Tuesday, November 10, 2015

ದೀಪಾವಳಿ ಶುಭಾಶಯಗಳು.



                                         

                



    
                 
 ದೀಪಾವಳಿ ನಿಮ್ಮ ಜೀವನದಲ್ಲಿ ಹೊಸ ಬೆಡಗು, ಬೆಳಕು  ಮತ್ತು ಬೆರಗನ್ನು ತರಲಿ


                               ಶೇಷಗಿರಿರಾವ್.ಎಚ್‌ 

Tuesday, June 30, 2015

ಕದಂಬ ಮಧಾಂತ ವರ್ಮನ ತಾಮ್ರಪಟ -390




 
ಸ್ವಸ್ತಿಃ ಜಿತಭಗವತಾ ವಿಜಯ್ಹೃಞ್ಗ್ಯ ಸ್ವಾಮಿ ಮಹಾಶೇನ ಮಾತೃಗಣ ನುದ್ಯಾತಾಭಿಷೇಕಾನಾಮ್ ಮಾನವ್ಯಸ  ಗೋತ್ರಾಣಾಂ ಹಾರಿತೀ ಪುತ್ರಾಣಾಂ


ಪ್ರತಕೃತ ದ್ವಾಧ್ಯಾಯ ಚರ್ಚ್ಚಾ ಪಾರಾಣಂ ಆಶ್ರೀತ ಜನಾಮ್ಭಾನಾಂ ಕದಮ್ಭಾನಾಂ  
ಅಶ್ವ ಮೇಧಾಭವೃತ ಸ್ನಾನ ಪವಿತ್ರೀಕೃತಾನ್ನಾಮಯಾನಾಂಶ್ರೀ ಕುಮಾರವರ್ಮ್ಮಮಹಾರಾಜಸ್ಯ ಪುತ್ರಃ ತ್ರಿವರ್ಗ ಸಮ್ಪನ್ನಾಃ ಮಿತರ ಕಮುದಾಗತ




Thursday, June 25, 2015

ಮೂರನೆ ಗೋವಿಂದನ ತಾಮ್ರ ಪಟ ಕ್ರಿ ಶ.- 780






    ಸ್ವಸ್ತಿಶಕ  ನೃಪ  ಕಾಳಾತೀ ತ    ಸಂವ  ತ್ಸರಂಗಳೇಏಳ್ನೂರು ಇಪ್ಪ ತ್ತಾ  ರನೆ


    ಯಾ ಸುಭಾನು ಎಮ್ಭಾ ವರ್ಷದಾ ವೈ  ಸಾಖ   ಮಾಸ ಕೃ  ಷ್ಣ ಪ






  ಕ್ಷ   ಪಞ್ಚಮಿ  ಬೃ  ಹ    ಸ್ಪತಿ       ವಾರ ಮಾಗಿ  ಸ್ವ  ಸ್ತಿ     ಪ್ರ  ಭೂ

      ತ ವ ರ್ಷ ಶ್ರೀ ಪ್ರುಥ್ವೀ   ವಲ್ಲಭ   ಮಹಾರಾಜಾಧಿ    ರಾಜ ರಾಜಪರ್ಮೇ                

   ಶ್ವರ ಗೋ ಯಿ ನ್ದರ   ಭಟಾರರಾ      ಗಾ   ಮು  ಣ್ಡ ಬ್ಬೆ  ಮ  ಹಾ  ದೇ


ವಿ ಯರಾಗಿ  ರಾಜ್ಯ   ಪ್ರವ           ರ್ದ್ದ ಮಾನ       ಕಾ   ಲ  ದೊ ಳ್                             


     ಕ ಞ್ಚಿ   ಯ   ನಾ  ಳ್ವ ದ ನ್ತಿ ಗ ನ ಮೇ   ಗೆ  ಳ್ದು ಕ  ಪ್ಪ ಗೊ  ಳ              


     ಲ್ಬ   ನ್ದ   ಲ್ಲಿ ತುಂಗಭದ್ರೆ        ಯಾ ತಡಿ  ಯೊ   ಳ್ತಾ   ಣ  ಬೀಡುಗ

  ಳಿ     ಳ್ದು ರಾ ಮೇ ಶ್ವ  ರ ಎಮ್ಭಾ  ತೀರ್ತ್ಥ  ದಾ ಮೋದೊ  ಲೊ   ಳ್ಮೆ  ಪ್ಪಿ


   ಕ್ಕಿಪೊರದಪನ್ದಿಗಳನಿರೆಯಲ್ವನ್ದಲ್ಲಿ ತೀರ್ತ್ಥದೊಳ್ಪ




ನ್ಕಣ್ಡು ಶಿವಧಾರಿ ಎಮ್ಬ ಗೊರವರ್ಗ್ಗೆ ಮುದಮ್ಬೆಯಪ
     ಮನನ್ತು ಕೀರ್ತಿವರ್ಮ್ಮೊರಾಜರಪರಮೇಶ್ವರದತ್ತಮಾನಿವಿಟ್ಟಾರ ಇ

         

Saturday, June 20, 2015

ಕನ್ನಡ ಲಿಪಿ ವಿಕಾಸ-ಶಾಸನಗಳ ಮೂಲಕ

ಕನ್ನಡ  ಲಿಪಿ ವಿಕಾಸ-ಹಲ್ಮಿಡಿ ಮೊದಲ ಶಾಸನ
ಕನ್ನಡ ಲಿಪಿಗೆ ಸುಮಾರು ಎರಡು ಸಾವಿರ ವರ್ಷದ  ಇತಿಹಾಸವಿದೆ, ಕ್ರಿಪೂ,೩ನೇ ಶತಮಾನದ ಲ್ಲಿ ದೊರೆತ ಅಶೋಕನ ಶಾಸನಗಳ ಬ್ರಾಹ್ಮಿ ಲಿಪಿಯೇ ಭಾರತದ ಬಹುತೇಕ ಭಾಷೆಗಳ ಲಿಪಿಗಳ ಮಾತೆ. ಆದರಿಂದ ಉಗಮವಾಗಿ ಇಂದಿನ ಆಧುನಿಕ ರೂಪ ಪಡೆಯಲು ಸುಮಾರು ಎರಡು ಸಹಸ್ರಮಾನಗಳೇ ಬೇಕಾದವು.ಅಶೋಕನ ಶಾಸನಗಳಿಂದ ಮೊದಲಾದ ಈ ಲಿಪಿ ವಿಕಾಸ ಯಾತ್ರೆಗೆ  ಶಾತವಾಹನ, ಕದಂಬ, ಗಂಗ , ಬಾದಾಮಿ ಚಾಲುಕ್ಯ, ರಾಷ್ಟ್ರಕೂಟ ,ಕಲ್ಯಾಣ ಚಾಲಕ್ಯ ಹೊಯ್ಸಳ ಸೇವುಣ, ಕಳಚೂರು,ವಿಜಯನಗರ ಮತ್ತು ಮೈಸೂರು ಅರಸರ ಆಳ್ವಿಕೆಯ ಕೊಡುಗೆ ಗಣನೀಯ. ಅವರುಗಳ ಕಾಲದ ಶಾಸನಗಳನ್ನು ಗಮನಿಸಿದರೆ ಇದು ತಿಳಿಯುತ್ತದೆ. ಶಾಸನಗಳ ಮೂಲಕ ಲಿಪಿ ವಿಕಾಸ ಅರಿಯುವ ಕಿರುಪ್ರಯತ್ನ  ಇದು. ಶಾಸನಗಳ ಸಾಲುಗಳನ್ನು ಆಧುನಿಕ ಕನ್ನಡದಲ್ಲಿ ನೀಡುವುದರಿಂದ ಸಾಮಾನ್ಯ ಓದುಗನಿಗೂ ಆಸಕ್ತಿ ಮೂಡಬಹುದೆಂಬ ಆಶಯವೇ ಇದರ  ಉದ್ದೇಶ. ಪ್ರಾಜ್ಞರು ಸುಧಾರಣೆಗೆ ಸಲಹೆ ಸೂಚನೆ ನೀಡಿದರೆ ಸ್ವಾಗತ.
ಹಲ್ಮಿಡಿ ಶಾಸನವು ಕನ್ನಡದಲ್ಲಿ ಈವರೆಗೆ  ದೊರೆತಿರುವ ಅತಿ  ಪ್ರಾಚೀನ  ಶಿಲಾಶಾಸನ, ಇದರ  ಕಾಲ ಕ್ರಿ.ಶ  ೪೫೦ ಇದನ್ನು ಕದಂಬ ವಂಶದ ಕಾಕುಸ್ಥವರ್ಮನ  ಅವಧಿಯಲ್ಲಿ ಕಂಡರಿಸಲಾಗಿದೆ.ಇದೊಂದು ವೀರಗಲ್ಲು. ಹಾಗೂ ದಾನ ಶಾಸನ. ಇದರ ಲಿಪಿ ಮತ್ತು ಕದಂಬರ ಸಂಕ್ರಮಣ  ಕಾಲದ್ದು.. ಇದನ್ನುಪೂರ್ವ ಹಳಗನ್ನಡ ಎನ್ನುವರು. ಈ ಶಾಸನ  ಕರ್ನಾಟಕದ ಹಾಸನ ಜಿಲ್ಲೆಯ ಬೇಲೂರಿನಿಂದ ಸುಮಾರು ೧೯ ಕಿಲೊಮೀಟರ್ ದೂರದಲ್ಲಿನ  ಹ ಲ್ಮಿಡಿ ಹೆಸರಿನ ಹಳ್ಳಿಯ ವೀರಭದ್ರದೇವರ ಗುಡಿ ಹತ್ತಿರವಿದ್ದಿತು. ಈಗ ಅಲ್ಲಿ ಅದರ ಮಾದರಿ ಇಡಲಾಗಿದೆ. ಕನ್ನಡ ಶಾಸ್ತ್ರೀಯ ಭಾಷೆಯ ಸ್ಥಾನ ಪಡೆಯಲು ಇದು ಪ್ರಬಲ ಪುರಾವೆ ಎನಿಸಿದೆ.
ಅಟಆಸಕ್ತರ ಅನುಕೂಲಕ್ಕಾಗಿ ಮೂಲಶಾಸನದ ಪ್ರತಿ ಸಾಲೂ ,ಅದರಕೆಳಗೆ ಲಿಪ್ಯಾಂತರ  ನೀಡಲಾಗಿದೆ.ಬ್ರಾಹ್ಮಿ ಅಕ್ಷರದ ಕೆಳಗೆ ಅದರ ಲಿಪ್ಯಾಂತರ ಇರುವುದರಿಂದ ಓದುಗರು ಬ್ರಾಹ್ಮಿ ಕಲಿಯಲು ಅರ್ಥೈಸಲು ಅನುಕೂಲ.ಶಾಸನದ ತಿರುಳು ನೀಡಿದೆ.


