Wednesday, January 14, 2015
Thursday, January 8, 2015
ಕುಂಭಕೋಣಂ ಡಿಗ್ರೀ ಕಾಫಿ
ಕುಂಭಕೋಣಂ ಡಿಗ್ರಿ
ಕಾಫೀ
ನಮ್ಮ ನಾಡಿನಲ್ಲಿ
ವೈವಿದ್ಯತೆಯಲ್ಲಿ ಏಕತೆ ಇದೆ.ಅದೂ ವಿಶೇಷವಾಗಿ ಭಾಷೆ, ಜಾತಿ, ಮತ, ಜನಾಂಗ, ಉಡುಗೆ ತೊಡುಗೆಗಳಿಗೆ
ಪ್ರಾದೇಶಿಕ ಸೊಗಡು ಇದೆ. ವಿಶೇವಾಗಿ ಆಹಾರ ಪದಾರ್ಥಗಳಂತೂ ಆ ಪ್ರದೇಶದ ಹೆಸರಿನಲ್ಲಿ
ಜನಪ್ರಿಯವಾಗಿರುವವು.ದಾವಣಗೆರೆ ಬೆಣ್ಣೆ ದೋಸೆ, ಕೊಟ್ಟೂರು ಮಿರ್ಚಿ, ಗೋಕಾಕದ ಕರದಂಟು, ಧಾರವಾಡದ
ಪೇಢೆ, ಬೆಳಗಾಂನ ಕುಂದ, ಮದ್ದೂರಿನ ವಡೆ, ಮೈಸೂರು ಪಾಕು ಮಂಗಳೂರು ಬೋಂಡ , , ಹೀಗೆ ಸಾಲಿಗೆ ಸಾಲು
ಹೆಸರುಗಳು ಇವೆ. ತಮಿಳುನಾಡಿನ ಪ್ರವಾಸಕ್ಕೆ
ಹೋದಾಗ ಒಂದು ಇದೇ ರೀತಿಯ ವೈಶಿಷ್ಟ್ಯ ಗಮನಕ್ಕೆ
ಬಂದಿತು. ಕಂಚಿಪುರಂ ಇಡ್ಲಿ, ತಿರುನಲ್ವೇಲಿಹಲ್ವಾ,ಕಡಂಬೂರು ಪೋಳಿ ತಂಜಾವೂರು ಅಡೈ ಇತ್ಯಾದಿ ಆದರೆ
, ಅದು ಬರಿ ಜನಪ್ರಿಯ ಮಾತ್ರವಲ್ಲ ಬ್ರಾಂಡ್ ಆಗಿ ಅದರ ಹೆಸರಲ್ಲಿಕೋಟ್ಯಾಂತರ ರೂಪಾಯಿ ವ್ಯವಹಾರ,
ವೈವಾಟಿಗೆ ಮೂಲವಾಗಿರುವು ಮಾತ್ರ ಅಚ್ಚರಿ
ತಂದಿತು. ಅದೇ ಕುಂಬಕೋಣಂ ಡಿಗ್ರೀ ಕಾಫಿ.
ಕುಂಭ ಕೋಣಂ ಇತಿಹಾಸ
ಕಾಲದಿಂದಲೂ ವಿದ್ವತ್ ಕೇಂದ್ರವೆಂದು ಹೆಸರಾಗಿದೆ. ಅದರಲ್ಲೂ ಇದು ಗಣಿತಜ್ಞ ರಾಮಾನುಜಂ ಜನಿಸಿದ ಊರು.
ಜೊತೆಗ ಟೆಂಪಲ್ ಸಿಟಿ ಎಂಬ ಬಿರದೂ ಇದೆ.ಇತ್ತೀಚೆಗೆ ಕುಂಭಕೋಣಂ ಮಾಡಿದ ಎಂದರೆ ನಯವಂಚಕ ಎಂದೂ
ರೂಢಿಗತವಾಗಿದೆ.. ಅದು ಊರ ವಿಷಯವಾದರೆ ತಮಿಳುನಾಡಿನ ಹೈವೇಯಲ್ಲಿ ಎಲ್ಲಿಯೇ ಹೋದರೂ ರಾರಾಜಿವ
ಒಂದು ಹೆಸರೆಂದರೆ ಕುಂಭಕೋಣಂ ಡಿಗ್ರಿ ಕಾಫಿ. ಸರಿ ಸುಮಾರು ಎಲ್ಲ ನಗರಗಳಲ್ಲೂ ಈ ಹೆಸರು ಹೊತ್ತ
ಹೋಟೆಲ್ಗಳು ಕಣ್ಣಿಗೆ ಬೀಳುವುದು ಸಾಮಾನ್ಯ. ಹೈವೇನಲ್ಲಂತೂ ( ಈಸ್ಟ ಕೋಸ್ಟ್ ರೋಡ್ ) ಹತ್ತಿಪ್ಪತ್ತು
ಮೈಲಿಗೊಂದರಂತೆ ಈ ಹೆಸರಿನ ಹೋಟೆಲ್ಗಳ ಮುಂದೆ ಕಾರುಗಳ ಸಂದಣಿ ಸರ್ವೆ ಸಾಮಾನ್ಯ.
