Wednesday, April 30, 2014

ಇ.ಸಿಗರೇಟ್‌

 ಬೆಂಕಿ   ಬೇಡದ  ಹಬೆ  ಬತ್ತಿ- ಇ. ಸಿಗರೇಟ್‌

ಕೆಲ ವರ್ಷದ ಹಿಂದೆ ಆರು ಜನ  ಕೊಡಚಾದ್ರಿಗೆ ಚಾರಣಕ್ಕೆ ಹೋದಾಗ  ಕತ್ತಲಾಯಿತು. ಟಾರ್ಚ ಏಕೋ ಹತ್ತಲಿಲ್ಲ. ಆಗ ಏನು ಮಾಡುವುದು ಎಂದು ಹಲಬುತಿದ್ದಾಗ ಹೆಮ್ಮೆಯಿಂದ ಹೊರತೆಗೆದ ಸಿಗರೇಟ್ ಪ್ರಿಯ, ತನ್ನಲ್ಲಿದ್ದ ಲೈಟರ್‌ ಅನ್ನು. ನೋಡ್ರಯ್ಯಾ,ನೀವೆಲ್ಲಾ ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಬಡಕೊಳ್ಳುವಿರಿ. ಸಿಗರೇಟಿನ  ಅಭ್ಯಾಸದಿಂದ ಎಷ್ಟು ಅನುಕೂಲವಾಯಿತು ಎಂದು ಕೊಚ್ಚಿಕೊಂಡಾಗ.  ಅದು ಕುತರ್ಕ ಎನಿಸಿದರೂ ಸುಮ್ಮನಿರಬೇಕಾಯಿತು. ಆದರೆ ಮೊನ್ನೆ  ಅಮೇರಿಕಾದಲ್ಲಿ  ಇ.ಸಿಗರೇಟ್‌  ನಿಯಂತ್ರಣಕ್ಕೆ ಜಾರಿಗೆ ಬಂದ ಹೊಸ ಕಾನೂನ್ನು ನೋಡಿ ದಂಗಾದೆ.ಅಲ್ಲಿ   “ಬೆಂಕಿ  ಇಲ್ಲದೆ ಹೊಗೆ ಬಾರದು”  ಎಂಬ ಮಾತನ್ನು ಸುಳ್ಳು ಮಾಡುವ ಸಾಧನವನ್ನು ಧೂಮಪಾನಾಸಕ್ತರು ಬಳಸುತ್ತಾರೆ ಎಂದು ಗೊತ್ತಾಯಿತು. ಅದು  ಹೊಗೆ ಬತ್ತಿ ಅಲ್ಲ. ಹಬೆ ಬತ್ತಿ.      ಅದೇ  ಇ-ಸಿಗರೇಟ್‌.

ಈಗ ಸುಮಾರು ನಾಲ್ವಕು ಐದು ರ್ಷಗಳಿಂದ ಇ.ಸಿಗರೇಟು ಇಲ್ಲಿ ಜನಪ್ರಿಯವಾಗಿದೆ  ಅಮೇರಿಕದ ಅನೇಕ ರಾಜ್ಯಗಳಲ್ಲಿ ಯುರೋಪಿನಲ್ಲಿ ಅದು ಜನಪ್ರಿಯ.  ಇತ್ತೀಚೆಗೆ ಹಲವೆಡೆ ಅದರಲ್ಲೂ  ನ್ಯೂಯಾರ್ಕ ಲಾಸ್‌ಎಂಜಲೀಸ್‌ ಮತ್ತು ಚಿಕಾಗೋದಲ್ಲಿ ನಗರದಲ್ಲಿ  ನೀಷೇಧಿಸಿಲಾಗಿದೆ. ಸಾರ್ವಜನಿಕರ ಕೆಂಗಣ್ಣಿಗೆ  ಈ ನಿಯಂತ್ರಣ ಕಾರಣವಾಗಿದೆ.ಅದೇನೆಂದು ಪರಿಶೀಲಿಸಿದಾಗ ನನಗೆ ಗೊತ್ತಾಯಿತು ಇ.ಸಿಗರೇಟ್‌. ಬಳಕೆ  ಭಾರತದಲ್ಲಿ ಇದೆ ಆದರೆ  ಅಷ್ಟು ವ್ಯಾಪಕ ಪ್ರಚಾರ ಪಡೆದಿಲ್ಲ
ಏನು    ಇದು ಇ. ಸಿಗರೇಟ್?
ಹೊರ ನೋಟಕ್ಕೆ ಸಾಮಾನ್ಯ ಸಿಗರೇಟಿನಂತೆ ಕಂಡರೂ ಅವುಗಳಂತೆ ಹೊಗೆಯಂಥಹದನ್ನು ಹೊರಡಿಸಿದರೂ ಇವು ನಿಕೋಟಿನ್‌ ಆಧಾರಿತ ಹೊಗೆಯಲ್ಲ.   ಇದು ಹಬೆ..ಅಂದರೆ ಇದರಲ್ಲಿ ಕ್ಯಾನ್ಸರ್‌ ತರಬಹುದಾದ ತಂಬಾಕಿನ ಅಪಾಯಕರ ಅಂಶ ಇರುವುದಿಲ್ಲ. ಇದು ಒಂದು  ಚಾಕೊಲೇಟ್‌ ಪರಿಮಳದ ನಿಕೊಟಿನ್‌ ಹಬೆ. ಇದಕ್ಕೆ ಬೆಂಕಿ ತಗುಲಿಸುವ ಅಗತ್ಯ ಇಲ್ಲ.  ಬೆಂಕಿ ಇಲ್ಲದೆ ಹೊಗೆ ಬಾರದು  ಎಂಬ ಹಳೆಯ ಗಾದೆ ಮಾತನ್ನು ಹುಸಿ ಮಾಡಿದೆ. ಈ ನಿಯಂತ್ರಣದ ಪ್ರತಿಪಾದಕರು ಧೂಮಪಾನವು ಮತ್ತೆ ಹೊಸ ರೂಪದಲ್ಲಿ ಸಾಮಾಜಿಕ ಮನ್ನಣೆ ಗಳಿಸುವತ್ತ ದಾಪುಗಾಲು ಹಾಕುತ್ತಿದೆ ಎನ್ನುತ್ತಾರೆ. ಅದರಲ್ಲೂ ವಿಶೇಷವಾಗಿ ಹದಿಹರೆಯದವರು ವಿವಿಧ ಸುವಾಸನೆ ಹೊರ ಹೊಮ್ಮಿಸುವ ಇ-ಸಿಗರೇಟಿನ ಪ್ರಿಯರಾಗುತ್ತಿದ್ದಾರೆ.ಇದನ್ನು ಒಂದು ಸಲ ಕೊಂಡರೆ ಸಾಕು ಪದೇ ಪದೇ ಅಂಗಡಿಗೆ ಹೋಗ ಬೇಕಿಲ್ಲ.ಜೊತೆಗೆ ಮ್ಯಾಚ್‌ಬಾಕ್ಸ ಅಥವ ಲೈಟರ್‌ ಬೇಕಿಲ್ಲ. ಸಾಮಾನ್ಯ ಪೆನ್ನಿನಂಥಹ ಒಂದು ಉಪಕರಣ ಇದು.  ಗುಂಡಿ ಒತ್ತಿದರೆ ಸಾಕು ಹಬೆ ಹೊಮ್ಮುತ್ತದೆ. ಅಕ್ಕ ಪಕ್ಕದವರೂ ಆಕ್ಷೇಪ ಎತ್ತುವ ಹಾಗೂ ಇಲ್ಲ. ಅದೂ ಪರಿಮಳ ಯುಕ್ತ ಹಬೆ ಗೆಳತಿಯರನ್ನು ಆಕರ್ಷಿಸಲು ಒಂದು ಉತ್ತಮ ಸಾಧನ. ಜೊತೆಗೆ ಅತ್ಯಾದುನಿಕ ಎಲೆಕ್ಟ್ರಾನಿಕ್‌ ಉಪಕರಣ ಹೊಂದಿರುವ ಹೆಮ್ಮೆ ಬೇರೆ..ಆಧುನಿಕ   ಐ ಫೋನು, ಐ ಪ್ಯಾಡ ಗಳಂತೆ ಇದೂ ಒಂದು ವೈಭೋಗದ ಹೆಗ್ಗುರತು ಆಗಿ ಯುವಜನರನ್ನುಇಲ್ಲಿ ಸೆಳೆದಿದೆ.


ಇ.ಸಿಗರೇಟುಗಳು ಸಾಧಾರಣವಾಗಿ ಸಿಲಿಂಡರಿನ ಆಕಾರದಲ್ಲಿ ಪೆನ್ನಿನಂತೆ  ಇರುವವು. ಆದರೆ ವಿವಿಧ ರೂಪದಲ್ಲೂ ಇರಹುದು. ಬಳಸಿ ಬಿಸಾಕುವ ಇಲ್ಲವೆ ಮರುಪೂರಣ ಮಾಡುವ ಎರಡು ರೀತಿಯ. ಸಿಗರೇಟುಗಳು ಇವೆ.
ಇದರಲ್ಲಿ ಮೂರುಭಾಗಗಳು. ಬ್ಯಾಟರಿ, ಆಟೊಮೈಜರ್‌ಮತ್ತು ದ್ರವಪೂರೈಸುವ ಸಾಧನ ಇರುವವು.
ಗುಂಡಿ ಅದುಮಿದಾಗ ದ್ರವವು ಕಾದ ತಂತಿಯ ಮೇಲೆ ಹಾಯ್ದು ಅದು ಆವಿಯಾಗಿ ಹೊರಬರುವುದು. ಅದನ್ನು ಸೇವಿಸಿದಾಗ ಧೂಮಪಾನದ ಅನುಭವ ಆಗುವುದು.ಶೀತ ಆದಾಗ ಬಿಸಿನೀರಲ್ಲಿ ಅಮೃತಾಂಜನ ಹಾಕಿ ಹಬೆಯನ್ನು ಸೇವಿಸುವ ಹಾಗೆ, ಅಥವ   ಅಸ್ತಮಾದವರು ಇನ್‌ಹೇಲರ್‌ ಬಳಸುವ ಹಾಗೆ. ಇದು ಒಂದು  ಹಬೆ ಹೊಮ್ಮಿಸುವ ಎಲೆಕ್ಟ್ರಾನಿಕ್‌ ಸಾಧನ.
ಅಟೊಮೈಜರ್‌,ಕಾರ್ಟೊಮೈಜರ್‌,  ಕ್ಲಿಯರ್ಟೊ ಮೈಜರ್‌ ಮೊದಲಾದ  ಹಲವು ವಿಭಿನ್ನ ತಂತ್ರಜ್ಞಾನ ಬಳಸುವ ಇ. ಸಿಗರೇಟುಗಳಿವೆ
ಇ.ಸಿಗರೇಟು ಸಾಂಪ್ರದಾಯಿಕ ಧೂಮಪಾನದ ಸಂತಸ ( ಸ್ಪರ್ಶ ಮತ್ತು ಅನುಭವ) ನೀಡುವುದು. ಆದರೆ ತಂಬಾಕಿನಲ್ಲಿರುವ ೧೦೦೦ಕ್ಕೂ ಹೆಚ್ಚಿನ ಅಪಾಯಕಾರಿ ರಸಾಯನಿಕಗಳು ಇದರಲ್ಲಿ ಇಲ್ಲ.ಇದಕ್ಕೆ ಬೆಂಕಿ ತಗುಲಿಸ ಬೇಕಿಲ್ಲ...ಶ್ವಾಸಕೋಶಕ್ಕ ಧಕ್ಕೆಬಾರದು   ಅನಿಯಂತ್ರಿತ ಕೆಮ್ಮು ಇರದು.   ಈ ಉಪಕರಣವು ಗಾಳಿಯಲ್ಲಿ ಕರಗಿ ಹೋಗುವ ನೀರಾವಿಯನ್ನು ಹೊರ ಹಾಕುವುದು ಅದು ತಂಬಾಕು ಸೇವಿಸದೇ ಇದ್ದರೂ ಧೂಮಪಾನದ ಅನುಭವ ಕೊಡುವವು ಅದು ಕೆಲವೇ ಸೆಕೆಂಡ್‌ಗಳಲ್ಲಿ ಇಲ್ಲದಾಗುವುದು. ಆದ್ದರಿಂದ ಇನ್ನೊಬ್ಬರಿಗೆ ತೊಂದರೆ ಎನ್ನುವ  ಮಾತೇಇಲ್ಲ.  ಹಬೆಯು ಸಾಂಪ್ರದಾಯಿಕ ತಂಬಾಕಿನ ಪರಿಮಳ ಹೊಂದಿರುವುದು. ಜೊತೆಗೆ ಬಯಸಿದ ಪರಿಮಳವನ್ನೂ ಪಡೆಯ ಬಹುದು.ಇದರಿಂದ ವಿಶಿಷ್ಟ ಅನುಭವ ದೊರೆಯುವುದು.ಇವುಗಳಲ್ಲಿ ನಿಕೊಟಿನ್‌ಪ್ರಮಾಣ ಬಯಸಿದಷ್ಟು ಪಡೆಯಬಹುದು 24 mg ಇರುವ  ಫಿಲ್ಟರ್ ಇಲ್ಲದ ಸಾಮಾನ್ಯ ಸಿಗರೇಟಿಗೆ ಸಮನಾದರೆ,16 mg ಯವುಘಾಟುವಾಸನೆ,  "12 mg ಇರುವವು ಲಘುವಾಗಿರುವವವು,  6 mg = ಬಹು ಲಘುವಾಗಿದ್ದು  ಮತ್ತು 0 mg ಯವು ನಿಕೊಟಿನ್‌  ರಹಿತವಾಗಿರುವವು.
ಇ.ಸಿಗರೇಟಿನಲ್ಲಿ ಆವಿಯನ್ನು ಉಂಟುಮಾಡುವ ದ್ರವವನ್ನು   ಇ-.ಜ್ಯೂಸ್  ಅಥವ ಇ. ದ್ರವ ಎನ್ನವರು.ಅದುಪ್ರೊಪಿಲಿನ್, ಗ್ಲಿಜರಿನ್ ಅಥವ ಪಾಲಿಥಿಲಿನ್‌ ಗ್ಲೈಕಾಲ್‌ ಆಗಿರುವುದು ಜೊತೆಗೆ ಬೇಕಾದ ಪರಿಮಳ ಮತ್ತು ಬೇಕೆಂದರೆ ವಿವಿಧ ಪ್ರಭಲತೆಯ ನಿಕೊಟಿನ್  ಸಾರವೂ ಇರುತ್ತದೆ.
 ಈ ದ್ರಾವಣವನ್ನು ಶೀಶೆ ಅಥವ ಮೊದಲೇ ಭರ್ತಿ ಮಾಡಿದ ಕ್ಯಾಟ್ರಿಜ್‌ನಲ್ಲಿ ದೊರೆಯುವುದು.ಅದರ ಮೇಲೆ mg/ml  ಎಂದು ನಿಕೋಟಿನ್‌ ಪ್ರಮಾಣವನ್ನು ನಮೂದಿಸಿರುವರು.
ಇದರಲ್ಲಿ ನೀರು ನಿಕೊಟಿನ್‌  ಮತ್ತು ಪ್ರೊಪಿಲಿನ್‌ ಗ್ಲೈ ಕಾಲ್‌ ( ಜಲಾಧಾರಿತ ಔಷಧಿಗಳಲ್ಲಿ ಬಳಸುವ ಮತ್ತುಆರೋಗ್ಯಕ್ಕೆ ಹಾನಿಮಾಡದ ವಸ್ತು )ಇರುವವು. ಇದರಲ್ಲಿ.ಕ್ಯಾನ್ಸರ್‌ ಗೆ ಕಾರಣವಾಗುವ ಅಂಶಗಳು ಇಲ್ಲ
ಇದರಲ್ಲಿನ ೪.೨ ಲಿಥಿಯಂ ಬ್ಯಾಟರಿಯು  ೩ ಗಂಟೆಯಿಂದ ೩ ದಿನದ ವರೆಗೆ ಬಳಕೆಯನ್ನು ಅವಲಂಬಿಸ ಕೆಲಸ ಮಾಡುವುದು.ಅದನ್ನು  ಕಾರಿನಲ್ಲಿಯೂ ರಿಚಾರ್ಜ ಮಾಡಬಹುದು.
ಒಂದು ಕ್ಯಾಟರಿಜನಿಂದ ೨೫೦-೩೦೦ ದಮ್ಮು ಎಳೆಯಬಹುದು.ಅಂದರೆ ಹದಿನೈದು ಸಿಗರೇಟಿಗೆ ಸಮಾನ. ಇದನ್ನು ಎಲ್ಲ ವಯಸ್ಕರು ಬಳಸಬಹುದು. ಗರ್ಭಿಣಿ ಮಹಿಳೆ, ತೀವ್ರಹೃದಯ ಬೇನೆ, ಅಸ್ತಮಾ ಖಿನ್ನತೆ ಇರುವವರು ಬಳಸಬಾರದು.
ಇದರಿಂದ ಅನುಕೂಲಗಳೂ ಇವೆ. ಸತತ ಸಿಗರೇಟಿನ ಚಟ ಇರುವವರು ಆರೋಗ್ಯ ಹಾನಿ ಆಗುವುದೆಂದು ಕಂಡುಬಂದರೂ ಬಿಡಲಾರದೆ ಚಡಪಡಿಸುವರು. ಅಂಥವರು  ಆವಿ ಆಧಾರಿತ ಹೊಗೆಇಲ್ಲದ ಇವನ್ನು ಸಾಂಪ್ರದಾಯಿಕ ಸಿಗರೇಟಿಗೆ ಬದಲಾಗಿ ಬಳಸಬಹುದು.
ಅಧಿಕೃತವಾಗಿ ಇವು  ಧೂಮಪಾನದ ದುರಭ್ಯಾಸ ನಿವಾರಕ ಅಲ್ಲ. ಆದರೆ ನಿಕೊಟಿನ್‌ ಇಲ್ಲದ  ಹಬೆ ಸೇವನೆಯಿಂದ ಚಟ ಮುಕ್ತರಾಗಬಹುದು.  ತಂಬಾಕಿನಲ್ಲಿರುವ  ಯಾವುದೇ ಆತಂಕಕಾರಿ ರಸಾಯನಿಕಗಳು ಇಲ್ಲ. ಆರೋಗ್ಯಕ್ಕೆ  ಹಾನಿ ಇಲ್ಲ. ವಾಯು ಮಾಲಿನ್ಯವಿಲ್ಲ
