Sunday, June 30, 2013

ಆರರಿಂದ ಅರವತ್ತು

                                                ಹೀಗೊಂದು ಹರತಾಳ

ಗಣೇಶನನ್ನು ಮಾಡಲು ಹೋದರೆ ಅವರಪ್ಪನನ್ನು ಮಾಡಿದ ಅನುಭವ ಒಮ್ಮೆ ಆಯಿತು. ಕಾರವಾರದ ಪರಿಸರ ಸುಂದರ. ಕಣ್ಣಿಗೆ ಸೊಂಪು. ಮನಸ್ಸಿಗೆ ಇಂಪು. ಆದರೆ ನನಗೆ ಒಂದು ಕೊರತೆ ಕಾಣುತಿತ್ತು. ಅಲ್ಲಿ ಸಿಬ್ಬಂದಿ ಯಾರಿಗೆ ಯಾರೋ ಪುರಂದರವಿಠಲ. ಕಾಲೇಜಿನಲ್ಲಿ ನಯ ವಿನಯದಿಂದ ವರ್ತಿಸಿದರೂ ನಂತರ ಬೇರೆ ಕಡೆ ಅನುಭವಿಸಿದ ಆತ್ಮೀಯತೆ ಇಲ್ಲಿ ಇರಲಿಲ್ಲ.. ಮಲೆನಾಡು ಆತಿಥ್ಯಕ್ಕೆ ಹೆಸರಾದರು ಕರಾವಳಿ  ಮಾತ್ರ ವಿಭಿನ್ನ.ಘಟ್ಟದ ಮೇಲೆ ಹೋದರೆ ಅತಿಥೀ ದೇವೋ ಭವ  .  ಇಲ್ಲಿ  ಅನ್ಯ. ಇದು ಗೋವಾದ ಗಡಿಯಲ್ಲಿರುವುದೆ ಅದಕ್ಕೆ ಕಾರಣ. ಇನ್ನೊಂದು ಆಹಾರಾಭ್ಯಾಸ. ಅವರಿಗೆ ಮೀನಿಲ್ಲದೆ ಊಟ ಯೋಚಿಸು ಹಾಗೆ ಇಲ್ಲ. ಅನ್ನವಿಲ್ದದ್ದರೆ ಚಪಾತಿ ತಿಂದಾರು ಆದರೆ ಮೀನಂತೂ ಒಂದಲ್ಲ ಒಂದು ರೂಪದಲ್ಲಿ ಅವರ ತಟ್ಟೆಯಲ್ಲಿರಲೆ ಬೇಕು.ತರಕಾರಿ ಮಾರಿಕಟ್ಟೆಗಿಂತ ಮೀನು ಮಾರುಕಟ್ಟೆ ದೊಡ್ಡದು ಮತ್ತು ವೈವಿಧ್ಯಮಯ. ಸಸ್ಯಾಹಾರಿಗಳಗೆ ತಾಜಾ ತರಕಾರಿ ಬೇಕೆಂದರೆ ಸಂತೆಯ ತನಕ ಕಾಯಲೆ ಬೇಕು. ಆ ದಿನ ನಮಗಂತೂ ಖುಷಿ. ತರಕಾರಿ ಜತೆ ಹುಬ್ಬಳ್ಳಿ , ಧಾರವಾಡದ ಗಂಡು ಭಾಷೆ ಮಾತನಾಡುವ ಜನ ಸಿಗುತಿದ್ದರು. ಸಾಧಾರಣ ವಾಗಿ ತರಕಾರಿ ಬರುತಿದ್ದುದು ಆ ಭಾಗದಿಂದಲೆ. ಸಹಜವಾಗಿ ಬೆಲೆ ದುಬಾರಿ.  ನಿತ್ಯ ನೀರಿನಿಂದ ತೆಗೆದು  ಸೀದಾ ಸಾರಿಗೆ ಹಾಕುವ ಸೌಲಭ್ಯವಿರುವಾಗ ಅದೂ ಸೋವಿಯಾಗಿ ಬಗೆಬಗೆಯ ಮೀನುಗಳು ದೊರೆಯುವಾಗ ತುಟ್ಟಿಯ ತರಕಾರಿ ತಿನ್ನುವವರು ದಡ್ಡರು ಅಷ್ಟು   ಮಾತ್ರ. ಅಲ್ಲದೆ ಅದು ಪೌಷ್ಟಿಕಾಹಾರ. ಔಷಧಿಯೆಂದು ಮೀನೆಣ್ಣೆ ಕುಡಿಯುವುದಕ್ಕಿಂಡ ಖಾದ್ಯವೆಂದು ತಿನ್ನುವುದೆ ಸುಖ.  ಕಡಲ ತಡಿಯಲ್ಲಿ ಮೀನು ತಿನ್ನದವರು ಮಹಾಪಾಪಿಗಳು. ಅವರ ಮನೆ ಯಾರೂ ಬಾರರು. ಮತ್ತು ಅವರನ್ನು ಯಾರೂ ಊಟಕ್ಕೆ ಕರೆಯರು. ಇದೆ ನಮಗೆ ಎಲ್ಲರೊಡನೆ  ಬೆರೆಯಲು ತಡೆ. ಅದರ ಜೊತೆ ಇನ್ನೊಂದು ವಿಷಯ ಎಂದರೆ, ಭಾಷೆ. ಅಲ್ಲಿ ಎಲ್ಲ ಕಡೆ  ಕೊಂಕಣಿ ಬಾಷೆಯ ಕಿಂಕಣ. ಕನ್ನಡ ಮಾತನಾಡಿದರೆ ಕಣ್ಣರಳಿಸಿ ನೋಡವವರು  ಆ ಜನ,
ಜನರು ಬೇಕು ಎಂದು ನಾನು ಹೋದ ಪ್ರದೇಶಗಳಲ್ಲೆಲ್ಲ ಅಲ್ಲಿನ ಆಹಾರಾಭ್ಯಾಸ ಅಳವಡಿಸಿ ಕೊಂಡಿದ್ದೆ. ಮಲೆ ನಾಡಿಗೆ ಹೋದಾಗ ಗಂಜಿಅನ್ನ ಅಭ್ಯಾಸ ವಾಗಿತ್ತು.. ಈಗ ಎಲ್ಲೆ ಇರಲಿ ತಿಂಗಳಿಗೊಮ್ಮ ಗಂಜಿ ಊಟ ಬೇಕು. ಮಂಡ್ಯಕ್ಕೆ ಹೋದಾಗ  ರಾಗಿ ಮುದ್ದೆ ಮನೆ ದೇವರಾಯಿತು. ಜೊತೆಗೆ ಸೊಪ್ಪುಸಾರು, ಬಸ್ಸಾರು ಇದ್ದರೆ ಸುರಿದು ಕೊಂಡು ಊಟ. ಅದೂ ಅಲ್ಲದೆ ಅದು ಸಕ್ಕರೆ ರೋಗದವರಿಗೆ ಅದು ಅಕ್ಕರೆಯ ಊಟ. ಗುಲ್ಬರ್ಗದಲ್ಲಿ ಬಿಳಿ ಜೋಳದ ರೊಟ್ಟಿ ,ಬ್ಯಾಳಿ, ಕಡ್ಲಿ ಹಿಂಡಿ ಗಟ್ಟಿ ಮೊಸರು, ಬೆಣ್ಣೆ ಉಳ್ಳಾಗಡ್ಡಿ ಸೊಪ್ಪಿನ ಪಚಡಿ , ಆಹಾ! ಅಮೃತ ಸಮಾನ. ರೊಟ್ಟಿಯನು ತಿಂದವನು ಜಟ್ಟಿಯಾಗುವನು ಎಂದು ಹಾಡಿಕೊಳ್ಳುವ ಹಾಗೆ ನಾನು ಜಟ್ಟ್‌ಇಆಗದಿದ್ದರೂ ಗಟ್ಟಿಯಂತೂ ಆಗಿದ್ದೆ, ಆದರೆ ಇಲ್ಲಿ ಮಾತ್ರ ಅದಕ್ಕೆ ಅಪವಾದ.ಕಡಲ ತಡಿಯ ಬ್ರಾಹ್ಮಣರೂ ಸಮುದ್ರದ ತರಕಾರಿ ಬಳಸುವರು. ಆದರೆ ಹುಟ್ಟಾ ಸಸ್ಯಾಹಾರಿಯಾದ ನನಗೆ ಈ ಅಪರ ವಯಸ್ಸಿನಲ್ಲಿ ಹೊಸದು ಕಲಿಯುವ ಹಂಬಲ ಇರಲಿಲ್ಲ. ಇದ್ದರೂ ಆಗುತ್ತಿರಲಿಲ್ಲ
ಮೀನು ತಿನ್ನಲು ಕಲಿಯುವುದು ಆಗದ ಮಾತು. ಇನ್ನು ಕೊಂಕಣಿಭಾಷೆ ಕಲಿತರೆ ತಪ್ಪಿಲ್ಲ. ಆದರೆ ಅದಕ್ಕೆ ಸಮಯ ಬೇಕಲ್ಲ. ನನಗಂತೂ ಅವರಾಡುವ ಮಾತುಕೇಳಿದಾದ ತಾಮ್ರದ ತಂಬಿಗೆಯಲ್ಲಿ ನಾಣ್ಯಹಾಕಿ ಅಲ್ಲಾಡಿಸದಾಗಿನ ಕಿಣಕಿಣಿ ನಾದವೆ ಕೇಳಿದಂತಾಗುವುದು.
ಆದರೂ ಏನಾದರೂ ಮಾಡಲೆ ಬೇಕಲ್ಲ. ಅದಕ್ಕೆ ಕಾಲೇಜಿಗೆ ಹೋದ ಹೊಸದರಲ್ಲೆ ವಾರ ಎರಡುವಾರಕ್ಕೊಂದು ದಿನ ಎಲ್ಲರಿಗೂ ಒಬ್ಬರೇ ತಿಂಡಿ ಕೊಡಿಸುವುದು ಮತ್ತು ಒಟ್ಟಾಗಿತಿನ್ನುವುದು ಒಳ್ಳೆಯ ಅಭ್ಯಾಸ ಎಂದು ಸಲಹೆ ಮಾಡಿದೆ. ಮೊದಲಲ್ಲಿ ನಾನೆ ಕೊಡಿಸಲು ಮುಂದಾದೆ. ಆದರೆ ಒಂದೆ ಸಮಸ್ಯೆ. ನಮ್ಮ ಕಾಲೇಜಿರುವ ಹಳ್ಳಿಯಲ್ಲಿ ಎಲ್ಲರೂ ತಿನ್ನುವ ತಿಂಡಿ ಸಿಗದು, ಒಂದೆ  ಕಾರವಾರದಿಂದ ಇಲ್ಲವೆ ಅಂಕೋಲೆಯಿಂದಲೆ ತರಿಸಬೇಕು. ಅದಕ್ಕಾಗಿ ಮೊದಲೆ ನಿಗದಿಮಾಡಿದ ದಿನ  ನಮ್ಮ ಜವಾನ ಅಂಕೋಲೆಯಿಂದ ಬರುವಾಗಲೆ ಅಲ್ಲಿಂದ ತಿಂಡಿ ತರಲು ಹೇಳಿದೆವು.
ಶನಿವಾರದ ದಿನವಾದರೆ ಮನೆಯಲ್ಲಿ ತಿಂಡಿ ಮಾಡುವ ತೊಂದರೆಯೂ ತಪ್ಪವುದು ಎಂದು ಶಿಕ್ಷಕಿಯರು ಸಲಹೆ ಮಾಡಿದರು. ತರಗತಿಗಳಿಗೆ ತೊಂದರೆಯಾಗದಂತೆ ಸಹ ಉಪಹಾರದ ವ್ಯವಸ್ಥೆಯಾಯಿತು. ಬೆಳಗಿನ ಹತ್ತೂವರೆ ಸಮಯ. ಕಾಲೇಜಿನ  ಮೂಂದೆಯೆ ಬಸ್ಸು ನಿಂತಿತು. ಆಗಲೆ ಪ್ರಾರ್ಥನೆಯ ಸಮಯ. ಗಡಿ ಬಿಡಿಯಿಂದ ಕಾಲೇಜಿನ ಒಳಗೆ ನಡೆದೆ. ಆದರೆ ಮುಖ್ಯದ್ವಾರದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಜಮಾಯಿಸಿದ್ದರು. ನಾನು ಹತ್ತಿರ ಹೋದಕೂಡಲೆ ಡೌನ್  ಡೌನು ಎಂಬ ಸಾಮೂಹಿಕ ಧ್ವನಿ ಕೇಳಿತು ಹತ್ತಿರ ಹೋದಾಗ ಗೊತ್ತಾಯಿತು ಪಿಯುಸಿ ಮಕ್ಕಳು ಹರತಾಳದಲ್ಲಿ ತೊಡಗಿದ್ದರು. ಹತ್ತಿಪ್ಪತ್ತು ಹುಡುಗರು ಕೆಲ ಹುಡುಗಿಯರೂ ಗುಂಪಾಗಿ ನಿಂತಿದ್ದರು. ಅವರ ಕೈನಲ್ಲಿ ಬರಹವಿದ್ದ ರಟ್ಟಿನ ಫಲಕ ಇದ್ದವು ಆಗ  ನನಗೆ ಹೊಳೆಯಿತು ಹಿಂದಿನ ದಿನ ನಾನು ತೆಗೆದು ಕೊಂಡ ನಿರ್ಧಾರದ ಫಲ ಇದಾಗಿತ್ತು.
ಕಾಲೇಜು ವಿಭಾಗದಲ್ಲಿ  ಒಬ್ಬರ ವಿನಃ ಎಲ್ಲರೂ ಒಂದೆ ಜನಾಂಗದವರು. ಹೈಯಸ್ಕೂಲಿನಲ್ಲೂ  ಲ್ಲು ಅವರದೆ ಪ್ರಾಭಲ್ಯ.ಅಂಕೋಲೆಯಲ್ಲಿ  ತಾಲೂಕಿನಲ್ಲಿ ಮಾತ್ರ  ಹೆಚ್ಚಾಗಿರುವ ಮುಂಗೈ ಜೋರಿನ ಜನಾಂಗಕ್ಕೆ ಸೇರಿದವರು. ಅವರಲ್ಲಿ ಬಹುಪಾಲು ಶಿಕ್ಷಕ ವೃತ್ತಿಯವರೆ. ಗಂಡು ಹೆಣ್ಣು ಬೇಧವಿಲ್ಲದೆ ಶಿಕ್ಷಣ ಪಡೆಯುವರು. ಮತ್ತು ಬಹುತೇಕ ಸುತ್ತ ಮುತ್ತಲಿನ ಸ್ಥಳದಲ್ಲೆ ಕೆಲಸ ಮಾಡುವವರು. ಉತ್ತಮ ಕೆಲಸಗಾರರು ಆದರೆ ಅವರು ಮಾಡಿದ್ದೆ ಸರಿ ಎಂಬ ಮನೋಭಾವ.
ಕೆಲವುಹಿಂದಿನ ಮುಂಚೆ ದ ತರಗತಿ ನಡೆಯುತಿದ್ದಾಗಲೆ  ಎರಡನೆ ಪಿಯುಸಿಯ ಆರು ಜನ ವಿದ್ಯಾಥಿಗಳು ಫುಟ್‌ ಬಾಲ್‌ ಆಡುತಿದ್ದುದು ಗಮನಕ್ಕೆ ಬಂತು. ಅವರನ್ನು ಕರೆಸಿ ತರಗತಿಗೆ ಏಕೆ ಗೈರು ಹಾಜರಾಗಿರುವಿರಿ ಎಂದು ವಿಚಾರಿಸಿದೆ. ಅವರು  ಉತ್ತರ ತುಸು ಉದ್ದಟ ತನ ದಾಗಿತ್ತು. ಅರಿಗೆ ಅವರ ಪೋಷಕರನ್ನು ಮಾರನೆ ದಿನ ಕರೆತರುವಂತೆ ಸುಚಿಸಿದೆ. ವಾಪಸ್  ಹೋದವರು ಮಾರನೆ ದಿನ ಕರೆತರಲಿಲ್ಲ. ಕರೆದು ವಿಚಾರಿಸಿದರೆ ಕರೆದು ತರುವುದು ಸಾಧ್ಯವಿಲ್ಲ ಎಂದು ಒರಟಾಗಿ ಹೇಳಿದರು. ಅದಕ್ಕೆ  ಕರೆದು ತರುವ ತನಕ ತರಗತಿಗೆ ಸೇರಿಸಬಾರದೆಂದು ತಿಳಿಸಿ ಎಲ್ಲ ಉಪನ್ಯಾಸಕರಿಗೆ  ಸೂಚನೆ ಕಳುಹಿಸಿದೆ.
ಆದರೆ  ರಾಜ್ಯ ಶಾಸ್ತ್ರದ ಉಪನ್ಯಾಸಕರು ಸೂಚನೆಯನ್ನು ಧಿಕ್ಕರಿಸಿ   ಅವರನ್ನು ತರಗತಿಗೆ ಸೇರಿಸಿದರು. ಅಷ್ಟೆ ಅಲ್ಲ ಮಕ್ಕಳಿಗೆ ತೊಂದರೆ ಕೊಡಲು ತಾವು ಬಿಡುವುದಿಲ್ಲ ಎಂದು ಎಲ್ಲರೆದುರೇ  ಹೇಳಿದರು. ಇದು ಅಶಿಸ್ತಿನ ವರ್ತನೆ .. ಅಂದೆ ಸಂಜೆ ಉಪನ್ಯಾಸಕರ ಸಭೆ ಕರೆದು ಮಕ್ಕಳಿಗೆ ಕುಮ್ಮಕ್ಕು ಕೊಟ್ಟಂತಾಗುವುದು  ಅಂಥವರ  ಮೇಲೆ ಕ್ರಮತೆಗೆದುಕೊಳ್ಳ ಬೇಕಾಗುವುದು ಎಂದು ಎಚ್ಚರಿದೆ. ಆ ಸಭೆಯಲ್ಲಿ ಕನ್ನಡ ವಯಸ್ಸಾದ ಉಪನ್ಯಾಸಕಿಯರು ಬಹಳ ಉದ್ವೇಗಗೊಂಡರು. ಅವರಿಗೆ ರಕ್ತದ ಏರೊತ್ತಡ  ಹಾಗೂ ಇತರೆ  ಅರೋಗ್ಯದ ಸಮಸ್ಯೆ ಇದ್ದಿತು.ಅವರು ಅಳ ತೊಡಗಿದರು. ಅವರನ್ನು ಸಮಾಧಾನ ಮಾಡಿ ಎಚ್ಚರಿಕೆ ನೀಡಿರುವುದು ಶಿಸ್ತಿನ ವರ್ತನೆ ಮಾಡಿದವರಿಗೆ. ಇತರರಿಗೆ ಅಲ್ಲ. ಶಿಸ್ತು ಸುವ್ಯವಸ್ಥೆಗೆ ಎಲ್ಲರ ಸಹಕಾರ ಅಗತ್ಯ ಅದಕ್ಕೆ ಎಲ್ಲರನ್ನೂ ವಿಶ್ವಾಸಕ್ಕೆ ತೆದುಕೊಂಡು ಕ್ರಮಜರುಗಿಸಲು ಸಭೆ ಕರೆಯಲಾಗಿದೆ . ವೈಯುಕ್ತಿಕವಾಗೆ ಅವರು ಚಿಂತೆ ಮಾಡಬಾರದು ಎಂದು ಸಮಾಧಾನ ಮಾಡಿದೆ. ಮಾರನೆ ದಿನ ಆ ವಿದ್ಯಾರ್ಥಿಗಳನ್ನುತರಗತಿಗೆ ಯಾರೂ ಸೇರಿಸ ಬಾರದು ಎಂದು ತಾಕೀತು ಮಾಡಿ ಸಭೆ ಮುಗಿಸಿದೆ.
