಗಣ ನಿಧಾನ ಅದು. ಹಾಕುವ ಮುಂಚೆ ಬೇವಿನ ಎಲೆಯ ಹೊಗೆ ಹಾಕಿ ತಳದಲ್ಲಿ ಹುಲ್ಲು ಹರವಿ ಈಚಲ ಚಾಪೆ ಹಾಕಿ ಗೋಡೆಗೆ ಜೋಳದ ಸಿವಿಡಿನಿಂದ ಮಾಡಿದ ಆವರಣವಿದ್ದರೆ ತೀರಿತು. ಜೋಳ ಸುರಕ್ಷಿತ. ಬಹಳ ಎಂದರೆ ಮೂರು ನಾಲಕ್ಕು ವರ್ಷವಾದ ಮೇಲೆ ತುಸು ಮುಗ್ಗಲು ವಾಸನೆ ಬರಬಹುದೆ ಹೊರತು ತಿನ್ನಲು ಏನೂ ತೊಂದರೆ ಇರುತ್ತಿರಲಿಲ್ಲ. ಜಡಿ ಮಳೆ ಬಂದು ಹಗೇವಿನ ಮೇಲೆ ಮೊಳಕಾಲಮಟ ನೀರು ಹರಿದರೂ ಹಗೇವಿನಲ್ಲಿ ಒಂದು ಹನಿ ನೀರು ಸೋರುತ್ತಿರಲಿಲ್ಲ. ಹಾಗೆ ಕಟ್ಟಿರುತ್ತಿದ್ದರು ಅವುಗಳನ್ನು. ಇನ್ನು ಕೆರಸಿ, ಕಣಜ ಭತ್ತದ ಸಂಗ್ರಹಕ್ಕೆ ಹತ್ತು ಇಪ್ಪತ್ತು ಗೂಡಿ ಭತ್ತವಿದ್ದರೆ ಬಿದಿರಿನ ಚಾಪೆಯಿಂದ ಕೆರಸಿ ಕಟ್ಟುತ್ತಿದ್ದರು. ಇನ್ನೂ ಹೆಚ್ಚಿನ ಸ್ಥಿತಿವಂತರಾದರೆ ಗಚ್ಚು ಗಾರೆಯಿಂದ ಗಾಳಿ, ತೇವ, ಇಲಿ, ಹೆಗ್ಗಣ ಹೋಗದಂತಹ ಬಂದೋಬಸ್ತು ಕೋಣೆಯ ತರಹ ಮೇಲಿನಿಂದ ಇಳಿಯಬಹುದಾದ ರಚನೆ ಹೊಂದಿರುತ್ತಿತ್ತು. ಅದರಲ್ಲಿ ಭತ್ತ ಸುರಿದರೆ ಬೇಕಾದಾಗ ಒಬ್ಬರು ಇಳಿದು ಪುಟ್ಟಿಯಲ್ಲಿ ತುಂಬಿಕೊಡಬೇಕು. ಇನ್ನು ನವಣೆ, ಸಾವೆ, ಹೆಸರು ಅಲಸಂದಿ, ಎಳ್ಳು, ಕುಸುಬಿ, ಗುರೆಳ್ಳುಗಳನ್ನು ಅಡಕಲ ಗಡಿಗೆಗಳಲ್ಲಿ ಸಂಗ್ರಹಿಸಿಡುತ್ತಿದ್ದರು. ಆ ಕೋಣೆಗೆ ಅಡಕಲ ಕೋಣೆಯೆಂದೆ ಹೆಸರಿತ್ತು. ಐವತ್ತು ಅರವತ್ತು ಸೇರು ಹಿಡಿಯಬಹುದಾದ ದೊಡ್ಡ ಗಡಿಗೆಯ ಮೇಲೆ ಕ್ರಮವಾಗಿ ಕಿರಿದಾಗುತ್ತಾ ಹೋಗುವ ಆರೇಳು ಗಡಿಗೆಗಳನ್ನು ಒಂದರ ಮೇಲೆ ಒಂದು ಜೋಡಿಸಿರುವುದನ್ನು ನೋಡುವುದೆ ಒಂದು ಚಂದ. ಪೂರ್ತಿ ಮೇಲಿರುವುದನ್ನು ಮಗಿ ಎಂದು ಕರೆಯುತಿದ್ದರು. ಅಡಕಲ ಗಡಿಗೆಯು ಅನೇಕ ಸಲ ಹಣ ಬಚ್ಚಿಡುವ ಸುರಕ್ಷಿತ ಜಾಗವಾಗಿತ್ತು. ಯಾವುದೋ ಗಡಿಗೆಯಲ್ಲಿನ ಧಾನ್ಯದಲ್ಲಿ ಬಟ್ಟೆಯಲ್ಲಿ ಕಟ್ಟಿ ಇಟ್ಟ ಗಂಟನ್ನು ಹುಡುಕುವುದು ಸರಳವಾಗಿರಲಿಲ್ಲ. ಇಟ್ಟವರಿಗೆ ಮಾತ್ರ ಗೊತ್ತಿರುತಿತ್ತು. ಮಗಿ ಅದು ಸಾಧಾರಣ ಒಂದು ತಂಬಿಗೆಯ ಗಾತ್ರದ್ದಾಗಿರುತ್ತಿತ್ತು. ಶುಭ ಕಾರ್ಯದಲ್ಲಿ ಅದನ್ನು ಬಹುವಾಗಿ ಬಳಸುತ್ತಿದ್ದರು. ಸಾಧಾರಣ ಅವುಗಳಿಗೆ ಸುಣ್ಣ ಹಚ್ಚಿರುತ್ತಿದ್ದರು. ಕಾರಣ ಅವು ಕತ್ತಲಲ್ಲಿ ಕಾಣಲಿ ಎಂದಿರಬೇಕು. ಮೇಲೆ ಕೆಮ್ಮಣ್ಣಿನ ಸಿಂಗಾರ ಬೇರೆ. ಅದು ಅಂದ ಚಂದ ಹೆಚ್ಚಿಸಿದರೂ, ಸುಣ್ಣಕ್ಕೆ ಕ್ರಿಮಿನಾಶಕ ಗುಣವಿರುವುದೂ ಒಂದು ಮುಖ್ಯ ಕಾರಣ. ಚೀಲಗಳನ್ನು ಅಟ್ಟಣಿಕೆಯ ಮೇಲೆ ಒಟ್ಟಿರುತ್ತಿದ್ದರು. ಅದು ಒಂದು ರೀತಿಯಲ್ಲಿ ಮಂಚ ಮತ್ತು ಬೆಂಚುಗಳ ಹೈಬ್ರೀಡ್‌ ನಂತಿರುತಿತ್ತು. ಬಟ್ಟೆ ರಾಮಯ್ಯ ಉಗಾದಿಗೆ ಬಂದವನು ತಿಂಗಳೆರಡು ತಿಂಗಳು ಬಾಕಿ ವಸೂಲಿಗೆ ಗ್ರಾಮದಲ್ಲೆ ತಂಗುತಿದ್ದ. ಪ್ರತಿ ದಿನ ಬಾಕಿದಾರರ ಬಾಗಿಲಿಗೆ ಹೋಗಿ ನಮಸ್ಕಾರ ಮಂಡಿ ಎಂದು ಅಟವಾಳಿಗೆಯಲ್ಲಿ ಕುಳಿತುಕೊಳ್ಳುತ್ತಿದ್ದ. ಅವರು ಹಾಲನ್ನೋ ಮಜ್ಜಿಗೆಯನ್ನೋ ಕುಡಿಯಲು ಕೊಟ್ಟರೆ ನೆಮ್ಮದಿಯಿಂದ ಕುಡಿದು ಅವರು ಕೊಟ್ಟಷ್ಟು ಹಣ ಪಡೆದು ಹೋಗುತ್ತಿದ್ದ. ಸಾಧಾರಣವಾಗಿ ಯಾರೂ ಒಟ್ಟಿಗೆ ಬಾಕಿ ಚುಕ್ತಾ ಮಾಡುತ್ತಿರಲಿಲ್ಲ. ವಾರಕ್ಕೆ ಇಷ್ಟು ಕೊಟ್ಟು ತಿಂಗಳುಗಟ್ಟಲೆ ಸತಾಯಿಸುತ್ತಿದ್ದರು. ಆದರೆ ಆ ಮುದುಕ ಬೇಸರಿಸದೆ ನಗುನಗುತ್ತಾ ವಸೂಲಿ ಮಾಡಿಕೊಳ್ಳುತ್ತಿದ್ದ. ನಮ್ಮ ಹಳ್ಳಿಯ ಕಡೆ ಉಗಾದಿ ಉದ್ರಿ ಎಂಬ ಮಾತು ಚಾಲ್ತಿಯಲ್ಲಿದೆ. ಬಹುಶಃ ಅದಕ್ಕೆ ಮೂಲ ಈ ರಾಮಯ್ಯನೇ ಇರಬಹುದೇನೋ ಎಂಬ ಗುಮಾನಿ ನನಗೆ. ಯಾರು ಎಷ್ಟೆ ಸತಾಯಿಸಿದರೂ ಮತ್ತೆ ದಸರೆಗೆ ಬಂದಾಗ ಆತನೇ ಕರೆದು ಏನಪ್ಪಾ, ಮಗಳಿಗೆ ಹೊಸ ಸೀರೆ ದಿವಿನಾದದ್ದು ಬಂದಿದೆ ತೆಗೆಸಿಕೊಡು ಎಂದು ಬಣ್ಣಾ ಬಣ್ಣಿಸಿ ಮಾರಾಟ ಮಾಡುತ್ತಿದ್ದ. ನನಗೆ ನೆನಪಿದ್ದಂತೆ ನಾನು ಹೈಸ್ಕೂಲಿಗೆ ಬರುವ ಹೊತ್ತಿಗೆ ಈ ರೀತಿಯ ವ್ಯಾಪಾರ ಕೊನೆಗೊಂಡಿತ್ತು. ಆತನಿಗೆ ವಯಸ್ಸಾದ್ದರಿಂದ ಬರಲಿಲ್ಲವೋ ಅಥವ ಅವನ ಮಕ್ಕಳು ಬೇರೆ ವ್ಯವಹಾರ ಶುರು ಮಾಡಿದರೋ ತಿಳಿಯದು. ಇಲ್ಲವೆ ಹತ್ತಿರದ ಹೊಸಪೇಟೆಯ ಸ್ಪರ್ಧೆ ಹೆಚ್ಚಾಯಿತೋ ಗೊತ್ತಿಲ್ಲ. ಆದರೆ ಪ್ರತಿವರ್ಷ ಕಾಣುತಿದ್ದ ಆ ನಗು ಮೊಗದ ಮುದುಕ ವ್ಯಾಪಾರಿ ಮಾತ್ರ ಕಾಣೆಯಾಗಿದ್ದ. ದಸರೆ ಸಮಯದ ಇನ್ನೊಂದು ವಿಶೇಷವೆಂದರೆ ಮಕ್ಕಳ ಕೋಲಾಟ. ನಮಗೆ ಈಗಾಗಲೆ ತರಬೇತಿಯಾಗಿರುತಿತ್ತು. ಹೊಸ ಬಟ್ಟೆ ಉಡಿಸಿ ಕಾಲಿಗೆ ಗೆಜ್ಜೆ ಕಟ್ಟಿಸಿ ಕೈಗೆ ಬಣ್ಣ ಬಳಿದ ಕೋಲುಗಳನ್ನು ಕೊಟ್ಟು ನಮ್ಮ ಅಯ್ಯ ಮನೆ ಮನೆಗೆ ದಸರಾ ಕೋಲು ಹಾಕಲು ಕರೆದೊಯ್ಯುತ್ತಿದ್ದರು. ಅದೂ ಎಲ್ಲರ ಮನೆಗಳಿಗಲ್ಲ, ಸ್ಥಿತಿವಂತರ ಮನೆಗೆ ಮಾತ್ರ. ಆದರೆ ಸಾಧಾರಣ ಜನರು ಮಕ್ಕಳು ತಮ್ಮ ಮನೆಗೆ ಬಂದು ಕೋಲು ಹಾಕಿ ಹಾಡು ಹಾಡುವುದು ಶುಭಸೂಚಕ ಎಂದು ಕರೆದು ಕೋಲು ಹಾಕಲು ಹಾಡು ಹೇಳಲು ಉತ್ತೇಜನ ನೀಡುತ್ತಿದ್ದರು ಎಂದು ನಾವು ಎಳೆಯರು ಅಲ್ಲಿ ಹೋಗಿ ಕೋಲು ಕುಟ್ಟುತ್ತಾ ಕುಣಿಕುಣಿದು ಹಾಡುತ್ತಿದ್ದೆವು. ನಮಗೆ ಹಿಮ್ಮೇಳವಾಗಿ ವಾದ್ಯ ಇರುತ್ತಿತ್ತು. ಆಶ್ವೀಜ ಶುದ್ಧ ಮಾರ್ನವಮಿ ಬರಲೆಂದು ಧನ ಧಾನ್ಯ ಸಮೃದ್ಧಿ ನಿಮಗೆ ತರಲೆಂದು ಹಾರೈಸುವೆವು ನಾವು ಬಾಲಕರು ಬಂದು... ಎಂದು ಮೊದಲಾಗಿ ಹಾಡುತ್ತಾ ಕೋಲು ಹೊಯ್ಯುತ್ತಿದ್ದೆವು. ಅದಕ್ಕೆ ಜೊತೆಯಾಗಿ ಒಂದು ಕೊರಳಿಗೆ ಜೋತು ಹಾಕಿದ ಹಾರ್ಮೊನಿಯಂ. ಕಿವಿಗೆ ಒತ್ತುತ್ತಿದ್ದ ಪಿಟೀಲು ಕುಯ್ಯುತ್ತಾ ಇದ್ದ ಬಗ್ಗುರಪ್ಪ, ದೊಡ್ಡದನಿಯಲ್ಲಿ ದಸರೆ ಹಾಡುವ ನಮ್ಮ ಅಯ್ಯನವರೂ ಇರುತ್ತಿದ್ದರು. ಮಾರ್ನವಮಿ ದಿಬ್ಬ (ಹಂಪೆ) ಮನೆ ಮನೆಯಲ್ಲು ಕಾಳು ಕಡಿ, ಜತೆಗೆ ಎಂಟಾಣೆ, ರೂಪಾಯಿ ದಕ್ಷಿಣೆ ಸಿಗುತಿತ್ತು. ನಮಗೂ ಆಗೀಗ ಮಜ್ಜಿಗೆ, ಕಡಲೆ, ಮಂಡಾಳಿನ ಸಮಾರಾಧನೆಯಾಗುತ್ತಿತ್ತು. ಒಮ್ಮೊಮ್ಮೆ ಬೆಂಡು ಬತ್ತಾಸು. ಕೆಲವರ ಮನೆಯಲ್ಲಿ ಮಾದಲಿ, ಕಡಬು, ಸಿಗುತ್ತಾ ಇತ್ತು. ಎಗ್ಗಿಲ್ಲದೆ ಎಲ್ಲರೂ ತಿನ್ನುತಿದ್ದರು. ಒಬ್ಬಿಬ್ಬರು ಮಾತ್ರ ಬಿಂಕ ಮಾಡಬೇಡ ಎಂದು ಬಾಯಲ್ಲಿ ನೀರು ಸುರಿಸುತ್ತಾ ಸುಮ್ಮನೆ ನೋಡುತ್ತಿದ್ದರು. ದಸರೆಯ ಹತ್ತು ದಿನ ಬೆಳಗಿನ ಹೊತ್ತು ಸಾಲಿ ಹುಡುಗರ ಗಡಿಬಿಡಿಯಾದರೆ ರಾತ್ರಿ ಏಳಕ್ಕೆ ಪ್ರಾರಂಭವಾಗುತಿತ್ತು ಹದಿ ಹರೆಯದವರ ಹುಡುದಿ. ಬೆಳದಿಂಗಳ ರಾತ್ರಿಯಲ್ಲಿ ಉಪ್ಪಿನಾಟ, ಅಕ್ಕಿ ಆಟ, ಗುಂಡು ಎತ್ತುವುದು, ಅದಕ್ಕೂ ಮಿಗಿಲಾಗಿ ಕೋಲಾಟದ ಅಭ್ಯಾಸ. ಸುಮಾರು ೨-೩ ತಾಸು ಓಣಿಯಲ್ಲಿ ಅವರ ಕಂಚಿನ ಕಂಠದ ಹಾಡು ಮತ್ತು ಕೋಲಿನ ಕಟಕಟ ಶಬ್ದ ಮಾರ್ದನಿಸುತ್ತಿದ್ದವು. ಅವು ಮುಗಿಯುತ್ತಿದ್ದದ್ದೂ ದೇವರ ಬನ್ನಿ ದಿನ. ಅಂದು ಸುಮಾರು ಆರು ಮೈಲು ದೂರದ ಗುಡ್ಡದಲ್ಲಿನ ದೇವರ ದರ್ಶನಕ್ಕೆ ಸುತ್ತಲ ಹತ್ತು ಹಳ್ಳಿಯವರು ಹೋಗುವರು. ಆಗ ಹಾದಿಯುದ್ದಕ್ಕೂ ಕೋಲು ಹಾಕುತ್ತಾ ಹೋಗುವ ಅವರ ಸಂಭ್ರಮ ಮತ್ತು ಶಾರೀರಿಕ ಶಕ್ತಿಯನ್ನು ಇಂದು ನೋಡಲು ಸಾಧ್ಯವೇ ಇಲ್ಲ. ಒಬ್ಬರಿಗಿಂತ ಒಬ್ಬರು ಪೈಪೋಟಿಯಲ್ಲಿ ಕೋಲು ಹಾಕುತ್ತಿದ್ದರೆ ನಿಂತು ನೋಡುವ ಹೆಂಗಳೆಯರಿಗೆ ಅದೇನು ಗಮ್ಮತ್ತು. ಅವರ ನಗೆ, ಉದ್ಗಾರಗಳಿಂದ ಯುವಕರು ನೆಲದ ಮೇಲೆ ಕಾಲೆ ಇಡುವುದಿಲ್ಲವೇನೋ ಎನ್ನುವಂತೆ ಕುಣಿಯುತ್ತಾ ಕೋಲಾಟವಾಡುತ್ತಿದ್ದರು. ಅವರ ವೇಗ, ಕೋಲು ಬೀಸುವ ರಭಸ, ವಿವಿಧ ವಿನ್ಯಾಸದಲ್ಲಿ ನಿಂತು, ಕುಂತು ಕೋಲೂ ತಾಗಿಸುವ ವರಸೆ ಕಣ್ಣಿಗೆ ಒಂದು ಹಬ್ಬ. ಇದು ಕೊನೆಗೊಂಡಾಗ ಎಲ್ಲರಿಗೂ ಅಯ್ಯೋ ಮುಗಿಯಿತಲ್ಲಾ ಎನ್ನುವ ಕೊರಗು. ಮತ್ತೆ ಮುಂದಿನ ದಸರೆಗೆ ಬರುವುದಲ್ಲಾ ಎಂಬ ಭರವಸೆ. ಹಬ್ಬದ ಬನ್ನಿಯಾದ ಮಾರನೆ ದಿನ ಊರ ಬನ್ನಿ. ಅಂದು ಊರೆಲ್ಲ ಸಡಗರ. ಸಂಜೆಯ ಹೊತ್ತಿಗೆ ಗಂಡಸರು ಮಕ್ಕಳೂ ಹೊಸ ಬಟ್ಟೆ ಉಟ್ಟು ಗುಡಿಯಿಂದ ಗೌಡರ ನೇತೃತ್ವದಲ್ಲಿ ಮೆರವಣಿಗೆ ಹೊರಡುತ್ತಿದ್ದರು. ಆಗ ಕೈನಲ್ಲಿ ಕತ್ತಿ ಕಠಾರಿ, ಭರ್ಚಿ ಹಿಡಿದಿರುತ್ತಿದ್ದರು. ಅವು ಇದ್ದವರ ಮನೆಯಲ್ಲಿ ಬೇರೆ ದಿನಗಳಲ್ಲಿ ಅವನ್ನು ಮಾಳಿಗೆಯ ಚಾಪೆ ಕೆಳಗೆ ಸಿಕ್ಕಿಸಿರುತಿದ್ದರು. ಆಯುಧ ಪೂಜೆಯ ದಿನ ಅವನ್ನು ಹೊರತೆಗೆದು ತೊಳೆದು ವಿಭೂತಿ ಹಚ್ಚಿ ಭರ್ಜರಿ ಪೂಜೆ ಮಾಡುವರು. ಬನ್ನಿ ಮುಡಿಯುವಾಗ ಅವನ್ನು ಹಿಡಿದು ಹೊರಡುತ್ತಿದ್ದರು. ಆಗ ಗೌಡರ ಮನೆಯಲ್ಲಿದ್ದ ಕೋವಿಯೊಂದು ತಳವಾರನ ಹೆಗಲಮೇಲೆ ರಾರಾಜಿಸುತಿತ್ತು. ಚಿಕ್ಕ ಮಕ್ಕಳಿಗೆಲ್ಲ ಅದು ಒಂದು ಕೌತುಕದ ವಸ್ತು. ಹೀಗೆ ಡೊಳ್ಳು ತಮಟೆ, ಶಹನಾಯಿಯೊಡನೆ ಮೆರವಣಿಗೆ ಮೊದಲಾಗುತಿತ್ತು. ಆ ದಿನ ವಿಜಯದಶಮಿ. ಅಂದರೆ ಸೀಮೋಲ್ಲಂಘನೆ ಮಾಡುವ ದಿನ. ಮೈಸೂರ ಅರಸರ ವಿಜೃಂಭಣೆಯ ದಸರಾ ಮೆರವಣಿಗೆಗೆ ಇದೆ ಮೂಲ. ಕಾರಣ ವಿಜಯನಗರದ ಅರಸರ ದಸರಾ ಆಚರಣೆ ಜಗತ್‌ ಪ್ರಸಿದ್ದ. ಈಗಲೂ ಹಾಳು ಪಟ್ಟಣದಲ್ಲಿ ಮಾರ್ನವಮಿ ದಿಬ್ಬ ಅದಕ್ಕೆ ಸಾಕ್ಷಿ. ಅದೂ ಅಲ್ಲದೆ ಇದಕ್ಕೆ ಪೌರಾಣಿಕ ಹಿನ್ನೆಲೆಯೂ ಇದೆ. ಅಂದು ಪಾಂಡವರು ಅಜ್ಞಾತವಾಸ ಮುಗಿಸಿ ವಿರಾಟ ನಗರದಿಂದ ಹೊರಟು ಶಮೀ ವೃಕ್ಷದಲ್ಲಿ ಅಡಗಿಸಿದ್ದ ಆಯುಧಗಳನ್ನು ಪಡೆದು ಯುದ್ಧಕ್ಕೆ ಹೊರಟರೆಂದು ನಂಬಿಕೆ. ಅದರ ಸಂಕೇತವಾಗಿ ಊರವರೆಲ್ಲ ಹಿರಿಯರೊಡನೆ ಸೇರಿ ಊರ ಹೊರಗಿನ ಹೊಲದಲ್ಲಿನ ಒಂದು ಬನ್ನಿಗಿಡಕ್ಕೆ ಹೋಗಿ ಆಯುಧಗಳನ್ನು ಅಲ್ಲಿ ಇಟ್ಟು ಪೂಜೆ ಮಾಡಿ ನಂತರ ಬನ್ನಿ ಸೊಪ್ಪನ್ನು ಹರಿದುಕೊಂಡು ಊರ ಕಡೆ ಹೊರಡುವರು. ಊರಿನಲ್ಲಿ ಮೊದಲು ಹನುಮಂತರಾಯನಿಗೆ ಬನ್ನಿ ನೀಡಿ ನಂತರ ಹಿರಿಯರಿಗೆಲ್ಲ ಬನ್ನಿ ನೀಡಿ ನಮಸ್ಕರಿಸುವುದು ವಾಡಿಕೆ. ಎಲ್ಲರ ಬಾಯಲ್ಲೂ "ಬನ್ನಿ ತೊಗಂಡು ಬಂಗಾರದ ಹಾಗಿರಿ" ಎನ್ನುವ ಮಾತು. ಎಷ್ಟೆ ಹಳೆಯ ಜಗಳ ಇರಲಿ ರಾಜಿಯಾಗಲು ಅಂದು ಒಳ್ಳೆಯ ಸಂದರ್ಭ. ಮನಸ್ತಾಪ ಮರೆಯಲು ಉತ್ತಮ ಅವಕಾಶ. ದಸರೆಯ ದಿನ ಮನೆ ಮನೆಗೆ ಹೋಗಿ ಬನ್ನಿ ಕೊಡುವುದರೊಂದಿಗೆ ಹಬ್ಬದ ಹುರುಪು ಇಳಿಯುತಿತ್ತು. ಅಂದು ಸಂಜೆ ನಾವು ಹುಡುಗರಿಗೆ ಖುಷಿಯೋ ಖುಷಿ. ಅದರಲ್ಲೂ ಅಂಗಡಿಯವರು, ಕೆಲ ಯಜಮಾನರು ಬನ್ನಿ ತೆಗೆದುಕೊಂಡು ನಮಗೆ ವಾಪಸ್ಸು ಬನ್ನಿಯ ಜೊತೆಗೆ ಕಾಸು ಕೊಡುತ್ತಿದ್ದರು. ಅದೂ ಬಟ್ಟು ಅರ್ಧಾಣೆ ಕೊಡುವರು. ಯಾರಿಗೆ ಎಷ್ಟು ಹಣ ಬಂದಿದೆ ಎಂದು ಲೆಕ್ಕ ಹಾಕುವುದರಲ್ಲೆ ಮುಂದಿನ ಎರಡು ದಿನ ಕಳೆದುಹೋಗುತ್ತಿತ್ತು. ನಾವು ಪೈಪೋಟಿಯಲ್ಲಿ ಎಲ್ಲರ ಮನೆಗೆ ಹೋಗಿ ಬನ್ನಿ ಕೊಡುತ್ತಿದ್ದೆವು. ರಾತ್ರಿ ಊಟದ ಮುಂಚೆ ನಮ್ಮನ್ನೆಲ್ಲ ಕೂಡಿಸಿಕೊಂಡು ನಮ್ಮ ಅಜ್ಜಿ, `ಶಮೇ ಶಮಯತೆ ಪಾಪಂ ಶಮೆ ಶತ್ರು ನಿವಾರಣಂ ಅರ್ಜುನಸ್ಯ ಧನುರ್ಧಾರಿ ರಾಮಸ್ಯ ಪ್ರಿಯದರ್ಶನಂ' ಎಂಬ ಶ್ಲೋಕ ಹೇಳಿಸುತಿದ್ದರು. ನಮಗೋ ಸಂಗ್ರಹವಾದ ಕಾಸನ್ನು ಎಣಿಸುವ ಆತುರ. ಆದರೂ ಅವರು ಬಿಡುತ್ತಿರಲಿಲ್ಲ. ಅದರಿಂದ ಒಳ್ಳೆಯದಾಗುವುದು ಎನ್ನುತ್ತಿದ್ದರು.

ಸಾಲಿ ಗುಡಿ


ನಾ ನು ಮೊದಲು ಅಕ್ಷರ ಕಲಿತದ್ದು ನಮ್ಮೂರಿನ ದುರುಗಮ್ಮನ ಗುಡಿಯಲ್ಲಿ. ಅದಕ್ಕೆ ಕಾರಣ ಸ್ಕೂಲು ನಡೆಯುತ್ತಿದುದೇ ಗುಡಿಯಲ್ಲಿ. ಅದನ್ನು ನಾವು ಸಾಲಿಗುಡಿ ಎನ್ನುತ್ತಿದ್ದೆವು. ಅಲ್ಲಿ ಒಬ್ಬ ಅಯ್ಯನವರು ನಮಗೆ ಗುರುಗಳು. ಅಯ್ಯ ಎನ್ನುವುದು ವೃತ್ತಿ ವಾಚಕವೋ, ಜಾತಿ ಸೂಚಕವೋ ಎಂದು ಯೋಚಿಸುವ ವಯಸ್ಸು ಅದಲ್ಲ. ಎಲ್ಲರೂ ಅವರನ್ನು ಗೌರವಪೂರ್ವಕವಾಗಿ `ಅಯ್ಯನೋರೆ’ ಎನ್ನುತ್ತಿದ್ದರು. ಅದೇನೂ ಸರಕಾರದಿಂದ ಮಂಜೂರಾತಿ ಪಡೆದ ಶಾಲೆಯಲ್ಲ. ಅಲ್ಲಿ ಇಂದಿನ ಹಾಗೆ ಹಲವು ಹತ್ತು ವಿಷಯಗಳಿರಲಿಲ್ಲ. ಭಾಷೆ ಮತ್ತು ಲೆಕ್ಕ. ಎರಡನ್ನು ಮಾತ್ರ ಖಚಿತವಾಗಿ ಕಲಿಸುತಿದ್ದರು. ಭಾಷೆ ಎಂದರೆ ಕನ್ನಡ. ಅಕ್ಷರ ಕಲಿಯುವ ಮೊದಲು ಅಲ್ಲಿ ಪ್ರಭವ, ವಿಭವ ಇತ್ಯಾದಿ ಅರವತ್ತು ಸಂವತ್ಸರಗಳು, ಆರು ಋತುಗಳು, ಚೈತ್ರದಿಂದ ಶುರುವಾಗುವ ಹನ್ನೆರಡು ಮಾಸಗಳ ಹೆಸರುಗಳು, ಇಪ್ಪತ್ತನಾಲಕ್ಕು ಪಕ್ಷ, ಹದಿನೈದು ತಿಥಿ ಮತ್ತು ಅಶ್ವಿನಿ ಭರಣಿ ಮೊದಲಾದ ಇಪ್ಪತ್ತೇಳು ನಕ್ಷತ್ರಗಳು ಬಾಯಿ ಪಾಠವಾಗಬೇಕಿತ್ತು. ಅದರಲ್ಲೂ ಚೈತ್ರ ಶುದ್ಧ ದವನದ ಹುಣ್ಣಿಮೆ, ವೈಶಾಖ ಶುದ್ಧ ಆಗಿ ಹುಣ್ಣಿಮೆಯಿಂದ ಹಿಡಿದು ಪಾಲ್ಗುಣ ಶುದ್ಧ ಹೋಳಿ ಹುಣಿಮೆಯವರೆಗೆ, ಅದೇ ರೀತಿ ಚೈತ್ರ ಬಹುಳ ಯುಗಾದಿ ಅಮವಾಸ್ಯೆಯಿಂದ ಹಿಡಿದು ಆಶ್ವೀಜದ ಬಹುಳದ ದೀಪಾವಳಿ ಅಮವಾಸ್ಯೆಯ ವರೆಗಿನ ಹನ್ನೆರಡು ಅಮವಾಸ್ಯೆಗಳ ಹೆಸರನ್ನು ಕೇಳಿದಲ್ಲಿ ಪಟ್ಟನೆ ಹೇಳದಿದ್ದರೆ ಛಡಿ ಏಟು ಬೀಳುತಿತ್ತು. ಅಲ್ಲಿ ಹೆಚ್ಚು ಕಲಿತವರು ಎಂದರೆ ಅಮರಕೋಶ ಹೇಳುವವರು. ರಾಜ, ಭುಪ, ಅವನಿಪ, ಒಡೆಯ, ಅರಸ, ಭೂಪಾಲ ಹೀಗೆ ಒಂದು ಪದಕ್ಕೆ ಹತ್ತು ಹಲವಾರು ಪರ್ಯಾಯ ಪದಗಳು. ಪದ ಭಂಡಾರವೇ ಕಂಠಸ್ಥವಾಗಿರುತಿತ್ತು. ನಾಲಿಗೆಯ ಮೇಲೆ ಸರಸತಿಯ ನರ್ತನ. ಅಮರವನ್ನು ಅರಿತವರಿಗೆ ಶಬ್ದ ದಾರಿದ್ರ್ಯವಿರುತ್ತಿರಲಿಲ್ಲ. ಗದುಗಿನ ಭಾರತ ವಾಚನ ಮಾಡುವ ಹಂತಕ್ಕೆ ಬಂದರೆ ಪರವಾ ಇಲ್ಲ ಎಂದೂ, ಜೈಮಿನಿ ಭಾರತ ಓದಿ ಅರ್ಥ ವಿವರಣೆ ಕೊಡಬಲ್ಲವರಾದರೆ ಕಲಿತವರೆಂದೂ ಕರೆಯುತ್ತಿದ್ದರು. ಅಂಥವರು ವಿರಳಾತಿ ವಿರಳ. ದುರುಗಮ್ಮನ ಗುಡಿ (ಸಾಲಿ ಗುಡಿ) ಇನ್ನು ಲೆಕ್ಕ ಎಂದರೆ ಮಗ್ಗಿ ಕಲಿಯುವುದು. ಕನಿಷ್ಟ 20 ರವರೆಗೆ ಮಗ್ಗಿ ಕಡ್ಡಾಯ. ಅದರ ಮೇಲೆ ಚುರುಕಾದವರು ಎರಡ ಹತ್ತಲೆ ಇಪ್ಪತ್ತು ಎಂದು ಮುಗಿಸುತ್ತಿರಲಿಲ್ಲ. ಎರಡ ಹನ್ನೊಂದಲೆ ಇಪ್ಪತ್ತೆರಡು ಎಂದು ಶುರುಮಾಡಿ ಎರಡ ಇಪ್ಪತ್ತಲೆ ನಲವತ್ತು ಎಂದು ಹೇಳುವಷ್ಟು ಕಲಿತರೆ ಅಯ್ಯನವರು ಹುಡುಗ ಪರವಾಯಿಲ್ಲ ಎನ್ನುತ್ತಿದ್ದರು. ಇನ್ನೂ ಜಾಣರು ಮಗ್ಗಿಯನ್ನು ಬುಡದಿಂದ ಪ್ರಾರಂಭಿಸಿ ಮೊದಲವರೆಗೂ ಹೇಳುತ್ತಲಿದ್ದರು. ನನಗಂತೂ ಮೊದಲಿಂದ ಕೊನೆಯವರೆಗ ಹೇಳುವಾಗಲೇ ಸಾಕು ಬೇಕಾಗುತ್ತಿತ್ತು. ಮಧ್ಯಾಹ್ನ ಮೂರು ಗಂಟೆಯ ಮೇಲೆ ಗುಡಿಯು ಮಕ್ಕಳ ಮಗ್ಗಿಯ ಉದ್ಘೋಷದಿಂದ ಗದ್ಘಲಿಸುತಿತ್ತು. ಮೊದಲು ಸಾಮೂಹಿಕವಾಗಿ ಹೇಳಿ ನಂತರ ಒಬ್ಬೊಬ್ಬರಾಗಿ ಒಪ್ಪಿಸಬೇಕಿತ್ತು. ತಪ್ಪಿದರೆ ಪಕ್ಕದವನಿಗೆ ತಿದ್ದಲು ಅವಕಾಶ. ಅವನು ಸರಿಯಾಗಿ ಹೇಳಿ ತಪ್ಪಿದವನ ಕೆನ್ನೆಗೆ ಎರಡು ಬಾರಿಸಬೇಕಿತ್ತು. ಅದೂ ಮುಟ್ಟಿದಂತೆ ಮಾಡಿದರೆ ಸಾಕಾಗುತ್ತಿರಲಿಲ್ಲ. `ಚಟೀರ್‌...’ ಎಂದು ಶಬ್ದ ಕೇಳಿ ಬರುವಂತೆ ಹೊಡೆತ ಇರಬೇಕು. ಎಷ್ಟೋ ಸಲ ಸದಾ ಏಟು ತಿನ್ನುವ ಹುಡಗ ಹೊಂದಾಣಿಕೆ ಮಾಡಿಕೊಳ್ಳುವದೂ, ಶಾಲೆ ಮುಗಿದ ಮೇಲೆ ಬಾರಿ ಬೆಲ್ಲ, ಕಡಲೆ, ಬಾರಿ ಹಣ್ಣು, ಬಕ್ಕಿ ಹಣ್ಣು, ಹುಣಿಸೆ ಕಾಯಿ, ಮಾವಿನ ಕಾಯಿ ಲಂಚದ ಆಮಿಷ ಒಡ್ಡಿ ಹೊಡೆತದ ಜೋರು ತುಸು ಕಡಿಮೆಯಾಗುವಂತೆ ಮಾಡಿಕೊಳ್ಳುತ್ತಿದ್ದವರೂ ಇದ್ದರು. ಆದರೆ ಅದು ಅಯ್ಯನವರ ಗಮನಕ್ಕೆ ಬಂದರೆ ಇಬ್ಬರಿಗೂ ಲತ್ತೆಯ ಮೇಲೆ ಲತ್ತೆ. ಇನ್ನು ಬರಹಕ್ಕೆ ಪೆನ್ನು ಪೆನ್ಸಿಲ್‌ ಬಳಕೆ ಬಹಳ ಇರಲಿಲ್ಲ. ಮೊದಲಲ್ಲಿ ಸ್ಲೇಟೂ ಬಳಸುವ ಹಾಗಿಲ್ಲ. ಹೊಸದಾಗಿ ಸೇರಿದ ಪ್ರತಿ ಹುಡುಗರ ಮುಂದೂ ಮೂರು ಬೊಗಸೆ ನುಣ್ಣನೆ ಮರಳು. ಅದನ್ನು ಅವರೆ ತಂದುಕೊಳ್ಳಬೇಕಿತ್ತು. ಮುಗಿದ ಮೇಲೆ ಗುಡಿಯ ಮೂಲೆಯಲ್ಲಿ ಗುಡ್ಡೆ ಹಾಕಬೇಕಿತ್ತು. ಆ ಮರಳನ್ನು ಹರಡಿ ಅದರಲ್ಲಿ ತೀಡಬೇಕು. ಅದೂ ಒಂದು ಎರಡು ದಿನವಲ್ಲ. ತಿಂಗಳುಗಟ್ಟಲೆ. ಅ ನಿಂದ ಕ್ಷ ವರೆಗೆ ಸ್ಪುಟವಾಗ ಬರೆಯುವವರೆಗೆ ತೀಡಲೇಬೇಕು. ಕೊಕ್ಕೆ ಕೋರೆ ಬರೆಯುವ ಹಾಗಿಲ್ಲ. ಅಯ್ಯನವರು ಒಪ್ಪುವ ತನಕ ಅದು ಮುಂದುವರೆಯುತಿತ್ತು. ಎಷ್ಟೋ ಸಲ ಬೆರಳಿಗೆ ಪೋಟು ಬೀಳುತಿತ್ತು. ತುಸು ಸುಧಾರಿಸಿದ ಮೇಲೆ ಕಡ್ಡಿ ಹಿಡಿದು ಬರೆಯಬಹುದು. ಅಂತೂ ಬರವಣಿಗೆಯ ಬುನಾದಿ ಬಹು ಭದ್ರವಾಗಿ ಬೀಳುತಿತ್ತು. ಆ ನಂತರವೆ ಹಲಗೆ ಬಳಪದ ಬಳಕೆ. ಮಲಪನಗುಡಿ ಮೊದಲ ನೋಟ ಶಾಲೆ ಪ್ರಾರಂಭವಾಗುತ್ತಿದ್ದುದು ರೈತರೆಲ್ಲ ಬದುಕಿಗೆ ಹೊಂಟ ಮೇಲೆ. ಬದುಕು ಎಂದರೆ ಹೊಲದ ಕೆಲಸ. ಸಾಲಿಯಲ್ಲಿಯ ಹಿರಿಯ ಹುಡುಗರಿಗೆ ಆಗ ಬಹು ಹುರುಪು. ಅವರು ಸಾಲಿ ತಪ್ಪಿಸುತ್ತಿದ್ದ ಹುಡುಗರನ್ನು ಹುಡುಕಿ ತರಬೇಕು. ಎಷ್ಟೋ ಹುಡುಗರು ಇಲ್ಲಿನ ಹೊಡೆತ ತಾಳದೆ ಹುಲ್ಲಿನ ಮೆದೆಯಲ್ಲೋ, ಅಟ್ಟದ ಮೇಲೋ, ಅಡಕಲ ಕೋಣೆಯಲ್ಲೋ, ದನದ ಕೊಟ್ಟಿಗೆಯಲ್ಲೋ, ಅಜ್ಜಿಯ ಹಿಂದೋ ಅಡಗಿರುತ್ತಿದ್ದರು. ಅವರನ್ನು ಹುಡುಕಿ ಅಲ್ಲಿಯೇ ನಾಲಕ್ಕು ತದುಕಿ ಕರೆತರುತ್ತಿದ್ದರು. ಅದಕ್ಕೂ ಬಗ್ಗದಿದರೆ ಹೊತ್ತು ತಂದು ಗುಡಿಯಲ್ಲಿ ಕೆಡವುತ್ತಿದ್ದರು. ಅದಕ್ಕೆ ಪೋಷಕರ ಸಹಕಾರವೂ ಪೂರ್ತಿ ಇರುತ್ತಿತ್ತು. `ನಮ್ಮ ಹೈವಾನ, ಅನ್ನ ಉಂಡು ಅಕ್ಷರ ಕಲಿಯೋ ಅಂದರೆ, ನವಣೆ ಬಾನ ಉಂಡು ನೇಗಿಲ ಹಿಡಿತಿನಿ ಅಂತಾನಲ್ಲ ಅಯ್ಯನೋರೆ, ನೀವೆ ಎಂಗಾನ ಮಾಡಿ ನಾಲಕಕ್ಷರ ಕಲಿಸಿ. ಕೊನೆಗೆ ಹೆಬ್ಬೆಟ್ಟು ಒತ್ತೋದು ಬಿಟ್ಟು ರುಜು ಹಾಕೋದು ಕಲಿತರೂ ಸಾಕು’ ಎಂದು ಹಲುಬುತ್ತಿದ್ದರು. ಇನ್ನು ಆಗಿನ ಶಿಕ್ಷಾ ವಿಧಾನವು ಬಹು ವೈವಿಧ್ಯಮಯವಾಗಿತ್ತು. ಆಗ ಗುರುಗಳು ಹೆಚ್ಚು ದಂಡಿಸಿದರೆ ಮಕ್ಕಳು ಹೆಚ್ಚು ಕಲಿಯುವರು ಎಂಬ ನಂಬಿಕೆ ಬಲವಾಗಿತ್ತು. ತಂದೆ ತಾಯಿಯರೆ ಬಂದು `ಅವನಿಗೆ ನಾಲಕ್ಕು ಬಿಗಿದು, ಬುದ್ಧಿ ಕಲಿಸಿ’ ಎಂದು ಗೋಗರೆಯುತ್ತಿದ್ದರು. ಒಂಟಿಕಾಲಲ್ಲಿ ನಿಲ್ಲಿಸುವುದು, ಇನ್ನೊಬ್ಬನನ್ನು ಹೊತ್ತು ನಿಲ್ಲುವುದು, ಮೊಣಕೈ ಸಂದಿಯಲ್ಲಿ ಕೈ ತೂರಿಸಿಕೊಂಡು ಎರಡೂ ಕಿವಿಯನ್ನು ಹಿಡಿದು ಕುಕ್ಕರಗಾಲಿನಲ್ಲಿ ಕೂಡುವುದೂ, ಹಲ್ಲು ಹಚ್ಚಿ ಕಿವಿ ಹಿಂಡುವುದು, ಆಗ ಚಾಲ್ತಿಯಲ್ಲಿದ್ದ ದಂಡನೆಯ ವಿಧಾನಗಳು. ಅತಿ ಮೊಂಡರಿಗೆ ಕೈ ಕಾಲು ಕಟ್ಟಿ ಕೆಡವುತ್ತಿದ್ದರು. ಅದನ್ನು ಕೋದಂಡ ಹಾಕುವುದು ಎನ್ನುವ ವಾಡಿಕೆ ಇತ್ತು. ಅದು ಹೇಗೆ ಆ ರೀತಿ ಬಳಕೆಯಾಯಿತೋ ನನಗಂತೂ ಹೊಳೆದಿಲ್ಲ. ಬಹುಶಃ ಕೈ ಕಾಲು ಒಟ್ಟಿಗೆ ಕಟ್ಟಿದಾಗ ಬಿಲ್ಲಿನಂತೆ ಬಾಗುವುದರಿಂದ ಆ ಹೆಸರು ಬಂದಿರಬಹುದು. ಆದರೆ ಅದು ಬಹು ವಿರಳ. ಒಂದೆ ಹುಡುಗ ಹಾದಿಗೆ ಬರುತ್ತಿದ್ದ. ಇಲ್ಲವೆ ಸಾಲಿ ಬಿಡುತ್ತಿದ್ದ.ಗ್ರಾಮದೇವತೆ ಅಯ್ಯನವರಿಗೆ ಶಾಲಾ ಶುಲ್ಕವನ್ನು ಇಷ್ಟೇ ನೀಡಬೇಂಬ ನಿಗದಿಯಾದ ಕಟ್ಟು ಪಾಡು ಇರಲಿಲ್ಲ. ಅವರು ದೂರದ ಯಾವುದೋ ಗ್ರಾಮದವರು. ಅವರಿಗೆ ನಮ್ಮೂರ ಹಿರಿಯ ರೈತನ ಹನ್ನೊಂದಂಕಣದ ಮನೆಯಲ್ಲಿ ಒಂದು ಕೋಣೆಯಲ್ಲಿ ಉಚಿತ ವಸತಿ. ಇನ್ನು ಊಟ, ಕರೆದವರ ಮನೆಯಲ್ಲಿ. ಅದಕ್ಕೆ ಬಿನ್ನ ಎನ್ನುತ್ತಿದ್ದರು. ಹೀಗಾಗಿ ಅವರು ಮನೆಗೆ ಊಟಕ್ಕೆ ಬರುವುದೆಂದರೆ ದೇವರೆ ಬಂದಂತೆ. ಆದರೆ ಅವರು ಬಹುತೇಕ ಜಂಗಮರಿರಬೇಕು. ಹಾಗಾಗಿ ಲಿಂಗಾಯಿತರೊಬ್ಬರ ಮನೆಯಲ್ಲಿ ಬಿನ್ನವಾಗುತಿತ್ತು. ಅವರ ಊಟದ ಪರಿಯೆ ಬಹು ಚಂದ. ಅವರನ್ನು ಅಟವಾಳಿಗೆಯಲ್ಲಿ ಚಾಪೆ ಇಲ್ಲವೆ ಕಂಬಳಿಯ ಗದ್ದುಗೆಯ ಮೇಲೆ ಕೂಡಿಸುತ್ತಿದ್ದರು. ಅವರ ಎದುರಲ್ಲಿ ಒಂದೂವರೆ ಅಡಿ ಎತ್ತರ ಹಿತ್ತಾಳೆಯ ಮೂರು ಕಾಲಿನ ಸ್ಟೂಲು. ಅದನ್ನು ಅಡ್ಡಣಿಗೆ ಎನ್ನುವರು. ಅದರ ಮೇಲೆ ಕಂಚಿನ ಗಂಗಾಳ. ಪಕ್ಕದಲ್ಲೆ ಥಳ ಥಳ ಹೊಳೆಯುವ ಕಂಚಿನ ಚೊಂಬು ಮತ್ತು ವಾಟಗ. ಕುಳಿತ ಕೂಡಲೆ ವಿಭೂತಿ ಉಂಡೆ ಎದುರು ಬರುತಿತ್ತು. ಅದನ್ನು ಕೈನ ಮೂರೂ ಬೆರಳಿಗೆ ಗಾಢವಾಗಿ ಬಳಿದುಕೊಂಡು ಹಣೆಗೆ ಲೇಪಿಸಿಕೊಂಡರೆ ಬಡಿಸಲು ಸಂಕೇತ. ರೊಟ್ಟಿಯೋ, ಅನ್ನವೋ, ಹೋಳಿಗೆಯೋ, ಮಾದಲಿಯೋ ಏನು ಹಾಕಿದರೂ ಶಿವಾರ್ಪಣ ಎಂದು ಮೊದಲ ತುತ್ತು ಎತ್ತುತಿದ್ದರು. ಊಟ ಮಾಡುವಾಗ ಒಂದೆ ಒಂದು ಅಗಳೂ ಚೆಲ್ಲುತ್ತಿಲಿಲ್ಲ. ಊಟವಾದ ಮೇಲೆ ಗಂಗಾಳದೊಳೊಗೆ ಕೈ ತೊಳೆದು ಆ ನೀರನ್ನೂ ಒಂದು ತೊಟ್ಟು ಬಿಡದೆ ಕುಡಿಯುತ್ತಿದ್ದರು. ಶಿವಾಯನಮಃ ಎಂದು ಎದ್ದರೆ ಊಟ ಮುಗಿದಂತೆ. ದಿನಕ್ಕೆ ಅವರದು ಎರಡೆ ಊಟವಾದರೆ ಮುಗಿಯಿತು. ನಂತರ ಏನನ್ನು ತಿನ್ನುತ್ತಿರಲಿಲ್ಲ. ಹಗಲಿನ ಶಾಲೆ ರಾತ್ರಿ ಭಜನಾ ಮಂದಿರ. ಯಾರೂ ಸಂಗೀತಗಾರರು ಇರಲಿಲ್ಲ. ಬಹುತೇಕ ಹಾಡುತಿದ್ದುದು ತತ್ವ ಪದಗಳು. ವಾದ್ಯ ಎಂದರೆ ಒಂದು ಏಕತಾರಿ. ಅಂದರೆ ಒಂದು ತರಹದ ತಂಬೂರಿ. ಎರಡು ಮೂರು ಜತೆ ತಾಳಗಳು. ಕೈ ತಮಟೆಗಳು. ನೇಕಾರ ಭರಮಪ್ಪ. ಕೆಲಸೇರ ಉದ್ದಾನಪ್ಪ. ಕುರುಬರ ಗೌಡಜ್ಜ, ಮಜ್ಜಿಗೆ ಬಸಪ್ಪ ಖಾಯಂ ಸದಸ್ಯರು. ಅಯ್ಯನವರದು ಮುಮ್ಮೇಳವಾದರೆ ಇವರೆಲ್ಲರದು ಹಿಮ್ಮೇಳ. ಅವರು ಹಾಡಿದ ಸಾಲನ್ನೆ ಮತ್ತೆ ಮತ್ತೆ ಒಟ್ಟಾಗಿ ಹಾಡುವರು. ವಿಶೇಷ ಎಂದರೆ ಆಗ ಹೊತ್ತು ಕಂತುತಿದ್ದಂತೆ ಊಟ ಮುಗಿಯುತಿತ್ತು. ಭಜನೆ ಮಾಡಲು ಊಟವಾಗಿರಬಾರದೆಂದು ಕಡ್ಡಾಯವಿರಲಿಲ್ಲ. ಎಲ್ಲರೂ ಊಟ ಮುಗಿಸಿ ದೇವರ ಬಾಗಿಲ ಆಚೆ ಈಚೆ ಸಾಲಾಗಿ ಕುಳಿತು ಸುಮಾರು ಒಂದು ಗಂಟೆಯವರೆಗೆ ಭಜನೆ ಮಾಡುವರು. ಸುಮಾರು ಹತ್ತಿಪ್ಪತ್ತು ಜನ ಸೇರಿರುತಿದ್ದರು. ಕೆಲವರು ತಮ್ಮ ಕಟ್ಟೆಯ ಮೇಲೆ ಕುಳಿತೆ ಕಿವಿಗೊಡುತಿದ್ದರು. ನೀರವ ರಾತ್ರಿಯ ಮೌನದಲ್ಲಿ ಇವರ ಭಜನೆಯ ಸದ್ದು ದೂರದ ವರೆಗೆ ಕೇಳಿಸುತಿತ್ತು. ಮಂಗಳವಾರ ಶುಕ್ರವಾರ ದೇವಿಗೆ ಊದು ಬತ್ತಿ ಬೆಳಗುತಿದ್ದರು. ಕಾರ್ತಿಕ ಮಾಸದಲ್ಲಿ ಮಾತ್ರ ಕೊಬ್ಬರಿ ಮಂಡಾಳಿನ ಚರಪು ಇರುತಿತ್ತು. ಆಗ ನಾವು ಹುಡುಗರೂ ಮುಕುರುತಿದ್ದೆವು. ಏನಾದರೂ ಊರ ಪಂಚಾಯತಿ ಆಗಬೇಕೆಂದರೆ ಅಲ್ಲಿಯೇ ಆಗಬೇಕು. ನಮ್ಮ ಊರಲ್ಲಿ ಬಹುತೇಕ ಕುರುಬರೆ ಜಾಸ್ತಿ. ಅವರ ವಿಳೇವು, ಮದುವೆ ಮಾತುಕತೆ, ಉಡಿಕೆ, ಬಿಡುಗಡೆ, ಗಂಡ ಹೆಂಡಿರ ಜಗಳ, ಅಣ್ಣ ತಂದಿರ ಪಾಲು ಎಲ್ಲವನ್ನೂ ಕುಲಸ್ಥರು ಸೇರಿ ತಿರ್ಮಾನ ಮಾಡುವರು. ಮತ್ತು ಬಹುತೇಕ ಅವರದೇ ಅಂತಿಮ ಮಾತು. ತಪ್ಪು ಮಾಡಿದವರಿಗೆ ದಂಡ ಹಾಕುವುದು, ನೊಂದವರಿಗೆ ಪರಿಹಾರ ನೀಡುವದು. ಕಿತ್ತಾಡಿದವರನ್ನು ರಾಜಿ ಮಾಡಿಸುವುದು ಹಿರಿಯರಾದ ಪಂಚಾಯತಿದಾರರ ಹೊಣೆ. ಅವರ ಕಟ್ಟಳೆ ಮೀರಿ ಯಾರೂ ನಡೆಯುವಂತಿಲ್ಲ. ಅಷ್ಟು ಅದಕ್ಕೆ ಗೌರವ, ಕೋರ್ಟು ಕಚೇರಿ ಪೊಲೀಸು ಊರಿಗೆ ಬಹುದೂರ. ಎಲ್ಲ ದೇವರ ಎದುರಲ್ಲೆ ಇತ್ಯರ್ಥವಾಗುವವು. ಗುಡಿ ಸಾಮಾಜಿಕ ನೆಮ್ಮದಿಯ ಕೇಂದ್ರವೂ ಆಗಿತ್ತು. ಅಯ್ಯನವರು ಗುಡಿಯಲ್ಲೆ ಇದ್ದರೂ ಊರ ಪಂಚಾಯತಿಯಲ್ಲಿ ಅವರು ಭಾಗವಹಿಸುವಂತಿರಲಿಲ್ಲ. ಲೇಖಕರುಅಯ್ಯನವರು ಬಾಯಿಬಿಟ್ಟು ಕೇಳದಿದ್ದರೂ ಅವರಿಂದ ಯಾರೂ ಬಿಟ್ಟಿ ಪಾಠ ಹೇಳಿಸಿಕೊಳ್ಳುತ್ತಿಲಿಲ್ಲ. ಕೆಲವರು ವರ್ಷಕ್ಕೆ ಇಷ್ಟು ಎಂದು ಹಣ ನೀಡಿದರೆ ಇನ್ನುಳಿದವರು ದವಸ ಧಾನ್ಯ, ಕಾಳು ಕಡಿ ಕೊಡುತ್ತಿದ್ದರು. ಅದೂ ಈಗಿನಂತೆ ತಿಂಗಳು ತಿಂಗಳಿಗೆ ಅಲ್ಲ. ಸುಗ್ಗಿಯ ಹಂಗಾಮದಲ್ಲಿ ಜೋಳ ಭತ್ತ ಸೆಂಗಾ ಅದು ಇದು ಸಂಗ್ರಹವಾಗುತಿತ್ತು. ಅದನ್ನು ಅವರು ಯಾರದಾದರೂ ಹಗೇವಲ್ಲಿ ಇಡುತ್ತಿದ್ದರು. ಉಳಿದವು ಊರ ಗೌಡರ ಕಣಜದಲ್ಲಿ, ಅವರ ಹೆಸರಲ್ಲಿ ಇರುತಿತ್ತು. ವರ್ಷಕ್ಕೋ ಆರು ತಿಂಗಳಿಗೋ ಒಂದು ಸಾರಿ ಅವರು ಊರಿಗೆ ಹೋಗುವಾಗ ಬಂಡಿ ಕಟ್ಟಿಕೊಡುತ್ತಿದ್ದರು. ಅದರಲ್ಲಿ ಅವರನ್ನು, ಅವರ ದವಸ ಧಾನ್ಯವನ್ನು ಅವರ ಊರಿಗೆ ತಲುಪಿಸುತಿದ್ದರು.