ಪೀಟರ್‌ ಡೆನ್ಹಲ್ಟಜ ಪ್ರಕಾರ “ಇ.ಸಿಗರೇಟು”  ಮಾನವ ಜೀವ ರಕ್ಷಣೆಯ ಅತ್ಯತ್ತಮ ಸಂಶೋಧನೆ.ಅವರನ್ನು ಧೂಮಪಾನದಿಂದ ಆಗುವ  ಪ್ರಾಣ ಹಾನಿ ತಪ್ಪಿಸುವುದು.
ಇದು ಧೂಮಪಾನ ಚಟ ಬಿಡಿಸಲು ಬಹಳ ಸಹಕಾರಿ. ಇದರ ನಿಷೇಧದಿಂದ ತಂಬಾಕಿನ ಚಟದಿಂದ ಬಿಡುಗಡೆಹೊಂದ ಬಯಸುವವರಿಗೆ ಅನ್ಯಮಾರ್ಗ ಮುಚ್ಚಿ ಹೋಗುತ್ತದೆ.
ಭಾರತದಲ್ಲಿ  ಸಿಗರೇಟು ಸೇದುವುದ ಕಾನೂ ಬಾಹಿರ ಅಲ್ಲ.ಆದರೆ ಸಾರ್ವಜನಿಕ  ಸ್ಥಳಗಳಲ್ಲಿಕೂಡದು ಆದರೆ ಇದು ಧೂಮಪಾನ ಅಲ್ಲವಾದ್ದರಿಂದ ನಿಷೇಧಕ್ಕೆ ಒಳಗಾಗಿಲ್ಲ
ಇದು ಇತ್ತೀಚಿನದದ್ದಾರಿಂದ ಕಾನೂತ್ಮಕ ಸ್ಪಷ್ಟತೆ ಇಲ್ಲ.ಇದು ತಂಬಾಕು  ಅಲ್ಲ ಅಥವ ಅಮಲು ತರುವ ಪದಾರ್ಥವಲ್ಲ.ಆದ್ದರಿಂದ ನಿರ್ಧಿಷ್ಟ ನಿಲವು ತಳೆದಿಲ್ಲ. ಭಾರತದಲ್ಲಿ ನಿಷೇಧವಿಲ್ಲ. ಅಮೆರಿಕಾದಲ್ಲಿಫೆಡರಲ್‌ ಸರ್ಕಾರವು ನಿಯಂತ್ರಿಸಿದೆ. ಯುರೋಪಿನ ಒಂದೊಂದು ದೇಶದಲ್ಲಿಒಂದೊಂದು ನಿಲವು ಇದೆ.
ಐದು ವರ್ಷದ ಕೆಳಗೆ ೫೦ ಸಾವಿರದಿಂದ ಈಗ ನಾಲ್ಕು ವರ್ಷದಲ್ಲಿ ೩.೫ ಮಿಲಿಯನ್‌ ಬಳಕೆಯಾಗುತ್ತಿದೆ ಐವರಲ್ಲಿ ಒಬ್ಬ ಧೂಮಪಾನಿಗಳು ಇದನ್ನು ಬಳಸುತ್ತಿರುವರು.ಯುವಜನರಲ್ಲಿ ಇದರ ಬಳಕೆ ಒಂದೇ ವರ್ಷದಲ್ಲಿ ದುಪ್ಪಟ್ಟಾಗಿದೆ.
ಒಂದು ಸಮೀಕ್ಷೆಯಪ್ರಕಾರ.
. 67% ತಂಬಾಕುಬಳಕೆದದಾರ ಇ.ಸಿಗರೇಟಿನ ಬಳಕೆಯಿಂದ ತಂಬಾಕು ಸೇವನೆ ಕಡಿಮೆ ಮಾಡಿದ್ದಾರೆ.. ಇತ್ತೀಚೆಗೆ ಸಿಗರೆಟ್‌ ಸೇವನೆ ಬಿಟ್ಟವರಲ್ಲಿ, 84% ( ಸಮೀಕ್ಷೆಯ 1% ಜನ) ಚಟ ವಿಮುಕ್ತರಾಗಲು ಇ.ಸಿಗರೆಟ್‌ ಕಾರಣ ಎಂದಿರುತ್ತಾರೆ.
ಹಬೆಸೇವನೆ  ಮಾಡುವವರದೇ ಒಂದು ಉಪಸಂಸ್ಕೃತಿ ಯಾಗಿದೆ ಅದನ್ನು ವೇಪ್‌ಸಮುದಾಯ ಅಥವ ಹಬೆ ಸೇವನಾ ಸಮುದಾಯ ಎನ್ನಬಹುದು
ಸಾರ್ವಜನಿಕಾರೋಗ್ಯ ಅಧಿಕಾರಿಗಳು  ಯುವಜನರಲ್ಲಿ ಇ.ಸಿಗರೇಟಿನ ರೂಪದಲ್ಲಿ ಧೂಮಪಾನ ಜನಪ್ರಿಯವಾಗುತ್ತಿರವುದನ್ನು ಗಮನಿಸಿ ಅದರ ನಿಯಂತ್ರಣಕ್ಕೆ ಈ ಕ್ರಮ ತೆಗೆದುಕೊಂಡಿರುವರು.
ಒಂದುಕ್ಷಣ ಕಲ್ಪನೆ ಮಾಡಿಕೊಳ್ಳಿ ಬಾರ್ನಲ್ಲಿ ಇಪ್ಪತ್ತು ಜನಈ . ಸಿಗರೆಟು ಸೇದುತ್ತಿರುವರು.. ಅದರಲ್ಲಿ ತಂಬಾಕಿನ ವಾಸನೆಯೂ ಬರುವುದು. ಯಾರು ಧೂಮಪಾನ ಮಾಡುತ್ತಿರುವರು ಎಂದು ಗುರುತಿಸುವಲ್ಲಿ ಗೊಂದಲವಾಗುವುದು.
ತಂಬಾಕು ಮತ್ತು ನಿಕೊಟಿನ್ ಸಂಶೋಧನಾ ಪತ್ರಿಕೆಯ ಪ್ರಕಾರ ಸಾಮಾನ್ಯ  ಸಿಗರೇಟನ್ನು ಹೋಲುವ  ಇ.ಸಿಗರೇಟಿನಿಂದ ಅಂಥಹ ಹಾನಿಇಲ್ಲ  ಆದರೆ ಅಧಿಕಶಕ್ತಿಗಾಗಿ ಬಳಸುವ ಟ್ಯಾಂಕ್‌ ಕ್‌ಸಿಸ್ಟಮ್‌,  ಫಾರ್ಮಾಲ್ಡಿಹೈಡ್‌ ಅನ್ನು ಉತ್ಪಾದಿಸುವುದು. ಅದು ಕಾರ್ಸಿನೋಜೆನ್‌ ಉಗಮಕ್ಕೆ ಕಾರಣ. ಅತಿಅಧಿಕ ಉಷ್ಣತೆಯಲ್ಲಿ  ದ್ರವ ನಿಕೊಟಿನ್‌ನಿಂದ    ಉಂಟಾಗುವುದು.ಅದಲ್ಲದೆ ಹೆಚ್ಚುಪ್ರಭಾವಕ್ಕಾಗಿ ಕೆಲವರು  ನಿಕೊಟಿನ್‌  ದ್ರವದ ಹನಿಗಳನ್ನು ನೇರವಾಗಿ ಕಾದ ತಂತಿಯ  ಮೇಲೆ ಚಿಮುಕಿಸುವರು. ಇದನ್ನು ಡ್ರಾಪಿಂಗ್‌ ಎನ್ನವರು. ಇಲ್ಲಿಸಹಾ ಕ್ಯಾನಸರ್‌ ಕಾರಕ ಅಂಶಗಳು ಹೆಚ್ಚಾಗಿರುವ ಸಾಧ್ಯತೆ ಇದೆ.
ಇದನ್ನು -ಸಿಗರೇಟ್ ಎಂದು ಮಾರುಕಟ್ಟೆಗೆ ಬಿಟ್ಟುದುದರಿಂದ ಕಾನೂನಿನ ಕಳವಳಕ್ಕೆ ಕಾರಣ.ಇದರ ನಿಷೇಧದಿಂದ ತಂಬಾಕು ಸೇವನೆಗೆ ಪರ್ಯಾಯವೇ ಇಲ್ಲದಂತಾಗುವುದು ಚಟ ಮುಕ್ತರಾಗುವ ಅವಕಾಶದಿಂದ ವಂಚಿತರಾಗುವರು ಜೊತೆಗೆ ಮಾಜಿ ಧೂಮಪಾನಿಗಳೂ ಗಲಿಬಿಲಿಗೊಳಗಾಗುವರ ತಂಬಾಕುತುಂಬಿದ ಸಾಧಾರಣ ಸಿಗರೇಟಿಗೆ ಬದಲಾಗಿ ಧೂಮಪಾನಿಗಳಲ್ಲಿ ಜನಪ್ರಿಯವಾಗಿರುವ   ಧೂಮೋತ್ಪಾದನಾ ಉಪಕರಣವಾದ ಎಲೆಕ್ಟ್ರಾನಿಕ್ ಸಿಗರೇಟ್ ಅನ್ನು ಸಾಮಾನ್ಯ  ಸಿಗರೇಟಿನಂತೆ ಪರಿಗಣಿಸಿ ನಿಷೇಧ ಹೇರಿರುವುದು. ಅದರ ಉತ್ಪಾದಕರ,  ಮಾರಾಟಕಾರರ ಮತ್ತು ಬಳಕೆ ದಾರರಲ್ಲಿ   ಅಸಮಧಾನ ಉಂಟು ಮಾಡಿದೆಆದರೆ ಇದು ಧೂಮಪಾನವನ್ನು ಇನ್ನೊಂದು ರೂಪದಲ್ಲಿ ತುರುವುದು ಎಂದು ಕಾನೂನು ತಜ್ಞರ ಅನಿಸಿಕೆ.
ಅಂತೂ ಹೊಗೆ ಸೇವನೆ ಬಿಡಿ ಎನ್ನುವ ಬದಲು ಹಬೆ ಸೇವನೆ ಮಾಡಿ ಎಂದು ಹೇಳುವ ಕಾಲ ಬಂದಿದೆ.,