ಬೆಳಗಾಗುತ್ತಲೆ ಅದು ಬೇರೆ ಬಣ್ಣ ಪಡೆದಿತ್ತು. ತಕ್ಷಣ ನನಗೆ ಹಿನ್ನೆಲೆ ಹೊಳೆಯಿತು.  ಅವರನ್ನು ದಾಟಿಕೊಂಡು  ಹೋಗುತ್ತಾ ಅಲ್ಲಿದ್ದ   ಹುಡುಗೆಯರನ್ನು ನೋಡಿ ಗುಡ್‌ ಮಾರ್ನಿಂಗ್‌ ಗರ್ಲ್ಸ ಎಂದೆ. ಅವರೂ ಎಂದಿನಂತೆ ಗುಡ್‌ ಮಾರ್ನಿಂಗ್‌ ಸರ್‌,  ಎಂದರು. ನನಗೆ ನಗೆ ಬಂತು.
ನಾನು ಕೋಣೆ ಒಳಗೆ ಹೋಗುವುದು ತಡವಿಲ್ಲ ಆ  ಹುಡುಗೆಯರನ್ನು ಇತರರು ತರಾಟೆಗೆ ತೆಗೆದು ಕೊಂಡರು. ನಿಮಗೆ ಬುದ್ದಿ ಇದೆಯಾ? ನಾವು ಅವರ ವಿರುದ್ಧ ಸ್ಟ್ರೈಕ್‌  ಮಾಡುತಿದ್ದೇವೆ, ಅವರಿಗೆ ಗುಡ್‌ ಮಾರ್ನಿಂಗ್‌ ಹೇಳುವಿರಾ. ಆ ಹುಡುಗೆಯರು ನಾಲಗೆ ಕಚ್ಚಿಕೊಂಡರು. ಆದ ತಪ್ಪನ್ನು ಸರಿ ಪಡಿಸಲು ಜೋರಾಗಿ ಹೆಸರು ಹೆಸರು ಹಿಡಿದು ಡೌನ್ ರ್ಡನ್ ಎನ್ನ ತೊಡಗಿದರು. ಐದು ನಿಮಿಷ ಬಿಟ್ಟು ಹೊರಹೋದೆ.ಸ್ಟಾಫ್ ರೂಂಗೆ ಹೋಗಿ ಮಕ್ಕಳು ಬರಲಿ ಬಿಡಲಿ ತರಗತಿ ಇದ್ದವರು ಹೋಗಿ ಎಂದು ಸೂಚಿದೆ.  ಆಗ ಉಪನ್ಯಾಸಕಿಯರ ತರಗತಿಗೆ ಅವರು ಪುಸ್ತಕ ಹಿಡಿದು ಹೊರಟರು. ಹೈಸ್ಕೂಲು ವಿಭಾಗದಲ್ಲಿ ತೊಂದರೆ ಕಾಣ ಲಿಲ್ಲ. ಮಕ್ಕಳು ತರಗತಿಯಲ್ಲೆ ಇದ್ದರು ಅಷ್ಟರಲ್ಲೆ ಉಪನ್ಯಾಸಕರೊಬ್ಬರು ತರಗತಿಯಲ್ಲಿ ಕುಳಿತಿದ್ದ ಪ್ರಥಮ ಪಿಯುಸಿ ಮಕ್ಕಳನ್ನು ಗದರಿಸಿ ಹೊರಕಳುಹಿಸುವುದು  ಕಾಣಿಸಿತು.
ಇದು ಚಿತಾವಣೆ ಯಿಂದಾಗಿರುವುದು ಎಂದು ಖಚಿತವಾಯಿತು. ನಮ್ಮ ಸಿಬ್ಬಂದಿವರ್ಗದವರು ಯಾರೂ ಮಾತನಾಡಲೂ ಸಿದ್ಧರಿರಲಿಲ್ಲ.
ಪುನಃ ದಿಕ್ಕಾರ ದ ಕೂಗು ಮೊಳಗಿತು. ಹೊರಬಂದು ಮಕ್ಕಳ ಮಧ್ಯೆ ನಿಂತುಕೊಂಡೆ. ಒಂದು ಸಲ ಎಲ್ಲರನ್ನೂ ದಿಟ್ಟಿಸಿ ನೋಡಿದೆ. ಅವರಲ್ಲಿ ಕೆಲವರು ಮುಖ ತಗ್ಗಿಸಿದರು. ಇತರರು ಅತ್ತಿತ್ತ ನೋಡ ತೊಡಗಿದರು
 ನೀವು ಹರತಾಳ ಮಡುತಿರುವಿರಿ . ಓ.ಕೆ. ಆದರೆ ನಿಮ್ಮ ದೂರು ಇರುವುದು ಪ್ರಾಂಶುಪಾಲರ ಮೇಲೆ. ಆದ್ದರಿಂದ ಪ್ರಾಂಶುಪಾಲರಿಗೆ ಡೌನ್ ಡೌನ್‌ ಅನ್ನಿ. ಧಿಕ್ಕಾರ ಕೂಗಿ ಆದರೆ ಹೆಸರು ಹಿಡಿದು ಹೇಳಿದರೆ ನಾನು ಸುಮ್ಮನಿರುವುದಿಲ್ಲ. ಪರಿಣಾಮ ಎದುರಿಸ ಬೇಕಾಗುವುದು ಎಂದು ಎಚ್ಚರಿಸಿದೆ. ಅವರು ಕೂಗುವುದನ್ನು ನಿಲ್ಲಿಸಿದರು
ನಿಮಗೆ ಯಾವುದೆಸಮಸ್ಯೆ ಇದ್ದರೆ ಬಂದು  ಗಮನಕ್ಕೆ ತನ್ನಿ ಇಲ್ಲವೆ  ಬರಹದಲ್ಲಿ ಮನವಿ  ಕೊಡಿ ಪರಿಶೀಲಿಸಬಹುದು.
ನಮ್ಮ ಉಪನ್ಯಾಸಕರಿಗೆ ಕಿರಿಕುಳ ಕೊಡುತ್ತಿರುವರಿ. ಅದಕ್ಕೆ ನಾವು ತರಗತಿಗೆ ಹೋಗುವದಿಲ್ಲ. ಪ್ರತಿಭಟಿಸುತ್ತೇವೆ , ಎಂದು ಮೂರುನಾಲಕ್ಕು ಜನ ಒಟ್ಟಿಗೆ ಹೇಳಿದರು
ತಕ್ಷಣ ನನಗೆ ಹೊಳೆಯಿತು.ಇದು ಉಪನ್ಯಾಸಕರ ಚಿತಾವಣೆ ಎಂದು
ಸರಿ ಇದು ಕಾಲೇಜಿನವರ ಸಮಸ್ಯೆ  ನಿಮಗೆ ಹರತಾಳ ಮಾಡಲು ಯಾವುದೆ ಅಭ್ಯಂತರವಿಲ್ಲ. ಆದರೆ ಹೈಯಸ್ಕೂಲು ಮಕ್ಕಳಿಗೆ ಯಾವುದೆ ತೊಂದರೆ ಯಾಗಲು ನಾನು ಬಿಡುವುದಲ್ಲ. ಎಂದು ಹೇಳಿ  ಜವಾನನಿಗೆ ಕುರ್ಚಿ ತಂದು ಅವರ ಮಧ್ಯದಲ್ಲೆ ಹಾಕಲು ಹೇಳಿದೆ. ನೀವು ಎಷ್ಟು ಹೊತ್ತು ಬೇಕಾದರೂ ಹರತಾಳಮಾಡಿ. ನಾನೂ ನಿಮ್ಮ ಜೊತೆಯೆ ಕೂತಿರುವೆ
ಅವರ ಜೊತೆಯೆ ನನು ಕುಳಿತಾಗ ಇದಕ್ಕೆ ಕಾರಣರಾದ ಉಪನ್ಯಾಸಕರಿಗೆ ಏನೂ ಮಾಡಲೂ ತೋಚದಾಯಿತು. ಅವರು ಹತ್ತಿರ ಬರಲು ಆಗದೆ ಸುಮ್ಮನಿರಲೂ ಆಗದೆ ಚಟಪಡಿಸ ತೊಡಗಿದರು. ನಾನು ಏನೂ ಮಾತನಾಡದೆ ಎಲ್ಲರನ್ನೂ ಗಮನಿಸುತ್ತಾ ಅಲ್ಲಿಯೆ ಕುಳಿತೆ.
ಒಂದೆರಡು ಬಾರಿ ಪ್ರಿನ್ಸಿಪಾಲ್ ಡೌನ್‌ ಡೌನ್ ಎಂದು ಕೂಗಿದರು. ನಾನು ಯಾವುದೆ ಪ್ರತಿಕ್ರಿಯೆ ನೀಡಲಿಲ್ಲ
 ಅರ್ಧ ಗಂಟೆಯಾಯಿತು. ಮುಕ್ಕಾಲು ಗಂಟೆಯಾಯಿತು ಯಾವುದೆ ಬೆಳವಣಿಗೆ ಯಾಗಲಿಲ್ಲ. ಹಯಸ್ಕೂಲಿನ ಮೊದಲ ಪಿರಿಯಡ್‌ ಮುಗಿದು ಎರಡನೆ ಪಿರಿಯಡ್‌ ಪ್ರಾರಂಭ ವಾಯಿತು. ತರಗತಿಗಳು ಯಥಾ ಪ್ರಕಾರ ಸಾಗಿದವು..
ಅಷ್ಟರೊಳಗೆ ಕಾಲೆಜು ಅಭಿವೃದ್ಧಿ ಸಮಿತಿಯ ಸದಸ್ಯರು ಒಬ್ಬೊಬ್ಬರಾಗಿ ಬಂದು ಸೇರಿದರು. ತಾಲೂಕಭಿವೃದ್ಧಿ ಮಂಡಳಿಯ ಉಪಾದ್ಯಕ್ಷೆಯೂ ಬಂದರು. ನಾನು ಸುಮ್ಮನೆ ಕುಳಿತಿದ್ದೆ.ಅವರೆ ಮುಂದಾಗಿ ಇಲ್ಲಿ ಏಕೆ ಕುಳಿತಿರುವಿರಿ ಸಭೆ ಸೇರಿಸಿ ಎಲ್ಲವಿಚಾರಿಸೋಣ ಅವರ ದೂರು ಏನೋ ಪರಿಶೀಲಿಸೋಣ , ಎಂದರು
ಎಲ್ಲ ವಿದ್ಯಾರ್ಥಿಗಳ ಸಭೆ ಸೇರಿತು. ಉಪನ್ಯಾಕರನ್ನೂ ಬರ ಹೇಳಿದೆ. ಅಷ್ಟರಲ್ಲಿ  ಉಪನ್ಯಾಸಕರೊಬ್ಬರು ಹುಡುಗೆಯರ ಜತೆ ಗುಸು ಗುಸು ಪಿಸ ಪಿಸ ಮಾತನಾಡುವುದೂ ಕಂಡುಬಂತು. ಅವರನ್ನೂ ಕರೆಸಿದರು.
ಎಲ್ಲರೂ ಕುಳಿತಾದ ಮೇಲೆ ಹರತಾಳದ ಕಾರಣ  ಕೇಳಿದರು. ಯಾರೂ ಉತ್ತರ  ಕೊಡುವ ಪ್ರಯತ್ನ ಮಾಡಲೆ ಇಲ್ಲ. ಆಗ ನಾನು ಕಳೆದೆರಡು ದಿನ ನಡೆದಘಟನೆ ವಿವರಿಸಿದೆ. ಅಶಿಸ್ತನ್ನು ಸಹಿಸಲು ಸಾಧ್ಯವಿಲ್ಲ ಎಂದುಖಡಾಖಂಡಿತವಾಗಿತಿಳಿಸಿದೆ. ಅಷ್ಟರಲ್ಲಿ ಹಡುಗರಲ್ಲಿ ಒಬ್ಬರು ಪ್ರಿನ್ಸಿಪಾಲರು ಹುಡುಗೆಯರ ಜೊತೆ ಅಸಭ್ಯವಾಗಿ ವರ್ತಿಸುವರು ಅದಕ್ಕೆ ನಾವು ಹರತಾಳ ಮಾಡಿರುವೆವು. ಎಂದು ಹೇಳಿದ
 ನನಗೆ ಇನ್ನಿಲ್ಲದ ಕೋಪ ಉಕ್ಕಿತು. ಇದುವರೆಗೂ ಇಲ್ಲದ ವಿಷಯ ಈಗ ತಲೆ ಎತ್ತಿತು. ತಕ್ಷಣ ನಾನು ಕೆರಳಿ ನಿಂತೆ. ಕಾಲಲ್ಲಿದ್ದ ಚಪ್ಪಲಿಯನ್ನು ಮೇಜಿನ ಮೇಲೆ ಇಟ್ಟು ಹೇಳಿದೆ. ಈ ಆಪಾದನೆ ಮಾಡುವವರು  ಅದನ್ನು ಸಾಕ್ಷಿ ಸಮೇತ ಸಾಬೀತು ಮಾಡಲಿ. ಆಗ ಇದೆ ಚಪ್ಪಲಿಯಿಂದ ನನಗೆ ಹೊಡೆಯಿರಿ, ನಾನು ಕೆಲಸಕ್ಕೆ  ರಾಜಿನಾಮೆ ಕೊಟ್ಟು ಹೋಗುವೆ. ಇಲ್ಲದಿದ್ದರೆ ಆಪಾದನೆ ಮಾಡುವವರನ್ನು ಅದಕ್ಕೆ ಪ್ರಚೋದನೆ ನೀಡಿದವರನ್ನೂ ಇದೆ ಚಪ್ಪಲಿಯಿಂದ ಹೊಡೆಯುವೆ. ಎಂದುಘರ್ಜಿಸಿದೆ.
ಸಭೆಯಲ್ಲಿ ನೀರವ ಮೌನ ನೆಲಸಿತು. ಯಾರಿಗೂ ದನಿ ಎತ್ತಲು ಧೈರ್ಯವೆ ಇರಲಿಲ್ಲ. ಕೊನೆಗೆ ಅಲ್ಲಿಸೇರಿದ್ದ ಹಿರಿಯರು ಪ್ರಿನ್ಸಿಪಾಲರೆ ಕೋಪ ಮಡಿಕೊಳ್ಳ ಬೇಡಿ, ಹುಡುಗರು ಏನೋ ತಪ್ಪು ಮಾತನಾಡಿದ್ದಾರೆ.ಇಂಥಹ ಮಾತನಾಡಬಾರದು. ಎಂದು ಮೊದಲಾಗಿ ಸಮಾಧನ ಮಾಡಿದರು. ಉಪನ್ಯಾಸಕರು ತಗ್ಗಿಸಿದ ತಲೆ ಎತ್ತಲಿಲ್ಲ..
ಕೊನೆಗೆ ನಾನೆ ಹೇಳಿದೆ. ಆದದ್ದಾಯಿತು. ಇನ್ನು ತರಗತಿಗೆ ಹೋಗಿ. ಈ ರೀತಿಯ ವರ್ತನೆ ಸಹಿಸಲು ಸಾಧ್ಯವೆ ಇಲ್ಲ ಮಾತಿನ  ಮತ್ತು ನಡತೆಯ ಮೇಲೆ ಹಿಡಿತವಿರಲಿ. ಆದರೆ
ಇಂದು ತರಗತಿ ಬೇಡ . ನಾಳೆ ಬನ್ನಿ ,ಎಂದು ನುಡಿದೆ.
ಎಲ್ಲರೂ ಜಾಗ ಖಾಲಿ ಮಾಡಿದರು.
ಮನೆಗೆ ಹೋದಾಗ ನನಗೆ ಒಂದು ಸುದ್ಧಿ ಕಾದಿತ್ತು. ಯಾರೋ ಒಬ್ಬ ಹುಡುಗಿ ನಮ್ಮ ಮನೆಗೆ ಫೋನು ಮಾಡಿ “ ಪ್ರಿನ್ಸಿಪಾಲರಿಗೆ ಹುಚ್ಚು ಕೆರಳಿದೆ, ಕೇಗೆ ಹೇಗೋ  ಮಾತ ನಾಡುತಿದ್ದಾರೆ.ಮನೆಯಲ್ಲಿಯೂ ಎಚ್ಚರದಿಂದ ಇರಿ , ಎಂದು ಮಾಹಿತಿ ಬಿತ್ತರಿಸಿದಳಂತೆ. ಹಿಂದಿನ ದಿನದ ಘಟನೆ ಮನೆಯಲ್ಲಿ  ತಿಳಿಸಿದ್ದೆ.  ಅವರು , ಅಮ್ಮಾ ತಾಯಿ, ಏನಾಗಿದೆ ?  ನಿನ್ನ ಹೆಸರು ಹೇಳು, ಎಂದಾಗ ಹೆಸರು ಏಕೆ ?  ನಿಮಗೆ ವಿಷಯತಿಳಿಸಿರುವೆ ಎಂದು ಫೋನು ಇಟ್ಟಳಂತೆ
ನಮ್ಮ ಮನೆವರಯ ಏನೋ ನಡೆದಿದೆ. ಅದಕ್ಕೆ ಹೀಗೆ ಅನಾಮಧೇಯ ದೂರವಾಣಿ ಬಂದಿದೆ.  ಹಾಗೇನಾದರೂ ಆಗಿದ್ದರೆ ಕಾಲೆಜಿನವರೆ ಯರಾದರೂ ತಿಳಿಸುತಿದ್ದರು . ಇದು ಕಿಡಿಗೇಡಿಗಳ ಕೆಲಸ ಎಂದುಕೊಂಡರು
ನಾನು ನಡೆದುದನ್ನು ತಿಳಿಸಿದೆ. ಕೇಳಿ ಚೆನ್ನಾಗಿ ನಿರ್ವಹಿಸಿದಿರಿ. ಬರಿ ಹೊಡಯುವೆ ಎಂದಿರಿ. ಹೊಡೆಯಲಿಲ್ಲವಲ್ಲಾ  ಅದೇ ಪುಣ್ಯ ., ಎಂದರು.
ಆಹಾ! ನಾನೆ ಧನ್ಯ.ಗಂಡನಿಗೆ ತಕ್ಕ ಹೆಂಡತಿ ಎಂದು ಬೆನ್ನುತಟ್ಟಿಕೊಂಡೆ. 