ಒಂದೆರಡು ಹೋಟೆಲ್ಗಳಿಗೆ
ಭೇಟಿ ನೀಡಿದಾಗ ತುಸು ವಿವರ ದೊರೆಯಿತು. ಹೋಟೆಲ್ ಕಟ್ಟಡಗಳು ಅಷ್ಟೇನೂ ಭವ್ಯವಾಗಿರುವುದಿಲ್ಲ
ಜೊತೆಗೆ ತಿಂಡಿಗಿಂತ ಅಲ್ಲಿ ಕಾಫಿಯದೇ ಕಾರುಬಾರು. ಒಂದು ರೀತಿಯಲ್ಲಿ ಈಗ ಪ್ರಚಲಿತವಿರುವ
ದರ್ಶಿನಿಗಳಂತೆ ಹೋದೊಡನೆ ಕಣ್ಣೆದುರಿಗೆ ಕಾಫಿ ತಯಾರಿಸುವ ಫೀಲ್ಟರ್. ಆಸನ ವ್ಯವಸ್ಥೆಗೂ ಒಳಾಂಗಣಕ್ಕಿಂತಲೂ
ಹೊರಾಂಣವೇ ಎದ್ದು ಕಾಣುವುದು
ಇವೆಲ್ಲ ಕ್ಕಿಂತ
ಎದ್ದು ಕಾಣುವುದು ದೂರದಿಂದಲೇ ಗೋಚರವಾಗುವ
ಬೋರ್ಢ.ಅಲ್ಲಿ ಹೋದಾಗ ತಕ್ಷಣವೇ ಕಾಫಿ ಸಿಗದು . ಐದು ಹತ್ತು ನಿಮಿಷ ಕಾಯಬೇಕಾಗುವುದು.
ನಮ್ಮೆದುರಿಗೆ ಸಿದ್ದವಾಗುವ ಹಬೆಯಾಡುವ ಫಿಲ್ಟರ್ಕಾಫಿಯನ್ನು ಹಿತ್ತಾಳೆ ಲೋಟ ದಲ್ಲಿ ಹಾಕಿ
ಬಟ್ಟಲಿನಲ್ಲಿ ಇಟ್ಟು ಕೊಡುವರು.ಆಧುನಿಕ ಕಪ್ಪು ಬಸಿ, ಗಾಜಿನ ಲೋಟಗಳಿಗೆ ಅಲ್ಲಿ
ಪ್ರವೇಶವಿಲ್ಲ.ಇದು ಒಂದು ರೀತಿಯಲ್ಲಿ ಜ್ಯೂಸ್ ಸೆಂಟರ್ ಇದ್ದಂತೆ. ಅಲ್ಲಾದರೆ ಹಲವು ಹಣ್ಣಿನ ರಸ
ಸಿಗಬಹುದು ಆದರೆಅಲ್ಲಿ ದೊರೆಯುವುದು ಒಂದೇ ಒಂದು ಐಟಂ. ಅದೇ ಫಿಲ್ಟರ್ಕಾಫಿ..
ಇರ ಪ್ರಭಾವ
ಎಷ್ಟಿದೆಯೆಂದರೆ ಸಂಪ್ರದಾಯಸ್ಥರಾದ ಪಂಚೆಶಾಲು ತ್ರಿಪುಂಡ ಧಾರಿಗಳಾದ ಪುರುಷರೂ ಮತ್ತು, ಕಾಂಜೀವರಂ ರೇಷ್ಮೆ ಉಟ್ಟು ಹಣೆಯಲ್ಲಿ
ಉದ್ದನೆಯ ಕುಂಕುಮ ತಲೆಯಲ್ಲಿ ಹೂ ಮುಡಿದ ಮಹಿಳೆಯರು ಎಗ್ಗಿಲ್ಲದೆ ಕಾಫಿ ಕುಡಿಯುವುದು
ಕಂಡುಬರುವುದು. ಇನ್ನೊಂದು ಅಚ್ಚರಿ ಎಂದರೆ ಅಷ್ಟು ಬಿಸಿಯಾದ ಕಾಫಿಯನ್ನೂ ಅವರು ಹಿತ್ತಾಳೆಯ ಲೋಟದ
ಅಂಚನ್ನು ತುಟಿಗೆ ತಗುಲಿಸದೆ ಎತ್ತಿ ಬಾಯಿಗೆ ಸುರಿದುಕೊಳ್ಳುವ ವಿಧಾನ.
