Wednesday, July 10, 2013

ವಾಯುವಿಹಾರ ಜೊತೆಗೆ ವ್ಯಾಪಾರ


ಬೆಂಗಳೂರು ಉದ್ಯಾನಗಳ ನಗರ ಎಂಬ ಹೆಮ್ಮಗೆ ಪಾತ್ರವಾಗಿತ್ತು  ಹಲವು ದಶಕಗಳ ಹಿಂದೆ. ಬೆಂಗಳೂರು ಎಂದರೆ ಕಬ್ಬನ್‌ಪಾರ್ಕ ಮತ್ತು ಲಾಲ್‌ಬಾಗ್‌ಗಳ ನೆನಪು ಬರುವುದು. ಅವು ಶತಮಾಗಳಷ್ಟು ಹಳೆಯವು.ಆಗಿನ ಬೆಂಗಳೂರಿನ ಶ್ವಾಸ ಕೋಶಗಳೇ ಆಗಿದ್ದವು. ಆದರೆ ಕಳೆದ ದಶಕದಲ್ಲಿ ಬೆಂಗಳೂರಿನ ಬೆಳವಣಿಗೆ ಬೃಹತ್ತಾಗಿದೆ. ಜನ ಸಂಖ್ಯೆ ಹತ್ತಿರ ಹತ್ತಿರ ಕೋಟಿಗೆ ತಲುಪಪಿದೆ. ಹೊಸೊ ಹೊಸ ಬಡವಾಣೆಗಳು ತಲೆಎತ್ತುತ್ತಲಿವೆ. . ಮಹಾನಗರ ಪೂರ್ಣ ಕಾಂಕ್ರೀಟ್‌ಕಾಡು ಆಗುವುದನ್ನು ತಪ್ಪಿಸಲು ಪ್ರತಿ ಬಡವಾಣೆಗೂ ಒಂದು ಉದ್ಯಾನ ವಿರಲೇ ಬೇಕೆಂದು. ನಿಯಮವಿದೆ..ಆದರೆ ಅವು ಬಹುತೇಕ ಕಾಗದದ ಮೇಲಿವೆ. ಒಂದು ಕಾಲಕ್ಕೆ ನಿವೃತ್ತರ ಸ್ವರ್ಗವಾಗಿದ್ದ ಮಹಾನಗರದಲ್ಲಿ ಇಂದು ಸಂಚಾರ ದಟ್ಟಣೆಯಿಂದ  ಎಂಥವರಿಗೂ ಓಡಾಟ ಕಷ್ಟದಾಯಕವಾಗಿದೆ. ಹೀಗಿರುವಾಗ ಹಿರಿಯ ನಾನಗರೀಕರ ಹೊರ ಸಮಚಾರ ಬಲುಕಷ್ಟ.. “ಅಗತ್ಯವೇ ಅವಿಷ್ಕಾರದ ತಾಯಿ”  ಎಂಬ ಮಾತಿದೆ. ಅದಕ್ಕೆ ಸುಮಾರು ಎಪ್ಪತ್ತೈದು ವರ್ಷದ ಹಿಂದೆ ನಿರ್ಮಾಣವಾದ ಬಸವನ ಗುಡಿ ಬಡಾವಣೆಯ ಕೃಷ್ಣರಾವ್‌ ಪಾರ್ಕನಲ್ಲಿ ನಸುಕಿನಲ್ಲಿ ಬರುವ ಓಢಾಡಿಗರು ತಮ್ಮದೇಆದ ಪರಿಹಾರ ಕಂಡುಕೊಂಡಿರುವರು,
 ಕೃಷ್ಣರಾವ್ ಪಾರ್ಕ ೧೯೪೦ನೆಯ ಇಸ್ವಿಯಲ್ಲಿ  ದಿವಾನರಾಗಿದ್ದ ಕೃಷ್ಣರಾಯರ ಕನಸಿನ ಕೂಸು. ಅವರೇ ನೀಡಿದ್ದ ಸುಮಾರು ೨೦ ಎಕರೆ ದಟ್ಟ  ಮರಗಳಿಂದ ಕೂಡಿದ ವನಪ್ರದೇಶವನ್ನು ಅವರ ಹೆಸರಿಬಲ್ಲೇ ಪಾರ್ಕ ಮಾಡಲಾಯಿತು. ಬರಬಬರುತ್ತಾ ಅಲ್ಲಿ ಪೋಲೀಸ್‌ ಸ್ಠೇಷನ್, ಜಲಮಂಡಳಿ,,ದೇವಸ್ಥಾನಗಳು ತಲೆ ಎತ್ತಿದವು. ಸುಮಾರು ಎರಡೂವರೆ ಎಕರೆ ಜಾಗ ಕಡಿಮೆ ಯಾಯಿತು. ಎಚ್ಚೆತ್ತ ನಾಗರೀಕರು ಪ್ರತಿಭಟಿಸಿದರು. ಪರಿಣಾಮ ಅದಕ್ಕೆ ಒಂದು ಕಾಂಪೌಂಡು ಆಯಿತು. ಅಲ್ಲಿನ ವಾಕರ್‌ಗ್ರೂಪುನ ಆಸಕ್ತಿಯಿಂದ ಒಂದೊಂಏ ಅನುಕೂಲಗಳು  ಲಭ್ಯವಾಗ ತೊಡಗಿದವು. ವಾಕಿಂಗ್‌ ಟ್ರಾಕ್‌ ತಯಾರಾಯಿತು. ಮಕ್ಕಳ ಆಟಿಕೆಗೆ ಉಪಕರಣಗಳು ಬಂದವು. ಜೊತೆಗೆ ಯುವಕರಿಗೂ ಆಟವಾಡಲು ವಿಶಾಲ ಮೈದಾನ ಕೈ ಬಿಸಿ ಕರೆಯುವಂತಿದೆ,,ಈಗ ಬೆಳಗ್ಗೆ ಮತ್ತು ಸಂಜೆ ನೂರಾರು ಜನ ಬರುವ ತಾಣವಾಗಿ ಪರಿವರ್ತಿತವಾಗಿದೆ. ಅದರ ಪರಿಣಾಮ ವ್ಯಾಪಾರಿಗಳನ್ನೂ ಆಕರ್ಷಿಸಿದೆ.ಈಗ ಚುಮುಚುಮ ನಸುಕಿನಲ್ಲಿ ಪಾರ್ಕಿನ ಮುಂದಿಗಡೆ ಒಂದು ಮನಿಮಾರ್ಕೆಟ್‌ ಸೇರುವುದು..

