Sunday, January 13, 2013

ಅಮಾನತ್ತಿನಲ್ಲಿಡಿ ಆದರೆ ಅವಕಾಶ ಕೊಡಿ

appaaji@gmail.com



ಸಂಜೆ ಮೂರು  ಗಂಟೆಯ ಅಸು ಪಾಸು. ಎಸ ಎಸ್ ಎಲ್ ಸಿ  ಪರೀಕ್ಷಾ ಮಂಡಳಿಯ ಕಚೇರಿಯಲ್ಲಿ ನಿರ್ದೇಶಕರು ಗಂಭೀರವಾಗಿ  ಕುಳಿತಿರುವರು ಅವರೆದುರು ಅನತಿ ದೂರದಲ್ಲಿ ಹರೆಯದ ಹುಡುಗ ತಲೆ ತಗ್ಗಿಸಿ ಕೈ ಕಟ್ಟಿ ನಿಂತಿರುವನು.  ಅವರ ಮುಂದಿನ ಉದ್ದನೆಯ   ಮೇಜಿನ ಎರಡು ಕಡೆಗೆ  ಹಾಕಿದ ಕುರ್ಚಿಯೊಂದರಲ್ಲಿ ಕುಳಿತ ಐವತ್ತು ದಾಟಿದ ವ್ಯಕ್ತಿ  ಕೈನಲ್ಲಿನ ಪತ್ರ ತೋರಿಸುತ್ತಾ   ವಿನಯವಾಗಿ ಮಾತನಾಡುತಿದ್ದಾನೆ                                          
"
ತಪ್ಪಿದ್ದರೆ  ನನ್ನನ್ನು ಅಮಾನತ್ತು ಮಾಡಿ , ಚಿಂತೆ ಇಲ್ಲ.  ಆದರೆ ಐವತ್ತೊಂದು ಅಮಾಯಕ ವಿದ್ಯಾರ್ಥಿಗಳ   ಭವಿಷ್ಯ  ಹಾಳಾಗಬಾರದು. ದಯವಿಟ್ಟು ಅವರಿಗೆ ಪರೀಕ್ಷೆಗೆ  ಕುಳಿತು ಕೊಳ್ಳಲು  ಅವಕಾಶ ಕೊಡಿ"  
ಅಲ್ರಿ   ಪ್ರಿನ್ಸಿಪಾಲಾರೆ, ಅವರ ಅರ್ಜಿಗಳೇ ಬಂದಿಲ್ಲ , ಪರೀಕ್ಷಾ ಶುಲ್ಕ  ಸಂದಾಯವಾಗಿಲ್ಲ. ಪ್ರವೇಶ ಪತ್ರ ಕೊಡುವುದು  ಹೇಗೆ ಸಾಧ್ಯ
"
ಹೇಗಾದರೂ  ಮಾಡಿ  ಅವಕಾಶ ಕೊಡಿ ಸಾರ್ ,ಅವರು ಅರ್ಜಿ ತುಂಬಿದ್ದಾರೆ. ಹಣ ಕೊಟ್ಟಿದ್ದಾರೆ. ನಮ್ಮ ಗುಮಾಸ್ತನು ಇಲಾಖೆಗೆ ಕಳುಹಿಸಿಲ್ಲ.ದುರ್ಬಳಕೆ  ಮಾಡಿರುವನು. ಅದು ಅವನ ತಪ್ಪು"
ಅವನು ತಪ್ಪು ಮಾಡಿದ , ಆದರೆ ನೀವು ಏನು ಮಾದುತಿದ್ದಿರಿ? ಮೇಲ್ವಿಚಾರಣೆ ನಿಮ್ಮ ಕರ್ತವ್ಯ ಅಲ್ಲವೇಸರಕಾರಕ್ಕೆ ಸಲ್ಲಬೇಕಾದ ಹಣ  ನುಂಗಿ ಹಾಕಿ , ಈಗ ಗೋಗರೆಯುವಿಲ್ಲ , ಇದು ಕರ್ತವ್ಯ ಚ್ಯುತಿ  ನಿಮ್ಮ ಮೇಲೆ  ಕ್ರಮ  ತೆಗೆದುಕೊಳ್ಳ ಬೇಕು. "
ಬೇಕಾದ್ರೆ ನನಗೆ ಶಿಕ್ಷೆ   ಕೊಡಿ , ಈಗಲೇ   ಅಮಾನತ್ತು ಮಾಡಿ . ನಿಮ್ಮ ಆದೇಶ ಪಾಲಿಸುವೆ., ಆದರೆ ದಯಮಾಡಿ ಮಕ್ಕಳಿಗೆ ಪರೀಕ್ಷೆಗೆ   ಕುಳಿತು ಕೊಳ್ಳಲು   ಅವಕಾಶ ಕೊಡಿ  "
  ಸಂಭಾಷಣೆ ನಡೆದದ್ದು   ಬೆಂಗಳೂರಿನಲ್ಲಿ . ನಾನು ಮಂಡ್ಯ  ಜಿಲ್ಲೆಯ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿ ಪಾಲ ನಾಗಿದ್ದಾಗ.  ನಮ್ಮದು  ಸಂಯುಕ್ತ  ಪದವಿ  ಪೂರ್ವ ಕಾಲೇಜು.  ಅಲ್ಲಿ  ಹೈಸ್ಕೂಲು  ಮತ್ತು ಕಾಲೇಜು ಎರಡು ವಿಭಾಗಕ್ಕೂ ಒಬ್ಬರೇ ಮುಖ್ಯಸ್ಥರು
ಹೈಸ್ಕೂಲು ವಿಭಾಗಕ್ಕೆ  ಹಿರಿಯ ಸಹಾಯಕರು ಇರುವರು. ಶೈಕ್ಷಣಿಕ  ವಿಚಾರಗಳ  ಉಸ್ತುವಾರಿ ಮಾಡುವರು     ಆದರೆ  ಹಣ ಕಾಸು,  ಶಿಸ್ತು  ಮೊದಲಾದವುಗಳ  ಅಂತಿಮ ಹೊಣೆ  ಅವರದಲ್ಲ..ಪ್ರಾಂಶುಪಾಲರದು
  ವರ್ಷ ಎಸ ಎಸ ಎಲ್ ಸಿ ಪೂರಕ    ಪರೀಕ್ಷೆಗೆ  ವೇಳಾ ಪಟ್ಟಿ  ಬಂದಿದೆ..ನಮ್ಮಲ್ಲಿ ನೂರ  ಐವತ್ತಕ್ಕೂ ಹೆಚ್ಚು ಮಕ್ಕಳು   ಪರೀಕ್ಷೆಗೆ  ಕಟ್ಟಿರುವರು ಮೊದಲ ಹಂತದಲ್ಲಿ ೯೫  ಮತ್ತು ಎರಡನೆ ಹಂತದಲ್ಲಿ ೫೬ ಮಂದಿ ಅರ್ಜಿ  ಸಲ್ಲಿಸಿದ್ದಾರೆ. ಒಟ್ಟು ನೂರಾ  ಐವತ್ತು ಒಂದು ಜನ ರ ಪಟ್ಟಿ ನಮ್ಮಲ್ಲಿದೆ.ಆದರೆ ನಮಗೆ ಬಂದದ್ದು ೯೫ ಪ್ರ ವೇಶ ಪತ್ರಗಳು, ನಾಮಿನಲ್‌   ರೋಲ್ ಮತ್ತು ಇತರ ದಾಖಲೆಗಳುಮಾತ್ರ.
ಗುಮಾಸ್ತನು  ಎರಡನೆ ಬ್ಯಾಚಿನವು ತಡವಾಗಿ ಬರುವವು ಎಂದು ಹೇಳಿದ. ಇರಬಹುದು ಎಂದು ಕೊಂಡೆವು.ಆಗಾಗ ಅಂಚೆ ಇಲಾಖೆಯವರು ವಿಳಂಭ ಮಾಡುವುದು ಸಾಮಾನ್ಯ
ಪ್ರ ವೇಶ ಪತ್ರಗಳ ವಿತರಣೆ ಪ್ರಾರಂಭ ವಾಯಿತು. ಪರೀಕ್ಷೆಗೆ  ನಾಲಕ್ಕೆ ದಿನ ಬಾಕಿ. ಉಳಿದ ಪ್ರವೇಶ   ಪತ್ರಗಳ  ಸುಳಿವೇ ಇಲ್ಲ.ಇದರ ಮೇಲೆ ಗುಮಾಸ್ತನು ಎರಡು ದಿನ ರಜೆ ಹಾಕಿದ.ಬೇರೆ ಶಾಲೆಗಳಲ್ಲಿ ವಿಚಾರಿಸಲಾಗಿ ಎಲ್ಲ ಕಡೆ  ಯಾವಾಗಲೋ ಬಂದಿವೆ. ಆದ್ರೆ ನಮಗೆ ಮಾತ್ರ ಬಂದೇ ಇಲ್ಲ.
ಗಾಬರಿಯಾಯಿತು. ಯಾಕೋ ಅನುಮಾನ ಬಂದಿತು. ಹಿರಿಯ ಸಹಾಯಕರನ್ನು ಕರೆದು  ಗುಮಾಸ್ತನ ಬೀರುವಿನಲ್ಲಿ ಹುಡುಕಲು ಹೇಳಿದೆ.

ಅವ್ರು ತುಸು ಸಮಯದ ನಂತರ  ಕೈನಲ್ಲಿ ಒಂದು ಕಡತ ಹಿಡಿದು ಬಂದರು  ., " ಸಾರ್, ಅರ್ಜಿ ಇಲ್ಲೇ ಇವೆ ಕಳುಹಿಸಿಯೇ ಇಲ್ಲ."
ತಕ್ಷಣ  ಗುಮಾಸ್ತನ ಮನೆಗೆ ಜವಾನನ್ನು ಕಳುಹಿಸಿದೆ. ಅರ್ಧ ಗಂಟೆಯಲ್ಲಿ ಬಂದ.
 
ಏನು ಮಾದಯ್ಯ  ಇನ್ನು56  ಪ್ರವೇಶ ಪತ್ರಗಳು ಬಂದೆ ಇಲ್ಲ, ಏಕೆ ? ಎಂದು ಕೇಳಿದೆ.
ಸಾರ್  ನಾನಂತು ಹಣ ತುಂಬಿ ಅರ್ಜಿ ಕಳುಹಿಸಿರುವೆ. ಅಲ್ಲಿಯೇ ಏನಾದರೂ ವ್ಯತ್ಯಾಸವಾಗಿರಬಹುದು . ಬೇಕಾದರೆ  ಖುದ್ದಾಗಿ ಹೋಗಿ ತರುವೆ " ಎಂದು ಉತ್ತರಿಸಿದ.
 
ಹಿರಿಯ ಸಹಾಯಕರು ಕಡತವನ್ನು ಅವನ ಮುಂದೆ  ಹಿಡಿದು " ಅರ್ಜಿಗಳು ಇಲ್ಲಿಯೇ ಇವೆ. ನೀನು ಅವನ್ನು  ಕಳುಹಿಸಿಲ್ಲ. ಸುಳ್ಳು ಯಾಕೆ  ಹೇಳುತ್ತಿರುವೆ" ಎಂದು ಗದರಿದರು.
ಅವನು ಪೆಚ್ಚಾದ . ಬೇ  ಬೇ  ಎನ್ನ ತೊಡಗಿದ.
ನಿಜ ಹೇಳು , ಆದದ್ದಾದರೂ  ಏನು  , ಎಂದು ಗದರಿದಾಗ ಬಾಯಿ ಬಿಟ್ಟ
ಹುಡುಗರು ಪರಿಕ್ಷಾ ಶುಲ್ಕ  ಕಟ್ಟಿದ್ದಾರೆ. ಸುಮಾರು ೧೫೦೦ ರುಪಾಯಿ ಆಗಬಹುದು.ಹಣ  ಬಂದ ಬಂದ  ಹಾಗೆ ಬಳಸಿ ಕೊಂಡಿರುವ . ಕೊನೆಗೆ ಕಟ್ಟಲು  ಕೈನಲ್ಲಿ ಕಾಸಿಲ್ಲ.  ಆದದ್ದಾಗಲಿ ಎಂದು ಸುಮ್ಮನಾಗಿದ್ದಾನೆ. ಪ್ರವೇಶ ಪತ್ರಗಳು ಬಂದಾಗ ಗೊತ್ತಾಗಿದೆ. ಆದರೆ ಕೈ ಮೀರಿದೆ.ಅದಕ್ಕೆ ರಜೆ ಹಾಕಿದ್ದಾನೆ..
 
ಈಗ ಏನು ಮಾಡುವುದು , ನೀನೆ ಹೇಳು, ಎಂದಾಗ ,
 
ಸಾರ್ , ಹೇಗಿದ್ದರೂ ರಿಪೀಟರಸ್ . ಅವರು ಹೇಗಿದ್ದರೂ ಪಾಸಾಗುವುದಿಲ್ಲ. ಮುಂದಿನ ಪರೀಕ್ಷೆಗೆ ಕೂಡಲಿ  ನಾನೇ ಪರೀಕ್ಷಾ  ಶುಲ್ಕ ಕಟ್ಟುವೆ, ಎಂದು ಉಡಾಫೆಯ ಮಾತನಾಡಿದ.
 