Tuesday, June 25, 2013

ಕುವೆಂಪು ಅವರ -ಮಲೆಯಲ್ಲಿ ಮದುಮಗಳು

ಮಲೆಯಲ್ಲಿ ಮದುಮಗಳು-ನಾಟಕ

ಕುವೆಂಪುವವರ   “ಮಲೆಗಳಲ್ಲಿ ಮದುಮಗಳು”  ಒಂದು . ಬೃಹತ್‌ ಕಾದಂಬರಿ ಅದರ ವ್ಯಾಪ್ತಿ ಬಹು ಹಿರಿದು. ಕಾದಂಬರಿಯ ಮೊದಲಲ್ಲೇ ಅದರ ಆಶಯ ವ್ಯಕ್ತವಾಗಿದೆ.   “ .ಇಲ್ಲಿ ಯಾರೂ ಮುಖ್ಯರಲ್ಲ , ಯಾರೂ ಅಮುಖ್ಯರಲ್ಲ, ಮೊದಲಿಲ್ಲ , ತುದಿಇಲ್ಲ   ,ಅವಸರವು ಸಾವಧಾನದ ಬೆನ್ನೇರಿದೆ, ಎಲ್ಲಕ್ಕೂ ಇದೆ ಅರ್ಥ, ಯಾವುದೂ ಅಲ್ಲ ವ್ಯರ್ಥ, ನೀರೆಲ್ಲ ವೂ ತೀರ್ಥ “ ಎಂಬ   ಆಶಯವು ಸಾವಕಾಶವಾಗಿ  ಕಾದಂಬರಿಯ ಉದ್ದಕ್ಕೂ ಬಿಚ್ಚಿಕೊಳ್ಳುತ್ತಾ ಹೋಗುವುದು..
 ಮಲೆಗೆ ಮನುಷ್ಯರಷ್ಟೆ ಪ್ರಾಮುಖ್ಯತೆ ಇದೆ.. ಅಥವ ತುಸು ಹೆಚ್ಚೇ ಇದೆ. ಮಳೆ. ಗಾಳಿ,ಮಲೆ , ನೀರು . ಇಂಬಳ. ಹಂದಿ , ಚಿರತೆ,ನೀರು ನಾಯಿ ಎಲ್ಲವೂ .ಎಲ್ಲವೂ ಪಾತ್ರಗಳೇ.. ಶೀರ್ಷಿಕೆಯಲ್ಲಿ ಮದುಮಗಳು  ಎಂದಿರುವುದರಿಂದ ಸಹಜವಾಗಿ  ಮದುಮಗಳಾಗಿರುವ ಚಿನ್ನಮ್ಮ ಮತ್ತು ಅವಳ ಪ್ರಿಯಕರ ಮುಕುಂದೆಗೌಡರ  ಕಥೆ ಮಾತ್ರ  ಎಂದುಕೊಂಡರೆ ಕಥೆಯ ಆತ್ಮವೇ ಕಳೆದು ಹೋಗುವುದು. ಮದುಮಗಳಿಗಿಂತ ಮೊದಲು ಬರುವುದು ಮಲೆ, ಅಲ್ಲಿನ ಪ್ರಾಣಿ ,ಪಕ್ಷಿಗಳು, ರೀತಿರಿವಾಜುಗಳ ಅಲ್ಲಿರುವ ಸಾಮಾಜಿಕ ವೈವಿದ್ಯತೆ,  ವೈರುಧ್ಯ . ಪ್ರೇಮ . ಕಾಮ, ದ್ವೇಷ , ಅಸೂಯೆ, ಬಡತನ ಸಿರಿತನ ,ಊಳಿಗಮಾನ್ಯ ಸಂಸ್ಕೃತಿ ಮತ್ತು ಜೀತದಾಳುಗಳ ಜೀವನ ಚಿತ್ರಣ..ಹೀಗೆ ಮಲೆನಾಡಿನ ವಿಶ್ವರೂಪ ದರ್ಶನ ಮಾಡಿಸುವ ಕಥೆಯನ್ನು ದೃಶ್ಯರೂಪದಲ್ಲಿ ಸರೆ ಹಿಡಿಯುವುದು ಮುಷ್ಠಿಯಲ್ಲಿ ಸೃಷ್ಠಿಯನ್ನು ಹಿಡಿದಿಡುವ  ಪ್ರಯತ್ನವಾಗಿದೆ.ಸುಮಾರು ಏಳುನೂರು ಕ್ಕೂ ಹೆಚ್ಚು ಪುಟಗಳಿಗೂ ಹೆಚ್ಚಿರುವ  ಕಾದಂಬರಿಯನ್ನು ಅಂದಾಜು ಒಂಬತ್ತು ಗಂಟೆಯ  ಅವಧಿಯೊಳಗೆ ನಾಟಕ ಮಾಡುವುದು ಒಂದು 

ಮಹಾತ್ವಾಂಕಾಕ್ಷೆಯ ಯೊಜನೆಯೇ ಸರಿ. ಆದರೆ ಖ್ಯಾತ ರಂಗ ನಿರ್ದೇಶಕ ಸಿ . ಬಸವಲಿಂಗಯ್ಯ ತಮ್ಮ ಪ್ರಯತ್ನದಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ. ಹತ್ತಿರ ಹತ್ತಿರ ೭೫ ಕಲಾವಿದರನ್ನು ಬಳಸಿಕೊಂಡು  ನಾಲ್ಕು ರಂಗಮಂಟಪಗಳಲ್ಲಿ ಮಲೆ ನಾಡಿನ ಸೊಬಗನ್ನು ಅನಾವರಣ ಗೊಳಿಸಿರುವರು ಕೆರೆ, ಕಾಡು,ಹುಲಿನೆತ್ತಿ ಮತ್ತು ಮನೆಯೊಳಗಣ ದೃಶ್ಯಾವಳಿಗಳ ಹಿನ್ನೆಲೆ ಒದಗಿಸಿರುವರು.ಈ ಮೊದಲು ಮೈಸೂರಿನಲ್ಲಿ ರಂಗಾಯಣಕಲಾವಿದರನ್ನು ಬಳಸಿಕೊಂಡು ಯಶಸ್ವಿಯಾಗಿದ್ದ ಪ್ರಯೋಗವನ್ನು ಬಹುತೇಕ ಹೊಸಬರ ನ್ನೆ ಬಳಸಿಕೊಂಡು ಅದು ಬಹಳ ಕಡಿಮೆ ಸಮಯದಲ್ಲಿ ನಾಟಕ ಸಿದ್ಧವಾಗಿದೆ
ಇಲ್ಲಿ ಕಥೆಯು ಮೂರು ಜೋಡಿಗಳ ಸುತ್ತ ಹೆಣೆಯಲಾಗಿದೆ. ಮೂರು ಸಮಾಜದ ವಿಭಿನ್ನಸ್ಥರಕ್ಕೆ  ಸೇರಿದವರು , ಭೂಮಾಲಿಕರಾದ ಹಗಡೆ, ಕಾರ್ಮಿಕರಾದ ಶೂಧ್ರರು ಮತ್ತು ಜೀತದಾಳಗಿರುವ ಹೊಲೆಯರು. ಆದರೆ ಸಾರ್ವತ್ರಿಕವಾದ ಪ್ರೇಮಪಯಣದಲ್ಲಿ ಈ ಎಲ್ಲ ವಿಭಿನ್ನತೆಗಳು ಮಾಯವಾಗಿ ಪರಸ್ಪರ ಸಹಕರಿಸುವ ಒತ್ತಾಸೆ ಕೊಡುವರು.
 ನಾಟಕ ಶುರುವಾಗುವುದೇ ಗುತ್ತಿಯಿಂದ , ಗುತ್ತಿ ಪ್ರಕೃತಿಯ ಕೈಗೂಸು. ಅವನಿಗು ನಾಯಿ ಹುಲಿಯನಿಗೂ ಅವಿನಾವಭಾವ ಸಂಬಂಧ.ಅದಕ್ಕೆ ಅವನನ್ನು ನಾಯಿ ಗುತ್ತಿ ಎದೇ ಕರೆಯುವರು.ಅವನು ತನ್ನ ಮವನ ಮಗಳು ತಿಮ್ಮಿಯನ್ನು ಹಾರಿಸಿ ಕೊಂಡು ಹೋಗುವ ಪ್ರಯತ್ನದಿಂದ ನಾಟಕ ಮೊದಲಾಗುವುದು ಮಧ್ಯದಲ್ಲಿ ಮುಕುಂದೇಗೌಡ ಮತ್ತು ಚಿನ್ನಮ್ಮರ ಪ್ರೇಮ ಪ್ರಸಂಗ.ಅದು ಫಲಪ್ರದವಾಗಲು ಸಹಾಯ ಮಾಡುವುದು ಇನ್ನೊಂದು ಜೊಡಿ ಐತ ಮತ್ತು ಪಿಂಚಲು. ಈ ಮೂರು ಜೋಡಿಗಳು ಓಂದಾಗುವದರೊಂದಿಗೆ ಕಥೆ ಮುಗಿಯುವುದು.
ಇನ್ನು ಮವನಲ್ಲಿರುವ ಮೃಗ ವಾಂಛೆಯ ಚಿತ್ರಣಕ್ಕೆ ಸಹಾಯ ನೀಡುವವರು ಕಾವೇರಿ ಮತ್ತು ನಾಗಕ್ಕ., ಕಾವೇರಿಯ ತಾಯಿ ಅಂತಕ್ಕನಿಸ್ಸಾಹಾಯಕಳು. ಯಾವುದೇ ಆಸರೆ ಇಲ್ಲ ಅದೇ ಮಾತು ಅತ್ತೆ ಸೊಸೆಯರಾದ ನಾಗಮ್ಮ,ನಾಗಕ್ಕರಿಘೂ ಅನ್ವಯವಾಗುವುದು. ಅವರು  ತಮ್ಮಿಬ್ಬರ ಜೀವನ ಸಾಗಿಸಲು ಇಬ್ಬರು ಯುವತಿಯರನ್ನು ಬಳಸಿಕೊಳ್ಳುವರು.. ಕೊನೆಗೆ ಕಾವೇರಿಯಪ್ರಾಣಕ್ಕೆ ಕುತ್ತು ಬರುವುದು. ಕುಂಟ ವೆಂಕಟಪ್ಪನಿಗೆ ಸೊಸೆಯನ್ನು ಒಪ್ಪಿಸುವ ದುಸ್ಸಾಹಸದಲ್ಲಿ ಅತ್ತೇಯೇ ತುತ್ತಾಗುವ ವಿಪರ್ಯಾಸವಂತೂ ವಿಡಂಬನೆಯ ಪರಮಾವಧಿಯಾಗಿದೆ.