ಈ ಕಾಫಿಯ ಹೆಸರಿನ
ಮೂಲ ಬೆದಕಿದಾಗ ವಿಭಿನ್ನ ವಿವರಣೆಗಳು ದೊರೆತವು. ಕುಂಬಕೋಣಂನಲ್ಲಿ ವಿಶೇಷವಾಗಿ ತಯಾರಿಸಿದ ಫಿಲ್ಟರ್ಕಾಫಿ ಎಂಬ ಪ್ರಥಮ ಮಾಹಿತಿ ದೊರೆಯಿತು. ಅಲ್ಲಿ ಕಾಫಿ ಪುಡಿಗಿಂತ ಹಾಲಿಗೆ
ಪ್ರಥಮ ಆದ್ಯತೆ. ವಿಶೇಷವಾಗಿ ಅವರು ಬಳಸುವುದು ಹಸುವಿನ ತಾಜಾಹಾಲು. ಅದಕ್ಕೆ ನೀರು ಬೆರಸುವ ಹಾಗಿಲ್ಲ.
ಹಾಲಿನ ಪರಿಶುದ್ಧತೆಯನ್ನು ಅಳೆಯಲು ಲ್ಯಾಕ್ಟೋ ಮೀಟರ್
( ಡಿಗ್ರಿ) ಬಳಸಿ ಶುದ್ಧ ಹಾಲು
ಗುರುತಿಸಿ ಅದರಿಂದ ಕಾಫಿ ಮಾಡುವರು.ಅದಕ್ಕೇ ಆ ಹೆಸರು ಬಂದಿದೆ ಎಂಬ ವಾದ ವೂಇದೆ. ಇನ್ನೊಂದು ವಿವರಣೆ
ಎಂದರೆಫಿಲ್ಟರ್ನಲ್ಲಿ ಹಾಕುವ ಪುಡಿಯಯಿಂದ ಮೊದಲು ಇಳಿದ ಡಿಕಾಷನ್ ಅನ್ನು ಫಸ್ಟ ಡಿಗ್ರಿ ಕಾಫೀ ಎಂನ್ನುವರು.ಅದನ್ನು ಹಣವಂತ ರಸಿಕರು ಮಾತ್ರ
ಕುಡಿಯುವರು. ಉಳಿದವರು ಎರಡನೆಯ ಸಲ ಇಳಿದ ಡಿಕಾಷನ್ ಮತ್ತು ಬಡವರು ಮೂರನೆ ಸಲ ಇಳಿದ ಕಾಫಿಯನ್ನು ಬಳಸುವರು. ಈ ರೀತಿ
ಉತ್ತಮ ಗುಣ ಮಟ್ಟದ ಡಿಕಾಷನ್ ನಿಂದ ತಯಾರಾದುದನ್ನೇ ಫಸ್ಟ್ ಡಿಗ್ರೀ ಕಾಫೀ.ಎಂದು ಗುರುತಿಸುವರು.
ಕಾಫೀ ಪುಡಿ ಮಾಡಲು . ಚಿಕ್ಕಮಗಳೂರಿನಿಂದ ತರಿಸಿದ ಕಾಫಿ ಬೀಜ ೭೫% ಮತ್ತು ಚಿಕೋರಿ ೨೫ % ಬೆರಸಿದ ತಾಜಾಪುಡಿ ಮಾತ್ರ ಬಳಸುವರು.ಚಿಕೋರಿಯನ್ನು ಬಳಸುವುದರಿಂದ
ತಮಿಳಿನ ಉಚ್ಚಾರಣೆಯಲ್ಲಿ ಚಿಕೋರಿಯು ಚಿಗೋರಿಯಾಗಿ ನಂತರ ಚಿಗ್ರಿ ಕೊನೆಗೆ ಸಾಮಾನ್ಯರ ಬಾಯಲ್ಲಿ ಡಿಗ್ರಿ ಆದುದರಿಂದ ಈ ಹೆಸರು.ಫಸ್ಟ ಡಿಗ್ರಿ ಕಾಫಿ ಎಂದಾಗಿದೆ ಅನ್ನುವ ವಿವರಣೆಯೂ ಇದೆ.