ಅವರು ಪಾಸಾಗುವರೋ ಬಿಡುವರೋ ಅದು ಬೇರೆ ಮಾತು ೫೧ ಜನ ಪರೀಕ್ಷೆ ಕಟ್ಟಿದ್ದಾರೆ. ಅವರಿಗೆ ಅನ್ಯಾಯವಾಗುವುದುಎಲ್ಲರಿಗು ಸಮಾಧಾನ ಮಾಡುವುದು ಸಾಧ್ಯವೇ ಇಲ್ಲ., ಎಂದರು ಹಿರಿಯ ಸಹಾಯಕರು.
ಮೊದಲೇ ನಮ್ಮಲ್ಲಿ ಹಿಂದುಳಿದ ಮತ್ತು ದಲಿತ ಮಕ್ಕಳೇ ಹೆಚ್ಚು. ದೊಡ್ಡ  ಗಲಾಟೆಯಾಗುವುದು . ನಮ್ಮ ಊರು ಸೂಕ್ಷ್ಮ ಪ್ರದೇಶ ಮೊದಲೇ ಕೋಮು ಗಲಭೆ ಗೆ ಕಾರಣ ವಾದರೂ ಅಚ್ಚರಿ ಇಲ್ಲ.  ಯಾವುದೇ ಅವ್ಯವಹಾರ ಗಳಿಗೆ  ಅವಕಾಶ ಕೊಡದೆ  ಬಿಗಿಯಾಗಿ ಪರೀಕ್ಷೆ  ನಡೆಸುವುದರಿಂದ .ಅನೇಕರಿಗೆ ಅಸಮಾಧಾನವಿದೆ. ಈಗ ಕಾರಣ ಸಿಕ್ಕರೆ ತೊಂದರೆ  ಖಂಡಿತ .  ಅಂತೂ  ನಾವು ಗಂಡಾಂತರಕ್ಕೆ ಸಿಕ್ಕು ಹಾಕಿ ಕೊಂಡಿದ್ದೇವೆ, ಎಂದು ಹೇಳಿದೆ.
ಅವನಿಗೆ ಮೆಮೋ ಕೊಡಲಾಯಿತು. ಅವನು ತನ್ನ ತಪ್ಪು ಒಪ್ಪಿಕೊಂಡು ಪತ್ರ ಬರೆದು ಕೊಟ್ಟ.ಅದನ್ನು ಅಂಧೇ ಇಲಾಖೆಯ  ಗಮನಕ್ಕೆ ಸಲ್ಲಿಸಲಾಯಿತು. ಆದರೆ  ಸಾರ್ವಜನಿಕರನ್ನು  ಸಮಾಧಾನ ಮಾಡುವುದು   ಆಗದ ಮಾತು.
ಎಲ್ಲ ದಾಖಲೆಗಳ ಸಮೇತ ಅವನನ್ನು ಕರೆದುಕೊಂಡು ಬೆಂಗಳೂರಿನ ಪರೀಕ್ಷಾ ಮಂಡಳಿಗೆ ಹೋದೆ.ಅಲ್ಲಿನ ಅಧಿಕಾರಿಗಳ ಮನ ಒಲಿಸಿ  ಪ್ರವೇಶ ಪತ್ರ   ಪಡೆಯುವುದೊಂದೇ ಈ ಸಮಸ್ಯೆಗೆ ಪರಿ ಹಾರವೆನಿಸಿತು.
ಅದರಂತೆ ಮಂಡಳಿಯ  ನಿರ್ದೇಶಕರಿಗೆ ವಿಷಯ  ತಿಳಿಸಿ ಮನವಿ ಸಲ್ಲಿಸಲಾಯಿತು.
ಅವರು  ಮೊದಲು ನಮ್ಮ ಮನವಿಯನ್ನು ಸಾರಾ ಸಗಟು ತಳ್ಳಿ ಹಾಕಿದರು
."
ತಪ್ಪು ನಿಮ್ಮದು, ಅನುಭವಿಸಿ " ಎಂದು ಝಾಡಿಸಿದರು
"
ನಾನು  ಬಯಾವುದೇ ಸಬೂಬು ಹೇಳದೆ ಪ್ರಾಂಜಲ  ಮನದಿಂದ ತಪ್ಪು  ಒಪ್ಪಿಕೊಂಡೆ
"
ಗುಮಾಸ್ತನೆ  ಹಣ  ತಿಂದಿದ್ದರು ಅದನ್ನು  ತಡೆಯುವಲ್ಲಿ  ನಾನು ವಿಫಲನಾಗಿದ್ದೆ.ಅವನು ಯಾವುದೊ ಚಲನ್ ತೋರಿಸಿ ಹಣ  ಕಟ್ಟಿ ಬಂದಿರುವೆ ಎಂದರೆ ನಂಬಿದ್ದು ನನ್ನ ತಪ್ಪು. ಪರಿಶೀಲನೆ ಮಾಡ ಬೇಕಾದದ್ದು ನನ್ನ ಕರ್ತವ್ಯವಾಗಿತ್ತು. ನನ್ನ ಕರ್ತವ್ಯ ಲೋಪದಿಂದ ೫೬ ಜನಕ್ಕೆ ತೊಂದರೆಯಾಗಿತ್ತು.
ಪರಿಕ್ಷಾಆ ಸಮಯದಲ್ಲಿ ಅಷ್ಟು ಜನ ಪೋಷಕರನ್ನು , ವಿದ್ಯಾರ್ಥಿಗಳನ್ನೂ  ಸಮಾಧಾನ  ಮಾಡುವುದು ಆಗದ ಮಾತು. ತಪ್ಪು ಯಾರದೇ ಇರಲಿ, ಗುಮಾಸ್ತನದೋ , ಪ್ರಾಂಶುಪಾಲರದೋ, ಇಲ್ಲವೇ ಇಲಾಖೆಯದೋ  ಅದು ಅವರಿಗೆ ಸಮಬಂಧಿಸಿಲ್ಲ.  ಅವರಿಗೆ  ಅನ್ಯಾಯವಾಗಿದೆ. ಪ್ರತಿಭಟನೆ  ಮಾಡುವರು. ಕಾಲೇಜಿನ ಮತ್ತು ಊರಿನ ಶಾಂತಿ ಸುವ್ಯವಸ್ಥೆಗೆ ಭಂಗ  ಬರುವುದು ಖಂಡಿತ.
ನನಗೆ ಏನೇ ಆದರು ಸರಿ . ಪ್ರವೇಶ ಪತ್ರ  ಇಲ್ಲದೆ  ಇಲ್ಲಿಂದ ಕದಲಬಾರದು. ಇಲಾಖೆ  ಕೊಡದಿದ್ದರೆ ಕಾಲೇಜಿಗೆಗಂತೂ  ಕಾಲಿಡುವುದಿಲ್ಲ , ಎಂದು ಅಲ್ಲಿಯೇ ಗಟ್ಟಿಯಾಗಿ ಕುಳಿತೆ.
ಗುಮಾಸ್ತನು ನೀಡಿದ್ದ ಹೇಳಿಕೆಯನ್ನು ಅವರಿಗೆ ಸಲ್ಲಿಸಿದೆ. ಇದ್ದ ವಿಷಯ ತಿಲಿಸಲು .  ಅವನಿಗೆ ಸೂಚಿಸಿದೆ. .
ಅವನು ಅಳುತ್ತ ಅವರ ಕಾಲು ಹಿಡಿದ , " ಮೇಡಂ, ನಾನು   ಪ್ರಾಂಶುಪಾಲರಿಗೆ ಮೋಸ ಮಾಡಿದೆ. . ಮಣ್ಣು ತಿನ್ನುವ ಕೆಅಸ ಮಾಡಿದೆ ನೀವೇ ಕಾಪಾಡಿ "  ಅಳತೊಡಗಿದ.
..
ನಿರ್ದೇಶಕರು ಮಹಿಳೆ. ಅವರ ಮನ  ಕರಗಿತು.
 
ನೀವು ಏನು ಕ್ರಮ  ತೆಗೆದುಕೊಂಡಿದ್ದೀರಿ? .ನನ್ನನ್ನು ಕೇಳಿದರು
ಮೆಮೋ ಕೊಟ್ಟಿರುವೆ. ಇಲಾಖೆಗೆ ವರದಿ ಮಾಡಿರುವೆ., ಮೊದಲು ಅನಾಹುತ ಆಗುವ ಮೊದಲೇ ತಪ್ಪು ಸರಿಪಡಿಸಲು ಇಲ್ಲಿಗೆ ಬಂದಿರುವೆ. ಪರೀಕ್ಷೆಗೆ ಕುಳಿತುಕೊಳ್ಳಲು ದಯಮಾಡಿ ಮಕ್ಕಳಿಗೆ ಅನುಮತಿ ಕೊಡಿಎಂದು ಅರ್ಜಿಯ    ಕಡತವನ್ನು ನೀಡಿದೆ.

ಅವರು  ಸಂಭಂದಿಸಿದ ಅಧಿಕಾರಿಯನ್ನು ಕರೆದು ತಕ್ಷಣ  ಪ್ರವೇಶ  ಪತ್ರಗಳನ್ನು , ಅಗತ್ಯ ದಾಖಲೆಗಳನ್ನು ಸಿದ್ಧ  ಪಡಿಸಲು ತಿಳಿಸಿದರು.
ಆದ ತಪ್ಪಿಗೆ  ಕಠಿಣ ಶಿಕ್ಷೆ  ಕೊಡುವುದಾಗಿ  ಬೆದರಿಸಿದರು.
ನಾನು ನಿರಾಳವಾಗಿ ಒಪ್ಪಿಕೊಂಡೆ.ಮಕ್ಕಳಿಗೆ ಪರೀಕ್ಷೆಗೆ ಕೂಡಲು  ಅನುಮತಿ ಸಿಕ್ಕಿತು.  ಅದೇ ದೊಡ್ಡದು.   ಗಂಡಾಂತರ ತಪ್ಪಿತು ನನಗೆ ಏನೇ ಆದರೂ ಪರವಾ  ಇಲ್ಲ ಎಂದುಕೊಂಡೆ. ಅಂದೇ ಸಂಜೆ ಆರು ಗಂಟೆಗೆ ಎಲ್ಲದಾಖಲೆಗಳು     ಕೈಗೆ ಬಂದವು.. ಸೂಕ್ತ  ಕ್ರಮ ತೆಗೆದುಕೊಳ್ಳಲು  ಉಪ  ನಿರ್ದೆಶಕರಿಗೆ    ಸೂಚನೆ ರವಾನಿಸಲಾಯಿತು. ರಾತ್ರಿ ಹತ್ತರ ಹೊತ್ತಿಗೆ ಊರಿಗೆ ವಾಪಾಸಾದೆವು
 
ಬೆಳಗ್ಗೆ ಕಾಲೇಜಿನಲ್ಲಿ ಎಲ್ಲರಿಗು  ಅಚ್ಚರಿ ಪರೀಕ್ಷಾ ಶುಲ್ಕ ಪಾವತಿ ಮಾಡದೆ  ಪ್ರವೇಶ  ಪತ್ರ  ಬಂದಿದ್ದವು..ಕೆಲವೇ ದಿನಗಳಲ್ಲಿ  ಪರೀಕ್ಷಾ ಶುಲ್ಕವನ್ನು ಪ್ರತಿ  ಅರ್ಜಿಗೆ ೧೦೦ ವಿಶೇಷ ದಂಡವನ್ನು ಸಲ್ಲಿಸಲು ತಿಳಿಸಲಾಗಿತ್ತು.ಸುಮಾರು ಎಂಟು ಸಾವಿರ ಸಾವಿರರೂಪಾಯಿ ಹಣವನ್ನು ಪ್ರಾಂಶುಪಾಲರೇ ಒಂದು ವಾರದಲ್ಲಿ ಇಲಾಖೆಗೆ ಕಟ್ಟ ಬೇಕೆಂದು ಕಟ್ಟು ನಿಟ್ಟಿನ ಆದೇಶ ಬಂದಿತು.ಆ ವೇಳೆಗೆ ಆಗಲೇ ಗುಮಾಸ್ತನ ಅಮಾನತ್ತು ಆಗಿತ್ತು.ನಾನು ಹೆಚ್ಚು ತಲೆ ಕೆಡಿಸಿ ಕೊಳ್ಳಲಿಲ್ಲ   .ಇಲಾಖೆಯೇ ತಪ್ಪಿನ ಹೊಣೆಯನ್ನು ನಿಗದಿ ಮಾಡಿ ಆರೋಪಿಯ ಮೇಲೆ ಕ್ರಮ  ಜರುಗಿಸಿದೆ. ಅವನಿಂದ ವಸೂಲು ಮಾಡಿ   ಹಣ ಸಲ್ಲಿಸಲಾಗುವುದು ಎಂದು ವಿನಯ  ಪೂರ್ವಕವಾಗಿ ಉತ್ತರಿಸಿದೆ. 
ಸಿಡಿಲಿನಂತೆ ಬಂದ  ಸಮಸ್ಯೆ ಬರಿ ಗುಡುಗಾಗಿ ಪರಿಹಾರ ವಾಗಿತ್ತು.
ನಿಜವಾಗಿಯೂ ನಮ್ಮ ಅದೃಷ್ಟ  ದೊಡ್ಡದು. ನಮ್ಮದೇ ಜಿಲ್ಲೆಯಲ್ಲಿ ಮಂಡ್ಯದ ಹತ್ತಿರದ ಹಳ್ಳಿಯ  ಶಾಲೆಯಲ್ಲಿ . ಹೀಗೆ  ಆಗಿದೆ. ಮೂವತ್ತು ಹುಡುಗರಿಗೆ ಪ್ರವೇಶ ಪತ್ರ ಬಂದಿಲ್ಲ. ಅಲ್ಲಿನ  ಮುಖ್ಯೋ ಪಾಧ್ಯಯರು   ತುಂಬ ಭಯಸ್ಥರು,. ಸಜ್ಜನರು.ದೊಡ್ಡ ಗಲಭೆ ಯಾಗುವುದು. ಹಾಗಾದರೆ  ಮರ್ಯಾದೆ ಹೋಗುವುದು  ಎಂದು ಹೆದರಿ ಆತ್ಮ ಹತ್ಯೆ ಮಾಡಿಕೊಂಡ ಸುದ್ದಿ ಬಂದಿತು.
ನನಗೆ ಏನಾದರು ಸರಿ ವಿದ್ಯಾರ್ಥಿಗಳಿಗೆ   ತೊಂದರೆ  ಆಗಬಾರದು  ಎಂಬ ಮನೋಭಾವ  ಮತ್ತು ಅಮಾನತ್ತು ಆದರೂ ಸರಿ , ಪ್ರವೇಶ ಪತ್ರವಿಲ್ಲದೆ ಕಾಲೇಜಿಗೆ ಹೋಗುವುದಿಲ್ಲ  ಎಂಬ  ನನ್ನ  ನಿಲುವಿನಿಂ  ಸಮಸ್ಯೆ  ಸರಳವಾಗಿ ಪರಿಹಾರವಾಯಿತು.
ಪಾಪ! ಗೆಳೆಯರೊಬ್ಬರು ಯಾರದೋ ತಪ್ಪಿಗೆ ತಲೆ ದಂಡ ಕೊಟ್ಟಿದ್ದರು. ಜೊತೆಗ ಮಕ್ಕಳದ್ದೂ ಒಂದುವರ್ಷ ವ್ಯರ್ಥವಾಗಿತ್ತು  



Thursday, January 10, 2013

ಸಾಮರಸ್ಯದ ಸ್ವಾರಸ್ಯ








               ಗಣಪತಿ ಪೂಜೆ 






ನಾನು ಪ್ರಾಂಶುಪಾಲನಾಗಿ ಹೊಸ ಕಾಲೇಜಿನಲ್ಲಿ ಅಧಿಕಾರ ವಹಿಸಿಕೊಂಡ ಹೊಸದು. ಅಲ್ಲಿ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ.ವಾಗಿದೆ. ಪ್ರತಿ ತರಗತಿಯಲ್ಲಿ ನಾಲಕ್ಕು ಐದು ಜನ ಇದ್ದರು. ನಾನು ಹೋದ ತಿಂಗಳೊಪ್ಪತ್ತಿನಲ್ಲೆ ಗಣೇಶನ ಹಬ್ಬ ಬಂದಿತು.ಆ ಕಾಲೇಜಿನಲ್ಲೂ ಗಣಪತಿ ಉತ್ಸವದ ಆಚರಣೆಯ ಪದ್ದತಿ ಇತ್ತು. ಅದು ವಿದ್ಯಾರ್ಥಿ ಸಂಘದ ಚಟುವಟಿಕೆಯ ಒಂದು ಭಾಗವಾಗಿತ್ತು   ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ವಿದ್ಯಾರ್ಥಿ ಸಂಘದ ವಂತಿಗೆ ಜತೆಗೆ ವಿದ್ಯಾರ್ಥಿಗಳೂ ಚಂದಾ ಹಾಕಿ ಮೂರು ದಿನದ ಉತ್ಸವ ಮಾಡುವುದು ಎಂದು ತೀರ್ಮಾನವಾಯಿತು. ಹಬ್ಬ ಹತ್ತಿರ  ಬಂದಿತು .ಆದರೆ ವಂತಿಗೆ ಹಣ ಪೂರ್ಣವಾಗಿ ಸಂಗ್ರಹ ವಾಗಿರಲಿಲ್ಲ.  ಹಲವು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಇದು ನಮ್ಮ ಹಬ್ಬವಲ್ಲ ಆದುದರಿಂದ ನಾವು ಏಕೆ ವಂತಿಗೆ ಕೊಡಬೇಕು ಎಂದು ತಕರಾರು ತೆಗೆದಿದ್ದರು. ಅದನ್ನುನೋಡಿ ಇತರ ಕೆಲವರು ಅವರು ಕೊಡದಿದ್ದ ಮೇಲೆ ನಾವೂ ಕೊಡುವುದಿಲ್ಲ ಎಂದು ತಗಾದೆ ಮಾಡಿದ್ದರು.. ಇಗಾಗಿ ಹಣ ಸಂಗ್ರಹ ನೆನಗುದಿಗೆ ಬಿದ್ದಿತ್ತು. ವಿಚಾರಿಸಿದಾಗ ಅನೇಕ ವಿದ್ಯಾರ್ಥಿಗಳು ಅವರು ಕೊಡದಿದ್ದರೆ ಬೇಡ ನಾವೆ ಹೆಚ್ಚುವರಿಯಾಗಿ ಕೊಟ್ಟು ಮೊದಲಿಗಿಂತ ಜೋರಾಗಿ ಆಚರಿಸೋಣ ಎಂಬ ಹುಮ್ಮಸ್ಸಿನಲ್ಲಿದ್ದರು. ಆದರೆ ಈ ವಿಷಯ ನನ್ನ ಗಮನಕ್ಕೆ ಬಂದಾಗ ಈ ರೀತಿಯ ಯೋಚನೆ ಸರಿಯಲ್ಲ ಎನಿಸಿತು. ಇದರಿಂದ ಕಾಲೇಜಿನ ಒಗ್ಗಟ್ಟು ಮಾಯವಾಗಿ ಬಿಕ್ಕಟ್ಟು ಮೂಡುವ ಸಂಭವ ಇದೆ ಎನಿಸಿತು.ಇವರು ಈ ಹಬ್ಬ ತಮ್ಮದು ಎಂದು ಅವರನ್ನು ಬಿಟ್ಟು ತಾವೆ ಚಂದಾಹಾಕಿ ಆಚರಿದರೆ ನಾಳೆ ಅವರೂ  ಸಹಾ ನಮ್ಮಷ್ಟಕ್ಕೆ ನಾವೆ ನಮ್ಮ ಹಬ್ಬವನ್ನು ಆಚರಿಸುವೆವು ಎನ್ನಲು ಅವಕಾಶವಿತ್ತು. ಈ ಸಮಾರಂಭವು ವಿದ್ಯಾರ್ಥಿಗಳೆಲ್ಲರದು ಎಂಬ ಭಾವನೆಗೆ ಬಲವಾದ ಪೆಟ್ಟು ಕೊಡುತಿತ್ತು. ಇದರಿಂದ ಇಲ್ಲದ ಸಮಸ್ಯೆಯನ್ನು ನಾವೆ ಹುಟ್ಟಿಹಾಕಿದ ಹಾಗಾಗುತಿತ್ತು..  ಸರಕಾರಿ ಸಂಸ್ಥೆಯಲ್ಲಿ ಯಾವುದೆ ಒಂದು ಧರ್ಮಕ್ಕೆ ಸೀಮಿತವಾದ ಸಮಾರಂಭ ಆಚರಿಸಬಾರದು. ಹಾಗೆಂದು ಇದ್ದ ಸಂಪ್ರದಾಯ ಬಿಡಬಾರದು. . ನನಗೆ ಆ ತಕ್ಷಣ ಏನೂ ಹೊಳೆಯಲಿಲ್ಲ. ಆ ಸಮಸ್ಯೆಯು ಗುಂಗಿ ಹುಳ ದಂತೆ ರಾತ್ರಿಯೆಲ್ಲಾ ನನ್ನ ತಲೆಯಲ್ಲು ಗುಂಯ್‌ ಗುಡುತಿತ್ತು. ಕೊನೆಗೆ ಒಂದು ತೀರ್ಮಾನಕ್ಕೆ ಬಂದೆ . ಏನೆ ಆಚರಣೆ ಇರಲಿ ಅದು ಸಾರ್ವತ್ರಿಕ ವಾಗಿರಬೇಕು. ಅಂದಾಗ ಮಾತ್ರ ಅದು ಐಕ್ಯತೆಯ ಸಂಕೇತವಾಗುವುದು. ಮಾರನೆಯ ದಿನ ಎಲ್ಲ ಮಕ್ಕಳ ಸಭೆ ಕರೆಯಲಾಯಿತು.ಅಲ್ಲಿ ಈ ಆಚರಣೆಯ ವಿಧಾನ ಕುರಿತ ವಿಷಯ ವಿವರಿಸಲಾಯಿತು.ಇದು ಇಂದು ನಿನ್ನೆಯದಲ್ಲ. ಅನೇಕ ವರ್ಷಗಳಿಂದ ನಡೆದು ಬಂದ ಆಚರಣೆ.ಇದು ಸ್ವಾತಂತ್ರ್ಯ ಪೂರ್ವದಲ್ಲಿ ಲೋಕಮಾನ್ಯ ತಿಲಕರಿಂದ  ಇದು ಪ್ರಾರಂಭವಾಯಿತು. ಜನ ಮನದಲ್ಲಿನ ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸಲು ಇದು ಸಾಧನವಾಯಿತು.ಭಾರತೀಯರ ಐಕ್ಯತೆಯ  ಸಂಕೇತ ವಾಯಿತು. ಆದ್ದರಿಂದ ಇದನ್ನು ಒಂದು ಧರ್ಮಕ್ಕೆ ಸೀಮಿತ ಗೊಳಿಸುವುದು ಸಲ್ಲದು ಎಂದು ಎಲ್ಲರಿಗೂ ಮನದಟ್ಟು ಅಗುವಂತೆ ವಿವರಿಸಿದೆ. ಇನ್ನು ಆಚರಣೆಯ ವಿಧಾನ , ಹೆಚ್ಚು ಹಣ ವೆಚ್ಚಮಾಡಿ ವೈಭವದಿಂದ ಮಾಡಬೇಕೆಂದೇನೂ ಇಲ್ಲ. ಸರಳವಾಗಿ ಆಚರಿಬಹುದು ಎಂದು ಸೂಚಿಸಿದೆ. ಆದರೆ ಬಹುತೇಕ ವಿದ್ಯಾರ್ಥಿಗಳಿಂದ ಆಚರಣೆ ಅದ್ಧೂರಿಯಾಗಿರಬೇಕು ಎಂಬ ಬೇಡಿಕೆ ಬಂತು. ಹಾಗಿದ್ದರೆ ನಾನು ಚಂದಾ ಸಂಗ್ರಹಕ್ಕೆ ಅನುಮತಿಸಿದೆ. ಆದರೆ ಕಡ್ಡಾಯ ಮಾಡ ಬಾರದು. ಯಾರೂ ಧಾರ್ಮಿಕ ಕಾರಣದ ಮೇಲೆ ಚಂದಾ ನಿರಾಕರಿಸಬಾರದು ಆರ್ಥಿಕವಾಗಿ ತೊಂದರೆ ಇದ್ದರೆ  ನಾಮಕಾವಾಸ್ತೆ ಕೈಲಾದುದನ್ನು ಕೊಡಲಿ. ಆದರೆ ಇಲ್ಲ ಎನ್ನಬಾರದು, ಎಂದು ಮನವರಿಕೆ ಮಾಡಲಾಯಿತು.
 ಅಷ್ಟರಲ್ಲಿ ಒಂದು ದನಿ ಬಂದಿತು. ನಾವೂ ಪೂಜೆ ಮಾಡಬಹುದೆ ?  ಕೇಳಿದವನು ದಲಿತವರ್ಗದವ. ನಾನು ಖಂಡಿತ ಎಂದೆ. ನಾವು ಗಣೇಶನ ಪೂಜೆಗೆ ಹೊರಗಿನಿಂದ ಬ್ರಾಹ್ಮಣರನ್ನೋ, ಅಯ್ಯನವರನ್ನು ಕರೆಸುವುದು ಬೇಡ. ವಿಗ್ರಹಕ್ಕೆ ಜನಿವಾರ, ಲಿಂಗಧಾರಣೆಯ ಹಂಗಿಲ್ಲ. ನಮಗೆ ಮಂತ್ರ ಸಹಿತ ಪೂಜೆ ಎಂದೇನೂ ಇಲ್ಲ. ಯಾರಾದರೂ ವಿದ್ಯಾರ್ಥಿ ಶುಚಿಯಾಗಿ ಬಂದು ಪೂಜೆ ಮಾಡಬಹುದು. ಅವನಿಗೆ ಯಾರು ಬೇಕಾದರೂ ಇಬ್ಬರು ಮೂವರು ಸಹಾಯ ಮಾಡಲಿ. ಅದನ್ನು ಮಕ್ಕಳೆ ನಿರ್ಧರಿಸಲಿ,  ಎಂದೆ.  ಸಾಧ್ಯವಾದರೆ ಅಲ್ಪ ಸಂಖ್ಯಾತ ಮತ್ತು ದಲಿತ ಮಕ್ಕಳೂ ಪೂಜಾ ತಂಡದಲ್ಲಿರಲಿ, ಎಂದು ತಿಳಿಸಿದೆ.
 ಆಗಾ ನಮ್ಮ ಸಹ ಶಿಕ್ಷಕರೊಬ್ಬರು , ಅದೆಲ್ಲಾ ಬೇಡ ಸಾರ್‌, ಅಲ್ಪ ಸಂಖ್ಯಾತರು ಮೂರ್ತಿ ಪೂಜೆ ಮಾಡುವುದು ಅವರ ಧರ್ಮದ ಪ್ರಕಾರ ನಿಷಿದ್ಧ,  ಹಾಗೇನಾದರೂ ಮಾಡಿಸಿದರೆ ಅವರ ಜನಾಂಗದಿಂದ ಆಕ್ಷೇಪಣೆ  ಬರಬಹುದು, ಎಂದು ಕೊಕ್ಕೆ ಹಾಕಿದರು.


