Monday, July 15, 2013

ಆರರಿಂದ ಅರವತ್ತು -ಸರಣಿ- ನಡೆದಂತೆ ನುಡಿ

ನಿಯಮ ಎಲ್ಲ್ರರಿಗೂ ಒಂದೆ
ನಾನು ಕೆಲಸವನ್ನು ನಿಯತ್ತಿನಿಂದ ಮಾಡುವುದು ಅದರಲ್ಲೂ ಪರೀಕ್ಷೆಗಳನ್ನು ಶಿಸ್ತಿನಿಂದ ನಡೆಸುವುದು ಅನೇಕರಿಗೆ ಅಪಹಾಸ್ಯದ ವಸ್ತುವಾಗಿತ್ತು, ಓಹೋ! ಊರಲ್ಲಿ ಬೇರೆ ಯಾರಿಗೂ ಇಲ್ಲದ ರೂಲ್ಸ ಇವರೊಬ್ಬರಿಗೆ, ಒಣ ನಿಷ್ಠುರ ಕಟ್ಟಿಕೊಳ್ಳುವರು. ಇವರಿಗೆ ರಾಷ್ಟ್ರ ಪ್ರಶಸ್ತಿ ಕೊಡುವರು. ನಾಳೆ ಏನಾದರೂ ಹೆಚ್ಚು ಕಡಿಮೆಯಾದರೆ ಇಲಾಖೆ ಇವರ ಸಹಾಯಕ್ಕೆ ಬರುವುದೇ?  ಮುಂತಾದ ಮಾತುಗಳು ಹಿಂದೆ ಮುಂದೆ ಆಡುವವರು ಇದ್ದರು. ಆದರೆ ನಾನು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ನನ್ನ ಕರ್ತವ್ಯ ನಾನು ಮಾಡುತಿದ್ದೆ. ಆದರೆ ನನ್ನ ಕೆಲಸಕ್ಕೆ ಗೌರವ ಪ್ರಶಸ್ತಿಗಳು ಬಾರದಿದ್ದರೂ ಇಲಾಖೆಯ ಅಭಿಮಾನ ದೊರಕಿತ್ತು.ನನಗೆ ಹೃದಯಾಘಾತವಾದಾಗ ಜಯದೇವ ಅಸ್ಪತ್ರೆಯಲ್ಲಿ ಶಸ್ತ್ರ ಕ್ರಿಯೆಗೆ ಒಳಗಾಗಿದ್ದೆ. ಸುಮಾರು ೧ಲಕ್ಷದವರೆಗೆ ಖರ್ಚಾಯಿತು. ಮಗ ಅದೆ ತಾನೆ ಕೆಲಸಕ್ಕೆ ಸೇರಿದ್ದ. ಆದರೂ ಹೇಗೋ ನಿಭಾಯಿಸಿದೆವು, ಆ ಸಮಯದಲ್ಲಿ ಇಲಾಖೆಯ ಔದಾರ್ಯ ಮನ ಮುಟ್ಟಿತು. ನನಗೆ ಆಸ್ಪತ್ರೆಗೆ ಫೋನು ಮಾಡಿ ಆರೋಗ್ಯವಿಚಾರಿಸಿದರು ಜತೆಗೆ ನನ್ನ ಮಗ ಕಾರವಾರದಲ್ಲಿ ಕೆಲಸ ಮಾಡುತಿದ್ದುದರಿಂದ ಈ ಸಮಯದಲ್ಲಿ ಅವನ ಜತೆಗೆ ಇರುವುದು ಸೂಕ್ತವೆಂದು ನಗರದ ಕಾರವಾರದ ಹತ್ತಿರವೆ ಇರುವ ಹೈವೇನಲ್ಲೆ ಇದ್ದ ಕಾಲೇಜಿಗೆ ವರ್ಗ ಮಾಡಿ ಅದೇಶವನ್ನು ಅಸ್ಪತ್ರೆಗೆ ಕಳುಹಿಸಿದರು.ನಿರ್ದೇಶಕರೆ ವೈಯುಕ್ತಿಕ ಆಸಕ್ತಿ ತೆಗೆದು ಕೊಂಡುದುದರಿಂದ ಇದು ಸಾಧ್ಯವಾಯಿತು ಒಳ್ಳೆಯ ಕೆಲಸಗಾರನಿಗೆ ಆಪತ್ತಿನಲ್ಲಿ ಆಗ ಬೇಕೆಂಬ ಅವರ ಸಹೃದಯತೆಯೆ ಅದಕ್ಕೆ ಕಾರಣ.. ಒಂದು ವರ್ಗಾವಣೆ ಬೇಕೆಂದರೆ ವಿಧಾನ ಸೌಧದ ಕಂಬ ಕಂಬ ಸುತ್ತಬೇಕಾದ, ಹಣ ವನ್ನು ನೀರಿನಂತೆ ಚೆಲ್ಲ ಬೇಕಾದ ವ್ಯವಸ್ಥೆಯಲ್ಲಿ ಮಲಗಿದಲ್ಲಿಯೆ  ಆದೇಶದ ಪ್ರತಿ ಬರುವುದೆಂದರೆ ಸಂಬಂಧಿಸಿದವರ ವಿಶ್ವಾಸವೆ ಕಾರಣ. ಅದರ ಜೊತೆಗೆ ವೈದ್ಯಕೀಯ ವೆಚ್ಚದ ಬಿಲ್ಲನ್ನು  ಮಂಜೂರು ಮಾಡಲು ಜಿಲ್ಲಾ ಮಟ್ಟದಲ್ಲಿ ತುಸು ಮಿಜಿಮಿಜಿ ಮಾಡಿದಾಗ ವಿಷಯ ತಿಳಿದು ಅವರ ಮೂಲಕ  ಕಳುಹಿಸುವ ಬದಲು ನೇರವಾಗಿ ಇಲಾಖೆಗೆ ಸಲ್ಲಿಸಲು ತಿಳಿಸದರು. ಜತೆಗೆ ಮೂರೆ ದಿನದಲ್ಲಿ ನನಗೆ ಹಣ ದೊರೆಯುವ ವ್ಯವಸ್ಥೆಯಾಯಿತು.  ಮನೆಯವರೆಲ್ಲಾ ಸದಾ ನನ್ನ ನಿಯತ್ತಿನ ಕೆಲಸದಿಂದ ಆಗೀಗ ತೊಂದರೆಗೆ ಒಳಗಾದವರೆ. ಎಲ್ಲರಂತೆ ನೀವೂ ಇರಿ ಎಂದು ಅವರೇನೂ ಹೇಳಿರಲಿಲ್ಲ. ಆದರೆ ಆಗೀಗ ಭಾವನೆ ಬಂದಿರಬಹುದು. ಆದರೆ ಆಪತ್ತಿನಲ್ಲಿ ಆದ ಸಹಾಯದಿಂದ ಅವರಿಗೂ ಒಳ್ಳೆತನಕ್ಕೆ , ಪ್ರಾಮಾಣಿಕ ಕೆಲಸಕ್ಕೆ ಬೆಲೆ ಇದೆ ಎಂದು ಮತ್ತೊಮ್ಮೆ ಖಚಿತವಾಯಿತು.  ಆದ್ದರಿಂದ ಆಸ್ಪತ್ರೆಯಿಂದ ಬಿಡುಗಡೆಯಾದ ಮೇಲೆ ಮನೆಗೆ ಹೋದ ನಾನು ವಿಶ್ರಾಂತಿಯ ಅವಧಿ ಮುಗಿತ  ತಕ್ಷಣವೆ ಸೀದಾ ಹೊಸ ಜಾಗದಲ್ಲಿ ವರದಿ ಮಾಡುವಂತಾಯಿತು. ಕೆಜಿಎಫ್‌ ಕಾಲೆಜು ಬಿಡುವುದೆಂದರೆ ನನಗೂ ಬೇಸರ.ಸಹೋದ್ಯೋಗಿಗಳ  ಸಹಕಾರ ಮತ್ತು ವಿದ್ಯಾರ್ಥಿಗಳ ಮಮತೆ ನಾನು ಮರೆಯುವಹಾಗಿರಲಿಲ್ಲ. ಕೆಲವರಂತೂ ನಾವು ನಿಮ್ಮ ಮಗನಂತೆ ನೋಡಿಕೊಳ್ಳುತ್ತೇವೆ. ಅಲ್ಲಿ ಒಬ್ಬ ಮಗನಿದ್ದರೆ ಇಲ್ಲಿ ನಾವು ಹಲವರಿದ್ದೇವೆ ಇಲ್ಲಿಯೆ ಇದ್ದು ಬಿಡಿ ಎಂದು ಗೋಗರೆದರು ಆದರೆ ಅದೇಶ ಬಂದಿತ್ತು  . ಈಗ ಹೋದರೂ ಮನೆ ತೆಗೆಯುವುದಿಲ್ಲ. ಹೇಗಿದ್ದರೂ ಸ್ವಂತ ಮನೆ ಇದೆ, ನಿವೃತ್ತನಾದ ಮೇಲೆ ಇಲ್ಲಿಯೆ ಬಂದು ನೆಲಸುವೆ ಎಂದು ಸಮಾಧಾನ ಮಾಡಿದೆ.ಭಾರವಾದ ಹೃದಯದಿಂದ ವಿದಾಯ ಹೇಳ ಬೇಕಾಯಿತು. ತಾಲೂಕಿನ ಚುಟುಕ ಸಾಹಿತ್ಯ ಪರಿಷತ್‌ನ ಬೀಳ್ಕೊಡಿಗೆ ಸಮಾರಂಭ ಕಣ್ಣಲ್ಲಿ ನೀರುತಂದಿತು. ಒಂದೆ ಊರಿನವರಲ್ಲ, ಒಂದೆ ಜಿಲ್ಲೆಯವರಲ್ಲ. ಹೋಗಲಿ ಒಂದೆ ಇಲಾಖೆಯವರೂ ಅಲ್ಲ . ಅವರಲ್ಲಿ ಬಹುಪಾಲು ಬಿ.ಇ.ಎಮ್‌.ಎಲ್‌ ಅಧಿಕಾರಿಗಳು. ಕನ್ನಡದ ಕೆಲಸಕ್ಕಾಗಿ ಜತೆಯಾದವರು. ನಾಲಕ್ಕುವರ್ಷದಲ್ಲಿ ನಲುಮೆಯ ಒಡನಾಡಿಗಳಾಗಿದ್ದರು
.ಆರೋಗ್ಯ ತುಸು ಸುಧಾರಿಸಿದ ಮೇಲೆ ನಾನು ಉತ್ತರ ಕನ್ನಡದ ಕಾಲೇಜಿಗೆ ಸೇರಲು ಹೊರಟೆ.ಅಲ್ಲಿನ ವಾತಾವರಣದ ಪರಿಚಯ ಹಾದಿಯಲ್ಲೆ ಆಯಿತು. ಎಲ್ಲ ಕಡೆ ದಟ್ಟ ಹಸಿರು . ಶಿವಮೊಗ್ಗ ದಾಟಿದರೆ ಗೇರು ಸೊಪ್ಪೆಯಿಂದ ಹೊನ್ನಾವರದ ವರೆಗ ಅಲ್ಲಲ್ಲಿ ಮಿಂಚಿ ಮಾಯವಾಗುವ ಜಲಪಾತಗಳು, ನಂತರ ಕರಾವಳಿಯಲ್ಲಿ ರಸ್ತೆಗೆ ಸಮಾಂತರವಾಗಿ ಭೋರ್ಗರೆವ ಸಮುದ್ರ ಕಾರಿನಲ್ಲಿ ಹೋಗುವಾಗ ಕಣ್ಣು ಮುಚ್ಚಿದರೆ ಸುಂದರದೃಶ್ಯ ಕಾಣದಾಗುವುದು ಎಂಬ ಕಾತರದಿಂದ ಹಾದಿಯುದ್ದಕ್ಕೂ ಬಿಟ್ಟ ಕಣ್ಣು ಬಿಟ್ಟಂತೆ ಪ್ರಕೃತಿಸೌಂದರ್ಯ ನೊಡುತ್ತಾ ಕುಳಿತೆ. ಹಾದಿಯಲ್ಲೆ ಮಳೆ ಅಂಕೋಲೆಯಿಂದ ಜಿಟಿಜಿಟಿ ಮಳೆ ಪ್ರಾರಂಭವಾಯಿತು.ಇನ್ನೂ ಹತ್ತು ಕಿಲೋ ಮೀಟರ್‌ ದೂರದಲ್ಲೆ ಮಗರಾಯ ಕಾದು ನಿಂತಿದ್ದ. ಅಲ್ಲಿ ಹೆಸರಾದ ಉಧ್ಭವ ಗಣಪತಿ ದೇಗುಲ.ಬೃಹತ್ ಬಂಡೆಉ ಮೇಲೆ ಒಡಮೂಡಿದ್ದು ಬಹು ಪ್ರಸಿದ್ಧಿ. ಅದರ ಮುಂದೆಯೆ ಮಗ ಬಂದು ನಿಂತಿದ್ದ. .ಅವನನ್ನು ನೋಡಿ ಇಳಿದಾಗ ಗುಲಾಬಿ ಹೂ ನೀಡಿ ಕಾರವಾರಕ್ಕೆ ಸ್ವಾಗತ , ಎಂದ.  ಆ ನಡೆ ಬಹಳ ಖುಷಿ ತಂದಿತು. ಆ ಹೂವಿನ ಬೆಲೆ ಬರಿ ಒಂದು ರೂಪಾಯಿ ಇರಬಹುದು. ಆದರೆ ಅದು ನೀಡುವ ಸಂತೋಷ , ಅದರ ಹಿಂದಿರುವ ಆತ್ಮೀಯತೆ ಆಳ ಅಳೆಯಲು ಆಗದು.ಅಲ್ಲಿರುವ ದೇವರ ದರ್ಶ ನ  ಮಾಡಿಕೊಂಡು ತುಸುವೆ ಮುಂದೆ ಇರುವ ಕಾಲೇಜಿಗೂ ಭೇಟಿ ನೀಡಿದೆವು. ಅದು ಚಿಕ್ಕದಾದ ಆದರೆ ಚೊಕ್ಕವಾಗಿದ್ದ ಕಾಲೇಜು. ಅಲ್ಲಿ ಅಂಕೋಲೆಯವರೊಬ್ಬರು  ಪ್ರಾಂಶುಪಾಲರಾಗಿದ್ದರು. ಅವರಿಗೆ ಹತ್ತಿರದಲ್ಲೆ ಇದ್ದ ಇನ್ನೊಂದು ಕಾಲೇಜಿಗೆ ವರ್ಗ ಮಾಡಿ  ನನಗೆ ಕಾರವಾರದಿಂದ ದಿನಾ ಓಡಾಡಲು ಅನುಕೂಲವಾಗಲಿ ಎಂದು ಆ ಸ್ಥಳ ನೀಡಿದ್ದರು. ನಾನು ಬರುವ ಮಾಹಿತಿ ಅವರಿಗೆ ಗೊತ್ತಿತ್ತು . ಮತ್ತು ಉಪನಿರ್ದೇಶಕರೆ ಇಲಾಖೆಯವರು ಒಬ್ಬ ಅನುಭವಿ ವ್ಯಕ್ತಿಯನ್ನು ಇಲ್ಲಿಎ ಕಳುಹಿಸಿರುವರು ಎಂದು ತಿಳಿಸಿದ್ದರು, ನನ್ನ ವಿವರ ಅವರಿಗೆ ನಾನು ಬರುವದಕ್ಕಿಂತ  ಮೊದಲೆ ಅಲ್ಲಿ ತಿಳಿದಿತ್ತು.
ಕಾಲೇಜಿಗೆ ಭೇಟಿ ನೀಡಿ ನಂತರ ಗಿಡ ಮರಗಳ ಮಧ್ಯ ಪರ್ಣ ಕುಠೀರದಂತಿರುವ ಮನೆ ಹೋದೆವು.   ಅಲ್ಲಿನ ಸಸ್ಯರಾಶಿ ಜಲಸಮೃದ್ಧಿ  ಕಣ್ಣು ಮನಸ್ಸುಎರಡನ್ನೂ ತುಂಬಿದವು
ಮಾರನೆ ದಿನ ಕಾರವಾರದಿಂದ ಆರು ಕಿಲೋಮೀಟರ್‌ ದೂರದಲ್ಲಿನ ಕಾಲೇಜಿಗೆ ಹೋದೆ. ಕಾಲೆಜಿ ಹೈಸ್ಕೂಲು ಸೆರಿ ಮೂರುನೂರು ವಿದ್ಯಾಥಿಗಳು.ಪಿಯುಸಿಯಲ್ಲಿ ಒಟ್ಟು ನೂರು ಮಕ್ಕಳು. ಅದರಲ್ಲಿ ವಾಣಿಜ್ಯ ವಿಬಾಗದಲ್ಲಿ ಬೆರಳೆಣಿಕೆಯ ವಿದ್ಯಾರ್ಥಿಗಳು.೧೨ ಜನ ಶಿಕ್ಷಕರು ಆರು ಜನ ಉಪನ್ನಾಸಕರು ಇದ್ದರು. ಅದೇಕೋ ಅವರಲ್ಲಿ ಮಹಿಳೆಯರೇ ಬಹಳ.ಹೈಸ್ಕೂಲಿನಲ್ಲಿ ಒಬ್ಬರು ಕಾಲೇಜಿನಲ್ಲಿ ನಾಲಕ್ಕು ಜನ ಪುರುಷ ಉದ್ಯೋಗಿಗಳು ಇದ್ದರು.  ಡ್ರಿಲ್‌ ಮಾಷ್ಟರ್‌ ಬಿಟ್ಟು  ಎಲ್ಲ ಹುದ್ದೆಗಗಳೂ ತುಂಬಿದ್ದವು. ಜಿಲ್ಲಾ ಕೇಂದ್ರಕ್ಕೆ ಹತ್ತಿರವಾದ್ದರಿಂದ ಎಲ್ಲರೂ ನಿತ್ಯ ಪ್ರಯಾಣಿಕರು. ಬಹುತೇಕಜನ ಅಲ್ಲಿಯವರೆ. ಅವರ ವಾಸ ಕಾರವಾರ ಇಲ್ಲವೆ ಹತ್ತಿರದ ಅಂಕೋಲೆಯಲ್ಲಿ.ಕಾಲೇಜು ಸುಸಜ್ಜಿತವಾಗಿತ್ತು. ಒಳ್ಳೆಯ ಕಟ್ಟಡ, ಸಾಕಷ್ಟು ಆಟದ ಮೈದಾನ, ಕಾಂಪ್ಯೂಟರ್‌ ಕಲಿಕೆಯ ವ್ಯವಸ್ಥೆ ಎಲ್ಲಕ್ಕಿಂತಲೂ ಪೂರ್ಣ ಪ್ರಮಾದಲ್ಲಿ ಸಿಬ್ಬಂದಿ ಇದ್ದುದರಿಂದ ಪಾಠ ಪ್ರವಚನ ಸುಗಮವಾಗಿ ಸಾಗಿತ್ತು. ಇಲ್ಲಿನ ಸಿಬ್ಬಂದಿಗೂ ನನಗೆ ಮೇಜರ್‌ ಆಪರೇಷನ್‌ ಆಗಿದೆ ಅದಕ್ಕೆಂದೆ ಇಲಾಖೆಯು ಇಲ್ಲಿಗೆ ನನಗೆ ವರ್ಗ ಮಾಡಿರುವರು ಎಂಬ ಮಾಹಿತಿ ಇತ್ತು . ಅದು ಹೇಗೆ ಗೊತ್ತಾಯಿತೋ ನಾನು ಅರಿಯೆ,ಅಲ್ಲಿನ ಹಿರಿಯ ಸಹಾಯಕರು ನಾನು ಹೆಚ್ಚು ಶ್ರಮ ತೆಗೆದುಕೊಳ್ಳ ಬಾರದೆಂದೂ,ಸಾವಕಾಶವಾಗಿ ಬಂದು ಬೇಗ ಹೋದರೂ ಸರಿ ಎಲ್ಲ ತಾವು ನೋಡಿಕೊಳ್ಳುವುದಾಗಿ ತಿಳಿಸಿದರು. ಅಲ್ಲದ ನನಗೆ ಪ್ರಯೋಗಾಲಯದಲ್ಲಿ ಹಾಸಿಗೆ ಹಾಸಿ ವಿಶ್ರಾಂತಿ ತೆದುಕೊಳ್ಳಲು ವ್ಯವಸ್ಥೆ ಮಾಡಬಯಸಿದರು, ಅವರ ಕಳಕಳಿಗೆ ನಾನು ಅಭಿನಂದಿಸಿದೆ.ಶಸ್ತ್ರ ಕ್ರಿಯೆ ಆಗಿದ್ದರೂ ನಾನು ದೈನಂದಿನ ಕೆಲಸ ಮಾಡಲು ಶಕ್ತ. ವೈದ್ಯರು ಏನೆ ಕೆಲಸ ಮಾಡಲು ಅಭ್ಯಂತರವಿಲ್ಲ ಎಂದೆ ತಿಳಿಸಿದ್ದಾರೆ. ಅಲ್ಲದೆ ನನ್ನ ಕರ್ತವ್ಯ ವನ್ನು ಸರಿಯಾಗಿ ನಿರ್ವಹಿಸಲು ತೊಂದರೆ ಯಾದರೆ ನಾನೆ ರಜೆ ತೆಗೆದುಕೊಳ್ಳುತ್ತಿದ್ದೆ. ಇನ್ನು ಇರುವ ಮೂರು ವರ್ಷವೆ ನನಗೆ ಕೆಲಸ ಮಾಡಲು ಅವಕಾಶ. ನಿವೃತ್ತಿಯಾದ ನಂತರ ವಿಶ್ರಾಂತಿ ಇದ್ದೆ ಇದೆ. ಆದ್ದರಿಂದ ಹೆಚ್ಚಿನ ಸೌಲಭ್ಯದ ಆಗತ್ಯವಿಲ್ಲ. ಎಂದು ತಿಳಿಸಿದೆ.ಕಾಲೇಜಿನಲ್ಲಿ ಪೂರ್ಣಹೊಣೆ ವಹಿಸಿಕೊಂಡೆ. ಅಲ್ಲಿನವರ ಹೆಂಗರಳು. ಶಿಸ್ತುಬದ್ದ ನಡವಳಕೆ ಸದಾ ಸಮಸ್ಯೆಯ ಸುಳಿಯಲ್ಲೆಯೆ ಕೆಲಸ ಮಾಡಿದ ನನಗೆ ಬಿರುಬೇಸಿಗೆಯಲ್ಲಿ ತಂಗಾಳಿ ತೀಡಿದಂತೆ ಅನಿಸಿತು.
ಎರಡು ದಿನ ಬಿಟ್ಟು  ಕಾರವಾರದ ಉಪನಿರ್ದೇಶಕರ ಕಚೇರಿಗೆ ಹೋಗಿ ಅವರನ್ನು ಭೇಟಿ ಮಾಡಿದೆ. ಅವರು ದಕ್ಷಿಣ ಕನ್ನಡದ ಮೂಲದವರು. ಅವರಿಗೆ ನಿರ್ದೇಶಕರಿಂದ ನನ್ನ ಕುರಿತು ಮಾಹಿತಿ ಇತ್ತು. ನನ್ನನ್ನು ಬಹಳ ಆದರದಿಂದ ಸ್ವಾಗತಿಸಿದರು. ಮೇಲಾಗಿ ಪತ್ರಕರ್ತನಾಗಿದ್ದ ನನ್ನ ಮಗನು ಅವರಿಗೆ ಚಿರ ಪರಿಚಿತ,ನನಗೆ ಹೃದಯಶಸ್ತ್ರ ಕ್ರಿಯೆಯಾಗಿರುವುದರಿಂದ ಖುದ್ದು ನಿರ್ದೇಶಕರೆ ಆಸಕ್ತಿ ವಹಿಸಿ ಇಲ್ಲಿಗೆ  ಹಾಕಿರುವುದುನ್ನು ಅವರು ಅರಿತಿದ್ದರು
ಕಾಲೇಜು ಚಿಕ್ಕದು. ದೊಡ್ಡ ದೊಡ್ಡ ಕಾಲೇಜುಗಳನ್ನೆ ನಿಭಾಯಿಸಿ ಬಂದ ನಿಮಗೆ ಇದು ಬಹಳ ಸರಳ ಕೆಲಸ. ಕಾಲೇಜಿಗೆ ವಾರಕ್ಕೊಮ್ಮೆ ಹೋದರೂ ಸರಿ. ಉಳಿದ ದಿನ ನೀವು ಇಲ್ಲಿಯೆ ಬಂದು ನನಗೆ ಕಚೇರಿ ಕೆಲಸದಲ್ಲಿ ಸಹಾಯ ಮಾಡಬಹುದು, ಅದರಿಂದ ನಿಮಗೆ ಹೊತ್ತು ಹೊತ್ತಿಗೆ ಬಿಸಿ ಊಟವೂ ಸಿಗುವುದು. ಬಸ್ಸಿನಲ್ಲಿ ಹೋಗಿ ಬರುವ ಶ್ರಮ ಇರುವುದಿಲ್ಲ. ಎಂದು ಸಲಹೆ ನೀಡಿದರು.
ಅವರ ಈ ಉದಾರತೆಗೆ  ಮತ್ತು ಕಳಕಳಿಗೆ ನಾನು ವಂದಿಸಿದೆ. ಮೊದಲು ಕಾಲೇಜಿಗೆ ಹೋಗಿ ಅಲ್ಲಿನ ಪರಿಸರ ಅರಿತು ನಿರ್ಧಾರತೆಗೆದು ಕೊಳ್ಳುವುದಾಗಿ ತಿಳಿಸಿದೆ,
ಅವರೇನೋ ಉದಾರತೆಯಿಂದ ನನಗೆ ರಿಯಾಯಿತಿ ಕೊಡಲು ಮುಂದಾಗಿದ್ದರು. ಆದರೆ ಕಾಲೇಜಿಗೆ ಯಾವಾಗಲಾದರೂ ಒಮ್ಮೆ ಹೋಗಿ ಸಹಿ ಮಾಡಿ ಬರುವ ವಿಚಾರ ನನಗೆ ಹಿಡಿಸಲಿಲ್ಲ. ನಾನು ಮೂಲತಃ ಪ್ರಾಂಶುಪಾಲ. ಸಂಬಳ ಪಡೆಯುವುದುಕಾಲೇಜಿನಲ್ಲಿ. ನನಗೆ ಅನುಕೂಲ ಎಂದು ಅಲ್ಲಿಗೆ ಹೋಗದೆ ಉಪನಿರ್ದೇಶಕರ ಕಚೇರಿಯಲ್ಲೆ ಕಾರ್ಯ ಮಾಡುವುದಕ್ಕೆ ಮನ ಒಪ್ಪಲಿಲ್ಲ.ಇದು ಬರಿ ಬಾಯಿ ಮಾತಿನ ಸೂಚನೆ. ನನ್ನನ್ನು ನಿಯೋಜನೆ ಮಾಡಿಕೊಂಡರೆ ಅದು ಬೇರೆ ಮಾತು.ಆದರೆ ಯಾರೂ ಕೇಳುವುದಿಲ್ಲ ಎಂದು ಕಾಲೇಜಿಗೆ ಬಾರದೆ ಇರುವುದು ನನ್ನ ಮನಸ್ಸಿಗೆ ಒಗ್ಗದ ಮಾತಾಗಿತ್ತು.ಪ್ರಿನ್ಸಿಪಾಲರು ಕಾಲೇಜಿಗೆ ಸರಿಯಾಗಿ ಬರುತ್ತಿಲ್ಲ ಎಂದು ಜನರ ಬಾಯಿಗೆ ಬೀಳುವುದು ಮನಃ ಸಾಕ್ಷಿಗೆ ವಿರುದ್ಧವಾಗುವುದು.  ವಿನಯವಾಗಿ ಉಪನಿರ್ದೇಶಕರಿಗೆ ನನ್ನ ಅಭಿಪ್ರಾಯ ತಿಳಿಸಿದೆ. ನಾನು ಇರುವಾಗ ನಿಮಗೆ ಏಕೆ ಇಲ್ಲದ ಚಿಂತೆ. ಎಲ್ಲದಕ್ಕೂ ನಾನು ಉತ್ತರ ಕೊಡುವೆ, ವೃಥಾ ಏಕೆ  ಕಷ್ಟ ಪಡುವಿರಿ? ಎಂದರು.ನಾನು ಮುಗುಳ್ ನಕ್ಕು ಸುಮ್ಮನಾದೆ.ಕಾಲೇಜಿಗೆ ಹೋಗಿ ಮಕ್ಕಳೊಂದಿಗೆ ಇರುವುದು ನನಗೆ  ಎಂದೂ ಕಷ್ಟದ ಕೆಲಸ ಎನಿಸಿರಲಿಲ್ಲ.
ಇದುವರೆಗೂ ನಾನು ಕೆಲಸ ಮಾಡಿದ ಕಾಲೇಜಿಗಿಂತ ಇದು ಭಿನ್ನವಾಗಿತ್ತು.ಎಲ್ಲರೂ ತಮ್ಮ ಕೆಲಸ ಮಾಡಿ ಕೊಂಡು ಹೋಗುತಿದ್ದರು ಮಹಿಳೆಯರೆ ಇದ್ದುದರಿಂದ ಹೈಸ್ಕೂಲು ವಿಭಾಗವಂತೂತಲೆ ನೋವೆ ಇರಲಿಲ್ಲ. ಕಾಲೇಜುವಿಭಾಗದಲ್ಲಿ ಇಂಗ್ಲಿಷ್‌ ಭಾಷೆಯೊಂದನ್ನು ಬಿಟ್ಟರೆ ಬಹುತೇಕ ಅತ್ಯುತ್ತಮ ಫಲಿತಾಂಶ ಬರುತಿತ್ತು. ಗ್ರಾಮಾಂತರ ಪ್ರದೇಶ. ಕನ್ನಡ ಮಾಧ್ಯಮ.ವಾದ್ದರಿಂದ  ಪಿಯುಸಿಯಲ್ಲಿ ಮಕ್ಕಳ ಇಂಗ್ಲಿಷ್‌ ಜ್ಞಾನ ಸುಧಾರಿಸಬೇಕಿತ್ತು. ಅದಕ್ಕೆ ನಾನೆ ವಿಶೇಷ ತರಗತಿಗಳನ್ನು ತೆದುಕೊಂಡು ಸುಧಾರಿಸಬಯಸಿದೆ.ಅಲ್ಲಿ ಎಲ್ಲ ಸರಿ ಇದ್ದರೂ ಒಂದುವಿಷಯ ಮಾತ್ರ ನನಗೆ ಕುಟುಕುತಿತ್ತು. ಎಲ್ಲರೂ  ಕಾರವಾರದಿಂದ ಬರುವವರೆ. ಬಸ್ಸು ತಡವಾದರೆ ಅನಿವಾರ್ಯ ವಾಗಿ ಅಶಿಸ್ತಿಗೆ ಅವಕಾಶವಿತ್ತು.ಬಸ್ಸುಗಳೇನೋ ಅರ್ಧ ಗಂಟೆಗೆ ಒಂದರಂತೆ ಇದ್ದವು. ಆದರೂ ಒಬ್ಬಿಬ್ಬರಾದರೂ ಬರುವುದು ತಡವಾಗುತಿತ್ತು. ಆ ಸಮಯದಲ್ಲಿ ಮೂಛೆ ಬಂದವರು ಮಕ್ಕಳನ್ನು ನಿಯಂತ್ರಿಸುವರು.ನಾನು ಸದಾ ಮುಂಚೆ ಬಂದು ಕೊನೆಗೆ ಹೋಗುವ ಅಭ್ಯಾಸ ಬೆಳಸಿಕೊಂಡಿರುವವನು. ಹಾಗಾಗಿ ಇದೊಂದು ವಿಷಯ ನನ್ನ ಮನಸ್ಸು ಕೊರೆಯುತಿತ್ತು.
ಒಂದು ದಿನ ನನಗೂ ಮನೆ ಬಿಡುವುದು ತಡವಾಯಿತು. ಮಗನೆ ಬಂದು ಬೈಕನಲ್ಲಿ ಬಸ್‌ ನಿಲ್ದಾಣಕ್ಕೆ  ಬಿಟ್ಟರೂ ಬಸ್ಸು ಮಿಸ್ಸಾಗಿತ್ತು . ಮುಂದೆ ಹತ್ತೆ ನಿಮಷಕ್ಕೆ ಬಸ್ಸು  ಇತ್ತು . ಬೈಕನಲ್ಲೇ  ಕಾಲೇಜಿನ ತನಕ ಡ್ರಾಪು ತೆದುಕೊಂಡರೂ ತಡವಾಗುತಿತ್ತು. ಸರಿ ಏನು ಮಡುವುದೆಂದು ತಿಳಿಯದೆ ಬಂದ ಬಸ್ಸನ್ನು ಹತ್ತಿ ಕುಳಿತೆ. ಕಾಲೇಜಿಗೆ ಬರುವಾಗ ಆದರೂ ೩೦ ನಿಮಿಷ ತಡವಾಯಿತು. ನಾನು ಮೂಬಾಗಿಲಿನಿಂದ ಇಳಿದರೆ ಹಿಂಬಾಗಿಲಿನಿಂದ  ಆರು ಜನ  ಶಿಕ್ಷಕರು ಬಸ್ಸಿನಿಂದ ದುಬ ದುಬನೆ  ಇಳಿದರು.. ನಾನು ಛೇಂಬರಿನಲ್ಲಿ ಕುಳಿತುಕೊಳ್ಳುತ್ತಿದ್ದಂತೆಯೇ ಅವರು ಗಡಿಬಿಡಿಯಲ್ಲಿ ಸ್ಟಾಫ್ ರೂಮಿಗೆ ಹೋಗಿ ಅಲ್ಲಿ ತಮ್ಮ ಬ್ಯಾಗುಗಳನ್ನು ಇಟ್ಟು ತುಸು ಸುಧಾರಿಸಿಕೊಂಡು ತಮ್ಮ ತರಗತಿಗಳಿಗೆ ತೆರಳಿದರು.
ಪಿರಿಯಡ್‌ ಮುಗಿಸಿಕೊಂಡು ಅವರೆಲ್ಲ ಹಾಜರಿ ಪುಸ್ತಕದಲ್ಲಿ ಸಹಿ ಮಾಡಲು ಬಂದರು. ನಾನು ತುಸು ಗೊಂದಲಕ್ಕೆ ಒಳಗಾಗಿದ್ದೆ. ನನಗೆ ಗೊತ್ತಿರುವಂತೆ ಮೊದಲಿನ ಬಸ್ಸು ಸಿಗದೆ ಇನ್ನೊಂದು ಬಸ್ಸು ಹಿಡಿದು ಬರುವುದರಿಂದ ತಡವಾಗಿತ್ತು. ಯಾರೂ ಉದ್ದೇಶ ಪೂರ್ವಕವಾಗಿ ತರಗತಿಗೆ ಚಕ್ಕರ್‌ ಹೊಡೆದಿರಲಿಲ್ಲ. ಅಲ್ಲದೆ ನಾನೂ ತಡವಾಗೆ ಅವರ ಜೊತೆಗೆ ಬಂದಿದ್ದೆ.  ಇದೇ ದೆ ಮುಂದುವರಿದರೆ ಶಿಸ್ತಿಗೆ ಭಂಗಬರಬಹುದು.ಯೋಚನೆ ಮಾಡಿ ಒಂದು ಕ್ರಮತೆಗೆದು ಕೊಂಡೆ. ಮೊದಲು ನಾನೆ ಅರ್ಧ ದಿನ ರಜೆ ಯನ್ನು ಹಾಜರಿಯಲ್ಲಿ ನನ್ನ ಹೆಸರಿನ ಮುಂದೆ ಗುರುತು ಮಾಡಿದೆ. ಇಬ್ಬರು ಶಿಕ್ಷಕಿಯರು ಸಂಕೋಚ ದಿಂದ ಮೇಜಿನ ಮುಂದೆ ಬಂದು ನಿಂತರು.ಹಾಜರಿ ಪುಸ್ತಕ ತೆಗೆದು ನೋಡಿದರು, ನಾನೆ ಅರ್ಧ ದಿನ ರಜೆ ಹಾಕಿಕೊಂಡಿರುವುದು ಅವರಿಗೆ ಅಚ್ಚರಿಯಾಯಿತು.ತಾವು ಸಹಿ ಮಾಡದೆ ನನ್ನಮುಖ ನೋಡಿದರು.
ನಿಜ ,ನೀವು  ಉದ್ದೇಶ ಪೂರ್ವಕವಾಗಿ ತಡವಾಗಿಬಂದಿಲ್ಲ. ಆದರೆ ಮಕ್ಕಳಿಗಂತೂ ತೊಂದರೆಯಾಗಿದೆ. ನಾನೂ ತಡವಾಗಿ ಬಂದಿರುವೆ. ಸಮಯಪ್ರಜ್ಞೆ ಇದ್ದರೆ ಅರ್ಧ ಗಂಟೆ ಮೊದಲೆ ಮನೆ ಬಿಟ್ಟು ಮುಂಚಿನ ಬಸ್ಸಿಗೆ ಬರಬೇಕಾಗಿತ್ತು. ಅದರಿಂದ ಬಸ್ಸು ಇರಲಿಲ್ಲ ಎಂದು ಹೇಳುವುದು ಪರಿಹಾರವಲ್ಲ. ನಾನೂ ರಜೆ ಹಾಕಿಕೊಂಡಿರುವೆ  ನೀವೂ ಅರ್ಧ ದಿನದ ರಜೆ ಚೀಟಿ  ಕೊಡಿ. ಬೇಕಾದರೆ ನೀವು ಪಾಠ ಮಾಡದೆ ವಿಶ್ರಾಂತಿ ತೆಗದುಕೊಳ್ಳಿ. ನನ್ನ ಅಭ್ಯಂತರವಿಲ್ಲ ಮಧ್ಯಾಹ್ನದಿಂದ ತರಗತಿಗೆ ಹೋಗಬಹುದು. ನಿಮ್ಮ ತರಗತಿಗಳಿಗೆ ಗೈರು ಹಾಜರಿ ವ್ಯವಸ್ಥೆ ಮಾಡುವೆ. ಆದರೆ ಬಸ್ಸಿನಕಾರಣದಿಂದ ತಡವಾದರೆ ವಿನಾಯತಿ ಕೊಡಲಾಗುವುದಿಲ್ಲ.ಏನಾದರೂ ವ್ಯವಸ್ಥೆ ಮಾಡಿಕೊಂಡು ಸಮಯಕ್ಕೆ ಸರಿಯಾಗಿ ಬರಬೇಕಾದುದು ನಮ್ಮಕರ್ತವ್ಯ.  ಎಂದೆ’
ಅವರು ಎರಡು ಮಾತಿಲ್ಲದೆ ವಾಪಸ್ಸು ಹೋದರು. ಐದು ನಿಮಿಷ ಬಿಟ್ಟು ಹಿರಿಯ ಸಹಾಯಕರನ್ನ ಕರೆದು ಆರೂ ಜನರ ತರಗಿತಗಳಿಗೆ ಗೈರುಹಾಜರಿ ವ್ಯವಸ್ಥೆ  ಮಾಡಲು ಹೇಳಿದೆ. ಅವರು ಅಗತ್ಯವಿಲ್ಲ ಸಾರ್‌, ಅವರು ರಜೆ ಚೀಟಿ ಕೊಟ್ಟರೂ ತರಗತಿಗೆ ಹೋಗಲು ಸಿದ್ಧರಿದ್ದಾರೆ. ಎಂದರು
ಅದೆ ಕೊನೆ . ಯಾರೂ ತಡವಾಗಿ ಬರಲಿಲ್ಲ. ಹಾಗೇನದರೂ ಅದರೆ ಫೋನು ಮಾಡಿ ಅರ್ಧ ದಿನ ರಜೆ ಹಾಕಲು ಮನವಿ ಮಾಡುತಿದ್ದರು
ನಾನು ಅಂದುಕಂಡಂತೆ ಯಾವುದೆ ಅಸಮಧಾನ ದುಸುಮುಸು ಕಾಣಲಿಲ್ಲ. ಪ್ರಿನ್ಸಿಪಾಲರೆ ರಜ ಹಾಕಿಕೊಂಡಿರುವಾಗ ನಾವು ಮಾತನಾಡಲು ಬರುವುದೆ, ಇನ್ನು ಮೇಲೆ ಮನೆಯನ್ನು ಅರ್ಧ ಗಂಟೆ ಮೊದಲೆ ಬಿಟ್ಟರೆ ಆಯಿತು. ಅವರ ಮಾತಿನಲ್ಲು ಅರ್ಥವಿದೆ.  ಎಂದು ಅವರವರೆ ಮಾತನಾಡಿಕೊಂಡರೆಂಬ ಮಾಹಿತಿ ಬಂತು. ಯಾವುದೆ ಭಿನ್ನಾಭಿಪ್ರಾಯಕ್ಕೂ ಎಡೆ ಗೊಡದೆ ದೊಡ್ಡ ಸಮಸ್ಯೆ ಪರಿಹಾರವಾಯಿತು.