ಉಳ್ಳವರ ಶೋಷಣೆಗೆ ಸಾಧನವಾಗಿರುವ ಹೊನ್ನಾಳಿ ಸಾಬರು, ಸುಧಾರಣೆಯ ಹೆಸರಲ್ಲಿ ಜನರ ಮೌಢ್ಯವನ್ನು ಬಳಸಿಕೊಂಡು ಮತಾಂತರಕ್ಕೆ ಯತ್ನಿಸುವ. ಪಾದ್ರಿ ಜೀವರತ್ನಂ, ಅವರು ನೀಡುವ ಕಾಸಿನ ಆಸೆಗೆ ಕುಣಿಯುವ ಸೆರಿಗಾರ ವೆಂಕಪ್ಪಯ್ಯ, ದೇವಯ್ಯ, ದುರಾಸೆಯ ತಿಮ್ಮಪ್ಪ ಕಥೆಯ ಓಟವನ್ನು ಹೆಚ್ಚಿಸಿ,  ಕುತೂಹಲ ಮೂಡಿಸುವ ಮತ್ತು  ಕೆಲವುಸಲ ನಗೆ ಉಕ್ಕಿಸುವಲ್ಲಿ ಯಶಸ್ವಿಯಾಗುವರು..
ಎಲ್ಲ ವರ್ಗಗಳ ಪಾತ್ರಗಳು ರಂಗದ ಮೇಲೆ ಬರುತ್ತವೆ. ಆಶೆಬುರುಕ ಬ್ರಾಹ್ಮಣ, ದರ್ಪದ ಭೂಮಾಲಿಕರು, ಶ್ರಮಿಕರಾದ ಬಿಲ್ಲವರು, ಜೀತಮಾಡುವ ಹೊಲೆಯರು, ಸಾಲವಸೂಲಿಗೆ ಭೂಮಾಲಿಕರ ದಾಳಗಳಾಗಿ “ ಹೊನ್ನಾಳಿ ಹೊಡತ “  ನೀಡಿ ನಡುಕ ಹುಟ್ಟಿಸುವ ಕಠಿನ ಹೃದಯಿ ಸಾಬರು,ನಯವಂಚಕರಾದ ಕಿಲಿಸ್ತಾನರು’ರಂಗದ ಮೇಲೆ ರಂಜಿಸುವರು.
ಇನ್ನು ಸ್ತ್ರೀ ಪಾತ್ರಗಳಲ್ಲಿ ನಾಯಕನ ಪ್ರೇಮ ಸಂದೇಶದ ವಾಹಕಿಯಾದ ಪಿಂಚಲು. ತನ್ನ ಚಿನಕುರುಳಿ ಮಾತಿನಿಂದ ರಸಿಕ ದಾಂಪತ್ಯ ಜೀವನದ ಸೆಳಕುಗಳಿಂದ ರಂಗಸ್ಥಳದಲ್ಲಿ ಮಿಂಚುವಳು.
ನಾಟಕದಲ್ಲಿ ನಿಸರ್ಗದ ಪಾತ್ರ ಬಹಳ ಹಿರಿದು .ಅದನ್ನು  ಬಿಂಬಿಸಲು ಬೆಟ್ಟ, ಕೆರೆ ,ಕಾಡು ಗಳನ್ನು ಬಳಸಲಾಗಿದೆ. ಹುಲಿಕಲ್ಲಿನ ಪಾತ್ರ ಬಹಳ   ಪ್ರಮುಖವಾಗಿದೆ. ರಂಗಸಜ್ಜಿಕೆಯಲ್ಲಿ  ಅದನ್ನು ಬಿಂಬಿಸುವಲ್ಲಿ ಯಶ ದೊರಕಿದೆ... ಹುಲಿಯ, ಇಂಬಳ, ಏಡಿ ಹಿಡಿಯುವುದು, ಹಂದಿ ಬೇಟೆ, ಚಿರತೆಯೊಡನೆ ಹೊರಾಟ  ಕಪ್ಪೆಗಳು, ಕ್ರಿಮಿಕೀಟಗಳ ಧ್ವನಿ ಸೂಕ್ತ ಹಿನ್ನೆಲೆ ಒದಗಿಸಿ ತಕ್ಕ ಮಟ್ಟಿಗೆ ಮಲೆಯ ಅನುಭವ ಕೊಡುತ್ತವೆ.
ಗುತ್ತಿ ನಾಯಿಯ ಇಂಬಳ ಕೀಳುವುದು,ಪಾದ್ರಿ ಬೀಸಕಲ್ಲು ಸವಾರಿಯ ತರಬೇತಿ ನೀಡುವುದು, ಐಗಳ ಶಾಲೆಯಲ್ಲಿ ಮಕ್ಕಳ ಕಲಿಕೆ, ಪಿಂಚಲು ಮತ್ತು ಚಿನ್ನಮ್ಮ ದಾಂಪತ್ಯಜೀವನದ ಬಗ್ಗೆ ಚರ್ಚಿಸುವುದು, ಪಾದ್ರಿಯ ಮಾತು, ಕೊನೆಯಲ್ಲಿ ಧರ್ಮಾಂತಾಂತರ ಮಾಡುವ ಸನ್ನಿವೇಶ , ಹೊನ್ನಾಳಿ ಸಾಬರ ಕುದುರೆ ಕುಣಿತ, ನಗೆ ಉಕ್ಕಿಸುವಲ್ಲಿ ಯಶಸ್ವಿಯಾಗುವವು..
ಕಾವೇರಿಯ ದುರಂತ, ಹುಲಿಯನ ಸಾವು ಸುಬ್ಬಯ್ಯ ಹೆಗಡೆಯ  ಕಾಣೆಯಾದ ಮಗನ ಹುಡುಕಾಟ,, ವೆಂಕಟಪ್ಪನಾಯಕನ ವಿಪ್ರಲಂಭ ಶೃಂಗಾರ, ತಾಯಿ ಸತ್ತಾಗಿನ ಧರ್ಮುವಿನ ರೋಧನ ಮನ ಮುಟ್ಟುವಂತೆ ಮೂಡಿಬಂದಿವೆ.
ಇನ್ನು ನಟನೆಯ ವಿಷಯದಲ್ಲಿ ಎದ್ದು ಕಾಣುವುದು ಮಾನವ ಪಾತ್ರವಲ್ಲ. ಅದು ನಾಯಿ ಹುಲಿಯ.ನಂತರದ ಸ್ಥಾನ  ಗುತ್ತಿ , ಪಿಂಚಲು , ಐತ, ವೆಂಕಟಪ್ಪನಾಯಕ ಮತ್ತು  ಸುಬ್ಬಯ್ಯ ಹೆಗಡೆಯವರದು. ಉಳಿದ ಪಾತ್ರಗಳು ಪರವಾಇಲ್ಲ ಎನ್ನಬಹುದು. ಅದಕ್ಕೆ ಕಾರಣವೂ ಇದೆ ಆರೆಂಟುಜನರನ್ನು ಬಿಟ್ಟರೆ ಉಳಿದೆಲ್ಲರೂ ಹೊಸಬರೇ. ಅವರಿಗೆ ಕಡಿಮೆ ಅವಧಿಯಲ್ಲಿ ತರಬೇತಿ ನೀಡಿ ಒಂದಲ್ಲ ನಾಲ್ಕು ರಂಗಸ್ಥಳಗಳಲ್ಲಿ ಚಲನ ವಲನ ನಿರ್ವಹಿಸಲು ಕಲಿಸುವುದು ಸರಳವಾದ ಕೆಲಸವಲ್ಲ.  ಆ ಹಿನ್ನೆಲೆಯಲ್ಲಿ ನಿರ್ಧೇಶಕರ ಯಶಸ್ವಿಯಾಗಿರುವರು ಎನ್ನ ಬಹುದು.
ಇನ್ನು ನಾಟಕೀಕರಣಕ್ಕೆ ಬಂದರೆ ಇಷ್ಟು ಬೃಹತ್ತಾದ ಕಥೆಯನ್ನು ಒಂದು ಸೂತ್ರದಲ್ಲಿ ಅಸಹಜವಾಗದಂತೆ ಅಳವಡಿಸುವುದು ಬಹಳ ಕಠಿನ ಕೆಲಸ, ಅದಕ್ಕಾಗಿಯೇ ಒಂದುವಿಶೇಷ  ತಂತ್ರವನ್ನು ಬಳಸಿದ್ದಾರೆ. ಕಾದಂಬರಿಯಲ್ಲಿ ಗೊಸಾಯಿಗಳ ಕುರಿತಾದ ಸೂಚನೆಳು ಇವೆ.ಅದನ್ನು ನಾಟಕದಲ್ಲಿ   ನಿರೂಪಕರಾಗಿ ಬಳಕೆ  ಮಾಡಿದೆ.  ಪ್ರಾರಂಭದಲ್ಲಿ ಜೋಗಪ್ಪಗಳು, ನಂತರ ಗೊಸಾಯಿಗಳು, ಸುಡುಗಾಡು ಸಿದ್ದರು ಮತ್ತು ಹೆಳವರು ಕಥೆಯ ಕೊಂಡಿ ಬೆಸೆಯುವಲ್ಲಿ ಯಶಗಳಿಸಿದ್ದಾರೆ.ಆರಂಭದಲ್ಲಿ ಬರುವ ಸುಡುಗಾಡುಸಿದ್ದರು ಮತ್ತು ಗೋಸಾಯಿಗಳು ಹೊರನಿಂತು  ಕಥೆ ನಿರೂಪಿಸಿದರೆ . ಹೆಳವರು ವಂಶಾವಳಿಯ ನಿರೂಪಕರಾಗಿ ಕಥೆಯೊಡನೆ ಒಂದಾಗುವರು ಸುಡಗಾಡುಬಸಿದ್ದರಂತೂ ಜರಗುತ್ತಿರುವ ದುರಂತ ನಾಟಕದ ಸಾಕ್ಷಿಪ್ರಜ್ಞೆಯಾಗುವರು.
ಇನ್ನು ರಂಗಸಜ್ಜಿಕೆ ಬಹುತೇಕ ನಾಟಕದ ನೆಡೆಗೆ ಪೂರಕವಾಗಿದೆ. ಸಂಗೀತವು ಕಾಡಿನ ದನಿಗಳನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಪದೇ ಪದೇ ಹೇಳುವಂತೆ ಇಲ್ಲಿ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ. ನೆಳಲು ಬೆಳಕಿನ ಹೊಂದಾಣಿಕೆ ಸಾಕಷ್ಟು ಚೆನ್ನಾಗಿದೆ. ಸಾಧ್ಯವಾದರೆ ಮಳೆಯ ಪರಿಣಾಮ ತೋರಿಸಬಹುದಿತ್ತು. ಮಲೆ ನಾಡಿನಲ್ಲಿ ಮಳೆಯದು ಬಹು ಮುಖ್ಯ ಪಾತ್ರ. ಕನಿಷ್ಠ ಧ್ವನಿಯ ಮೂಲಕವಾದರು ತೋರಿಸಿದ್ದರೆ ಇನ್ನು ಹೆಚ್ಚು ಪರಿಣಾಮಕಾರಿಯಾಗಬಹುದಿತ್ತು  ಬಹಶಃ ಆಧುನಿಕ ತಂತ್ರಜ್ಞಾನದ ಬಳಕೆ ಮಾಡಿ ಧ್ವನಿ ಮತ್ತು ಬೆಳಕಿನ ಪರಿಣಾಮಗಳನ್ನು ಇನ್ನೂ ಉತ್ತಮವಾಗಿ ಮೂಡಿಸ ಬಹುದಾಗಿತ್ತು ಎನಿಸುವುದು ಸಹಜ. 


ಬಯಲು ರಂಗಮಂದಿರದ ಪ್ರಯೋಗ ನಮಗೆ ಹೊಸದೇನೂ ಅಲ್ಲ ನಮ್ಮಲ್ಲಿ ಹಿಂದೆ ಬಯಲಾಟ, ಯಕ್ಷಗಾನಗಳು ರಾತ್ರಿ ಇಡೀ ಜರಗುತಿದ್ದವು ಚಾಪೆ, ಕಂಬಳಿ , ಹೊರಸು ಸಮೇತ ಹೊಗಿ ಬೆಳಗಾಗುವ ತನಕ ನೋಡುವವರೂ  ಇದ್ದರು ಗಡದ್ದು ನಿದ್ರೆ ಮಾಡುವವರೂ ಇಲ್ಲದಿರಲಿಲ್ಲ. ರವೀಂದ್ರ ಕಲಾಕ್ಷೇತ್ರದಲ್ಲೂ ಹಲವು ದಶಕಗಳ ಹಿಂದೆಯೇ ಸಂಸ  ಬಯಲುರಂಗ ಮಂದಿರ ರೂಪಗೊಂಡು ಅನೇಕ ನಾಟಕಕಗಳ  ಯಶಸ್ಸಿ ಪ್ರಯೋಗ ಕಂಡವು. ಆದರೆ ಇಲ್ಲಿನ ವಿಶೇಷವೆಂದರ ಇಲ್ಲಿರುವ ರಂಗ ಮಂಟಪ ಒಂದಲ್ಲ , ನಾಲಕ್ಕು. ಅದು ದೂರ ದೂರದಲ್ಲಿ.  ಸುಮಾರು ನೂರರಷ್ಟು ನಟರು ಮತ್ತು ರಂಗಕರ್ಮಿಗಳ 
ಸಕ್ರಿಯಪಾಲುಗೊಳ್ಳುವಿಕೆ. ಮೂರನೆಯದಾಗಿ ಮೂರು ಮಧ್ಯಂತರಗಳೊಂದಿಗೆ ರಾತ್ರಿ ಪೂರ್ತಿ ನಾಟಕ. ಒಂದು ರೀತಿಯಲ್ಲಿ ಶಿವರಾತ್ರಿ ಜಾಗರಣೆಯ ನೆನಪು ತಂದಿತು.ಕೃತಿಯ ಸಂಕೀರ್ಣತೆ ಮತ್ತು ವ್ಯಾಪ್ತಿಯನ್ನು ಪರಿಗಣಿಸಿದರೆ ರಂಗಪ್ರಯೋಗವು ಒಂದು ಸಾಹಸವೇ ಸರಿ. ಮಲೆನಾಡಿನ ಪರಿಸರ ಸೃಷ್ಠಿಸುವಲ್ಲಿ  ಪ್ರಯೋಗ  ಯಶಸ್ವಿಯಾಗಿದೆ. . ಇಂಥಹ ಪ್ರಯೊಗಗಳು  ಸ್ವಾಗಾತಾರ್ಹ, ಕಾರಣ ಜನರೂ ಪ್ರಭಾವಿತರಾಗಿರುವರು. ಅದೂ ನಾಗರ  ಭಾವಿಯಲ್ಲಿ ನಡೆದರೂ ಟಿಕೆಟ್‌ಗಳು ಬಿಸಿದೋಸೆಯಂತೆ ಖರ್ಚಾಗಿ ಅನೇಕ ಆಸಕ್ತರು ನಿರಾಶರಾಗಿ ನಿಂತು ನೋಡವೆವು ಎಂದು ಮನವಿ ಮಾಡಿಕೊಳ್ಳುತಿದ್ದು ಕಂಡು ಬಂದಿರುವುದು ಅದರ ಜನಪ್ರಿಯತೆಯ ದ್ಯೋತ್ಯಕ.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಈ ಪ್ರಯತ್ನ ಅಭಿನಂದನೀಯ. ಆದರೆ ಇದು ಪ್ರಾಂರಂಭ ಮಾತ್ರ.. ಕೊನೆಯಾಗಬಾರದು ಎಂಬುದು ನೋಡುಗರ ಆಶಯ ಸಿನೆಮಾ , ಟಿವಿ ಮತ್ತು ಅಂತರ್‌ಜಾಲ ಯುಗದಲ್ಲೂ ಜನ ನಾಟಕ ನೋಡಲು ಮುಕುರಿದ್ದರು  ಈ ಕುರಿತು ಸಂಘ ಸಂಸ್ಥೆಗಳು, ರಂಗಾಸಕ್ತರೂ ಮತ್ತು ರಂಗಕರ್ಮಿಗಳು.ಚಿಂತನೆ ನಡೆಸಲಿ