ಒಂದು ಕ್ಷಣ ಅವರ ಮಾತು ನಿಜ ಎನಿಸಿತು. ಇದು ಇಲ್ಲದ ಸಮಸ್ಯೆಗೆ ಕಾರಣವಾಗಬಹುದು ಎನಿಸಿತು.ಆದರೆ ನನಗೆ ನಮ್ಮ ಊರಲ್ಲಿ ಆಚರಿಸುವ ಮೊಹರಂ ಹಬ್ಬದ ನೆನಪು ಬಂದಿತು. ಆ ಸಮಯದಲ್ಲಿ ಪಂಜಾಗಳಿಗೆ ಬಣ್ಣದ ಬಟ್ಟೆ ತೊಡಿಸಿ ಒಂಬತ್ತು  ದಿನ  ಅಹೋರಾತ್ರಿ ಪೂಜಿಸುವ ಪರಿಪಾಠ ಕಣ್ಣ ಮುಂದೆ  ಬಂದಿತು.ಕೆಲವು ಕಡೆ ಅದನ್ನು ಪೀರಲ ದೇವರು ಎಂದರೆ ಇನ್ನೂ ಕೆಲವು ಕಡೆ ಬಾಬಯ್ಯನ ಹಬ್ಬ ಎನ್ನುವರು.  ಈ ಹಬ್ಬವನ್ನು ಮುಸ್ಲಿಮರ ಜತೆ ಹಿಂದೂಗಳೂ ಆಚರಿಸುವರು. ಕೆಲವು ಗ್ರಾಮಾಂತರ  ಪ್ರದೇಶಗಳಲ್ಲಿ ಹಿಂದೂಗಳ ಸಂಖ್ಯೆಯೆ ಅಧಿಕ.  ಹೆಣ್ಣು ,  ಪಿಂಛಾದಿಂದ  ಮಗುವಿ ಮೈ ಸವರಿದರೆ ರೋಗ  ನಿವಾರಣೆಯಾಗುವುದು ಎಂಬುದು  ನಂಬಿಕೆ. ಐದನೆ ದಿನ ಏಳನೆ ದಿನ ದೇವರನ್ನು ಹೊತ್ತವರು ಮೆರವಣಿಗೆಯಲ್ಲಿ ಊರ ಸಂಚಾರಕ್ಕೆ ಹೊರಡುವುರು.ಆಗ ಅದರ ಪಾದದ ಮೇಲೆ ತುಂಬಿದ ಕೊಡದ ನೀರು ಹಾಕಿ ಅದನ್ನತಮ್ಮ ಮೈಮೇಲೆ ಸಿಡಿಸಿಕೊಳ್ಳುವರು.ಅದರ ಲೋಭಾನದ ಹೊಗೆ ಹಾಕಿಸಿಕೊಂಡರೆ ಅನಿಷ್ಟ ಪರಿಹಾರವಾಗುವುದು ಎಂದು ಬಲವಾಗಿ ನಂಬಿರುವರು. ಅಷ್ಟೆ ಅಲ ಆ ದೇವರುಗಳು ಹಳ್ಳಿಯಲ್ಲಿನ ದುರುಗಮ್ಮ , ಗಾಳೆಮ್ಮನ ಗುಡಿಗೆ ಬಂದು ತಮ್ಮ ತಂಗಿಯನ್ನು ನೋಡಿಕೊಂಡು ಹೋಗಬೇಂಬ ವಾಡಿಕೆ ಇದೆ.  ಊರಲ್ಲೆ ಎರಡು ಕಡೆ ಇಟ್ಟಿದ್ದರೆ , ಇಲ್ಲವೆ ಹತ್ತಿರದಲ್ಲೆ ಇರುವ ಊರಿಗೆ ಹೋಗಿ ತಮ್ಮ ಭಾಯಿಯನ್ನು ಭೇಟಿಯಾಗುವರು.ಅದನ್ನು ಅಲಾಯಿ ಬಿಲಾಯಿ ಕೊಡುವುದು ಎನ್ನುವರು. ಅಲ್ಲದೆ ದೇವರ ಮಂದೆ ತೆಗೆದ ಆಲಾಯಿ ಕುಣಿಯಲ್ಲಿ ಬೆಂಕಿಹಾಕಿ ಸುತ್ತಲೂ ರಾತ್ರಿ ಬಹು ಹೊತ್ತಿನ ತನಕ ಕುಣಿಯುವರು.ಬಹತೇಕ ಅವರೆಲ್ಲ ಹಿಂದುಗಳೆ. ಒಂಬತ್ತನೆ ದಿನ ರಾತ್ರಿ ಖತಲ್‌ ರಾತ್ರಿ. ಅದೂ ಕತ್ತಲ ರಾತ್ರಿ ಎಂದೆ ಪ್ರಸಿದ್ಧಿ. ಅಂದು ರಾತ್ರಿ  ಇಡೀ   ಅವುಗಳ ಓಡಾಟ. ಆಗಿನ  ಜನ ಜಂಗುಳಿ ಹೇಳ ತೀರದು. ಅಂದು ಬೆಂಕಿ ತುಳಿಯುವುದೂ ಇದೆ. ಹತ್ತನೆಯ ದಿನ ದೇವರು ಸಾಯುವ ದಿನ. ಅಂದು ಸಂಜೆ  ಎಲ್ಲರೂ ಮೆರವಣಿಗೆಯಲ್ಲಿ ನೀರಿನ ತಟಾಕಕ್ಕೆ ಹೋಗಿ ದೇವರಬಟ್ಟೆ ತೆಗೆದು  ಪೆಟ್ಟಿಗೆಯಲ್ಲಿಟ್ಟು ಕಂಡು ಶೋಕ ಗೀತೆ ಹಾಡುತ್ತಾ ಮೂಲ ಸ್ಥಾನಕ್ಕೆ ಬರುವರು. ಮತ್ತೆ ಮುಂದಿನ ವರ್ಷದವರೆಗೆ ಅವನ್ನು ಮಸೀದೆಯಲ್ಲಿ ಭದ್ರವಾಗ ನೇತು ಹಾಕುವರು. ಅಲ್ಲಿಗೆ ಮೊಹರಂ ಮುಕ್ತಾಯ. ಈ ಆಚರಣೆ ಅಲ್ಪ ಸ್ವಲ್ಪ ವ್ಯತ್ಯಾಸದೊಂದಿಗೆ ಎಲ್ಲ ಕಡೆ ಇದೆ.ದೇವರಿಗೂ ಮಾನವರಂತೆ ಅಕ್ಕ, ತಮ್ಮ, ಸಂಬಂಧ ಕಲ್ಪಿಸಿ, ಕೊನೆಗೆ ಸಾವೂ  ಇದೆ ಎಂದು ನಂಬುವ ಜನಪದದ ರೀತಿ ಬಹು ವಿಸ್ಮಯಕಾರಿ. ಅದೂ ಎಲ್ಲ ಜಾತಿ ಧರ್ಮದ ಕಟ್ಟು ಮೀರಿದ ಆಚರಣೆಯಾಗಿದೆ.ಈ ವಿಷಯವನ್ನು ನಮ್ಮ ಶಿಕ್ಷಕರ ಸಭೆಯಲ್ಲಿ ಚರ್ಚಿಸಿದೆ. ಎಲ್ಲರೂ ಈ ರೀತಿ ಆರಣೆ ಇರುವುದು ನಿಜ ಎಂದು ಒಪ್ಪಿಕೊಂಡರು. ಆದರೆ ಮೊದಲಿನ ಜೋರು ಇಲ್ಲ ಎಂದರು ಹಾಗಿರುವಾಗ ಗಣಪತಿಯೂ ಒಂದು ಸಾಂಕೇತಿಕ ಉತ್ಸವವಾಗಬೇಕು.ಅದನ್ನು ಯಾವುದೆ ಧರ್ಮಕ್ಕೆ ಸೀಮಿತ ಗೊಳಿಸಬಾರದು ಇದು ಪರಂಪರೆಯ ಒಂದು ಭಾಗ. ಶಾಲೆಯಲ್ಲಿನ ಆಚರಣೆ ಸಮಾಜಕ್ಕೆ ಮಾದರಿಯಾಗಬೇಕು. ಇದು ಜಾತಿ ಮತಗಳ ಸೋಂಕಿನಿಂದ ದೂರವಿರಬೇಕು  ಎಂದು ಅವರಿಗೆಲ್ಲ ಮನದಟ್ಟು ಮಾಡಿದೆ. ಆಕ್ಷೇಪಣೆ ಮಾಡಿದವರೂ  ತಲೆ ದೂಗಿದರು.
ಆ ವರ್ಷ ಗಣೇಶನ ಉತ್ಸವ ಚೆನ್ನಾಗಿಯೆ ನಡೆಯಿತು.ಎಲ್ಲ ಮಕ್ಕಳೂ ಉತ್ಸಾಹದಿಂದ ಭಾಗವಹಿಸಿದರು  ತಳಿರು ತೋರಣ ಕಟ್ಟುವಲ್ಲಿ , ಮಂಟಪ ಅಲಂಕಾರ ಮಾಡುವ  ಕೆಲಸದಲ್ಲಿ, ಬಣ್ಣದ ಕಾಗದ ಕತ್ತರಿಸಿ ಅಂಟಿಸುವಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡಿದರು. ಫುಜೆಯ ದಿನ ಬಂದಿತು. ಅಂದು ಪೂಜೆಗೆ ಒಬ್ಬರ ಬದಲು ಮೂವರು ತಂಡವನ್ನು   ಪೂಜೆ ಮಾಡಲು  ನಿಯೋಜಿತವಾಯಿತು. ಪೂಜಾ ವಿಧಾನವನ್ನು ತಿಳಿದವನಿ ಜತೆ ಅಲ್ಪಸಂಖ್ಯಾತ ಮತ್ತು ದಲಿತ ವಿದ್ಯಾರ್ಥಿಇರುವ ತಂಡ  ಪೂಜೆ ಮಾಡಿತು. ಒಬ್ಬನು ಶ್ಲೋಕ ಹೇಳಿದರೆ ಇನ್ನೊಬ್ಬನು ಹೂ ಏರಿಸಿದ. ಮತ್ತೊಬ್ಬನು ಗಂಟೆಬಾರಿಸಿ  ಮಂಗಳಾರತಿ ಎತ್ತಿದ. ತೀರ್ಥ ಪ್ರಸಾದ ವಿತರಣೆಯೊಂದಿಗೆ ಉತ್ಸವವು ಯಾವುದೆ ಅಡೆ ತಡೆಯಿಲ್ಲದೆ ಸಾಂಗವಾಗಿ ಮುಗಿಯಿತು.
 ಗಣೇಶನ ವಿಸರ್ಜನೆಯನ್ನು  ಐದನೆ ದಿನ  ಏಳನೆ  ದಿನ  ಮಾಡುವುದು  ವಾಡಿಕೆ.ಅದರಿಂದ ಅಷ್ಟೂ ದಿನ ಪಾಠ ಪ್ರವಚನಕ್ಕೆ ತೊಂದರೆ. ಅದರಿಂದ ಅವದಿಯನ್ನು ಮೂರೆ  ದಿನಕ್ಕೆ ಇಳಿಸಲಾಯಿತು. ಪೂಜಾ ಸಮಯದಲ್ಲಿ ಬಿಡುವಿರುವ ತರಗತಿಯಮಕ್ಕಳು ಮಾತ್ರ ಇದ್ದರೆ ಸಾಕೆಂದು ವಿಧಿಸಲಾಯಿತು. ಜೊತೆಗ ವಿರಾಮವಿರುವ ಶಿಕ್ಷಕರು ಕೂಡಾ ಭಾಗವಹಿಸುವರು. ಮೂರನೆಯ ದಿನ ಮಾತ್ರ ಮಧ್ಯಾಹ್ನ ಎಲ್ಲರಿಗೂ ಪಾಠ ಇಲ್ಲ.   ಎಲ್ಲರೂ ಸೇರಿ ಅದ್ಧೂರಿಯಿಂದ ಮೆರವಣಿಗೆಯಲ್ಲಿ ಗಣೇಶನನ್ನು ಹತ್ತಿರದ ಕೆರೆಗೆ ಕೊಂಡೊಯ್ಯಲಾಯಿತು. ಶಾಲೆಯ ಡ್ರಮ್‌ ಸೆಟ್‌, ತತ್ತೂರಿ ಧ್ವನಿಯಜತೆಗೆ ನೂರಾರು ಕಂಠದಿಂದ ಹೊರಟ ಗಣಪತಿ ಬಪ್ಪಾ ಮೋರಯ್ಯಾ, ಮುಂದಿನ ವರ್ಷಕ್ಕೆ ಬಾರಯ್ಯಾ ಎಂಬ ಘೋಷಣೆ ನಿನದಿಸುತಿತ್ತು. ವಿಸರ್ಜನೆಯ ನಂತರ ಚರುಪು ಹಂಚಿ ಕಾಲೇಜಿಗೆ ವಾಪಸ್ಸಾದೆವು
ಸಮಸ್ಯೆ ಯಾಗಬಹುದಿದ್ದ ವಿಷಯ ಸಾಮರಸ್ಯಕ್ಕೆ ಕಾರಣವಾಯಿತು.   . 