ಇದರ ತಯಾರಿಗೆ ಹತ್ತಾಳೆಯ ಫಿಲ್ಟರ್ ಅನ್ನು ಬಳಸಲೇ ಬೇಕು.ಡಿಕಾಷನ್ ಅನ್ನು ಹಾಲಿಗೆ
ಹಾಕುವುದಿಲ್ಲ. ಹಾಲನ್ನೇ ಡಿಕಾಷನ್ಗೆ ಹಾಕ ಬೇಕು.ಹಸುವಿನ ಶುದ್ಧ ಹಾಲನ್ನು ಮಾತ್ರ ಹಾಕುವರು.
ನೀರು ಬೆರಸುವ ಹಾಗಿಲ್ಲ . ಡಿಕಾಷನ್ ಅನ್ನು ಮತ್ತೆ ಮತ್ತೆ ಕಾಯಿಸಿ ಬಳಸುವಂತಿಲ್ಲ. ಹಾಗೆ
ಮಾಡಿದರೆ ಅದರ ಸ್ವಾದ ಕೆಡುವುದು. ಗ್ರಾಹಕರಿಗೆ ಕಾಫಿ ಕೊಡುವುದಕ್ಕಿಂತ ಮುಂಚೆ ಹಿತ್ತಾಳೆ ಲೋಟ ಮತ್ತು ಬಟ್ಟಲುಗಳಿಂದ
ಎರಡುಸಾರಿ ಎತ್ತರದಿಂದ ಕಾಫಿ ಸುರಿಯುವರು. ಅದನ್ನು ನೋಡಿದರೆ ಕಾಫಿಯನ್ನು ಮೀಟರ್ಲೆಕ್ಕದಲ್ಲಿ
ಕೊಡುವರೇನೋ ಎನ್ನಿಸುವುದು. ಅದರಿಂದ ಲೋಟದಲ್ಲಿನ ಕಾಫಿಯ ಮೇಲ್ಮೈನಲ್ಲಿ ಹಾಲಿನ ನೊರೆ
ಬರುವುದು.ಜೊತೆಗೆ ಕಾಫಿ ಪುಡಿಯನ್ನುನಿರ್ವಾತ ಬಾಟಲಿಯಲ್ಲಿ ಸಂಗ್ರಹಿಸುವರು. ಅನೇಕರು
ಹತ್ತಿರದಲ್ಲಿಯೇ ಹಸು ಸಾಕಣೆ ಮಾಡಿರುವವರ ಜೊತೆ ಒಪ್ಪಂದ ಮಾಡಿಕೊಂಡು ದಿನಕ್ಕೆ ಮೂರು ಬಾರಿ ಆಗಲೇ ಹಿಂಡಿದ
ಹಾಲು ಪೂರೈಕೆ ಆಗುವಂತೆ ವ್ಯವಸ್ಥೆ ಮಾಡಿ ಕೊಂಡಿರುವರು.
ಯಾವುದೇ ಕಾರಣಕ್ಕೂ ಪಾಕೆಟ್ಹಾಲು ಬಳಸುವುದಿಲ್ಲ.. ನಕಲಿ ಹೋಟೆಲ್ಗಳೂ ಇವೆ. ಅದಕ್ಕೇ ತಮ್ಮದೇ ಆದ ಹೋಟೆಲ್ ಚೈನ್ ತೆರೆದಿರುವರು.ಅನೇಕ ನಿಬಂದನೆಗಳನ್ನು
ಹಾಕಿ ಲಕ್ಷಾಂತರ ಠೇವಣಿ ಪಡೆದು ಮೂಲಭೂತ ಸೌಕರ್ಯ ಒದಗಿಸಿ, ಗುಣ ಮಟ್ಟ ಪರೀಕ್ಷಿಸುವ
ವ್ಯವಸ್ಥೆಮಾಡಿ ಪರಿಶುದ್ಧತೆ ಕಾಪಾಡುವ ಪ್ರಯತ್ನ ನಡೆದಿದೆ. ಅಂತೂ ತಮಿಳುನಾಡಿನ ಪ್ರವಾಸಿಗರ
ಬಾಯಿಗೆ ಘಮಘಮ ಬಿಸಿ ಕಾಫಿ ಕೊಡುವ ಈ ಕುಂಭಕೋಣಂ ಡಿಗ್ರಿ ಕಾಫಿಯ ಉದ್ಧೇಶ ತಕ್ಕ ಮಟ್ಟಿಗೆ ಸಫಲವಾಗಿದೆ
Sunday, January 4, 2015
ಶ್ರೀ ಪ್ರಶಸ್ತಿ ಚಿತ್ರ ಸಂಪುಟ
ಬಿ. ಎಸ್ ಸಣ್ಣಯ್ಯ ಅವರಿಗೆ ಶ್ರೀಸಾಹಿತ್ಯ ಪ್ರಶಸ್ತಿ ಪ್ರದಾನ
![]() |
ಎಚ್.ಶೇಷಗಿರಿರಾವ್, ನಿರ್ದೇಶಕರು, ಹಸ್ತಪ್ರತಿವಿಭಾಗ |