                        


ಜಯತಿ ಶ್ರೀ ಪರಿಷ್ವರ್ಙ್ಗ ಶ್ಯಾರ್ಙ್ಗ [ವ್ಯಾ]ನತಿರ್ ಅಚ್ಯುತಃ ದಾನಕ್ಷೆರ್ ಯುಗಾನ್ತಾಗ್ನಿಃ [ಶಿಷ್ಟಾನಾನ್ತು ಸುದರ್ಶನಃ ನಮಃ ಶ್ರೀಮತ್ ಕದಂಬಪನ್ ತ್ಯಾಗ ಸಂಪನ್ನನ್ ಕಲಭೋg[ನಾ] ಅರಿ ಕಕುಸ್ಥಭಟ್ಟೋರನ್ ಆಳೆ ನರಿದಾವಿ[ಳೆ] ನಾಡುಳ್ ಮೃಗೇಶನಾಗೇನ್ದ್ರಾಭೀಳರ್ ಭ್ಭಟಹರಪ್ಪೋರ್ ಶ್ರೀ ಮೃಗೇಶ ನಾಗಾಹ್ವಯರ್ ಇರ್ವ್ವರಾ ಬಟರಿ ಕುಲಾಮಲ ವ್ಯೋಮತಾರಾಧಿನಾಥನ್ ಅಳಪ ಗಣ ಪಶುಪತಿಯಾ ದಕ್ಷಿಣಾಪಥ ಬಹುಶತಹವನಾಹವದು[ಳ್] ಪಶುಪ್ರದಾನ ಶೌರ್ಯ್ಯೋದ್ಯಮ ಭರಿತೋ[ನ್ದಾನ]ಪಶುಪತಿಯೆನ್ದು ಪೊಗೞೆಪ್ಪೊಟ್ಟಣ ಪಶುಪತಿ ನಾಮಧೇಯನ್ ಆಸರಕ್ಕೆಲ್ಲಭಟರಿಯಾ ಪ್ರೇಮಾಲಯಸುತನ್ಗೆ zಸೇನ್ದ್ರಕ ಬಣೋಭಯ ದೇಶದಾ ವೀರಪುರುಷಸಮಕ್ಷದೆ ಕೇಕಯ ಪಲ್ಲವರಂ ಕಾದೆಱದು ಪೆತ್ತಜಯನಾ ವಿಜ ಅರಸಂಗೆ ಬಾಳ್ಗೞ್ಚು ಪಲ್ಮಡಿಉಂ ಮೂೞುವಳ್ಳಿಉಂ ಕೊಟ್ಟಾರ್ ಬಟಾರಿ ಕುಲದೊನಳ ಕದಂಬನ್ ಕೞ್ದೋನ್ ಮಹಾಪಾತಕನ್ ಸ್ವಸ್ತಿ 
ಭಟ್ಟರ್ಗ್ಗೀಗೞ್ದೆ ಒಡ್ಡಲಿಆ ಪತ್ತೊನ್ದಿ ವಿಟ್ಟಾರಕರ
ಹಲ್ಮಿಡಿ ಶಾಸನದ ತಿರುಳು ಹೀಗಿದೆ- ಮೊದಲೆರಡು ಸಾಲುಗಳಲ್ಲಿ ಅಚ್ಯುತನ ಧ್ಯಾನವನ್ನು ಹೇಳಲಾಗಿದೆ. "ಲಕ್ಷ್ಮಿಯೊಡನಿರುವ ಅಚ್ಯುತನು ಶ್ಯಾಙ್ಗ ವೆಂಬ ಬಿಲ್ಲನ್ನು ಬಗ್ಗಿಸಿ ಹಿಡಿದಿದ್ದು ದಾನವರಿಗೆ ಪ್ರಳಯ ಕಾಲದ ಅಗ್ನಿಯಂತೆಯೂ ಸಜ್ಜನರಿಗೆ ಸುದರ್ಶನ ಚಕ್ರದಂತೆಯೂ ತೋರುತ್ತಾನೆ " . ನಂತರದ ಸಾಲುಗಳು ರಾಜನಿಗೆ ನಮನಗಳನ್ನು ಸಲ್ಲಿಸಿ, ಅಲ್ಲಿ ನಡೆದ ಘಟನಾವಳಿಯನ್ನು ತೆರೆದಿಡುತ್ತದೆ. " ಕದಂಬರಾಜ, ತ್ಯಾಗಸಂಪನ್ನ, ಕಲಭೋರನ ಶತ್ರು ಎಂದೆನಿಸಿರುವ ಕಕುಸ್ಥ(ತ್ಸ) ಭಟ್ಟೋರಕನು ಆಳುತ್ತಿದ್ದ ಕಾಲ. ಅವನ ಅಧೀನದಲ್ಲಿ ’ನರಿದಾವಿಳೆ ನಾಡಿನಲ್ಲಿ’ ( ಇಲ್ಲಿಯ ಸುತ್ತಲಿನ ಒಟ್ಟು ಪ್ರದೇಶ) ಮೃಗೇಶ ಮತ್ತು ನಾಗ ಎಂಬ ಅಧಿಕಾರಿಗಳಿದ್ದರು. ಅವರು ಮೃಗರಾಜ ಮತ್ತು ಸರ್ಪರಾಜರಂತೆ ವೈರಿಗಳಿಗೆ ಭಯಂಕರರೆನಿಸಿದ್ದರು. ಇವರ ಅಧೀನದಲ್ಲಿ ’ಕೀರ್ತಿಗೊಂಡ ಭಟರಿ’ ವಂಶವೆಂಬ ನಿರ್ಮಲಆಕಾಶಕ್ಕೆ ಚಂದ್ರನಂತೆ ಹೊಳೆಯುವ ಪಶುಪತಿ ಎಂಬ ಹೆಸರಿನವನಿದ್ದ. ಅಳೂಪ ವಂಶ ಸಮೂಹಕ್ಕೆ ಇವನು ಶಿವ (ಪಶುಪತಿ) ನಂತಿದ್ದ. ಪ್ರಸಿದ್ದವಾದ ದಕ್ಷಿಣಾ ಪಥದಲ್ಲಿ ನೂರಾರು ಯುದ್ಧಗಳೆಂಬ ಯಙ್ಞ ಮಾಡಿ ಬಲಿದಾನ ಮಾಡಿ ಶೌರ್ಯ ತೋರಿದ್ದ. ದಾನ ಪಶುಪತಿ ಎಂದು ಹೊಗಳಲ್ಪಟ್ಟಿದ್ದ. ಅವನು ’ಸೇಂದ್ರಕರು’ ಮತ್ತು ’ಬಾಣರ’ ಸೈನ್ಯವನ್ನು ಸೇರಿಸಿಕೊಂಡು ಕೇಕಯ ಪಲ್ಲವರೆದುರು ಕದಂಬರ ಪರವಾಗಿ ಯುದ್ದಮಾಡಿ ಜಯ ತಂದುಕೊಟ್ಟ. ಅದಕ್ಕಾಗಿ ’ಸೇಂದ್ರಕ’ ಮತ್ತು ’ಬಾಣ’ ದೇಶದ ಜನರ ಸಮ್ಮುಖದಲ್ಲಿ ಪಲ್ಮಡಿ(ಹಲ್ಮಿಡಿ) ಯನ್ನೂ ಮೂಳಿವಳ್ಳಿ ( ಇಂದಿನ ಮುಗುಳುವಳ್ಳಿ) ಯನ್ನೂ ಅವನ ಅಧೀನಕ್ಕೆ ಪ್ರೀತಿ ಪೂರ್ವಕವಾಗಿ ಕೊಡಲಾಯಿತು. ಇದು ವೀರನ ಕತ್ತಿ ತೊಳೆದು ವೀರದಾನ ಕೊಡುವ ಸಮಾರಂಭವಾಗಲು ನಾಡ ಅಧಿಕಾರಿಗಳಾದ ಶ್ರೀ ಮೃಗೇಶ ಮತ್ತು ನಾಗ ಅವರುಗಳು ಹಾಜರಿದ್ದು ಆ ಗ್ರಾಮಗಳನ್ನು ವಿಜಯಿಗೆ ನೀಡಿದರು. ಈ ದಾನವನ್ನು ಕದ್ದವನಿಗೆ ಪಾಪ ಬರುತ್ತದೆ. ಸೈನ್ಯದ ತೆರಿಗೆ ಅಧಿಕಾರಿಗಳಾಗಿದ್ದ ಮೃಗೇಶ ಮತ್ತು ನಾಗರು ಹಲ್ಮಿಡಿಯ ’ಕುರುಬ’ರಿಗೆ ಪ್ರೀತಿಯಿಂದ ತೆರಿಗೆ ವಿನಾಯಿತಿಯಾದ ’ಕುರುಂಬಿಡಿ’ ಯನ್ನು ಬಿಟ್ಟರು. ಇದನ್ನು ಕೆಡಿಸಿದವನಿಗೆ ಮಹಾಪಾತಕವು ಉಂಟಾಗುತ್ತದೆ. " ಎಂದು ಬರೆಸಲಾಗಿದೆ. ಮುಂದೆ ಎಡಪಕ್ಕದಲ್ಲಿ ಇನ್ನೊಂದು ಸಾಲನ್ನು ಬರೆದಿದ್ದಾರೆ. ಅದು ಹೀಗಿದೆ.. " ಇಲ್ಲಿನ ಗದ್ದೆಯ ಉತ್ಪನ್ನದಲ್ಲಿ ಭಟ್ಟರಿಗೆ (ಬ್ರಾಹ್ಮಣರಿಗೆ) ಹತ್ತನೆಯ ಒಂದು ಭಾಗದ ತೆರಿಗೆ ವಿನಾಯಿತಿಯನ್ನು ಕೊಟ್ಟರು " . ಇದು ಈ ಶಾಸನದ ತಿರುಳು.









