Wednesday, October 29, 2014

ಪ್ರದರ್ಶನ ಕಲೆಯ ಪ್ರೀತಿ ಬೆಳೆಸುವ ನೀನಾಸಂ




ಹೆಗ್ಗೋಡಿನ ನೀನಾಸಂ.

ನೀನಾಸಂನ ನಾಟಕ ಶಿಬಿರದಲ್ಲಿ ಭಾಗ ವಹಿಸಬೇಕೆಂಬದು ಬಹುದಿನದ ಬಯಕೆ. ಉದ್ಯೋಗದಲ್ಲಿರುವ ತನಕ ಕೆಲಸದ ಒತ್ತಡದಲ್ಲಿ ರಜೆಹಾಕಿ ಹೋಗುವುದುಆಗಿರಲೇ ಇಲ್ಲ.. ಆಸಕ್ತಿಯು ನಿನಾಸಂನ ತಿರುಗಾಟದ ನಾಟಕಗಳನ್ನು ನೋಡುವುದಕ್ಕೇ ಮಾತ್ರ ಸೀಮಿತವಾಗಿತ್ತು. ಆನಾಟಕಗಳ ಪ್ರಯೋಗಗಳು ತಮ್ಮ ಹೊಸತನದಿಂದಾಗಿ ಮನ ಮುಟ್ಟುತ್ತಲಿದ್ದವು. ನೀನಾಸಂ ಕೆ.ವಿ. ಸುಬ್ಬಣ್ಣನವರ ಕನಸೊನ ಕೂಸು. ಮೈಸೂರಿನಲ್ಲ ಎಂ ಎ ಓದುವಾಗಲೇ ಸಾಹಿತ್ಯ ನಾಟಕ ಸಮಸ್ಕರತಿಗಳತ್ತ ಒಲವು. ಅಲ್ಲಿ ಅನಂತ ಮೂರ್ತಿ ವಿಶ್ವನಾಥ ಮೊದಲಾದವರ ಗೆಳೆತನ. ಎಂ. ಎ ಆದ ಮೇಲೆ ಕಾಲೇಜಿನಲ್ಲಿಪ್ರಾಧ್ಯಾಪಕನಾಗಿ ನಗರದಲ್ಲಿ ನೆಲಸುವ ಅವಕಾಶ ಬಿಟ್ಟು ಹುಟ್ಟೂರಿನ ಅಡಕೆ ತೋಟದ ಕೃಷಿಗೆ ಮನ ಮಾಡಿದರು.

ಆದರೆ ಅವರಲ್ಲಿನ ಸಾಂಸ್ಕೃತಿಕ ತುಡಿತ ಸುಮ್ಮನೆ ಕೂಡಲು ಬಿಡಲಿಲ್ಲ,ಸುತ್ತಲ ಹಳ್ಳಿಯ ಯುವಕರೊಡಗೂಡಿ ಶುರು ಮಾಡಿದ  ಹೆಗ್ಗೋಡು ಪ್ರದರ್ಶನ ಕಲೆಯ ಕೇಂದ್ರವಾಯಿತು.
ಕೆ.ವಿ ಸುಬ್ಭಣ್ಣನವರು ಕುಗ್ರಾಮವೊಂದನ್ನು ತಮ್ಮ ಶ್ರಮ  ಮತ್ತು ಸಾಧನೆಯಿಂದಾಗಿ ರಾಷ್ಟ್ರೀಯ ನೆಲೆಯಲ್ಲಿ ಸಾಂಸ್ಕೃತಿಕ ಕೇಂದ್ರವಾಗಿಸಿ ಹಳ್ಳಿಯಿಂದ ದಿಲ್ಲಿಯ ವರೆಗೆ ಹೆಸರು ಮಾಡಿದರು.ಮೆಗಸೆಸ್ಸೆ ಪ್ರಶಸ್ತಿಯು ಅವರ ಮುಡಿಗೇರಿದ ಮೇಲೆಎನ್‌ಎಸ್‌ಡಿ, ರಂಗಾಯಣ ಮೊದಲಾದ ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಪೈಪೋಟಿ ನಡೆಸುವಂತಾಯಿತು.
ನೀನಾಸಂ ಎಂಬುದು ಸ್ಥಳೀಯ ದೇವರ ಹೆಸರಿನಲ್ಲಿ  ಸ್ಥಾಪಿಸಿದ ಸಂಘಟನೆ. ನೀಲಕಂಠೇಶ್ವರ ನಾಟ್ಯ ಸೇವಾಸಂಘ .ಇದರ ಪ್ರಾರಂಭ ಸ್ವಾತಂತ್ರ್ಯಾನಂತರದ ವರುಷದಲ್ಲಿ. ಸಂಸ್ಕೃತಿಯಲ್ಲ್ಲಿಆಸಕ್ತರಾದ ಮಲೆನಾಡಿನ ಮಡಿಲಲ್ಲಿರುವ  ಸಾಗರ ತಾಲೂಕಿನ ಹೆಗ್ಗೋಡು ಗ್ರಾಮದ ಸುತ್ತಮುತ್ತಲಿಪುಟ್ಟ ಪುಟ್ಟ ಹಳ್ಳಿಗಳ ಆಸಕ್ತ
ಯುವಕರು ಕೈ ಜೋಡಿಸಿ ೧೯೪೮ ರಲ್ಲಿ ಪ್ರಾರಂಭಿಸಿದರು. ಮೊದಲು ಇದರ ಕಾರ್ಯ ಚಟುವಟಿಕೆ ಸಂಜೆ ತೊಟದ ಕೆಲಸದ ನಂತರ ಆಸಕ್ತರು ಒಂದೆಡೆ ಸೇರಿ ಸಮಕಾಲೀನ ವಿಷಯಗಳನ್ನು ವಿಶೇವಾಗಿ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ವಿಷಯಗಳ ಚರ್ಚೆಗೆ ಮೀಸಲಾಗಿತ್ತು. ಕೃಷಿಕೆಲಸದ ಏಕತಾನತೆಯಿಂದ ಪಾರಾಗಲು ವಿಶೇಷವಾಗಿ ಮಳೆಗಾಲದಲ್ಲಿ ಯಕ್ಷಗಾನ ಮತ್ತು ನಾಟಕಗಳ  ಪ್ರದರ್ಶನವೂ ನಡೆಯುತಿತ್ತು . ಜೊತೆಗೆ ಸಾಗರಕ್ಕೆ ಭೇಟಿ ನೀಡುವ ಕಲೆ ಸಾಹಿತ್ಯ ಮತ್ತು ನಾಟಕ ರಂಗದ ಸಾಧಕರ ಉಪನ್ಯಾಸವನ್ನು ವ್ಯವಸ್ಥೆಮಾಡಲಾಗುತಿತ್ತು.