Thursday, June 13, 2013

ಆರರಿಂದ ಅರವತ್ತು ಸರಣಿ- ಶಾಲೆಯಲ್ಲಿ ಸಕಾಲ

ಬಟವಾಡೆ, ವಾರಕ್ಕೋ ? ತಿಂಗಳಿಗೋ ?
ಬಂಗಾರದ ನಾಡಿನ  ಕಾಲೇಜಿಗೆ  ಬಂದ ದಿನವೆ  ಎದುರಾದ ಸಮಸ್ಯೆಯನ್ನು ಬಗೆ ಹರಿಸಲು ಒಂದುವಾರ ಬೇಕಾಯಿತು.ಅಲ್ಲಿ ಕಾಂಪ್ಯೂಟರ್‌   ಜತೆ ಎಲೆಕ್ಟ್ರಿಕಲ್‌, ಆಟೋ ಮೊಬೈಲ್‌  ಕೋರ್ಸುಗಳಿದ್ದವು.ಕಾಂಪ್ಯೂಟರ್‌ ಕೋರ್ಸಿಗೆ ಬಹಳ ಬೇಡಿಕೆ ಆದರೆ ಉಳಿದೆಲ್ಲವಕ್ಕೂ ಅಂಥಹ ಬೇಡಿಕೆ ಇರಲಿಲ್ಲ. ಆದರೂ ಎಲ್ಲವನ್ನು ಮೀಸಲಾತಿಯಂತೆಯೆ ಮಾಡಲು ಸೂಚಿಸಿದೆ. ಕೊನೆಯ ದಿನಾಂಕದ ವರೆಗೆ ಕಾದು ಕಾಯ್ದಿರಿಸಿದ ಸೀಟುಗಳನ್ನು ಭರ್ತಿ ಮಾಡಲಾಯಿತು.
ನಮ್ಮದು ಆ ಭಾಗದಲ್ಲೆ ಹಳೆಯ ಸಂಸ್ಥೆ.ಹಳೆಯ ಜಿಲ್ಲಾ ಬೋರ್ಡು ಸ್ಕೂಲು. ಹಳೆಯ ತಲೆಮಾರಿನ ಖ್ಯಾತನಾಮರೆಲ್ಲ ಅಲ್ಲಿನ ಮಾಜಿ  ವಿದ್ಯಾರ್ಥಿಗಳು. ಎಂ. ವಿ. ಕೃಷ್ಣಪ್ಪನವರೂ  ಓದಿದ್ದು ಇಲ್ಲಿಯೆ ಎಂದು ಹೆಮ್ಮೆಯಿಂದ ಹೇಳಿ ಕೊಳ್ಳುತಿದ್ದರು. ಎಲ್ಲ ಪ್ರತಿಭಾವಂತರ ಸಂಗಮವಾಗಿದ್ದ ಶಾಲೆ ಇತ್ತೀಚಗೆ ಹೆಚ್ಚಾದ ಖಾಸಗಿ ಶಾಲೆಗಳಿಂದಾಗಿ ಬರಿ ಬಡವರ, ಹಳ್ಳಿಮಕ್ಕಳ ಮತ್ತು ಹಿಂದುಳಿದವರ ಮಕ್ಕಳ ಶಾಲೆ  ಎಂದೆ ಕರೆಯಲಾಗುತಿತ್ತು. ಆದರೆ ಅಲ್ಲಿನ ಮಾಜಿ ವಿದ್ಯಾರ್ಥಿಗಳ ಸಂಖ್ಯೆ ಬಹು ದೊಡ್ಡದು. ಅದನ್ನು ನಾನು ಹೋದ ವಾರದೊಳಗೆ ಗಮಿನಿಸಿದೆ. ಸದಾ ಜನ ಜಂಗುಳಿ, ಜಾತಿ ಪ್ರಮಾಣ ಪತ್ರ, ಜನ್ಮ ದಿನಾಂಕ , ನಕಲು ವರ್ಗಾವಣೆ ಪತ್ರ, ನಡತೆ ಪ್ರಮಾಣ ಪತ್ರ  ಯಾವುದೂ ಇಲ್ಲದಿದ್ದರೆ ನಿಜಪ್ರತಿ ಧೃಡೀಕರಣ ಕ್ಕೆ ಸಹಿ ಹೀಗೆ ಬೆಳಗಿನಿಂದ ಸಂಜೆಯ ತನಕ ಬಿಡುವಿಲ್ಲದೆ ಜನ ಬರುವುರು. ನಮ್ಮ ಗುಮಾಸ್ತರು ತಡವಿಲ್ಲದೆ ಅವರ ಕೆಲಸ ಮಾಡಿ ನನ್ನ ಸಹಿಗೆ ತರುವರು.
 ನಿಜ ನಾವಿರುವುದು ಸಾರ್ವಜನಿಕರ ಅನುಕೂಲಕ್ಕಾಗಿ . ಆದರೆ ನಮ್ಮ ನಿಯಮಿತ ಕೆಲಸಕ್ಕೆ ತೊಂದರೆಯಾದರೆ ಗತಿ ಏನು ಶೈಕ್ಷಣಿಕ ಕಾರ್ಯಗಳಿಗೆ ಬಿಡುವು ಬೇಕಲ್ಲ. ಸುತ್ತಲಿನ ಶಿಸ್ತು ಮತ್ತು ಶಾಂತಿಯ ವ್ಯಸಸ್ಥೆ ಗಮನಿಸಬೇಕಲ್ಲ .ಪ್ರಾಂಶುಪಾಲರೆಂದರೆ  ಬರಿ ಸಹಿ ಮಾಡುತ್ತಾ ಛೇಂಬರ್‌ಲ್ಲಿ ಕುಳತುಬಿಡವುದರಲ್ಲಿ ನನಗೆ ನಂಬಿಕೆಯಿಲ್ಲ. ಪ್ರತಿ ತರಗತಿಗೂ ಹೋಘಗಬೇಕು . ಸಾಧ್ಯವಾದಷ್ಟು ಮಕ್ಕಳ ಸಂಪರ್ಕ ಇರಬೇಕು  ಎನ್ನುವವನು ನಾನು. ಆದರೆ ನನಗೆ ಬಿಡುವೆ ಸಿಗದು.  ಕಾಲೇಜು ವಿಭಾಗ ಮತ್ತು  ಹೈಸ್ಕೂಲುವಿಭಾಗದಲ್ಲಿ ಹಿರಿಯ ಸಹಾಯಕರು ಇರುವರು ನಿಜ.  ಎಲ್ಲ ಅವರಿಗೆ ಹೇಳಿ ಸುಮ್ಮನೆ ಕೂಡುವ ಜಾಯಮಾನ ನನ್ನದಲ್ಲ. ಯಾವುದಾರೂ ತರಗತಿಯಲ್ಲಿ ಗಲಾಟೆಯಗುತಿದ್ದರೆ ಹಿರಿಯ ಸಹಾಯಕರನ್ನು ಕರೆದು , ಏನ್ರಿ ಅದು ಗಲಾಟೆ ? ಎಂದು ಕೇಳುವವರು ಬಹಳ. ಆದರೆ ನಾನು ನೆರವಾಗಿ ತರಗತಿಗೆ ಹೋಗುತಿದ್ದೆ.  ಇದರಿಂದ ಎರಡು ಅನುಕೂಲ. ಮೊದಲನೆಯದಾಗಿ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ಎಂದರೆ ದೂರದ ಗುಮ್ಮ ಎಂಬ ಭಾವನೆ ಬರುವುದಿಲ್ಲ. ಅವರ ಯಾವುದೆ ಸಮಸ್ಯೆ ಇದ್ದರೆ ಸ್ಥಳದಲ್ಲೆ ಪರಿಹಾರ ಕೊಡಬಹುದು. ಎರಡನೆಯದಾಗಿ ಖಾಲಿ ಇದ್ದ ತರಗತಿಗೆ ನಾನು ಹೋಗುವುದರಿಂದ  ಆ ತರಗತಿಗೆ ಹೋಗ ಬೇಕಾದ ಶಿಕ್ಷಕರು  ಜಾಗೃತರಾಗುವರು.  ಹರಟೆ ಹೊಡೆಯುತ್ತಾ ಶಿಕ್ಷಕರ ಕೋಣೆಯಲ್ಲಿ ಮೈ ಮರೆತು ಕೂಡುವ ಅಬ್ಯಾಸಕ್ಕೆ ತಡೆಯುಂಟಾಗುವುದು. ಅಲ್ಲದೆ ನಾನು ಮೂಲತಃ ಶಿಕ್ಷಕನದ್ದರಿಂದ ಯಾವುದೆ ವಿಷಯವಿರಲಿ ಏನು ಪಾಠ ವಾಗಿದೆ ಎಂದು ಕೇಳಿ , ಹಿಂದಿನ ದಿನ ಬಿಟ್ಟಲ್ಲಿಂದ ಮುಂದುವರೆಸುವ  ನನ್ನ  ಅಭ್ಯಾಸ ಮಕ್ಕಳಲ್ಲಿ ಅಚ್ಚರಿ ಮತ್ತು ಮೆಚ್ಚುಗೆ ಮೂಡಿಸುವುದು. ಸಂಬಂಧಿಸಿ ಶಿಕ್ಷಕರು ಎಚ್ಚರಗೊಳ್ಳುವರು.ನಾನು ಹಾಗೆ ತರಗತಿಗೆ ಹೋದ ಕೆಲವೆ ನಿಮಿಷಗಳಲ್ಲಿ ಶಿಕ್ಷಕರು ಎಲ್ಲಿದ್ದರೂ ಓಡಿ ಬರುವರು. ಅವರು ಬಂದು ಬಾಗಿಲ್ಲಿ ನಿಂತಾಗ ನಾನು ಏನೂ ಮಾತನಾಡದೆ.ಮುಗಳ್   ನಗುತ್ತಾ  ಪಾಠ ನಿಲ್ಲಿಸಿ ಹೊರಬರುತಿದ್ದೆ. ಅದರಿಂದ ಅವರು  ಮುಂದೆ ಎಂದೂ ತರಗತಿಗೆ ತಡವಾಗಿ ಹೋಗುತ್ತಿರಲಿಲ್ಲ ಎಂಬುದು ನನ್ನ ಅನುಭವ.
 ಇದರಿಂದ ಇನ್ನೂ ಒಂದು ಅನುಕೂಲವಿತ್ತು. ಯಾವ ತರಗತಿಯಲ್ಲಿ ಎಷ್ಟು ಪಾಠವಾಗಿದೆ , , ವಿದ್ಯಾರ್ಥಿಗಳಿಗೆ ಏನು ತೊಂದರೆ ಇದೆ ಎಂಬುದನ್ನು ನೇರವಾಗಿ ಅವರಿಂದಲೆ ಅರಿಯಬಹುದಿತ್ತು. ಇದರಿಂದ ಶಿಕ್ಷಕರ ಮೇಲೆ ಒಂದು ರೀತಿಯ ನಿಯಂತ್ರಣ ತಾನೆ ತಾನಾಗಿ ಬರುವುದು. ಅಲ್ಲದೆ ವಿದ್ಯಾರ್ಥಿಗಳಾಗಲಿ ಅವರ ಪೋಷಕರಾಗಲಿ ಆ ಪಾಠ ಆಗಿಲ್ಲ. ಈ  ಕೆಲಸ ಮಾಡಿಸಿಲ್ಲ ಎಂದು ದೂರುವ  ಅವಕಾಶವೆ ಇರಲಿಲ್ಲ.ಇದರಿಂದ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ತನ್ನಿಂದ ತಾನೆ ಸಿಗುತಿತ್ತು. ಆದರೆ ಈ ಕಾಲೇಜಿನಲ್ಲಿ  ವಾರಗಳಾದರೂ  ಅದಕ್ಕೆ ಅವಕಾಶವೆ ಸಿಗಲಿಲ್ಲ.ಹೋದ ಮೂರುದಿನದ ನಂತರ ಸಿಬ್ಬಂದಿಯ ಸಭೆಯಲ್ಲಿ ನನ್ನ ಕಾರ್ಯವಿಧಾನವನ್ನು ವಿವರಿಸಿ ಅವರೆಲ್ಲರ ಸಹಕಾರ ಕೋರಿದೆ.  ಜನ ಜಂಗುಲಿಯ ವಿಷಯ ಬಂದಾಗ ಕೆಲವರ ಮುಖದಲ್ಲಿ ನಗೆ ಮೂಡಿತು. ನನಗೆ ಅದೇನೆಂದು ಅರ್ಥ ವಾಗಲಿಲ್ಲ
ಶನಿವಾರದ ದಿನ ಸಂಬಂಧಿಸಿದ ಗುಮಾಸ್ತರನ್ನು ಕರೆದು ಹೇಳಿದೆ. ಈ ರೀತಿ ಸಾರ್ವಜನಿಕರು ಯಾವಾಗ ಬಂದರೆ ಆಗ ಅವರ ದಾಖಲೆ ಸಿದ್ಧ ಪಡಿಸಿ ನನ್ನ  ಸಹಿಗಾಗಿ ತರುವುದು  ಬೇಡ. ಎಲ್ಲರಿಗೂ  ಒಂದು ಸಮಯ ನಿಗದಿಪಡಿಸಿ. ಆ ಸಮಯದಲ್ಲಿ ದಾಖಲೆ ನೀಡಿ. ನಾನೂ ಸಹ ಅಗತ್ಯವಾದ ದಾಖಲೆಗಳಿಗೆ ಒಟ್ಟಿಗೆ ಸಹಿ ಮಾಡುವೆ, ಎಂದೆ.
ಅದಕ್ಕೆ ಸಾರ್‌, ನೀವು ಅನುಮಾನ ಪಡಬೇಡಿ. ನಾವು ಲೆಕ್ಕ ಇಟ್ಟಿದ್ದೇವೆ. ತಿಂಗಳ ಕೊನೆಯಲ್ಲಿ ಬಟವಾಡೆ ಮಾಡುವೆವು. ಎಂದರು  ನನಗೆ ಏನೊಂದೂ ಅರ್ಥ ವಾಗಲಿಲ್ಲ. ಅವರ ಮುಖ ಮಿಕಿ ಮಕಮಿಕಿ ನೋಡಿದೆ.
ನೀವು  ಹೇಗೆ ಹೇಳಿದರೆ ಹಾಗೆ ಸಾರ್. ವಾರಕೊಮ್ಮೆ ಬಟವಾಡೆ ಮಾಡಲು  ಇಲ್ಲವೇ ತಿಂಗಳಿಗೊಮ್ಮೆ ಲೆಕ್ಕ ಕೊಡಲೂ ನಾವು ಸಿದ್ದ ಎಂದರು.
 ಅದೇನು ನೀವು ಹೇಳುವ ವಾರಕೊಮ್ಮೆ ಕೊಡುವ ಲೆಕ್ಕ ? ನಾನು ಹುಬ್ಬು ಏರಿಸಿ ಕೇಳಿದೆ.