ಹಿರಿಯ ಸಂಶೋಧಕ, ಹಸ್ತ ಪ್ರತಿ ಸಂಗ್ರಾಹಕ , ಸಂಪಾದಕ ಮತ್ತು ಕೃತಿಕಾರ ಶ್ರೀ. ಬಿ.ಎಸ್ ಸಣ್ಣಯ್ಯ ಅವರಿಗೆ ಬಿ. ಎಂ. ಶ್ರೀ ಸ್ಮಾರಕ ಪ್ರತಿಷ್ಠಾನವು ಶ್ರೀ ಸಾಹಿತ್ಯ ಪ್ರಶಸ್ತಿಯನ್ನು ಶನಿವಾರ ಬಿ.ಎಂ.ಶ್ರೀ ಅವರ ಜನುಮ ದಿನದಂದು ಇಂಡಿಯನ್ ಇನಸ್ಟಿಟ್ಯೂಟ್ ಅಫ್ ವರ್ಲ್ದ ಕಲ್ಚರ್ಸಭಾಂಗಣದಲ್ಲಿ ನಾಡೋಜ ಡಾ. ಕಮಲಾ ಹಂಪನಾ ಪ್ರದಾನ ಮಾಡಿದರು..ತಮ್ಮ ಮತ್ತು ಪುರಸ್ಕೃತರ ಅರವತ್ತು ವರ್ಷದ ಒಡನಾಟವನ್ನು ನೆನಪಿಸಿಕೊಂಡು ಎಲೆಯ ಮರೆಯ ಕಾಯಿಯಂತೆ ಪ್ರಚಾರದ ಹಂಬಲವಿಲ್ಲದೆ ಶ್ರಮ,ಶ್ರದ್ಧೆ ಮತ್ತು ಆಳವಾದ ಪಾಂಡಿತ್ಯ ಅಗತ್ಯವಿರುವ ಕೆಲಸದಲ್ಲಿ ಜೀವನವನ್ನೇ ಮುಡುಪಾಗಿಟ್ಟು ಮಾಡಿದ ಅಪಾರ ಸಾಧನೆಯನ್ನು ಎತ್ತಿ ತೋರಿಸಿದರು.
ಡಾ. ವೈ.ಸಿ. ಭಾನುಮತಿಯವರು ಕನ್ನಡ ಅಧ್ಯಯನ
ಸಂಸ್ಥೆಯಲ್ಲಿನ ತಮ್ಮ ನಾಲ್ಕು ದಶಕದ ಅನುಭವದಿಂದ ಬಿ.ಎಸ್ ಸಣ್ಣಯ್ಯ ಅವರು ಹೇಗೆ ಹಸ್ತಪ್ರತಿ
ಸಂಗ್ರಹಣೆ, ಸಂಪಾದನೆ ಮತ್ತು ಕೃತಿ ರಚನೆಗಾಗಿ ೩೨ ವರ್ಷ ಇಲಾಖೆಯಲ್ಲಿ ನಂತರ ೨೨ ವರ್ಷ
ಸಂಶೋಧನಾ ಸಂಸ್ಥೆಯಲ್ಲಿ ಅವಿರತ ಶ್ರಮಮಾಡಿ ಹಸ್ತಪ್ರತಿಗಳಲ್ಲಿದ್ದ ಸಾಹಿತ್ಯ ಮತ್ತು
ಶಾಸ್ತ್ರ ಗ್ರಂಥಗಳನ್ನು ಬೆಳಕಿಗೆ ತಂದು ಮಾಡಿರುವ ಸಾಹಿತ್ಯ ಸೇವೆಯಿಂದ ಸಂಶೋಧನ ಮತ್ತು ಸಂಪಾದನಾ ರಂಗದ ದೊಡ್ಡಣ್ಣನಾಗಿರುವರು ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಾ ಎಂಬತ್ತೇಳರ ಹರಯದಲ್ಲೂ ಕೆಲಸ ಮಾಡಲು
ಸಾಧ್ಯವಾಗಿರುವುದು ಗುರುಗಳಾದ ಡಿ.ಎಲ್ಎನ್ ಮತ್ತು ತ.ಸು. ಶಾಮರಾಯರ ಬೋಧನೆ, ಯಾವುದೇ ಕೆಲಸವಾದರೂ
ನಿಷ್ಠೆ ಮತ್ತು ಶ್ರದ್ಧೆ ಯಿದ್ದರೆ ಸಾಧನೆ ಸಾಧ್ಯ, ಅದರಿಂದಾಗಿಯೇ ಮಿತ ಆದಾಯದಲ್ಲಿಯೂ ಮರಿಮಕ್ಕಳಾದಿಯಾಗಿ ಎಲ್ಲರೂ
ನೆಮ್ಮದಿಯಿಂದಿರುವ ಕುಟುಂಬ ತಮ್ಮದು ಎಂದರು.