Monday, April 28, 2014

ಪಾಟಿ ಪುರಾಣ

                              ಪಾಟಿ ಪುರಾಣ   
 ಮೊದಲೇ ಹೇಳಿ ಬಿಡುವೆ. ನಾನು ಬರೆಯುತ್ತಿರುವುದು ಚಿಕ್ಕವರು  ಬರವಣಿಗೆ ಕಲಿಯಲು ಬಳಸುವ ಪಾಟಿ ಬಳಪದ ಕುರಿತು ಅಲ್ಲ. ನಮ್ಮೆಲ್ಲರ ಬೆಳಗಿನ ಮೊದಲ ಕೆಲಸ  ಕುರಿತು. ಅಂದರೆ  ಹಳ್ಳಿಗಳಲ್ಲಿ  ಬೈಲುಕಡೆ ಹೋಗುವುದು ಎನ್ನುವರು  ಹಳ್ಳಿಗರು ಬೆಳಗ್ಗೆ   ಹೊಲದಲ್ಲಿ ತಂಬಿಗೆ ತೊಗಂಡು ಹೋಗಿ  ಮಾನವ ಗೊಬ್ಬರ ಹಾಕಿ ಬರುವುದು ವಾಡಿಕೆ,.ಬೇಲಿಯ ಬದಿ ಬಿಸಿನೀರು ಬಿಡುತಿದ್ದವರೂ ಉಂಟು.ಕೆರೆ,ಕುಂಟೆ ಬಾವಿ, ಹೊಳೆ ಇದ್ದರೆ ಮುಗಿಯಿತು. ಅಲ್ಲಿಯೇ ಎಲ್ಲ. ಆ  ಕಾರ್ಯಕ್ರಮಕ್ಕೆ ಮೀಸಲಾದ ಜಾಗವನ್ನು ಒಂದೊಂದು ಕಡೆ ಒಂದೊಂದು ಹೆಸರಿನಿಂದ ಕರೆಯುವರು. ಈಗ  ನಾಗರೀಕವಾಗಿ ಬಾತ್‌ರೂಮ್‌ ಎನ್ನುವರು. ನಮ್ಮಲ್ಲಿನ್ನೂ ಮನೆಗೊಂದು ಕಡ್ಡಾಯ ಮಾಡಲು ಸರ್ಕಾರ ಶ್ರಮಿಸುತ್ತಿದೆ. ಹೊರಾಂಗಣ ಕಾರ್ಯಕ್ರಮಕ್ಕೆ  ಕೊನೆ ಹಾಡಲು ಯೋಜನೆ ಹಾಕಿಕೊಂಡಿದೆ. ಆದರೆ ಇಲ್ಲಿ ಆ ಸಮಸ್ಯೆ  ಇಲ್ಗ. ಮನೆಗೆ ಎರಡು ಮೂರು ಬಾತ್‌ರೂಮ್‌.
ಬೆಡ್‌ರೂಮಿಗೆ ಒಂದರಂತೆ ಬಾತ್‌ರೂಮ್‌ ಕಡ್ಡಾಯ. ಜೊತೆಗೆ  ಹೊರಗಿನವರಿಗಾಗಿ ಬೇರೊಂದು. ಇರುತ್ತವೆ. ಸಾರ್ವಜನಿಕ  ಸ್ಥಳಗಳಾದ  ಮಾಲ್ , ಹೋಟೆಲ್, ಗುಡಿ ,ಚರ್ಚ , ಮ್ಯೂಜಿಯಂ   ಎಲ್ಲ   ಕಡೆ ಇವು  ಇರಲೇ ಬೇಕು. ಇಲ್ಲಿ  ಟಾಯಿಲೆಟ್‌ ಸಂಡಾಸ, ಲೆಟ್ರಿನ್‌ ಅನ್ನುವ ಹಾಗಿಲ್ಲ. ಅವಕ್ಕೆ ರೆಸ್ಟ್‌  ರೂಂ ಅನ್ನುವರು. ಒಂದು ರೀತಿಯಲ್ಲಿ ಅನ್ವರ್ಥಕವಾಗಿರುತ್ತವೆ. ಆರಾಮಾಗಿ ಕುಳಿತು ವಿಶ್ರಾಂತಿ ಪಡೆಯುವಹಾಗಿರುತ್ತವೆ. .ಅಲ್ಲಿ ಕಮೋಡುಗಳು. ಅಂದರೆ  ಬುಟ್ಟಿಯ ತರಹದ ಬೇಸಿನ್‌ಗಳು  ಇರುತ್ತವೆ. . ಇತ್ತೀಚೆಗೆ ನಮ್ಮಲ್ಲೂ ಪಾಶ್ಚಿಮಾತ್ಯ ಶೌಚಾಲಯಗಳು ಬಂದಿವೆ. ಆದರೆ  ನಮ್ಮಲ್ಲಿ  ನೀರಿನ ಸೌಕರ್ಯ ಇರುತ್ತದೆ.  ಇಲ್ಲಿ ನೀರೇ ನಾಪತ್ತೆ.  ಹಾಗೆಂದು ನೀರು ಇಲ್ಲ ಎನ್ನುವ ಹಾಗಿಲ್ಲ. ನೀರಿನ ಕೊರತೆ ಇಲ್ಲಿ ಇಲ್ಲ.  ಇಲ್ಲಿ ಉಪ್ಪುನೀರು ಸವಳು ನೀರು ಎನ್ನುವ ಭಿನ್ನತೆ ಇಲ್ಲ. ಎಲ್ಲವೂ ಸಿಹಿ ನೀರೆ. ನಳದಲ್ಲಿ ಸದಾ ಹರಿಯುವ ನೀರು. ಅದೂ ಒಂದು ತರಹದ್ದಲ್ಲ. ಒಂದೇ ನಳದಲ್ಲಿ ಎಡಕ್ಕೆ ತಿರುಗಿಸಿದರೆ ಬಿಸಿ ನೀರು ಬಲಕ್ಕತಿರುಗಿಸಿದರೆ ತಣ್ಣೀರು.ಬಿಸಿನೀರಂತೂ  ಉಗುರು ಬೆಚ್ಚಗಿನಿಂದ ಹಿಡಿದು ಕೈ ಸುಡವಷ್ಟು ಬಿಸಿ..ಆದರೆ ತೊಳೆದು ಕೊಳ್ಳಲು ಪಡಿಪಾಟಲು. ಟಿಸ್ಯೂ ಪೇಪರ್‌ ಬಳಸುವರು. ಬಳಸುವ ಅಭ್ಯಾಸ ವಿಲ್ಲದವರದು ಸಂಕೋಚದ ಸ್ವಭಾದವರಿಗೆ ದೇವರೇ ಗತಿ.
  ನಾವು ಮೊದಲ ಸಲ ಹೋದಾಗ ನಮ್ಮ ಮಗಳ ಗೆಳತಿಯ ಮನೆಗೆ ಹೋಗಿದ್ದೆವು ಅವರು ಆಂಧ್ರದ ಕಡೆವರು ತಾಯಿ ಹಳ್ಳಿಯ ಹೆಂಗಸು.ಬಂದು ಮೂರುದಿನವಾಗಿತ್ತು ಊಟ ತಿಂಡಿ ಸೇವಿಸದೆ ಊರಿಗೆ ಕಳುಹಿಸು ಎಂದು ಹಟ ಹಿಡಿದು ಕುಳಿತಿರುವರು.ಆ ಹುಡುಗಿ,”  ಆಂಟಿ , ನೀವಾದರೂ ಹೇಳಿ” ಎಂದಾಗ ನನ್ನ ಹೆಂಡತಿ ಅವರೊಡನೆ ತುಸು ಹೊತ್ತು ಮಾತನಾಡಿ ನಗುತ್ತಾ ಹೊರಬಂದರು.ಬಂದವರಿಗೆ ದೊಡ್ಡ ಸಮಸ್ಯೆ  ಎಂದರೆ ಸಂಡಾಸಕ್ಕೆ ಹೋಗುವುದು. ಅವರಿಗೆ  ಕಮೋಡು ಮೇಲೆ ಕೂಡುವುದು ಹೊಸದು. ಬಂದ ದಿನವೇ ಅದರ ಮೇಲೆ ನೆಲದ ಮೇಲೆ ಕೂಡುವಂತೆ ಕಾಲೂರಿಕೊಂಡು ತುದಿಗಾಲಲ್ಲಿ ಕೂತಿದ್ದಾರೆ. ಕಮೋಡ್‌ ಮೇಲಿನ ಮೇಲಿನ ಪ್ಲಾಸ್ಟಿಕ್‌  ಜಾರಿದೆ.. ಅವರಿಗೆ ಕೂತ ಜಾಗ ನಡುಗಿದಂತೆ.