ಸಾಂಪ್ರದಾಯಿಕ ಸಮುದಾಯವನ್ನು ಆಧುನಿಕ ಸಮಾಜವಾಗಿ ಪರಿವರ್ತಿಸುವ ಪ್ರಯತ್ನ ವಾಗಿ ಉದಯಿಸಿತು,ವ್ಯಕ್ತಿ ಮತ್ತು ಸಮುದಾಯದ ನಡುವಿನ ಸಂಘರ್ಷದ ಬದಲಾಗಿ ಮೈಕ್ರೊ ವ್ಯಕ್ತಿ ಮತ್ತು ಮಾಕ್ರೋ ಸಮುದಾಯಗಳು ಸ್ಪರ್ಧೆಗೆ ಇಳಿಯದೆ  ಪರಸ್ಪರ ಪೂರಕವಾಗಿ ಸಂವಹನ ನಡೆಸುವ ಸಾಧ್ಯತೆ ಕಂಡುಕೊಳ್ಳಲು ರಚನಯಾಯಿತು. ನೂತನವಾದ ಸಮುದಾಯ,ಬಹುಆಯಾಮದ  ರಾಜಕೀಯ ಮತ್ತು ಸಂಸ್ಕೃತಿ,ಪರಂಪರೆ ಮತ್ತು ಬದಲಾವಣೆ ಸಂರಕ್ಷಣೆ ಮತ್ತ ಮಾರ್ಪುಗಳಿಗೆ ಸಮಾನ ಗೌರವ ಕೊಡುವ ಗುರಿ ಇರಿಸಿಕೊಂಡಿತು.ಆಯ್ಕೆಯ ಅಗತ್ಯಬಿದ್ದಾಗ ಅದರ ಹಕ್ಕು ಸಂಪೂರ್ಣವಾಗಿ ಸ್ಥಳೀಯ ಸಮುದಾಯದ್ದಾಗಿರ ಬೇಕು ಬೇರೆ ಯಾವುದೇ ಬಾಹ್ಯ ಶಕ್ತಿ ಕೇಂದ್ರದ್ದಾಗಿರಬಾರದು ಎಂಬುದು ಅದರ ಖಚಿತ ನಿಲುವು.
ಮಹಾತ್ಮಾಗಾಂಧೀಜಿಯವರ ಸ್ಪೂರ್ತಿದಾಯಕ ಮಾರ್ಗದರ್ಶನದಲ್ಲಿ ಅನ್ಯರೊಡಗಿನ ಹೋರಾಟವನ್ನೂ ಆತ್ಮ ಸಂಘರ್ಷವಾಗಿಸಿ  ಭಿನ್ನವೆನಿಸುವ ಸಂಪ್ರದಾಯ ಮತ್ತು ಆಧುನಿಕತೆ, ಪೌರಾತ್ಯ ಮತ್ತು ಪಾಶ್ಚಿಮಾತ್ಯ,ವೈಯುಕ್ತಿ ಮತ್ತುಸಾರ್ವತ್ರಿಕವ್ಯಲ್ತಿ ನಿಷ್ಠತೆ ಮತ್ತು ವಸ್ತು ನಿಷ್ಠತೆ,ಪವಿತ್ರ ಮತ್ತು ಜ್ಯಾತ್ಯಾತೀತ ಗಳನ್ನು ತೊಡೆದು ಹಾಕುವ ಕನಿಷ್ಠ ಪ್ರಶ್ನಿಸುವ ಗುರಿ ಇದರದಾಗಿತ್ತು.
ಈ  ಪ್ರಯತ್ನಕ್ಕೆ ಸಹಪಾಠಿಯಾಗಿದ್ದ ಸಾಹಿತಿ ಮತ್ತು ಚಿಂತಕ ಯು.ಆರ್‌.ಅನಂತ ಮೂರ್ತಿಯವರ ಸಹಚರ್ಯವೂ ದೊರೆಯಿತು
ಶುರುವಿನಲ್ಲಿನ ಹವ್ಯಾಸಿ ನಾಟಕ ಪ್ರದರ್ಶನ,ಸಹಿತ್ಯ ಕೃತಿಗಳ ನ್ನುತನ್ನದೇಆದ ಅಕ್ಷರ ಪ್ರಕಾಶನದ ಮೂಲಕ ತನ್ನದೇ ಆದ ಮಿತಿಯಲ್ಲಿ ಹೊರತರುವ ಸಮುದಾಯದ ವೇದಿಕೆಯಾಗಿತ್ತು.೧೯೬೦
 ದಶಕದಲ್ಲಿ ನೀನಾಸಂ ಎಂಬ ಆಧುನಿ ಹೆಸರಿನೊಡನೆ  ಹೊಸ ತಿರುವು ಪಡೆಯಿತು,ಅದು ಸಂಪ್ರದಾಯಿಕ ಹೆಸರಿನ ಆಧುನಿಕಸಂಕ್ಷಿಪ್ತರೂವಾಗಿ ಹಳೆಯ ಮತ್ತು ಹೊಸವಿಚಾರಗಳ ಸಮ್ಮಿಲನದ ಸಂಕೇತವಾಯಿತು.ಡಾ. ಶಿವರಾಮಕಾರಂತರ ನೂತನ ಯಕ್ಷಗಾನ ಪ್ರಯೋಗ, ಆಧುನಿಕ ನಾಟಕದ ಬಿ.ವಿ ಕಾರಂತರ ರಂಗ ಪ್ರಯೋಗಗಳಆವಿಷ್ಕಾರಗಳ ವೇದಿಕೆಯಾಯಿತು. ಈ ಎಲ್ಲ ಚಟುವಟಿಕೆಗಳಿಗೆ ಅಗತ್ಯವಾದ ಶಾಶ್ವತ ರಂಗಮಂಟೊದ ನಿರ್ಮಾಣವಾಯಿತು ಈ ವರೆಗೆ ಸ್ಥಳಿಯವಾಗಿದ್ದ ತಂಡವು ಬೇರೆಡೆಗೂ ರಂಗ ಪ್ರದರ್ಶನ ನೀಡಲು ಬೇಡಿಕೆ ಬರತೊಡಗಿತು. ವಿಶೇಷವಾಗಿ ’ಸಂಗ್ಯಾ ಬಾಳ್ಯಾ; ರಾಜ್ಯದ ಎಲ್ಲೆಡೆ ಬಹುಜನ ಪ್ರಿಯವಾಯಿತು ಪರಿಣಾಮವಾಗಿ ರಾಜದ್ಯಾದ್ಯಂತ ಹೆಸರಾದುದು ಮಾತ್ರವಲ್ಲ   ಹಣಕಾಸಿನ ಪರಿಸ್ಥಿತಿಯೂ ಸುಧಾರಿಸಿತು.
ಪ್ರತಿವರ್ಷ ನವಂಬರ್‌ನಿಂದ ಮಾರ್ಚವರೆಗೆ ನಾಲ್ಕು ತಿಂಗಳ ವರಗೆ ತಿರುಗಾಟ ನಡೆಯುವುದು. ರಂಗಭೂಮಿ ಆಸಕ್ತರು ನಿಗದಿತ ಸರತ್ತು ಪುರೈಸಿ ತಮ್ಮ ಊರಿಗೆ ಕರೆಸ ಬಹುದು ನೂರಾ ನಲವತ್ತು ದಿನಗಳಲ್ಲಿ ೧೨೦ ಪ್ರದರ್ಶನ ನೀಡುವರು. ಇದು ಬಹುತೇಕ ಸ್ವಾಲಂಬಿಯಾಗಿದೆ.  ಸುಮಾರು ಇಪ್ಪತ್ತು ಜನರಿರುವ ತಂಡದಲ್ಲಿ ಸಾಮಾನು ಸಾಗಣಿಕೆಯಿಂದ ಹಿಡಿದು ರಂಗಸಜ್ಜಿಕೆ, ಸಂಗೀತ, ಬೆಳಕು,  ನಟನೆ  ಎಲ್ಲಕೆಲಸವನ್ನೂ  ತಂಡದ ಸದಸ್ಯರೇ ನಿರ್ವಹಿಸುವರು
ಇದೇಸಮಯದಲ್ಲಿ ಇನ್ನೊಂದು ಚಟುವಟಿಕೆಯೂ ಕುಡಿಯೊಡೆಯಿತು;ಆಧಿನಿಕ ಜಗತ್ತಿನ ಅತ್ಯಾಕರ್ಷಕ ಮಾಧ್ಯಮವಾದ ಚಲನಚಿತ್ರ ಕುರಿತಾಗಿ ಗಂಭೀರ ಅದ್ಯಯನ ನಡೆಸಲು ಚಿತ್ರಸಮಾಜ ರಚಿತವಾಯಿತು ಅದರಡಿಯಲ್ಲಿ ಸರ್ವಕಾಲಿಕ ಶ್ರೇಷ್ಠ ಸಿನೆಮಾಗಳ   ಚಿತ್ರೋತ್ಸವ  ಚಿತ್ರೋತ್ಸವ  ಚಲನ ಚಿತ್ರರಸ ಗ್ರಹಣ ಶಿಬಿರಗಳನ್ನು ನ್ಯಾಷನಲ್‌ ಫಿಲ್ಮ್  ಮತ್ತು ಟೆಲಿವಿಜನ್‌ ಇನಸ್ಟಿಟ್ಯೂಟ್  ಮತ್ತು ನ್ಯಾಷನಲ್‌ಫಿಲ್ಮ ಆರ್ಕೆವ್‌ಗಳ ಸಹಯೋಗದೊಡನೆ ನಡೆಸತೊಡಗಿತು. ದೇಶದಲ್ಲೇ ಗ್ರಾಮೀಣ ಭಾಗದಲ್ಲಿ ನಡೆಯುವ ಪ್ರಪ್ರಥಮ ಚಟುವಟಿಕೆ ಎಂಬ ಹಿರಿಮೆ ಇಂದಿಗೂ  ಇದೆ. ಇದರ ಫಲಶೃತಿಯಾಗಿ ಚಿತ್ರ ಜಗತ್ತಿನ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಖ್ಯಾತ ನಾಮರು ಚಿತ್ರ ಪ್ರದರ್ಶನ ಮತ್ತು ಅವುಗಳ ಕುರಿತ ಮಾತುಕಥೆಯಿಂದ ರಸ ಗ್ರಹಣಕ್ಕೆ ಅನುವಾಗುವುದು.
ಕಳೆದ ಇಪ್ಪತ್ತೈದು ವರ್ಷದಿಂದ ಪ್ರತಿ ವರ್ಷವೂ ದಸರೆಯಸಮಯದಲ್ಲಿ ನಡೆಯುವ ಸಂಸ್ಕೃತಿ ಶಿಬಿರವು ಸಾಹಿತ್ಯ, ನಾಟಕ, ಚಲನಚಿತ್ರಗಳಲ್ಲಿನ ಆಸಕ್ತರ ಗಮನ ಸೆಳೆದಿದೆ. ಏಳುದಿನಗಳ ಅವಧಿಯ ಈ ಕಾರ್ಯಕ್ರಮವು ಸಾಹಿತ್ಯ, ಕಲೆ, ನಾಟಕ, ಜಾನಪದ, ಸಂಗೀತಗಳ  ಪರಿಚಯ ಮಾಡಿಕೊಡುವುದು.
ಮೂರನೆಯ ಮಜಲಿನಲ್ಲಿ ನೀನಾಸಂಗೆ ಅರೆ ವೃತ್ತಿಪರ ರಂಗ ತಂಡವೆಂಬ ಸ್ವರೂಪ ಬಂದಿತು. ಯುವ ಪೀಳಿಗೆಗ ಹತ್ತು ತಿಂಗಳ ಅವಧಿಯ ರಂಗ ತರಬೇತಿ ನಿಡುವ ಯೋಜನೆ ಜಾರಿಗೆ ಬಂದಿದೆ ಥೇಟರ್‌ಇನಸ್ಟಿಟ್ಯೂಟ್‌.ಮೊದಲ ಮೂರಿವಷ್ ತುಸು ಸಂಕಷ್ಟ ಎದುರಿಸಿದರು ೧೯೮೫ ರಿಂದ ಸರ್ಕಾರದ ಅನುದಾನ ದೊರೆಯ ತೊಡಗಿತು. ಆಗಲೇ ತಿರುಗಾಟ ಎಂಬ ಸಂಚಾರಿ ನಾಟಕ ತಂಡ ಜನಿಸಿತು, ನೀನಾಸಂನ ತರಬೇತಿ ಪಡೆದ ನಟರು ವೇತನ ಸಹಿತ ರಾಜ್ಯಾದ್ಯಂತ  ವಿವಿಧ ಕೇಂದ್ರಗಳಲಲ್ಲಿ  ಮೂರು ನಾಟಕಗಳನನ್ನು  ಪ್ರದರ್ಶಿಸ ತೊಡಗಿದರು.ಇದರಲ್ಲಿ ಹಳೆಯ ವಿದ್ಯಾರ್ಥಿಗಳು ಪೂರ್ಣಾವಧಿಯಲ್ಲಿ ಪಾಲ್ಗೊಳ್ಳುವರು. ಇದು ಈಗ ವಾರ್ಷಿಕ ಹವ್ಯಾಸವಾಗಿದೆ,ರಂಗಾಸಕ್ತರು ತಮ್ಮಲ್ಲಿ ನೀನಾಸಂ ನಾಟಕವಾಡಿಸಲು ಪೈಪೋಟಿ ನಡೆಸುವರು. ಪರಿಣಾಂ ತಿರುಗಾಟದ ವೆಚ್ಚ ವನ್ನುಅವರೇ ಭರಿಸುವರು.
ಜನಸ್ಪಂದನ ದ ಪರಿಣಾಮವಾಗಿ ಎರಡು ವರ್ಷ ರಾಜ್ಯದ ವಿವಧ ಭಾಗಗಳಲ್ಲಿ  ಅಲ್ಲಿನ ಸಾಂಸ್ಕೃತಿಕ ತಂಡಗಳ ಸಹಯೋಗದಿಂದ ಥೇಟರ್‌ ವರ್ಕಷಾಪ್‌ಗಳನ್ನು ಯಶಸ್ವಿಯಾಗಿ ನಡೆಸಲಾಯಿತು. ಈ ಎಲ್ಲ ಸಾಂಸ್ಕೃತಿಕ ಸೇವೆಗೆ ಅಂತರಾಷ್ಟ್ರೀಯ ಮನ್ನಣೆಯು ರೋಮನ್‌ಮೆಗಾಸಸ್‌ಎ ಪ್ರಶಸ್ತಿಯ ರೂಪದಲ್ಲಿ ಕೆ. ವಿ. ಸುಬ್ಬಣ್ಣ ಅವರಿಗೆ ದೊರೆಯಿತು. . ಪ್ರಶಸ್ತಿಯ ಹಣವನ್ನು ಮೂಲಧನವಾಗಿಸಿ ನೀನಾಸಂ ಪ್ರತಿಷ್ಠಾನ ಸ್ಥಾಪಿತಮಾಡಿ ಹೊಸ ಯೋಜನೆ ಪ್ರಾರಂಭಿಸಲಾಯಿತು  ಅದರ ಅಡಿಯಲ್ಲಿ ಈವರೆಗ ಕಿರು ಅವಧಿಯ  ಸಾಹಿತ್ಯ ರಸಗ್ರಹಣ ನೂರಕ್ಕೂ ಹೆಚ್ಚು ಶಿಬಿರಗಳನ್ನು ರಾಜ್ಯಾದ್ಯಂತ  ಸಾಂಸ್ಕೃತಿಕ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಈವರಗೆ ನಡೆಸಲಾಗಿದೆ. 
ನೀನಾಸಂನ ಹಳೆಯ ವಿದ್ಯಾರ್ಥಿಗಳು ಈಗ ನಾಡಿನಾದ್ಯಂತ ತಮ್ಮ ಗಟ್ಟಿ ಅನುಭವದ ನೆಲೆಯಲ್ಲಿ ಅನೇಕ ರಂಗ ತಂಡಗಳನ್ನು ಕಟ್ಟಿದ್ದಾರೆ. ಕಿರುತೆರೆಯಲ್ಲಂತೂ ಹೊಸ ಅಲೆ ಮೂಡಿಸಿದ್ದಾರೆ. ಇವರು ಬರಿ ನಟನೆ ಮಾತ್ರವಲ್ಲ ರಂಗಸಜ್ಜಿಕೆ, ಬೆಳಕು, ಮೇಕಪ್‌ನ ಜೊತೆ ಎಲ್ಲ ರಂಗಕೆಲಸಗಳನ್ನು ಸ್ವತಃ ನಿರ್ವಹಿಸುವುದರಿಂದ  ಎಲ್ಲವಿಧದಲ್ಲೂ ಸ್ವಾಲಂಬಿಗಳಾಗುವರು.
ಅಕ್ಷರ  ತಂದೆ ಸುಬ್ಬಣ್ಣ ನವರೊಡನೆ