Saturday, July 13, 2013

ಸರಣಿ- ಸಾಮರಸ್ಯ ಮೂಡಿಸಿದ ಸಮಸ್ಯೆ.

ಸಮಸ್ಯೆಯೇ ಸಾಮರಸ್ಯಕ್ಕೆ ಕಾರಣವಾಯಿತು
ನಾನು ಪ್ರಾಂಶುಪಾಲನಾಗಿ ಹೊಸ ಕಾಲೇಜಿನಲ್ಲಿ ಅಧಿಕಾರ ವಹಿಸಿಕೊಂಡ ಹೊಸದು. ಅಲ್ಲಿ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ.ವಾಗಿದೆ. ಪ್ರತಿ ತರಗತಿಯಲ್ಲಿ ನಾಲಕ್ಕು ಐದು ಜನ ಇದ್ದರು. ನಾನು ಹೋದ ತಿಂಗಳೊಪ್ಪತ್ತಿನಲ್ಲೆ ಗಣೇಶನ ಹಬ್ಬ ಬಂದಿತು.ಆ ಕಾಲೇಜಿನಲ್ಲೂ ಗಣಪತಿ ಉತ್ಸವದ ಆಚರಣೆಯ ಪದ್ದತಿ ಇತ್ತು. ಅದು ವಿದ್ಯಾರ್ಥಿ ಸಂಘದ ಚಟುವಟಿಕೆಯ ಒಂದು ಭಾಗವಾಗಿತ್ತು   ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ವಿದ್ಯಾರ್ಥಿ ಸಂಘದ ವಂತಿಗೆ ಜತೆಗೆ ವಿದ್ಯಾರ್ಥಿಗಳೂ ಚಂದಾ ಹಾಕಿ ಮೂರು ದಿನದ ಉತ್ಸವ ಮಾಡುವುದು ಎಂದು ತೀರ್ಮಾನವಾಯಿತು. ಹಬ್ಬ ಹತ್ತಿರ  ಬಂದಿತು .ಆದರೆ ವಂತಿಗೆ ಹಣ ಪೂರ್ಣವಾಗಿ ಸಂಗ್ರಹ ವಾಗಿರಲಿಲ್ಲ.  ಹಲವು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಇದು ನಮ್ಮ ಹಬ್ಬವಲ್ಲ ಆದುದರಿಂದ ನಾವು ಏಕೆ ವಂತಿಗೆ ಕೊಡಬೇಕು ಎಂದು ತಕರಾರು ತೆಗೆದಿದ್ದರು. ಅದನ್ನುನೋಡಿ ಇತರ ಕೆಲವರು ಅವರು ಕೊಡದಿದ್ದ ಮೇಲೆ ನಾವೂ ಕೊಡುವುದಿಲ್ಲ ಎಂದು ತಗಾದೆ ಮಾಡಿದ್ದರು.. ಇಗಾಗಿ ಹಣ ಸಂಗ್ರಹ ನೆನಗುದಿಗೆ ಬಿದ್ದಿತ್ತು. ವಿಚಾರಿಸಿದಾಗ ಅನೇಕ ವಿದ್ಯಾರ್ಥಿಗಳು ಅವರು ಕೊಡದಿದ್ದರೆ ಬೇಡ ನಾವೆ ಹೆಚ್ಚುವರಿಯಾಗಿ ಕೊಟ್ಟು ಮೊದಲಿಗಿಂತ ಜೋರಾಗಿ ಆಚರಿಸೋಣ ಎಂಬ ಹುಮ್ಮಸ್ಸಿನಲ್ಲಿದ್ದರು. ಆದರೆ ಈ ವಿಷಯ ನನ್ನ ಗಮನಕ್ಕೆ ಬಂದಾಗ ಈ ರೀತಿಯ ಯೋಚನೆ ಸರಿಯಲ್ಲ ಎನಿಸಿತು. ಇದರಿಂದ ಕಾಲೇಜಿನ ಒಗ್ಗಟ್ಟು ಮಾಯವಾಗಿ ಬಿಕ್ಕಟ್ಟು ಮೂಡುವ ಸಂಭವ ಇದೆ ಎನಿಸಿತು.ಇವರು ಈ ಹಬ್ಬ ತಮ್ಮದು ಎಂದು ಅವರನ್ನು ಬಿಟ್ಟು ತಾವೆ ಚಂದಾಹಾಕಿ ಆಚರಿದರೆ ನಾಳೆ ಅವರೂ  ಸಹಾ ನಮ್ಮಷ್ಟಕ್ಕೆ ನಾವೆ ನಮ್ಮ ಹಬ್ಬವನ್ನು ಆಚರಿಸುವೆವು ಎನ್ನಲು ಅವಕಾಶವಿತ್ತು. ಈ ಸಮಾರಂಭವು ವಿದ್ಯಾರ್ಥಿಗಳೆಲ್ಲರದು ಎಂಬ ಭಾವನೆಗೆ ಬಲವಾದ ಪೆಟ್ಟು ಕೊಡುತಿತ್ತು. ಇದರಿಂದ ಇಲ್ಲದ ಸಮಸ್ಯೆಯನ್ನು ನಾವೆ ಹುಟ್ಟಿಹಾಕಿದ ಹಾಗಾಗುತಿತ್ತು..  ಸರಕಾರಿ ಸಂಸ್ಥೆಯಲ್ಲಿ ಯಾವುದೆ ಒಂದು ಧರ್ಮಕ್ಕೆ ಸೀಮಿತವಾದ ಸಮಾರಂಭ ಆಚರಿಸಬಾರದು. ಹಾಗೆಂದು ಇದ್ದ ಸಂಪ್ರದಾಯ ಬಿಡಬಾರದು. . ನನಗೆ ಆ ತಕ್ಷಣ ಏನೂ ಹೊಳೆಯಲಿಲ್ಲ. ಆ ಸಮಸ್ಯೆಯು ಗುಂಗಿ ಹುಳ ದಂತೆ ರಾತ್ರಿಯೆಲ್ಲಾ ನನ್ನ ತಲೆಯಲ್ಲು ಗುಂಯ್‌ ಗುಡುತಿತ್ತು. ಕೊನೆಗೆ ಒಂದು ತೀರ್ಮಾನಕ್ಕೆ ಬಂದೆ . ಏನೆ ಆಚರಣೆ ಇರಲಿ ಅದು ಸಾರ್ವತ್ರಿಕ ವಾಗಿರಬೇಕು. ಅಂದಾಗ ಮಾತ್ರ ಅದು ಐಕ್ಯತೆಯ ಸಂಕೇತವಾಗುವುದು. ಮಾರನೆಯ ದಿನ ಎಲ್ಲ ಮಕ್ಕಳ ಸಭೆ ಕರೆಯಲಾಯಿತು.ಅಲ್ಲಿ ಈ ಆಚರಣೆಯ ವಿಧಾನ ಕುರಿತ ವಿಷಯ ವಿವರಿಸಲಾಯಿತು.ಇದು ಇಂದು ನಿನ್ನೆಯದಲ್ಲ. ಅನೇಕ ವರ್ಷಗಳಿಂದ ನಡೆದು ಬಂದ ಆಚರಣೆ.ಇದು ಸ್ವಾತಂತ್ರ್ಯ ಪೂರ್ವದಲ್ಲಿ ಲೋಕಮಾನ್ಯ ತಿಲಕರಿಂದ  ಇದು ಪ್ರಾರಂಭವಾಯಿತು. ಜನ ಮನದಲ್ಲಿನ ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸಲು ಇದು ಸಾಧನವಾಯಿತು.ಭಾರತೀಯರ ಐಕ್ಯತೆಯ  ಸಂಕೇತ ವಾಯಿತು. ಆದ್ದರಿಂದ ಇದನ್ನು ಒಂದು ಧರ್ಮಕ್ಕೆ ಸೀಮಿತ ಗೊಳಿಸುವುದು ಸಲ್ಲದು ಎಂದು ಎಲ್ಲರಿಗೂ ಮನದಟ್ಟು ಅಗುವಂತೆ ವಿವರಿಸಿದೆ. ಇನ್ನು ಆಚರಣೆಯ ವಿಧಾನ , ಹೆಚ್ಚು ಹಣ ವೆಚ್ಚಮಾಡಿ ವೈಭವದಿಂದ ಮಾಡಬೇಕೆಂದೇನೂ ಇಲ್ಲ. ಸರಳವಾಗಿ ಆಚರಿಬಹುದು ಎಂದು ಸೂಚಿಸಿದೆ. ಆದರೆ ಬಹುತೇಕ ವಿದ್ಯಾರ್ಥಿಗಳಿಂದ ಆಚರಣೆ ಅದ್ಧೂರಿಯಾಗಿರಬೇಕು ಎಂಬ ಬೇಡಿಕೆ ಬಂತು. ಹಾಗಿದ್ದರೆ ನಾನು ಚಂದಾ ಸಂಗ್ರಹಕ್ಕೆ ಅನುಮತಿಸಿದೆ. ಆದರೆ ಕಡ್ಡಾಯ ಮಾಡ ಬಾರದು. ಯಾರೂ ಧಾರ್ಮಿಕ ಕಾರಣದ ಮೇಲೆ ಚಂದಾ ನಿರಾಕರಿಸಬಾರದು ಆರ್ಥಿಕವಾಗಿ ತೊಂದರೆ ಇದ್ದರೆ  ನಾಮಕಾವಾಸ್ತೆ ಕೈಲಾದುದನ್ನು ಕೊಡಲಿ. ಆದರೆ ಇಲ್ಲ ಎನ್ನಬಾರದು, ಎಂದು ಮನವರಿಕೆ ಮಾಡಲಾಯಿತು.
 ಅಷ್ಟರಲ್ಲಿ ಒಂದು ದನಿ ಬಂದಿತು. ನಾವೂ ಪೂಜೆ ಮಾಡಬಹುದೆ ?  ಕೇಳಿದವನು ದಲಿತವರ್ಗದವ. ನಾನು ಖಂಡಿತ ಎಂದೆ. ನಾವು ಗಣೇಶನ ಪೂಜೆಗೆ ಹೊರಗಿನಿಂದ ಬ್ರಾಹ್ಮಣರನ್ನೋ, ಅಯ್ಯನವರನ್ನು ಕರೆಸುವುದು ಬೇಡ. ವಿಗ್ರಹಕ್ಕೆ ಜನಿವಾರ, ಲಿಂಗಧಾರಣೆಯ ಹಂಗಿಲ್ಲ. ನಮಗೆ ಮಂತ್ರ ಸಹಿತ ಪೂಜೆ ಎಂದೇನೂ ಇಲ್ಲ. ಯಾರಾದರೂ ವಿದ್ಯಾರ್ಥಿ ಶುಚಿಯಾಗಿ ಬಂದು ಪೂಜೆ ಮಾಡಬಹುದು. ಅವನಿಗೆ ಯಾರು ಬೇಕಾದರೂ ಇಬ್ಬರು ಮೂವರು ಸಹಾಯ ಮಾಡಲಿ. ಅದನ್ನು ಮಕ್ಕಳೆ ನಿರ್ಧರಿಸಲಿ,  ಎಂದೆ.  ಸಾಧ್ಯವಾದರೆ ಅಲ್ಪ ಸಂಖ್ಯಾತ ಮತ್ತು ದಲಿತ ಮಕ್ಕಳೂ ಪೂಜಾ ತಂಡದಲ್ಲಿರಲಿ, ಎಂದು ತಿಳಿಸಿದೆ.
 ಆಗಾ ನಮ್ಮ ಸಹ ಶಿಕ್ಷಕರೊಬ್ಬರು , ಅದೆಲ್ಲಾ ಬೇಡ ಸಾರ್‌, ಅಲ್ಪ ಸಂಖ್ಯಾತರು ಮೂರ್ತಿ ಪೂಜೆ ಮಾಡುವುದು ಅವರ ಧರ್ಮದ ಪ್ರಕಾರ ನಿಷಿದ್ಧ,  ಹಾಗೇನಾದರೂ ಮಾಡಿಸಿದರೆ ಅವರ ಜನಾಂಗದಿಂದ ಆಕ್ಷೇಪಣೆ  ಬರಬಹುದು, ಎಂದು ಕೊಕ್ಕೆ ಹಾಕಿದರು.
ಒಂದು ಕ್ಷಣ ಅವರ ಮಾತು ನಿಜ ಎನಿಸಿತು. ಇದು ಇಲ್ಲದ ಸಮಸ್ಯೆಗೆ ಕಾರಣವಾಗಬಹುದು ಎನಿಸಿತು.ಆದರೆ ನನಗೆ ನಮ್ಮ ಊರಲ್ಲಿ ಆಚರಿಸುವ ಮೊಹರಂ ಹಬ್ಬದ ನೆನಪು ಬಂದಿತು. ಆ ಸಮಯದಲ್ಲಿ ಪಂಜಾಗಳಿಗೆ ಬಣ್ಣದ ಬಟ್ಟೆ ತೊಡಿಸಿ ಒಂಬತ್ತು  ದಿನ  ಅಹೋರಾತ್ರಿ ಪೂಜಿಸುವ ಪರಿಪಾಠ ಕಣ್ಣ ಮುಂದೆ  ಬಂದಿತು.ಕೆಲವು ಕಡೆ ಅದನ್ನು ಪೀರಲ ದೇವರು ಎಂದರೆ ಇನ್ನೂ ಕೆಲವು ಕಡೆ ಬಾಬಯ್ಯನ ಹಬ್ಬ ಎನ್ನುವರು.  ಈ ಹಬ್ಬವನ್ನು ಮುಸ್ಲಿಮರ ಜತೆ ಹಿಂದೂಗಳೂ ಆಚರಿಸುವರು. ಕೆಲವು ಗ್ರಾಮಾಂತರ  ಪ್ರದೇಶಗಳಲ್ಲಿ ಹಿಂದೂಗಳ ಸಂಖ್ಯೆಯೆ ಅಧಿಕ.  ಹೆಣ್ಣು ,  ಪಿಂಛಾದಿಂದ  ಮಗುವಿ ಮೈ ಸವರಿದರೆ ರೋಗ  ನಿವಾರಣೆಯಾಗುವುದು ಎಂಬುದು  ನಂಬಿಕೆ. ಐದನೆ ದಿನ ಏಳನೆ ದಿನ ದೇವರನ್ನು ಹೊತ್ತವರು ಮೆರವಣಿಗೆಯಲ್ಲಿ ಊರ ಸಂಚಾರಕ್ಕೆ ಹೊರಡುವುರು.ಆಗ ಅದರ ಪಾದದ ಮೇಲೆ ತುಂಬಿದ ಕೊಡದ ನೀರು ಹಾಕಿ ಅದನ್ನತಮ್ಮ ಮೈಮೇಲೆ ಸಿಡಿಸಿಕೊಳ್ಳುವರು.ಅದರ ಲೋಭಾನದ ಹೊಗೆ ಹಾಕಿಸಿಕೊಂಡರೆ ಅನಿಷ್ಟ ಪರಿಹಾರವಾಗುವುದು ಎಂದು ಬಲವಾಗಿ ನಂಬಿರುವರು. ಅಷ್ಟೆ ಅಲ ಆ ದೇವರುಗಳು ಹಳ್ಳಿಯಲ್ಲಿನ ದುರುಗಮ್ಮ , ಗಾಳೆಮ್ಮನ ಗುಡಿಗೆ ಬಂದು ತಮ್ಮ ತಂಗಿಯನ್ನು ನೋಡಿಕೊಂಡು ಹೋಗಬೇಂಬ ವಾಡಿಕೆ ಇದೆ.  ಊರಲ್ಲೆ ಎರಡು ಕಡೆ ಇಟ್ಟಿದ್ದರೆ , ಇಲ್ಲವೆ ಹತ್ತಿರದಲ್ಲೆ ಇರುವ ಊರಿಗೆ ಹೋಗಿ ತಮ್ಮ ಭಾಯಿಯನ್ನು ಭೇಟಿಯಾಗುವರು.ಅದನ್ನು ಅಲಾಯಿ ಬಿಲಾಯಿ ಕೊಡುವುದು ಎನ್ನುವರು. ಅಲ್ಲದೆ ದೇವರ ಮಂದೆ ತೆಗೆದ ಆಲಾಯಿ ಕುಣಿಯಲ್ಲಿ ಬೆಂಕಿಹಾಕಿ ಸುತ್ತಲೂ ರಾತ್ರಿ ಬಹು ಹೊತ್ತಿನ ತನಕ ಕುಣಿಯುವರು.ಬಹತೇಕ ಅವರೆಲ್ಲ ಹಿಂದುಗಳೆ. ಒಂಬತ್ತನೆ ದಿನ ರಾತ್ರಿ ಖತಲ್‌ ರಾತ್ರಿ. ಅದೂ ಕತ್ತಲ ರಾತ್ರಿ ಎಂದೆ ಪ್ರಸಿದ್ಧಿ. ಅಂದು ರಾತ್ರಿ  ಇಡೀ   ಅವುಗಳ ಓಡಾಟ. ಆಗಿನ  ಜನ ಜಂಗುಳಿ ಹೇಳ ತೀರದು. ಅಂದು ಬೆಂಕಿ ತುಳಿಯುವುದೂ ಇದೆ. ಹತ್ತನೆಯ ದಿನ ದೇವರು ಸಾಯುವ ದಿನ. ಅಂದು ಸಂಜೆ  ಎಲ್ಲರೂ ಮೆರವಣಿಗೆಯಲ್ಲಿ ನೀರಿನ ತಟಾಕಕ್ಕೆ ಹೋಗಿ ದೇವರಬಟ್ಟೆ ತೆಗೆದು  ಪೆಟ್ಟಿಗೆಯಲ್ಲಿಟ್ಟು ಕಂಡು ಶೋಕ ಗೀತೆ ಹಾಡುತ್ತಾ ಮೂಲ ಸ್ಥಾನಕ್ಕೆ ಬರುವರು. ಮತ್ತೆ ಮುಂದಿನ ವರ್ಷದವರೆಗೆ ಅವನ್ನು ಮಸೀದೆಯಲ್ಲಿ ಭದ್ರವಾಗ ನೇತು ಹಾಕುವರು. ಅಲ್ಲಿಗೆ ಮೊಹರಂ ಮುಕ್ತಾಯ. ಈ ಆಚರಣೆ ಅಲ್ಪ ಸ್ವಲ್ಪ ವ್ಯತ್ಯಾಸದೊಂದಿಗೆ ಎಲ್ಲ ಕಡೆ ಇದೆ.ದೇವರಿಗೂ ಮಾನವರಂತೆ ಅಕ್ಕ, ತಮ್ಮ, ಸಂಬಂಧ ಕಲ್ಪಿಸಿ, ಕೊನೆಗೆ ಸಾವೂ  ಇದೆ ಎಂದು ನಂಬುವ ಜನಪದದ ರೀತಿ ಬಹು ವಿಸ್ಮಯಕಾರಿ. ಅದೂ ಎಲ್ಲ ಜಾತಿ ಧರ್ಮದ ಕಟ್ಟು ಮೀರಿದ ಆಚರಣೆಯಾಗಿದೆ.ಈ ವಿಷಯವನ್ನು ನಮ್ಮ ಶಿಕ್ಷಕರ ಸಭೆಯಲ್ಲಿ ಚರ್ಚಿಸಿದೆ. ಎಲ್ಲರೂ ಈ ರೀತಿ ಆರಣೆ ಇರುವುದು ನಿಜ ಎಂದು ಒಪ್ಪಿಕೊಂಡರು. ಆದರೆ ಮೊದಲಿನ ಜೋರು ಇಲ್ಲ ಎಂದರು ಹಾಗಿರುವಾಗ ಗಣಪತಿಯೂ ಒಂದು ಸಾಂಕೇತಿಕ ಉತ್ಸವವಾಗಬೇಕು.ಅದನ್ನು ಯಾವುದೆ ಧರ್ಮಕ್ಕೆ ಸೀಮಿತ ಗೊಳಿಸಬಾರದು ಇದು ಪರಂಪರೆಯ ಒಂದು ಭಾಗ. ಶಾಲೆಯಲ್ಲಿನ ಆಚರಣೆ ಸಮಾಜಕ್ಕೆ ಮಾದರಿಯಾಗಬೇಕು. ಇದು ಜಾತಿ ಮತಗಳ ಸೋಂಕಿನಿಂದ ದೂರವಿರಬೇಕು  ಎಂದು ಅವರಿಗೆಲ್ಲ ಮನದಟ್ಟು ಮಾಡಿದೆ. ಆಕ್ಷೇಪಣೆ ಮಾಡಿದವರೂ  ತಲೆ ದೂಗಿದರು.
ಆ ವರ್ಷ ಗಣೇಶನ ಉತ್ಸವ ಚೆನ್ನಾಗಿಯೆ ನಡೆಯಿತು.ಎಲ್ಲ ಮಕ್ಕಳೂ ಉತ್ಸಾಹದಿಂದ ಭಾಗವಹಿಸಿದರು  ತಳಿರು ತೋರಣ ಕಟ್ಟುವಲ್ಲಿ , ಮಂಟಪ ಅಲಂಕಾರ ಮಾಡುವ  ಕೆಲಸದಲ್ಲಿ, ಬಣ್ಣದ ಕಾಗದ ಕತ್ತರಿಸಿ ಅಂಟಿಸುವಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡಿದರು. ಫುಜೆಯ ದಿನ ಬಂದಿತು. ಅಂದು ಪೂಜೆಗೆ ಒಬ್ಬರ ಬದಲು ಮೂವರು ತಂಡವನ್ನು   ಪೂಜೆ ಮಾಡಲು  ನಿಯೋಜಿತವಾಯಿತು. ಪೂಜಾ ವಿಧಾನವನ್ನು ತಿಳಿದವನಿ ಜತೆ ಅಲ್ಪಸಂಖ್ಯಾತ ಮತ್ತು ದಲಿತ ವಿದ್ಯಾರ್ಥಿಇರುವ ತಂಡ  ಪೂಜೆ ಮಾಡಿತು. ಒಬ್ಬನು ಶ್ಲೋಕ ಹೇಳಿದರೆ ಇನ್ನೊಬ್ಬನು ಹೂ ಏರಿಸಿದ. ಮತ್ತೊಬ್ಬನು ಗಂಟೆಬಾರಿಸಿ  ಮಂಗಳಾರತಿ ಎತ್ತಿದ. ತೀರ್ಥ ಪ್ರಸಾದ ವಿತರಣೆಯೊಂದಿಗೆ ಉತ್ಸವವು ಯಾವುದೆ ಅಡೆ ತಡೆಯಿಲ್ಲದೆ ಸಾಂಗವಾಗಿ ಮುಗಿಯಿತು.
 ಗಣೇಶನ ವಿಸರ್ಜನೆಯನ್ನು  ಐದನೆ ದಿನ  ಏಳನೆ  ದಿನ  ಮಾಡುವುದು  ವಾಡಿಕೆ.ಅದರಿಂದ ಅಷ್ಟೂ ದಿನ ಪಾಠ ಪ್ರವಚನಕ್ಕೆ ತೊಂದರೆ. ಅದರಿಂದ ಅವದಿಯನ್ನು ಮೂರೆ  ದಿನಕ್ಕೆ ಇಳಿಸಲಾಯಿತು. ಪೂಜಾ ಸಮಯದಲ್ಲಿ ಬಿಡುವಿರುವ ತರಗತಿಯಮಕ್ಕಳು ಮಾತ್ರ ಇದ್ದರೆ ಸಾಕೆಂದು ವಿಧಿಸಲಾಯಿತು. ಜೊತೆಗ ವಿರಾಮವಿರುವ ಶಿಕ್ಷಕರು ಕೂಡಾ ಭಾಗವಹಿಸುವರು. ಮೂರನೆಯ ದಿನ ಮಾತ್ರ ಮಧ್ಯಾಹ್ನ ಎಲ್ಲರಿಗೂ ಪಾಠ ಇಲ್ಲ.   ಎಲ್ಲರೂ ಸೇರಿ ಅದ್ಧೂರಿಯಿಂದ ಮೆರವಣಿಗೆಯಲ್ಲಿ ಗಣೇಶನನ್ನು ಹತ್ತಿರದ ಕೆರೆಗೆ ಕೊಂಡೊಯ್ಯಲಾಯಿತು. ಶಾಲೆಯ ಡ್ರಮ್‌ ಸೆಟ್‌, ತತ್ತೂರಿ ಧ್ವನಿಯಜತೆಗೆ ನೂರಾರು ಕಂಠದಿಂದ ಹೊರಟ ಗಣಪತಿ ಬಪ್ಪಾ ಮೋರಯ್ಯಾ, ಮುಂದಿನ ವರ್ಷಕ್ಕೆ ಬಾರಯ್ಯಾ ಎಂಬ ಘೋಷಣೆ ನಿನದಿಸುತಿತ್ತು. ವಿಸರ್ಜನೆಯ ನಂತರ ಚರುಪು ಹಂಚಿ ಕಾಲೇಜಿಗೆ ವಾಪಸ್ಸಾದೆವು
ಸಮಸ್ಯೆ ಯಾಗಬಹುದಿದ್ದ ವಿಷಯ ಸಾಮರಸ್ಯಕ್ಕೆ ಕಾರಣವಾಯಿತು.   . 