ಅನಿಸಿ ಭೂಕಂಪವಾಗಿದೆ ಎಂದು ಗಾಬರಿ ಗೊಂಡಿರುವರು.ನಂತರ ಶುಚಿ ಮಾಡಿಕೊಳ್ಳಲು ನೀರೇ ಇಲ್ಲ. . ಕಾಗದದಿಂದ ಶುಚಿಮಾಡಿಕೊಳ್ಳಲು ಅವರಿಗೆ ಮುಜುಗರ. ಅದಕ್ಕೆಂದೆ ಏನಾದರೂ ತಿಂದರೆ ತಾನೆ ಹೊರ ಹೋಗುವುದು . ಮಗಳಿಗೆ ಅಳಿಯನಿಗೆ ಹೇಗೆ ಹೇಳುವುದು.  ಅದಕ್ಕೆ ಅನ್ನಸತ್ಯಾಗ್ರಹ ಮಾಡಿದ್ದರು.ನಮ್ಮ ಮನೆಯವರು ಸರಳ ಪರಿಹಾರ ಸೂಚಿಸಿದ್ದರು ಅದರ ಮೇಲೆ  ಕೂಡುವ ವಿಧಾನವನ್ನು ತಿಳಿಸಿ ಜೊತೆಗೆ. ಹೋಗುವಾಗ ಒಂದುಪಾತ್ರೆ ಒಯ್ದು ನೀರು ತುಂಬಿ ಬಳಸಲು ತಿಳಿ ಹೇಳಿದ್ದರು.  ಹಳ್ಳಿಯಿಂದ ಬಂದವರಿಗೆ ಇದೊಂದು ದೊಡ್ಡ ಸಮಸ್ಯೆ ಎನಿಸಿತ್ತು.. 
ಒಂದು ರೀತಿಯಲ್ಲಿ ಹೀಗೆ ಹೋಗುವುದ ನಮ್ಮಲ್ಲಿ ಹೊಸದೇನು ಅಲ್ಲ. ನಮ್ಮಲ್ಲಿ ಫ್ಲಷ್‌  ಔಟ್ ಸಂಡಾಸ ಬರುವ ಮೊದಲು ಉಳ್ಳವರು ಮನೆಯಲ್ಲಿ ಹೆಣ್ಣು ಮಕ್ಕಳಿಗಾಗಿ ನಿರ್ಮಿಸಿದ್ದ ಸಂಡಾಸವೇ ತಲೆಯ ಮೇಲೆ ಮಲ ಹೊರುವ ಪದ್ದತಿಗೆ ಮೂಲವಾಗಿತ್ತು. ಪ್ರತಿ ದಿನ  ಬುಟ್ಟಿಯಲ್ಲಿ ಸಂಗ್ರಹವಾದದನ್ನು ಒಯ್ಯಲು ಊರಿಗೆ ಒಬ್ಬರು ಇರುತಿದ್ದರು. ಅದೂ ಬಹುತೇಕ ಕೆಳವರ್ಗದವರು.  ಬಸವಲಿಂಗಪ್ಪ  ಮಂತ್ರಿಯಾದ ನಂತರ  ಆ ಕೆಟ್ಟ ಪದ್ದತಿ  ಕೊನೆ ಆಯಿತು.ಅದಕ್ಕೇ ನಾನು ಪುಟ್ಟಿಯಲ್ಲಿ ವಿಸರ್ಜನೆ ಎಂದದ್ದು.
ಈಗಲೂ  ಬುಟ್ಟಿಯಲ್ಲಿ ವಿಸರ್ಜನೆ ಮಾಡುವುದು ಹೊಸದೇನಲ್ಲ. ಆಧುನಿಕರೂ ವಿಶೇಷ ಸಮಯದಲ್ಲಿ   ಬಳಸುವರು.  ಅದನ್ನೇ   ಬೆಡ್‌ಪ್ಯಾನ್‌ ಎಂದು ಆಸ್ಪತ್ರೆಯಲ್ಲಿ ಎನ್ನುವರು.  ನನಗೆ ಐವತ್ತು ವರ್ಷದ ಹಿಂದಿನದು ಜ್ಞಾಪಕ ಬರುವುದು ಆ ಸಮಯದಲ್ಲಿ ಹೆರಿಗೆಯಾದರೆ ಪ್ರತ್ಯೇಕವಾಗಿ  ತಿಂಗಳು ಗಟ್ಟಲೆ ಕತ್ತಲ ಕೋಣೆಯಲ್ಲಿ ಇಡುತಿದ್ದರು . ಅಲ್ಲಿ ಹೋಗಲು   ಹೊರಗಿನವರಿಗೆ ಅವಕಾಶವೇ ಇರಲಿಲ್ಲ.ಬಾಣಂತಿಯೂ  ಹೊರ ಬರುತ್ತಿರಲಿಲ್ಲ. ಊಟ , ವಿಸರ್ಜನೆ  ಎಲ್ಲಾ ಅಲ್ಲಿಯೇ.   ವಿಸಜರ್ಜನೆಗೆ   ಮರದಲ್ಲಿ ಬೂದಿ   ಹಾಕಿ ಕೊಡುತಿದ್ದರು ನಂತರ ಅದನ್ನು ತಿಪ್ಪೆಯಲ್ಲಿ ಹಾಕುತಿದ್ದರು.ಕಾರಣ ಸರಳ. ಸೋಂಕು ಆಗದಿರಲಿ ಎಂದು. ಈಗ ಬೂದಿಯೂಇಲ್ಲ, ಮರವೂ ಮರೆಯಾಗಿದೆ.ಅದರ ಜಾಗಕ್ಕೆ ಬೆಡ್‌ಪ್ಯಾನ್‌ಬಂದಿದೆ,
ವಿದೇಶಕ್ಕೆ ಹೋಗುವವರು  ಮೊದಲು ಅಭ್ಯಾಸ ಮಾಡಿಕೊಳ್ಳ ಬೇಕಾದ ವಿಷಯ ಇದು.  ಸಾಧ್ಯವಾದರೆ  ಬೆಂಗಳೂರಿನಲ್ಲಿರುವ ಮಲ್ಟಿ ಪ್ಲೆಕ್ಸ್‌ನಲ್ಲಿ ಸಿನೆಮಾಕ್ಕೆ ಹೋದರೆ ಅಲ್ಲಿರುವ ಶೌಚಾಲಯಗಳ್ಲಿ ಅತ್ಯಾಧುನಿಕ ವ್ಯವಸ್ಥೆ ಇದೆ. ಇನ್ನು ನೀರು ಬಳಸದಿರುವ ವಿಷಯ. ಅದು ಅಂಥಹ ದೊಡ್ಡದೇನೂ ಅಲ್ಲ. ಎಷ್ಟೋ ಹಳ್ಳಿಗರ ಮನೆಯಲ್ಲಿ ಚಿಕ್ಕ ಮಕ್ಕಳೂ  ಇಸಿ  ಮಾಡಿಕೊಂಡಾಗ ಬಟ್ಟೆ ಯಿಂದ ಒರೆಸುವರು. ಮನೆಯಲ್ಲಿ ಎಲ್ಲಂದರಲ್ಲಿ ಮಾಡಿದ್ದರೆ ಕಾಗದದಿಂದ ಒರಸಿ ಹೊರಗೆ ಎಸೆಯುವುದುನ್ನು ನಾವೆಲ್ಲ ಚಿಕ್ಕವರಿದ್ದಾಗ ನೋಡಿರವೆವು.  ಹೊಲದಲ್ಲಿ  ತುರ್ತಾಗಿ ಹೋದಾಗ ನೀರಿಲ್ಲದಿದ್ದರೆ ಕಲ್ಲು  ಇಲ್ಲವೇ ಲೆಕ್ಕಿ ಎಲೆ ಬಳಸಿ ಬಿಸಾಕುತಿದ್ದವರನ್ನು ನೋಡಿರುವೆವು.ಅದು ಅನಾಗರೀಕರ ರೀತಿ. ಅದಕ್ಕೆ ನಾಗರೀಕತೆಯ ರೂಪ ಕೊಟ್ಟರೆ ಈ ವಿಧಾನ .ಇನ್ನೊಂದು ವಿಷಯ ಗಮನಿಸ ಬೇಕು. ಇಲ್ಲಿನ ಎಲ್ಲ ಮನೆಗಳಲ್ಲಿ ನೆಲಕ್ಕೆ ಕಾರ್ಪೆಟ್‌ ಹಾಕಿರುವರು.ಹಾಗಾಗಿ ಕಸ ಬಳಿಯುವ ಪ್ರಮೇಯ ಇಲ್ಲ. ವಾರಕ್ಕೋ ತಿಂಗಳಿಗೋ ಒಮ್ಮೆ ವ್ಯಾಕ್ಯೂಮ್‌ ಕ್ಲೀನರ್‌ಬಳಸಿ ಶುದ್ಧ ಮಾಡುವರು. 