Monday, January 7, 2013

ಸಮಸ್ಯೆಯ ಮಡಿಲಲ್ಲೇ ಸಾಮರಸ್ಯ .



ಬಳ್ಳಾರಿ ಜಿಲ್ಲೆಯ ಕಾಲೇಜು ಒಂದರಲ್ಲಿ ಧಾರ್ಮಿಕ  ಆಚರಣೆ ಮತ್ತು ಸಾಮಾಜಿಕ ನೆಡವಳಿಕೆಗಳ ನಡುವಿನ ತಾಕಲಾಟದಿಂದ ಆಗವ ವಿಚಿತ್ರ ಘಟನೆಯೊಂದು ಅನುಭವಕ್ಕೆ ಬಂದಿತು. ಅಲ್ಲಿ ಪ್ರಾಂಶುಪಾಲರು ತುಂಬ ಸಜ್ಜನರು. ಧರ್ಮ ಭೀರು.ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರು.  ಯಾವುದೆ ಬೇಧವಿಲ್ಲದೆ ಎಲ್ಲರೊಂದಿಗೆ ಬೆರೆಯುವರು. ಉಗಾದಿ, ಮಹಾರ್ನವಮಿ ಬಂದರಂತೂ ಎಲ್ಲರ ಸಂಭ್ರಮದಲ್ಲಿ ಭಾಗಿಯಾಗುವರು.  ಹೀಗಾಗಿ ಅವರು ಸಹೋದ್ಯೋಗಿಗಳಲ್ಲಿ ಬಹು ಜನಪ್ರಿಯರಾಗಿದ್ದರು.ಅವರ  ಹಬ್ಬಗಳಲ್ಲಂತೂ ಎಲ್ಲರಿಗೂ ಆಮಂತ್ರಣ. ಅದರಲ್ಲೂ ರಂಜಾನ್‌ ತಿಂಗಳಲ್ಲಿ ಅವರದು ರೋಜಾ . ಕಟ್ಟುಪವಾಸ. ಸಂಜೆ ಊಟ. ಉಪನ್ಯಾಸಕರೆಲ್ಲರಿಗೂ ಆಮಂತ್ರಣ. ಚಿತ್ರಮಯವಾಗಿರುವ ಗೇಣೆತ್ತರ ಲೋಟಗಳಲ್ಲಿ ಸುರುಕುಂಬ  ಸುರಿದಿದ್ದೇ ಸುರಿದದ್ದು. ಮೊದಲು ನಮಗೆ ಅದೇನೋ ಎಂದು ಅನುಮಾನ ಕಾಡಿದರೂ ಅದು ನಮ್ಮ ಶ್ಯಾವಿಗೆ ಪಾಯಸದ ಇನ್ನೊಂದು ರೂಪ ಎಂದು ರುಚಿ ನೋಡಿದ ಮೇಲೆ ಗೊತ್ತಾಯಿತು. ಇನ್ನು ಅದರ ಜತೆ ಚುಂಗೈ. ಅದು ಒಂದು ರೀತಿಯ ತುಪ್ಪದಲ್ಲಿ ಮಾಡಿದ ಡಿಜೈನ್‌ ಚಪಾತಿ.ಅದರ ಮೇಲೆ ಬೀಸಿದ ಸಕ್ಕರೆ ಮತ್ತು ತುಪ್ಪ ಹಾಕಿಕೊಂಡು ತಿನ್ನಬೇಕು.ನಮ್ಮ ಮನೆಯಲ್ಲಿ ಬಂದು ಅದರ ವರ್ಣನೆ ಮಾಡಿದ ಮೇಲೆ ನಮ್ಮಮನೆಯಾಕೆಗೂ ಕುತೂಹಲ ಕಾಡಿತು.ಅವಳೆ ಪ್ರಿನ್ಸಿಪಾಲರ ಮನೆಗೆ ಹೋಗಿ ವಿಚಾರಿಸಿದಳು.ಪ್ರಿನ್ಸಿಪಾಲರ ಹೆಂಡತಿಗೆ ಸಂತೋಷ ವಾಯಿತು.   ನಮ್ಮ ಚಪಾತಿಯಂತೆಯೆ ಗೋದಿ ಹಿಟ್ಟಿನಿಂದ ಮಾಡುವುದು. ಆದರೆ ಅದನ್ನು ಬಳಪದ ಕಲ್ಲಿನ ವಿವಿಧ ವಿನ್ಯಾಸ ಹೊಂದಿದ ಹಂಚಿನ ಮೇಲೆ ಮಾಡಿರುವರು. ಹಿಟ್ಟನ್ನು ಅದರ ಮೇಲೆ ಲಟ್ಟಿಸಿದಾಗ ಹಾಳೆಯ ಮೇಲೆ ಚಿತ್ತಾರ ಮೂಡುವುದು.  ಎಂದು ಪಾಕ ವಿಧಾನವನ್ನು ಹೇಳಿ ಕೊಟ್ಟರು . ಅಷ್ಟೆ ಅಲ್ಲ ಕೆಲವು ಸಮಯದ ನಂತರ ಚುಂಗೈ ಮಣೆಯನ್ನು ಕಾಣಿಕೆಯಾಗೂ ನೀಡಿದರು
ಅವರ ಧಾರ್ಮಿಕ ನಿಷ್ಟೆ ಮಾತ್ರ ಮೆಚ್ಚುವಂತಹದು.ಆಚರಣೆಯಲ್ಲಿ ತುಸುವೂ  ವಿನಾಯತಿ ಇಲ್ಲ. ತಿನ್ನುವ ಮಾತು ಹಾಗಿರಲಿ , ನೀರನ್ನೂ ಕುಡಿಯುವುದಿಲ್ಲ . ಉಗಳನ್ನೂ ನುಂಗದ ನಿಯಮ ಪರತೆ ಅವರದು. ಆದರೆ ಕಾಲೇಜಿನ ಕೆಲಸದಲ್ಲಿ ಯಾವುದೆ ಹೊಂದಾಣಿಕೆ ಮಾಡಿಕೊಳ್ಳದೆ ನಗು ನಗುತ್ತಾ ಇರುತಿದ್ದರು.ಆದರೆ ಯಾವುದೆ ಸಂತೋಷ ಕೂಟವಾದರೂ ಬಂದು ಕೂಡುತಿದ್ದರೆ ಹೊರತು ಏನನ್ನೂ ತಿನ್ನುತ್ತಿರಲಿಲ್ಲ.
ನಮ್ಮ ಕಾಲೇಜಿನಲ್ಲಿ  ಗಣಪತಿ ಉತ್ಸವವನ್ನು ಬಹಳ ವಿಜೃಂಭಣೆಯಿಂದ ಪ್ರತಿವರ್ಷವೂ ಆಚರಿಸುವ ಪದ್ದತಿ .ಮಕ್ಕಳೆ ಚಂದಾಹಾಕಿ ಪೂಜೆ ಮಾಡಿ ಪ್ರಸಾದ ವಿತರಣೆಯಾಗುತಿತ್ತು. ಮೂರುದಿನದ ನಂತರ ಗಣಪತಿ ವಿಸರ್ಜನೆ.ಎಲ್ಲರಿಗೂ ಉಪಹಾರ.
 ಪ್ರಿನ್ಸಿಪಾಲರು ತಾವು ರೋಜಾ  ಇರುವುದರಿಂದ ಏನನ್ನೂ ಸೇವಿಸುವುದಿಲ್ಲ. ಸೂರ್ಯ ಮುಳಗುವ ತನಕ ಬಾಯಲ್ಲಿ ನೀರನ್ನೂ ಹಾಕದೆ ಇರುವುದು ತಮ್ಮ ವ್ರತ ಎಂದು ಮೊದಲೆ ತಿಳಿಸಿದ್ದರು. ಆದರೆ ನೀವೆಲ್ಲ ಏನೆಲ್ಲ ಮಾಡ ಬೇಕೋ ಅದನ್ನು  ಎಲ್ಲವನ್ನೂ ಸಂಪ್ರದಾಯ ಬದ್ದ ವಾಗಿ ಮಾಡಿ ನಾನು ಮೊದಲಿನಿಂದ ಕೊನೆಯ ತನಕ  ಇದ್ದು ಭಾಗವಹಿಸುವೆ ಎಂದು ಆಶ್ವಾಸನೆ ನೀಡಿದರು. ಆದರೆ ಊಟ ತಂಡಿ ಸೇವಿಸುವುದಿಲ್ಲ . ಅಷ್ಟೆ ಏಕೆ ಕಾಫಿ ಟೀ , ನೀರು ಸಹಾ ಕುಡಿಯುವುದಿಲ್ಲ , ಕಾರಣ ರೋಜಾದಲ್ಲಿರುವೆ ಎಂದರ, ನಾವು ಖಷಿಯಿಂದ ಒಪ್ಪಿದೆವು. ಅವರು ಅನುಮತಿಕೊಟ್ಟಿದ್ದು ಮಾತ್ರವಲ್ಲ ಸ್ವತಃ ಭಾಗವಹಿಸುತ್ತಿರುವುದು ನಮಗೆ ಖುಷಿ ತಂದಿತು ನಾವು ಅವರಿಗೆ ಪ್ರಸಾದವೆಂದು ಕಾಯಿ ಹಣ್ಣು ನೀಡುವುದಾಗಿಯೂ ಅವರು ಅದನ್ನು ಸ್ವೀಕರಿಸ ಬೇಕೆಂದು ಕೋರಿದೆವು. ಅವರು ಪ್ರಸಾದವನ್ನುಸಂತೋಷವಾಗಿ ಮನೆಗೆ ತೆಗೆದುಕೊಂಡು ಹೋಗಿ ರಾತ್ರಿ ಉಪವಾಸ ಮುಗಿದ ಮೇಲೆ ಖಂಡಿತವಾಗಿ ಸಂಸಾರ ಸಮೇತ  ಹಣ್ಣುಗಳನ್ನು ತಿನ್ನುವುದಾಗಿ ತಿಳಿಸಿದರು. ನಮಗೆಲ್ಲರಿಗೂ ಬಹಳ ಸಂತೋಷವಾಯಿತು.
 ಗಣೇಶನ ಚತುರ್ಥಿಯ ದಿನ ಬೆಳಗ್ಗೆ ಒಂಬತ್ತಕ್ಕೆ ಹಾಜರಾದ್ದರು.ಮಕ್ಕಳು , ಸಿಬ್ಬಂದಿ ಸೇರಿದರು. ಅಂದು ಹುಡುಗಿಯರ ಸಡಗರ ಹೇಳ ತೀರದು ಎಲ್ಲರೂ ಹೊಸ ಬಟ್ಟೆ , ರೆಷ್ಮೆ ಸೀರೆ ಧರಿಸಿ ಬಂದ ಹುಡುಗಿಯರಂತೂ ಯಾರೂ ಹೊರಗಿನ ಮಹಿಳೆಯರು  ಬಂದಿರುವರು  ಎಂದು ನಾವು  ತಿರುಗಿ ನೋಡುವಷ್ಟು ಅಲಂಕಾರ ಮಾಡಿಕೊಂಡು ಬಂದಿದ್ದರು.. ಪೂಜೆ ಪ್ರಾರಂಭವಾಯಿತು.ಎಲ್ಲರೂ ಹೂವು ಮಂತ್ರಾಕ್ಷತೆ ಹಾಕಿದರು.ನಂತರ ಮಂಗಳಾರತಿ  ಬಂದಿತು.ಪೂಜೆ ಮಾಡಿದ ಹುಡುಗನಿಗೆ ಖುಷಿಯೋ ಖುಷಿ.ಮಂಗಳಾರತಿ ತಟ್ಟೆಯಲ್ಲಿ ದಕ್ಷಿಣೆ ಅವನದು. ನಮ್ಮ ಪ್ರಾಂಶುಪಾಲರೂ ಐದು ರೂಪಾಯಿ  ದಕ್ಷಿಣೆ ಹಾಕಿದರು. ನಂತರ ಅವನು ಎಲ್ಲರಿಗೂ ತೀರ್ಥ ಕೊಡಲು ಬಂದ. ಮೊದಲ ಗೌರವ ಕಾಲೇಜು ಮುಖ್ಯಸ್ಥರದು. ಅವನು ಬಂದ ಕೂಡಲೆ ಅವರು ಎಲ್ಲರಂತೆ ಕೈ ಒಡ್ಡಿದರು. ಅವನು ತೀರ್ಥ ನೀಡಿದ. ಅವರು ಭಕ್ತಿಯಿಂದ ಎರಡೂ ಕಣ್ಣಿಗೆ ಒತ್ತಿಕೊಂಡು ಕುಡಿದರು. ಅವನು ನಮಗೆ ಒಬ್ಬಿಬ್ಬರಿಗೆ ತೀರ್ಥ ಕೊಟ್ಟಿಬಹುದು. ಪ್ರಾಂಶುಪಾಲರು ಧಡಕ್ಕನೆ ಎದ್ದು ಬಾಗಿಲ ಕಡೆ ಧಾವಿಸಿದರು ಅವರು ಬೆಚ್ಚಿ ಬಿದ್ದು ಹೊರಗೆ ಧಾವಿಸಿದ್ದು ಕಂಡು ನಮಗೆ ಗಾಬರಿಯಾಯಿತು.   ಹೊರಗೆ ಬಂದು ನೋಡಿದರೆ ಅವರು ವಾಂತಿ ಮಾಡಿಕೊಳ್ಳುತಿದ್ದಾರೆ. ಥೂ ಥೂ ಎಂದು ಒಂದೆ ಸಮನೆ ಉಗುಳುತಿದ್ದಾರೆ.ನಮಗೆ ಏನೂ ತೋಚಲಿಲ್ಲ. ಬಹುಶಃ ತೀರ್ಥದ ದೋಷದಿಂದ ಅವರಿಗೆ ಹೀಗೆ ವಾಂತಿಯಾಗಿದೆ ಎಂದು ಕೊಂಡೆವು.
ವೈದ್ಯರ ಹತ್ತಿರ ಹೋಗುವುದು ಒಳ್ಳೆಯದು ಇಲ್ಲವಾದರೆ ಅವರನ್ನೆ ಕರಸಿದರೂ ಸರಿ, ಎಂದು ಜವಾನನ್ನು ಕೂಗಿದೆವು. ಆದರೆ ಅವರು ಕೈ ಸನ್ನೆ ಬಾಯಿ ಸನ್ನೆ ಮಾಡಿ ಬೇಡ ,ಬೇಡ  ಎಂದು ಸೂಚಿಸಿದರು. ನಾವು ಸುತ್ತ ಮುತ್ತ ನೋಡಿದೆವು. ಹತ್ತಾರು ಜನ ತೀರ್ಥ ಕುಡಿದಿದ್ದರೂ ಯಾರಿಗೂ  ಏನೂ ಆಗಿರಲಿಲ್ಲ. ಎಲ್ಲರೂ ಧನ್ಯತಾ  ಭಾವದಿಂದ ನೆಮ್ಮದಿಯಾಗಿದ್ದರು. . ಆದ್ದರಿಂದ ಅಂತಹ ಅಪಾಯವಿಲ್ಲ ಎನಿಸಿತು. ಹತ್ತು ನಿಮಿಷದ ತರುವಾಯ ಸಾಹೇಬರು  ಸಹಜ ಸ್ಥಿತಿಗೆ ಬಂದರು.  ನಂತರ ತಿಳಿಯಿತು. ಅವರು ರೊಜಾದಲ್ಲಿದ್ದಾರೆ. ಏನನ್ನೂ ಸೇವಿಸಬಾರದು.  ಆದರೆ ಅದನ್ನು ಮರೆತು ಪೂಜೆಯನಂತರ ತೀರ್ಥವನ್ನು ಕುಡಿದಿದ್ದಾರೆ.  ನಂತರ ನೆನಪಾಗಿದೆ. ತಾವು ರಂಜಾನ್‌ ಉಪವಾಸ ವ್ರತದಲ್ಲಿರುವುದು.ಕಟ್ಟಾಧಾರ್ಮಿಕರಾದ ಅವರು ಸಹಜವಾಗಿ ಗಾಬರಿಯಾಗಿರುವರು. ಅದಕ್ಕೆ ತಕ್ಷಣ ಸೇವಿಸಿದ್ದನ್ನೆಲ್ಲ ಹೊರ ಹಾಕಲು ಪ್ರಯತ್ನಿಸಿದ್ದಾರೆ. ಅದು ನಮಗೆ ಗಾಬರಿ ಉಂಟು ಮಾಡಿದೆ. ಅವರ ಸಂಪ್ರದಾಯದ ಪ್ರಕಾರ ಉಗಳನ್ನೂ ನುಂಗಬಾರದು. ಆದರೆ ಅವರು ಒಂದು ಚಮಚ ನೀರನ್ನೆ ಕುಡಿದಿರುವುರು.  ಅವರು ಅಂದು ಸಂಜೆಯ ತನಕ ಉಗುಳುವುದನ್ನು ಮುಂದುವರಿಸಿದ್ದರು.  ನಮಗೆ ಅವರ ಧಾರ್ಮಿಕ ಭಾವನೆ ಮತ್ತು ಆಚರಣೆಯಲ್ಲಿನ  ಶ್ರದ್ಧೆ ಕಂಡು ಸೋಜಿಗ ವಾಯಿತು. ಅವರ ನಿಷ್ಠೆಗೆ ಸಲಾಂ   ಎಂದೆವು ಎಂದೆವು.ಸಮಾಜದಲ್ಲಿ ಎಲ್ಲ ಆಚರಣೆಗಳನ್ನೂ ಡಂಭಾಚಾರಕ್ಕೆ , ತೋರಿಕೆಗೆ ಮಾಡುವ ಜನರೆ ಹೆಚ್ಚು. ಮೂರ್ತಿ ಪೂಜೆ ಅವರ ನಂಬಿಕೆಗೆ ವಿರುದ್ಧವಾದರೂ ತಾವೂ ಭಾಗವಹಿಸಿ ತಮ್ಮ ಸಾಮಾಜಿಕ ಹೊಣೆಯನ್ನು ನಿರ್ವಹಿಸಿರುವುರ ಜತೆಗೆ ತಮ್ಮ ವೈಯುಕ್ತಿಕ ಆಚರಣೆಯನ್ನೂ ಪಾಲಸಿರುವರು.  ಈ ಅವರ ಪರಧರ್ಮ ಸಹಿಷ್ಣುತೆ ನಮ್ಮೆಲ್ಲರ ಮೆಚ್ಚಿಗೆಗೆ ಪಾತ್ರ ವಾಯಿತು.ಅದೆ ತಾನೆ ನಮ್ಮ ಭಾರತದ ಐಕ್ಯತೆಯನ್ನು, ಜ್ಯಾತ್ಯಾತೀತೆಯನ್ನು ಕಾಪಾಡುತ್ತಿರುವ ಮಂತ್ರ.

