ತಮಿಳು ನಾಡಿನಲ್ಲಿ ದೇಶದಲ್ಲಿಯೇ ಅತ್ಯಂತ ಹಳೆಯದರವುಗಳಲ್ಲಿ ಒಂದಾದ ಪಕ್ಷಿಧಾಮವಿದೆ..ಇದಕ್ಕೆ ಕನಿಷ್ಟ 250 ವರ್ಷಗಳ ಇತಿಹಾವಿದೆ. . ಅದು ಅಷ್ಟು ದೊಡ್ಡದೇನಲ್ಲ.
ಆದರೆ ಅದರ ವಿಶೇಷತೆ ಇರುವುದು ಅದರ ರಕ್ಷಣೆಗೆ
ಅಲ್ಲಿನ ಜನರೇ ಕಂಕಣ ಬದ್ಧರಾಗಿರುವುದು. ಅದೂ ಶತಶತಮಾನಗಳಿಂದ. ತಮ್ಮ ಸ್ವಂತ ಆಸ್ತಿಯಂತೆ
ಆ ಚಿಕ್ಕಗ್ರಾಮದ ಜನ ಕಾಪಾಡಿಕೊಂಡು ಬಂದಿರುವುರು. ಕಂಚೀಪುಪರಂ ಚಿಲ್ಲೆಯ ಚಂಗಲ್ಪೇಟೆ ತಾಲೂಕಿಗೆ
೧೦ ಮೈಲು ದೂರದಲ್ಲಿ ಇರುವ ಈ ಹಸಿರುಮಯಪ್ರದೇಶಕ್ಕೆ ದೇಶವಿದೇಶಗಳಿಂದ ಹಕ್ಕಿಗಳು ವಲಸೆಬರುತ್ತವೆ. ಅಲ್ಲಿರುವುದು ಒಂದು ೩೦ ಹೆಕ್ಟೇರ್ ವಿಸ್ತೀರ್ಣದ ಕೆರೆ. ಅದೂ ಸಂಪೂರ್ಣ ಮಳೆಯಾಶ್ರಿತ. ಇದಕ್ಕೆ ಕನಿಷ್ಟ ಪಕ್ಷ ೨೫೦ ವರ್ಷಗಳ
ಇತಿಹಾಸವಿದೆ. ಈ ಪ್ರದೇಶ ಮೊದಲಿನಿಂದಲೂ ಚಿಕಪುಟ್ಟ ಕೆರೆ ಕುಂಟೆಗಳಿಂದ ಕೂಡಿದ್ದು ಪಕ್ಷಿಗಳಿಗೆ
ಸುಲಭವಾಗಿ ಆಹಾರ ದೊರೆಯುವುದು. ಎಲ್ಲ ಕಡೆ ಹಚ್ಚ ಹಸಿರಿನ ಭತ್ತದ ಗದ್ದೆಗಳು. ನಗರದ
ಸದ್ದುಗದ್ದಲದಿಂದ ದೂರ.ವಿಚಿತ್ರ ಎಂದರೆ ಈ ಊರಿನ ಹೆಸರು ವೇದಾಂತಂಗಳ್ ಎಂದರೆ ತಮಿಳಲ್ಲಿ
ಬೇಟೆಗಾರರ ಪಾಳ್ಯ ಎಂದು. ಆದರೆ ಭಕ್ಷಕರೇ ಇಲ್ಲಿನ ಪಕ್ಷಿಗಳ ರಕ್ಷಕರಾಗಿದ್ದಾರೆ.
ಇದು ಜನರಿಂದ ಜನರಿಗಾಗಿ ಇರುವ ಪಕ್ಷಿಧಾಮ ಎಂದರೆ ಅಚ್ಚರಿ ಬೇಡ.