ಈಗ ಕೆ.ವಿ ಸುಬ್ಬಣ್ಣನವರೂಹೋಗಿ ಐದು ವರ್ಷವಾಗಿದೆ , ಸತತ ಇಪ್ಪತ್ತೈದು ವರ್ಷ ಸ್ಪೂರ್ತಿ ನೀಡಿದ  ಅನಂತ ಮೂರ್ತಿಗಳೂ ಇಲ್ಲ ಆದರೂ ಚಟುವಟಿಕೆಗಳು ಯಥಾರೀತಿ ಸಾಗಿವೆ.ಕೆ.ವಿ .ಅಕ್ಷರ, ಟಿಪಿ. ಅಶೋಕ ಅವರ ಸಾರಥ್ಯದಲ್ಲಿ ಸುಗಮವಾಗಿ ಸಾಗಿವೆ.


Sunday, October 26, 2014

ಬಿಸಿಲ ನಾಡಿನಲ್ಲಿ ಹೊಸ ಶಿಕ್ಷಣದ ಹರಿಕಾರ - ಜೀವನ ರೆಡ್ಡಿ




ಕಲಬುರ್ಗಿಯ ಗ್ರಾಮೀಣ ನೆಲದಲ್ಲಿ ಶಿಕ್ಷಣ ಪುಷ್ಪ ಅರಳಿಸುತ್ತಿರುವ ಸಾಧಕ- ಜೀವನ ರೆಡ್ಡಿ





ಹೈದ್ರಾಬಾದ ಕರ್ನಾಟಕವೆಂದರೆ ಹಿಂದುಳಿದ ಪ್ರದೇಶ ಎಂಬುದು ಸಾರ್ವತ್ರಿಕ ಭಾವನೆ ಬಹುಮಟ್ಟಿಗೆ ಸತ್ಯ. ಅದಕ್ಕೆಂದೇ ಅದಕ್ಕೀಗ ವಿಶೇಷ ಸ್ಥಾನಮಾನ ಸಿಕ್ಕಿದೆ.ಮೂರು ದಶಕಗಳ ಹಿಂದೆ ಕಲುಬುರ್ಗಿ ಜಿಲ್ಲೆಯ ಕಮಲಾಪುರದಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡುವಾಗ ದಿನಪತ್ರಿಕೆ ಪಡೆಯಲು ಸಂಜೆ ತನಕ ಕಾಯ್ದ ಅನುಭವ ಇನ್ನೂ ಹಸಿಯಾಗಿದೆ.ಇಂಗ್ಲಿಷ್‌ ಅಂತೂ ನಿಜಕ್ಕೂ ಅಲ್ಲಿ ವಿದೇಶಿಭಾಷೆ.ಸಾಧಾರಣವಾಗಿ ಎಸ್‌.ಎಸ್‌.ಎಲ್‌.ಸಿ ಮತ್ತು ಪಿಯುಸಿ ಫಲಿತಾಂಶ ಪಟ್ಟಿಯಲ್ಲಿ ಆ ಪ್ರದೇಶದ ಜಿಲ್ಲೆಗಳು ಕೊನೆಯ ಸ್ಥಾನಕ್ಕೆ ಪೈಪೋಟಿ ಮಾಡಿದ್ದೆ ಹೆಚ್ಚು. ಅಲ್ಲಿಗೆ ಹಳೆ ಮೈಸೂರುಪ್ರದೇಶದಿಂದ ವರ್ಗವಾದವರು ಅದನ್ನೊಂದು ವನವಾಸವೆಂದ ಭಾವಿಸಿ ಅಲ್ಲಿಂದ ಹೋಗಲು ಇನ್ನಿಲ್ಲದ ಪ್ರಯತ್ನ ಮಾಡುವರು ಇಲ್ಲಿನ ಜನರ ಪ್ರೀತಿ ವಿಶ್ವಾಸ, ಸಹೃದಯತೆ ಎಲ್ಲಿಯೂ ಕಾಣದ್ದು ಆದರೆ ಇಲ್ಲಿನ ಶಿಕ್ಷಣದ ಗುಣ ಮಟ್ಟ ಬಹಳ ಕಡಿಮೆ..
ಮೂರು ದಶಕಗಳ ನಂತರ ಕಾರ್ಯಾಗಾರ ಒಂದಕ್ಕೆ ಸಂಪನ್ಮೂಲವ್ಯಕ್ತಿಯಾಗಿ ಗುಲಬರ್ಗ ವಿಶ್ವ ವಿದ್ಯಾಲಯಕ್ಕೆ ಹೋದಾಗ  ರಸ್ತೆಗಳು ಕಟ್ಟಡಗಳು ಭವ್ಯವಾಗಿದ್ದರೂ ಶಿಕ್ಷಣಗುಣಮಟ್ಟ ಎಂದಿನಂತೇ ಎಂದು ಕಂಡು ಬಂದಿತು. ಕಮಲಾಪುರದಲ್ಲಿ ಸಹೋದ್ಯೋಗಿಯಾಗಿದವರು ನನ್ನ ಬರವನ್ನು ಅರಿತು ತಮ್ಮ ಮನೆಗೆ ಬಂದೇ ತೀರಬೇಕೆಂದು ಒತ್ತಾಯ ಮಾಡಿದರು. ಇದ್ದಲ್ಲಿಗೇ ಕಾರು ಮಗಳೊಡನೆ ಕಳುಹಿಸಿ ಕೆಲ ಗಂಟೆಯ ಮಟ್ಟಿಗಾದರೂ ಬಂದು ಹೋಗಿ ಎಂದರು. ಅವರ ಪ್ರೀತಿಗೆ ಕಟ್ಟು ಬಿದ್ದು