Wednesday, July 10, 2013

ವಾಯುವಿಹಾರ ಜೊತೆಗೆ ವ್ಯಾಪಾರ


ಬೆಂಗಳೂರು ಉದ್ಯಾನಗಳ ನಗರ ಎಂಬ ಹೆಮ್ಮಗೆ ಪಾತ್ರವಾಗಿತ್ತು  ಹಲವು ದಶಕಗಳ ಹಿಂದೆ. ಬೆಂಗಳೂರು ಎಂದರೆ ಕಬ್ಬನ್‌ಪಾರ್ಕ ಮತ್ತು ಲಾಲ್‌ಬಾಗ್‌ಗಳ ನೆನಪು ಬರುವುದು. ಅವು ಶತಮಾಗಳಷ್ಟು ಹಳೆಯವು.ಆಗಿನ ಬೆಂಗಳೂರಿನ ಶ್ವಾಸ ಕೋಶಗಳೇ ಆಗಿದ್ದವು. ಆದರೆ ಕಳೆದ ದಶಕದಲ್ಲಿ ಬೆಂಗಳೂರಿನ ಬೆಳವಣಿಗೆ ಬೃಹತ್ತಾಗಿದೆ. ಜನ ಸಂಖ್ಯೆ ಹತ್ತಿರ ಹತ್ತಿರ ಕೋಟಿಗೆ ತಲುಪಪಿದೆ. ಹೊಸೊ ಹೊಸ ಬಡವಾಣೆಗಳು ತಲೆಎತ್ತುತ್ತಲಿವೆ. . ಮಹಾನಗರ ಪೂರ್ಣ ಕಾಂಕ್ರೀಟ್‌ಕಾಡು ಆಗುವುದನ್ನು ತಪ್ಪಿಸಲು ಪ್ರತಿ ಬಡವಾಣೆಗೂ ಒಂದು ಉದ್ಯಾನ ವಿರಲೇ ಬೇಕೆಂದು. ನಿಯಮವಿದೆ..ಆದರೆ ಅವು ಬಹುತೇಕ ಕಾಗದದ ಮೇಲಿವೆ. ಒಂದು ಕಾಲಕ್ಕೆ ನಿವೃತ್ತರ ಸ್ವರ್ಗವಾಗಿದ್ದ ಮಹಾನಗರದಲ್ಲಿ ಇಂದು ಸಂಚಾರ ದಟ್ಟಣೆಯಿಂದ  ಎಂಥವರಿಗೂ ಓಡಾಟ ಕಷ್ಟದಾಯಕವಾಗಿದೆ. ಹೀಗಿರುವಾಗ ಹಿರಿಯ ನಾನಗರೀಕರ ಹೊರ ಸಮಚಾರ ಬಲುಕಷ್ಟ.. “ಅಗತ್ಯವೇ ಅವಿಷ್ಕಾರದ ತಾಯಿ”  ಎಂಬ ಮಾತಿದೆ. ಅದಕ್ಕೆ ಸುಮಾರು ಎಪ್ಪತ್ತೈದು ವರ್ಷದ ಹಿಂದೆ ನಿರ್ಮಾಣವಾದ ಬಸವನ ಗುಡಿ ಬಡಾವಣೆಯ ಕೃಷ್ಣರಾವ್‌ ಪಾರ್ಕನಲ್ಲಿ ನಸುಕಿನಲ್ಲಿ ಬರುವ ಓಢಾಡಿಗರು ತಮ್ಮದೇಆದ ಪರಿಹಾರ ಕಂಡುಕೊಂಡಿರುವರು,
 ಕೃಷ್ಣರಾವ್ ಪಾರ್ಕ ೧೯೪೦ನೆಯ ಇಸ್ವಿಯಲ್ಲಿ  ದಿವಾನರಾಗಿದ್ದ ಕೃಷ್ಣರಾಯರ ಕನಸಿನ ಕೂಸು. ಅವರೇ ನೀಡಿದ್ದ ಸುಮಾರು ೨೦ ಎಕರೆ ದಟ್ಟ  ಮರಗಳಿಂದ ಕೂಡಿದ ವನಪ್ರದೇಶವನ್ನು ಅವರ ಹೆಸರಿಬಲ್ಲೇ ಪಾರ್ಕ ಮಾಡಲಾಯಿತು. ಬರಬಬರುತ್ತಾ ಅಲ್ಲಿ ಪೋಲೀಸ್‌ ಸ್ಠೇಷನ್, ಜಲಮಂಡಳಿ,,ದೇವಸ್ಥಾನಗಳು ತಲೆ ಎತ್ತಿದವು. ಸುಮಾರು ಎರಡೂವರೆ ಎಕರೆ ಜಾಗ ಕಡಿಮೆ ಯಾಯಿತು. ಎಚ್ಚೆತ್ತ ನಾಗರೀಕರು ಪ್ರತಿಭಟಿಸಿದರು. ಪರಿಣಾಮ ಅದಕ್ಕೆ ಒಂದು ಕಾಂಪೌಂಡು ಆಯಿತು. ಅಲ್ಲಿನ ವಾಕರ್‌ಗ್ರೂಪುನ ಆಸಕ್ತಿಯಿಂದ ಒಂದೊಂಏ ಅನುಕೂಲಗಳು  ಲಭ್ಯವಾಗ ತೊಡಗಿದವು. ವಾಕಿಂಗ್‌ ಟ್ರಾಕ್‌ ತಯಾರಾಯಿತು. ಮಕ್ಕಳ ಆಟಿಕೆಗೆ ಉಪಕರಣಗಳು ಬಂದವು. ಜೊತೆಗೆ ಯುವಕರಿಗೂ ಆಟವಾಡಲು ವಿಶಾಲ ಮೈದಾನ ಕೈ ಬಿಸಿ ಕರೆಯುವಂತಿದೆ,,ಈಗ ಬೆಳಗ್ಗೆ ಮತ್ತು ಸಂಜೆ ನೂರಾರು ಜನ ಬರುವ ತಾಣವಾಗಿ ಪರಿವರ್ತಿತವಾಗಿದೆ. ಅದರ ಪರಿಣಾಮ ವ್ಯಾಪಾರಿಗಳನ್ನೂ ಆಕರ್ಷಿಸಿದೆ.ಈಗ ಚುಮುಚುಮ ನಸುಕಿನಲ್ಲಿ ಪಾರ್ಕಿನ ಮುಂದಿಗಡೆ ಒಂದು ಮನಿಮಾರ್ಕೆಟ್‌ ಸೇರುವುದು..

ಅಲ್ಲಿವಿಶೇಷವಾಗಿ ಬರುವವರ ಅಗತ್ಯಕ್ಕೆ ತಕ್ಕಂತೆ ಮಾರಾಟ. ಮೊದಲನೆಯದಾಗಿ ಅಲ್ಲಿಆರೋಗ್ಯಕ್ಕೆ ಆದ್ಯತೆ. ಅದಕ್ಕೆ ವಿವಿಧ ರಸಗಳ ನ್ನು  ಅರೋಗ್ಯದೃಷ್ಠಿಯಿಂದ ಸಹಾಯಕವಾಗು ,ತರಕಾರಿ ರಸ, ಹಾಗಲಕಾಯಿ ರಸ, ಕ್ಯಾರೆಟ್‌ರಸ, ಸೌತೆ ಕಾಯಿರಸ ಲೋಳೆಸರದ ರಸ, ಪುದಿನ,ಸೊಪ್ಪಿನ ರಸ, ಹೀಗೆ ಹಲವು ಹನ್ನೊಂದು ತಾಜಾರಸಗಳು ಲಭ್ಯ.  ಅವು ರುಚಿ ರುಚಿಯಾಗಿ ಇರುವುದದಿಲ್ಲ. ಆದರೆ ಅಧರಕ್ಕೆ ಕಹಿಯಾದುದು ಉದರಕ್ಕೆ ಸಿಹಿ ಎನ್ನುವ ಮಾತಿದೆಯಲ್ಲ ಅದನ್ನ  ನಂಬಿ ಜನ ಕುಡಿಯುವರು. ಬರಿ ಐದು ರೂಪಾಯಿಗೆ ಒಂದು ಚಿಕ್ಕ ಲೋಟ,
ಅದರ ಪಕ್ಕದಲೇ ಇನ್ನೊಂದು ಶಕ್ತಿದಾಯಕ ಪಾನೀಯ. ಅದೇ ರಾಗಿ ಮಾಲ್ಟ್‌. ಬರಿ ರಾಗಿಗಂಜಿ ಎನ್ನ ಬೇಡಿಅದಲ್ಲ. . ಅದಕ್ಕೆ ಹತ್ತಾರು ಆರೋಗ್ಯಕ್ಕೆ ಪೂರಕವಾದ ವಸ್ತುಗಳ ಪುಡಿ ಸೇರಿಸುವರು. ವಾಕ್‌ ಮಾಡಿದಣಿದವರಿಗೆ ತಕ್ಷಣದ ಶಕ್ತಿಪೂರಣವಾಗುವುದು.. ಜೊತೆಗೆ ಸಕ್ಕರೆ ರೋಗ ಮತ್ತು ರಕ್ತದ ಏರೊತ್ತಡದವರಿಗೂ ಇದು ಬಹಳ ಉಪಯುಕ್ತ.
ಇನ್ನು ಬೆಳಗ್ಗೆ ಬರುವವರೆಲ್ಲ ಹಿರಿಯ ನಾಗರೀಕರೆ. ಸಹಜವಾಗಿ ಅವರ ಶರೀರದದ ಸಂಗಾತಿಗಳಾದ ಮಧು ಮೇಹ ಮತ್ತ ರಕ್ತದ ಒತ್ತಡದ ತಕ್ಷಣದ ತಪಾಸನೆಗೆ ಆಸಪತ್ರೆಗಳ ಮತ್ತು ಔಷಧಿ ಕಂಪನಿಗಳವರು  ಉಚಿತವಾಗಿ ಇಲ್ಲವೇ ರಿಯಾಯಿತಿ ದರದಲ್ಲಿ ಪರೀಕ್ಷೆ ಮಾಡಲು ಕಾದು ಕುಳಿತಿರುವುರು..ವಯಸ್ಸಾದವರು ಆಗಾಗ ಈ ಪರೀಕ್ಷೆಗಳನ್ನು  ಮಾಡಿಸಿಕೊಳ್ಳಲೇ ಬೇಕು. ಅವರಿಗೆ ಸಂಚಾರ ದಟ್ಟಣೆಯಲ್ಲಿ ಹೋಗಿ ಆಸ್ಪತ್ರೆಗೆ ಹೋಗಿ  ಕಾಯುವ ಕಷ್ಟ ತಪ್ಪುವು.ದು.ಜೊತೆಗೆ ಏರು ಪೇರಾಗಿದ್ದರೆ ಸೂಕ್ತ  ಮಾಹಿತಿ ದೊರೆಯುವುದು

      ಇಳಿವಯಸ್ಸಿನಲ್ಲಿ ಅರೋಗ್ಯ ಕಾಪಾಡಿಕೊಳ್ಳಲು ಮೂರು ಅಂಶಗಳು ಅತಿ ಮುಖ್ಯ. ಆಹಾರ, ಔಷಧಿ ಮತ್ತು ವ್ಯಯಾಮ         ಅದಕ್ಕಾಗಿ ಆರೋಗ್ಯಕ್ಕೆ  ಪೂರಕವಾಗುವು ತಾಜಾ ಹಸಿರುಎಲೆ  ತರಕಾರಿ, ಮೊಳಕೆ ಕಾಳುಗಳು ಲಭ್ಯ.  ವಾಕಿಂಗ್‌ಮುಗಿಸಿ ಹಾಗೆಯೇ ಕೈನಲ್ಲಿ ಹಿಡಿದುಕೊಂಡು ಹೋದರೆ ಮನೆಯವರಿಗೂ ತುಸು ಸಹಾಯ.

ಆದರ ಜೊತೆ ಕುರುಕುಲ ತಿಂಡಿ, ಕೋಡುಬಳೆ, ನಿಪ್ಪಟ್ಟು ಹಪ್ಪಳ ಇತ್ಯಾದಿಗಳನ್ನು  ಮಾರಲು ಜನ ಕಾದಿರುವುರು.ಅದೆಲ್ಲದರ ಜೊತೆ . ಬೆಳಗಿನ ಪೂಜೆ ಗೆ ಹೂವು ಬೇಕೆ ಬೇಕಲ್ಲ. ಅದನ್ನು ಮಾರುವವರೂ ಸದಾಸಿದ್ದ,ಇನ್ನು ಚುನಾವಣೆ  ಸಮಯ ಬಂತೆಂದರ ರಾಜಕೀಯ ನಾಯಕರ ಸವಾರಿ. ಮುಗುಳುನಗುತ್ತಾ ಕಂಡವರಿಗೆಲ್ಲ ಕೈಮುಗಿಯುವರು, 
ಗೇಟಿನ ಅಕ್ಕಪಕ್ಕದ ಜಾಗದಲ್ಲಿ ಅಧ್ಯಾತ್ಮಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ  ಬ್ಯಾನರ್‌ಗಳು. ಬಾಗಿಲಿ\ಲ್ಲೇ ನಿಂತು ಕರಪತ್ರನೀಡುವ ಸ್ವಯಂಸೇವಕರು. ಮುಂಜಾನೆ ಮೂರು ತಾಸು ಪಾರ್ಕ ಮುಂದೆ ಭರ್ಜರಿವ್ಯಪಾರ.. ಹೀಗಾಗಿ ಪಾರ್ಕಿಗೆ ದೈಹಿಕ ಆರೋಗ್ಯದ ಸುಧಾರಣೆಯ ಜೊತೆ ಜೊತೆಗೆ ಅನೇಕ ಕೆಲಸಗಳನ್ನು ಮುಗಿಸಿ ಹೊರಡುವ ಅನೂಕೂಲ ಈಗಿದೆ. ಜೊತೆತೆಗ ಗೆಳೆಯರ ಭೇಟಿ , ಹರಟೆ, ಸುಖದುಃಖ ಸಮಾಚಾರ ವಿನಿಮಯ, ಮತ್ತು ಸಾಮಾಜಿಕ ಸಂವಹನ ಕೇಂದ್ರವಾಗಿದೆ.  ,


















Saturday, July 6, 2013

Open Air gym

ಬಯಲು ವ್ಯಾಯಾಮ ಶಾಲೆ

ಬೆಳಗಿನ ನಸಕು ಮೊಬೈಲಿನಲ್ಲಿ ಡಣಡಣ ಸದ್ದು ಕೇಳಿಸಿತು .ಅಲರಾಂ ಇಟ್ಟವರಾರು ಎಂದು ಒಂದುಕ್ಷಣ ಯೋಚಿಸಿದೆ.ಎಪ್ಪತ್ತರ ವಯಸ್ಸಿನ ನನಗೆ  ಅದು ವಾಕಿಂಗ್‌ .ಸಮಯ ಐದೂವರೆ. ತುಸು ಚಳಿಇದೆ  ನಂತರ ಹೋಗೋಣ ಎಂದು ಮುಸಕುಎಳೆದಕೊಂಡೆ.. ಪಕ್ಕದ ರೂಮಿನಿಂದ ಮೊಮ್ಮಗಳು ಹಿತಾ ಎದ್ದುಬಂದು . ಗುಡ್‌ ಮಾರ್ನಿಂಗ್‌ , ತಾತ ಎಂದಳು . ಇಪ್ಪತ್ತು ವರ್ಷದ ಕಾಲೇಜು ಕನ್ನೆ ಇಷ್ಟು ಬೇಗ ಎದ್ದು ದು ಅಚ್ಚರಿಗೆ ಕಾರಣ ವಾಗಿತ್ತು,  ವೆರಿ ಗುಡ್‌ಮರ್ನಿಂಗ್‌, ಮಗೂ, ಏನು ಇಷ್ಟು ಬೇಗ ಎದ್ದೆ , ಎಂದೆ..
 ನಾನೂ  ಇನ್ನು ಮೇಲೆ ನಿಮ್ಮ ಜೊತೆ ಬೆಳಗ್ಗೆ ಪಾರ್ಕಿಗೆ ಬರುವೆ ತಾತ ಎಂದಾಗ ಒಂದು ಕ್ಷಣ ನಂಬಲಾಗಲಿಲ್ಲ. ಆದರೆ ಬಹಳ ಸಂತೋಷ ವಾಯಿತು. . ಇಬ್ಬರೂ ಸೇರಿ ಬಸವನ ಗುಡಿಯ ಕೃಷ್ಣರಾವ್‌ ಪಾರ್ಕಗೆ ಹೋದಾಗ ಇನ್ನೂ ಐದೂಕಾಲು. 
ಆಗಲೆ ಅನೇಕರು ಸ್ವೆಟರ್‌, ಟೋಪಿಧರಿಸಿ ವಾಕ್‌ಮಾಡುತಿದ್ದರು. ಕೆಲವರಂತೂ ಷಾರ್ಟ್ಸ ಮತ್ತು ಟೀ ಷರ್ಟ ಧರಿಸಿದ್ದರು.  ಹಿತಾ ಒಂದು ಸುತ್ತು ಹಾಕಿ ನಂತರ , ತಾತಾ ನೀವು ವಾಕ್‌ ಮಾಡುತ್ತಿರಿ ನಾನು ಜಿಮ್‌ಗೆ ಹೋಗುವೆ ಎಂದು ಹೊರಟಳು. ಆಗ ಹೊಳೆಯಿತು ಅವಳು ನನ್ನ ಜೊತೆ ಬಂದ ಕಾರಣ.ಕೆಲವೇ ದಿನಗಳ ಹಿಂದೆ ಪ್ರಾರಂಭವಾದ ಬಯಲು ಜಿಮ್‌ ಆವಳ ಆಕರ್ಷಣೆಗೆಯ ಕೇಂದ್ರವಾಗಿತ್ತು..ಕಾರಣ ತುಸು ಗುಂಡುಗುಂಡಗೆ ಇದ್ದ ಅವಳು ತೂಕವಿಳಿಸಲು ಜಿಮ್‌ ಮೊರೆ ಹೊಕ್ಕಿದ್ದಳು. ಎರಡು ಸುತ್ತು ಪಾರ್ಕನಲ್ಲಿ ಹೋಗಿ ನಂತರ ಮಧ್ಯದಲ್ಲಿ ಹಿರಿಯ ನಾಗರಿಕರ ವಲಯಕ್ಕೆ ಬಂದಾಗ ಅಚ್ಚರಿ ಕಾದಿತ್ತು.ಅಲ್ಲಿರುವ ಹತ್ತಾರು ಆಧುನಿಕ ಉಪಕರಣಗಳ ಮೇಲೆ ಯುವಕರು ವೃದ್ಧರು ಗಂಡು, ಹೆಣ್ಣು  ಬೇಧವಿಲ್ಲದೆ ವರ್ಕ ಔಟ್‌ ಮಾಡುತಿದ್ದರು.ಅಲ್ಲಿರುವ ಸುಮಾರು  ಹತ್ತು ಉಪಕರಣಗಳ ಮುಂದೆ ಎರಡು ಮೂರು ಜನ ಸಾಲು ಗಟ್ಟಿ ನಿಂತು ಕ್ರಮವಾಗಿ ತಮ್ಮ ಸರದಿಗೆ ಕಾಯುತಿದ್ದರು. 
ಡಬಲ್‌‌ವಾಕರ್‌ನಲ್ಲಿ ದಂಪತಿಗಳ ನಡಗೆ
ನಾನು ಹಲವಾರು ದಿನಗಳಿಂದ ನೋಡುತಿದ್ದರೂ ಅದರ ಉಪಯುಕ್ತತೆ ಮತ್ತು ಬಳಕೆ ಕುರಿತು ಯೋಚಿಸಿಯೇ ಇರಲಿಲ್ಲ.ಆಗ ತಿಳಿಯಿತು  ನನ್ನಂಥಹ ಹಿರಿಯನಾಗರೀಕರೂ ಅಲ್ಲಿ ಖುಷಿಯಿಂದ ಆ ಸಾಧನಗಳ ಬಳಕೆ ಮಾಡುವುದನ್ನು ನೋಡಿ  ನಾನೂ ಒಂದು ಕೈ ನೋಡಿಯೇ ಬಿಡೋಣ ಎಂದುಕೊಂಡೆ . ಆಗ ಅಲ್ಲಿಯೇ ಇದ್ದ ಎಪ್ಪತ್ತೈದರ ಯುವಕ ಬಿ. ಎನ್‌ ಚಂದ್ರಶೇಖರ್‌ ಬನ್ನಿ ಸಾರ್‌ ,ಎಂದು ಕರೆದು ಹೇಗೆ ಮಾಡುವುದು ಎಂಬುದನ್ನು ತಿಳಿಸಿಕೊಟ್ಟರು.
Add caption
 ತುಸು ಹೊತ್ತಿನ ನಂತರ ವಿರಾಮವಾಗ ಅವರೊಡನೆ ಮಾತಿಗೆ ಇಳಿದೆ. ಬಿ.ಎನ್‌ಚಂದ್ರಶೇಖರ್‌ ವಾಕರ್ ಗುಂಪಿನ ಅಧ್ಯಕ್ಷರು. ಕೃರ್ಷರಾವ್‌ ಪಾರ್ಕನ ಸದ್ಬಳಕೆಗೆ ಸದಾ ಶಮಿಸುಸುತ್ತಿರುವ ವ್ಯಕ್ತಿ. . ಅವರು ತಮ್ಮ ಆಶಯಗಳನ್ನು ಬಿಚ್ಚಿ ಇಟ್ಟರು. ಮೊದಲು ಹಿರಿಯ ನಾಗರೀಕರ ಹಿತಕ್ಕೆಂದು ಅವರು ನಿಮಾಹ್ನನ್ಸ ಸಹಯೋಗದಿಂದ ಎರಡುವೈಜ್ಞಾನಿಕವಾಗಿ ರೂಪಿಸಿದ ಉಪಕರಣಗಳನ್ನು ಸ್ಥಾಪಿಸಿದ್ದರು. ಅವೇ   ತಿರುಗು ಚಕ್ರ. ಮತ್ತು ಹಗ್ಗ ಎಳೆವ ರಾಟೆ.. ಅವೆರಡು ವಿಶಿಷ್ಟವಾಗಿ ಭುಜ ಮತ್ತು ತೋಳಿನ ವ್ಯಾಯಾಮಕ್ಕೆ ಹೇಳಿ ಮಾಡಿಸಿದವು. 
ರಾಟೆಯಹಗ್ಗ ಜಗ್ಗಿದರೆ ಭುಜದ ನೋವು ಮಾಯ
ಸ್ಪಾಂಡಿಲೈಟಿಸ್‌ ಮತ್ತು ಬೆನ್ನುಹುರಿ ಸಂಬಂಧಿತ ನೋವಿನಿಂದ ನೆರಳುವವರು ಫಿಜಿಯೋ ಥೆರಪಿಗೆ   ಯಾರಾದರೂ ಪರಿಣಿತರ ಬಳಿಗೆ ಹೋಗಿ ಅಲ್ಲಿರುವ ವಿಶೇಷ ಉಪಕರಣಗಳ ಸಹಾಯ ಪಡೆದು ನೋವು ನಿವಾರಣೆ ಪಡೆಯಬೇಕಿತ್ತು..ಅದಕ್ಕಾಗಿ ಸಮಯ ಮತ್ತು ಹಣ ಎರಡೂ ಅಗತ್ಯವಿತ್ತು .ಜೊತೆಗೆ ಸಂಚಾರ ದಟ್ಟಣೆಯ ಸಮಯದಲ್ಲಿ ಒನ್ನರೇ ಹೋಗಲು ಆಗದೆ ಸಹಾಯಕರು ಬೇಕಿತ್ತು. ಹೀಗಾಗಿ ಅದು  ಇಂದಿನ ಈ ಕೆಲಸದಒತ್ತಡದಲ್ಲಿ ಕಷ್ಟ ಸಾಧ್ಯವಾಗಿತ್ತು ಇದನ್ನರಿತ ವಾಕರ್ಸ್‌ ಗುಂಪು  ಈ ಸಾಧನಗಳನ್ನು ಅಳವಡಿಸಿದ್ದರು. ಹೇಗಿದ್ದರೂ ಪಾರ್ಕಿಗೆ ವಾಕಿಂಗ್‌ಬರುವ ಹಿರಿಯರು ಎರಡು ನಿಮಿಷ ಈ ಉಪಕರಣಗಳ ಬಳಕೆಯಿಂದ ವೈಜ್ಞಾನಿಕ ವ್ಯಾಯಾಮದಿಂದ  ನೋವು ಪರಿಹರಿಸಿಕೊಳ್ಳಲು ಅನುಕೂಲವಾಯಿತು. ಅಲ್ಲಿ ಅದರಲ್ಲಿ ಬಳಕೆಯಲ್ಲಿ ನುರಿತ ಹಿರಿಯ ನಾಗರೀಕರೇ ಮಾರ್ಗದರ್ಶನ ನೀಡುತಿದ್ದರು. ಅದರಿಂದ ಹಣ ಸಮಯ ಎರಡರ ಚಿಂತೆ ಇಲ್ಲದೇ ಉಚಿತವಾದ ಫೀಜಿಯೋ ಥೆರಪಿ ಚಿಕಿತ್ಸೆ ಎಲ್ಲರಿಗೂ ಲಭ್ಯವಾಗಿತ್ತು.
ಗಾಲಿ ತಿರುಗಿಸಿ ಕೈ ನೋವು ಓಡಿಸಿ
 ಸಾಮಾನ್ಯ ಜನರಿಗೆ ಈ ಎಲ್ಲ ಸೌಲಭ್ಯವರಿರುವ ಕ್ಲಬ್‌ಗೆ ಹೋಗುವುದು ಕನಸಿನ ಮಾತು. ಸೆಂಚರಿಕ್ಲಬ್‌, ಬೆಂಗಳೂರು ಕ್ಲಬ್‌, ಕಾಸ್ಮೊಪಾಲಿಟಿಯನ್‌ಕ್ಲಬ್‌ಗಳ ಸದಸ್ಯರಾಗಲು ಲಕ್ಷಾಂತರ ರೂಪಾಯಿ ಶುಲ್ಕ. ಹಣ ಕೊಡುತ್ತೇವೆ ಎಂದರೂ  ಕಾದು ಕುಳಿತಿರ ಬೇಕು ವರ್ಷಾನು ಗಟ್ಟಲೆ. ಅದಕ್ಕೆ  ಕ್ಲಬ್‌ ಅನ್ನೇ ಪಾರ್ಕಿಗೆ ತರವು ಯತ್ನ ಸದಸ್ಯರದು, ಕ್ಲಬ್‌ನಲ್ಲಿ ಕ್ಯಾಂಟೀನ್‌ ಮತ್ತು ಕಾರ್ಡ್ಸ ಆಟ ಹೊರತು ಪಡಿಸಿ ಉಳಿದೆಲ್ಲ ಸೌಲಭ್ಯವನ್ನೂ ಉಚಿತವಾಗಿ ಒದಗಿಸಲು ಮಾಡಿದ ಪ್ರಯತ್ನದ ಫಲ . ಈಗ ಪಾರ್ಕಿನಲ್ಲಿ ಕಣ್ಣಿಗೆ ಕಾಣುತ್ತಿದೆ.ಜನಸಾಮಾನ್ಯರಂತು ಪ್ರತಿಷ್ಠಿತ ಕ್ಲಬ್ಬಿಗೆ ಹೋಗುವ  ಹಾಗಿಲ್ಲ ಅದಕ್ಕೆ ಕ್ಲಬ್‌ ಅನ್ನೇ ಜನ ಸಾಮಾನ್ಯರ ಬಳಿಗೆ ಕರೆತರುವ ಪ್ರಯತ್ನ ಇದಾಗಿದೆ.ಪ್ರತಿಷ್ಠಿತ ಕ್ಲಬ್‌ಗಳ ಇನ್ನೊಂದು ಮಿತಿ ಎಂದರೆ ಅಲ್ಲಿನ ಡ್ರೆಸ್‌ ಕೋಡ್‌.   ಷೂ ಹಾಕಿಲ್ಲ ಎಂದು ಅಂತರಾಷ್ಟ್ರೀಯ ಖ್ಯಾತಿಯ   ಎಫ್‌... ಎಂ. ಹುಸೆನ್‌ ಅವರಿಗೆ ಪ್ರವೇಶ ನಿರಾಕರಿಸಿದ ಉದಾಹರಣೆ ಇದೆ. ಇನ್ನು ಜನ ಸಾಮಾನ್ಯರ ಪಾಡೇನು.
ಸೊಂಟ ಮತ್ತು ಕಾಲುಗಳಿಗೆ ಸಕತ್ತು ವ್ಯಾಯಾಮ.