ಅಲ್ಲಿನ ಜನ ಹಕ್ಕಿಗಳು ತಮ್ಮ ಜಮೀನಿನಲ್ಲಿ ಹಕ್ಕಿಗಳು ಹಾಕುವ ಹಿಕ್ಕೆಯಿಂದ ಬೆಳೆ ಹೆಚ್ಚಾಗಿ ಬರುವುದೆಂಬ ಸತ್ಯವನ್ನು ಬಹಳ ಹಿಂದೆಯೇ ಮನಗಂಡರು.. ಕೆರೆಯಲ್ಲಿ ಹಕ್ಕಿಗಳ ವಸತಿಯಿಂದಾಗಿ ನೀರಿನಲ್ಲಿನ ಸಾರಜನಕದ ಅಂಶ ಅಧಿಕವಾಗಿ ಯಾವದೇ ಗೊಬ್ಬರ ಹಾಕದೆ ಬರಿ ಕೆರೆಯ ನೀರಿನಿಂದಲೇ ಉತ್ತಮ ಫಸಲು ದೊರೆಯುವಾಗ ತಮ್ಮ ಆದಾಯದ ಮೂಲವನ್ನು ರಕ್ಷಿಸಲು ಮುಂದಾದರು. ೧೮ನೇ ಶತಮಾನದ ಕೊನೆಯಲ್ಲಿ ಅಲ್ಲಿರುವ ಪಕ್ಷಿಗಳ ಬೇಟೆಯಾಡಲು ಬರುತಿದ್ದ ಆಂಗ್ಲ ಸೈನಿಕರ ವಿರುದ್ಧ ಕಲೆಕ್ಟರ್ರಿಗೆ ದೂರು ಸಲ್ಲಿಸಿದರು. ಬ್ರಿಟಿಷರ ಆಡಳಿತವಿದ್ದಾಗ ಅವರ ಸೈನಿಕರ ವಿರುದ್ಧವೇ ದೂರು ಸಲ್ಲಿಸಲು ಎರಡು ಗುಂಡಿಗೆ ಬೇಕು. ಅವರ ಪಕ್ಷಿ ಪ್ರೀತಿ ಜೊತೆಗೆ ಅದರಿಂದ ತಮಗಾಗುವ ಲಾಭ ಅವರಿಗೆ ಧೈರ್ಯ ಕೊಟ್ಟಿತು.೧೭೯೮ ರಲ್ಲಿಯೇ ಆ ಬಗ್ಗೆ ಸರ್ಕಾರವು ಜನರ ಒತ್ತಾಯದ ಮೇರೆಗೆ ಆದೇಶ ಹೊರಡಿಸಿತು. ೧೯೩೬ ರಲ್ಲಿ ಅದನ್ನು ಅಧಿಕೃತ ಪಕ್ಷಿಧಾಮವಾಗಿ ಘೋಷಿಸಲಾಯಿತು.. ಪರಿಸರ ರಕ್ಷಣೆಗೆ ಜನಪರ ಚಳುವಳಿ ಮಾಡಿದುದು ಅದೇ ಮೊದಲುಎನ್ನಬಹುದು.

ಇದು ಜನರಿಂದ ಜನರಿಗಾಗಿ ಇರುವ ಪಕ್ಷಿಧಾಮ ಎಂದರೆ ಅಚ್ಚರಿ ಬೇಡ.
ಅಲ್ಲಿನ ಜನ ಹಕ್ಕಿಗಳು ತಮ್ಮ ಜಮೀನಿನಲ್ಲಿ ಹಕ್ಕಿಗಳು ಹಾಕುವ ಹಿಕ್ಕೆಯಿಂದ ಬೆಳೆ ಹೆಚ್ಚಾಗಿ ಬರುವುದೆಂಬ ಸತ್ಯವನ್ನು ಬಹಳ ಹಿಂದೆಯೇ ಮನಗಂಡರು.. ಕೆರೆಯಲ್ಲಿ ಹಕ್ಕಿಗಳ ವಸತಿಯಿಂದಾಗಿ ನೀರಿನಲ್ಲಿನ ಸಾರಜನಕದ ಅಂಶ ಅಧಿಕವಾಗಿ ಯಾವದೇ ಗೊಬ್ಬರ ಹಾಕದೆ ಬರಿ ಕೆರೆಯ ನೀರಿನಿಂದಲೇ ಉತ್ತಮ ಫಸಲು ದೊರೆಯುವಾಗ ತಮ್ಮ ಆದಾಯದ ಮೂಲವನ್ನು ರಕ್ಷಿಸಲು ಮುಂದಾದರು. ೧೮ನೇ ಶತಮಾನದ ಕೊನೆಯಲ್ಲಿ ಅಲ್ಲಿರುವ ಪಕ್ಷಿಗಳ ಬೇಟೆಯಾಡಲು ಬರುತಿದ್ದ ಆಂಗ್ಲ ಸೈನಿಕರ ವಿರುದ್ಧ ಕಲೆಕ್ಟರ್ರಿಗೆ ದೂರು ಸಲ್ಲಿಸಿದರು. ಬ್ರಿಟಿಷರ ಆಡಳಿತವಿದ್ದಾಗ ಅವರ ಸೈನಿಕರ ವಿರುದ್ಧವೇ ದೂರು ಸಲ್ಲಿಸಲು ಎರಡು ಗುಂಡಿಗೆ ಬೇಕು. ಅವರ ಪಕ್ಷಿ ಪ್ರೀತಿ ಜೊತೆಗೆ ಅದರಿಂದ ತಮಗಾಗುವ ಲಾಭ ಅವರಿಗೆ ಧೈರ್ಯ ಕೊಟ್ಟಿತು.೧೭೯೮ ರಲ್ಲಿಯೇ ಆ ಬಗ್ಗೆ ಸರ್ಕಾರವು ಜನರ ಒತ್ತಾಯದ ಮೇರೆಗೆ ಆದೇಶ ಹೊರಡಿಸಿತು. ೧೯೩೬ ರಲ್ಲಿ ಅದನ್ನು ಅಧಿಕೃತ ಪಕ್ಷಿಧಾಮವಾಗಿ ಘೋಷಿಸಲಾಯಿತು.. ಪರಿಸರ ರಕ್ಷಣೆಗೆ ಜನಪರ ಚಳುವಳಿ ಮಾಡಿದುದು ಅದೇ ಮೊದಲುಎನ್ನಬಹುದು.