ಅದೇ ಸಾರ್‌ ನೀವು ಸಹಿ ಮಾಡುವಿರಲ್ಲ. ಅದಕ್ಕೆ ನೇರವಾಗಿ ನೀವೆ ಕೇಳಿ ಹಣ ಪಡೆಯುವುದು ನಿಮ್ಮಘನತೆಗೆ ಸರಿಯಲ್ಲ. ಹಾಗಾಗಿ ನಿಮ್ಮ ಪರವಾಗಿ ನಾವೇ  ಹಣ ಪಡೆಯುವೆವು. ಅದನ್ನು ಪೈ  ಟು ಪೈ ಲೆಕ್ಕ ಇಟ್ಟು ನಿಮಗೆ ಒಪ್ಪಿಸುವೆವು. ಅದರಲ್ಲಿ ನೀವು ಕೊಟ್ಟಷ್ಟನ್ನು   ತೆಗದುಕೊಳ್ಳುತ್ತೇವೆ.
 ಈಗ ನನ್ನ ತಲೆಯಲ್ಲಿ ಬೆಳಕು ಝಗ್‌ ಎಂದಿತು. ಅವರು ಈ ವಗೆ ಮಾತನಾಡುತ್ತಿರುವುದು ಲಂಚದ ವಿಚಾರ ಎಂದು., ಅದಕ್ಕೇ ಸಹಿ ಮಾಡುವ ಗೋಜಲಿನ ಬಗ್ಗೆ ನಾನು ಶಿಕ್ಷಕರ ಸಭೆಯಲ್ಲಿ ಹೇಳಿದಾಗ ಕೆಲವರು ನಕ್ಕಿದ್ದು.
ನನ್ನ ಕುತೂಹಲ ಕೆರಳಿತು. ಯಾವುದಕ್ಕೆ ಎಷ್ಟೆಷ್ಟು ತೆಗೆದು ಕೊಳ್ಳುವಿರಿ ? ಎಂದು ಕೇಳಿದೆ
ಇಷ್ಟೆ ಬೇಕೂ ಎಂದು ಗೆರೆ ಕೊರೆದು ತೆದುಕೊಳ್ಳುವುದಿಲ್ಲ.  ಕೆಲಸವಾದರೆ ಅವರೆ ಸಂತೋಷದಿಂದ ಕೊಡುವರು. ನಾವು ಮಾತ್ರ ಅದನ್ನು ಲೆಕ್ಕ ಇಟ್ಟು ತಮಗೆ ಒಪ್ಪಿಸುವೆವು.
ಅವರ ಮಾತುನನಗೆ ತಲೆ ಚಿಟ್ಟು ಹಿಡಿಸಿತು.
 ಇದುವರೆಗೆ ಏನು ಮಾಡಿದಿರೋ ಅದು ನನಗೆ ಸಂಬಂಧಿಸದು. ಆದರೆ ಇನ್ನು ಮೇಲೆ ಇವಕ್ಕೆಲ್ಲ ಅವಕಾಶವಿಲ್ಲ . ನೀವು ತೆಗೆದುಕೊಳ್ಳುವುದೂ ಬೇಡ. ನನಗೆ ಲೆಕ್ಕ ಒಪ್ಪಿಸುವದೂ ಬೇಡ.
ನಿಯಮಬದ್ದವಾಗಿ ಸಾರ್ವಜನಿಕರು ಕೇಳಿದ ದಾಖಲೆಯನ್ನು ಕೊಡಲೇ  ಬೇಕು. ಅದು ನಮ್ಮ ಕರ್ತವ್ಯ . ನಾವು ಸರಕಾರಿ ಸೇವಕರು. ಸರ್ಕಾರದ ಕೆಲಸಕ್ಕಾಗಿ ಬಂದರೆ ನಿಯಮದ ಪ್ರಕಾರ ಮಾಡುವುದು ನಮ್ಮ ಧರ್ಮ. ಇನ್ನುಮೇಲೆ ಸಂಗ್ರಹ ಮತ್ತು ಬಟವಾಡೆ ಪದ್ದತಿ ಬೇಡ ಎಂದು ಖಡಾಖಂಡಿತವಾಗಿ ತಿಳಿಸಿದೆ.
 ಮುಂದಿನ ವಾರ ಗಮನಿಸಿದರೆ ಅವರು ಬರ ಬೇಡವೆಂದರೂ ಜನ ಬರುತ್ತಲೆ ಇದ್ದರು. ಆದರೆ ಈಗ ಕಚೇರಿಯ ಹೊರಗೆ ಅವರನ್ನು ಕರೆದು ಭೇಟಿಯಾಗಲು ಮೊದಲು  ಮಾಡಿದರು. ನಮ್ಮ ಶಿಕ್ಷಕರೊಬ್ಬರು , ಸಾರ್‌, ನೀವು  ಹಣ ಬೇಡ ಎಂದಿರಿ ಎಂಬುದು  ನಮಗೆ ಸಂತೊಷವಾಯಿತು. ಅದರಿಂದ ನಿಮಗೆ ನಷ್ಟವಾಯತೆ ವಿನಃ ಜನರಿಗೆ ಅನುಕೂಲವಾಗಿಲ್ಲ. ಈಗ ನಿಮ್ಮ ಮತ್ತು ಅವರ ಪಾಲು ಎರಡನ್ನೂ ಅವರೇ  ತೆಗೆದು ಕೊಳ್ಳುವರು. ಅಲ್ಲದೆ ಈ ಪ್ರಾಂಶುಪಾಲರು ಬಹು ಸ್ಟ್ರಿಕ್ಟ್‌ ಎಂದು ಹೆದರಿಸಿ ಇನ್ನೂ ಹೆಚ್ಚು ವಸೂಲಿ ಮಾಡಲಾಗುತ್ತಿದೆ.
ನನಗೆ ಏನೂ ಮಾಡಲು ತೋಚಲಿಲ್ಲ.. ಹೇಗಾದರೂ ಮಾಡಿ ಇದನ್ನು ತಡೆಯಲೇ ಬೇಕಿತ್ತು.  ಅವರನ್ನು ಕೇಳಿದರೆ ಇಲ್ಲ ಸಾರ್‌, ನಾವು ಹಣವನ್ನು ಮುಟ್ಟುತ್ತಲೆ ಇಲ್ಲ ಎಂದು ವಾದಿಸಿದರು.
ಅದಕ್ಕೆ ಕೊನಗೆ ಒಂದು ಪರಿಹಾರ ದೊರಕಿತು. ಅವರು ಕೊಡುವರೋ ಬಿಡುವರೋ ಅದು ಬೇರೆ ಮಾತು. ಪರಸ್ಪರ ಸಂಪರ್ಕಕ್ಕೆ ಬಂದರೆ ತಾನೆ ಈ ಎಲ್ಲ ವ್ಯವಹಾರ. ಅದಕ್ಕೆ ನಾನು ಒಂದು ದಾಖಲೆ ನಿರ್ವಹಿಸಲು ತೀರ್ಮಾನಿಸಿದೆ. ಯಾವುದೆ ದಾಖಲೆಯನ್ನು ತಕ್ಷಣ ಕೊಡುವ ಪದ್ದತಿ ನಿಲ್ಲಿಸಿದೆ. ಬಂದವರು ಅರ್ಜಿ ಸಲ್ಲಿಸಿ ಆ ಪುಸ್ತಕದಲ್ಲಿ ದಿನಾಂಕ ವಿಷಯ ನಮೂದಿಸ ಬೇಕು ಅವರ ಬೇಡಿದ ದಾಖಲೆಗೆ ಅನುಗುಣವಾಗಿ ಒಂದು ದಿನದಿಂದ ಮೂರುದಿನ ದೊಳಗೆ ಅದನ್ನು ನೀಡಲಾಗುವುದು. ಅದನ್ನು ಅವರು ನಿಗದಿತ ಸಮಯದಲ್ಲಿ ನನ್ನ ಸಮ್ಮುಖದಲ್ಲೆ ಪಡೆಯುವಂತೆ ಸೂಚನೆ ನೀಡಲಾಯಿತು.  ಈ ವಿಷಯವನ್ನು ಸೂಚನಾ ಫಲಕದಲ್ಲೂ ಪ್ರದರ್ಶಿಸಲಾಯಿತು. ಅದನ್ನು ಓದದೆ ಬಂದವರಿಗೆ ಅಗತ್ಯ ಮಾಹಿತಿ ನೀಡಲು ಬಾಗಿಲಲ್ಲೆ ಕುಳಿತಿರುವ ಜವಾನರಿಗೆ ತಿಳಿಸಲಾಯಿತು. ಟ್ರೂ ಕಾಪಿಗಳ ದೃಢೀಕರಣಕ್ಕೆ ಸಮಯ ನಿಗದಿಪಡಿಸಿ ಆ ಆವಧಿಯಲ್ಲಿ ಬಂದವರಿಗೆ ಮತ್ರ ಅವಕಾಶ ನೀಡಲಾಯಿತು. ಅದೂ ಅಲ್ಲದೆ ನಮ್ಮಲ್ಲಿ ಏಳೆಂಟು ಜನ ಉಪನ್ಯಾಸಕರೂ ಪತ್ರಾಂಕಿತ ಅಧಿಕಾರಿಗಳಾದ್ದರಿಂದ ಅವರಿಗೆ ಸೀಲು ಮಾಡಿಸಿಕೊಂಡು ತಮ್ಮ ದೈನಂದಿನ ಕೆಲಸಕಕ್ಕೆ ತೊಂದರೆಯಾಗದಂತೆ ದೃಢಿಕರಣ ಮಾಡಿಕೊಡಲು ತಿಳಿಸಲಾಯಿತು. ಮೊದ ಮೊದಲು ಗೊತ್ತಿಲ್ಲದೆ ನನ್ನ ಹತ್ತಿರ ಬಂದವರಿಗೆ  ಉಪನ್ಯಾಸಕರ  ಕೊಟ್ಟಡಿಗೆ ಕಳುಹಿಸಲಾಗುತಿತ್ತು. ಅವರು ಒಂದು ರೀತಿಯಲ್ಲಿ ತಮಗೆ ದೊರೆತ ಪ್ರಾಧಾನ್ಯಕ್ಕೆ ಖುಷಿಯಿಂದ ಸ್ಪಂದಿಸಿದರು ಸಿಕ್ಕೆ ಹಾಕಿ ಅದರ ಮೆಲೆ ಹಸಿರು ಇಂಕಿನ ಸಹಿ  ಮಾಡುವುದು ಒಂದು ಗೌರವ ಎನಿಸಿತು. ಕೆಲವರು ಮನೆಗೆ ಹೋಗಿ  ಮನವಿ ಮಾಡಿಕೊಂಡರೆ ಅಲ್ಲಿಯೂ ಸಹಿ ಮಾಡ ತೊಡಗಿದರು. ಮೊದಲಲ್ಲಿ ತೊಂದರೆಯಾಯಿತೆಂದು ಗೊಣಗಿದ ಸಾರ್ವ ಜನಿಕರು ಹೊಸ ವ್ಯವಸ್ಥೆಯಿಂದ ತೃಪ್ತರಾದರು.
 ನಮ್ಮ ಲಿಪಿಕ ನೌಕರರು ತುಸು ಅಸಮಧಾನ ಗೊಂಡರು. ನಮ್ಮ ಮೇಲೆ ನಿಮಗೆ ಅಪನಂಬಿಕೆಯೇ ಎಂದು ನನ್ನನ್ನು ನೆರವಾಗಿ ಕೇಳಿದರು.ಅತಿ ತುರ್ತು ಕೆಲಸವರುವುದು. ನಮಗೆ ಅತಿ ಪರಿಚಿತರು ಎಂದು ಬರುವರು . ಅವರಿಗೆ ಏನೆಂದು ಉತ್ತರ ಕೊಡುವುದು ಎಂಬುದು ಅವರ ಅಳಲು. ಅದಕ್ಕೆ ನಾನು ಒಂದು ಅವಕಾಸ ನೀಡಿದೆ. ಅ ರೀತಿಯ ವಿಶೇಷ ಸಂದರ್ಭದಲ್ಲಿ  ನಿಯಮಕ್ಕೆ ವಿನಾಯತಿ ಇದೆ. ಅವರು ನನ್ನನ್ನು ಭೇಟಿಯಾಗಿ ವಿಷಯತಿಳಿಸಿದರೆ ಅವರ ವಿವರಣೆ  ತೃಪ್ತಿ ಕರವಾಗಿದ್ದರೆ ತಕ್ಷಣವೆ ಸಹಿ  ಮಾಡಿಸಿ ಕೊಡುವ ವ್ಯವಸ್ಥೆ ಮಾಡಬಹುದೆಂದು ಸಮಾಧಾನ ಮಾಡಿದೆ..
 ಆದರೂ  ಒಬ್ಬಿಬ್ಬರು ಬಂದು ಅವರನ್ನು ಕಾಣುವದು ನೆಡೆದೆ ಇತ್ತು. ನಾನು ಮಾತ್ರ ಪುಸ್ತಕದಲ್ಲಿ ನಮೂದಾದ ಅರ್ಜಿಗಳಿಗೆ ಸಂಬಂಧಿಸಿದ ದಾಖಲೆಗೆ ಮಾತ್ರ ಸಹಿ ಮಾಡಿ ಅಲ್ಲಿ ಕೊಡುವ ದಿನಾಂಕದೊಳಗೆ  ಅವರಿಗೆ ತಲುಪಲು ತೋಂದರೆ ಯಾಗದಂತೆ ಎಚ್ಚರಿಕೆಯನ್ನು ಮುಂದುವರಿಸಿದೆ.  .ಇನ್ನು ಕೆಲವರು ನನ್ನ ಎದುರಲ್ಲೆ ದಾಖಲೆ ಪಡೆದರೂ  ಗುಮಾಸ್ತರನ್ನು ಹೊರೆಗ ಕರೆದು ಮಾತ ನಾಡುವುದು ಗಮನಕ್ಕೆ ಬಂದಿತು. ಅವರು ಬರಿ ಮಾತನಾಡಿದರೋ ಇಲ್ಲವೆ ಇನ್ನೇನಾಯಿತೋ ಎಂದು ನಾನು ಕೆದಕಲು ಹೋಗಲಿಲ್ಲ.ಕಚೇರಿಯಲ್ಲಿ ಸದಾ ತುಂಬಿ  ಕೊಂಡಿರುತಿದ್ದ ಜನಜಂಗುಳಿ ಕಡಿಮೆಯಾಯಿತು. ಹೊಸದರಲ್ಲಿ ತುಸು ಗುನಗುನು ಎಂದರೂ ಬರಬರುತ್ತಾ  ಹೊಸ ಪದ್ದತಿಗೆ ಎಲ್ಲರೂ ಹೊಂದಿಕೊಂಡರು.ಕೈಲಾದ ಮಟ್ಟಿಗೆ ಬದಲಾವಣೆ ತಂದ ತೃಪ್ತಿ ನನಗಾಯಿತು. ಕ್ರಮೇಣ ಬಹಳ ಜನ ಈ ಹೊಸ ವಿಧಾನವನ್ನುಮೆಚ್ಚಿಕೊಂಡರು. ನನಗೂ ಶೈಕ್ಷಣಿಕ ಚಟುವಟಿಕೆಗಳ ಕಡೆಗೆ ಗಮನ ಹರಿಸಲು ಸಾಕಷ್ಟು ಸಮಯ ದೊರಕಿತು.ಇದಾದ ಸುಮಾರು ೧೫ ವರ್ಷದ ನಂತರ ಸರ್ಕಾರ ತಂದ ಸಕಾಲ ಯೋಜನೆ  ನನಗೆ ಆ ದಿನಗಳ ನೆನಪು ತಂದಿತು