ಈ ಯೋಜನೆ ರಾತ್ರೋರಾತ್ರಿ ಮೂಡಿದ್ದಲ್ಲ. ಕಳೆದ ಎಂಟು ಹತ್ತುವರ್ಷಗಳಿಂದ ಕ್ರಮವಾಗಿ ವಾಕರ್‌ಗ್ರೂಪ್‌ ನಡೆಸಿದ ಚಟುವಟಿಕೆಯ  ಪರಿಣಾಮ. ಮೊದ ಮೊದಲು ವೈದ್ಯಕೀಯ ಪರೀಕ್ಷೆ ಗಳನ್ನು ಮಾಡುವ ಮೂಲಕ ಸೇವಾಕರ್ಯ ಶುರುವಾಯಿತು. ಟ್ರಿನಿಟ ಕ್ಲಿನಿಕ್‌ನ  ಡಾ..ಮುರುಳೀಧರ ಅವರು ಹೃದಯ ಸಂಬಂಧಿ ತಪಾಸಣೆಯನ್ನು ಕಳೆದ ನಾಲ್ಕಾರು ವರ್ಷಗಳಿಂದ ಪಾರ್ಕಿನಲ್ಲಿ ಉಚಿತವಾಗಿ ನಡೆಸಿಕೊಂಡುವರು ಮುಂಚಿತವಾಗಯೀ ರಕ್ತ ಪರೀಕ್ಷೆ.  ಹಗೂ  ಲಿಪಿಡ್‌ಪ್ರೊಫೈಲ್ಲಮಾಡಲು ಒಂದು ತಂಡವೇ ಬಂದು ನೂರಾರು ಜನರ ರಕ್ತದ ಸ್ಯಾಂಪಲ್‌ ಪಡೆಯುತಿತ್ತು. ಮುಂದಿನ ಭಾನುವಾರ ಪರಿಣಿತರವೈದ್ಯತಂಡ  ವ್ಯ್ಯಕೀಯ ವರದಿಯ ಸಮೇತ ಪರೀಕ್ಷೆ ನಡೆಸಿ ಸಲಹೆ ಕೊಡುತಿದ್ದರು. ಅಗತ್ಯವಿದ್ದವರಿಗೆ ಈ.ಸಿ.ಜಿ ಪರೀಕ್ಷೆಯನ್ನು ಉಚಿತವಾಗಿ ಸ್ಥಳದಲ್ಲಿ ನಡೆಸಿ  ಆ ವರದಿ ನೋಡಿ ವೈದ್ಯಕೀಯ ಸಲಹೆ ಕೊಡುವರು. ಅಗತ್ಯವಿದ್ದವರಿಗೆ ಹೆಚ್ಚಿ ಕ್ರಮಮಕ್ಕಾಗಿ ಶಿಫಾರಸ್ಸು ಮಾಡುವರು
.
ಅದೇ ರೀತಿ ಹಿರಿಯನಾಗರೀಕರಿಗೆ ಸಾಮಾನ್ಯವಾದ ಸಕ್ಕರೆ ರೋಗದ ಶಿಬಿರಗಳನ್ನೂ ನಡೆಸುವರು. ಡಯಬೆಟಿಸ್‌ ತಜ್ಞರಾದ ಡಾ. ಚಿಕ್ಕಮೊಗ ಅವರ ನೇತೃಯತ್ವದಲ್ಲಿ ಬಂದ ವೈದ್ಯರ ತಂಡವು ರಕ್ತ ಪರೀಕ್ಷೆ ಮಾಡಿ ಆ ವರದಿಯ  ಆಧಾರದ ಮೇಲೆ ತಜ್ಞ ಸಲಹೆ ನೀಡುವರು..

 ಹತ್ತಿರದಲ್ಲೇ ಇರುವ ಅರ್ಥೋ ಪಡೆಕ್‌ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಯ ಡಾ. ಕಿಂಚ ಅವರದೂ ಇಲ್ಲಿ ಸೇವೆ ಸಂದಿದೆ. ಕೀಲು ನೋವು ಸಂಧಿವಾತ ಮತ್ತಿತರ ವಯೋ ಸಹಜ ವ್ಯಾಧಿಗಳ ಪತ್ತೆಗೆಮಾಡಿ ಅವುಗಳಿಗೆ ಪರಿಹಾರ ಸೂಚಿಸಿರುವರು.
“ ರೋಗ ತಡೆಯುವುದು ಗುಣ ಮಾಡುವುದಕ್ಕಿಂತ ಉತ್ತಮ  “ ಬರಿ ಹಿರಿಯ ನಾಗರೀಕರಿಗಿಂಯತ ಎಲ್ಲ ವಯಸ್ಸಿನವರಿಗೂ ಅನುಕೂಲವಾಗುವ ಕ್ರಮದ ಯೋಚನೆ ಬದಿತು, ಅವರಿಗೆ, ಆಗ ಸದಾಶಿವ ನಗರದ ಪರ್ಕಿನಲ್ಲಿರುವ ಜಿಮ್‌ನ ಉದಾಹರಣೆ ಯಾರೋ ಕೊಟ್ಟರು
. ಆದರೆ ಅಲ್ಲಿ ಪ್ರವೇಶಕ್ಕೂ ಶುಲ್ಕವಿದೆ. ಆದರೆ ಇಲ್ಲಿ ಎಲ್ಲವೂ ಉಚಿತ. ಆಗ ಬಂದದ್ದು ಬೆಂ ನ. ಮಹಾನಗರ ಪಾಲಿಕೆ, ಆರ್‌ಎಂ ಜೆಡ್‌ (ರಹೆಜಾಗ್ರೂಪ್ _ ಮತ್ತು ವಾಕರ್‌ ಗ್ರೂಪ್‌  ಸಹಯೋಗದಿಂದ ಈ ಕನಸು ನೆನಸಾಯಿತು. ಸುಮಾರು ಇಪ್ಪತ್ತು ಲಕ್ಷ ಹಣವನ್ನು ನೀಡಿದ ರೆಹೆಜ ಸಮೂಹದವರ. ಅವರ ನೆರವಿನಿಂದ ಟರ್ಕಿ ಯಿಂದ ಅಗತ್ಯ ಉಪಕರಣಗಳನ್ನು . ಸ್ಥಳ ಮತ್ತು ಸ್ಥಾಪನೆಯ ಹೊಣೆ ಹೊತ್ತರು. ವಾಕರ್‌ ಮೇಲುಸ್ತುವಾರಿ ವಹಿಸಿದರು ಆಮದು ಮಾಡಲಾಯಿತು. ಜತೆಗೆ ಬೆಂಗಳೂರು ಮಹಾನಗರ ಪಾಲಿಕೆಯ ಸಹಕಾರವೂ ದೊರೆಯಿತು.. ಅದರ ಫಲವೇ ಮುಕ್ತ   ಜಿಮ್‌. ಇಲ್ಲಿ 
ಪಾರ್ಕಿಗೆ ಬರುವ ಎಲ್ಲರೂ ಲಾಭ ಪಡೆಯಬಹುದು. ಅದರ ಮಾಹಿತಿ ಇದ್ದ ನನ್ನ ಮೊಮ್ಮಗಳು ಹಿತಾ ಬೆಳಗ್ಗೆ ತಾನೂ ನನ್ನ ಜೊತೆ ವಾಕಿಂಗ್‌ಗೆ ಬಂದಳು. ಬೆಳಗ್ಗೆ ೫ ರಿಂದ  ಹತ್ತರವರೆಗೆ  ಅಲ್ಲಿರುವ ಹತ್ತು ಉಪಕರಣಗಳಲ್ಲಿ   ಸರಾಸರಿ ಮೂರು ನಿಮಿಷಕ್ಕೆ ಒಬ್ಬರಂತೆ ಗಂಟೆಗೆ ಇಪ್ಪತ್ತು ಜನ ಅಂದರೆ ಹತ್ತು ಉಪಕರಣಗಳಲ್ಲ್ಲಿ ಒಟ್ಟಿನಲ್ಲಿ ಎರಡು ನೂರು ಜನ ಭಾಗವಹಿಸುವರು ದಿನದಲ್ಲಿ ಆರು ಗಂಟೆ ಕೆಲಸ ಮಾಡಿದರೂ ಫಲಾನುಭವಿಗಳ ಸಂಖ್ಯೆ ಸಾವಿರಕ್ಕೂ ಮಿಗಿಲು. ಸಾವಿರ ಜನರು ಆರೋಗ್ಯವರ್ಧಕ ಚಟುವಟಿಕೆಯಲ್ಲಿ ಪಾಲುಗೊಳ್ಳುವರು.
 ಬೆಳಗ್ಗೆ ಐದು ಗಂಟೆಗೆ ಇಲ್ಲಿ ವ್ಯಾಯಾಮದ ಪ್ರಾರಂಭ.ಒಂದು ವಿಶೇಷವೆಂದರೆ ಇಲ್ಲಿಯಾರೂ ಅಧಿಕೃತ ತರಬೇತಿ ದಾರರಿಲ್ಲ. ತುಸು ಅನುಭವ ಇರುವವರು ಹೊಸಬರಿಗೆ ಹೇಗೆ ಮಾಡಬೇಕೆಂದು ತಿಳಿಸುವವರು. ಅಂದರೆ ಕಲಿಯುವ ಮತ್ತು ಕಲಿಸುವ ಪ್ರಕ್ರಿಯೆ ಇಲ್ಲಿ ನಿರಂತರ ಮತ್ತು ಮುಕ್ತ.. ಯಾವುದು ಕಡ್ಡಾಯವಲ್ಲ. ಅದರಿಂದ ವಯಸ್ಸು ಲಿಂಗ, ವರ್ಗ ಮತ್ತು ಜಾತಿಮತಗಳ ಅಂತರವಿಲ್ಲದೆ ಎಲ್ಲರೂ ಖುಷಿಯಿಂದ ಭಾವಹಿಸುವರು. ಸೀರೆ ಉಟ್ಟು ಹೂ ಮುಡಿದಮುತ್ತೈದೆ,   ಬುರುಖಾ ಧರಿಸಿದ ಮಹಿಳೆಯ ಜೊತೆ ಡಬಲ್‌ವಾಕರ್‌ನಲ್ಲಿ  ಜೊತೆ ಗೂಡಿರುವುದು ನಿಜಕ್ಕೂ ಪ್ರಜಾಪ್ರಭುತ್ವದ  ಪ್ರಭುದ್ಧತೆ ಮತ್ತು ಜ್ಯಾತ್ಯಾತೀತೆ ಹಾಗೂ ವರ್ಗ ಸಾಮರಸ್ಯಕ್ಕೆ ಪೂರಕಕವಾಗಿದೆ ಎನ್ನಬಹುದು .







ವಾಕರ್‌
 ಏಕ ವ್ಯಕ್ತಿ ವಾಕರ್ ತೀವ್ರನಡಗೆಯ ಅನುಭವ ಕೊಡುವುದು. ಅವರವರ ಸಾಮರ್ಥ್ಯಕ್ತಕೆ ಕ್ಕಂತೆ ವೇಗ ವಾಗಿ ನಡೆಯಬಹುದು. ಇದರಲ್ಲಿ ಹತ್ತುನಿಮಿಷ ಕೆಲಸ ಮಾಡುವುದು ಸಾಮಾನ್ಯ ನಡಗೆಯ ಅರ್ಧ ಗಂಟೆಗೆ ಸಮ 





ಸ್ವಿಂಗರ್
ಲೋಲಕದಂತೆ ಆಚೀಚೆ ಚಲಿಸುವ ಈ ಉಪಕರಣದಿಂದ  ದೇಹದ  ಸಮತೋಲನ ಹೆಚ್ಚುವುದು. ಸಾಧಾರಣವಾಗಿ ರಕ್ತದ ಏರೊತ್ತಡ ಇರುವವರಿಗೆ ಇದು ಸಲ್ಲ.ಒಂದು ರೀತಿಯಲ್ಲಿ ಹಳೆಯಕಾಲದ ಜೋಕಾಲಿಗೆ ಸಮನಾಗಿರುವುದು



ಸೈಕಲ್‌ಸವಾರಿ
ಕಾಲುಗಳಿಗೆ ಸಾಕಷ್ಟು ವ್ಯಾಯಮ ನೀಡುವ ಸೈಕಲ್‌ಸವಾರಿ. ಕಾರಿನಲ್ಲೇ ಕುಳಿತು ಓಡಾಡುವವರಿಗೂ ಒಂದು ಹೊಸ ಅನುಭವ. ಇಲ್ಲಿ ಹಿಂದು ಮುಂದ ಎರಡೂ ಕಡೆ ಪೆಡಲ್‌ಹೊಡೆಯಬಹುದು. ವೇಗ ಅವರವರಿಗೆ ಬಿಟ್ಟದ್ದು

ಆಡುವವರಿಗೂ ಖಷಿ ನೊಡುವವರಿಗೂ ಖುಷಿ









ಜೋಡಿ ವಾಕರ್‌

ಜೀವನದಲ್ಲೂ ಜೋಡಿಯಾಗಿ ನಡೆವ ಚಂದ್ರಶೇಖರ್‌ ಮತ್ತು ಮಂಗಳ     ವಾಕರ್‌ನಲ್ಲೂ ಒಟ್ಟಿಗೆ ವ್ಯಾಯಾಮ ಮಾಡುತ್ತಿರುವರು.