Friday, January 4, 2013

ಪಾಸು ಇಲ್ಲಾಂದ್ರೆ ಹಣ ವಾಪಸು


                                                         
ನಾಗಪ್ಪ ಪದವಿ ಪೂರ್ವ ಕಾಲೇಜು ಉಪನ್ಯಾಸಕ. ತಮ್ಮವಂಶದಲ್ಲೇ ಮೊದಲ ತಲೆ ಮಾರಿನ ಸ್ನಾತಕೋತ್ತರ ಪದವಿಧರ ಎಂಬ ಹಿರಿಮೆ ಅವನದು.ಅವರ ಊರಿನಲ್ಲೆ ಪ್ರಥಮ ಪದವಿಧರ ಎಂಬ ಕೋಡು . ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕ. ನಾಯಿ ಕೊಡೆಯಂತೆ ಕಾಲೇಜುಗಳೇನೋ ತಲೆ ಎತ್ತಿದವು. ಎಲ್ಲ ಕಾಲೇಜುಗಳಿ ಯೋಜನಾ  ವೆಚ್ಚದ ಅಡಿಯಲ್ಲಿ ಖಾಯಂ ಸಿಬ್ಬಂದಿ ನೇಮಕದಲ್ಲಿ ಸರಕಾರಕ್ಕೆ ಇಲ್ಲದ ಇಬ್ಬಂದಿ.  ನೆಮಕಾತಿಯುಲೋಕಸೇವಾಆಯೋಗದ ಕೆಲಸ.ಅದಾಗಲು ಕನಿಷ್ಟ ೪-೫ ಷರ್ಷ ಬೇಕು.  ಹಾಗೆ ಬಿಡುವಹಾಗಿಲ್ಲ. ಸಾವಿರಾರು ಮಕ್ಕಳ ಭವಿಷ್ಯದ ಪ್ರಶ್ನೆ.ಹುದ್ದೆ ಖಾಲಿಇದ್ದರೆ ಇಲ್ಲದ ಗೊಂದಲ.ಹರತಾಳ, ಚಳುವಳಿ, ಬಂದ್‌ ಒಂದೆ ಎರಡೆ.ಸ್ಥಳೀಯ ರಾಜಕೀಯ ನಾಯಕರಿಗೂ ಮುಜುಗರ.ಸರಿ ಸಂತೆ ಹೊತ್ತಿಗೆ ಮೂರು ಮೊಳ ನೇಯುವಂತೆರ ಯಾರೋ ಒಬ್ಬ ಅಧಿಕಾರಿಗೆ ಪರಿಹಾರ ಹೊಳೆಯಿತು.. ಲಭ್ಯವಿರುವ ವಿದ್ಯಾರ್ಹತೆ ಇರುವವರನ್ನು ಗುತ್ತಿಗೆಯ ಆಧಾರದ ಮೇಲೆ ನೇಮಿಸಿಕೊಳ್ಳುವುದು. ಅವರಿಗೆ  ಆ ಹುದ್ದೆಯ ಮೂಲ ವೇತನಕ್ಕಿಂತ ತುಸು ಕಡಿಮೆ  ವೇತನ ನಿಗದಿ ಮಾಡಿ ಖಾಯಂ ನೌಕರನಿಗೆ ಇರುವ ಯಾವುದೆ ಇತರೆ ವೇತನ ಮತ್ತು ಸೇವಾ ಸೌಲಭ್ಯ ಇಲ್ಲ.ಕೆಲಸ ಮಾತ್ರ  ಅದೇ.ಈ ಯೋಜನೆಯಿಂದ ರಾಜಕಾರಣಿಗಳಿಗೂ ಅನುಕೂಲ.ತಮಗೆ ಬೇಕಾದವರನ್ನು ಕೆಲಸಕ್ಕೆ ಸೇರಿಸಬಹುದು. ಕನಿಷ್ಟ ಅರ್ಹತೆ ಇದ್ದರೆ ಸಾಕು. ಮೀಸಲಾತಿ ಮಾತು ಇಲ್ಲ.ಅರ್ಹತಾ ಪರಿಕ್ಷೆ ಹೋಗಲಿ ಮೌಖಿಕ ಪರೀಕ್ಷೆಯೂ ಇಲ್ಲ. ನಿರುದ್ಯೋಗಿ ಯುವಕರಿಗೂ ಇದು ಒಂದು ವರ ಎನಿಸಿತು. ಏನೋ ಸಂಬಳವಂತೂ ಬರುತ್ತದೆ. ಹುದ್ದೆಯ ಹೆಸರು ದೊಡ್ಡದು.ಸಾಮಾಜಿಕ ಪ್ರತಿಷ್ಠೆಯೂ ಸಿಗುವುದು. ಹೀಗಾಗಿ ಅವರಿವರನ್ನು ಹಿಡಿದು ಗಾಳಿ ಬಂದಾಗ ತೂರಿಕೊಂಡವರು ಅನೇಕ ಜನ. ಸರ್ಕಾರಕ್ಕೂ ಹಣ ಉಳಿತಾಯ.ಲೋಕ ಸೇವಾ ಅಯೋಗ ಮೂಲಕ ನೇಮಕ ವಾಗಲೂ ಹಲವು ವರ್ಷಗಳೇ ಬೇಕು. ತಕ್ಕ  ಮಟ್ಟಿಗೆ ಸರಕಾರಕ್ಕೆ ಉಳಿತಾಯ.. ಈ ಯೋಜನೆಯ ಅಡಿಯಲ್ಲಿ ವಿದ್ಯಾ ಇಲಾಖೆಯಲ್ಲಿ ಅನೇಕ ನೇಮಕವಾದವು.ಅದರಲ್ಲೂ  ಪದವಿ ಪೂರ್ವ ಇಲಾಖೆಯಲ್ಲಿ ಸಾವಿರಾರು ಜನ ಪತ್ರಾಂಕಿತ ಅಧಿಕಾರಿಗಳು ನೇಮಕಗೊಂಡರು. ಮೊದ ಮೊದಲು ಅವರಿಗೆ ಖುಷಿಯೋ ಖುಷಿ.ತಾವೂ ಗೆಜಟೆಡ್ ಅಧಿಕಾರಿಗಳು ಎಂದು. ಅದೂ ತಹಸಿಲ್ದಾರರ ಗ್ರೇಡು. ನೇಮಕಾತಿ ಹೇಗಾದರೇನೂ ಹೆಸರಂತೂ ಇದೆಯಲ್ಲ   . ಆಗ ಇನ್ನೂ  ಜೆರಾಕ್ಸ ಬಾರದ ಕಾಲ. ಏನೇ ಅರ್ಜಿ  ಹಾಕ ಬೇಕೆಂದರೂ ಮುದ್ರಿತ  ಖಾಲಿ ನಮೂನೆಯನ್ನು ಕೊಂಡು ಅದರನ್ನು ತುಂಬಿ  ಯಾರಾದರೂ  ಪತ್ರಾಂಕಿತ ಅಧಿಕಾರಿ ಯಿಂದ ಸಹಿ  ಮಾಡಿಸಿ ದೃಢಿಕರಣ  ಮಾಡಿದ ಪ್ರತಿಯನ್ನು ಲಗತ್ತಿಸ ಬೇಕು.  ಎಪ್ಪತ್ತರ ದಶಕದಲ್ಲಿ  ತಾಲುಕಿನಲ್ಲೆ ಪತ್ರಾಂಕಿತ ಅಧಿಕಾರಿ ಎಂದರೆ ತಹಸಿಲ್ದಾರರು, ಇಂಜನಿಯರ್‌ ಮತ್ತು ಸರ್ಕಾರಿ ಡಾಕ್ಟರು. ಅವರನ್ನು ಕಾಣುವುದು  ಕಷ್ಟದ ಕೆಲಸ. ತಹಸಿಲ್ದಾರರ ಕಚೆರಿಯಲ್ಲಿ  ಯಾರೋ ಜವಾನನ ಕೈಗೆ ಕೊಟ್ಟು ಅವರ ಕೈ ಬೆಚ್ಚಗೆ  ಮಾಡಿ ಸಾಹೇಬರ . ಸಹಿ ಪಡೆಯ ಬೇಕೆಂದರೆ ಕುರಿ ಕೋಣ ಬೀಳುತ್ತಿತ್ತು. ಆ ಜವಾನರೋ ದಿವಾನನಂತೆ ಡೌಲು ಮಾಡುತ್ತಿದ್ದರು. ಇನ್ನು ಡಾಕ್ಟರ ವಿಷಯ ಹೇಳುವ ಹಾಗೆ ಇಲ್ಲ. ಸಾಲು ಗಟ್ಟಿ ನಿಂತ ರೋಗಿಗಳನ್ನು ನೋಡಿ ಅವರಿಗೆ ಔಷಧಿ ಚೀಟಿ ಬರೆಯಲೆ ಬಿಡುವಿಲ್ಲ. ಇನ್ನು ಶಾಲಾ ಕಾಲೇಜು ಹುಡುಗರ  ದಾಖಲೆ ಪರಿಶೀಲಿಸಿ ಸಹಿ ಮಾಡಲು ಅವರಿಗೆ ವ್ಯವಧಾನವೆ ಇರುತ್ತಿರಲಿಲ್ಲ.ಆದ್ದರಿಂದ ನಕಲು ದಾಖಲೆಗಳನ್ನು ದೃಢೀಕರಿಸುವುದು ಪುನಃ ಪರೀಕ್ಷೆ ಬರೆದಷ್ಟೆ ಕಷ್ಟವಾಗುತ್ತಿತ್ತು. ಆ ಸಮಯದಲ್ಲಿ  ಕಾಲೇಜಿಗೆ ಅರೆಂಟು ಜನ ಗೆಜೆಟೆಡ್ ಅಧಿಕಾರಿಗಳು ಬಂದಾಗ ದೃಢೀಕರಣದ ಸಮಸ್ಯೆ  ಮಟಾ ಮಾಯ ವಾಯಿತು. ಉತ್ಸಾಹಿ ಉಪನ್ಯಾಸಕರು ಕೆಲವರು ರಬ್ಬರ್ ಸಿಕ್ಕೆ ಮಾಡಿಸಿ ಕೊಂಡು ನಮಸ್ಕಾರ ಹೊಢೆದು  ಮುಂದೆ ಚಾಚಿದವಕ್ಕೆಲ್ಲ ಹಸಿರು ಇಂಕಿನ ಸಹಿ ಮಾಡಿ ಸಿಕ್ಕೆ ಹೊಡೆದು ಬೀಗುತ್ತಿದ್ದರು.ಅವರಲ್ಲೆ ಕೆಲವರು ಮುಂದಾಲೋಚನೆ ಮಾಡಿ ಪ್ರತಿ ಸಹಿಗೂ ಶಕ್ತ್ಯಾನುಸಾರ ಕಾಣಿಕೆ ಪಡೆದವರೂ ಇದ್ದರು. ಅವರಂತೂ ಸೀಲು ಪ್ಯಾಡನ್ನು ತಮ್ಮೊಂದಿಗೆ ಸದಾ ಇಟ್ಟುಕೊಂಡಿರುತ್ತಿದ್ದರು.  ಆ ಮಟ್ಟಕ್ಕೆ ಏರಿದವರು ವಿರಳ.
ನಾಗಪ್ಪನೂ ಗುತ್ತಿಗೆ ಉಪನ್ಯಾಸಕ.ಒಳ್ಳೆಯ ಮಾತುಗಾರ. ಜನ ಬೇಕು. ಅವನು ಸದಾ ಹುಡುಗರ ನಡುವೆ ಇರುತ್ತಿದ್ದ. ಯಾರೆ ಹೋದರೂ ನಗುತ್ತ ಮಾತನಾಡಿಸುತ್ತಿದ್ದ. ಬಹು ಬೇಗ ಜನಪ್ರಿಯನಾದ
ಗುತ್ತಿಗೆ ಉಪನ್ಯಾಸಕರು ಮೊದಲ ವರ್ಷ ಸಂತೋಷವಾಗಿಯೆ ಇದ್ದರು. ವರ್ಷ ಕಳೆದ ಮೇಲೂ ಸಂಬಳ ಇದ್ದಷ್ಟೆ ಇದ್ದಾಗ ಮನಸ್ಸಿಗೆ ಕಿರಿಕಿರಿಯಾಯಿತುಖಾಯಂ ನೌಕರರದು ಮತ್ತು .ಅವರದು ಒಂದೇ  ರೀತಿಯ ಕೆಲಸ.ವೇತನ ಮಾತ್ರ ವ್ಯತ್ಯಾಸ. ಅಲ್ಲದೆ ನೌಕರಿ ತಾತ್ಕಾಲಿಕ ಎಂಬ ಆತಂಕ.ಅನಿಶ್ಚತತೆಯ ಕತ್ತಿ  ಸದಾ ತಲೆಯ ಮೇಲೆ. ಅದರೆ  ಇದ್ದ ಅವಕಾಶದ ಉಪಯೋಗ ಪಡೆದವರೂ ಇದ್ದರು. ಅದರಲ್ಲೂ ಗ್ರಾಮಾಂತರ ಪ್ರದೇಶದಿಂದ ಬಂದವರೂ ಮತ್ತು ಮುಂದುವರಿಯದ ಸಮಾಜದಿಂದ ಬಂದವರು ತಮಗೆ ದೊರೆತ ಅವಕಾಶ ಎಂದು ಚೆನ್ನಾಗಿ ಕೆಲಸ ಮಾಡುತ್ತಿದ್ದರು ಅವರ ಜನರಿಗೂ ಸಮಾಧಾನ. ಹುಡುಗ ವಿದ್ಯಾವಂತ.ನಮ್ಮ ಜಾತಿಯಲ್ಲೇ ಇಷ್ಟು ಓದಿದವರಿಲ್ಲ.ಮೇಲಾಗಿ ಸರ್ಕಾರಿ ನೌಕರಿ.ಮದುವೆಯ ಮಾರುಕಟ್ಟೆಯಲ್ಲಿ ಅವರಿಗೆ ಬಲು ಬೇಡಿಕೆ. ನಾಗಪ್ಪನಿಗೂ ಒಂದು ಉತ್ತಮ ಸಂಬಂದ ಕೂಡಿ ಬಂದಿತು.ಅವರ ಮಾವ ಬಹಳ ಶ್ರೀಮಂತ. ಅಲ್ಲದೆ ಮಾಜಿ ಶಾಸಕ.ಅನಕ್ಷರಸ್ಥ. ಕಟ್ಟಾ ಮೊಟಾ ಅಸಾಮಿ.