ಮಧ್ಯಾಹ್ನದ ಮೇಲೆ ಹೊರಟೆ.ಸಂಜೆ ನಾಲ್ಕರ ಹೊತ್ತಿಗೆ ಕಮಲಾಪುರ ತಲುಪಿದ್ದಾಯಿತು.ಚಿಕ್ಕ ಗ್ರಾಮವಾಗಿದ್ದ  ಊರು ಪುಟ್ಟ ಪಟ್ಟಣವಾಗಿ ಬದಲಾಗಿತ್ತು. ಜನಸಂಖ್ಯೆ ದ್ವಿಗುಣವಾಗಿತ್ತು. ಕಾರಣ ಕಾರಂಜ ಯೋಜನೆಯಲ್ಲಿ ಮುಳುಗಡೆಯಾಗಿದ್ದ ಎರಡು ಹಳ್ಳಿಗಳಜನರಿಗೂ ಇಲ್ಲಿ ಪುನರ್‌ವಸತಿ ಕಲ್ಪಿಸಲಾಗಿತ್ತು. ನಾನು ಹಿಂದೆ ಇದ್ದಾಗ ಇದ್ದುದು ಒಂದೇ ಪದವಿಪೂರ್ವ ಕಾಲೇಜಿಗೆ ಸೇರಿಕೊಂಡಿದ್ದ ಪ್ರೌಢಶಾಲೆ. ಈಗ ನೋಡಿದರೆ ನಾಲ್ಕುಪ್ರೌಢಶಾಲೆಗಳು ತಲೆ ಎತ್ತಿದ್ದವು.ಆ ಮಾತು ಈ ಮಾತು ಆಡುತ್ತಾ ಜೀವನ ರೆಡ್ಡಿಯವರದೂ ಒಂದು ಪ್ರೌಢ ಶಾಲೆ ಇದೆ ಎಂದು ತಿಳಿಯಿತು. ಕಾರು ಮನೆಯ ಮುಂದೆಬಂದು ನಿಂತಾಗ  ತಲೆ ಎತ್ತಿ ನೋಡಿದರೆ ವಾಡೆಯಂತಹ ಅವರ ಮನೆಯೇ ಮಟಾ ಮಾಯ.ಆ ಜಾಗದಲ್ಲಿ ಪ್ರೌಢಶಾಲೆಯ ಫಲಕ ಹೊತ್ತ ಮೂರು ಮಹಡಿಯ ಭವ್ಯ ಕಟ್ಟಡ.

ಜೀವನರೆಡ್ಡಿಯವರು  ಕಮಲಾಪುರದಲ್ಲಿಯೇ ಹುಟ್ಟಿ ಬೆಳದವರು.ತಂದೆರಾಮಚಂದ್ರಾರೆಡ್ಡಿ ಶಿಕ್ಷಣ ಇಲಾಖೆಯಲ್ಲಿ ಉದ್ಯೋಗಿ. ಸಮಾಜಮುಖಿ.ಸಂಸಾರಕ್ಕಿಂತ ಸಮಾಜದಲ್ಲೇ ಅಸಕ್ತಿ ಅಧಿಕ.  ತಾಯಿ ಚಂದ್ರಮ್ಮನವರದೇ ಇತ್ತೀಚಿನವರೆಗೆ ಕೃಷಿ ಉಸ್ತುವಾರಿ. ಎರಡೇ ಮಕ್ಕಳು. ಒಂದು ಗಂಡು ಒಂದು ಹೆಣ್ಣು.. ಮಗನ   ಪ್ರಾಥಮಿಕ ಶಿಕ್ಷಣವೂ ಅಲ್ಲಿಯೇ ಆಗಿತ್ತು ಪದವಿಯನ್ನು ಕಲಬುರ್ಗಿಯಲ್ಲಿ ಪಡೆದು ನಂತರ ಬಿ.ಎಡ್ ಮುಗಿಸಿ ಹುಟ್ಟೂರಿನ ಪ್ರೌಢಶಾಲೆಯಲ್ಲಿಯೇ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು.ನಂತರ ಶಿಕ್ಷಣದಲ್ಲಿ  ಸ್ನಾತಕೋತ್ತರ ಪದವಿ .ವೃತ್ತಿಯ ಕೊನೆಯ ಹಂತದಲ್ಲಿ ಡಯಟ್‌ನಲ್ಲಿ ಕೆಲಸ ಮಾಡಿ , ನಿವೃತ್ತರಾದನಂತರ ಖಾಸಗಿ ಬಿ.ಎಡ್‌  ಕಾಲೇಜಿನಲ್ಲಿ ಮುಖ್ಯಸ್ಥರಾಗಿ ಸೇವೆ ಮಾಡುತ್ತಾ ಹುಟ್ಟೂರಿನ ಲ್ಲಿ ಶಿಕ್ಷಣ ಮಟ್ಟ ಸುಧಾರಿಸಲೆಂದು  ರಾಮಕೃಷ್ಣ ಗ್ರಾಮೀಣ ಅಭಿವೃದ್ಧಿ ಟ್ರಸ್ಟ ಅಡಿಯಲ್ಲಿ .ಶಿಶುವಿಹಾರ ಪ್ರಾರಂಭಿಸಿದ್ದು ಗೊತ್ತಿತ್ತು. ಆದರೆ ಅವರ ಮನೆಯ ಜಾಗದಲ್ಲೇ ಭವ್ಯ ಕಟ್ಟಡನಿರ್ಮಿಸಿ ೪೦೦ ಜನ ವಿದ್ಯಾರ್ಥಿಗಳಿಗೆ ಜ್ಞಾನ ದಾನ ನೀಡುತ್ತಿರುವುದು ನನಗಂತೂ ಸುದ್ದಿಯಾಗಿತ್ತು

ಶಾಲೆಗೆ ಅಂಟಿಕೊಂಡಂತೆ ಇರುವ ಮನೆಯಲ್ಲಿ  ತೊಂಭತ್ತನಾಲ್ಕರ  ಪ್ರಾಯದ ತಾಯಿಯೊಡನೆ ವಾಸ.. ಹಾಗೆ ನೋಡಿದರೆ  ಅವರದೇನೂ ಅಭಾವ ವೈರಾಗ್ಯವಲ್ಲ. ಕೊಟ್ಟು ಹುಟ್ಟಿದವರು. ಅರವತ್ತು  ಎಕರೆ ವತನದಾರರು. ಎತ್ತು ,ಎಮ್ಮೆ ದನ ಕರು ಆಳು ಕಾಳು ಹೊಂದಿದ ಸ್ವಯಂ ಕೃಷಿದಾರರು. ಇಚ್ಛೆಯರಿತು ನಡೆವ ಹೆಂಡತಿ ಶಕುಂತಲಬಾಯಿ  ಅಥವ ಶಕ್ಕಮ್ಮ  ನಾಲ್ಕು ಹೆಣ್ಣು ಒಂದು ಗಂಡಿನ ತುಂಬು ಕುಟುಂಬ. ಮಕ್ಕಳಿಗೆಲ್ಲ ಉತ್ತಮ ಶಿಕ್ಷಣ ದೊರೆತಿದೆ..ಎಲ್ಲರೂ ಉದ್ಯೋಗಸ್ಥರು, ಕಲಬುರ್ಗಿಯಲ್ಲಿ ಮನೆಮಾರು ಮಾಡಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿರುವರು. ಇದ್ದೊಬ್ಬ ಮಗ ಅಮೇರಿಕಾದಲ್ಲಿ. ಇಳಿವಯಸ್ಸಿನಲ್ಲಿ ದುಡಿವ ದರ್ದಿಲ್ಲ. ಇವರೂ ಅವರ ಜೊತೆ ಸುಖವಾಗಿ ಇರಬಹುದಿತ್ತು ಆದರೆ. ಐದೂ ಮಕ್ಕಳ ನೆಮ್ಮದಿಯ ಜೀವನದ ದಾರಿ ತೋರಿದ ನಂತರ ಈಗ ನಾನೂರು ಮಕ್ಕಳಿಗೆ ಮಾರ್ಗದರ್ಶನ ಮಾಡಲು ಹಳ್ಳಿಯಲ್ಲಿಯೇ ನೆಲಸಿರುವರು. ಮಕ್ಕಳ ಮೊಮ್ಯಮಕ್ಕಳ ಆರೈಕೆಗೆಂದು ಹೆಂಡತಿ ಓಡಾಡಿದರೂ ಇವರಿಗೆ ಕಾಯಕವೇ   ಕೈಲಾಸ . ಎಪ್ಪತ್ತರ ಹರೆಯದಲ್ಲೂ ಕೃಷಿ ಕೆಲಸ ಕೈಬಿಟ್ಟಿಲ್ಲ. ಶಿಕ್ಷಣ ಕ್ಷೇತ್ರದಲ್ಲಿನ ತಮ್ಮ ಅಪಾರ ಅನುಭವದ ಫಲವನ್ನು ತಮ್ಮೂರಿನ ಮಕ್ಕಳಿಗೆ ಹಂಚಲು ಕಂಕಣ ಬದ್ದರಾಗಿರುವರು. ನಗರದಲ್ಲಿ ಶಾಲೆ ತೆಗೆದಿದ್ದರೆ ಬರುತಿದ್ದ ಆದಾಯ ಊಹಿಸಲು ಆಗದು. ಶಿಕ್ಷಣ ಸಂಸ್ಥೆ ಎಂಬುದು  ಈಗ ಒಂದು ವಾಣಿಜ್ಯೋದ್ಯಮ. ಕೋಟಿ ಕೋಟಿ ದುಡಿಮೆಗೆ ದಾರಿ. ಆದರೆ ಇವರು ಗ್ರಾಮೋದ್ಧಾರದೆಡೆಗೆ ಮನ ಮಾಡಿರುವರು. ಅದಕ್ಕೆ ಅತಿ ಕಡಿಮೆ ಶುಲ್ಕದಲ್ಲಿ ಉತ್ತಮ ಗುಣ ಮಟ್ಟದ  ಶಿಕ್ಷಣ ನೀಡುವ ಕನಸು ನೆನಸುಮಾಡಲು. ತಮ್ಮದೇ ಮನೆಕೆಡವಿಸಿ  ಅಲ್ಲಿಯೇ ತಮ್ಮೆಲ್ಲ ದುಡಿಮೆ, ಜಮೀನಿನ ಆದಾಯ ಕ್ರೋಢೀಕರಿಸಿ ಭವ್ಯ ಕಟ್ಟಡ ನಿರ್ಮಾಣ ಯೋಜಿಸಿದರು.  ಅದರ  ಫಲ  ಸುಮಾರು ಕೋಟಿ ರೂಪಾಯಿ ಮೌಲ್ಯ ಸುಸಜ್ಜಿತ  ಕಟ್ಟಡ. ಅದಕ್ಕೆ ವಿದೇಶದಲ್ಲಿರುವ ಮಗನೂ ಕೈ ಗೂಡಿಸಿದ.