Wednesday, June 5, 2013

ಆರರಿಂದ ಅರವತ್ತು-ಸರಣಿ-ಸಕ್ಕರೆಬೀಡಿನಿಂದ ಚಿನ್ನದ ನಾಡಿಗೆ

  ಹೋದೊಡನೆ ಹೊಸ ಸಮಸ್ಯೆ
ಮಂಡ್ಯ ಜಿಲ್ಲೆ ಎಂದರೆ ಸಕ್ಕರೆ ಯ ನಾಡು ಎಂದೆ ಪ್ರಖ್ಯಾತಿ. ಅಲ್ಲದೆ ಅದು ಬಹುಶಃ ಕರ್ನಾಟಕದಲ್ಲೆ ಬೇರೆ ಭಾಷೆಗಳ ಸೋಂಕಿಲ್ಲದ ಪ್ರದೇಶ ಎಂದರೆ  ಮಂಡ್ಯ ಮಾತ್ರ. ಅಲ್ಲಿನ ಜನರಾಡುವ  ಏಕ ಮೇವ ಭಾಷೆ ಕನ್ನಡ. ಅದೂ ಗೌಡರ ಗತ್ತಿನ ಕನ್ನಡ. ಕಾರಣ ಅದು ಅನ್ಯ ಭಾಷೆಗಳ ಪ್ರದೇಶದ ಸಂಪರ್ಕದಲ್ಲಿ ಇಲ್ಲ. ಅಲ್ಲಲ್ಲಿ ಕಬ್ಬಿನ ಗದ್ದೆಯಲ್ಲಿ ಕೂಲಿಗಾಗಿ ತಮಿಳರು ಇದ್ದಾರೆ. ಆದರೆ  ಒಕ್ಕಲಿಗ ಜನಾಂಗದ ಹೃದಯಭಾಗವಾದ ಈ ಪ್ರದೇಶದವರದು ಕಟ್ಟಾ ಕನ್ನಡಾಭಿಮಾನ. ಅಲ್ಲಿನ ಜನಸಾಮಾನ್ಯರು ಅದರಲ್ಲೂ ಹಳ್ಳಿಯ ಜನರಿಗೆ ಇಂಗ್ಲಿಷ್‌ ಬರಲ್ಲ.ಹಿಂದಿ ಕಲಿಯಲ್ಲ.  ಈಗ ತುಸು ಬದಲಾಗಿದೆ.ಹೀಗಾಗಿ ಭಾಷಾ ದೃಷ್ಟಿಯಿಂದ ಅನ್ಯರ ಪ್ರಭಾವಕ್ಕೆ ಒಳಗಾಗದ ಅಚ್ಚಗನ್ನಡ ಪ್ರದೇಶವೆಂದರೆ  ಮಂಡ್ಯ ಜಿಲ್ಲೆ. ಅಲ್ಲಿನವರ ಮನೆ ಮಾತು ಕನ್ನಡ  ಮನದ ಮಾತು ಕನ್ನಡ. ಮಂಡ್ಯ ಮತ್ತು ಕೋಲಾರಕ್ಕೆ ಶತಮಾನಗಳ ಸಂಬಂಧ .ಕರ್ನಾಟಕದಲ್ಲಿನ ಮೊದಲ  ಜಲವಿದ್ಯುತ್‌ ಉತ್ಪಾದಿಸಿದ  ಹಿರಿಮೆ ಮಂಡ್ಯಜಿಲ್ಲೆಯ ಷಿಂಷಾದ್ದು. ಅದರ ಮೊದಲ ಅನುಕೂಲ ಪಡೆದ ಸ್ಥಳ ಕೋಲಾರದ ಬಂಗಾರದ ಗಣಿಪ್ರದೇಶ.
    ಕೋಲಾರದ ಕುವರ ಸರ್‌ಎಂ ವಿಸ್ವೇಶ್ವರಯ್ಯಯ  ಮಂಡ್ಯ ಜಿಲ್ಲೆಯ ರೈತಾಪಿ ಜನರ ಮನೆ ದೇವರು.ಹಳ್ಳಿಗಾಡಾದರೂ ತುಸು ದೊಡ್ಡ ಗ್ರಾಮವಾದರೆ ಮೂರು ಸೇರುವಲ್ಲಿ ಅವನದೊಂದು ಅವನ ಪುತ್ಥಳಿ. ಪ್ರತಿ ಮನೆಯಲ್ಲೂ ಅವನ ಪೋಟೋ. ನಗರದಲ್ಲಿ ಅವರ ಹೆಸರಿನಲ್ಲಿ ಒಂದು ಬಡಾವಣೆ. ಕಾರಣ ಹುರುಳಿ ಬೆಲೆಯುತಿದ್ದ ಮಂಡ್ಯಜಿಲ್ಲೆಯ ಒಣ ಭೂಮಿಗೆ ಕೃರ್ಷರಾಜ ಸಾಗರ ಆಣೆಕಟ್ಟು ಕಕಟ್ಟಿಸಿ ನೀರುಣೀಸಿ ಭತ್ತದ ಕಣಜ , ಸಕ್ಕರೆ ನಾಡು ಮಾಡಿದ್ದು ಅವರೇ.
 ಕೋಲಾರ ಪ್ರಜ್ಞಾನವಂತರ ಜಿಲ್ಲೆ  ಎಂದೆ ಹೆಸರುವಾಸಿ.. ಕೆ .ಎ. ಸ್‌  ಎಂದರೆ ಕರ್ನಾಟಕ ಆಡಳಿತ ಸೇವೆ ಅಲ್ಲ ಕೋಲಾರ ಆಡಳಿತ ಸೇವೆ ಎನ್ನುವ ಮಟ್ಟಿಗೆ ಕೋಲಾರದದ ಜನ ಆಡಳಿತ ನಿಪುಣರಿದ್ದಾರೆ. ಕೊಲಾರ
ವಿಶ್ವೇಶ್ವರಯ್ಯನವರ ಹುಟ್ಟುಜಿಲ್ಲೆ.ಡಿವಿ. ಗುಂಡಪ್ಪ, ಮಾಸ್ತಿ ಜನಿಸಿದ ನಾಡು. ಇದು ನೀರ ಕೊರತೆ ಎದುರಿಸುವ ಪ್ರದೇಶವಾದರೂ . ಆದರೆ ರೆಷ್ಮೆ ಮತ್ತು ತರಕಾರಿ ಬೆಳೆಗೆ ಎತ್ತಿದ ಕೈ.
ಸಕ್ಕರೆ ನಾಡಿನಲ್ಲಿ ಐದುವರ್ಷದ ಸೇವೆ ಸಾಗಿತ್ತು. ಅಲ್ಲಿನ ಅತಿ ಹಳೆಯ ಆದರೆ ಬೇರೆ ಕಾರಣಗಳಿಗಾಗಿ ಹೆಸರು ಮಾಡಿದ ಕಾಲೇಜು ಸಾಧಾರಣ ಸ್ಥಿತಿಗೆಬಂದಿತು. ಚುನಾವಣೆಆಯಿತು. ಅಲ್ಲಿನ ಶಾಸಕರೆ ಶಿಕ್ಷಣ  ಮಂತ್ರಿಯಾದರು. ಅವರು ತುಂಬ ನಿಷ್ಟುರವಾದಿ. ಪ್ರಾಮಾಣಿಕ ರಾಜಕಾರಣಿ. ನಾನು ಆಗಲೆ ಅಲ್ಲಿ ನಾಲಕ್ಕನೆ ವರ್ಷಕ್ಕೆ ಕಾಲಿಟ್ಟಿದ್ದೆ.ಆ ಸ್ಥಳ  ಮೈಸೂರು ಮೂಲದವರಿಗೆ ಅನುಕೂಲ. ಮೈಸೂರು ಸಿಗದಿದ್ದರೆ ನಮ್ಮಕಾಲೇಜಿಗೆ ಆದ್ಯತೆ.ಅವರ ಮೇಲೆ ನನ್ನ ಬದಲಾವಣೆಗೆ ಸಾಕಷ್ಟು ಒತ್ತಡ ಬಂದಿತು. ಅಲ್ಲಿ ಕೆಲಸಮಾಡಿ ಅಮಾನತ್ತಿಗೆ ಒಳಗಾಗಿದ್ದವರಿಗೆ ಅದೆ ಜಾಗಕ್ಕೆ ಬರುವ ಛಲ ಇದ್ದೆ ಇತ್ತು. ಸರಿ ಅವರಾಗಿ ಮಾಡುವ ಮೊದಲೇ  ಜಾಗ ಖಾಲಿಮಾಡಲು ನಿಶ್ಚಯಿಸಿದೆ. ಅಲ್ಲದೆ  ನನ್ನ ಹೆಂಡತಿಯ ಇಬ್ಬರು ಅಣ್ಣಂದಿರ ಮಕ್ಕಳನ್ನೂ ನಮ್ಮಲ್ಲೆ ಓದಿಸಬೇಕೆಂಬ ಪ್ರೀತಿಯ ಒತ್ತಾಯ ಇತ್ತು . ಅಲ್ಲದೆ ಮನೆಯವರ ಸೋದರಿಯರೂ ಅಲ್ಲಿಯೆ ಇದ್ದರು.ತಮ್ಮ ಅಣ್ಣಂದಿರ ಮಗ ಮತ್ತು ಮಗಳು ಓದಲು ಬಂದರೆ ಒಬ್ಬರಿಗೊಬ್ಬರು ಒತ್ತಾಸೆ ನೀಡಬಹುದೆಂದು ಅಲ್ಲಿಗೆ ವರ್ಗಮಡಿಸಿಕೊಳ್ಳಲು ತಿಳಿಸಿದರು. ಅವರು ತಮಗೆ ಆತ್ಮೀಯರೊಬ್ಬರ ಪ್ರಭಾವ ಬಳಸಿ ಮಂತ್ರಿಗಳ ಶಿಪಾರಸ್ಸು ಪತ್ರ ಬರೆಸಿ ಕೋಲಾರ  ಜಿಲ್ಲೆ ಯಲ್ಲಿ ನಿವೃತ್ತಿಯಿಂದ ಖಾಲಿಯಾಗುತಿದ್ದ ಕಾಲೇಜಿಗೆ ವರ್ಗ ಮಾಡಿಸಿದರು.ನನಗೆ ಚಿನ್ನದ ನಾಡಿಗೆ ವರ್ಗ ವಾಯಿತು. ಎರಡು ಜಿಲ್ಲೆಗಳಿಗೆ ಇತ್ತೀಚಿನ ದಿನಗಳಲ್ಲಿ ಇನ್ನು ಒಂದು ಸಾಮ್ಯತೆ ಇದೆ. ಎರಡೂ ಜಿಲ್ಲೆಗಳು ಎಸ್ ಎಸ್ ಎಲ್‌‌ ಸಿ ಮತ್ತು ಪಿಯುಸಿ ಫಲಿತಾಂಶ  ಪಟ್ಟಿಯಲ್ಲಿ ಕೊನೆಯ ಐದು ಸ್ಥಾನಗಳಿಗಾಗಿ ಪೈ ಪೋಟಿ. ಶೈಕ್ಷಣಿಕವಾಗಿ ಎರಡೂ ಜಿಲ್ಲೆಗಳು ಹಿಂದುಳಿದಿವೆ.
.ಕೆ.ಜಿ.ಎಫ್‌ ತಮಿಳುನಾಡಿನ ಭಾಗದಂತಿರುವ ಪ್ರದೇಶ. ಅಲ್ಲಿನ ಚಿನ್ನದ ಗಣಿಗಳಲ್ಲಿ ಕೆಲಸಮಾಡಲು ಬಂದವರು ಅನ್ಯ ಭಾಷಿಕರೇ ಹೆಚ್ಚು. ಅದರಲ್ಲೂ ತಮಿಳರ ಪ್ರಾಬಲ್ಯ ಬಹಳ.ನಮ್ಮರಾಜ್ಯದಲ್ಲಿ ಕೈಗಾರಿಕೆ ಬೃಹತ್‌ ಕಾಮಗಾರಿ ನೆಡೆವ ಎಲ್ಲ ಕಡೆ ತಮಿಳು ಕಾರ್ಮಿಕರೆ ಹೆಚ್ಚು. ಹೊಸಪೇಟೆಯ ಆಣೆಕಟ್ಟು ಕಟ್ಟಿದಾಗ,ಭದ್ರಾವತಿ ಕಬ್ಬಿಣ ಕಾರ್ಖಾನೆ ಶುರುವಾದಾಗ,ಕೋಲಾರದ ಬಂಗಾರದ ಗಣಿ ಅಗಿಯಲು ಬಂದವರು ಕನ್ನಡೇತರರು. ಅದಕ್ಕಾಗಿಯೆ ಕೋಲಾರದಲ್ಲಿ ತೆಲುಗು  ಮಲೆಯಾಳಿ, ಉರ್ದು  ಮತ್ತು ತಮಿಳು ಪ್ರಾಥಮಿಕ ಶಾಲೆಗಳೂ ಇದ್ದವು.ಹೈಸ್ಕೂಲಿನಲ್ಲಿ ತಮಿಳು ಕೂಡಾ ಒಂದು ಭಾಷೆಯಾಗಿ ಕಲಿಯಲು  ಅವಕಾಶವಿದೆ. ಕೋಲಾರ ಜಿಲ್ಲೆಯ್ಲಿ ಬಹುತೇಕರು ದ್ವಿಭಾಷಾ ಪ್ರವೀಣರು. ಮನೆ ಮಾತು ಸಾಧಾರಣವಾಗಿ ತೆಲುಗು. ಕೆ ಜಿಎಫ್‌ ಮಾತ್ರ ಅಪವಾದ. ಅಲ್ಲಿ ಎಲ್ಲ ತಮಿಳುಮಯ. ಕೆಜಿಎಫ್‌ಗೆ ಬರುವಾಗಲೆ ನನಗೆ ಮುನ್ನೆಚ್ಚರಿಕೆ ನೀಡಲಾಯಿತು. ಇಲ್ಲಿನ ಜನ ಒರಟರು. ಗುಂಡಾಗಿರಿಗೆ  ಹೆಸರುವಾಸಿ. ಪರೀಕ್ಷೆಯಲ್ಲಂತೂ ಅವರನ್ನು ಹಿಡಿಯುವವರೆ ಇಲ್ಲ. ನಿಮ್ಮ ಪಾಡಿಗೆ ನೀವು ಕೆಲಸ ಮಾಡಿಕೊಂಡು ಹೋಗಿ. ಕಂಡರೂ ಕಾಣದಂತೆ ಇದ್ದರೆ ಬಚಾವು.  ನಿಯಮ , ನೀತಿ ಎಂದರೆ ಇಲ್ಲದ ಫಜೀತಿ .  ಬಿಲ್ಲು ಬೆಲ್ಲು ಎಂದು ಅರಾಮಾಗಿರಿ. ಯಾರೂ ನಿಮ್ಮ ತಂಟೆಗೆ ಬರುವುದಿಲ್ಲ ಎಂದೆಲ್ಲ ಮಾಹಿತಿ ನೀಡಿದ್ದರು.
 ಅವರ ಮಾತು ಕೇಳಿ ನಾನು ಮುಗಳ್ನಕ್ಕೆ. ನಾನು ಒಂದು ರೀತಿಯಲ್ಲಿ  ಶುಚಿ ಮಾಡುವ ಹಕ್ಕಿ. ಎಲ್ಲಿ ಹೊಲಸು ಕಂಡರೂ ಅದು ನನ್ನ   ವ್ಯಾಪ್ತಿಯಲ್ಲಿದ್ದರೆ ಸರಿಮಾಡದೆ ಬಿಡದವನು. ಹಿಂದಿನ ಕಾಲೇಜಿನ ಅನುಭವ ಇಲ್ಲಿ ದಾರಿ ದೀಪವಾಗುವುದು ಎಂದು ಕೊಂಡೆ.
 ಕೆಲಸಕ್ಕೆ ವರದಿ ಮಾಡಿದ ಕ್ಷಣವೆ ನಾನು ಗಮನಿಸಿದ್ದು ಪ್ರಾಂಶುಪಾಲರ ಕಚೇರಿಯನ್ನು ಅವರು ಓರಣ ವಾಗಿಟ್ಟ ರೀತಿ. ನನಗೆ ಗೊತ್ತಿದ್ದಂತೆ ಅಲ್ಲಿ ನಿವೃತ್ತರಾದವರು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರು. ಇಲ್ಲಿ ನೋಡಿದರೆ  ಪ್ರಾಂಶುಪಾಲರ ಕೋಣೆಯಲ್ಲಿ ವೆಂಕಟೇಶ್ವರ, ಸರಸ್ವತಿ ಮತ್ತು ಗಣೇಶ ರ ದೊಡ್ಡ ಫೋಟೋಗಳು ರಾರಾಜಿಸುತ್ತಿವೆ. ಜತೆಗೆ ಅವಕ್ಕೆ ಗಂಧದ ಹಾರ, ಮುಂದೆ ಸುಗಂಧ ಬೀರುವ ಊದುಬತ್ತಿ.ಜತೆಗೆ ಪಕ್ಕದ  ಗೋಡೆಯ ಮೇಲೆ ಗಾಂಧೀಜಿ ಮತ್ತು ವಿವೇಕಾನಂದರ ಪೋಟೋಗಳು. ನನಗೆ ಅಚ್ಚರಿಯಾಯಿತು. ಹಿಂದಿನ ಪ್ರಾಂಶುಪಾಲರ ಪರಧರ್ಮ ಸಹಿಷ್ಣತೆಯ ಬಗ್ಗೆ. ಮೆಚ್ಚಿಗೆ ಸೂಚಿಸಿದೆ.ಅಲ್ಲಿರುವ ಗುಮಾಸ್ತರು. ಇಲ್ಲ ಸಾರ್‌,
ಹಿಂದಿನ ವರು.  ದೇವರ ಫೋಟೋಗಳನ್ನು ತೆಗೆಸಿಹಾಕಿದ್ದರು. ಅವರಿಗೆ ಮೊದಲಿದ್ದವರು ಇವನ್ನು ತರಿಸಿದ್ದರು.   ನೀವು ಬರುವ ಆದೇಶ ಬಂದ ಮೇಲೆ ನಾವೆ ಮೊದಲಿನಂತೆ ಹಾಕಿದ್ದೇವೆ. ಎಂದರು. ಅವರು ನನಗೆ ಖುಷಿಯಾಗಲಿ ಎಂದು ಬದಲಾವಣೆ ಮಾಡಿದ್ದರು.
ನಾನು ಅವರಿಗೆ ಮಹಾತ್ಮ ಗಾಂಧಿ,ಅಂಬೇಡ್ಕರ್‌ ಮತ್ತು  ವಿವೇಕಾನಂದರ ಚಿತ್ರಗಳನ್ನು ಮಾತ್ರ ನನ್ನ ಛೇಂಬರ್‌ನಲ್ಲಿ ಹಾಕಿ ದೇವರ ಫೋಟೋಗಳನ್ನು ಪಕ್ಕದಲ್ಲೆ ಇದ್ದ  ಗುಮಾಸ್ತರ ಕೋಣೆಯಲ್ಲಿ ಹಾಕಲು ಹೇಳಿದೆ. ನಂತರ ದಿನದ  ಪೂಜೆ ಪುನಸ್ಕಾರದ ಅಗತ್ಯ ಇಲ್ಲವೆಂದು, ಸೂಚಿಸಿದೆ.
ಪ್ರಾಂಶುಪಾಲರ ಆಸನದ ಹಿಂಭಾಗದ ಗೋಡೆಯಮೇಲೆ ವಿವೇಕಾನಂದರ ಮತ್ತು ಎದುರಿನ ಗೋಡೆಯ ಮೇಲೆ ಮಹಾತ್ಮ ಗಾಂಧಿಯವರ ಫೋಟೋ ಪಕ್ಕದಲ್ಲಿ ಅಂಬೇಡ್ಕರ್‌ ತೂಗುಹಾಕಿಸಿದೆಕೆಲವರ ಮುಖದಲ್ಲಿ ಅಸಮಧಾನದ ಗೆರೆ ಸುಳಿದತೆ ಕಂಡಿತು.
ನಾನು ಸಹಿ ಮಾಡಿ ಕುರ್ಚಿಯಲ್ಲಿ ಕುಳಿತಿರುವಂತೆಯೆ ಬಂದ ದ್ದು  ವೃತ್ತಿ ಶಿಕ್ಷಣ  ಕಾಂಪ್ಯೂಟರ್‌ ವಿಜ್ಞಾನದ ಪ್ರವೇಶದ ವಿಷಯ. ಹಿಂದಿನ ಪ್ರಾಂಶುಪಾಲರು ನಿವೃತ್ತರಾದ ದಿನ ರಾತ್ರಿಯೇ  ಆಯ್ಕೆ ಪಟ್ಟಿಯನ್ನು ಸಿದ್ಧಮಾಡಿ ಮಾರನೆ ದಿನ ಪ್ರಕಟಿಸಲು ತಿಳಿಸಿದ್ದರು. ಅಭ್ಯರ್ಥಿಗಳ  ಅಯ್ಕೆಯನ್ನು ಪ್ರವೇಶ ಪರೀಕ್ಷೆಯ ಆಧಾರದ ಮೇಲೆ ಮಾಡಿದ್ದರು.ಸಂಬಂಧಿಸಿದ ಕಡತ ತರಿಸಿ ಪರಿಶಿಲಿಸ ತೊಡಗಿದೆ. ಅಷ್ಟರಲ್ಲಿ ಹೊರಗೆ ಸುಚನಾಫಲಕದ ಮುಂದೆ ಗಲಭೆಯಾಯಿತು.
ವಿಚಾರಿಸಲಾಗಿ ಅಯ್ಕೆ ಪಟ್ಟಿಯಲ್ಲಿ ಹೆಸರಿಲ್ಲದ ವರು ಅವ್ಯವಹಾರವಾಗಿದೆ. ಹಣ ಕೊಟ್ಟವರಿಗೆ ಸೀಟು ಕೊಡಲಾಗಿದೆ ಎಂದು ದೂರುತ್ತಿರುವುದು ಗೊತ್ತಾಯಿತು.  ನನಗೆ ಸಂದಿಗ್ಧವಾಯಿತು.ಸಂಬಂಧಿಸಿದ ಉಪನ್ಯಾಸಕರನ್ನು ಮತ್ತು ಗುಮಾಸ್ತರನ್ನೂ ಈ ಅಪಾದನೆಯಬಗ್ಗೆ  ಮಾಹಿತಿನೀಡಲು ಕೇಳಿದೆ.
ಅವರು ತುಸು ಹಿಂದು ಮುಂದು ನೋಡಿದರು. ನಂತರ ಬಾಯಿಬಿಟ್ಟರು.ಮೂವತ್ತು ಜಾಗೆಗಳಿಗೆ ೧೦೦ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಅದಕ್ಕಾಗಿ ಪ್ರವೇಶ  ಪರೀಕ್ಷೆ ನಡೆಸಿ ಅಲ್ಲಿ  ಪಡೆದ ಅಂಕೆಗಳ ಆಧಾರದ ಮೇಲೆ ಆಯ್ಕೆ ಮಾಡಲಾಗಿತ್ತು. ಅವರು ಯಾರಿಗೂ ಅನ್ಯಾಯ  ಆಗಬಾರದೆಂದು ಈ ಕ್ರಮ ಅನುಸರಿಸಿದ್ದರು. ಆದರೂ ಸೀಟು ದೊರಕದವರು  ಹಣ ಕೊಟ್ಟವರಿಗೆ ಸೀಟು ಕೊಡಲು ಪರೀಕ್ಷೆಯನ್ನು ಸಾದನ ವಾಗಿಸಿಕೊಂಡದ್ದಾರೆ. ಒಂದೆ ವರ್ಗದವರಿಗೆ ಹೆಚ್ಚುಸ್ಥಾನ ನೀಡಿದ್ದಾರೆ ಎಂದು ಬಲವಾಗಿ ವಾದಿಸಿದರು..
ನಿವೃತ್ತರಾದವರ ಮೇಲೆ ಅವರು ಮಾಡುತ್ತಿರುವ ಆಪಾದನೆಯಿಂದ ಇರಸು ಮುರಸಾಯಿತು. ನಾನು ಏನೂ ಮಾಡುವ ಹಾಗಿರಲಿಲ್ಲ. ಪ್ರವೇಶದ ಬಗೆಗಿನ ಸುತ್ತೋಲೆ ತರಿಸಿ ನೋಡಿದೆ. ಅದರಲ್ಲಿ ಪ್ರವೇಶ ಪರೀಕ್ಷೆ  ಮಾಡುವುದನ್ನು ನಿಷೇಧಿಸಿತ್ತು. ಅಲ್ಲದೆ ಸೀಟುಗಳನ್ನು ರೋಸ್ಟರ್‌ ಪ್ರಕಾರ  ಅವರು ಎಸ್‌.ಎಸ್‌.ಎಲ್. ಸಿ ಪರಿಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೆಲೆ ಸೀಟು ಕೊಡಲು ಸ್ಪಷ್ಟ  ಸೂಚನೆ ಇತ್ತು. ಅರ್ಜಿಗಳನ್ನು ಪರಿಶೀಲಿಸಲಾಗಿ ಎಸ್‌ಎಸ್‌ಎಲ್‌ಸಿ ಪರಿಕ್ಷೆಯಲ್ಲಿ ೭೫% ಅಂಕ ಬಂದವರಿಗೆ ಸೀಟು ಸಿಕ್ಕಿರಲಿಲ್ಲ. ಬರಿ ೪೫% ಬಂದವರಿಗೂ ದೊರಕಿತ್ತು. ಕಾರಣ ಅವರು ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಿದ್ದರು.
ವಿಷಯವನ್ನು ಗಮನಿಸಿದೆ. ಇಲ್ಲಿ ನೈಸರ್ಗಿಕ ನ್ಯಾಯ ಕೆಲಸ ಮಾಡಿರಲಿಲ್ಲ. ನಿಯಮಾವಳಿಗಳ ಉಲ್ಲಂಘನೆ ಯಾಗಿತ್ತು. ಮೀಸಲಾತಿ ಫಾಲಿಸಿರಲಿಲ್ಲ. ಅನಿವಾರ್ಯ ವಾಗಿ ಆಯ್ಕೆಯ ಪಟ್ಟಿಯನ್ನು ತಡೆ ಹಿಡಿಯಲಾಯಿತು.  ಆಯ್ಕೆ ಪಟ್ಟಿಯನ್ನು ಮೂರುದಿನದಲ್ಲಿ ಪ್ರಕಟಿಸುವುದಾಗಿ ಸೂಚನೆ ನೀಡಲಾಯಿತು.
 ನಂತರ  ಸಂಬಂಧಿಸಿದವರಿಗೆ ಎಲ್ಲ ಅರ್ಜಿಗಳನ್ನೂ ಅವರ ಜಾತಿ ಮತ್ತು ವರ್ಗದ ಮೇರೆಗೆ ವಿಂಗಡಿಸಿ ನಂತರ ಅವರು ಪಡೆದ ಅಂಕಗಳ ಆಧಾರದ ಮೇಲೆ  ಅರ್ಹತಾಪಟ್ಟಿ ತಯಾರಿಸಲು ತಿಳಿಸಲಾಯಿತು.