ಸಹಜವಾಗಿ ಏಳುವ ಪ್ರಶ್ನೆ ಎಂದರೆ ಚಿಕ್ಕ ಮಕ್ಕಳು ಎಲ್ಲಂದರಲ್ಲಿ ಒಂದು, ಎರಡು ಮಾಡಿಕೊಂಡರೆ ಹೇಗೆ ? ಅದನ್ನಂತು ತಡೆಯಲಾಗುವುದಿಲ್ಲ.ಒಂದು ಮಾತು ನಿಜ. ಇಲ್ಲಿನ ಮಕ್ಕಳೂ ನಮ್ಮಲ್ಲಿಯಂತೆ ಒಂದೂ ಎರಡೂ ಮಾಡಿಕೊಳ್ಳುದು ಸಹಜ. ಅದಕ್ಕೆ ಇಲ್ಲಿ ವಿಶೇಷ ಹೆಸರು ಇದೆ. ಒಂದಕ್ಕೆ ಪೀ ಎಂದರೆ ಎರಡಕ್ಕೆ ಪೂಪೂ ಎನ್ನುವರು..ಆದರೆ ಎರಡಕ್ಕೂ ಬಹಳ ಎಚ್ಚರಿಕೆ ವಹಿಸುವರು.  ಕರ್ಣನಂತೆ ಹುಟ್ಟಿದಾಗಿನಿಂದಲೇ ಚಿಕ್ಕಮಕ್ಕಳಿಗೆ ಕವಚ. ಸದಾ ಡಯಪರ್‌ ಹಾಕಿಯೇ ಇರುವರು.ಅವರದು ಎಲ್ಲ ಅಲ್ಲಿಯೇ..ಆಗಾಗ ಡಯಪರ್‌ ಬದಲಾಯಿಸುವರು. ಇಲ್ಲಿ ಮಕ್ಕಳಿಗೆ ಆಹಾರಕ್ಕೆ ಆಗುವ ವೆಚ್ಚಕ್ಕಿಂತ ಅವರ ಡಯಫರ್‌ಗೆ ಹೆಚ್ಚಿನ ವೆಚ್ಚ. ಜೊತೆಗೆ ಸದಾ ಮುಚ್ಮಚಿಯೇ ಇರುವುದರಿಂದ ಆಗುವ ಚರ್ಮದ ತೊಂದರೆಗ ಔಷಧಿ ಉಪಚಾರ ಬೇರೆ. ಅದರಲ್ಲೂ ಅನೇಕ ವರೈಟಿಗಳು. ಅಂತಸ್ಥಿಗೆ ತಕ್ಕಂತೆ ಅವುಗಳ ವೆಚ್ಚ. ನಮ್ಮಲ್ಲಿ ಹಳೆಯ ಪಂಚೆಯಿಂದ ಹೊಲಿಯುತಿದ್ದ  ಒಳಚಡ್ಡಿಯ ಆಧುನಿಕ ರೂಪವೇ ಈ ಡಯಫರ್‌.ಅವನ್ನು ದಿನಕ್ಕೆ ಡಜನ್‌ಗಟ್ಟಲೇ ಬಳಸುವವರೂ ಇದ್ದಾರೆ. ಅದನ್ನು ನೋಡಿದರೆ ತಲೆ ತಿರುಗುತ್ತದೆ.ವಿಶೇಷವೆಂದರೆ ತಾಯಿಯಾಗುವ ಹುಡುಗಿಗೆ ಇಲ್ಲಿ ತರಬೇತಿ ಇದೆ. ಅದರಲ್ಲಿ ಮಗುವಿನ ಡಯಪರ್‌ ಬದಲಾಯಿಸುವುದನ್ನು ಹೇಳಿಕೊಡುವರು. ಅಷ್ಟೇ ಅಲ್ಲ ಅವಳ ಗಂಡನಿಗೂ ಅದರಲ್ಲಿ ತರಬೇತಿ ನೀಡಲಾಗುವುದು. ಪ್ರತಿಯೊಬ್ಬ ತಂದೆಯಾಗುವ ಗಂಡಸಿಗೂ  ಇದನ್ನು ಕಲಿಯುವುದು ಕಡ್ಡಾಯ. ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಪುರುಷರು, ಮಹಿಳೆಯರ   ರೆಸ್ಟ ರೂಮ್‌ ಜೊತೆ ಮಕ್ಕಳ ಡಯಪರ್‌ ಬದಲಾವಣೆಗೂ ವಿಶೇಷ ವ್ಯವಸ್ಥೆ ಇರುತ್ತದೆ.ಇನ್ನೊಂದು ಮಾತು. ಯಾವುದೇ ರಸ್ತೆಯಲ್ಲಿ ಹೋಗುವಾಗಲೂ ಎಲ್ಲಂದರಲ್ಲಿ ಕಾರು ನಿಲ್ಲಿಸಿ ನಿಸರ್ಗದ ಕರೆಗೆ ಓ ಗೊಡಲು ಹೋಗಲಾಗದು. ನಮ್ಮಲಿನ ಹೈವೇಗಳಿಗೆ ಇಲ್ಲಿ ಎಕ್ಸ ಪ್ರೆಸ್‌ ವೇ ಎನ್ನುವರು. ಕಾರಿನಲ್ಲಿ ಹೋಗುವವರಿಗಾಗಿ ಇಪ್ಪತ್ತು ಮೂವತ್ತು ಮೈಲಿಗೆ ಒಂದು ಸೇವಾ ಕೇಂದ್ರ ವಿರುವುದು. ಅಲ್ಲಿ ಜನರಿಗೆ ಊಟ ಉಪಹಾರ  ತಿಂಡಿ ತೀರ್ಥ ಬೇಕಾದ ಇತರೆ ಸಾಮಾನು ಕಾರಿನ ಪೆಟ್ರೋಲು ಹಾಗು ಇತರೆ ಸೇವೆ, ಜೊತೆಗ ಶೌಚಾಲಯಗಳ, ಔಷಧಿಅಂಗಡಿ ಇರುತ್ತವೆ. ಅದರಲ್ಲೂ ಹಲವು ಕಡೆ ಸಾಮಾನ್ಯ ಔಷಧಿಗಳನ್ನು ವೆಂಡರ್‌ ಮೆಷಿನ್‌ಗಳ ಮೂಲಕ ಪಡೆಯುವ ವ್ಯ ವಸ್ಥೆಯೂ ಇದೆ.  ಜನರು ಅಲ್ಲಿ ಮಾತ್ರ ತಮ್ಮ  ಅಗತ್ಯ ಪೂರೈಸಿಕೊಳ್ಳಬೇಕು  ಮಧ್ಯದಲ್ಲಿ ಹೋಗುವ ಮಾತೇ ಇಲ್ಲ. ಇತ್ತೀಚೆಗೆ ನಮ್ಮಲ್ಲೂ ಬಸ್‌ ನಿಲ್ದಾಣದಲ್ಲಿ ಈ ವ್ಯವಸ್ಥೆ  ಇದೆ. ರಾತ್ರಿ ದೂರದ ಪ್ರಯಾಣದಲ್ಲಿ ಬಸ್ಸು ನಿಲ್ಲಿಸುವರು. ಆದರೆ ಅಲ್ಲಿನ ಸ್ಥಿತಿ ದೇವರಿಗೇ ಪ್ರೀತಿ ಇಲ್ಲಿ  ಹಾಗಲ್ಲ. ಎಲ್ಲಕ್ಕೂ ಗುಣಮಟ್ಟ ಕಾಪಾಡಿಕೊಳ್ಳುವುದು ಕಡ್ಡಾಯ.ಅನೇಕ ಕಡೆ ತಿನ್ನುವ ಜಾಗಕ್ಕಿಂತ ಈ ಸ್ಥಳಗಳು ಆಕರ್ಷಕ ಮತ್ತು ಶುಚಿ ಯಾಗಿರುತ್ತವೆ.. 