ಎಲ್ಲಕ್ಕಿಂತ ಮನಮುಟ್ಟುವುದು ಅವರು ಗ್ರಾಮೀಣ ಬಡ ಮಕ್ಕಳಿಗೆ ಒದಗಿಸಿರುವ ಸೌಲಭ್ಯ. ಸುಸಜ್ಜಿತ ಕಟ್ಟಡ, ಪೀಠೋಪಕರಣ ಮತ್ತು ಪಾಠೋಪಕರಣ, ಶಾಲೆಯ ಒಂದೊಂದು ಅಂಗುಲ ಜಾಗೆಯೂ ಮಾಹಿತಿಯ ಕಣಜ. ಹುಡುಗಿಯರಿಗೆ ಪ್ರತ್ಯೇಕ ಶೌಚಾಲಯಗಳು,ಶುದ್ಧೀಕರಿಸಿದ ಕುಡಿಯುವ ನೀರು .ಮುಖ್ಯವಾಗಿ ಆಧುನಿಕ ತಂತ್ರಜ್ಞಾನದ ಮೂಲಕ ಮಕ್ಕಳಿಗೆ ಬೋಧನೆ. ಮಾಡುವ ಸ್ಮಾರ್ಟ ತರಗತಿಗಳು. ಅಂದರೆ ನಗರದ ಪ್ರತಿಷ್ಠಿತ ಶಾಲೆಗಳಲ್ಲೂ  ವಿರಳವಾದ ದೃಶ್ಯ ಮಾದ್ಯಮದ ಮೂಲಕ ಕಲಿಸುವ  ಬೋಧನಾಕ್ರಮ. ಸುಮಾರು ನಾಲ್ಕು  ಲಕ್ಷ ವೆಚ್ಚದಲ್ಲಿ ಆಧುನಿಕ ತಂತ್ರಜ್ಞಾನದ ಅಳವಡಿಕೆ.ಕಾಂಪ್ಯೂಟರ್‌ ಸಹಾಯಿತ ಶಿಕ್ಷಣ.

 ಅಲ್ಲಿನ ತರಗತಿಯಲ್ಲಿನಿಂತಾಗ ಒಂದು ಕ್ಷಣ ಹಿಂದುಳಿದ ಹಳ್ಳಿಯಲ್ಲಿರುವೆನೋ ಅಥವಾ ಬೆಂಗಳೂರಿನ ಪ್ರತಿಷ್ಠಿತ ಲಕ್ಷ ಲಕ್ಷ ಶುಲ್ಕ ಪಡೆವ ಪ್ರತಿಷ್ಠಿತ ಶಾಲೆಯಲ್ಲಿರುವೆನೋ ಎಂಬ ಅನುಮಾನ ಬಂದಿತು. ಇನ್ನು ಅಲ್ಲಿರುವ ಸುಮಾರು ಇಪ್ಪತ್ತು ಸಿಬ್ಬಂದಿ.ಹಣಕ್ಕಾಗಿ ದುಡಿಯದೇ ತಮ್ಮ ಊರಿನ ಸೇವೆ ಎಂದೇ ಬಂದಿರುವವರು.ಮನೆಯ ಕೆಲಸ ಎಂದು ಮನ ಮುಟ್ಟಿ ದುಡಿಯುತಿದ್ದಾರೆ.ವೇತನ ಕಡಿಮೆ.ಬಹುತೇಕ ಗೃಹಿಣಿಯರೇ ಶಿಕ್ಷಕಿಯರು. ತಮ್ಮೂರಿನ ಮಕ್ಕಳಿಗೇ ಉತ್ತಮ ಶಿಕ್ನ ದೊರೆಯುವದೆಂಬ ತೃಪ್ತಿ ಅವರದು ಹಾಗಾಗಿ ಅಪೇಕ್ಷೆಯೂ ಅಧಿಕವಿಲ್ಲ.ಗ್ರಾಮೀಣ ಮಟ್ಟದಲ್ಲಿ ಗುಣಾತ್ಮಕ ಶಿಕ್ಷಣ, ಹೆಣ್ಣು ಮಕ್ಕಳ, ಬಡವರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ.ಮಕ್ಕಳ ಸರ್ವಾಗೀಣ ಬೆಳವಣಿಗೆಗೆ,ಅವರಲ್ಲಿ ಐಕ್ಯತೆ ಮತ್ತು ರಾಷ್ಟ್ರೀಯತೆ ಭಾವನೆ ಬೆಳೆಸಲು ಸಂಸ್ಥೆಯ ಅಧ್ಯಕ್ಷರು ಆಯೋಜಿಸುವ  ವಿವಿಧ ಕಾರ್ಯಕ್ರಮಗಳಲ್ಲಿ  ಸಕ್ರಿಯರಾಗಿರುವರು.
ಎಪ್ಪತ್ತರ ಹತ್ತಿರವಿರುವ ರೆಡ್ಡಿಯವರದು ದಿನನಿತ್ಯ ಒಂದೂವರೆ ಗಂಟ ಯೋಗಾಭ್ಯಾಸದಿಂ ಸದೃಢವಾದ ದೇಹ. ತಮ್ಮಾರೋಗ್ಯದ ರಹಸ್ಯವನ್ನು ಎಲ್ಲರೊಂದಿಗೆ ಹಂಚಿಕೊಂಡು ಸಶಕ್ತ ಸಮಾಜ ನಿರ್ಮಾಣದಲ್ಲಿ ಅವರಿಗೆ ಅತೀವ ಆಸಕ್ತಿ. ವಿದ್ಯಾರ್ಥಿಗಳಿಗೂ ಯೋಗಾಭ್ಯಾಸವನ್ನು ಸ್ವತಃ ಮಾಡಿಸುವರು
ಯೋಗ ಶಿಕ್ಷಣ


ಜೀವನರೆಡ್ಡಿಯವರ ಸಾಧನೆಯನ್ನು ಗುರ್ತಿಸಿ ರಾಷ್ಟ್ರೀಯಾ ಸಮ್ಮಾನ ಪುರಸ್ಕಾರ ವನ್ನು  2013 ರಲ್ಲಿ ದೆಹಲಿಯಲ್ಲಿಯ  Individual Achievement for Economic and social Development   ಸಂಸ್ಥೆಯು  ದಿನಾಂಕ 17-02-2013 ರಂದು  ರಾಷ್ಟ್ರೀಯಾ ಸಮ್ಮಾನ ಪುರಸ್ಕಾರ್ ನೀಡಿ ಗೌರವಿಸಿದೆ.. ಸದಾ ಕ್ರಿಯಾಶೀಲರಾದ ಇವರು ಪ್ರತಿಯೊಂದು ಮಗುವಿನ    ವೈಯುಕ್ತಿಕ ವೈಶಿಷ್ಟ್ಯವನ್ನು ಪರಿಗಣಿಸಿ ಆ ಮಗುವಿನ ಸಮಸ್ಯೆ ಪರಿಹರಿಸಲು ಕಾಳಜಿ ವಹಿಸುವರು.ಇವರ ಪ್ರಯತ್ನ ಗಮನಿಸಿ ಬೆಂಗಳೂರಿನ ಬಿ.ಎಂ ಶ್ರೀ ಸ್ಮಾರಕ ಪ್ರತಿಷ್ಠಾನವು ಗ್ರಂಥಾಲಯಕ್ಕೆ  ಸುಮಾರು ೨೦೦ ಪುಸ್ತಕಗಳನ್ನು ಕೊಡಮಾಡಿದೆ.




ಎಚ್‌.ಶೇಷಗಿರಿರಾವ್,
ನಿರ್ದೇಶಕರು, ಹಸ್ತಪ್ರತಿ ಸಂರಕ್ಷಣೆ ಮತ್ತು ಅಧ್ಯಯನ ಅಭಿಯಾನ ಬೆಂಗಳೂರು
ಚರದೂರವಾಣಿ- ೯೪೪೮೪೪೨೩೨೩










ಹಸ್ತಪ್ರತಿ ಕುರಿತು ದೂರದರ್ಶನದ ಕಾರ್ಯಕ್ರಮ





ಬಿ.ಎಂ ಶ್ರೀ . ಸ್ಮಾರಕ ಪ್ರತಿಷ್ಠಾನದಲ್ಲಿ ಹಸ್ತಪ್ರತಿ ಭಂಡಾರದಲ್ಲಿರುವ ಸುಮಾರು ೧೪೦೦ ಹಸ್ತಪ್ರತಿ ಗಳ ಸಂರಕ್ಷಣೆ ಮತ್ತು ಅಧ್ಯಯನ ಕಾರ್ಯದಲ್ಲಿ ಆಗುತ್ತಿರುವ ಕೆಲಸದ ಕಿರು ನೋಟವನ್ನು ಕೊಡಲಾಗಿದೆ. ಯಾವುದೇ ಅನುದಾನವಿಲ್ಲದೆ ಸ್ವಯಂ ಸೇವಕರ ನೆರವಿನಿಂದ ಪ್ರಾಚೀನ ಜ್ಞಾನ  ಸಂಪತ್ತನ್ನುಆಧುನಿಕ ತಂತ್ರ  ಜ್ಞಾನದ  ಅಳವಡಿಕೆಯಿಂದ  ಸಂರಕ್ಷಿಸಿ ಅಧ್ಯಯನಕ್ಕೆ ಅಣಿಮಾಡುವುದನ್ನು ಕುರಿತು  "ಹಸ್ತ ಪ್ರತಿ ಸಂರಕ್ಷಣೆ ಮತ್ತು ಅಧಯಯನ " ಅಭಿಯಾನದ ನಿರ್ದೇಶಕ ರೊಡಗಿನ  ಚಂದನವಾಹಿನಿಯ ಸಂವಾದದ ಕೊಂಡಿ ಕೆಳಗೆ ನೀಡಿದೆ. ದಯವಿಟ್ಟು ನೋಡಿ
ದೂರದರ್ಶನದ ಬೆಳಗು ಕಾರ್ಯಕ್ರಮದಲ್ಲಿ ಪ್ರಸಾರವಾದ ಸಂದರ್ಶನದ ಭಾಗ ಇಲ್ಲಿದೆ.

Thursday, October 23, 2014

ಆಟೋ ರಾಜನ ಸದ್ದಿಲ್ಲದ ಸೇವೆ



 ರಾತ್ರಿ ಹನ್ನೊಂದರ ಸಮಯ  ಕೆಂಪೇಗೌಡ ನಗರದಲ್ಲಿನ ತುಂಬು ಗರ್ಭಿಣಿ ಯುವತಿಗೆ ಹೆರಿಗೆ ನೋವು ಪ್ರಾರಂಭವಾಯಿತು. ಆಸ್ಪತ್ರೆಗೆ ಫೋನುಮಾಡಿ ಆಂಬ್ಯಲೆನ್ಸ ಕಳುಹಿಸಲು ಕೇಳಿದರೆ ಪ್ರತಿಕ್ರಿಯೆ ಇಲ್ಲ.  ಮತ್ತೆ ಮತ್ತೆ ಫೋನು ಮಾಡಿದರೆ  ಡ್ರೈವರ್ ಇಲ್ಲ ಎಂಬ ಉತ್ತರ. ಬೇರೆ ಕಡೆ ಮಾಡಿದರೂ ಪ್ರತಿಕ್ರಿಯೆ ಇಲ್ಲ.ಅಪರಾತ್ರಿ ಹೊತ್ತಿನಲ್ಲಿ ಟ್ಯಾಕ್ಸಿಯೂ ಸಿಗದು.  ಆಗ ಆಸ್ಪತ್ರೆಯಲ್ಲಿನ ನರ್ಸ .” ಆಟೋರಾಜನಿಗೆ ಫೋನು ಮಾಡಿ’ ಎಂದು ಹೇಳಿ ಅವನ ದೂರವಾಣಿ ಸಂಖ್ಯೆ ನೀಡಿದರು . ಕರೆ ಮಾಡಿದ ಐದು ನಿಮಿಷದಲ್ಲಿಯೇ ಮನೆ ಮುಂದೆ ಆಟೋ ಹಾಜರು. ತುಂಬು ಗರ್ಭಿಣಿಗೆ ತುಸುವೂ ತೊಂದರೆ ಯಾಗದಂತೆ ಆಸ್ಪತ್ರೆ ತಲುಪಿಸಿಸದ. ಎಷ್ಟು ಚಾರ್ಜ ಎಂದರೆ ಏನೂ ಕೊಡ ಬೇಡಿ. ಗರ್ಭಿಣಿಯರಿಗೆ  ಉಚಿತ ಸೇವೆ  ಎಂದ.