 ಇರುವ ೩೦ ಸೀಟುಗಳನ್ನು ಪ. ಜಾತಿ.  ಪ. ಪಂಗಡ, ಎ , ಬಿ , ಸಿ ಮತ್ತು ಸಾಮಾನ್ಯ ವರ್ಗಕ್ಕೆ ನಿಗದಿಪಡಿಸಿದ  ಪ್ರಮಾಣದಲ್ಲಿ ಹಂಚಬೇಕು. ನಿಗದಿ ಪಡಿಸಿದ  ಗುಂಪಿನಲ್ಲಿ  ಅರ್ಜಿದಾರರ ಸಂಖ್ಯೆ ಕಡಿಮೆ ಇದ್ದರೆ ಸಮಸ್ಯೆಯೆ  ಇಲ್ಲ. ಎಲ್ಲರಿಗೂ ಸಿಗುವುದು.ಹೆಚ್ಚಾಗಿದ್ದರೆ  ತಲೆನೋವು. ಅದೂ  ಪ. ಜಾತಿಯವರಾದರೆ ಅವರಿಗೆ ನ್ಯಾಯದೊರಕುವಂತೆ  ನೋಡಿಕೊಳ್ಳುವುದು  ಆದ್ಯ ಕರ್ತವ್ಯ. ೧೫%  ಮೀಸಲಾತಿ ಇದ್ದರೆ ಮೂವತ್ತ ರಲ್ಲಿ ಅವರಿಗೆ ದೊರೆಯುವುದ ೪.೫ ಎಲ್ಲಾದರೂ ಅರ್ಧ ಸೀಟು ಕೊಡುವುದು ಸಾಧ್ಯವೆ.?  ಅದಕ್ಕೆ ಅವರಿಗೆ ೪ಸೀಟು ಕೊಡಲಾಗವುದು.ಅವರಲ್ಲಿ ಅಕಸ್ಮಾತ್‌ ೮೦% ೭೦% ಪಡೆದ ವಿದ್ಯಾರ್ಥಿ ಇದ್ದರೆ ಅವರಿಗೆ ಸುಲಭ ವಾಗಿ ಅವರ ಗುಂಪಿನಲ್ಲಿ ಸೀಟು ಸಿಗುವುದು. ಆದರೆ ಉಳಿದವರಿಗೆ ಸಿಗದು. ಹೀಗಾಗದಿರಲೆಂದು ಒಂದು ಸೂಕ್ಷ್ಮ ಸೂಚನೆ ಇದೆ. ಅಕಸ್ಮಾತ್‌ ಅವರಲ್ಲಿ ಹೆಚ್ಚಿನ ಅಂಕ ಪಡೆದವರು ಇದ್ದರೆ ಅವರನ್ನು ಸಾಮಾನ್ಯ ವರ್ಗದವರೆಂದು ಪರಿಗಣಿಸಬೇಕು. ಮತ್ತು ಆ ವರ್ಗದಲ್ಲಿನ ಇತರರಿಗೆ ಸೀಟು ಹಂಚಬೇಕು. ಈ ವಿವರವನ್ನು ಬೇಡಿಕೆ ಇರುವ ಕೋರ್ಸುಗಳಲ್ಲಿ  ಗಮನಿಸುವುದು ಅತಿ ಅಗತ್ಯ. ಆದರೆ ಅನೇಕರು ಯಾವುದೋ ಹಿತಾಸಕ್ತಿಯಿಂದ ಈ ಅಂಶವನ್ನು  ಕಡೆಗಣಿಸುವರು.   ಕೆಜಿಎಫ್‌ನಲ್ಲಿ ಪರಿಶಿಷ್ಟ ಜಾತಿಯವರು ಬಹು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಅವರಿಗೆ ನ್ಯಾಯ ಒದಗಿಸುವುದು ಉಚಿತವಾಗಿತ್ತು. ಆ ಬಾರಿ ಪರಿಶಿಷ್ಟ ಜಾತಿಯವರಿಗೆ ೩೦  ಸ್ಥಾನಗಳಲ್ಲಿ ೧೩ ಸ್ಥಾನ ದೊರಕಿತು.ಸರಕಾರವು ಸಾಮಾಜಿಕ ನ್ಯಾಯ ಒದಗಿಸಲು ಮಾಡಿದ ನಿಯಮ  ಸರಿಯಾಗಿ ಪಾಲನೆಯಾಗದಿರುವುದೆ   ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎನ್ನ ಬಹುದು.  ಈ ಘಟನೆಯಿಂದ  ಸಂಸ್ಥೆಗೆ ಮತ್ತು ನನಗೆ ಒಂದು ರೀತಿಯ ಅನುಕೂಲವೂ ಆಯಿತು. ಪ್ರಾಂಶುಪಾಲರು ಹಿಂದುಳಿದವರ ಹಿತ ಕಾಪಾಡುವರು ಎಂಬ ನಂಬಿಗೆ ಅವರಲ್ಲಿ ಬಲವಾಗಿ ಬೆರೂರಿತು.. ಸಾಧಾರಣವಾಗಿ  ಕೋಲಾರ ಜಿಲ್ಲೆಯಲ್ಲಿ ಅನ್ಯ ಜಾತೀಯ ಅಧಿಕಾರಿಗಳಿಗೆ ಸಿಂಹ ಸ್ವಪ್ನ ವಾಗಿರುವ   ಪ್ರಗತಿ ಪರ ಸಂಘಟನೆಗಳು ನನ್ನ  ಎಲ್ಲ ಕೆಲಸಗಳಿಗೂ  ಒತ್ತಾಸೆ  ನೀಡಿದವು.