  
  ನಮಃ ಶ್ರೀಮ  ತ್ಕ ದಂಬ ಪನ್ತ್ಯಾಗ  ಸಂ ಪನ್ನ ನ್ಕಲ ಭೋರನಾ ಅ ರಿಕ 


       ಕುಸ್ಥುಭಟ್ಟೋರ  ನಾಳೆ   ನರಿ ದಾವಿಳೆ   ನಾಡುಳ್‌ ಮೃಗೇಶ  ನಾ
  

      ಗೇನ್ದ್ರಾ    ಭೀಳರ್ಭ್ಭಟ     ಹರಪ್ಪೊರ್ ಶ್ರೀ  ಮೃಗೇಶ ನಾ ಗಾ ಹ್ವ  ಯ


    ರಿರ್ವರಾ ಬ ಟ  ರಿ  ಕು ಲಾ ಮ ಲ  ವ್ಯೋಮ ತಾರಾಧಿನಾಥನ್ನ ಳ ಪ

    ಗ ಣ  ಪ  ಶು   ಪ ತಿ ಯಾ  ದ ಕ್ಷಿ ಣಾ  ಪಥ ಬ ಹು        ಶ  ತ  ಹ  ವ ನಾ


 ಹ  ವ ದು ಳ್    ಪಶು ಪ್ರದಾನ  ಶೌರ್ಯೋ  ದ್ಯ  ಮ    ಭರಿತೋನ್ದಾ ನ  ಪ

ಶು   ಪ  ತಿ   ಯೆ  ನ್ದು     ಪೊ  ಗ ೞೆ     ಪ್ಪೊ     ಟ್ಟ  ಣ     ಪ   ಶು    ಪ  ತಿ


  ನಾಮ   ಧೇಯ   ನಾ  ಸ ರ  ಕ್ಕೆ  ಲ್ಲ  ಭ      ಟ ರಿ  ಯಾ ಪ್ರೇಮಾ ಲ  ಯ


        ಸು  ತ  ನ್ಗೆ  ಸೇನ್ದ್ರಕ ಭ ಣೋದ ಯ  ದೇ ಶ ದಾ  ವೀರ ಪುರುಷ ಸಮಕ್ಷ


  ದೆ ಕೇ ಕ   ಯ  ಪ  ಲ್ಲ  ವ    ರಂ ಕಾದೆ  ರೆ  ದು ಪೆ   ತ್ತ ಜ ಯ  ನಾ   ವಿ ಜ


  ಅ  ರ  ಸ  ನ್ಗೆ    ಬಾ    ಳ್ಗ   ಚ್ಚು ಪ   ಲ್ಮಿ   ಡಿ ಉಂ ಮೂೞು ವ    ಳ್ಳಿ ಯಂ  ಕೊ


     ಟ್ಟಾರ್ ಭಟಾರಿ   ಕುಲದೊನಳುಕದಮ್ಬನ್ಕಳ್ದೋನ್ ಮಹಾಪಾತಕನ್



        ಇ ರ್ವ್ವರುಂ   ಸ ಳ್ಬಙ್ಗದರ್‌ ವಿಜಾರರಂ  ಪ  ಲ್ಮ      ಡಿ ಗೆ  ಕು ರು




       ಮ್ಬಿಡಿವಿಟ್ಟಾರ್‌ಅ ದಾ  ನ   ಳಿ  ವೊ      ನ್ಗೆ ಮಹಾಪಾತಕಂ ಸ್ವಸ್ತಿ



                                 (ಇಧೇ ಶಾಸನದ ಎಡಭಾಗದಲ್ಲಿರುವ ಪಾಠ )






ಭ ಟ್ಟ ರ್ಗ್ಗೀಗ  ೞ್ದೆ                ಒಡ್ಡಲಿ            ಆ ಪ  ತ್ತೊ ನ್ದಿ  ವಿಟ್ಟಾರಕರ


ಆಧಾರ
೧.ಕನ್ನಡ ಲಿಪಿ ಉಗಮ ಮತ್ತು ವಿಕಾಸ -  . ಡಾ. ಎ.ವಿ.ನರಸಿಂಹ ಮೂರ್ತಿ
೨. ಲಿಪಿಯ ಹುಟ್ಟು ಮತ್ತು ಬೆಳವಣಿಗೆ  - ಡಾ. ದೇವರ ಕೊಂಡಾರೆಡ್ಡಿ
೩.ಕನ್ನಡ ಲಿಪಿ ವಿಕಾಸ - ಡಾ.ಎಂ.ಜಿ. ಮಂನಜುನಾಥ ಮತ್ತು ಡಾ. ದೇವರಾಜ ಸ್ವಾಮಿ
೪. ಅಶೋಕನ ಶಾಸನಗಳು- ನಾ. ಕಸ್ತೂರಿ
೫.ಲಿಪಿಶಾಸ್ತ್ರ ಪ್ರವೇಶ- ಡಾ.ಮಾಧವ ನಾ. ಕಟ್ಟಿ
೬.ಭಾಷಾವಿಜ್ಞಾನದ ಮೂಲತತ್ವಗಳು- ಡಾ.ಎಂ. ಚಿದಾನಂದ ಮೂರ್ತಿ
೭. ಎಪಿಗ್ರಾಫಿಯಾ ಕರ್ನಾಟಕ ಸಂಪುಟಗಳು-ಬಾ.ರಾ. ಗೋಪಾಲ ಮೈಸೂರುವಿಶ್ವವಿದ್ಯಾಲಯ
೮. The Alphabet-Devid deringer.
೯. Elements  of south Indian Paleography-A.C. Burnel
೧೦ ಅಂತರ್‌ಜಾಲತಾಣಗಳು.