ಅಲ್ಲದೆ ಪ್ರತಿಷ್ಠಾನ ಮಾಡುತ್ತಿರುವ ಉತ್ತಮ
ಸೇವೆಗೆ ಒತ್ತಾಸೆಯಾಗಿ ತಮ್ಮಕೃತಿಗಳನ್ನು ಮತ್ತು ೨೫ ಸಾವಿರ ರೂಪಾಯಿಗಳ ಕೊಡುಗೆ ನೀಡಿದರು
ಕರುಣಾಳು ಬಾ ಬೆಳಕೆ ಎಂಬ ಬಿ.ಎಂ.ಶ್ರೀ ಯವರ ಪ್ರಾರ್ಥನೆಯೊಂದಿಗೆ ಸಮಾರಂಭ ಪ್ರಾಂಭವಾಯಿತು. ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಪಿ.ವಿ. ನಾರಾಯಣ ಅವರು
ಎರಡನೆಯ ಶ್ರೀಸಾಹಿತ್ಯ ಪ್ರಶಸ್ತಿಯ ಆಯ್ಕೆಯ ವಿಧಾನವನ್ನುವಿವರಿಸುತ್ತಾ. ಈ ಪ್ರಶಸ್ತಿಗೆ ಕಾಣರಾದ ಶ್ರೀಮತಿ ಕಮಲಿನಿ ಶಾ. ಬಾಲುರಾವ್
ಅವರ ಔದಾರ್ಯ ನೆನೆಯುತ್ತಾ ಪ್ರತಿಷ್ಠಾನದ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು.
ಕಾರ್ಯದರ್ಶಿಗಳಾದ ರವೀಂದ್ರನಾಥ ಅವರು ಕಾರ್ಯಕ್ರಮ ನಿರೂಪಿಸಿದರು, ಡಾ.ಅಬ್ದುಲ್ ಬಷೀರ್ ಅವರು
ಅಭಿನಂದನೆ ಪತ್ರ ವಾಚನ ಮಾಡಿದರು.
ಕನ್ನಡ ಅಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಎಲ್. ಹನುಮಂತಯ್ಯನವರು ಇಂಥಹ ಅಪರೂಪದ ಸಮಾರಂಭಕ್ಕೆ ಕಾರಣವಾದ ಪ್ರತಿಷ್ಠಾನವನ್ನು
ಅಭಿನಂದಿಸಿ , ಕನ್ನಡದ ವಿದ್ವತ್ ಕೆಲಸ ಮಾಡುತ್ತಿರುವ ಸಂಸ್ಥೆಗೆ ಪ್ರಾಧಿಕಾರ ಮತ್ತು ಸರ್ಕಾರ
ಜೊತೆಯಾಗಿರುವು ದೆಂದು ಅಧ್ಯಕ್ಷ ಭಾಷಣದಲ್ಲಿ ಹೇಳಿದರು.