Thursday, July 4, 2013

ಆರರಿಂದ ಅರವತ್ತು -ಸರಣಿ

 ಪಾಸು ಆಗದಿದ್ದರೆ ಹಣ ವಾಪಸ್ಸು

ನಾಗಪ್ಪ ಪದವಿ ಪೂರ್ವ ಕಾಲೇಜು ಉಪನ್ಯಾಸಕ. ತಮ್ಮವಂಶದಲ್ಲೇ ಮೊದಲ ತಲೆ ಮಾರಿನ ಸ್ನಾತಕೋತ್ತರ ಪದವಿಧರ ಎಂಬ ಹಿರಿಮೆ ಅವನದು.ಅವರ ಊರಿನಲ್ಲೆ ಪ್ರಥಮ ಪದವಿಧರ ಎಂಬ ಕೋಡು . ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕ. ನಾಯಿ ಕೊಡೆಯಂತೆ ಕಾಲೇಜುಗಳೇನೋ ತಲೆ ಎತ್ತಿದವು. ಎಲ್ಲ ಕಾಲೇಜುಗಳಿ ಯೋಜನಾ  ವೆಚ್ಚದ ಅಡಿಯಲ್ಲಿ ಖಾಯಂ ಸಿಬ್ಬಂದಿ ನೇಮಕದಲ್ಲಿ ಸರಕಾರಕ್ಕೆ ಇಲ್ಲದ ಇಬ್ಬಂದಿ.  ನೆಮಕಾತಿಯುಲೋಕಸೇವಾಆಯೋಗದ ಕೆಲಸ.ಅದಾಗಲು ಕನಿಷ್ಟ ೪-೫ ಷರ್ಷ ಬೇಕು.  ಹಾಗೆ ಬಿಡುವಹಾಗಿಲ್ಲ. ಸಾವಿರಾರು ಮಕ್ಕಳ ಭವಿಷ್ಯದ ಪ್ರಶ್ನೆ.ಹುದ್ದೆ ಖಾಲಿಇದ್ದರೆ ಇಲ್ಲದ ಗೊಂದಲ.ಹರತಾಳಚಳುವಳಿಬಂದ್‌ ಒಂದೆ ಎರಡೆ.ಸ್ಥಳೀಯ ರಾಜಕೀಯ ನಾಯಕರಿಗೂ ಮುಜುಗರ.ಸರಿ ಸಂತೆ ಹೊತ್ತಿಗೆ ಮೂರು ಮೊಳ ನೇಯುವಂತೆರ ಯಾರೋ ಒಬ್ಬ ಅಧಿಕಾರಿಗೆ ಪರಿಹಾರ ಹೊಳೆಯಿತು.. ಲಭ್ಯವಿರುವ ವಿದ್ಯಾರ್ಹತೆ ಇರುವವರನ್ನು ಗುತ್ತಿಗೆಯ ಆಧಾರದ ಮೇಲೆ ನೇಮಿಸಿಕೊಳ್ಳುವುದು. ಅವರಿಗೆ  ಆ ಹುದ್ದೆಯ ಮೂಲ ವೇತನಕ್ಕಿಂತ ತುಸು ಕಡಿಮೆ  ವೇತನ ನಿಗದಿ ಮಾಡಿ ಖಾಯಂ ನೌಕರನಿಗೆ ಇರುವ ಯಾವುದೆ ಇತರೆ ವೇತನ ಮತ್ತು ಸೇವಾ ಸೌಲಭ್ಯ ಇಲ್ಲ.ಕೆಲಸ ಮಾತ್ರ  ಅದೇ.ಈ ಯೋಜನೆಯಿಂದ ರಾಜಕಾರಣಿಗಳಿಗೂ ಅನುಕೂಲ.ತಮಗೆ ಬೇಕಾದವರನ್ನು ಕೆಲಸಕ್ಕೆ ಸೇರಿಸಬಹುದು. ಕನಿಷ್ಟ ಅರ್ಹತೆ ಇದ್ದರೆ ಸಾಕು. ಮೀಸಲಾತಿ ಮಾತು ಇಲ್ಲ.ಅರ್ಹತಾ ಪರಿಕ್ಷೆ ಹೋಗಲಿ ಮೌಖಿಕ ಪರೀಕ್ಷೆಯೂ ಇಲ್ಲ. ನಿರುದ್ಯೋಗಿ ಯುವಕರಿಗೂ ಇದು ಒಂದು ವರ ಎನಿಸಿತು. ಏನೋ ಸಂಬಳವಂತೂ ಬರುತ್ತದೆ. ಹುದ್ದೆಯ ಹೆಸರು ದೊಡ್ಡದು.ಸಾಮಾಜಿಕ ಪ್ರತಿಷ್ಠೆಯೂ ಸಿಗುವುದು. ಹೀಗಾಗಿ ಅವರಿವರನ್ನು ಹಿಡಿದು ಗಾಳಿ ಬಂದಾಗ ತೂರಿಕೊಂಡವರು ಅನೇಕ ಜನ. ಸರ್ಕಾರಕ್ಕೂ ಹಣ ಉಳಿತಾಯ.ಲೋಕ ಸೇವಾ ಅಯೋಗ ಮೂಲಕ ನೇಮಕ ವಾಗಲೂ ಹಲವು ವರ್ಷಗಳೇ ಬೇಕು. ತಕ್ಕ  ಮಟ್ಟಿಗೆ ಸರಕಾರಕ್ಕೆ ಉಳಿತಾಯ.. ಈ ಯೋಜನೆಯ ಅಡಿಯಲ್ಲಿ ವಿದ್ಯಾ ಇಲಾಖೆಯಲ್ಲಿ ಅನೇಕ ನೇಮಕವಾದವು.ಅದರಲ್ಲೂ  ಪದವಿ ಪೂರ್ವ ಇಲಾಖೆಯಲ್ಲಿ ಸಾವಿರಾರು ಜನ ಪತ್ರಾಂಕಿತ ಅಧಿಕಾರಿಗಳು ನೇಮಕಗೊಂಡರು. ಮೊದ ಮೊದಲು ಅವರಿಗೆ ಖುಷಿಯೋ ಖುಷಿ.ತಾವೂ ಗೆಜಟೆಡ್ ಅಧಿಕಾರಿಗಳು ಎಂದು. ಅದೂ ತಹಸಿಲ್ದಾರರ ಗ್ರೇಡು. ನೇಮಕಾತಿ ಹೇಗಾದರೇನೂ ಹೆಸರಂತೂ ಇದೆಯಲ್ಲ   . ಆಗ ಇನ್ನೂ  ಜೆರಾಕ್ಸ ಬಾರದ ಕಾಲ. ಏನೇ ಅರ್ಜಿ  ಹಾಕ ಬೇಕೆಂದರೂ ಮುದ್ರಿತ  ಖಾಲಿ ನಮೂನೆಯನ್ನು ಕೊಂಡು ಅದರನ್ನು ತುಂಬಿ  ಯಾರಾದರೂ  ಪತ್ರಾಂಕಿತ ಅಧಿಕಾರಿ ಯಿಂದ ಸಹಿ  ಮಾಡಿಸಿ ದೃಢಿಕರಣ  ಮಾಡಿದ ಪ್ರತಿಯನ್ನು ಲಗತ್ತಿಸ ಬೇಕು.  ಎಪ್ಪತ್ತರ ದಶಕದಲ್ಲಿ  ತಾಲುಕಿನಲ್ಲೆ ಪತ್ರಾಂಕಿತ ಅಧಿಕಾರಿ ಎಂದರೆ ತಹಸಿಲ್ದಾರರು,ಇಂಜನಿಯರ್‌ ಮತ್ತು ಸರ್ಕಾರಿ ಡಾಕ್ಟರು. ಅವರನ್ನು ಕಾಣುವುದು  ಕಷ್ಟದ ಕೆಲಸ. ತಹಸಿಲ್ದಾರರ ಕಚೆರಿಯಲ್ಲಿ  ಯಾರೋ ಜವಾನನ ಕೈಗೆ ಕೊಟ್ಟು ಅವರ ಕೈ ಬೆಚ್ಚಗೆ  ಮಾಡಿ ಸಾಹೇಬರ . ಸಹಿ ಪಡೆಯ ಬೇಕೆಂದರೆ ಕುರಿ ಕೋಣ ಬೀಳುತ್ತಿತ್ತು. ಆ ಜವಾನರೋ ದಿವಾನನಂತೆ ಡೌಲು ಮಾಡುತ್ತಿದ್ದರು. ಇನ್ನು ಡಾಕ್ಟರ ವಿಷಯ ಹೇಳುವ ಹಾಗೆ ಇಲ್ಲ. ಸಾಲು ಗಟ್ಟಿ ನಿಂತ ರೋಗಿಗಳನ್ನು ನೋಡಿ ಅವರಿಗೆ ಔಷಧಿ ಚೀಟಿ ಬರೆಯಲೆ ಬಿಡುವಿಲ್ಲ. ಇನ್ನು ಶಾಲಾ ಕಾಲೇಜು ಹುಡುಗರ  ದಾಖಲೆ ಪರಿಶೀಲಿಸಿ ಸಹಿ ಮಾಡಲು ಅವರಿಗೆ ವ್ಯವಧಾನವೆ ಇರುತ್ತಿರಲಿಲ್ಲ.ಆದ್ದರಿಂದ ನಕಲು ದಾಖಲೆಗಳನ್ನು ದೃಢೀಕರಿಸುವುದು ಪುನಃ ಪರೀಕ್ಷೆ ಬರೆದಷ್ಟೆ ಕಷ್ಟವಾಗುತ್ತಿತ್ತು. ಆ ಸಮಯದಲ್ಲಿ  ಕಾಲೇಜಿಗೆ ಅರೆಂಟು ಜನ ಗೆಜೆಟೆಡ್ ಅಧಿಕಾರಿಗಳು ಬಂದಾಗ ದೃಢೀಕರಣದ ಸಮಸ್ಯೆ  ಮಟಾ ಮಾಯ ವಾಯಿತು. ಉತ್ಸಾಹಿ ಉಪನ್ಯಾಸಕರು ಕೆಲವರು ರಬ್ಬರ್ ಸಿಕ್ಕೆ ಮಾಡಿಸಿ ಕೊಂಡು ನಮಸ್ಕಾರ ಹೊಢೆದು  ಮುಂದೆ ಚಾಚಿದವಕ್ಕೆಲ್ಲ ಹಸಿರು ಇಂಕಿನ ಸಹಿ ಮಾಡಿ ಸಿಕ್ಕೆ ಹೊಡೆದು ಬೀಗುತ್ತಿದ್ದರು.ಅವರಲ್ಲೆ ಕೆಲವರು ಮುಂದಾಲೋಚನೆ ಮಾಡಿ ಪ್ರತಿ ಸಹಿಗೂ ಶಕ್ತ್ಯಾನುಸಾರ ಕಾಣಿಕೆ ಪಡೆದವರೂ ಇದ್ದರು. ಅವರಂತೂ ಸೀಲು ಪ್ಯಾಡನ್ನು ತಮ್ಮೊಂದಿಗೆ ಸದಾ ಇಟ್ಟುಕೊಂಡಿರುತ್ತಿದ್ದರು.  ಆ ಮಟ್ಟಕ್ಕೆ ಏರಿದವರು ವಿರಳ.
ನಾಗಪ್ಪನೂ ಗುತ್ತಿಗೆ ಉಪನ್ಯಾಸಕ.ಒಳ್ಳೆಯ ಮಾತುಗಾರ. ಜನ ಬೇಕು. ಅವನು ಸದಾ ಹುಡುಗರ ನಡುವೆ ಇರುತ್ತಿದ್ದ. ಯಾರೆ ಹೋದರೂ ನಗುತ್ತ ಮಾತನಾಡಿಸುತ್ತಿದ್ದ. ಬಹು ಬೇಗ ಜನಪ್ರಿಯನಾದ
ಗುತ್ತಿಗೆ ಉಪನ್ಯಾಸಕರು ಮೊದಲ ವರ್ಷ ಸಂತೋಷವಾಗಿಯೆ ಇದ್ದರು. ವರ್ಷ ಕಳೆದ ಮೇಲೂ ಸಂಬಳ ಇದ್ದಷ್ಟೆ ಇದ್ದಾಗ ಮನಸ್ಸಿಗೆ ಕಿರಿಕಿರಿಯಾಯಿತುಖಾಯಂ ನೌಕರರದು ಮತ್ತು .ಅವರದು ಒಂದೇ  ರೀತಿಯ ಕೆಲಸ.ವೇತನ ಮಾತ್ರ ವ್ಯತ್ಯಾಸ. ಅಲ್ಲದೆ ನೌಕರಿ ತಾತ್ಕಾಲಿಕ ಎಂಬ ಆತಂಕ.ಅನಿಶ್ಚತತೆಯ ಕತ್ತಿ  ಸದಾ ತಲೆಯ ಮೇಲೆ. ಅದರೆ  ಇದ್ದ ಅವಕಾಶದ ಉಪಯೋಗ ಪಡೆದವರೂ ಇದ್ದರು. ಅದರಲ್ಲೂ ಗ್ರಾಮಾಂತರ ಪ್ರದೇಶದಿಂದ ಬಂದವರೂ ಮತ್ತು ಮುಂದುವರಿಯದ ಸಮಾಜದಿಂದ ಬಂದವರು ತಮಗೆ ದೊರೆತ ಅವಕಾಶ ಎಂದು ಚೆನ್ನಾಗಿ ಕೆಲಸ ಮಾಡುತ್ತಿದ್ದರು ಅವರ ಜನರಿಗೂ ಸಮಾಧಾನ. ಹುಡುಗ ವಿದ್ಯಾವಂತ.ನಮ್ಮ ಜಾತಿಯಲ್ಲೇ ಇಷ್ಟು ಓದಿದವರಿಲ್ಲ.ಮೇಲಾಗಿ ಸರ್ಕಾರಿ ನೌಕರಿ.ಮದುವೆಯ ಮಾರುಕಟ್ಟೆಯಲ್ಲಿ ಅವರಿಗೆ ಬಲು ಬೇಡಿಕೆ. ನಾಗಪ್ಪನಿಗೂ ಒಂದು ಉತ್ತಮ ಸಂಬಂದ ಕೂಡಿ ಬಂದಿತು.ಅವರ ಮಾವ ಬಹಳ ಶ್ರೀಮಂತ. ಅಲ್ಲದೆ ಮಾಜಿ ಶಾಸಕ.ಅನಕ್ಷರಸ್ಥ. ಕಟ್ಟಾ ಮೊಟಾ ಅಸಾಮಿ.ಮೊದಲು ಶಾಸಕರ ಅಂಗರಕ್ಷಕ ಸದಾ ಅವರ ಜತೆ. ಶಾಸಕರದು ಒಂದು ಹಳೆಯ ಜೀಪು. ಹಳ್ಳಿಗಾಡಿನ ರಸ್ತೆಯಲ್ಲಿ ಅದು ಅಗಾಗ ಮುಷ್ಕರ ಹೂಡುತ್ತಿತ್ತು ಅಂಗ ರಕ್ಷಕ ಅಗ ಕೆಲಸಕ್ಕೆ ಬರುತ್ತಿದ್ದ. ಒಬ್ಬನೆ ಅದನ್ನು ದೂಡಬಲ್ಲಷ್ಟು  ಬಲಶಾಲಿ. ಹೀಗಾಗಿ ಅವರ ಬಲ ಗೈ ಬಂಟನಾದ. ಅವನನ್ನು ತಾಲೂಕು ಅಭಿವೃದ್ಧಿ ಮಂಡಳಿ ಸದಸ್ಯನನ್ನಾಗಿ ಮಾಡಿದರು. ನಂತರ  ಚುನಾವಣೆಯಲ್ಲಿ ಅವರಿಗೆ ಪಕ್ಷದ ಟಿಕೆಟ್ ಸಿಗಲಿಲ್ಲ. ಅವರ ಬದ್ಧ ವೈರಿಗೆ ಪಕ್ಷ ಚುನಾವಣೆ ಟಿಕೆಟ್‌ ನೀಡಿತು.ಅವರು ಪಕ್ಷದ ನಿಷ್ಠಾವಂತರು. ಪಕ್ಷ ಬಿಡುವಹಾಗಿಲ್ಲ ಆದರೆ ಜಿದ್ದಿನ ಪ್ರಶ್ನೆ. ಮರ್ಯಾದೆ ಉಳಿಸಿಕೊಳ್ಳಲೇ ಬೇಕು. ಆಗ ಕಣ್ಣಿಗೆ ಬಿದ್ದವನು ತಮ್ಮ ಬಲಗೈ ಬಂಟನಾದ ಪಟ್ಟದ ಶಿಷ್ಯ.ಸರಿ ಅವನನ್ನು ಪಕ್ಷೇತರನನ್ನಾಗಿ ಕಣ ಕ್ಕಿಳಿಸಿದರು.ಅವನು ಗೆದ್ದೂ ಬಿಟ್ಟ. ಅವರು ಹೇಳಿದಂತೆ ಕೇಳಿಕೊಂಡು ಹೆಚ್ಚಿನ ನೀರಿಗೆ ಇಳಿಯದೆ ಹೇಳಿದಲ್ಲಿ ಹೆಬ್ಬಟ್ಟು ಒತ್ತಿ ಹಾಯಾಗಿ ಕಾಲ ಕಳೆದ. ಮುಂದಿನ ಚುನಾವಣೆಗೆ ಅವರಿಗೆ ಟಿಕೆಟ್ ದೊರೆಯಿತು . ಇವನು ಮಾಜಿ ಶಾಸಕನಾದ .ಅವನಿಗೆ ಒಂದೆ ಹಳ ಹಳಿ.  ತನಗೆ ಅಕ್ಷರಜ್ಞಾನ ಇಲ್ಲ. ಇದ್ದರೆ ಆ ಮಾತೆ  ಬೇರೆಯಾಗುತಿತ್ತು..  ಮಾಜಿಯಾದರೂ ಸಾಕಷ್ಟು ಹಣ ಮಾಡಿದ್ದರು. ಅವರಿಗೆ ಇದ್ದ ಆರು ಹೆಣ್ಣು ಮಕ್ಕಳನ್ನೂ ವಿದ್ಯಾವಂತರಿಗೆ ಕೊಟ್ಟು ಮದುವೆ  ಮಾಡಿದರು. ಕೊನೆಯವಳು ಮುದ್ದಿನ ಮಗಳು. ಅವರ ಕಣ್ಣಿಗೆ    ನಾಗಪ್ಪ ಸರಿಯಾದ ವರ ಎನಿಸಿದ. ಡಬ್ಬಲ್‌ ಗ್ರಾಜುಯೇಟ್‌.  ಬಳಗದಲ್ಲಿನ ಬಡ ಹುಡುಗ. ಕಟ್ಟಾ ಮೊಟಾ. ಇನ್ನೇನು ಬೇಕು. ಹೇಳಿದಂತೆ ಕೇಳುವನು ಎಂದು  ಕೈತುಂಬ ಹಣ ಕೊಟ್ಟು  ಹೆಣ್ಣು ಮಗಳನ್ನುಧಾರೆ ಎರೆದರು ಮಗಳನ್ನು .ಮನೆಯಲ್ಲಿಯೇ ಇಟ್ಟುಕೊಂಡರು. ಎರಡು ಮಕ್ಕಳು ಆದರೂ ಅವನು  ಬೇರೆಮನೆ ಮಾಡಿ ಸಂಸಾರ  ಹೂಡಲೇ ಇಲ್ಲ. ಆಗ ಈ ಯೋಜನೆ ಬಂದಿತು. ಯಾರಿಗೋ ಹೇಳಿ ಅಳಿಯನಿಗೆ ಗುತ್ತಿಗೆ ಉಪನ್ಯಾಸಕ ಹುದ್ದೆ ಗಿಟ್ಟಿಸಿದರು ವಾರಕ್ಕೊಮ್ಮೆ ಮಾವನ ಮನೆಗೆ ಭೇಟಿ ನೀಡಿ ಹೊಣೆ ಹರಿದು ಕೊಳ್ಳುತ್ತಿದ್ದ. ಅವರಿಗೆ ಅನುಮಾನ ಶುರುವಾಯಿತು. ಅದು ನಿಜವೂ ಆಗಿತ್ತು. ಗೆಳತಿಯ ಸಹವಾಸ ಮಾಡಿದ್ದ. ಖುದ್ದಾಗಿ ಅಳಿಯ ಕೆಲಸ ಮಾಡುವ ಸ್ಥಳ ಕ್ಕೆ  ಬಂದರು ಬಂದರು.ಸತ್ಯ ದರ್ಶನ ವಾಯಿತು.ಅವನು ನನಗೆ ಸರಿಯಾದ ಸಂಬಳವಿಲ್ಲ. ಗುತ್ತಿಗೆ ಕೆಲಸ. ಕೆಲಸ ಖಾಯಂ ಆದ ಮೇಲೆ ಕೈಯಲ್ಲಿ ಕಾಸು ಮಾಡಿಕೊಂಡು  ಮನೆ ಮಾಡುವೆ ಎಂದು ಕೈಯಾಡಿಸಿದ.ಅವರು ನಿಡಿದ್ದ ಹಣ ವೆಲ್ಲ ಖರ್ಚಾಗಿ ಬಿಟ್ಟಿತ್ತು. ವಿದ್ಯಾವಂತ  ಅಳಿಯ ಎಂದು ಹಿರಿಹಿರಿ ಹಿಗ್ಗಿದವರಿಗೆ ಬಹಳ ಬೇಸರ ವಾಯಿತು. ಅನ್ನುವ ಹಾಗಿಲ್ಲ   ಅನುಭವಿಸುವ ಹಾಗಿಲ್ಲ.ಮನೆಯಲ್ಲೂ ನೆಮ್ಮದಿಕೆಟ್ಟಿತು. ಗಂಡು ಮಕ್ಕಳೂ ಗೊಣಗತೊಡಗಿದರು.. ಅವರೆ ಖುದ್ದಾಗಿ ಬಂದು ನನ್ನನ್ನು  ಕಂಡರು. ಹೇಗಾದರೂ ಮಗಳ ಸಂಸಾರ ಹೊಂದಿಸಲು ವಿನಂತಿಸಿದರು. ತಾವೂ ಎಡಗಣ್ಣು ಬಲಗಣ್ಣು ನೋಡುವುದಾಗಿ ಭಾಷೆಕೊಟ್ಟರು. ಅಂತೂ ನಾಗಪ್ಪ ಮನೆ ಮಾಡಿದ.
ಸಂಸಾರಹೂಡಿದೊಡನೆ ಹೊರಗಿನ ಖರ್ಚು ವೆಚ್ಚಗಳಿಗೆ ಕೈಹಿಡಿತವಾಯಿತು. ಆದರೆ ಚಾಣಾಕ್ಷನಾದ ಅವರು ಅದಕ್ಕೆ ಬೇರೆ ವ್ಯವಸ್ಥೆ ಮಾಡಿಕೊಂಡಿರುವುದು ಎರಡು  ವರ್ಷದ ಮೇಲೆ ಗಮನಕ್ಕೆ ಬಂದಿತು
ಆಗ ಗುತ್ತಿಗೆ ಉಪನ್ಯಾಸಕರಿಗೆ ಮೌಲ್ಯ ಮಾಪನಕ್ಕೆ ಅವಕಾಶವಿರಲಿಲ್ಲ. ಆದರೂ ಮೌಲ್ಯ ಮಾಪನ ಸಮಯದಲ್ಲಿ  ಬೆಂಗಳೂರಿಗೆ ಹಾಜರಿ ಹಾಕುತಿದ್ದ. ಬಹುಶಃ ಬೇರೆ ಕೆಲಸಕ್ಕೆಕೆ ಬಂದಿರಬಹುದು ಎಂದು ಕೊಂಡೆ. ಎರಡೆ ವರ್ಷದಲ್ಲಿ ಅವರ ಗುಟ್ಟು ರಟ್ಟಾಯಿತು. ಫಲಿತಾಂಶ ಬಂದೊಡನೆ ಅನೇಕ ವಿದ್ಯಾರ್ಥಿಗಳು ಬಂದು ಅವರಿಗೆ ಕಾಣುತಿದ್ದರು. ಕಾಲೇಜಿನಲ್ಲಿ ಮಾತ್ರವಲ್ಲ ಮನೆಯಲ್ಲೂ ವಿದ್ಯಾರ್ಥಿಗಳ ಮತ್ತು ಪೋಷಕರ ಸಂದಣಿ ಇರುತಿತ್ತು. ಕೆಲವರು ಬಂದು ಕಾಲೇಜಿನಲ್ಲೂ ಹೊರಗೆ ಕರೆದು ಮಾತನಾಡುತಿದ್ದರು. ಏನೋ ನಗುಟ್ಟು ಗುಟ್ಟಾಗಿ ನಡೆಯುತ್ತಿದೆ ಎಂಬ ಅನುಮಾನ ಬಲವಾಯಿತು. ನಂತರ ಅವರ ಆತ್ಮೀಯರೊಬ್ಬರು ಬಾಯಿ ಬಿಟ್ಟರು. ಅವರು ಪಿಯುಸಿ ಪರೀಕ್ಷೆಗೆ ಕುಳಿತ ಮಕ್ಕಳಿಗೆ ಪಾಸು ಮಾಡುವ ಭರವಸೆ ನೀಡಿ  ಐದು ನೂರು,  ಸಾವಿರ ಹಣ ಪಡೆಯುತಿದ್ದರು. ನಮ್ಮವರೆಲ್ಲ ಹಳ್ಳಿಯ ಜನ. ನಂಬಿಕೊಡುತಿದ್ದರು. ಇವರು ಬೆಂಗಳೂರಿಗೆ ಬರುವರು. ಅಲ್ಲಿ ಫಲಿತಾಂಶ ಪ್ರಕಟವಾದಾಗ ತಪ್ಪದೆ ಹಾಜರಿದ್ದು ತಾವು ತಂದ ನಂಬರ್‌ಗಳು ಪಾಸು ಆಗಿರುವುದೊಇಲ್ಲವೋ ನೋಡಿಕೊಳ್ಳುವುರು. ಫೇಲಾಗಿದ್ದರೆ ಎಷ್ಟರಲ್ಲಿ ಫೇಲ್‌ ಆಗಿರುವುರು ಎಂದು ಬರೆದುಕೊಂಡ ತಕ್ಷಣ ಕಾಲೇಜಿಗೆ ಹಿಂತಿರುಗುವುರು.ನಮ್ಮದುಮೊದಲೆ ಹಳ್ಳಿ. ಪೋಸ್ಟು ಬರುವುದು ತುಸು ತಡ. ಹೀಗಾಗಿ ಇವರು ಮುಂಚಿತವಾಗಿಯೆ ದುಡ್ಡು ಕೊಟ್ಟವರಿಗೆ ಮಾಹಿತಿ ಮುಟ್ಟಿಸುವುರು.ಪಾಸದವರಿಗಂತೂ ಇವರು ದೇವರು. ಫೇಲಾದವರಿಗೆ  ನಾನು ಸಾಕಷ್ಟು ಪ್ರಯತ್ನ ಮಡಿದೆ. ನಿಮ್ಮ ಪೇಪರು ಕರಾವಳಿ ಜನರ ಕೈಗೆ ಹೋಗಿತ್ತು. ಅವರು ಬಹಳ ಬಿಗಿ  ಕೆಲಸ ಆಗಲಿಲ್ಲ. ಮುಂದಿನ ಸಲ ಮಾಡಿಸಿ ಕೊಢವೆ ಎಂದು ಸಮಾಧಾನ ಮಾಡುವರು. ನಾನು  ಈ ಕೆಲಸ ಮಾಡಿಲ್ಲ. ಏನೋ ಹಳ್ಳಿ ಹುಡುಗರು ಎಂದು ಸಹಾಯ ಮಾಡಲು ಒಪ್ಪಿಕೊಂಡೆ. ನಂಬುಗೆ ಇಲ್ಲದಿದ್ದರೆ ಹಣ ವಾಪಸ್ಸು ಕೊಡುವೆ ಎನ್ನವರು. ಬೆಂಗಳೂರಿಗೆ ಹೋಗಿ ವಾರಗಟ್ಟಲೆ ಇದ್ದೆ ಆ ಖರ್ಚು ಕೊಟ್ಟರೆ ಸಾಕು ಎಂದಾಗ ಬಂದವರು ಸುಮ್ಮನಾಗುತಿದ್ದರು . ಮುಂದಿನ ಸಲವಾದರೂ ಪಾಸು ಮಾಡಿಸಿ ಎಂದು ಬೇಡಿಕೊಳ್ಳುವರು.  ರಿಖಂಡಿತಾ ಮಾಡಿಸುವುದಾಗಿ ಭರವಸೆ ಕೊಡುವರು.ತೀರ ನಿಷ್ಠುರವಾದವರಿಗೆ ಅರ್ಧ ಹಣ ಕೊಡುವರು. ಇದೆ ಅವರ ಮೇಲಾದಾಯದ ಗುಟ್ಟಾಗಿತ್ತು ಯಾವುದೆ ಅಧಿಕೃತ ದೂರುಇಲ್ಲದೆ ಇರುವುದರಿಂದ ಕ್ರಮ ತೆಗೆದುಕೊಳ್ಳಲು ಸಾಧ್ಯವಿರಲಿಲ್ಲ.ಆದರೆ ಎರಡೆ ವರ್ಷದಲ್ಲಿ ಅವರ ಬಣ್ಣ  ಬಯಲಾಯಿತು. ಪಾಸು ಇಲ್ಲವಾದರೆ ಹಣ ವಾಪಾಸು ಯೋಜನೆ ವಿಫಲವಾಯಿತು

Sunday, June 30, 2013

ಆರರಿಂದ ಅರವತ್ತು

                                                ಹೀಗೊಂದು ಹರತಾಳ

ಗಣೇಶನನ್ನು ಮಾಡಲು ಹೋದರೆ ಅವರಪ್ಪನನ್ನು ಮಾಡಿದ ಅನುಭವ ಒಮ್ಮೆ ಆಯಿತು. ಕಾರವಾರದ ಪರಿಸರ ಸುಂದರ. ಕಣ್ಣಿಗೆ ಸೊಂಪು. ಮನಸ್ಸಿಗೆ ಇಂಪು. ಆದರೆ ನನಗೆ ಒಂದು ಕೊರತೆ ಕಾಣುತಿತ್ತು. ಅಲ್ಲಿ ಸಿಬ್ಬಂದಿ ಯಾರಿಗೆ ಯಾರೋ ಪುರಂದರವಿಠಲ. ಕಾಲೇಜಿನಲ್ಲಿ ನಯ ವಿನಯದಿಂದ ವರ್ತಿಸಿದರೂ ನಂತರ ಬೇರೆ ಕಡೆ ಅನುಭವಿಸಿದ ಆತ್ಮೀಯತೆ ಇಲ್ಲಿ ಇರಲಿಲ್ಲ.. ಮಲೆನಾಡು ಆತಿಥ್ಯಕ್ಕೆ ಹೆಸರಾದರು ಕರಾವಳಿ  ಮಾತ್ರ ವಿಭಿನ್ನ.ಘಟ್ಟದ ಮೇಲೆ ಹೋದರೆ ಅತಿಥೀ ದೇವೋ ಭವ  .  ಇಲ್ಲಿ  ಅನ್ಯ. ಇದು ಗೋವಾದ ಗಡಿಯಲ್ಲಿರುವುದೆ ಅದಕ್ಕೆ ಕಾರಣ. ಇನ್ನೊಂದು ಆಹಾರಾಭ್ಯಾಸ. ಅವರಿಗೆ ಮೀನಿಲ್ಲದೆ ಊಟ ಯೋಚಿಸು ಹಾಗೆ ಇಲ್ಲ. ಅನ್ನವಿಲ್ದದ್ದರೆ ಚಪಾತಿ ತಿಂದಾರು ಆದರೆ ಮೀನಂತೂ ಒಂದಲ್ಲ ಒಂದು ರೂಪದಲ್ಲಿ ಅವರ ತಟ್ಟೆಯಲ್ಲಿರಲೆ ಬೇಕು.ತರಕಾರಿ ಮಾರಿಕಟ್ಟೆಗಿಂತ ಮೀನು ಮಾರುಕಟ್ಟೆ ದೊಡ್ಡದು ಮತ್ತು ವೈವಿಧ್ಯಮಯ. ಸಸ್ಯಾಹಾರಿಗಳಗೆ ತಾಜಾ ತರಕಾರಿ ಬೇಕೆಂದರೆ ಸಂತೆಯ ತನಕ ಕಾಯಲೆ ಬೇಕು. ಆ ದಿನ ನಮಗಂತೂ ಖುಷಿ. ತರಕಾರಿ ಜತೆ ಹುಬ್ಬಳ್ಳಿ , ಧಾರವಾಡದ ಗಂಡು ಭಾಷೆ ಮಾತನಾಡುವ ಜನ ಸಿಗುತಿದ್ದರು. ಸಾಧಾರಣ ವಾಗಿ ತರಕಾರಿ ಬರುತಿದ್ದುದು ಆ ಭಾಗದಿಂದಲೆ. ಸಹಜವಾಗಿ ಬೆಲೆ ದುಬಾರಿ.  ನಿತ್ಯ ನೀರಿನಿಂದ ತೆಗೆದು  ಸೀದಾ ಸಾರಿಗೆ ಹಾಕುವ ಸೌಲಭ್ಯವಿರುವಾಗ ಅದೂ ಸೋವಿಯಾಗಿ ಬಗೆಬಗೆಯ ಮೀನುಗಳು ದೊರೆಯುವಾಗ ತುಟ್ಟಿಯ ತರಕಾರಿ ತಿನ್ನುವವರು ದಡ್ಡರು ಅಷ್ಟು   ಮಾತ್ರ. ಅಲ್ಲದೆ ಅದು ಪೌಷ್ಟಿಕಾಹಾರ. ಔಷಧಿಯೆಂದು ಮೀನೆಣ್ಣೆ ಕುಡಿಯುವುದಕ್ಕಿಂಡ ಖಾದ್ಯವೆಂದು ತಿನ್ನುವುದೆ ಸುಖ.  ಕಡಲ ತಡಿಯಲ್ಲಿ ಮೀನು ತಿನ್ನದವರು ಮಹಾಪಾಪಿಗಳು. ಅವರ ಮನೆ ಯಾರೂ ಬಾರರು. ಮತ್ತು ಅವರನ್ನು ಯಾರೂ ಊಟಕ್ಕೆ ಕರೆಯರು. ಇದೆ ನಮಗೆ ಎಲ್ಲರೊಡನೆ  ಬೆರೆಯಲು ತಡೆ. ಅದರ ಜೊತೆ ಇನ್ನೊಂದು ವಿಷಯ ಎಂದರೆ, ಭಾಷೆ. ಅಲ್ಲಿ ಎಲ್ಲ ಕಡೆ  ಕೊಂಕಣಿ ಬಾಷೆಯ ಕಿಂಕಣ. ಕನ್ನಡ ಮಾತನಾಡಿದರೆ ಕಣ್ಣರಳಿಸಿ ನೋಡವವರು  ಆ ಜನ,
ಜನರು ಬೇಕು ಎಂದು ನಾನು ಹೋದ ಪ್ರದೇಶಗಳಲ್ಲೆಲ್ಲ ಅಲ್ಲಿನ ಆಹಾರಾಭ್ಯಾಸ ಅಳವಡಿಸಿ ಕೊಂಡಿದ್ದೆ. ಮಲೆ ನಾಡಿಗೆ ಹೋದಾಗ ಗಂಜಿಅನ್ನ ಅಭ್ಯಾಸ ವಾಗಿತ್ತು.. ಈಗ ಎಲ್ಲೆ ಇರಲಿ ತಿಂಗಳಿಗೊಮ್ಮ ಗಂಜಿ ಊಟ ಬೇಕು. ಮಂಡ್ಯಕ್ಕೆ ಹೋದಾಗ  ರಾಗಿ ಮುದ್ದೆ ಮನೆ ದೇವರಾಯಿತು. ಜೊತೆಗೆ ಸೊಪ್ಪುಸಾರು, ಬಸ್ಸಾರು ಇದ್ದರೆ ಸುರಿದು ಕೊಂಡು ಊಟ. ಅದೂ ಅಲ್ಲದೆ ಅದು ಸಕ್ಕರೆ ರೋಗದವರಿಗೆ ಅದು ಅಕ್ಕರೆಯ ಊಟ. ಗುಲ್ಬರ್ಗದಲ್ಲಿ ಬಿಳಿ ಜೋಳದ ರೊಟ್ಟಿ ,ಬ್ಯಾಳಿ, ಕಡ್ಲಿ ಹಿಂಡಿ ಗಟ್ಟಿ ಮೊಸರು, ಬೆಣ್ಣೆ ಉಳ್ಳಾಗಡ್ಡಿ ಸೊಪ್ಪಿನ ಪಚಡಿ , ಆಹಾ! ಅಮೃತ ಸಮಾನ. ರೊಟ್ಟಿಯನು ತಿಂದವನು ಜಟ್ಟಿಯಾಗುವನು ಎಂದು ಹಾಡಿಕೊಳ್ಳುವ ಹಾಗೆ ನಾನು ಜಟ್ಟ್‌ಇಆಗದಿದ್ದರೂ ಗಟ್ಟಿಯಂತೂ ಆಗಿದ್ದೆ, ಆದರೆ ಇಲ್ಲಿ ಮಾತ್ರ ಅದಕ್ಕೆ ಅಪವಾದ.ಕಡಲ ತಡಿಯ ಬ್ರಾಹ್ಮಣರೂ ಸಮುದ್ರದ ತರಕಾರಿ ಬಳಸುವರು. ಆದರೆ ಹುಟ್ಟಾ ಸಸ್ಯಾಹಾರಿಯಾದ ನನಗೆ ಈ ಅಪರ ವಯಸ್ಸಿನಲ್ಲಿ ಹೊಸದು ಕಲಿಯುವ ಹಂಬಲ ಇರಲಿಲ್ಲ. ಇದ್ದರೂ ಆಗುತ್ತಿರಲಿಲ್ಲ
ಮೀನು ತಿನ್ನಲು ಕಲಿಯುವುದು ಆಗದ ಮಾತು. ಇನ್ನು ಕೊಂಕಣಿಭಾಷೆ ಕಲಿತರೆ ತಪ್ಪಿಲ್ಲ. ಆದರೆ ಅದಕ್ಕೆ ಸಮಯ ಬೇಕಲ್ಲ. ನನಗಂತೂ ಅವರಾಡುವ ಮಾತುಕೇಳಿದಾದ ತಾಮ್ರದ ತಂಬಿಗೆಯಲ್ಲಿ ನಾಣ್ಯಹಾಕಿ ಅಲ್ಲಾಡಿಸದಾಗಿನ ಕಿಣಕಿಣಿ ನಾದವೆ ಕೇಳಿದಂತಾಗುವುದು.
ಆದರೂ ಏನಾದರೂ ಮಾಡಲೆ ಬೇಕಲ್ಲ. ಅದಕ್ಕೆ ಕಾಲೇಜಿಗೆ ಹೋದ ಹೊಸದರಲ್ಲೆ ವಾರ ಎರಡುವಾರಕ್ಕೊಂದು ದಿನ ಎಲ್ಲರಿಗೂ ಒಬ್ಬರೇ ತಿಂಡಿ ಕೊಡಿಸುವುದು ಮತ್ತು ಒಟ್ಟಾಗಿತಿನ್ನುವುದು ಒಳ್ಳೆಯ ಅಭ್ಯಾಸ ಎಂದು ಸಲಹೆ ಮಾಡಿದೆ. ಮೊದಲಲ್ಲಿ ನಾನೆ ಕೊಡಿಸಲು ಮುಂದಾದೆ. ಆದರೆ ಒಂದೆ ಸಮಸ್ಯೆ. ನಮ್ಮ ಕಾಲೇಜಿರುವ ಹಳ್ಳಿಯಲ್ಲಿ ಎಲ್ಲರೂ ತಿನ್ನುವ ತಿಂಡಿ ಸಿಗದು, ಒಂದೆ  ಕಾರವಾರದಿಂದ ಇಲ್ಲವೆ ಅಂಕೋಲೆಯಿಂದಲೆ ತರಿಸಬೇಕು. ಅದಕ್ಕಾಗಿ ಮೊದಲೆ ನಿಗದಿಮಾಡಿದ ದಿನ  ನಮ್ಮ ಜವಾನ ಅಂಕೋಲೆಯಿಂದ ಬರುವಾಗಲೆ ಅಲ್ಲಿಂದ ತಿಂಡಿ ತರಲು ಹೇಳಿದೆವು.
ಶನಿವಾರದ ದಿನವಾದರೆ ಮನೆಯಲ್ಲಿ ತಿಂಡಿ ಮಾಡುವ ತೊಂದರೆಯೂ ತಪ್ಪವುದು ಎಂದು ಶಿಕ್ಷಕಿಯರು ಸಲಹೆ ಮಾಡಿದರು. ತರಗತಿಗಳಿಗೆ ತೊಂದರೆಯಾಗದಂತೆ ಸಹ ಉಪಹಾರದ ವ್ಯವಸ್ಥೆಯಾಯಿತು. ಬೆಳಗಿನ ಹತ್ತೂವರೆ ಸಮಯ. ಕಾಲೇಜಿನ  ಮೂಂದೆಯೆ ಬಸ್ಸು ನಿಂತಿತು. ಆಗಲೆ ಪ್ರಾರ್ಥನೆಯ ಸಮಯ. ಗಡಿ ಬಿಡಿಯಿಂದ ಕಾಲೇಜಿನ ಒಳಗೆ ನಡೆದೆ. ಆದರೆ ಮುಖ್ಯದ್ವಾರದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಜಮಾಯಿಸಿದ್ದರು. ನಾನು ಹತ್ತಿರ ಹೋದಕೂಡಲೆ ಡೌನ್  ಡೌನು ಎಂಬ ಸಾಮೂಹಿಕ ಧ್ವನಿ ಕೇಳಿತು ಹತ್ತಿರ ಹೋದಾಗ ಗೊತ್ತಾಯಿತು ಪಿಯುಸಿ ಮಕ್ಕಳು ಹರತಾಳದಲ್ಲಿ ತೊಡಗಿದ್ದರು. ಹತ್ತಿಪ್ಪತ್ತು ಹುಡುಗರು ಕೆಲ ಹುಡುಗಿಯರೂ ಗುಂಪಾಗಿ ನಿಂತಿದ್ದರು. ಅವರ ಕೈನಲ್ಲಿ ಬರಹವಿದ್ದ ರಟ್ಟಿನ ಫಲಕ ಇದ್ದವು ಆಗ  ನನಗೆ ಹೊಳೆಯಿತು ಹಿಂದಿನ ದಿನ ನಾನು ತೆಗೆದು ಕೊಂಡ ನಿರ್ಧಾರದ ಫಲ ಇದಾಗಿತ್ತು.
ಕಾಲೇಜು ವಿಭಾಗದಲ್ಲಿ  ಒಬ್ಬರ ವಿನಃ ಎಲ್ಲರೂ ಒಂದೆ ಜನಾಂಗದವರು. ಹೈಯಸ್ಕೂಲಿನಲ್ಲೂ  ಲ್ಲು ಅವರದೆ ಪ್ರಾಭಲ್ಯ.ಅಂಕೋಲೆಯಲ್ಲಿ  ತಾಲೂಕಿನಲ್ಲಿ ಮಾತ್ರ  ಹೆಚ್ಚಾಗಿರುವ ಮುಂಗೈ ಜೋರಿನ ಜನಾಂಗಕ್ಕೆ ಸೇರಿದವರು. ಅವರಲ್ಲಿ ಬಹುಪಾಲು ಶಿಕ್ಷಕ ವೃತ್ತಿಯವರೆ. ಗಂಡು ಹೆಣ್ಣು ಬೇಧವಿಲ್ಲದೆ ಶಿಕ್ಷಣ ಪಡೆಯುವರು. ಮತ್ತು ಬಹುತೇಕ ಸುತ್ತ ಮುತ್ತಲಿನ ಸ್ಥಳದಲ್ಲೆ ಕೆಲಸ ಮಾಡುವವರು. ಉತ್ತಮ ಕೆಲಸಗಾರರು ಆದರೆ ಅವರು ಮಾಡಿದ್ದೆ ಸರಿ ಎಂಬ ಮನೋಭಾವ.
ಕೆಲವುಹಿಂದಿನ ಮುಂಚೆ ದ ತರಗತಿ ನಡೆಯುತಿದ್ದಾಗಲೆ  ಎರಡನೆ ಪಿಯುಸಿಯ ಆರು ಜನ ವಿದ್ಯಾಥಿಗಳು ಫುಟ್‌ ಬಾಲ್‌ ಆಡುತಿದ್ದುದು ಗಮನಕ್ಕೆ ಬಂತು. ಅವರನ್ನು ಕರೆಸಿ ತರಗತಿಗೆ ಏಕೆ ಗೈರು ಹಾಜರಾಗಿರುವಿರಿ ಎಂದು ವಿಚಾರಿಸಿದೆ. ಅವರು  ಉತ್ತರ ತುಸು ಉದ್ದಟ ತನ ದಾಗಿತ್ತು. ಅರಿಗೆ ಅವರ ಪೋಷಕರನ್ನು ಮಾರನೆ ದಿನ ಕರೆತರುವಂತೆ ಸುಚಿಸಿದೆ. ವಾಪಸ್  ಹೋದವರು ಮಾರನೆ ದಿನ ಕರೆತರಲಿಲ್ಲ. ಕರೆದು ವಿಚಾರಿಸಿದರೆ ಕರೆದು ತರುವುದು ಸಾಧ್ಯವಿಲ್ಲ ಎಂದು ಒರಟಾಗಿ ಹೇಳಿದರು. ಅದಕ್ಕೆ  ಕರೆದು ತರುವ ತನಕ ತರಗತಿಗೆ ಸೇರಿಸಬಾರದೆಂದು ತಿಳಿಸಿ ಎಲ್ಲ ಉಪನ್ಯಾಸಕರಿಗೆ  ಸೂಚನೆ ಕಳುಹಿಸಿದೆ.
ಆದರೆ  ರಾಜ್ಯ ಶಾಸ್ತ್ರದ ಉಪನ್ಯಾಸಕರು ಸೂಚನೆಯನ್ನು ಧಿಕ್ಕರಿಸಿ   ಅವರನ್ನು ತರಗತಿಗೆ ಸೇರಿಸಿದರು. ಅಷ್ಟೆ ಅಲ್ಲ ಮಕ್ಕಳಿಗೆ ತೊಂದರೆ ಕೊಡಲು ತಾವು ಬಿಡುವುದಿಲ್ಲ ಎಂದು ಎಲ್ಲರೆದುರೇ  ಹೇಳಿದರು. ಇದು ಅಶಿಸ್ತಿನ ವರ್ತನೆ .. ಅಂದೆ ಸಂಜೆ ಉಪನ್ಯಾಸಕರ ಸಭೆ ಕರೆದು ಮಕ್ಕಳಿಗೆ ಕುಮ್ಮಕ್ಕು ಕೊಟ್ಟಂತಾಗುವುದು  ಅಂಥವರ  ಮೇಲೆ ಕ್ರಮತೆಗೆದುಕೊಳ್ಳ ಬೇಕಾಗುವುದು ಎಂದು ಎಚ್ಚರಿದೆ. ಆ ಸಭೆಯಲ್ಲಿ ಕನ್ನಡ ವಯಸ್ಸಾದ ಉಪನ್ಯಾಸಕಿಯರು ಬಹಳ ಉದ್ವೇಗಗೊಂಡರು. ಅವರಿಗೆ ರಕ್ತದ ಏರೊತ್ತಡ  ಹಾಗೂ ಇತರೆ  ಅರೋಗ್ಯದ ಸಮಸ್ಯೆ ಇದ್ದಿತು.ಅವರು ಅಳ ತೊಡಗಿದರು. ಅವರನ್ನು ಸಮಾಧಾನ ಮಾಡಿ ಎಚ್ಚರಿಕೆ ನೀಡಿರುವುದು ಶಿಸ್ತಿನ ವರ್ತನೆ ಮಾಡಿದವರಿಗೆ. ಇತರರಿಗೆ ಅಲ್ಲ. ಶಿಸ್ತು ಸುವ್ಯವಸ್ಥೆಗೆ ಎಲ್ಲರ ಸಹಕಾರ ಅಗತ್ಯ ಅದಕ್ಕೆ ಎಲ್ಲರನ್ನೂ ವಿಶ್ವಾಸಕ್ಕೆ ತೆದುಕೊಂಡು ಕ್ರಮಜರುಗಿಸಲು ಸಭೆ ಕರೆಯಲಾಗಿದೆ . ವೈಯುಕ್ತಿಕವಾಗೆ ಅವರು ಚಿಂತೆ ಮಾಡಬಾರದು ಎಂದು ಸಮಾಧಾನ ಮಾಡಿದೆ. ಮಾರನೆ ದಿನ ಆ ವಿದ್ಯಾರ್ಥಿಗಳನ್ನುತರಗತಿಗೆ ಯಾರೂ ಸೇರಿಸ ಬಾರದು ಎಂದು ತಾಕೀತು ಮಾಡಿ ಸಭೆ ಮುಗಿಸಿದೆ.
ಬೆಳಗಾಗುತ್ತಲೆ ಅದು ಬೇರೆ ಬಣ್ಣ ಪಡೆದಿತ್ತು. ತಕ್ಷಣ ನನಗೆ ಹಿನ್ನೆಲೆ ಹೊಳೆಯಿತು.  ಅವರನ್ನು ದಾಟಿಕೊಂಡು  ಹೋಗುತ್ತಾ ಅಲ್ಲಿದ್ದ   ಹುಡುಗೆಯರನ್ನು ನೋಡಿ ಗುಡ್‌ ಮಾರ್ನಿಂಗ್‌ ಗರ್ಲ್ಸ ಎಂದೆ. ಅವರೂ ಎಂದಿನಂತೆ ಗುಡ್‌ ಮಾರ್ನಿಂಗ್‌ ಸರ್‌,  ಎಂದರು. ನನಗೆ ನಗೆ ಬಂತು.
ನಾನು ಕೋಣೆ ಒಳಗೆ ಹೋಗುವುದು ತಡವಿಲ್ಲ ಆ  ಹುಡುಗೆಯರನ್ನು ಇತರರು ತರಾಟೆಗೆ ತೆಗೆದು ಕೊಂಡರು. ನಿಮಗೆ ಬುದ್ದಿ ಇದೆಯಾ? ನಾವು ಅವರ ವಿರುದ್ಧ ಸ್ಟ್ರೈಕ್‌  ಮಾಡುತಿದ್ದೇವೆ, ಅವರಿಗೆ ಗುಡ್‌ ಮಾರ್ನಿಂಗ್‌ ಹೇಳುವಿರಾ. ಆ ಹುಡುಗೆಯರು ನಾಲಗೆ ಕಚ್ಚಿಕೊಂಡರು. ಆದ ತಪ್ಪನ್ನು ಸರಿ ಪಡಿಸಲು ಜೋರಾಗಿ ಹೆಸರು ಹೆಸರು ಹಿಡಿದು ಡೌನ್ ರ್ಡನ್ ಎನ್ನ ತೊಡಗಿದರು. ಐದು ನಿಮಿಷ ಬಿಟ್ಟು ಹೊರಹೋದೆ.ಸ್ಟಾಫ್ ರೂಂಗೆ ಹೋಗಿ ಮಕ್ಕಳು ಬರಲಿ ಬಿಡಲಿ ತರಗತಿ ಇದ್ದವರು ಹೋಗಿ ಎಂದು ಸೂಚಿದೆ.  ಆಗ ಉಪನ್ಯಾಸಕಿಯರ ತರಗತಿಗೆ ಅವರು ಪುಸ್ತಕ ಹಿಡಿದು ಹೊರಟರು. ಹೈಸ್ಕೂಲು ವಿಭಾಗದಲ್ಲಿ ತೊಂದರೆ ಕಾಣ ಲಿಲ್ಲ. ಮಕ್ಕಳು ತರಗತಿಯಲ್ಲೆ ಇದ್ದರು ಅಷ್ಟರಲ್ಲೆ ಉಪನ್ಯಾಸಕರೊಬ್ಬರು ತರಗತಿಯಲ್ಲಿ ಕುಳಿತಿದ್ದ ಪ್ರಥಮ ಪಿಯುಸಿ ಮಕ್ಕಳನ್ನು ಗದರಿಸಿ ಹೊರಕಳುಹಿಸುವುದು  ಕಾಣಿಸಿತು.
ಇದು ಚಿತಾವಣೆ ಯಿಂದಾಗಿರುವುದು ಎಂದು ಖಚಿತವಾಯಿತು. ನಮ್ಮ ಸಿಬ್ಬಂದಿವರ್ಗದವರು ಯಾರೂ ಮಾತನಾಡಲೂ ಸಿದ್ಧರಿರಲಿಲ್ಲ.
ಪುನಃ ದಿಕ್ಕಾರ ದ ಕೂಗು ಮೊಳಗಿತು. ಹೊರಬಂದು ಮಕ್ಕಳ ಮಧ್ಯೆ ನಿಂತುಕೊಂಡೆ. ಒಂದು ಸಲ ಎಲ್ಲರನ್ನೂ ದಿಟ್ಟಿಸಿ ನೋಡಿದೆ. ಅವರಲ್ಲಿ ಕೆಲವರು ಮುಖ ತಗ್ಗಿಸಿದರು. ಇತರರು ಅತ್ತಿತ್ತ ನೋಡ ತೊಡಗಿದರು
 ನೀವು ಹರತಾಳ ಮಡುತಿರುವಿರಿ . ಓ.ಕೆ. ಆದರೆ ನಿಮ್ಮ ದೂರು ಇರುವುದು ಪ್ರಾಂಶುಪಾಲರ ಮೇಲೆ. ಆದ್ದರಿಂದ ಪ್ರಾಂಶುಪಾಲರಿಗೆ ಡೌನ್ ಡೌನ್‌ ಅನ್ನಿ. ಧಿಕ್ಕಾರ ಕೂಗಿ ಆದರೆ ಹೆಸರು ಹಿಡಿದು ಹೇಳಿದರೆ ನಾನು ಸುಮ್ಮನಿರುವುದಿಲ್ಲ. ಪರಿಣಾಮ ಎದುರಿಸ ಬೇಕಾಗುವುದು ಎಂದು ಎಚ್ಚರಿಸಿದೆ. ಅವರು ಕೂಗುವುದನ್ನು ನಿಲ್ಲಿಸಿದರು
ನಿಮಗೆ ಯಾವುದೆಸಮಸ್ಯೆ ಇದ್ದರೆ ಬಂದು  ಗಮನಕ್ಕೆ ತನ್ನಿ ಇಲ್ಲವೆ  ಬರಹದಲ್ಲಿ ಮನವಿ  ಕೊಡಿ ಪರಿಶೀಲಿಸಬಹುದು.
ನಮ್ಮ ಉಪನ್ಯಾಸಕರಿಗೆ ಕಿರಿಕುಳ ಕೊಡುತ್ತಿರುವರಿ. ಅದಕ್ಕೆ ನಾವು ತರಗತಿಗೆ ಹೋಗುವದಿಲ್ಲ. ಪ್ರತಿಭಟಿಸುತ್ತೇವೆ , ಎಂದು ಮೂರುನಾಲಕ್ಕು ಜನ ಒಟ್ಟಿಗೆ ಹೇಳಿದರು
ತಕ್ಷಣ ನನಗೆ ಹೊಳೆಯಿತು.ಇದು ಉಪನ್ಯಾಸಕರ ಚಿತಾವಣೆ ಎಂದು
ಸರಿ ಇದು ಕಾಲೇಜಿನವರ ಸಮಸ್ಯೆ  ನಿಮಗೆ ಹರತಾಳ ಮಾಡಲು ಯಾವುದೆ ಅಭ್ಯಂತರವಿಲ್ಲ. ಆದರೆ ಹೈಯಸ್ಕೂಲು ಮಕ್ಕಳಿಗೆ ಯಾವುದೆ ತೊಂದರೆ ಯಾಗಲು ನಾನು ಬಿಡುವುದಲ್ಲ. ಎಂದು ಹೇಳಿ  ಜವಾನನಿಗೆ ಕುರ್ಚಿ ತಂದು ಅವರ ಮಧ್ಯದಲ್ಲೆ ಹಾಕಲು ಹೇಳಿದೆ. ನೀವು ಎಷ್ಟು ಹೊತ್ತು ಬೇಕಾದರೂ ಹರತಾಳಮಾಡಿ. ನಾನೂ ನಿಮ್ಮ ಜೊತೆಯೆ ಕೂತಿರುವೆ
ಅವರ ಜೊತೆಯೆ ನನು ಕುಳಿತಾಗ ಇದಕ್ಕೆ ಕಾರಣರಾದ ಉಪನ್ಯಾಸಕರಿಗೆ ಏನೂ ಮಾಡಲೂ ತೋಚದಾಯಿತು. ಅವರು ಹತ್ತಿರ ಬರಲು ಆಗದೆ ಸುಮ್ಮನಿರಲೂ ಆಗದೆ ಚಟಪಡಿಸ ತೊಡಗಿದರು. ನಾನು ಏನೂ ಮಾತನಾಡದೆ ಎಲ್ಲರನ್ನೂ ಗಮನಿಸುತ್ತಾ ಅಲ್ಲಿಯೆ ಕುಳಿತೆ.
ಒಂದೆರಡು ಬಾರಿ ಪ್ರಿನ್ಸಿಪಾಲ್ ಡೌನ್‌ ಡೌನ್ ಎಂದು ಕೂಗಿದರು. ನಾನು ಯಾವುದೆ ಪ್ರತಿಕ್ರಿಯೆ ನೀಡಲಿಲ್ಲ
 ಅರ್ಧ ಗಂಟೆಯಾಯಿತು. ಮುಕ್ಕಾಲು ಗಂಟೆಯಾಯಿತು ಯಾವುದೆ ಬೆಳವಣಿಗೆ ಯಾಗಲಿಲ್ಲ. ಹಯಸ್ಕೂಲಿನ ಮೊದಲ ಪಿರಿಯಡ್‌ ಮುಗಿದು ಎರಡನೆ ಪಿರಿಯಡ್‌ ಪ್ರಾರಂಭ ವಾಯಿತು. ತರಗತಿಗಳು ಯಥಾ ಪ್ರಕಾರ ಸಾಗಿದವು..
ಅಷ್ಟರೊಳಗೆ ಕಾಲೆಜು ಅಭಿವೃದ್ಧಿ ಸಮಿತಿಯ ಸದಸ್ಯರು ಒಬ್ಬೊಬ್ಬರಾಗಿ ಬಂದು ಸೇರಿದರು. ತಾಲೂಕಭಿವೃದ್ಧಿ ಮಂಡಳಿಯ ಉಪಾದ್ಯಕ್ಷೆಯೂ ಬಂದರು. ನಾನು ಸುಮ್ಮನೆ ಕುಳಿತಿದ್ದೆ.ಅವರೆ ಮುಂದಾಗಿ ಇಲ್ಲಿ ಏಕೆ ಕುಳಿತಿರುವಿರಿ ಸಭೆ ಸೇರಿಸಿ ಎಲ್ಲವಿಚಾರಿಸೋಣ ಅವರ ದೂರು ಏನೋ ಪರಿಶೀಲಿಸೋಣ , ಎಂದರು
ಎಲ್ಲ ವಿದ್ಯಾರ್ಥಿಗಳ ಸಭೆ ಸೇರಿತು. ಉಪನ್ಯಾಕರನ್ನೂ ಬರ ಹೇಳಿದೆ. ಅಷ್ಟರಲ್ಲಿ  ಉಪನ್ಯಾಸಕರೊಬ್ಬರು ಹುಡುಗೆಯರ ಜತೆ ಗುಸು ಗುಸು ಪಿಸ ಪಿಸ ಮಾತನಾಡುವುದೂ ಕಂಡುಬಂತು. ಅವರನ್ನೂ ಕರೆಸಿದರು.
ಎಲ್ಲರೂ ಕುಳಿತಾದ ಮೇಲೆ ಹರತಾಳದ ಕಾರಣ  ಕೇಳಿದರು. ಯಾರೂ ಉತ್ತರ  ಕೊಡುವ ಪ್ರಯತ್ನ ಮಾಡಲೆ ಇಲ್ಲ. ಆಗ ನಾನು ಕಳೆದೆರಡು ದಿನ ನಡೆದಘಟನೆ ವಿವರಿಸಿದೆ. ಅಶಿಸ್ತನ್ನು ಸಹಿಸಲು ಸಾಧ್ಯವಿಲ್ಲ ಎಂದುಖಡಾಖಂಡಿತವಾಗಿತಿಳಿಸಿದೆ. ಅಷ್ಟರಲ್ಲಿ ಹಡುಗರಲ್ಲಿ ಒಬ್ಬರು ಪ್ರಿನ್ಸಿಪಾಲರು ಹುಡುಗೆಯರ ಜೊತೆ ಅಸಭ್ಯವಾಗಿ ವರ್ತಿಸುವರು ಅದಕ್ಕೆ ನಾವು ಹರತಾಳ ಮಾಡಿರುವೆವು. ಎಂದು ಹೇಳಿದ
 ನನಗೆ ಇನ್ನಿಲ್ಲದ ಕೋಪ ಉಕ್ಕಿತು. ಇದುವರೆಗೂ ಇಲ್ಲದ ವಿಷಯ ಈಗ ತಲೆ ಎತ್ತಿತು. ತಕ್ಷಣ ನಾನು ಕೆರಳಿ ನಿಂತೆ. ಕಾಲಲ್ಲಿದ್ದ ಚಪ್ಪಲಿಯನ್ನು ಮೇಜಿನ ಮೇಲೆ ಇಟ್ಟು ಹೇಳಿದೆ. ಈ ಆಪಾದನೆ ಮಾಡುವವರು  ಅದನ್ನು ಸಾಕ್ಷಿ ಸಮೇತ ಸಾಬೀತು ಮಾಡಲಿ. ಆಗ ಇದೆ ಚಪ್ಪಲಿಯಿಂದ ನನಗೆ ಹೊಡೆಯಿರಿ, ನಾನು ಕೆಲಸಕ್ಕೆ  ರಾಜಿನಾಮೆ ಕೊಟ್ಟು ಹೋಗುವೆ. ಇಲ್ಲದಿದ್ದರೆ ಆಪಾದನೆ ಮಾಡುವವರನ್ನು ಅದಕ್ಕೆ ಪ್ರಚೋದನೆ ನೀಡಿದವರನ್ನೂ ಇದೆ ಚಪ್ಪಲಿಯಿಂದ ಹೊಡೆಯುವೆ. ಎಂದುಘರ್ಜಿಸಿದೆ.
ಸಭೆಯಲ್ಲಿ ನೀರವ ಮೌನ ನೆಲಸಿತು. ಯಾರಿಗೂ ದನಿ ಎತ್ತಲು ಧೈರ್ಯವೆ ಇರಲಿಲ್ಲ. ಕೊನೆಗೆ ಅಲ್ಲಿಸೇರಿದ್ದ ಹಿರಿಯರು ಪ್ರಿನ್ಸಿಪಾಲರೆ ಕೋಪ ಮಡಿಕೊಳ್ಳ ಬೇಡಿ, ಹುಡುಗರು ಏನೋ ತಪ್ಪು ಮಾತನಾಡಿದ್ದಾರೆ.ಇಂಥಹ ಮಾತನಾಡಬಾರದು. ಎಂದು ಮೊದಲಾಗಿ ಸಮಾಧನ ಮಾಡಿದರು. ಉಪನ್ಯಾಸಕರು ತಗ್ಗಿಸಿದ ತಲೆ ಎತ್ತಲಿಲ್ಲ..
ಕೊನೆಗೆ ನಾನೆ ಹೇಳಿದೆ. ಆದದ್ದಾಯಿತು. ಇನ್ನು ತರಗತಿಗೆ ಹೋಗಿ. ಈ ರೀತಿಯ ವರ್ತನೆ ಸಹಿಸಲು ಸಾಧ್ಯವೆ ಇಲ್ಲ ಮಾತಿನ  ಮತ್ತು ನಡತೆಯ ಮೇಲೆ ಹಿಡಿತವಿರಲಿ. ಆದರೆ
ಇಂದು ತರಗತಿ ಬೇಡ . ನಾಳೆ ಬನ್ನಿ ,ಎಂದು ನುಡಿದೆ.
ಎಲ್ಲರೂ ಜಾಗ ಖಾಲಿ ಮಾಡಿದರು.
ಮನೆಗೆ ಹೋದಾಗ ನನಗೆ ಒಂದು ಸುದ್ಧಿ ಕಾದಿತ್ತು. ಯಾರೋ ಒಬ್ಬ ಹುಡುಗಿ ನಮ್ಮ ಮನೆಗೆ ಫೋನು ಮಾಡಿ “ ಪ್ರಿನ್ಸಿಪಾಲರಿಗೆ ಹುಚ್ಚು ಕೆರಳಿದೆ, ಕೇಗೆ ಹೇಗೋ  ಮಾತ ನಾಡುತಿದ್ದಾರೆ.ಮನೆಯಲ್ಲಿಯೂ ಎಚ್ಚರದಿಂದ ಇರಿ , ಎಂದು ಮಾಹಿತಿ ಬಿತ್ತರಿಸಿದಳಂತೆ. ಹಿಂದಿನ ದಿನದ ಘಟನೆ ಮನೆಯಲ್ಲಿ  ತಿಳಿಸಿದ್ದೆ.  ಅವರು , ಅಮ್ಮಾ ತಾಯಿ, ಏನಾಗಿದೆ ?  ನಿನ್ನ ಹೆಸರು ಹೇಳು, ಎಂದಾಗ ಹೆಸರು ಏಕೆ ?  ನಿಮಗೆ ವಿಷಯತಿಳಿಸಿರುವೆ ಎಂದು ಫೋನು ಇಟ್ಟಳಂತೆ
ನಮ್ಮ ಮನೆವರಯ ಏನೋ ನಡೆದಿದೆ. ಅದಕ್ಕೆ ಹೀಗೆ ಅನಾಮಧೇಯ ದೂರವಾಣಿ ಬಂದಿದೆ.  ಹಾಗೇನಾದರೂ ಆಗಿದ್ದರೆ ಕಾಲೆಜಿನವರೆ ಯರಾದರೂ ತಿಳಿಸುತಿದ್ದರು . ಇದು ಕಿಡಿಗೇಡಿಗಳ ಕೆಲಸ ಎಂದುಕೊಂಡರು
ನಾನು ನಡೆದುದನ್ನು ತಿಳಿಸಿದೆ. ಕೇಳಿ ಚೆನ್ನಾಗಿ ನಿರ್ವಹಿಸಿದಿರಿ. ಬರಿ ಹೊಡಯುವೆ ಎಂದಿರಿ. ಹೊಡೆಯಲಿಲ್ಲವಲ್ಲಾ  ಅದೇ ಪುಣ್ಯ ., ಎಂದರು.
ಆಹಾ! ನಾನೆ ಧನ್ಯ.ಗಂಡನಿಗೆ ತಕ್ಕ ಹೆಂಡತಿ ಎಂದು ಬೆನ್ನುತಟ್ಟಿಕೊಂಡೆ.