ಈ ರೀತಿ ಗರ್ಭಿಣಿಯರಿಗೆ,  ವೃದ್ಧರಾದ ರೋಗಿಗಳಿಗೆ  ಮತ್ತು ಅಫಘಾತಕ್ಕೆ ಈಡಾಗಿರುವವರಿಗೆ ಈ ಉಚಿತ ಸೇವೆ ಸಲ್ಲಿಸುತ್ತಿರವವನು ಯಾವುದೇ ಸೇವಾ ಸಂಸ್ಥೆಗೆ ಸೇರದವರಲ್ಲ. ನಮ್ಮ ನಿಮ್ಮಂತೆ ಸಾಧಾರಣ ವ್ಯಕ್ತಿ.ಹೆಸರಿನ ಹಂಬಲವಿಲ್ಲದ, ಹಣದ ಆಮಿಷವಿಲ್ಲದ ಶ್ರೀಸಾಮಾನ್ಯ. ದಿನದ  ದುಡಿಮೆಯಿಂದ ಹೊಟ್ಟೆ ಹೊರೆಯುವ ಆಟೋ ಚಾಲಕ. ಆಕಾಶ ನೋಡಲು ನೂಕು ನುಗ್ಗಲು ಏಕೆ ಎಂಬ ಮಾತಿನಂತೆ  ತನ್ನ ಪರಿಮಿತಿಯಲ್ಲಿಯೇ ಸಮಾಜ ಸೇವೆ ಸಲ್ಲಿಸುತ್ತಿರುವ  ಅನನ್ಯ ಆಟೋಚಾಲಕ ರಾಜುವಿನ  ಈ ಸೇವೆ ಕಳೆದ ೧೫ ವರ್ಷಗಳಿಂದ ತಡೆಯಿಲ್ಲದೇ ಸಾಗಿದೆ.
ಆಕಾಶ ನೋಡಲು ನೂಕುನುಗ್ಗಲು ಏಕೆ ಎಂಬ ಮಾತಿದೆ. ಸಮಾಜಸೇವೆ ಮಾಡಲು ಹಿರಿಯ ಹುದ್ದೆ ಬೇಕಿಲ್ಲ. ಸಂಘ ಸಂಸ್ಥೆಗಳ ಅಗತ್ಯವಿಲ್ಲ ಮನವೊಂದಿದ್ದರೆ ಸಾಕು. ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ ರಾಜಾ.
ಆಟೋ ಎಂದರೆ ಕೆರೆದಲ್ಲಿಗೆ ಬಾರದೇ, ಅವರು ಹೋಗುವಲ್ಲಿಗೆ ಪ್ರಯಾಣಿಕರನ್ನು ಹತ್ತಿಸಿ ಕೊಳ್ಳುವವರು ಹಲವರಾದರೆ, ಮೀಟರ್‌ಜಂಪ್‌ಆಗುವ ದೂರಿಗೆ ಕಾರಣ ಕೆಲವರು. ಒಂದಕ್ಕೆ ಎರಡು ಪಟ್ಟು ಹಣ ಕೇಳುವವರು  ಇಲ್ಲದಿಲ್ಲ. ನಯ ವಿನಯವಿಲ್ಲದ ನಡೆ ನುಡಿಯಂತೂ ಸರ್ವೇ ಸಾಮಾನ್ಯ.ಹೊಸಬರಾದರೆ ಸುಲಿಗೆಗಂತೂ ಕೊನೆಯಿಲ್ಲ. ನಸುಕಿನಲ್ಲಿ ಬೆಂಗಳೂರಿನ ರೈಲು ನಿಲ್ದಾಣದಿಂದ ಪಕ್ಕದಲ್ಲಿರುವ ತೋಟದಪ್ಪನ ಛತ್ರಕ್ಕೆ ಹೋಗಲು ಊರೆಲ್ಲ ಸುತ್ತಿಸಿ ನೂರಾರು ರೂಪಾಯಿ ಕಿತ್ತ ಘಟನೆಯಂತೂ ಹಿಂದೆ ಬಹು ಪ್ರಚಲಿತವಿದ್ದ ಜೋಕು.ಕಾರ್ಮುಗಿಲ ನಡುವೆ ಕೋಲ್ಮಿಂಚು, ಹಿಮಾವೃತ ಬೆಟ್ಟದಲ್ಲಿ ಬಿಸಿ ನೀರ ಬುಗ್ಗೆ ಇರುವಾಗ ದೂರುಗಳ ಸಂತೆಯಲ್ಲಿ ನೆರವಿನ ಹಸ್ತ ನೀಡುವ ವ್ಯಕ್ತಿ ಇರುವುದೇಅಸಹಜವಲ್ಲ.ಕಾಂಕ್ರೀಟ್‌ಕಾಡಿನಲ್ಲಿ ಅರಳಿರುವ ಸುಮಧುರ ಪುಷ್ಪ ಮಾನವತೆಯ ಸಂಕೇತ.ಅದೇ ಜೀವನವನ್ನು ಸಹನೀಯವಾಗಿಸುವುದು.
ರಾಜಾ ಹುಟ್ಟಿದ್ದ ಚೆನ್ನಪಟ್ಟಣದ ಹತ್ತಿರದ ಹಳ್ಳಿಯಲ್ಲಾದರೂ ಬೆಳೆದದ್ದೂ ಬೆಂಗಳೂರಿನಲ್ಲಿ.ತಂದೆ ನಿಂಗಯ್ಯ  ಕೃಷಿಕ. ತಾಯಿ ಲಕ್ಷ್ಮಮ್ಮ ಬೆಂಗಳೂರು ಡೈರಿಯಲ್ಲಿ  ಕೆಲಸ.ನರ್ಸ. ರಾಜಾ  ಓದಿದ್ದು ಬರಿ ಏಳನೆತರಗತಿವರೆಗೆ. ಇಂಗ್ಲಿಷ್‌ ಅವನ ಪಾಲಿಗೆ ಕಬ್ಬಿಣದ ಕಡಲೆ. ತಂದೆಗೆ ಹಳ್ಳಿಗೆ  ಮಗ ಬಂದು ಕೃಷಿಕೆಲಸದಲ್ಲಿ ಸಹಾಯ ಮಾಡಲೆಂಬ ಆಶೆ.  ಆದರೆ ಬೆಂಗಳೂರು ಬಿಡಲು ಮನಸ್ಸಿಲ್ಲ. ಹಾಗೂ ಹೀಗೂ ಮಾಡಿ ಹದಿನೆಂಟನೆಯ ವಯಸ್ಸಿಗೆ ಆಟೋ ಕೊಂಡು ಕಾಲಮೇಲೆ ನಿಲ್ಲುವ ಪ್ರಯತ್ನ ಸಾಗಿತು. ಅತ್ತೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲಸ. ಅತ್ತೆಯ  ಜೊತೆ ಆಗಾಗ ಅಸ್ಪತ್ರೆಗೆ ಹೋಗುತಿದ್ದಾಗ ಗಮನಿಸಿದ್ದ ಒಂದು ಅಂಶ ಮನ ತಟ್ಟಿತ್ತು.ಬಡವರಾದ ಹೆಣ್ಣು ಮಕ್ಕಳು , ವಯಸ್ಸಾದ ರೋಗಿಗಳು ಆಸ್ಪತ್ರೆಗೆ  ಬರಲು ಅಲ್ಲಿಂದ ಮನೆಗೆ ಹೋಗಲು ಪಡುವ  ಪಡಿಪಾಟಲು ಮನ ತಟ್ಟಿತು. ಅಟೋ ಚಾಲನೆಗೆ ಇಳಿದಾಗ ಕೈಲಾದ ಸೇವೆ ಸಲ್ಲಿಸ ಬೇಕೆಂಬ ಆಶೆ ಕುಡಿಯೊಡೆಯಿತು. ಆದು ಕ್ಷಣಿಕ ಅನಿಸಿಕೆಯಾಗದೇ ಸತತ ಸ್ಪಂದಿಸುವ  ನಿರ್ಧಾರವಾಯಿತು. ಬೆಂಗಳೂರು ಬಂದ್‌ಆಗಿದ್ದಾಗ ಆಸ್ಪತ್ರೆ ಮುಂದೆ ಫಲಕ ಹಾಕಿ ಸೇವೆಗೆ ಹುರುಪಿನಿಂದ  ನಿಂದ ಸಿದ್ದವಾದ. ಯುವ ಆಟೋ ಚಾಲಕ.pa (...)
. ಈ ಸೇವೆಗೆ  ಪುಟ ಕೊಟ್ಟುದು ಸಹಾಯ ಪಡೆದವರು ಮುಖದಲ್ಲಿ ಮೂಡುತಿದ್ದ ನೆಮ್ಮದಿಯ ಮುಗುಳ್ನಗೆ.ಮನದಾಳದಿಂದ ಸಲ್ಲಿಸುತಿದ್ದ ಅಭಿನಂದನೆ.
ನೋವಿಗೆ ಸ್ಪಂದಿಸಲು ಇಟ್ಟ ಪುಟ್ಟ ಹೆಜ್ಜೆ  ದಿಟ್ಟತನ ತಂದಿತು. ವಿಶೇಷವಾಗಿ ಬಂದ್‌,ಹರತಾಳ ಮೊದಲಾದ ಸಾರ್ವತ್ರಿಕ ಪ್ರತಿಭಟನೆಯ ಸಮಯದಲ್ಲಿ, ಚಳುವಳಿಗಳ ಸಂದರ್ಭದಲ್ಲಿ ಜನ ಸಾಮಾನ್ಯರಿಗೆ ಆಗುವ ತೊಂದರೆಗೆ ಪರಿಹಾರ ನೀಡಬೇಕೆಂಬ ಹಂಬಲದ ಫಲ. ಸರ್ಕಾರಿ ಆಸ್ಪತ್ರೆಗಳ ಮುಂದೆ ಹಾಕಿದ ಫಲಕ. ಮುಷ್ಕರದ ಸಮಯದಲ್ಲಿ ಸಾಮೂಹಿಕ ಸಮಸ್ಯೆಯ ಮುಂದೆ ವೈಯುಕ್ತಿಕ ನೋವು ನಗಣ್ಯ. ಆದರೆ ಸಂಬಂಧಿಸಿದವರಿಗೆ ಅದು ಭರಿಸಲಾರದ ನಷ್ಟ ತೊಂದೊಡ್ಡುವುದು.ಅಕಸ್ಮಾತ್ ಯಾರಾದರೂ ಸಹಾಯ ಮಾಡ ಬಯಸಿದರೂ ಸಂಘಟನೆಯ ಕೆಂಗಣ್ಣಿಗೆ ಗುರಿಯಾಗಿ ಹಲ್ಲೆಗೆ ಒಳಗಾಗುವರು. ಕಣ್ಣುತಪ್ಪಿಸಿ ಗಾಡಿ ಓಡಿಸಿದರೂ ಸಾಮಾನ್ಯರ ಕೈಗೆಟುಕದಷ್ಟು ದುಬಾರಿಯ ಬೇಡಿಕೆ. ಅನಿವಾರ್ಯ ಪರಿಸ್ಥಿತಿಯ ದುರ್ಬಳಕೆ. ಗಾಳಿ ಬಂದಾಗ ತೂರಿಕೊಳ್ಳುವ ದುರ್ಬುದ್ದಿ. ಸಹಜವಾಗಿ ಇದು ಇತರರ ಕಣ್ಣು ಕೆಂಪಾಗಿಸುವುದು. ಆದರೆ ಆಟೋ ರಾಜನ ಗಾಡಿಗೆ ಮಾತ್ರ  ವಿನಾಯ್ತಿ.
ಬೇರೆಲ್ಲ  ಆಟೋಗಳು ಟ್ಯಾಕ್ಸಿಗಳು ಪೂರ್ಣ ವಿಶ್ರಾಂತಿ ಪಡೆಯುವಾಗ ಚಾಲಕರು ತಮ್ಮ ಕುಟುಂಬದವರೊಡನೆ ಸಮಯ ಕಳೆಯುತ್ತಿರುವಾಗ , ಆಟೋ ರಾಜನ ಮೊಬೈಲ್‌ಗೆ ಕರೆಯ ಮೇಲೆ ಕರೆ. ಅತ್ಯವಸರವಿರುವರಿಗ ಆದ್ಯತೆ. ಹುಟ್ಟು ಸಾವಿನ ಹೊಸ್ತಿಲಲ್ಲಿರುವವರ ನೆರವಿಗೆ ಆಟೋ ಓಡುವುದು. ಒಂದುಆಸ್ಪತ್ರೆಯಿಂದ ಇನ್ನೊಂದುಕಡೆ ತಡವಿಲ್ಲದೆ ಹೊರಡುವನು. ಹಾಗೆಂದು ಯಾರೂ ಬಿಟ್ಟಿ ಸೇವೆ ಪಡೆಯುವುದಿಲ್ಲ. ಸಾದ್ಯವಿರುವಷ್ಟು ಹಣ ಕೊಟ್ಟೇ ಕೊಡುವರು.
ಇನ್ನು ಆಟೋ ರಾಜನ ಗಾಡಿ ಗುರುತಿಸುವುದು ಬಹು ಸುಲಭ. ಅದೊಂದು ಕನ್ನಡದ ತೇರು. ಆಟೋದ ಹೊರ ಮತ್ತು ಒಳ ಮೈನಲ್ಲಿ ಇರುವ ಎಲ್ಲ ಜಾಗದಲ್ಲೂ  ಜೀವನ ಪ್ರೀತಿ, ಸಮಾಜ ಮುಖಿ ಮತ್ತು, ಕನ್ನಡ ಪ್ರೇಮಕ್ಕೆ  ಉತ್ತೇಜನ  ನೀಡುವ ಬರಹಗಳು. ಕನ್ನಡದ ಹಿರಿಯ ಸಾಧಕರ ಚಿತ್ರಗಳು.ಜೊತೆಗೆ ಕನ್ನಡದ ಪತ್ರಿಕೆಗಳು ಓದಲು ಲಭ್ಯ. ಆಟೋದಲ್ಲಿ ಕುಳಿತಾಗ ಹೊತ್ತು ಹೋಗುವುದೇ ಗೊತ್ತಾಗುವುದಿಲ್ಲ. ಅಲ್ಲಿರುವುದನ್ನು ಓದಿ ಮುಗಿಸಲು ಸಮಯ ಸಾಲದು. ಆಟೋ ಹತ್ತುವಾಗ ಎಂಥಹ ಧಾವಂತ ಇದ್ದರೂ ಇಳಿಯುವಾಗ ಮನಸ್ಸು ನಿರಾಳವಾಗುವುದು.
ಊರಿಗೆ ಉಪಕಾರಿ ಮನೆಗೆ ಮಾರಿ ಎಂಬ ಅಪವಾದ ಸಾಮಾನ್ಯವಾಗಿ ಎಲ್ಲ ಸಮಾಜ ಸೇವಕರಿಗೂ ತಪ್ಪಿದ್ದಲ್ಲ. ಆದರೆ ಆಟೋರಾಜನದು ಎರಡು ಹೆಣ್ಣು ಮತ್ತು ಒಂದು ಗಂಡು ಮಕ್ಕಳಿರುವ  ಸುಖಿ ಸಂಸಾರ. ಗಂಡನ ಸಮಾಜ ಸೇವೆಯ ನಡೆ ಅರ್ಥ ಮಾಡಿಕೊಂಡಿರುವ ಹೆಂಡತಿ. ತಂದೆಯ ಶ್ರಮಜೀವಿಯಾದರೂ ನಾಲ್ಕು ಜನರಿಗೆ ಬೇಕಾದವನೆಂಬ ಹೆಮ್ಮೆ ಮಕ್ಕಳದು ತಾನು ಓದಲಾಗದಿದ್ದರೂ ಮೂವರೂ ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡಿಸುತ್ತಿರುವನು. ಹಿರಿಯ ಮಗಳು ಎಮ ಕಾಂ. ಮಧ್ಯದ ಮಗಳು ಬಿ.ಕಾಂ ಮತ್ತು ಕೊನೆಯ ಮಗ ಪಿಯುಸಿ ಯಲ್ಲಿ ಓದುತ್ತಿರುವನು.ವಿಶೇಷವೆಂದರೆ ಆಟೋರಾಜನ ಒಳ್ಳೆಯತನ ಗುರುತಿಸಿ ವಿದ್ಯಾಸಂಸ್ಥೆಗಳವರು  ಹೆಚ್ಚಿನ ಡೊನೇಷನ್‌ ಇಲ್ಲದೆ ಶಿಕ್ಷಣಕ್ಕೆ ಅವಕಾಶ ನೀಡಿರುವುದನ್ನು ಕೃತಜ್ಞತೆಯಿಂದ ನೆನಸುವನು ಆಟೋ ರಾಜಾ. ಇಷ್ಟೇ ಅಲ್ಲ ಬಡವಾಣೆಯಿಂದ ಹಿಡಿದು ಬೆಂಗಳೂರು ನಗರ ಪಾಲಿಕೆಯ ವರೆಗೆ ಸೇವೆ ಗುರುತಿಸಿ ಪ್ರಶಸ್ತಿ ನೀಡಿ ಸೇವೆಯನ್ನು ಗೌರವಿಸಿರುವರು. ರಾಜ್ಯೋತ್ಸವ ಪ್ರಶಸ್ತಿಯೂ ಸಂದಿದೆ.  ಅದಕ್ಕು ಮಿಗಿಲಾಇ ಪೋಲೀಸ್‌ ಇಲಾಖೆಯೂ ಸಾರ್ಥಕ ಸೇವೆಯನ್ನು ಗುರುತಿಸಿದೆ. ಎಲ್ಲಿಯೇ ಅಪಘಾತವಾಗಿಯಾವುದೇ ವಾಹನ ಸಿಗದಿದ್ದರೆ ಆಟೋ ರಾಜನಿಗೆ ಕರೆ ಮಾಡುವರು.  ಈ ಆಟೋಗೆ ಆಂಬ್ಯುಲೆನ್ಸಗಿರುವ  ವಿಶೇಷ ಸೌಲಭ್ಯ ನೀಡಿರುವರು. ಈವರೆಗೆ ಒಂದೇ ಒಂದು ಸಂಚಾರಿ ನಿಯಮ ಉಲ್ಲಂಘನೆಯ ಕೇಸೂ  ಇಲ್ಲ. ಆರಕ್ಷಕರಿಂದ ಯಾವುದೇ ಕಿರಿ ಕಿರಿ ಇಲ್ಲ.
ಇವರ ಸೇವೆಯ ಫಲವಾಗಿ ಇವರ ಅಟೋ  ಅನೇಕ ಅನುಕೂಲಸ್ಥರಿಗೆ  ಅಚ್ಚು ಮೆಚ್ಚು. ಹಲವರು ಹೆಚ್ಚಿನ ಹಣ  ಅಥವ ಅಮೂಲ್ಯ ವಸ್ತುಗಳನ್ನು ಕೊಂಡಯ್ಯುವಾಗ ಪೋನು ಮಾಡಿ ಕರೆಸಿಕೊಳ್ಳುವರು. ಕೈ ತುಂಬ ಹಣ ನೀಡುವರು.ಇತರರೂ ಅಷ್ಟೇ ವಿಷಯ ತಿಳಿದ ಮೇಲೆ ಮೀಟರ್‌ಗಿಂತ ಅಧಿಕ ಹಣ ನೀಡಿ ಸೇವೆಗೆ ತಮ್ಮ ಕಿರು ಕಾಣಿಕೆಯೂ ಇರಲಿ ಎನ್ನುವರು.ಸಮಾಜ ಸೇವೆ ಎಂದರೆ ಸಾಮಾನ್ಯವಾಗಿ ಮೂಗು ಮುರಿಯುವ ಕಾಲೇಜು ಹುಡುಗರೂ ಆಟೋ ರಾಜನನ್ನು ನಕಂಡರೆ ಆಸಕ್ತಿಯಿಂದ ಮುತ್ತುವರು
ಈ ಸೇವಾ ಪ್ರವೃತ್ತಿಯನ್ನು ಭಾಷಾ ಬೇಧವಿಲ್ಲದೇ ಎಲ್ಲ ಪತ್ರಿಕೆಯವರೂ ಪ್ರಚಾರ ನೀಡಿರುವರು. ಜನಪ್ರತಿನಿಧಿಗಳೂ ಕೂಡಾ ಯಾವುದೇ ಸಂಕೋಚವಿಲ್ಲದೆ ಹೆಗಲ ಮೇಲೆ ಕೈ ಹಾಕಿ ಫೊಟೋ ತೆಗೆಸಿಕೊಂಡು ಸಂಭ್ರಮಿಸಿರುವರು. ನೂರಾರು ಪ್ರಶಸ್ತಿ, ಪುರಸ್ಕಾರ, ಪಡೆದರೂ ಕೂಡಾ ತಲೆ ತಿರುಗಿಲ್ಲ. ಬೆಳಗ್ಗೆ ಯಥಾ ರೀತಿ ಕಾಖಿ ಸಮವಸ್ತ್ರ ಧರಿಸಿಕೆಲಸಕ್ಕೆ ಹಾಜರು. ತೊಂದರೆಯಲ್ಲಿರುವ ಯಾವುದೇ ಪ್ರಯಾಣಿಕರಿದ್ದರೂ ಹಿಂದೆ ಮುಂದೆ ನೋಡದೇ ಧಾವಿಸಿ ವೈದ್ಯಕೀಯ ಸೌಲಭ್ಯ ದೊರಕಿಸುವ ತವಕ. ಅದಕ್ಕೆಂದೇ ಕೆಂಪೆಗೌಡ ಬಡಾವಣೆಯ ಸರ್ಕಾರಿ ಹೆರಿಗೆ ಅಸ್ಪತ್ರೆಯಲ್ಲಿ ಇವರ ಸೇವೆ ಕುರಿತ ಫಲಕ ಪ್ರದರ್ಶಿತವಾಗಿದೆ. ಸಾಮಾನ್ಯವಾಗಿ ಎಲ್ಲ ಸಂಚಾರಿ ಪೋಲೀಸರಿಗೆ ಇವರು ಚಿರಪರಿಚಿತರು. ಹನುಮಂತನಗರ ಬಡಾವಣೆಯಲ್ಲಿ ಪುಟ್ಟ ಮನೆಯಲ್ಲಿ ನೆಮ್ಮದಿಯ ಜೀವನ ನಡೆಸುತ್ತಿರುವ ಅಟೋ ರಾಜ ವಿರಳಾತಿವಿರಳ ಸಮಾಜ ಸೇವಕರಲ್ಲಿ ಒಬ್ಬರು. ನೋವಿನಲ್ಲಿದ್ದಾಗ ನೆರವಿಗೆ ಧಾವಿಸಿ ಪ್ರಾಣ ಉಳಿಸಿದ ಉಪಕಾರಿಯ ನೆನಪಿಗೆ ಹಲವರು ಹುಟ್ಟಿದ ತಮ್ಮ ಮಗುವಿಗೆ ’ರಾಜ” ಎಂದು ಹೆಸರಿಟ್ಟು ತಮ್ಮ ಕೃತಜ್ಞತೆ ಸಲ್ಲಿಸಿರುವರು. ಈ ಸಜೀವ ಸ್ಮಾರಕಗಳೇ ಸಾರ್ಥಕ ಸೇವೆಗೆ ಸಂದ ನೆನಪಿನ ಕಾಣಿಕೆಗಳು!”