ಜಾನಿ
ಇನ್ನು ಇಲ್ಲಿ ಯಾವುದೇ ಸಾರ್ವಜನಿಕ ಕಾರ್ಯಕ್ರಮ ಏರ್ಪಡಿಸಬೇಕಾದರೆ ಅನುಮತಿ ಪಡೆಯಲು ಮೊದಲ ಅಗತ್ಯ . ಜಸೇರುವ ಜನರ ಸಖ್ಯೆಗೆ ಅನುಗುಣವಾಗಿ ಸಾಕಷ್ಟು ಮೊಬೈಲ್ ಅಥವ ಜಂಗಮ  ರೆಸ್ಟರೂಮ್‌ ವ್ಯವಸ್ಥೆ ಮಾಡುವುದು  ಕಡ್ಡಾಯ. ಅವನ್ನು ನಮ್ಮಲ್ಲಿ ಷಾಮಿಯಾನ, ಕುರ್ಚಿ, ಮೇಜುಗಳನ್ನು ಬಾಡಿಗೆ ಕೊಡುವಂತೆ ಬಾಡಿಗೆ ಒದಗಿಸುವರು. ಅವುಗಳಲ್ಲೂ  ಆಯ್ಕೆಗೆ ಅವಕಾಶವಿದೆ.

ಸಾಧಾರಣವಾಗಿ ಅವನ್ನು ಜಾನಿ ಎನ್ನುವರು.  ಅವುಗಳಲ್ಲೂ ವೈಭವೋಪೇತ  ಮಾದರಿಗಳೂ ಸಿಗುತ್ತವೆ. ನೂರಾರು ಜನ ದಿನಗಟ್ಟಲೆ ಸೇರ ಬಹುದಾದ ಕಾರ್ಯಕ್ರಮಗಳ್ಲಿ ನಾಲ್ಕಾರು  ಜಾನಿಗಳು ಕಡ್ಡಾಯವಾಗಿ ಇರಲೇ ಬೇಕು.