ಕನ್ನಡ ಸಾಹಿತ್ಯ ಲೋಕದ ಹಿರಿಯರು,, ಬಿ.ಎಂ ಶ್ರೀಯವರ ಮೊಮ್ಮಗಳಾದ ಶ್ರೀಮತಿ ಕಮಲಿನಿ ಶ.ಬಾಲುರಾವ್ , ಕಳೆದ ವರ್ಷ ಪ್ರಥಮ ಪ್ರಶಸ್ತಿ ವಿಜೇತ ಡಾ.ಎನ್ಎಸ್ ಲಕ್ಷ್ಮ ನಾರಾಯಣ ಭಟ್ಟ ಮತ್ತು ಅಪಾರ ಸಂಖ್ಯೆಯ ಸಾಹಿತ್ಯಾಭಿಮಾನಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು
ಶ್ರೀ
ರಾಮಪ್ರಸಾದ, ಖಜಾಂಚಿ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

![]() |
ಅಭಿನಂದನಾ ಪತ್ರ |
![]() |
ಶ್ರೀಸಾಹಿತ್ಯ ಪ್ರಶಸ್ತಿ ಸ್ಮರಣ ಫಲಕ |
ಡಾ.ಪಿ ವಿ ಎನ್, ಡಾ. ಕಮಲಾಹಂಪನಾ, ಡಾ. ಎಲ್ ಹನುಮಂತಯ್ಯ,ಶ್ರೀ ಬಿ.ಎಸ್ ಸಣ್ಣಯ್ಯ, ಡಾ. ವೈಸಿ .ಭಾನುಮತಿ ಮತ್ತು ಪ್ರೊ. ಎಂ ಎಚ್.ಕೃಷ್ಣಯ್ಯ |
ಪ್ರಸ್ತಾವನಾ ನುಡಿ ಆಡಿದ ಅಧ್ಯಕ್ಷ ಡಾ. ಪಿವಿ.ನಾರಾಯಣ |
ಶ್ರೀ ಸಾಹಿತ್ಯ ಪ್ರಶಸ್ತಿ ಪ್ರದಾನ |
ಸಣ್ಣ ಯ್ಯ ನವರನ್ನು ಸ್ವಾಗತಿಸುತ್ತಿರುವ ಅದ್ಯಕ್ಷರು |
ಡಾ.ಎಲ್ ಹನುಮಂತಯ್ಯನವರಿಗೆ ಸ್ವಾಗತ ನೀಡಿಕೆ |
ಡಾ. ಕಮಲಾ ಹಂಪನಾ ಅವರಿಗೆ ಸ್ವಾಗತ |
ಪ್ರಶಸ್ತಿ ಪ್ರದಾನ ಮಾಡಿದ ಡಾ. ಕಮಲಾ ಹಂಪನಾರ ಮಾತು |
ಅಭಿನಂದನಾ ಪತ್ರ ವಾಚಿಸುತ್ತಿರುವ ಕಾರ್ಯದರ್ಶಿ ಡಾ ಜಿ. ಅಬ್ದುಲ್ ಬಷೀರ್ |
ಅಭಿನಂದನಾ ಪತ್ರ ವಾಚಿಸುತ್ತಿರುವ ಡಾ. ಜಿ. ಅಬ್ದುಲ್ ಬಷೀರ್ |
![]() |
ಸಕುಟುಂಬಿಯಾಗಿ ಸನ್ಮಾನಿತರು |
Saturday, January 3, 2015
ಶ್ರೀ ಪ್ರಶಸ್ತಿ
ಬಿ. ಎಂ.ಶ್ರೀ ಪ್ರತಿಷ್ಠಾನವು ನೀಡುವ ಎರಡನೆಯ ಶ್ರೀ ಸಾಹಿತ್ಯ ಪ್ರಶಸ್ತಿ ಈ ಬಾರಿ ಅಂದರೆ ೨೦೧೪-೧೫ ನೇ ಸಾಲಿಗೆ
ಶ್ರೀ. ಬಿ.ಎಸ್ ಸಣ್ಣಯ್ಯ ಅವರಿಗೆ ದೊರಕಿದೆ. ಸ್ಮರಣ ಫಲಕದೊಂದಿಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ಲಭಿಸಲಿದೆ
ಮಂಡ್ಯ ಜಿಲ್ಲೆಯ ರೈತ ಕುಟುಂಬದಲ್ಲಿ ೧೯೨೮ ರಲ್ಲಿ ಜನಿಸಿದರು..ಪಿರಿಯಾಪಟ್ಟಣ
ತಾಲೂಕಿನ ಬೋಗನ ಹಳ್ಳಿಯಲ್ಲಿ ಜನಿಸಿದರು. ತಂದೆ ಸಣ್ಣೇ
ಗೌಡ ತಾಯಿ ಬೋರಮ್ಮ . ಪ್ರಾಥಮಿಕ ಮ ತ್ತು ಹೈಸ್ಕೂಲು ಶಿಕ್ಷಣ ಪಡೆವಾಗ
ನಡೆದೇ ಹೋಗುತಿದ್ದರು. ನಂತರ ಅವರು ಮೈಸೂರಿನಲ್ಲಿ ತಮ್ಮ ಶಿಕ್ಷಣ ಪಡೆದರು.ಪದವಿ ಮತ್ತು ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಡಿಲಿಟ್ ಅನ್ನು ಪಡೆದರು. ಹಾಗೂ ಡಿಪ್ಲೊಮಾ ಇನ್ ಆರ್ಕೀವ್ಸ್ ಕೂಡಾ ಮಾಡಿದರು ೧೯೬೫ ರಲ್ಲಿ ಪ್ರಾಚ್ಯ ವಿದ್ಯಾ
ಸಂಶೋಧನ ಇಲಾಖೆಯಲ್ಲಿ ವೃತ್ತಿ ಜೀವನ ಮೊದಲು ಮಾಡಿದರು.. ಆನಂತರ ಮಾನಸ ಗಂಗೋತ್ರಿ ಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ೩೨ ವರ್ಷ ಸಾರ್ಥಕ ಸೇವೆ ಮಾಡಿ ಉಪನಿರ್ದೇಶಕಾಗಿ ನಿವೃತ್ತರಾದರು.