ಕೆರೆಯಲ್ಲಿ ಬೇಸಿಗೆಯಲ್ಲಿನೀರಿನ ಸಂಗ್ರಹ ಕಡಿಮೆಯಾಗುವುದು. ಮಳೆಗಾಲದಲ್ದ್ಲಿಬಂದ ನೀರನ್ನು ಸಂಗ್ರಹಿಸಲು ಮೈಲುದ್ದದ ಕೆರೆ ಏರಿಯನ್ನು ಭದ್ರ ಪಡಿಸಲಾಗಿದೆ. ಅಲ್ಕೆಲಿ ರಸ್ರೆತೆ ಪಕ್ಯಷಿ ವೀಕ್ಲ್ಲಿಷಣೆ ಗೋಪುರ , ಬೆರಲಲ್ಲಿ ಕುಳಿತು ನೋಡಲು ಬೆಂಚುಗಳು ಇವೆ. ಕೆರೆಯಲ್ಲಿ ಹೆಚ್ಚು ಜಲ ಸಸ್ಯಗಳುಇಲ್ಲ . ಮೊದಲು ಅಲ್ಲಿರುವ ೫೦೦ ಮರಗಳೇ ಹಕ್ಕಿಗಳಿಗೆ ಆಧಾರ.ಮತ್ತೆ ೧೯೭೩ ರಲ್ಲಿ ೧೦೦
ಗಿಡಗಳನ್ನು ೧೯೯೬ ರಲ್ಲಿ ೧೦೦೦ ಗಿಡಗಳನ್ನೂ ನೆಟ್ಟು ಬೆಳೆಸಲಾಗಿದೆ
ಅತಿ ಚಿಕ್ಕದಾದ ಆದರೆ ಚೊಕ್ಕವಾಗಿರುವ ಈ
ಸ್ಥಳವು ಸುಮಾರು ೩೦೦೦೦ ಹಕ್ಕಿಗಳ ವಲಸೆ ತಾಣವಾಗಿದೆ. ಮಳೆಗಾಲದಲ್ಲಿ ಅತಿಹೆಚ್ಚು ಮಳೆಯಾದಾಗ
ಮರಗಳು ಮುಳುಗಿದರೂ ಅವುಗಳ ತುದಿಯಲ್ಲಿ ಹಕ್ಕಿಗಳು ಗುಂಪಾಗಿ ಗುಡುಕಟ್ಟಿ ನೆಲಸಿರುವುದು ನೋಡಿದರೆ ಹಕ್ಕಿಗಳ ದ್ವೀಪದಂತೆ ಕಾಣುವ ನೋಟ ಬಹು ಚಂದ.ಅಕ್ಟೋಬರ್ನಿಂದ ಜನವರಿವರೆಗ ಹಕ್ಕಿಗಳ
ದಟ್ಟಣೆ ಬಹಳ. ಅದು ಪಕ್ಷಿವೀಕ್ಷಣೆ ಉತ್ತಮ ಅವಕಾಶ ಕೊಡುವುದು ಅದರಲ್ಲ್ಲೂ ಸಾವಿರಾರು ಹಕ್ಕಿಗಳನ್ನು
ಹತ್ತಿರದಿಂದ ನೋಡಲು ಸಾಧ್ಯವಿದೆ.
ಇಲ್ಲಿಗೆ ಮೊದಲು ಬರುವುದು ತೆರೆದ ಕೊಕ್ಕಿನ ಕೊಕ್ಕರೆ. ಅದು ವಾಪಸ್ಸು
ಹೋಗುವುದರೊಳಗೆ ಎರಡು ಸಲ ಮರಿಮಾಡುವುದು.ಇಲ್ಲಿಗೆ ಸುಮಾರು ನಲವತ್ತು ಪ್ರಬೇಧದದ ಹಕ್ಕಿಗಳು
ಸಾವಿರಾರು ಸಂಖ್ಯೆಯಲ್ಲಿ ಬಂದು ಸಂತಾನಾಭಿವೃದ್ದಿ ಮಾಡಿಕೊಂಡು ಹೋಗುತ್ತವೆ. ಇವಗಳೂ ಅಲ್ಲದೆ
|
No comments:
Post a Comment