ಆ ಪತ್ತೊನ್ದಿ ವಿಟ್ಟಾರಕರ


Friday, March 20, 2015

ಯುಗಾದಿಯ ಶುಭಾಶಯಗಳು


 ಮಮತೆಯ ಓದುಗರಿಗೆ ಮನ್ಮಥನಾಮ  ಸಂವತ್ಸರವು  ಶುಭ, ಸಂತೋಷ, ಮತ್ತು                                          ನೆಮ್ಮದಿ ತರಲಿ            


(ಎಚ್‌.ಶೇಷಗಿರಿರಾವ್)
ಕನ್ನಡ ಭಾಷೆಯ ಆದಿಯಿಂದ ಹಿಡಿದು ಇಂದಿನವರೆಗಿನ ಬಳಸಿದ ಲಿಪಿಯಲ್ಲಿ ನಿಮಗೆ ಶುಭಾಶಯ ಕೋರಿದೆ
ಲಿಪಿವಿಕಾಸ,ಹಸ್ತ ಪ್ರತಿ, ಸಂರಕ್ಷಣೆ,ಡಿಜಟಲೀಕರಣ ಮತ್ತು ಆನ್‌ಲೈನ್‌ಅಧ್ಯಯನದಲ್ಲಿ ಆಸಕ್ತಿ ಇರುವವರು ಸಂಪರ್ಕಿಸಿ

ಹೊಸ ವರ್ಷದಲ್ಲಿ ಕನ್ನಡ ಲಿಪಿವಿಕಾಸ ಅಂದರೆ ಕ್ರಿಸ್ತಪೂರ್ವ ಮೂರನೆಯ ಶತಮಾನದಿಂದ ಇಂದಿನ ವರೆಗಿನ ಕನ್ನಡ ಲಿಪಿಯ ಪರಿಚಯವನ್ನು ಶಾಸನ ಮತ್ತು  ಹಸ್ತಪ್ರತಿಗಳ ಮೂಲಕ ಮಾಡಿಕೊಡುವ ಯೋಜನೆ ಇದೆ. ಹಸ್ತ ಪ್ರತಿಗಳ ಆನ್‌ಲೈನ್‌ಅಧ್ಯಯನ ಪ್ರಾರಂಭಿಸುವ ಸಾಧ್ಯತೆ ಇದೆ.ಆಸಕ್ತರು ಕೈಜೋಡಿಸಲು ಕರೆ ನೀಡಿದೆ.
 ಸಂಪರ್ಕ ವಿಳಾಸ
ಎಚ್‌.ಶೇಷಗಿರಿರಾವ್
ನಿರ್ದೇಶಕರು
ಹಸ್ತಪ್ರತಿವಿಭಾಗ
ಬಿ.ಎಂ ಶ್ರೀ ಸ್ಮಾರಕಪ್ರತಿಷ್ಠಾನ
ಬೆಂಗಳೂರು-೧೯
ಚರ ದೂರವಾಣಿ-9448442323
ಸ್ಥಿರದೂರವಾಣಿ-080-26613929
ಮಿಂಚಂಚೆ- appaaji@gmail.com

Tuesday, February 24, 2015

ಬ್ರಾಹ್ಮಿ ಲಿಪಿ


ಭಾರತೀಯ ಲಿಪಿಗಳ ಮಾತೆ ಬ್ರಾಹ್ಮಿ
                      ಭಾರತದಲ್ಲಿ ಈವರೆಗೆ ಅರ್ಥೈಸಿರುವ  ಅತಿಪುರಾತನ ಲಿಪಿಗಳಲ್ಲಿ ಬ್ರಾಹ್ಮಿ ಪ್ರಮುಖವಾದುದು. ಅದಕ್ಕೆ ಮುಂಚೆ  ಚಿತ್ರಲಿಪಿಗಳು ಮತ್ತು ಆದಿಮಾನವನ ಬರಹಗಳು ಕಂಡುಬಂದಿವೆ. ಆದರೆ ಪೂರ್ಣವಾಗಿ ಅರ್ಥೈಸಲು ಆಗಿಲ್ಲ ಹರಪ್ಪ  ನಾಗರೀಕತೆ ಪ್ರದೇಶದಲ್ಲಿ ದೊರೆತಿರುವ ಅನೇಕ ಲಿಪಿಗಳು ವಿಶೇಷವಾಗಿ ಮಡಕೆ ಚೂರು ಮತ್ತು ಮುದ್ರೆಗಳೂ. ಅವುಗಳ  ಮೇಲಿನ ಬರಹಗಳನ್ನು ಪೂರ್ಣವಾಗಿ ತಿಳಿಯಲಾಗಿಲ್ಲ.  ಬಹುಶಃ ಅವೇ ಈ  ಬ್ರಾಹ್ಮಿಲಿಪಿಯ ಉಗಮಕ್ಕೆ ಕಾರಣ ವಾಗಿರಬಹುದು. ಈಗ ಹರಪ್ಪ ಲಿಪಿಗಳಿಗೂ ಬ್ರಾಹ್ಮಿ ಲಿಪಿಗೂ ಇರುವ  ಸಂಬಂಧ ಕುರಿತಾದ ಸಂಶೋಧನೆ ಜಾರಿಯಲ್ಲಿದೆ. ಆದರೂ ಎರಡೂ ಲಿಪಿಗಳಲ್ಲಿ ಬಹಳ ವ್ಯತ್ಯಾಸವಿದೆ.  ಹರಪ್ಪ  ಲಿಪಿಗಳು ಭಾವಸೂಚಕಗಳು ಅವು ತಮ್ಮದೆ ಆದ ಧ್ವನಿ ಪ್ರತಿನಿಧಿಸುತ್ತವೆ. ಭಾವವನ್ನು ಸೂಚಿಸುವ ಚಿತ್ರಲಿಪಿಗಳು.ಪ್ರತಿ ಅಕ್ಷರವೂ ಬಹುಅರ್ಥ ಕೊಡಬಹುದು. ಆದರೆ ಬ್ರಾಹ್ಮಿ ಲಿಪಿಗಳಲ್ಲಿ ಪ್ರತಿ ಅಕ್ಷರವೂ ಸ್ವಂತ ಅರ್ಥ ಹೊಂದಿವೆ.ಮೂಲವನ್ನು ಅರಿಯುವ ಇನ್ನೊಂದು ವಿಧಾನವೆಂದರೆ ಬ್ರಾಹ್ಮಿ ಮತ್ತು ಜಗತ್ತಿನ ಇತರೆ ಲಿಪಿಗಳಿಗೆ ಇರುವ ಸಂಬಂಧ.
ಬ್ರಾಹ್ಮಿ ಲಿಪಿಯು ಭಾರತದ ವಿವಿಧ ಪ್ರದೇಶಗಳ ಪ್ರಾದೇಶಿಕ ಭಾಷೆಗಳ ಮಾತೆ.  ಅದರಲ್ಲಿ ಎರಡು ವಿಧ. ಉತ್ತರದದ ಮತ್ತು ದಕ್ಷಿಣದ ಬ್ರಾಹ್ಮಿ.ಅಶೋಕನ ಬ್ರಾಹ್ಮಿಲಿಪಿಯನ್ನು  ಸಂಸ್ಕೃತ, ಪ್ರಾಕೃತ ಮತ್ತು ಪಾಲಿ ಭಾಷೆಗಳನ್ನು ಬರೆಯಲು ಬಳಸಿದ್ದರು.. ಇನ್ನೊಂದು ದಕ್ಷಿಣದ  ತಮಿಳುಬ್ರಾಹ್ಮಿಅದರಿಂದಲೇ ದಕ್ಷಿಣಭಾರತದ ಭಾಷೆಗಳಲಿಪಿಗಳು ರೂಪಗೊಂಡವು. ಅವೆರಡೂ ಅಲ್ಲದೆ ಇನ್ನೊಂದು  ಕ್ರಿ.ಪೂರ್ವ ಅವಧಿಯಲ್ಲಿ ಅದೇ ಕಾಲದಲ್ಲಿ ಪ್ರಚಲಿತವಾಗಿದ್ದ ಲಿಪಿ ಇತ್ತು ಅದೇ ಖರೋಷ್ಠಿ. ಅದು ವಾಯವ್ಯಭಾರತ ಆಫ್ಘನಿಸ್ತಾನ ಮತ್ತು ಈಗಿನ ಪಾಕಿಸ್ತಾನ ಪ್ರದೇಶದಲ್ಲಿ ವ್ಯಾಪಕವಾಗಿತ್ತು .    
ಸಾಂಪ್ರದಾಯಿಕ ನಂಬುಗೆಯಂತೆ ಬ್ರಹ್ಮನೇ ಬ್ರಾಹ್ಮೀಲಿಪಿಯ ಜನಕ.ಬೌದ್ದರ ಲಲಿತ ವಿಸ್ತಾರ ಗ್ರಂಥದ ಪ್ರಕಾರ ಬುದ್ದನಿಗೆ ೬೪ ಲಿಪಿಗಳು ತಿಳಿದಿದ್ದವು.ಅದರಲ್ಲಿ ಬ್ರಾಹ್ಮೀ ಮತ್ತು ಖರೋಷ್ಠಿ ಸಹಾ ಸೇರಿವೆ. ಜೈನ ಗ್ರಂಥಗಳ ಪ್ರಕಾರ ಆದಿ ದೇವನು ತನ್ನ ಇಬ್ಬರು ಹೆಣ್ಣು ಮಕ್ಕಳಲ್ಲಿ ಮೊದಲನೆಯವಳಾದ ಬ್ರಾಹ್ಮಿಗೆ  ಲಿಪಿ ಮತ್ತು ಎರಡನೆಯವಳಿಗೆ ಗಣಿತ ಕಲಿಸಿದನು.ಅದರಿಂದಲೇ ಬ್ರಾಹ್ಮಿ ಎಂಬ ಹೆಸರು ಬಂದಿರಬಹುದು. ಅದರ ಕಾಲಮಾನ ಕ್ರಿ. ಪೂ. ೯ನೆಯಯ ಶತಮಾನ.
  
. ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದವರೆಗೆ ಬ್ರಾಹ್ಮಿ ಮತ್ತು ಅದರಿಂದ ನಿಷ್ಪನ್ನವಾದ ಲಿಪಿಗಳಿಗೆ ವಿದ್ವಾಂಸರು ವಿವಿಧ ಹೆಸರಿನಿಂದ ಕರೆಯುತಿದ್ದರು.ಲಾತ್‌ ,ಲಾಟ್‌( ಸಂಸ್ಕೃತದಲ್ಲಿ ಯಾಸ್ತ ಅಂದರೆ ಅವು ಹೆಚ್ಚಾಗಿ ಸ್ಥಂಭದಮೇಲೆ ಕಂಡುಬರುತಿದ್ದವು.) ದಕ್ಷಿಣ ಅಶೋಕನ್‌ ಇಂಡಿಯನ್‌ಪಾಲಿ, ಮೌರ್ಯನ್‌ ಇತ್ಯಾದಿ.  ಅದಕ್ಕೆ ಬ್ರಾಹ್ಮಿ ಎಂಬ ಹೆಸರಿನ ಸೂಚನೆ ಮೊದಲು ಬೌದ್ಧರ ಮತ್ತು ಜೈನರ ಗ್ರಂಥಗಳ ಮೂಲಕ ಬಂದಿತು.ಲಿಲಾವತಿಸಾರ ಎಂಬ ಗ್ರಂಥದ ಚೀನೀ ಅನುವಾದವಾದ ವಿಶ್ವ ಕೋಶ  ಫಾಯಾನ್‌ಚು ಲಿನ್‌” ’ನಲ್ಲಿ . ಉಲ್ಲೇಖವಾದುದನ್ನು ಟೆರೀನ್ ಡಿ ಲಕೌಪರೀ ಯು ಗಮನಿಸಿದ ಎಡದಿಂದ ಬಲಕ್ಕೆ ಬರೆಯುವ ( ಇಂಡೊ ಪಾಲಿ ಲಿಪಿ ಬ್ರಾಹ್ಮಿ) ಮತ್ತು ಬಲದಿಂದ ಎಡಕ್ಕ ಬರೆಯುವ ಲಿಪಿ ( ಬ್ಯಾಕ್ಟ್ರೊ ಪಾಲಿ, ಅದರಿಂದ ಖರೋಷ್ಟಿ ) ಗುರುತಿಸಿಲಾಗಿದೆ.
                  ಬ್ರಾಹ್ಮಿ ಎಂಬ ಹೆಸರನ್ನು ಸ್ಥೂಲವಾಗಿ ಮತ್ತು ಅನುಕೂಲಕ್ಕಾಗಿ ಅಶೋಕನ ಲಿಪಿಗಳನ್ನು ಮತ್ತು ಅದರಿಂದ ನಿಷ್ಪನ್ನವಾದ ಲಿಪಿಗಳನ್ನು 6ನೆಯ ಶತಮಾನದ ಗುಪ್ತರ ಅವಧಿಯವರೆಗೆ ಬಳಕೆ ಮಾಡಿದರು.ನಂತರ ವಿಭಿನ್ನವಾದ  ಪ್ರಾದೇಶಿಕ ಮತ್ತು ಸ್ಥಾನೀಯ ಲಿಪಿಗಳು ಅಭಿವೃದ್ಧಿ ಪಡೆದವು ಅವನ್ನು ಪ್ರತ್ಯೇಕ ಲಿಪಿಗಳೆಂದು ಪರಿಗಣಿಸಲಾಯಿತು. ಅವುಗಳು ಭೌಗೋಲಿಕ ವಿಭಿನ್ನತೆ ಹೊಂದಿದ್ದವು
  ಬ್ರಾಹ್ಮಿ ಲಿಪಿಯ ಮೂಲವು ಭಾರತೀಯ ಲಿಪಿಶಾಸ್ತ್ರದಲ್ಲಿ ಬಹು ಚರ್ಚಿತ ವಿಷಯವಾಗಿದೆ.  ಈ ಲಿಪಿಯ  ಮೂಲ  ಕುರಿತು    ಸ್ಥೂಲವಾಗಿ ಎರಡು ಅಭಿಪ್ರಾಯಗಳಿವೆ.
1.     ದೇಶೀಯ ಮೂಲ                2.     ವಿದೇಶಿ ಮೂಲ

                               ವಿದ್ವಾಂಸರಾದ ಅಲೆಕ್ಜಾಂಡರ್‌ ಕನ್ನಿಂಗ್‌ಹ್ಯಾಮ್‌, ಜಿ.ಎಚ್‌. ಓಜಾ, ಆರ್‌.ಬಿ ಪಾಂಡೆ ಮೊದಲಾದವರ ಪ್ರಕಾರ ಬ್ರಾಹ್ಮಿಯು ದೇಶಿಯ ಜನ್ಯ ಲಿಪಿ.ಆದರೆ ಅದರ ಬೆಳವಣಿಗೆಯ ಕುರಿತು ನಿರ್ಧಿಷ್ಟ ವಿವರಣೆ ಇಲ್ಲ ಆಂಗ್ಡನ್‌.ಎಸ್‌. ಹಂಟರ್‌ಜಿ.ಆರ್, ಕನ್ನಿಂಗ್‌ಹ್ಯಾಮ್ 1931,ರಲ್ಲಿ ಇಂಡಸ್‌ಲಿಪಿಯ ಮೂಲವನ್ನು ತಮಗೆ ದೊರಕಿದ ಒಂದು ಮುದ್ರೆಯ ಆಧರಿಸಿ, ಅದರ   ಮೂಲಕ  ವಿವರಣೆ ನೀಡಲು ಯತ್ನಿಸಿದರು.ಇದು ಚಿತ್ರಲಿಪಿಯಾಧಾರಿತವಾಗಿದ್ದು, ಹ-ಹಸ್ತ , ರ-ರಜ್ಜು ವ- ವೀಣೆಮ-ಮುಖ ಮೊದಲಾದ ಪದಗಳ ಮೊದಲ ಅಕ್ಷರಗಳು  ಸಂಕೇತವಾದವು.. ಈ ಲಿಪಿಯು ಅಶೋಕನ ಆಸ್ಥಾನದಲ್ಲಿ ಇದ್ದ  ವೈಯಾಕರಣಿಗಳ ಕೊಡುಗೆ ಎಂಬ ಸಿದ್ಧಾಂತ ಮಂಡಿಸಿದರು.ಎನ್‌.ಪಿ.  ರಷ್ಟೋಗಿಯವರು ವೇದ ಕಾಲದ ಜ್ಯಾಮಿತಿ ಚಿಹ್ನೆಗಳೇ ಬ್ರಾಹ್ಮಿ ಲಿಪಿಯ ಉಗಮಕ್ಕೆ ಕಾರಣ ಎಂಬ ವಾದ ಮಂಡಿಸಿದರು.ಡಾ. ಭಂಡಾರ್‌ಕರ್‌ ಅವರು ನವಶಿಲಾಯುಗದ ಕುಂಭಗಳ ಮೇಲೆ ಕಂಡು ಬರುವ ಚಿಹ್ನೆಗಳಿಂದ ಬ್ರಾಹ್ಮೀ ಜನಿಸಿರಬಹುದು ಎಂದಿರುವರು.
ಜೇಮ್ಸ್‌ ಪ್ರಿನ್ಸೆಪ್‌ನು ಮೊದಲ ಬಾರಿಗೆ ಬ್ರಾಹ್ಮಿಯ ಮೂಲ ಗ್ರೀಕ್‌ಲಿಪಿ ಎಂಬ ವಾದವನ್ನು ಮಂಡಿಸಿದ. ನಂತರ ಕೆ. ಒಟ್ಟೊಫ್ರೈಡ್‌ ಮುಲ್ಲರ್‌ಮತ್ತು ಜೆ ಹ್ಯಾವಲ್‌ರ ಅದನ್ನು ಪ್ರತಿಪಾದಿಸಿದರು. ಅವನು ಬ್ರಾಹ್ಮಿಯಆರು ಅಕ್ಷರಗಳು ( ,,, ,ಥ )ಮತ್ತು ನ ಗ್ರೀಕ್‌ನಿಂದ ನಿಷ್ಪನ್ನವಾಗಿವೆ ಎಂಬುದನ್ನು  ಸಾಧಿಸಲು ಯತ್ನಿಸಿದನು. ಅವುಗಳ ಸಂವಾದಿ ಅಕ್ಷರಗಳನ್ನು ಗ್ರೀಕ್‌ನಲ್ಲಿ ಗುರುತಿಸಿದ. ಅದರಂತೆ ಇತರೆ ಅಕ್ಷರಗಳು ಖರೋಷ್ಟಿ ಮತ್ತು ಅರಾಮಿಕ್‌ ಲಿಪಿಗಳ ಮೂಲದವೆಂದು ಮಂಡಿಸಿದ. ಫಾಕ್‌ನ ಪ್ರಕಾರ ಅಶೋಕನ ಕಾಲದಲ್ಲಿ ಉದ್ದೇಶ ಪೂರ್ವಕವಾಗಿ ಖರೋಷ್ಟಿ ಮತ್ತು ಗ್ರೀಕ್‌ ಲಿಪಿ ಮಾದರಿಯಲ್ಲಿ ಬ್ರಾಹ್ಮಿ ಲಿಪಿ ರೂಪಿಸಲಾಯಿತು ಎಂದು ವಾದಿಸಿದ. ವಿಶೇಷವಾಗಿ ಬರಹದ ದಿಕ್ಕು,ಹ್ರಸ್ವ ಮತ್ತು ದೀರ್ಘ ಸ್ವರಗಳ ವ್ಯತ್ಯಾಸ, ಮತ್ತು ಕೆಲ ಅಕ್ಷರಗಳ ನಿರ್ಧಿಷ್ಟ ಸ್ವರೂಪ ವಿಶೇಷವಾಗಿ ಬ್ರಾಹ್ಮಿಯ ಮತ್ತು ಗ್ರೀಕ್‌ನ ತೀಟ ,ಬ್ರಾಹ್ಮಿಯ     ಮತ್ತು ಗ್ರೀಕ್‌   ಗಮ್ಮಾ ಗಳ ಸಾಮ್ಯತೆ ಯನ್ನು ಎತ್ತಿತೋರಿಸಿದ.
ಆದಾಗ್ಯೂ ಇವು ಅಪವಾದವಾಗಿರಬಹುದು ಮತ್ತು ಹ್ರಸ್ವ ಮತ್ತು ಧೀರ್ಘ ಸ್ವರಗಳ ಸಾಮ್ಯತೆಯು ಗ್ರೀಕ್‌ ಪ್ರಭಾವಕ್ಕೆ ಒಳಗಾಗುವ  ಸಾಧ್ಯತೆ ಕಡಿಮೆ. ಸ್ವರಗಳ ವ್ಯತ್ಯಾಸವು ದೇಶೀಯವಾಗಿಯೇ ಇರಬಹುದು ಕಾರಣ.