ಮೊದಲು ಶಾಸಕರ ಅಂಗರಕ್ಷಕ ಸದಾ ಅವರ ಜತೆ. ಶಾಸಕರದು ಒಂದು ಹಳೆಯ ಜೀಪು. ಹಳ್ಳಿಗಾಡಿನ ರಸ್ತೆಯಲ್ಲಿ ಅದು ಅಗಾಗ ಮುಷ್ಕರ ಹೂಡುತ್ತಿತ್ತು ಅಂಗ ರಕ್ಷಕ ಅಗ ಕೆಲಸಕ್ಕೆ ಬರುತ್ತಿದ್ದ. ಒಬ್ಬನೆ ಅದನ್ನು ದೂಡಬಲ್ಲಷ್ಟು  ಬಲಶಾಲಿ. ಹೀಗಾಗಿ ಅವರ ಬಲ ಗೈ ಬಂಟನಾದ. ಅವನನ್ನು ತಾಲೂಕು ಅಭಿವೃದ್ಧಿ ಮಂಡಳಿ ಸದಸ್ಯನನ್ನಾಗಿ ಮಾಡಿದರು. ನಂತರ  ಚುನಾವಣೆಯಲ್ಲಿ ಅವರಿಗೆ ಪಕ್ಷದ ಟಿಕೆಟ್ ಸಿಗಲಿಲ್ಲ. ಅವರ ಬದ್ಧ ವೈರಿಗೆ ಪಕ್ಷ ಚುನಾವಣೆ ಟಿಕೆಟ್‌ ನೀಡಿತು.ಅವರು ಪಕ್ಷದ ನಿಷ್ಠಾವಂತರು. ಪಕ್ಷ ಬಿಡುವಹಾಗಿಲ್ಲ ಆದರೆ ಜಿದ್ದಿನ ಪ್ರಶ್ನೆ. ಮರ್ಯಾದೆ ಉಳಿಸಿಕೊಳ್ಳಲೇ ಬೇಕು. ಆಗ ಕಣ್ಣಿಗೆ ಬಿದ್ದವನು ತಮ್ಮ ಬಲಗೈ ಬಂಟನಾದ ಪಟ್ಟದ ಶಿಷ್ಯ.ಸರಿ ಅವನನ್ನು ಪಕ್ಷೇತರನನ್ನಾಗಿ ಕಣ ಕ್ಕಿಳಿಸಿದರು.ಅವನು ಗೆದ್ದೂ ಬಿಟ್ಟ. ಅವರು ಹೇಳಿದಂತೆ ಕೇಳಿಕೊಂಡು ಹೆಚ್ಚಿನ ನೀರಿಗೆ ಇಳಿಯದೆ ಹೇಳಿದಲ್ಲಿ ಹೆಬ್ಬಟ್ಟು ಒತ್ತಿ ಹಾಯಾಗಿ ಕಾಲ ಕಳೆದ. ಮುಂದಿನ ಚುನಾವಣೆಗೆ ಅವರಿಗೆ ಟಿಕೆಟ್ ದೊರೆಯಿತು . ಇವನು ಮಾಜಿ ಶಾಸಕನಾದ .ಅವನಿಗೆ ಒಂದೆ ಹಳ ಹಳಿ.  ತನಗೆ ಅಕ್ಷರಜ್ಞಾನ ಇಲ್ಲ. ಇದ್ದರೆ ಆ ಮಾತೆ  ಬೇರೆಯಾಗುತಿತ್ತು..  ಮಾಜಿಯಾದರೂ ಸಾಕಷ್ಟು ಹಣ ಮಾಡಿದ್ದರು. ಅವರಿಗೆ ಇದ್ದ ಆರು ಹೆಣ್ಣು ಮಕ್ಕಳನ್ನೂ ವಿದ್ಯಾವಂತರಿಗೆ ಕೊಟ್ಟು ಮದುವೆ  ಮಾಡಿದರು. ಕೊನೆಯವಳು ಮುದ್ದಿನ ಮಗಳು. ಅವರ ಕಣ್ಣಿಗೆ    ನಾಗಪ್ಪ ಸರಿಯಾದ ವರ ಎನಿಸಿದ. ಡಬ್ಬಲ್‌ ಗ್ರಾಜುಯೇಟ್‌.  ಬಳಗದಲ್ಲಿನ ಬಡ ಹುಡುಗ. ಕಟ್ಟಾ ಮೊಟಾ. ಇನ್ನೇನು ಬೇಕು. ಹೇಳಿದಂತೆ ಕೇಳುವನು ಎಂದು  ಕೈತುಂಬ ಹಣ ಕೊಟ್ಟು  ಹೆಣ್ಣು ಮಗಳನ್ನುಧಾರೆ ಎರೆದರು ಮಗಳನ್ನು .ಮನೆಯಲ್ಲಿಯೇ ಇಟ್ಟುಕೊಂಡರು. ಎರಡು ಮಕ್ಕಳು ಆದರೂ ಅವನು  ಬೇರೆಮನೆ ಮಾಡಿ ಸಂಸಾರ  ಹೂಡಲೇ ಇಲ್ಲ. ಆಗ ಈ ಯೋಜನೆ ಬಂದಿತು. ಯಾರಿಗೋ ಹೇಳಿ ಅಳಿಯನಿಗೆ ಗುತ್ತಿಗೆ ಉಪನ್ಯಾಸಕ ಹುದ್ದೆ ಗಿಟ್ಟಿಸಿದರು ವಾರಕ್ಕೊಮ್ಮೆ ಮಾವನ ಮನೆಗೆ ಭೇಟಿ ನೀಡಿ ಹೊಣೆ ಹರಿದು ಕೊಳ್ಳುತ್ತಿದ್ದ. ಅವರಿಗೆ ಅನುಮಾನ ಶುರುವಾಯಿತು. ಅದು ನಿಜವೂ ಆಗಿತ್ತು. ಗೆಳತಿಯ ಸಹವಾಸ ಮಾಡಿದ್ದ. ಖುದ್ದಾಗಿ ಅಳಿಯ ಕೆಲಸ ಮಾಡುವ ಸ್ಥಳ ಕ್ಕೆ  ಬಂದರು ಬಂದರು.ಸತ್ಯ ದರ್ಶನ ವಾಯಿತು.ಅವನು ನನಗೆ ಸರಿಯಾದ ಸಂಬಳವಿಲ್ಲ. ಗುತ್ತಿಗೆ ಕೆಲಸ. ಕೆಲಸ ಖಾಯಂ ಆದ ಮೇಲೆ ಕೈಯಲ್ಲಿ ಕಾಸು ಮಾಡಿಕೊಂಡು  ಮನೆ ಮಾಡುವೆ ಎಂದು ಕೈಯಾಡಿಸಿದ.ಅವರು ನಿಡಿದ್ದ ಹಣ ವೆಲ್ಲ ಖರ್ಚಾಗಿ ಬಿಟ್ಟಿತ್ತು. ವಿದ್ಯಾವಂತ  ಅಳಿಯ ಎಂದು ಹಿರಿಹಿರಿ ಹಿಗ್ಗಿದವರಿಗೆ ಬಹಳ ಬೇಸರ ವಾಯಿತು. ಅನ್ನುವ ಹಾಗಿಲ್ಲ   ಅನುಭವಿಸುವ ಹಾಗಿಲ್ಲ.ಮನೆಯಲ್ಲೂ ನೆಮ್ಮದಿಕೆಟ್ಟಿತು. ಗಂಡು ಮಕ್ಕಳೂ ಗೊಣಗತೊಡಗಿದರು.. ಅವರೆ ಖುದ್ದಾಗಿ ಬಂದು ನನ್ನನ್ನು  ಕಂಡರು. ಹೇಗಾದರೂ ಮಗಳ ಸಂಸಾರ ಹೊಂದಿಸಲು ವಿನಂತಿಸಿದರು. ತಾವೂ ಎಡಗಣ್ಣು ಬಲಗಣ್ಣು ನೋಡುವುದಾಗಿ ಭಾಷೆಕೊಟ್ಟರು. ಅಂತೂ ನಾಗಪ್ಪ ಮನೆ ಮಾಡಿದ.
ಸಂಸಾರಹೂಡಿದೊಡನೆ ಹೊರಗಿನ ಖರ್ಚು ವೆಚ್ಚಗಳಿಗೆ ಕೈಹಿಡಿತವಾಯಿತು. ಆದರೆ ಚಾಣಾಕ್ಷನಾದ ಅವರು ಅದಕ್ಕೆ ಬೇರೆ ವ್ಯವಸ್ಥೆ ಮಾಡಿಕೊಂಡಿರುವುದು ಎರಡು  ವರ್ಷದ ಮೇಲೆ ಗಮನಕ್ಕೆ ಬಂದಿತು
ಆಗ ಗುತ್ತಿಗೆ ಉಪನ್ಯಾಸಕರಿಗೆ ಮೌಲ್ಯ ಮಾಪನಕ್ಕೆ ಅವಕಾಶವಿರಲಿಲ್ಲ. ಆದರೂ ಮೌಲ್ಯ ಮಾಪನ ಸಮಯದಲ್ಲಿ  ಬೆಂಗಳೂರಿಗೆ ಹಾಜರಿ ಹಾಕುತಿದ್ದ. ಬಹುಶಃ ಬೇರೆ ಕೆಲಸಕ್ಕೆಕೆ ಬಂದಿರಬಹುದು ಎಂದು ಕೊಂಡೆ. ಎರಡೆ ವರ್ಷದಲ್ಲಿ ಅವರ ಗುಟ್ಟು ರಟ್ಟಾಯಿತು. ಫಲಿತಾಂಶ ಬಂದೊಡನೆ ಅನೇಕ ವಿದ್ಯಾರ್ಥಿಗಳು ಬಂದು ಅವರಿಗೆ ಕಾಣುತಿದ್ದರು. ಕಾಲೇಜಿನಲ್ಲಿ ಮಾತ್ರವಲ್ಲ ಮನೆಯಲ್ಲೂ ವಿದ್ಯಾರ್ಥಿಗಳ ಮತ್ತು ಪೋಷಕರ ಸಂದಣಿ ಇರುತಿತ್ತು. ಕೆಲವರು ಬಂದು ಕಾಲೇಜಿನಲ್ಲೂ ಹೊರಗೆ ಕರೆದು ಮಾತನಾಡುತಿದ್ದರು. ಏನೋ ನಗುಟ್ಟು ಗುಟ್ಟಾಗಿ ನಡೆಯುತ್ತಿದೆ ಎಂಬ ಅನುಮಾನ ಬಲವಾಯಿತು. ನಂತರ ಅವರ ಆತ್ಮೀಯರೊಬ್ಬರು ಬಾಯಿ ಬಿಟ್ಟರು. ಅವರು ಪಿಯುಸಿ ಪರೀಕ್ಷೆಗೆ ಕುಳಿತ ಮಕ್ಕಳಿಗೆ ಪಾಸು ಮಾಡುವ ಭರವಸೆ ನೀಡಿ  ಐದು ನೂರು,  ಸಾವಿರ ಹಣ ಪಡೆಯುತಿದ್ದರು. ನಮ್ಮವರೆಲ್ಲ ಹಳ್ಳಿಯ ಜನ. ನಂಬಿಕೊಡುತಿದ್ದರು. ಇವರು ಬೆಂಗಳೂರಿಗೆ ಬರುವರು. ಅಲ್ಲಿ ಫಲಿತಾಂಶ ಪ್ರಕಟವಾದಾಗ ತಪ್ಪದೆ ಹಾಜರಿದ್ದು ತಾವು ತಂದ ನಂಬರ್‌ಗಳು ಪಾಸು ಆಗಿರುವುದೊಇಲ್ಲವೋ ನೋಡಿಕೊಳ್ಳುವುರು. ಫೇಲಾಗಿದ್ದರೆ ಎಷ್ಟರಲ್ಲಿ ಫೇಲ್‌ ಆಗಿರುವುರು ಎಂದು ಬರೆದುಕೊಂಡ ತಕ್ಷಣ ಕಾಲೇಜಿಗೆ ಹಿಂತಿರುಗುವುರು.ನಮ್ಮದುಮೊದಲೆ ಹಳ್ಳಿ. ಪೋಸ್ಟು ಬರುವುದು ತುಸು ತಡ. ಹೀಗಾಗಿ ಇವರು ಮುಂಚಿತವಾಗಿಯೆ ದುಡ್ಡು ಕೊಟ್ಟವರಿಗೆ ಮಾಹಿತಿ ಮುಟ್ಟಿಸುವುರು.ಪಾಸದವರಿಗಂತೂ ಇವರು ದೇವರು. ಫೇಲಾದವರಿಗೆ  ನಾನು ಸಾಕಷ್ಟು ಪ್ರಯತ್ನ ಮಡಿದೆ. ನಿಮ್ಮ ಪೇಪರು ಕರಾವಳಿ ಜನರ ಕೈಗೆ ಹೋಗಿತ್ತು. ಅವರು ಬಹಳ ಬಿಗಿ  ಕೆಲಸ ಆಗಲಿಲ್ಲ. ಮುಂದಿನ ಸಲ ಮಾಡಿಸಿ ಕೊಢವೆ ಎಂದು ಸಮಾಧಾನ ಮಾಡುವರು. ನಾನು  ಈ ಕೆಲಸ ಮಾಡಿಲ್ಲ. ಏನೋ ಹಳ್ಳಿ ಹುಡುಗರು ಎಂದು ಸಹಾಯ ಮಾಡಲು ಒಪ್ಪಿಕೊಂಡೆ. ನಂಬುಗೆ ಇಲ್ಲದಿದ್ದರೆ ಹಣ ವಾಪಸ್ಸು ಕೊಡುವೆ ಎನ್ನವರು. ಬೆಂಗಳೂರಿಗೆ ಹೋಗಿ ವಾರಗಟ್ಟಲೆ ಇದ್ದೆ ಆ ಖರ್ಚು ಕೊಟ್ಟರೆ ಸಾಕು , ಎಂದಾಗ ಬಂದವರು ಸುಮ್ಮನಾಗುತಿದ್ದರು . ಮುಂದಿನ ಸಲವಾದರೂ ಪಾಸು ಮಾಡಿಸಿ ಎಂದು ಬೇಡಿಕೊಳ್ಳುವರು.  ರಿಖಂಡಿತಾ ಮಾಡಿಸುವುದಾಗಿ ಭರವಸೆ ಕೊಡುವರು.ತೀರ ನಿಷ್ಠುರವಾದವರಿಗೆ ಅರ್ಧ ಹಣ ಕೊಡುವರು. ಇದೆ ಅವರ ಮೇಲಾದಾಯದ ಗುಟ್ಟಾಗಿತ್ತು ಯಾವುದೆ ಅಧಿಕೃತ ದೂರುಇಲ್ಲದೆ ಇರುವುದರಿಂದ ಕ್ರಮ ತೆಗೆದುಕೊಳ್ಳಲು ಸಾಧ್ಯವಿರಲಿಲ್ಲ.ಆದರೆ ಎರಡೆ ವರ್ಷದಲ್ಲಿ ಅವರ ಬಣ್ಣ  ಬಯಲಾಯಿತು. ಪಾಸು ಇಲ್ಲವಾದರೆ ಹಣ ವಾಪಾಸು ಯೋಜನೆ ವಿಫಲವಾಯಿತು