![]() |
ಪ್ರಶಸ್ತಿ ಫಲಕ |
. ಹಸ್ತಪ್ರತಿ ಸಂಗ್ರಹದಲ್ಲೂ ಅವರದು
ಹೆಮ್ಮೆಯ ಸಾಧನೆ. ಹಳ್ಳಿ ಹಪಟ್ಟಣಗಳನ್ನು ಯಾವುದೇ ಸಾರಿಗೆ ಸಾಧನಗಳಿಲ್ಲದ ಕಾಲದಲ್ಲಿ
ಕಾಲ್ನೆಡೆಗೆಯಲ್ಲಿ, ಸೈಕಲ್ಲೇರಿ ಎತ್ತಿನಗಾಡಿಯಲ್ಲಿ ಸವಾರಿ ಮಾಡಿ ಹೋಗಿ ಸಂಗ್ರಹಿಸಿದರು. .ಅವರ ಶ್ರಮ ಮತ್ತು ಸಂಶೋಧನೆಯ ಫಲ ಅನೇಕ ಹಳೆಗನ್ನಡ ಕೃತಿಗಳು ಕನ್ನಡಿಗರ ಪಾಲಿಗೆ ದಕ್ಕಿದವು.ಜೈನ ಸಾಹಿತ್ಯಕ್ಕಂತೂ ಅವರದು ಅನುಪಮ ಸೇವೆ.
ನಿವೃತ್ತರಾದ ನಂತರವೂ ಶ್ರವಣಬೆಳಗೊಳದ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನ ಸಂಸ್ಥೆಯಲ್ಲೂ ಹಸ್ತ ಪ್ರತಿವಿಭಾಗದ ಮುಖ್ಯಸ್ಥರಾಗಿ ಅಪ್ರಕಟಿತ ಕೃತಿಗಳ ಪರಿಷ್ಕರಣೆ ಯಲ್ಲಿ ಸೇವೆ ಸಲ್ಲಿಸುತ್ತಿರುವರು.
ಜೀವನದ ಉದ್ದಕ್ಕೂ ಸಂಶೋಧನೆ, ಸಂಪಾದನೆ , ಕೃತಿ ರಚನೆ ಮತ್ತು ಮಾರ್ಗದರ್ಶನ ನೀಡಿ ಹಸ್ತಪ್ರತಿ ರಂಗದ ದೊಡ್ಡಣ್ಣನಾಗಿರುವರು. ಈ ವರ್ಷ ಪ್ರೊ.ಎಂ.ವಿ. ಸೀತಾರಾಮಯ್ಯನವರ ಪ್ರೀತಿಯ ಕ್ಷೇತ್ರವಾದ ಹಸ್ತ ಪ್ರತಿ ಮತ್ತು ಸಂಶೋಧನೆಯಲ್ಲಿನ ಸಾಧನೆಗಾಗಿ ಪ್ರಶಸ್ತಿ ಪಡೆದಿರುವರು.
.
ಹಸ್ತಪ್ರತಿ ತಜ್ಞರಾದ ಇವರಗೆ ಬಂದಿರುವ ಪ್ರಶಸ್ತಿ ಸನ್ಮಾನಗಳು ಅನೇಕ.ಅವುಗಳಿಗೆ ಶಿಖರಪ್ರಾಯವಾಗಿ ಶ್ರೀ ಪ್ರಶಸ್ತಿ ಸಂದಿದೆ.
![]() |
ಕುಟುಂಬ ವತ್ಸಲ ಬಿ.ಎಸ್.ಸಣ್ಣಯ್ಯ |
Thursday, January 1, 2015
Subscribe to:
Posts (Atom)