ಅಲ್ಲಿವಿಶೇಷವಾಗಿ ಬರುವವರ ಅಗತ್ಯಕ್ಕೆ ತಕ್ಕಂತೆ ಮಾರಾಟ. ಮೊದಲನೆಯದಾಗಿ ಅಲ್ಲಿಆರೋಗ್ಯಕ್ಕೆ ಆದ್ಯತೆ. ಅದಕ್ಕೆ ವಿವಿಧ ರಸಗಳ ನ್ನು  ಅರೋಗ್ಯದೃಷ್ಠಿಯಿಂದ ಸಹಾಯಕವಾಗು ,ತರಕಾರಿ ರಸ, ಹಾಗಲಕಾಯಿ ರಸ, ಕ್ಯಾರೆಟ್‌ರಸ, ಸೌತೆ ಕಾಯಿರಸ ಲೋಳೆಸರದ ರಸ, ಪುದಿನ,ಸೊಪ್ಪಿನ ರಸ, ಹೀಗೆ ಹಲವು ಹನ್ನೊಂದು ತಾಜಾರಸಗಳು ಲಭ್ಯ.  ಅವು ರುಚಿ ರುಚಿಯಾಗಿ ಇರುವುದದಿಲ್ಲ. ಆದರೆ ಅಧರಕ್ಕೆ ಕಹಿಯಾದುದು ಉದರಕ್ಕೆ ಸಿಹಿ ಎನ್ನುವ ಮಾತಿದೆಯಲ್ಲ ಅದನ್ನ  ನಂಬಿ ಜನ ಕುಡಿಯುವರು. ಬರಿ ಐದು ರೂಪಾಯಿಗೆ ಒಂದು ಚಿಕ್ಕ ಲೋಟ,
ಅದರ ಪಕ್ಕದಲೇ ಇನ್ನೊಂದು ಶಕ್ತಿದಾಯಕ ಪಾನೀಯ. ಅದೇ ರಾಗಿ ಮಾಲ್ಟ್‌. ಬರಿ ರಾಗಿಗಂಜಿ ಎನ್ನ ಬೇಡಿಅದಲ್ಲ. . ಅದಕ್ಕೆ ಹತ್ತಾರು ಆರೋಗ್ಯಕ್ಕೆ ಪೂರಕವಾದ ವಸ್ತುಗಳ ಪುಡಿ ಸೇರಿಸುವರು. ವಾಕ್‌ ಮಾಡಿದಣಿದವರಿಗೆ ತಕ್ಷಣದ ಶಕ್ತಿಪೂರಣವಾಗುವುದು.. ಜೊತೆಗೆ ಸಕ್ಕರೆ ರೋಗ ಮತ್ತು ರಕ್ತದ ಏರೊತ್ತಡದವರಿಗೂ ಇದು ಬಹಳ ಉಪಯುಕ್ತ.
ಇನ್ನು ಬೆಳಗ್ಗೆ ಬರುವವರೆಲ್ಲ ಹಿರಿಯ ನಾಗರೀಕರೆ. ಸಹಜವಾಗಿ ಅವರ ಶರೀರದದ ಸಂಗಾತಿಗಳಾದ ಮಧು ಮೇಹ ಮತ್ತ ರಕ್ತದ ಒತ್ತಡದ ತಕ್ಷಣದ ತಪಾಸನೆಗೆ ಆಸಪತ್ರೆಗಳ ಮತ್ತು ಔಷಧಿ ಕಂಪನಿಗಳವರು  ಉಚಿತವಾಗಿ ಇಲ್ಲವೇ ರಿಯಾಯಿತಿ ದರದಲ್ಲಿ ಪರೀಕ್ಷೆ ಮಾಡಲು ಕಾದು ಕುಳಿತಿರುವುರು..ವಯಸ್ಸಾದವರು ಆಗಾಗ ಈ ಪರೀಕ್ಷೆಗಳನ್ನು  ಮಾಡಿಸಿಕೊಳ್ಳಲೇ ಬೇಕು. ಅವರಿಗೆ ಸಂಚಾರ ದಟ್ಟಣೆಯಲ್ಲಿ ಹೋಗಿ ಆಸ್ಪತ್ರೆಗೆ ಹೋಗಿ  ಕಾಯುವ ಕಷ್ಟ ತಪ್ಪುವು.ದು.ಜೊತೆಗೆ ಏರು ಪೇರಾಗಿದ್ದರೆ ಸೂಕ್ತ  ಮಾಹಿತಿ ದೊರೆಯುವುದು