Tuesday, October 21, 2014

ಅಪೂರ್ವ ಸಾಧನೆ



                 ಅಪೂರ್ವ ಅಂಗಡಿಗೆ ರಾಜ್ಯ ಮಟ್ಟದ ಪ್ರಪ್ರಥಮ ಸ್ಥಾನ
      
                           


 ಚಿತ್ರದುರ್ಗದ ಮುರುಘಾಮಠದ ವಚನ ಕಮ್ಮಟವು ಪ್ರತೀವರ್ಷವೂ ಏರ್ಪಡಿಸುವ ವಚನ ಕಮ್ಮಟ ಪರೀಕ್ಷೆಯಲ್ಲಿ ಹಾಸನದ ಯುನೈಟೆಡ್ ಅಕಾಡೆಮಿಯ ವಿದ್ಯಾರ್ಥಿನಿ ವಿ.ಎಂ.ಅಪುರ್ವ ಅಂಗಡಿ ರಾಜ್ಯಕ್ಕೆ ಮೊದಲ ಪ್ರಪ್ರಥಮಸ್ಥಾನ ಗಳಿಸಿದ್ದಾರೆ. ಹತ್ತನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈ ವಿದ್ಯಾರ್ಥಿನಿಯು 9ನೇ ತರಗತಿಯಲ್ಲಿದ್ದಾಗ ವಚನಗಳ ಬಗ್ಗೆ, ಶರಣರ ಬಗ್ಗೆ ಆಳವಾಗಿ ಅಧ್ಯಯನ ಮಾಡಿ 10/11/2013 ರಂದು  ಪರೀಕ್ಷೆ ಬರೆದಿದ್ದಳು. ಸುಮಾರು 20 ಪುಟಗಳಷ್ಟು ಬರೆದ ಸ್ಪುಟವಾದ ಬರವಣಿಗೆಯು ಈ ವಿದ್ಯಾರ್ಥಿನಿಗೆ ಪ್ರಥಮ ಪ್ರಪ್ರಥಮಸ್ಥಾನ  ಬರಲು ಪೂರಕವಾಗಿದೆ ಎಂದು ತಿಳಿದು ಬಂದಿದೆ. ಈಚೆಗೆ ಚಿತ್ರದುರ್ಗದಲ್ಲಿ ದಿನಾಂಕ 3/10/2014 ರಂದು ಜರುಗಿದ ಶರಣಸಂಸೃತಿ ಉತ್ಸವ ಕಾರ್ಯಕ್ರಮದಲ್ಲಿ ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯೊಂದಿಗೆ ಅಪೂರ್ವಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ಮುರುಘಾಮಠದ ಶ್ರೀಡಾ.ಶಿವಮೂರ್ತಿ ಮುರುಘಾಶರಣರು, ದಾವಣಗೆರೆ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಬಿ.ಬಿ.ಕಲಿವಾಳ್, ಮತ್ತು ಶ್ರೀಶಿವಾನಂದ ಮಹಾಸ್ವಾಮಿಗಳು ಉಪಸ್ಥಿತರಿದ್ದರು. 5 ತರಗತಿಯಿಂದ ಪದವಿ   ವರೆಗೆ ರಾಜ್ಯದಲ್ಲಿನ ಸುಮಾರು 50,000 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದರು ಎಂದು ವರದಿಯಾಗಿದೆ. ಅಪೂರ್ವಳ ತಂದೆ ವಿಜಯ ಅಂಗಡಿ ಆಕಾಶವಾಣಿ ಹಾಸನದಲ್ಲಿ ಕೃಷಿ ವಿಭಾಗದ ಹಿರಿಯ ಅಧಿಕಾರಿ. ಮೇಲಾಗಿ ಸಾವಯವಕೃಷಿಯ ಪ್ರತಿಪಾದಕರಾಗಿ ರಾಜ್ಯೋತ್ಸವ ಪ್ರಶಸ್ತಿ ವಿಜೇತರು. ತಾಯಿ ಶ್ರೀ ಮತಿ  ಮಂಜುಳಾ ಅಂಚೆ ಇಲಾಖೆಯ ಉದ್ಯೋಗಿ.