  ಸ್ವರಗಳು






ಹ್ರಸ್ವ ಮತ್ತು ಧೀರ್ಘ ಸ್ವರಗಳು ವ್ಯತ್ಯಾಸವು  ಪೂರ್ಣವಾಗಿ ಮೂಲದ ತುಸು ಬದಲಾವಣೆಯಿಂದ ನಂಥೃ ರೂಪಿತವಾಗಿವೆ  ( ಆದರೆ ಗ್ರೀಕ್‌ ಸ್ವರಗಳುಅವುಗಳನ್ನು ಪೂರ್ಣವಾಗಿ ವಿಭಿನ್ನ ಸಂಬಂಧವಿಲ್ಲದ ಸಂಕೇತಗಳೇ ಪ್ರತಿನಿಧಿಸುತ್ತವೆ. ( (e)/ ()). ಸ್ವರಗಳ ಸಂಕೇತಗಳ ಸ್ವರೂಪವನ್ನು ವಿವೇಚಿಸಿದರೆ ಬ್ರಾಹ್ಮಿಯು ಗ್ರೀಕ್‌ಮೂಲದ್ದು ಎನ್ನುವ ವಾದ ಬಿದ್ದು ಹೋಗುತ್ತದೆ..


:  ಲೆನೊ ರ್ಮಾಂಟ್ 1875 ರಲ್ಲಿ  ಮತ್ತು ಡೀಕೆ  1877ರಲ್ಲಿ . ಕೆಲವು ಬ್ರಾಹ್ಮಿ ಅಕ್ಷರಗಳು ಮತ್ತು  ಅವಕ್ಕೆ ಸಂವಾದಿಯಾದ ದಕ್ಷಿಣ ಅರೆಬಿಯಾದ ಹಿಮಾಯರಿಟಿಕ್‌ ಅಕ್ಷರಗಳ ನಡುವಿನ ಹೋಲಿಕೆಯನ್ನು ಗಮನಿಸಿದರು. ಐಸಾಕ್‌ಟೇಲರ್‌ನು ಅವುಗಳ ತುಲನಾತ್ಮಕ  ಕೋಷ್ಠಕವನ್ನೇ ತಯಾರಿಸಿದನು. ಅವನ ವಾದದ ಪ್ರಮುಖ ಅಂಶ ಲಿಪಿಗಳನ್ನು ಬರೆಯುವ ದಿಕ್ಕು.ಮತ್ತು ಕೆಲವು ಅಕ್ಷರಗಳ ಹೋಲಿಕೆ. ಬ್ರಹ್ಮಿಯ  ba   ಮತ್ತು ಸಬಿಯನ್‌ betda , daletma ಮತ್ತು memಇತ್ಯಾದಿ.  ಟೇಲರ್‌ ಐತಿಹಾಸಿಕ ಮತ್ತು ಭೌಗೋಳಿಕ ಆಧಾರದ ಮೇಲೆ ತನ್ನ ವಾದನ್ನು ಮಂಡಿಸಿದ.. “ಕ್ರಿ. ಪೂ. 10ನೆಯ ಮತ್ತು ಶತಮಾನದಿಂದ 3ನೆಯ ಶತಮಾನದ ವರೆಗೆ ಯೆಮೆನ್‌ ಭಾರತೀಯ ವಸ್ತುಗಳನ್ನು ಯುರೋಪಿನೊಡನೆ ವಿನಿಮಯ ಮಾಡಿಕೊಳ್ಳುವ ಅತ್ಯಂತ ದೊಡ್ಡ ಮಾರುಕಟ್ಟೆಯಾಗಿತ್ತು”. ಆದ್ದರಿಂದ ಅಲ್ಲಿ ಭಾರತೀಯ ಮತ್ತು ಸಬಿಯನ ಅಕ್ಷರಗಳ ಚಲಾವಣೆಗೆ ಅವಕಾಶ ಹೆಚ್ಚಾಗಿದ್ದಿತು.ಈ ಎಲ್ಲ ಅನುಕೂಲಗಳ ಜೊತೆ ಈ ವಾದದಲ್ಲಿ ಕೆಲವು ದೋಷಗಳೂ ಇವೆ.ಬರಹದ ದಿಕ್ಕು ಕುರಿತಾದ ವಾದ ನಿಲ್ಲುವುದಿಲ್ಲ. ಅಲ್ಲದೆ ಎರಡರಲ್ಲೂ ಹೋಲಿಕೆ ಇರುವ ಕೆಲವು ಅಕ್ಷರಗಳು ಇರುವುದು ಬ್ರಾಹ್ಮಿಯು ಸೆಮಿಟಿಕ್‌ನಿಂದ ಜನಿಸಿತು ಎಂದು ಹೇಳಲು ಆಗುವುದಿಲ್ಲ ಅಲ್ಲದೇ ಅವೆರಡೂ ಒಂದು ಸಾಮಾನ್ಯವಾದ ಇನ್ನೊಂದು ಪುರಾರತನ ಲಿಪಿಯಿಂದ ಜನಿಸಿರಬಹುದು.ಅವುಗಳ ಚಾರಿತ್ರಿಕ ಮತ್ತು ಭೌಗೋಲಿಕ ಸಂಬಂಧದ ವಾದವೂ ಗಟ್ಟಿಯಾಗಿ ನಿಲ್ಲದು ಕಾರಣ ಅವುಗಳ ಪ್ರಾಚೀನತೆಯ ಬಗೆಗೆ ಇನ್ನೂ ಖಚಿತತೆ ಇಲ್ಲ.
ಫೊನಿಷಿಯನ್‌: ಉಲ್ರಿಚ್‌ ಫೆಡ್ರಿಕ್‌ಕೊಪ್‌  1821 ರಲ್ಲಿಐ ಇಂಡಿಕ್‌ ಲಿಪಿಗಳಿಗೂ ಮತ್ತು ಉತ್ತರ ಸೆಮಿಟಿಕ್‌ಲಿಪಿಗಳಿಗೂ ಇರುವ ಹೋಲಿಕೆ,,ಗಮನಿಸಿದ್ದನು.ಅದರ ಮೇಲೆ ಅಧಿಕೃತವಾಗಿ ಕೆಲಸ ಮಾಡಿದ್ದು ಅಲ್ಬರ್ಟ ವೇಬರ್‌. ಅವನು ಫೊನಿಷಿಯನ್‌ ಲಿಪಿ ಮತ್ತು ಬ್ರಾಹ್ಮಿಲಿಪಿಗಳ  ನಡುವಿನ ಹೋಲಿಕೆಯ ವಿವರ ಅಧ್ಯಯನ ಮಾಡಿದ. ಬುಹ್ಲರ್‌ ಉತ್ತರ ಸೆಮಿಟಿಕ್‌ ಲಿಪಿಗಳ ಗುಂಪಿನಿಂದ  ತುಸು ಬದಲಾಯಿಸಿ ಬ್ರಾಹ್ಮಿಲಿಪಿಗಳನ್ನು ರೂಪಿಸುವ ಯತ್ನದ ಅವನ ವಿಧಾನವನ್ನು ವಿದ್ವಾಂಸರು ತೀಷ್ಣವಾಗಿ ಟೀಕಿಸಿದರು.  ಒಝಾರ ಪ್ರಕಾರ ಈ ವಿಧಾನದಿಂದ ಯಾವುದೇ ಲಿಪಿಯಿಂದ ಮತ್ಯಾವುದೇ ಲಿಪಿಯನ್ನು ಪಡೆಯಲು ಸಾಧ್ಯ ಎಂದು ತೋರಿಸಿದರು .