      ಇಳಿವಯಸ್ಸಿನಲ್ಲಿ ಅರೋಗ್ಯ ಕಾಪಾಡಿಕೊಳ್ಳಲು ಮೂರು ಅಂಶಗಳು ಅತಿ ಮುಖ್ಯ. ಆಹಾರ, ಔಷಧಿ ಮತ್ತು ವ್ಯಯಾಮ         ಅದಕ್ಕಾಗಿ ಆರೋಗ್ಯಕ್ಕೆ  ಪೂರಕವಾಗುವು ತಾಜಾ ಹಸಿರುಎಲೆ  ತರಕಾರಿ, ಮೊಳಕೆ ಕಾಳುಗಳು ಲಭ್ಯ.  ವಾಕಿಂಗ್‌ಮುಗಿಸಿ ಹಾಗೆಯೇ ಕೈನಲ್ಲಿ ಹಿಡಿದುಕೊಂಡು ಹೋದರೆ ಮನೆಯವರಿಗೂ ತುಸು ಸಹಾಯ.

ಆದರ ಜೊತೆ ಕುರುಕುಲ ತಿಂಡಿ, ಕೋಡುಬಳೆ, ನಿಪ್ಪಟ್ಟು ಹಪ್ಪಳ ಇತ್ಯಾದಿಗಳನ್ನು  ಮಾರಲು ಜನ ಕಾದಿರುವುರು.ಅದೆಲ್ಲದರ ಜೊತೆ . ಬೆಳಗಿನ ಪೂಜೆ ಗೆ ಹೂವು ಬೇಕೆ ಬೇಕಲ್ಲ. ಅದನ್ನು ಮಾರುವವರೂ ಸದಾಸಿದ್ದ,ಇನ್ನು ಚುನಾವಣೆ  ಸಮಯ ಬಂತೆಂದರ ರಾಜಕೀಯ ನಾಯಕರ ಸವಾರಿ. ಮುಗುಳುನಗುತ್ತಾ ಕಂಡವರಿಗೆಲ್ಲ ಕೈಮುಗಿಯುವರು, 
ಗೇಟಿನ ಅಕ್ಕಪಕ್ಕದ ಜಾಗದಲ್ಲಿ ಅಧ್ಯಾತ್ಮಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ  ಬ್ಯಾನರ್‌ಗಳು. ಬಾಗಿಲಿ\ಲ್ಲೇ ನಿಂತು ಕರಪತ್ರನೀಡುವ ಸ್ವಯಂಸೇವಕರು. ಮುಂಜಾನೆ ಮೂರು ತಾಸು ಪಾರ್ಕ ಮುಂದೆ ಭರ್ಜರಿವ್ಯಪಾರ.. ಹೀಗಾಗಿ ಪಾರ್ಕಿಗೆ ದೈಹಿಕ ಆರೋಗ್ಯದ ಸುಧಾರಣೆಯ ಜೊತೆ ಜೊತೆಗೆ ಅನೇಕ ಕೆಲಸಗಳನ್ನು ಮುಗಿಸಿ ಹೊರಡುವ ಅನೂಕೂಲ ಈಗಿದೆ. ಜೊತೆತೆಗ ಗೆಳೆಯರ ಭೇಟಿ , ಹರಟೆ, ಸುಖದುಃಖ ಸಮಾಚಾರ ವಿನಿಮಯ, ಮತ್ತು ಸಾಮಾಜಿಕ ಸಂವಹನ ಕೇಂದ್ರವಾಗಿದೆ.  ,


















No comments:

Post a Comment