Thursday, January 3, 2013

ಅಮೇರಿಕಾ ಅನುಭವ-೯


 ಮಳೆ ಕುಯಿಲು -  ಮನೆ ಹರಾಜು
ನ್ಯೂಯಾರ್ಕ ನಗರದ ಬ್ರೂಕ್ಲಿನ್‌ನಲ್ಲಿನ  ೮೧ ರಹರೆಯದ ಪರಿಸರ ಪ್ರೇಮಿಯೊಬ್ಬನ ಕಥೆ ಸರಕಾರಿ ವ್ಯವಸ್ಥೆಯ ದಪ್ಪಚರ್ಮಕ್ಕೆ ಜೀವಂತ ಸಾಕ್ಷಿಯಾಗಿದೆ. ಜಾನಸನ್‌ ಇಲ್ಲಿ ಕಳೆದ  ಐವತ್ತು ವರ್ಷಗಳಿಂದಲೂ ನೆಲಸಿರುವನು. ಅವನಿಗೆ ಈಗ ೮೧ ವರ್ಷದ  ಪಕ್ವ ಪ್ರಾಯ. ಅವನು ಈಗ ಜೀವನ ಸಾಗಿಸುತ್ತಿರುವುದು ಮಾಡುತ್ತಲಿರುವುದು ಸರಕಾರ ನೀಡುತ್ತಿರಯವ ಸೋಷಿಯಲ್‌ ಸೆಕ್ಯರಿಟಿ $೮೫೦  ಹಣದ ಮೇಲೆ.
 ಆತ . ೧೯೫೦ ರ ಸುಮಾರಿಗೆ  ಈ ಮನೆ  ಕೊಂಡು ಕೊಂಡ.  ಅವನದು  ಹೆಂಡತಿ ಮತ್ತು  ಮೂರು ಮಕ್ಕಳಿರುವ ತುಂಬು ಸಂಸಾರ.. ಆಗ ಮನೆ ಕಳ್ಳಲು ಅವನು ನೀಡಿದ  ಬೆಲೆ  $8000ಅವನು ಪರಿಸರ ಕಾಳಜಿ ಉಳ್ಳವ. . ನೈಸರ್ಗಿಕ ಸಂಪನ್ಮೂಮೂಲ ಉಳಿಸ ಬೇಕೆಂಬ ಹಂಬಲದಿಂದ ಮನೆಯ ಅರ್ಧ ಭಾಗವನ್ನೇ ಪ್ರಯೋಗಶಾಲೆಯಾಗಿ ಪರಿವರ್ತಿಸಿದ. ಅದಕ್ಕೆ ಅವನು ಮಾಡಿದ ಮೊದಲ ಕೆಲಸವೆಂದರೆ ಗ್ಯಾಸ್ ಮತ್ತು ತೈಲ ಪಳೆಯುಳಿಕೆ ಇಂಧನದ ಬಳಕೆ ನಿಲ್ಲಿಸಿದನು, ನೀರಿನ  ಬಳಕೆಯನ್ನು ಬಹಳ ಕಡಿಮೆ ಮಾಡಿದ. ಸಾರ್ವಜನಿಕ ನೀರಿನ ಸೌಲಭ್ಯದ ಬಳಕೆ ನಿಲ್ಲಿಸಿದ.. ಅದಕ್ಕೆ ತಕ್ಕಂತೆ ಮನೆಯವಿನ್ಯಾಸ ಮಾಡಿದ . ಮೊದಲು ಮಳೆಕೊಯಿಲಿಗೆ ಕೈ ಹಾಕಿದ.ಮೇಲ್ಷಾವಣಿಯಲ್ಲಿ ತಗಡನಿಂದ ಗುಳಿಯಾಕಾರದ ಅನೇಕ ರಚನೆ ಮಾಡಿ ಅಲ್ಲಿ ಮಳೆ ನೀರು ಸಂಗ್ರಹಕ್ಕೆ ಮುಂದಾದ. ಆ ನೀರನ್ನು ಸೆಲರ್‌ ನಲ್ಲಿರುವ ಕಾರು ಟ್ಯೂಬ್‌ಗಳಿಂದ ಮಾಡಿದ ತೊಟ್ಟಿಯಲ್ಲಿ ಸಂಗ್ರಹಿಸಿದ. ಅದನ್ನೇ ನಿತ್ಯ ಬಕೆಗೆ ಉಪಯೋಗಿಸಿದ... ಅಂದರೆ ಅವನ ಮನೆಗೆ ಸದಾ ಹರಿಯುವ ನಲ್ಲಿಯ ನೀರಿನ ಸೌಕರ್ಯವಿಲ್ಲ.ಅಡುಗೆಗೂ ನೀರಿನ ಬಳಕೆ ಬಹಳ ಬೇಕಿರಲಿಲ್ಲ. ತಿನ್ನುವುದೆಲ್ಲ ಎಲ್ಲ ಬ್ರೆಡ್‌ ಅಧಾರಿತ ಆಹಾರ. ಕೊಂಡ ಬ್ರೆಡ್‌  ಬಿಸಿ ಮಾಡಲು  ಸೌರ ಒಲೆ ನಿರ್ಮಣಮಾಡಿಕೊಂಡ.. ಮೊದಲು ಟೈಮ್ಸ ಚೌಕದಲ್ಲಿ ಫೋಟೊ ಸ್ಟುಡಿಯೋದಲ್ಲಿ ಕೆಲಸಮಾಡುತ್ತಿದ್ದಾಗ ಬೆಳಕನ್ನು ಕೇಂದ್ರೀಕರಿಸಲು ಕೊಡೆ ಮಾದರಿ ಉಪಕರಣ ವನ್ನು ಆವಿಷ್ಕರಿಸಿದ್ದ., ಈಗ ಅದನ್ನೆ ತುಸು ಮಾರ್ಪಾಟು ಮಾಡಿ ಸೌರ ಒಲೆಯಾಗಿಸಿದ. ಅದರಲ್ಲಿ ಅರ್ಧ ಗಂಟೆಯಲ್ಲಿ ಅವನಿಗೆ ಅಗತ್ಯವಾದ ಆಹಾರ ಸಿದ್ಧವಾಗುತಿತ್ತು.,. ಇನ್ನು ಸ್ನಾನಕ್ಕೆ ಬೇಕಾದ ನೀರಿನ ಪ್ರಮಾಣ ಬಹಳ ಹೆಚ್ಚು. ಇಲ್ಲಿ ಎಲ್ಲ ನಲ್ಲಿಗಳಲ್ಲೂ ಬಿಸಿ ನೀರು ಮತ್ತು ತಣ್ಣೀರು ಒಂದೆ ನಳದಲ್ಲಿ ಬರುತ್ತವೆ. ಕೆಲವು ನಳಗಳಲ್ಲಿ ಹಿಡಿಯನ್ನು ಎಡಕ್ಕೆ ತಿರುಗಿಸಿದರೆ ಬಿಸಿ ನೀರು ಬರುವುದು. ಬಲಕ್ಕೆ ತಿರುಗಿಸದರೆ ತಣ್ಣೀರು  ಸುರಿಯುವುದು.. ಇನ್ನು ಹಲವು ಮೇಲೆ ಎತ್ತಿದರೆ ಬಿಸಿ ನೀರು,  ಕೆಳಕ್ಕೆ ಒತ್ತಿದರೆ ತಣ್ಣಿರು. ಅಂತೂ ಬೇಕೆಂದಾಗ ಬೇಕಾದ ಉಷ್ಣತೆಯ ನೀರು ಸದಾ ಲಭ್ಯ. ಕುದಿಯುವ ನೀರಿನಿಂದ  ಉಗುರು ಬೆಚ್ಚಗಿನ ನೀರು ಕ್ಷಣಾರ್ಧದಲ್ಲಿ  ಲಭ್ಯ. ಜತೆಗೆ ಇಲ್ಲಿ  ಪೂರ್ಣ ಪ್ರಮಾಣದ ಬಾತ್‌ ರೂಮ್‌ಎಂದರೆ ಬಾತ್‌ ಟಬ್ ಇರಲೆಬೇಕು .  ದಿನಾ ಬಳಸಲಿ ಬಿಡಲಿ. ಸ್ನಾನಕ್ಕೆ ನಮ್ಮಲ್ಲಿನಂತೆ ಮಗ್ಗಿನ ಬಳಕೆ ಇಲ್ಲವೇ ಇಲ್ಲ.  ಅದಕ್ಕೆ ಹ್ಯಾಂಡ್‌ ಷವರ್‌ ಅಂತೂ ಅನಿವಾರ್ಯ. ಜತೆಗೆ ತುಂತುರುಸ್ನಾನವನ್ನೂ ಮಾಡಬಹುದು. ಆದರೆ ಈ ಸಮಸ್ಯಗೆ ಆತ ಬಹು ಸುಲಭವಾಗಿ ಪರಿಹಾರ ಕಂಡುಕೊಂಡ. ಆತನದು ಏನಿದ್ದರೂ ಸ್ಪಾಂಜು ಬಾತು. ಒಂದು ಮಗ್‌ ನೀರಿನಲ್ಲಿ ಸ್ನಾನದ ಶಾಸ್ತ್ರ  ಮುಕ್ತಾಯ. ಅದಕ್ಕೆ ಬಿಸಿ ನೀರು ಬೇಕೆಂದರೆ ಮಾಳಿಗೆಯಲ್ಲಿ ಜೋಡಿಸಿದ ಪಾನೀಯಗಳ ಬಾಟಲಿಗಳ ಕ್ಯಾನಿನ ತಗಡು ಜೋಡಿಸಿ ಮಾಡಿದ ಕೋಳವೆಗಳ ಮೂಲಕ ನೀರು ಹಾಯಿಸಿ ಬಿಸಿಯಾಗುವಂತೆ ಮಾಡಿ ಅದನ್ನೆ ಬಳಸುವನು.  ಒಳ ಚರಂಡಿಗೆ ಮಾತ್ರ ಮಿತವಾಗಿ  ನೀರಿನ ಸಂಪರ್ಕ   ಪಡೆದ. ನೀರಿನ ಬಳಕೆ ಲೆಕ್ಕಹಾಕಿ.ಸಾರ್ವಜನಿಕ ಮೂಲದಿಂದ  ನೀರಿನ ಬಳಕೆಯನ್ನುಸಂಪೂರ್ಣವಾಗಿ ನಿಲ್ಲಿಸಿದ. ಆಂದ ಮೇಲೆ ನೀರಿನ ಬಿಲ್ಲು ಕಟ್ಟವ ಅಗತ್ಯವಿಲ್ಲ ಎಂದುಕೊಂಡ. ಜತೆಗ ಲಕ್ಷಾಂತರ ಗ್ಯಾಲನ್‌  ನೀರು ಉಳಿಸಿ ನಿಸರ್ಗ ಸಂಪತ್ತಿನ ಸಂರಕ್ಷಣೆಗೆ ತನ್ನ ಕಿರು ಕಾಣಿಕೆ ಸಲ್ಲಿಸಿದ.  ಆದರೆ ಆತನಿಗೆ ಸ್ಥಳೀಯ ಆಡಳಿತದ ಅಧಿಕಾರಿಗಳು ಸುಮ್ಮನೆ ಬಿಡಲೇ ಇಲ್ಲ.  ಅವನಿಗೆ  $ 35೦೦೦ ನೀರಿನ ಬಿಲ್ಲು ಕಳುಹಿಸಿದ್ದಾರೆ. ಅದರಜೊತೆಗ ಮನೆ ತೆರಿಗೆ  $ 25 00 ಕೊಡಲು ನೋಟೀಸು ಕಳುಹಿಸಿದರು. ಅದರ ಫಲ ಈಗ ಅವನ  ಮನೆ ಹರಾಜಿಗೆ ಬಂದಿದೆ. ಸ್ಥಳಿಯ ನಗರ ಸಭೆಯ ಅಧಿಕಾರಿಗಳ ಪ್ರಕಾರ ಜಾನಸ್‌ನ್‌  ನೀರು ಬಳಸದಿದ್ದರೂ ಅದರ ಬಗ್ಗೆ ಅಂದಿನ ನಗರ ಸಭಾ ಅಧಿಕಾರಿಗಳಿಗೆ ಮಾಹಿತಿಯನ್ನು ಬರಹದಲ್ಲಿ ನೀಡಿಲ್ಲ. ನೀರು ಬೇಕಿಲ್ಲ ಎಂದು ಜತೆಗೆ ಮೀಟರ್‌ ಅಳವಡಿಸಲು ಬಂದಾಗ ಸಹಕರಿಸಲು ನಿರಾಕರಿದ.. ಅದಕ್ಕಾಗಿ ಹಿಂದಿನ ಬಳಕೆಯ ಆಧಾರದ ಮೇಲೆ ಸರಾಸರಿ ಬಳಸಬಹುದಾದ ನೀರಿಗೆ ಶುಲ್ಕ ವಿಧಿಸಿದರು. ಸುಮಾರು  ಮೂವತ್ತು ವರ್ಷದಿಂದ ತೆರಿಗೆಗೆ  ನೋಟೀಸು ಬರುತ್ತಲೆ ಇದೆ. ಈತ ತೆರಿಗೆ ಕಟ್ಟಲು ನಿರಾಕರಿಸುತ್ತಾಲೇ ಇದ್ದಾನೆ. ಈಗ ಮನೆ ಹರಾಜಿಗೆ ಬಂದಿದೆ..ಉಳಿಸಿಕೊಂಡಿದ್ದ  ತೆರಿಗೆಯೊಂದಿಗೆ  ಬಡ್ಡಿ , ದಂಡ ಸೇರಿ  ದೊಡ್ಡ ಮೊತ್ತವಾಗಿದೆ.  ಈಗ ಸಮಸ್ಯೆಗೆ ಕಾರಣವಾಗಿದೆ. . ಆದರೆ ಇದನ್ನು ಜಾನ್ಸನ್‌ ಒಪ್ಪುವುದಿಲ್ಲ. ನೀರಿನ ಸಂಪರ್ಕವೇ ಇಲ್ಲದ  ತನ್ನ ಮನೆಗ ನೀರಿನ ತೆರಿಗೆ ವಿಧಿಸಿರುವುದು ಅನ್ಯಾಯ ಎಂಬುದು ಅವನ ವಾದ. ಬಳಸದ ಸೌಲಭ್ಯಕ್ಕೆ ಹಣ ಏಕೆ ಕೊಡಬೇಕು ಎಂಬುದು ಅವನ ತಕರಾರು. ಬಳಸಿಲ್ಲ ಎನ್ನುವುದಕ್ಕೆ ದಾಖಲೆ ಇಲ್ಲ ಎನ್ನುತ್ತದೆ ನಗರ ಸಭೆ. ಅವನು ಮನೆ ಕೊಂಡದ್ದು ೧೯೬೦ ರಲ್ಲಿ ಆಗಿನಂದಲೆ ನೈಸರ್ಗಿಕ ಸಂಪತ್ತುಗಳಾದ ನೀರು ಇಂಧನ ಉಳಿಸಲು ಪ್ರಯೋಗಕ್ಕೆ ಮೊದಲಿಟ್ಟ. ಮನೆಯಲ್ಲಿರುವುದು  ವಿದ್ಯುತ್‌ ದೀಪ ಮಾತ್ರ.ಮನೆಯ. ಒಳ ಮಾಳಿಗೆಗೆ ಮತ್ತು ಗೋಡೆಗಳಿಗೆ ದೀಪದಿಂದ ಬರುವ ಉಷ್ಣತೆಯನ್ನು  ಗ್ರಹಿಸಿ ಮನೆ ಬೆಚ್ಚಗಿರುವ ಫಲಕಗಳ ಅಳವಡಿಕೆಯಾಗಿರುವುದರಿಂದ ಏರ್‌ ಕಂಡೀಷನರ್‌ ಅಗತ್ಯವಿಲ್ಲ. ತುರ್ತು ಪರಿಸ್ಥಿಗೆ ಅಂತ ಕಡಿಮೆ  ಕಟ್ಟಿಗೆ ಬಳಸಿ ಬಿಸಿ ಮಾಡುವ ಆಧುನಿಕ ಒಲೆಯೂ ಅವನದೆ ಸೃಷ್ಟಿ. ಹಾಗಂತ ಅವನ್ನೆಲ್ಲ ತನ್ನ ಸಂಶೋಧನೆ ಎಂದು ಪೇಟೆಂಟ್‌ ಮಾಡಿಸುವ ಗೊಡವೆಗೆ ಹೋಗಿಲ್ಲ.ಅದನ್ನೇನಾದರೂ ಮಾಡಿದರೆ ಮೂರನೆ ಜಗತ್ತಿನ ಅನೇಕ ದೇಶಗಳಲ್ಲಿ ಇಂಧನ ಉಳತಾಯದಲ್ಲಿ ಕ್ರಾಂತಿಯಾಗಬಹುದಿತ್ತು, ಗೋಡೆಗೆ ದೊಡ್ಡ  ಕಿಟಕಿಗಳನ್ನು ಮನೆಗೆ ಜೋಡಿಸಿರುವುದರಿಂದ ಗಾಳಿ ಬೆಳಕಿನ ವ್ಯವಸ್ಥೆ ಬೇಕಾದಷ್ಟಿದೆ. ಆದರೆ ಅದಕ್ಕೆ ಸ್ಥಳೀಯ ಆಡಳಿತ ಆಕ್ಷೇಪಣೆ ವ್ಯಕ್ತಪಡಿಸಿದೆ. ಸಮುದಾಯದಲ್ಲಿನ  ಮನೆಗಳಿಗೆ ಮಾರ್ಪಾಡು ಮಾಡಬೇಕಾದರೆ ಇಲ್ಲಿ ಆಡಳಿತಾತ್ಮಕ  ಅನುಮತಿ ಅಗತ್ಯ. ಮನಸ್ಸಿಗೆ ಬಂದ ಹಾಗೆ ಮಾಡಲಾಗುವುದಿಲ್ಲ. ಆದರೆ ದೊಡ್ಡ  ದೋಣಿಯಾಕಾರದ  ಈತನ ಎರಡಂತಸ್ಥಿನ ಮನೆಯು ವಾಸ ಗೃಹ ಮಾತ್ರವಲ್ಲ ವಸ್ತು ಸಂಗ್ರಹಾಲಯ ಮತ್ತು ಪ್ರಯೋಗಶಾಲೆ ಎಂಬುದು ಅವನ ವಾದ. ಅದು ತಕ್ಕಮಟ್ಟಿಗೆ ನಿಜವೂ ಹೌದು  ಅಲ್ಲಿ ಎಲ್ಲ ನೈಸರ್ಗಿಕ ಸಂಪನ್ಮೂಲಗಳ ಉಳಿತಾಯದ  ಪ್ರಯೋಗದ ಉಪಕರಣಗಳೆ ಇವೆ. ಅಲ್ಲದೆ ಹೈಸ್ಕೂಲು, ಕಾಲೇಜು ವಿದ್ಯಾರ್ಥಿಗಳಿಗೂ ಆತನ ಮನೆ ಒಂದು ಸಂದರ್ಶನ ಯೋಗ್ಯ ಸ್ಥಳ.ಅಲ್ಲಿಬಂದು ನೈಸರ್ಗಿಕ ಶಕ್ತಿಯ ಬಳಕೆಯ ಬಗ್ಗೆ ಚರ್ಚೆ , ವಿಚಾರ ವಿನಮಯ  ಮಾಡುವರು  ಸಲಹೆ ಪಡೆಯುವರು , ಮಾಹಿತಿ ದೊರೆಯುವುದು  ಎಲ್ಲವೂ ಸಾಧ್ಯ.
ಎಂಬತ್ತೊಂದರರ ಅಜ್ಜ ಈಗ ಒಂಟಿ ಜೀವ, ಆತನ ಮಡದಿ ಮಕ್ಕಳು ಇಪ್ಪತ್ತು ವರ್ಷದ ಹಿಂದೆಯೆ ಆ ಪ್ರದೇಶದಲ್ಲಿ ಕಳ್ಳ ಕಾಕರ ಹಾವಳಿ ಜಾಸ್ತಿ , ಸುರಕ್ಷತೆ ಇಲ್ಲ  ಎಂಬ ಕಾರಣಕ್ಕೆ ಬೇರೆ ಕಡೆ ಮನೆ ಮಾಡಿ  ವಾಸಿಸಲು ನಿರ್ಧರಿಸಿದರು. ಆದರೆ ಈತ ಮಾತ್ರ ಜಪ್ಪಯ್ಯ ಎಂದರೂತನ್ನ ಅರೆ ಪ್ರಯೋಗ ಶಾಲೆಯಾದ ಮನೆ ಬಿಡಲು  ಒಪ್ಪಲೇ  ಇಲ್ಲ. ಒಬ್ಬನೇ  ತನ್ನ ಕಾರ್ಯದಲ್ಲಿ ಮಗ್ನನಾಗದ್ದಾನೆ.ನೀರಿನ ತೆರಿಗೆ ಮಾತ್ರವಲ್ಲ,  ಈತ ಆಸ್ತಿ ತೆರಿಗೆಯನ್ನೂ ಪಾವತಿಸಿಲ್ಲ. ಅದರ ಬಾಕಿ ೨೫೦೦೦ಡಾಲರ್‌ ಆಗಿದೆ. ಹಿರಿಯ ನಾಗರೀಕರಿಗೆ  ಮನೆ ತೆರಿಗೆಯಲ್ಲಿ ಸೋಡಿನೀಡುವ  ಸೌಲಭ್ಯ ಈ ದೇಶದಲ್ಲಿದೆ. . ಆದರೆ ಯಾವುದೋ ತಾಂತ್ರಿಕ ಕಾರಣಗಳಿಂದ  ಅವನಿಗೆ ಅದೂ  ದೊರೆತಿಲ್ಲ. ಎಂಬತ್ತರ ಮೇಲಾಗಿದ್ದರೂ ಸೌಲಭ್ಯ ವಂಚಿತನಾಗಿರುವುದಕ್ಕೆ ಈತನು ಸುಮ್ಮನೆ ಕುಳಿತಿಲ್ಲ. ಮನವಿ ಸಲ್ಲಿಸಿದ್ದಾನೆ. ಅದರಂತೆ ಶುಲ್ಕ ನಿಗದಿ ಮಾಡಿದರೆ ತೆರಿಗೆ ಕಟ್ಟುವುದಾಗಿ ಹೇಳುತ್ತಾನೆ. ಆದರೆ ಈಗಂತೂ ಅವನಿಗೆ ಮನೆಯನ್ನು  ಫೋರ್‌ಕ್ಲೋಷರ್‌ ಮಾಡುವ ಎಚ್ಚರಿಕೆ ಸೂಚನೆ ಬಂದಿದೆ. ಆದರೆ ಆತನದು ಒಂದೆ ಮಾತು. ನಾನು ಅಷ್ಟು ಸುಲಭವಾಗಿ ಕೈ ಚೆಲ್ಲುವುದಿಲ್ಲ, ಅಮೇರಿಕಾದಲ್ಲಿ ಅನೇಕ ರಾಜ್ಯಗಳಲ್ಲಿ ಅಗತ್ಯವಾದ ವಿದ್ಯುತ್‌ ಶಕ್ತಿಯ ೨೫ಅಷ್ಟನ್ನು ಪರ್ಯಾಯ ಮೂಲಗಳಿಂದ ಪಡೆಯಬೇಕೆಂಬ ಕಾನೂನು ಜಾರಿಯಲ್ಲಿದೆ. ಅದಕ್ಕಾಗಿ  ಸರ್ಕಾರವು ಹಲವು ಬಿಲಿಯನ್‌ ಡಾಲರ್‌ ವೆಚ್ಚ ಮಾಡುತ್ತಿದೆ.. ಪಳೆಯುಳಿಕೆ ಇಂಧನ ಮೂಲಗಳಾದ ಗ್ಯಾಸ್ , ತೈಲ ಮೊದಲಾದವುಗಳ ಮಿತವ್ಯಯಕ್ಕೆ ಇನ್ನಿಲ್ಲದಂತೆ ಪ್ರಯತ್ನ ಸಾಗಿದೆ. ಆದರೆ ಸಾಮಾನ್ಯ ವ್ಯಕ್ತಿಯೊಬ್ಬ ಮೂವತ್ತು  ವರ್ಷಗಳಿಂದಲೂ ಮಳೆ ಕೊಯಿಲು ಮಾಡಿ , ಇಂಧನ ಉಳಿಸಿ, ಸೌರ ಶಕ್ತಿ ಬಳಸಿ ಮನೆ ಕಳೆದು ಕೊಳ್ಳುವ ಹಂತ ತಲುಪಿದ್ದಾನೆ. ಈ ದಿಶೆಯಲ್ಲಿ ಕೊಡುಗೆ ನೀಡುತ್ತಿದ್ದರೂ ಅವನ ನೆಲೆಯನ್ನೆ ಕಿತ್ತುಕೊಳ್ಳುತ್ತಿರುವುದು ಆಡಳಿತದ ವಿಪರ್ಯಾಸವಾಗಿದೆ.