ಇನ್ನೊಂದು ಅಂಶವೆಂದರೆ ಸೆಮಿಟಿಕ್‌ಲಿಪಿಗಳನ್ನು  ಬಲದಿಂದ ಎಡಕ್ಕೆ ಬರೆಯುವರು. ಅದೇ ಬ್ರಾಹ್ಮಿ  ಲಿಪಿಯು ಎಡದಿಂದ ಬಲಕ್ಕೆ ಬರೆಯಲಾಗುವುದು.ಬುಹ್ಲರ್‌ತನ್ನ ವಾದದ ಆಧಾರವಾಗಿ ಮಧ್ಯಪ್ರದೇಶದ  ಎರಾನ್‌ನಲ್ಲಿ ದೊರೆತ ನಾಣ್ಯದ ಮೇಲಿನ ಬರಹದ ಉಲ್ಲೇಖ ನೀಡಿದ.ಅದರಲ್ಲಿಬರಹವು ಎಡದಿಂದ ಬಲಕ್ಕೆ ಇದೆ.ಆದರೆ ಇದು ಅತಿ ವಿರಳವಾದ ಸಂದರ್ಭ ಆದ್ದರಿಂದ ಸಾಮಾನ್ಯವಾದುದಲ್ಲ.ಆದರೆ ಇತ್ತೀಚೆಗೆ ದೊರೆತಿರುವ ಎರ್ರಾಗುಡಿ ಅಶೋಕನ ಶಾಸನ, ( ಆಂಧ್ರ ಪ್ರದೇಶ) ಮತ್ತು ಶ್ರೀಲಂಕಾದ ಗುಹೆಗಳಲ್ಲಿನ  ಬರಹಗಳು  ಬಲದಿಂದ ಎಡಕ್ಕೆ ಇವೆ.ಮತ್ತು ಇದರಿಂದ ಪುರಾತನ ಸೆಮಿಟಿಕ್‌ಲಿಪಿಗಳ ಬರಹದ ವಿಧಾನದ ಪ್ರಭಾವ ಇರುವುದು ಕಂಡು ಬರುವುದು. ಆದರೆ ಶ್ರೀಲಂಕಾದ ಬರಹಗಳ ಅಶೋಕನ ಕಾಲಕ್ಕಿಂತ ಈಚಿನವು ಆದ್ದರಿಂದದ ಅವು ಸ್ಥಳೀಯ ಬದಲಾವಣೆಗಳು ಎಂದು ಳ್ಳಬಹುದು. ಅಲ್ಲದೆ ಬರಹದ ದಿಕ್ಕು ಒಂದನ್ನೇ ಏಕಮಾತ್ರ ಅಂಶವಾಗಿ ಪರಿಗಣಿಸಬಾರದು . ಕಾರಣ ಅನೇಕ ಸೆಮಿಟಿಕ್‌ನಿಂದ ಹುಟ್ಟಿದ ಲಿಪಿಗಳನ್ನು ಕೂಡಾ ಅದಕ್ಕೆ ವಿರುದ್ಧವಾದ ದಿಕ್ಕಿನಲ್ಲಿ ಬರೆಯಲಾಗುತ್ತಿದೆ. ಅದಕ್ಕೂ ಮಿಗಿಲಾಗಿ ಸೆಮೆಟಿಕ್‌ ಲಿಪಿಗಳಲ್ಲಿ  ಸ್ವರಗಳು ಇಲ್ಲ.  ಬ್ರಾಹ್ಮಿಯಲ್ಲಿ ಸ್ವತಂತ್ರ ಸ್ವರ ಸಂಕೇತಗಳಿವೆ.
 ಎ.ಸಿ. ಬರ್ನೆಲ್‌  1874ರಲ್ಲಿ ಈ ಸಿದ್ಧಾಂತವನ್ನು ಮುಂದಿಟ್ಟನು ಬ್ರಾಹ್ಮಿಯು ಅರಮೇಯಿಕ್‌ ಲಿಪಿ ಪ್ರಭಾವ ಹೊಂದಿದೆಯೇ ವಿನಃ  ಅದರಿಂದ ಜನಿಸಿದ್ದಲ್ಲ.ಅನೇಕ ಬ್ರಾಹ್ಮಿ ಅಕ್ಷರಗಳನ್ನು ಅರೆಮಿಕ್‌ನಿಂದ  ಫೊನಿಷಿಯನ್‌ಗಿಂತ ಹೆಚ್ಚಾಗಿ ರೂಪಿಸಬಹುದು.ಐತಿಹಾಸಿಕವಾಗಿ ಮತ್ತು ಕಾಲಾನುಗತವಾಗಿಯೂ ಈ ವಾದವು ಸಬಲವಾಗಿದೆ. ಅರಮೇಯಿಕ್ ಬಾಷೆ ಮತ್ತು ಲಿಪಿಯನ್ನು ವ್ಯಾಪಕವಾಗಿ  ಪೂರ್ವದ ಮತ್ತು ಇರಾನಿನ ಪ್ರದೇಶಗಳಲ್ಲಿ ಬಳಸಲಾಗುತಿತ್ತು.ಅಕಾಮೆನಿಯನ್ ಸಾಮ್ರಾಜ್ಯದ ಆಡಳಿತ ಭಾಷೆಯನ್ನಾಗಿ ಬಳಸಲಾಗುತಿತ್ತು. ಅದೂ ಅಲ್ಲದೆ ಆರು ಅರಾಮಿಕ್‌ಲಿಪಿಯಲ್ಲಿನ ಮೌರ್ಯರ ಶಾಸನಗಳು  ಈ  ವಾದಕ್ಕೆ ಬೆಂಬಲ ನೀಡುತ್ತವೆ.ಆದರೆ ಮೊದಲು ಖರೋಷ್ಠಿಯು ಹುಟ್ಟಿದನಂತರ ಅದರಿಂದ ಬ್ರಾಹ್ಮಿ ಜನಿಸಿತು ಎನ್ನುವುದು ಸರಿ ಎನಿಸುವುದಿಲ್ಲ ಕಾರಣ ಪೂರ್ಣ ಭಿನ್ನವಾದ ಲಿಪಿಯೊಂದು ರೂಪಗೊಳ್ಳುವುದು ಸಾಧ್ಯವಿಲ್ಲ. ಆದ್ದರಿಂದ ಆ ವಾದ ನಿಲ್ಲುವುದಿಲ್ಲ.
ಮೇಲಿನ ಎಲ್ಲ ಚರ್ಚೆಯಿಂದ ವ್ಯಕ್ತವಾಗುವುದು ಏನೆಂದರೆ ಅದರ ಮೂಲವನ್ನು ಖಚಿತವಾಗಿ ಹೇಳಲಾಗುದು. ಅದಕ್ಕೆ ಇನ್ನೂ ಬಲವಾದ ಆಧಾರಗಳು ಅಗತ್ಯ.ಮೇಲ್ನೋಟದ ಹೋಲಿಕೆಯಿಂದ ಏನನ್ನು ನಿರ್ಧರಿಸಲಾಗುವುದು.. ಅನೇಕ ಸಾಧ್ಯತೆಗಳಿವೆ.ಅವೆರಡೂ ಒಂದೇ ಮೂಲದಿಂದ ಬಂದವಾಗಿರಬಹುದು ಅಥವ ಪರಸ್ಪರ ಪ್ರಬಾವ ಬೀರಿಬಹುದು. ಅವುಗಳ ಪ್ರಾದೇಶಿಕ  ಪ್ರಭಾವವು ವಿಕಾಸಕ್ಕೆ ಕಾರಣವಿರಬಹುದು . ಇವೆಲ್ಲದರಲ್ಲಿ ಅರಾಮಿಕ್‌ಮೂಲವೇ  ಹೆಚ್ಚು ಸಂಭವನೀಯ ಎನಿಸಿದೆ. ಆದರೂ ಪ್ರತಿ ಅಕ್ಷರದ ಉಗಮವನ್ನು ನಿರ್ಧರಿಸುವುದ ಸಾಧ್ಯವೆನಿಸುವುದಿಲ್ಲ.

ಬ್ರಾಹ್ಮಿಯ ಮೂಲದ ಬಗ್ಗೆ ಏನೆ ಚರ್ಚೆಇದ್ದರೂ ಆಧುನಿಕ ಭಾರತೀಯ ಭಾಷೆಗಳ ತಾಯಿ ಬ್ರಾಹ್ಮಿ ಎಂಬುದು ಸುಸ್ಪಷ್ಟ. ಅದನ್ನು ವರ್ಣಮಾಲೆಯೇ ದೃಢಪಡಿಸುವುದು
ಸ್ವರಗಳು
ಅಶೋಕನ ಕಾಲ  (  ಕ್ರಿ.ಪೂ.304–232 ) ದಿಂದಲೇ ನಮಗೆ ಖಚಿತವಾದ ಬ್ರಾಹ್ಮಿ ಲಿಪಿಗಳು ದೊರಕಿವೆ.

ಸ್ವರಗಳು

ಕಾಲಾನುಕ್ರಮದಲ್ಲಿ  ದೀರ್ಘಾಕ್ಷರಗಳೂ ಸೇರಿದವು.



ಪ್ರಾಚೀನ ಅಶೋಕನ ಲಿಪಿಗಳಲ್ಲಿ ಆರು ಸ್ವರಗಳು ಮಾತ್ರ ಇವೆ. ಈ, ಊ ,ಋ ಏ, ಐ,  ಕಾಲುಕ್ರಮದಲ್ಲಿ ಬಂದು ಸೇರಿವೆ.ಅನುನಾಸಿಕ ಇದ್ದಿತು ಇ, ಉ, ಎ ಓ ಗಳನ್ನು ಸಂದರ್ಭಾನುಸಾರ ಹ್ರಸ್ವ ಅಥವ ಧೀರ್ಘ ಸ್ವರವಾಗಿ ಓದಿಕೊಳ್ಳ ಬೇಕಾಗುತಿತ್ತು.
ವರ್ಗೀಯ ವ್ಯಂಜನಗಳು ೨೫



ಅವರ್ಗೀಯ ವ್ಯಂಜನಗಳು  ೮

   ಅವರ್ಗೀಯ ವ್ಯಂಜನಗಳು  ೮
 ಬ್ರಾಹ್ಮೀ ಲಿಪಿಯನ್ನು ಮೂಲತಃ ಪ್ರಾಕೃತ ಭಾಷೆಯನ್ನು ಬರೆಯಲು ಬಳಸಿದರು. ಆದ್ದರಿಂದಮೊದಮೊದಲ ಲಿಪಿಯಲ್ಲಿ  ಋ. ಔ ಮತ್ತು ಳ ಅಕ್ಷರಗಳು ಕಂಡು ಬರುವುದಿಲ್ಲ
 ಈಗಿನ ರೂಪಾಂತರಿತ ಲಿಪಿಗಳ ಗ ಮತ್ತು ಸ ಗಳು ಮಾತ್ರ ತುಸು ಮಟ್ಟಿಗೆ ಮೂಲ ಅಕ್ಷರಗಳನ್ನು ಹೋಲುತ್ತವೆ.
ಕಾಗುಣಿತ  ಬಹು ಸರಳವಾಗಿ ರೂಪಿಸುತಿದ್ದರು ವ್ಯಂಜನಗಳಿಗೆ ಮೇಲೆ ಅಥವ ಕೆಳಗೆ ಎಡ,  ಅಥವಾ ಬಲ ಭಾಗದಲ್ಲಿ ಸಣ್ಣ ಗೆರೆಗಳನ್ನು ಸೇರಿಸಲಾಗುತಿತ್ತು.


  ಬ್ರಾಹ್ಮೀ ಲಿಪಿಯ ಆಯ್ದ ಅಕ್ಷರಗಳ ಬಳ್ಳಿ ( ಕಾಗುಣಿತ)

ಇದೇ ರೀತಿಯಲ್ಲಿ ಎಲ್ಲ ವ್ಯಂಜನಗಳಿಗೂ ಕಾಗುಣಿತವನ್ನು ಬರೆಯಬಹುದು.



   ಒತ್ತಕ್ಷರಗಳಿಗೆ ಪ್ರತ್ಯೇಕ ಚಿಹ್ನೆಗಳಿರಲಿಲ್ಲ.
,ಯಾವುದೇ ಒತ್ತಕ್ಷರದ ಕೆಳಗೆ ಮೇಲಿನ ಅಕ್ಷರಕ್ಕ ಅಂಟಿಕೊಂಡಂತೆ ಚಿಕ್ಕದಾಗಿ ಬರೆಯುವುದರಿಂದ ಸಂಯುಕ್ತಾಕ್ಷರಗಳ ರಚನೆ ಯಾಗುವುದು
   
             
ಗುಹಾಶಾಸನದಲ್ಲಿನ ಒಂದು ಸಾಲು










ಭಾರತದಲ್ಲಿ ಕ್ರಿ. ಪೂ. ಸಹಸ್ರಾರುವರ್ಷಗಳಿಂದ ಸಮೃದ್ಧ ಸಾಹಿತ್ಯವಿದರೂ ಅವೆಲ್ಲ ಮೌಖಿಕವಾಗಿದ್ದವು. ವೇದಗಳ ಕಾಲ ಕ್ರಿ. ಪೂರ್ವ ೧೭೦೦ರಿಂದ ೧೧೦೦. ಆದರೆ ಅವು ಲಿಪಿಯಾಗಿ ಇಳಿಯಲಿಲ್ಲ. ರಾಮಾಯಣದ   ಕಾಲ ಕ್ರಿ. ಪೂ ೫ – ೪ ನೆಯ ಶತಮಾನ.  ಗ್ರೀಕ್‌    ಮಹಾಕಾವ್ಯಗಳೆರಡರನ್ನೂ ಒಟ್ಟುಗೂಡಿಸಿದರೂ  ಅದರ ಅರ್ಧದಷ್ಟೂ ಇಲ್ಲ. ಹಾಗಿದ್ದರೂ ಲಿಪಿ ಇರಲಿಲ್ಲ., ಅದೇ ಅವಧಿಯ ಕಾಳಿದಾಸ, ಪಾಣಿನಿ,  ಪತಂಜಲಿ ಮತ್ತು ಕೌಟಿಲ್ಯ ಕ್ರಿ. ಪೂ. ಶತಶತಮಮಾನಗಳ ಹಿಂದೆಯೆ  ಗ್ರಂಥ ರಚನೆ ಮಾಡಿದ್ದರೂ ನಮಗೆ ಲಿಪಿ ದೊರಕುವುದ ಮಾತ್ರ  ಅಶೋಕನ ಕಾಲದಿಂದ ಈಚೆಗೆ.ಕಾರಣ ಬರವಣಿಗೆ ನಿಷಿದ್ಧವೆನ್ನುವ ಅಂದಿನ ನಂಬಿಕೆ.  ಅಶೋಕನು ಬೌಧ್ಧ ಧರ್ಮವಾವಲಂಬಿಯಾದ ಮೇಲೆ ಆ ನಿಷೇಧದಿಂದ ಹೊರ ಬಂದು ಮೊದಲ ಬಾರಿಗೆ ಶಾಸನ ಗಳನ್ನು ಸ್ತಂಭ, ಗುಹೆ ಮತ್ತು ಬಂಡೆಗಳ ಮೇಲೆ ಬರೆಸ ತೊಡಗಿದ. ಆದ್ದರಿಂದ  ಅವೇ ನಮಗೆ ದೊರೆತಿರುವ ಲಿಪಿಯ ಅತಿಪ್ರಾಚೀನ ಮಾದರಿಗಳು. ಅವುಗಳ ಭಾಷೆ ಬೇರೆ ಬೇರೆ ಯಾದರೂ ಲಿಪಿ ಮಾತ್ರ ಒಂದೇ ಅದೇ ಬ್ರಾಹ್ಮೀಲಿಪಿ.  ಆ ಲಿಪಿಗಳು ಮುಂದೆ ಮಾರ್ಪಾಟು ಹೊಂದುತ್ತಾ  ಭಾರತ ಮತ್ತು ದಕ್ಷಿಣ ಏಷಿಯಾದಲ್ಲಿ ಅನೇಕ ಲಿಪಿಗಳಾಗಿ ರೂಪಗೊಂಡವು. ಬ್ರಾಹ್ಮೀ ಲಿಪಿಯ ಹಲವುಶಾಸನಗಳನ್ನು ಗಮನಿಸ ನಂತರ ಕ್ರಮೇಣ ಕನ್ನಡ ಲಿಪಿ  ಹಲವು ಹಂತದಲ್ವಿಲಿಕಾಸವಾದುದನ್ನು ಅರಿಯೋಣ.