ಮತ್ತೊಂದು ಮೋಜಿನ ಸಂಗತಿ ಎಂದರೆ ಈ ದೇಶದಲ್ಲಿ ಅತ್ಯತ್ತುಮವಾದ ರೆಸ್ಟರೂಮಿಗೆ ರಾಷ್ಟ್ರ  ಮಟ್ಟದ ಸ್ಪರ್ಧೆ.ಅವಕ್ಕೆ ಲಕ್ಷಾಂತರ ಡಾಲರ್‌ ಬಹುಮಾನ ಮತ್ತು ಪ್ರಶಸ್ತಿ.ಅದನ್ನು ಪಡೆಯಲು ಪಂಚತಾರಾ ಹೋಟೆಲ್‌ಗಳು ಸಪ್ತತಾರಾ ಹೋಟೆಲ್‌ಗಳು ಕೂಡಾ ಭಾಗವಹಿಸುತ್ತವೆ. ಮತ್ತು ಹೆಮ್ಮೆಯಿಂದ ಪಾರಿತೋಷಕವನ್ನು ಪ್ರದರ್ಶಿಸುತ್ತವೆ.
ಈ  ವರ್ಷದ ಅತ್ಯತ್ತಮ ರೆಸ್ಟ ರೂಂಪ್ರಶಸ್ತಿ ಪಡೆದ ವಾರ್ಸಿಟಿ ಥೇಟರ್‌  ರೆಸ್ಟ ರೂಮ್‌ ವಿಶೇಷವೆಂದರ ಅಲ್ಲಿ ಕುಳಿತೇ ಸಂಗೀತ ಕೇಳಬಹದು ಮತ್ತು ನಡೆಯುತ್ತಿರುವ ಕಾರ್ಯಕ್ರಮ ನೋಡಬಹುದು ಜೊತೆಗೆ ಪಾನೀಯವನ್ನು ಸೇವಿಸಬಹುದು




ಕಣ್ಣಿಗೆ , ಕಿವಿಗೆ ರೆಸ್ಟ ಕೊಡದ ಥೇಟರಿನ ರೆಸ್ಟ ರೂಮ್‌



ಈ ದೇಶದಲ್ಲಿ  ಮಕ್ಕಳಿಗೆ ಮೊದಲ ಶಿಕ್ಷಣವೆಂದರೆ ಪಾಟಿ ತರಬೇತಿ. ಶಿಶುವಿಹಾರಕ್ಕೆ ಕಳುಹಿಸುವ ಮೊದಲು  Potty training ಅನ್ನು  ಕೊಡುವರು.  Pot  ನ ಇನ್ನೊಂದು ರೂಪ ಪಾಟಿ. ಈಗ ತಿಳಿಯಿತಲ್ಲ ಪಾಟಿ  (Potty)  ಪುರಾಣದ ಅರ್ಥ

.

ಅಂತಿಮ ಹಂತಕ್ಕೆ ಬಂದ ಇನ್ನೊಂದು ರೆಸ್ಟ ರೂಮ್‌

ರೆಸ್ಟರೂಮ್‌ ನಲ್ಲಿ ಐಸ್‌ಕ್ರೀಂನ ಬೇಕಾದ  ಪರಿಮಳ ಹೊರಹೊಮ್ಮುವುದು   




Friday, April 25, 2014

ನೇಮಿಚಂದ್ರ-ಡಾ.ಕೃಷ್ಣಾನಂದ ಪ್ರಶಸ್ತಿಯ ಗೌರವ


              ವಿಜ್ಞಾನ - ಸಾಹಿತ್ಯ  ಸಂಗಮ, ನೇಮಿಚಂದ್ರ ಅವರಿಗೆ 
                    ಡಾ. ಕೃಷ್ಣಾನಂದಕಾಮತ ಪ್ರಶಸ್ತಿಪ್ರದಾನ

ಕನ್ನಡದ ಲೇಖಕಿಯರಲ್ಲಿ  ನೇಮಿಚಂದ್ರ ಅವರಿಗೆ ವಿಶಿಷ್ಟ ಸ್ಥಾನವಿದೆ.  ಅವರುವಿಜ್ಞಾನಿ, ಲೇಖಕಿ,ದಣಿವರಿಯದ ಪ್ರವಾಸಿ. ಮಹಿಳೆಯರು, ಮಕ್ಕಳು ಮತ್ತು ದಮನಿತರ ಸ್ಥಿತಗತಿಗೆ ಮಿಡಿಯುವ ಮನಉಳ್ಳವರು. ಅವರ ವಿಶೇಷ  ಸಾಧನೆಗಾಗಿ  ಈ ಸಾಲಿನ  ೨೦೧೪ ನೆಯ ಸಾಲಿನ ಡಾ.ಕೃಷ್ಣಾನಂದಕಾಮತ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿಯನ್ನು ಏಪ್ರಿಲ್ ೨ ರಂದು ಹಾಸನದ ಸಾವಯವ ಕೃಷಿಯ ಪ್ರಯೋಗಶಾಲೆ ಎನಿಸಿರುವ ಪುಣ್ಯ ಭೂಮಿಯಲ್ಲಿ ಡಾ.ಜೋತ್ಸ್ನಾ ಕಾಮತರ ಸಮ್ಮುಖದಲ್ಲಿ ಪ್ರದಾನ  ಮಾಡಲಾಯಿತು. ಈವರೆಗೆ ಇಪ್ಪತೈದು ಕೃತಿಗಳ ಕಾಣಿಕೆ ನೀಡಿರುವ ಇವರಿಂದ ಕನ್ನಡ ಸಾರಸ್ವತ ಲೋಕಕ್ಕೆ ಇನ್ನೂ ಹೆಚ್ಚಿನ ಕೊಡುಗೆ ಸಲ್ಲಲಿದೆ.
 ಅವರನ್ನು ಕುರಿತು ಖ್ಯಾತ ಛಾಯಾಚಿತ್ರಗ್ರಾಹಕ  ,ಯುವಸಾಹಿತಿ ಮತ್ತು ಕಳೆದ ವರ್ಷ  ಈ ಪ್ರಶಸ್ತಿ ಪಡೆದ ಶ್ರೀ. ಡಿ.ಜಿ ಮಲ್ಲಿಕಾರ್ಜುನ  ನೀಡಿದ ಉಪನ್ಯಾಸ  ಈ ಕೆಳಗೆ ನೀಡಿದೆ.
                 - ಎಚ್‌.ಶೇಷಗಿರಿರಾವ್‌
                     ನೇಮಿಚಂದ್ರ ಅವರನ್ನು ಕುರಿತು  ಒಂದೇ ಪದದಲ್ಲಿ ಹೇಳಬೇಕೆಂದರೆ `ಸ್ಫೂರ್ತಿಯ ಸೆಲೆ'.
ಅವರ ಮಾತುಗಳಲ್ಲಿ ಹೇಳುವುದಾದರೆ, `ನಮ್ಮ ಕನಸುಗಳಿಗೆ ದೊಡ್ಡ ಶಕ್ತಿಯಿದೆ. ಕನಸು ಕಂಡರೆ ಸಾಕು, ಹಾರಲು ರೆಕ್ಕೆ ಮೊಳೆಯುತ್ತವೆ. ಕನಸುಗಳು ನಮ್ಮನ್ನು ಕೊಂಡೊಯ್ಯುತ್ತವೆ ಸಪ್ತ ಸಮುದ್ರದಾಚೆಗೆ, ಹಿಮಾಲಯದೆತ್ತರಕ್ಕೆ, ಕೆಲವೊಮ್ಮೆ ಕನಸುಗಳು ನಮ್ಮನ್ನು ಕೊಂಡೊಯ್ಯಬಲ್ಲವು, ಕಲ್ಪನಾರಂತೆ ಅಂತರಿಕ್ಷಕ್ಕೂ...'
 ಮಹಿಳಾ ವಿಜ್ಞಾನಿಗಳು, ವೈಮಾನಿಕರು ಹಾಗೂ ಸಾಧಕಿಯರ ಬದುಕು ಇಂದಿನ ಎಳೆಯರಿಗೆ ಸ್ಫೂರ್ತಿಯ ಸೆಲೆಯಾಗಲೆಂದು ಅವರ ಬಗೆಗಿನ ಮಾಹಿತಿಗಾಗಿ ದೇಶವಿದೇಶಗಳನ್ನು ಸುತ್ತಿದ್ದಾರೆ.
 ನನಗೆ ಇವರು ಮೊದಲು ಪರಿಚಯವಾದದ್ದು ಉದಯವಾಣಿಯಲ್ಲಿ ಪ್ರತಿ ಭಾನುವಾರ ಬರುತ್ತಿದ್ದ ಇವರ ಅಂಕಣ `ಬದುಕು ಬದಲಿಸಬಹುದು' ಮೂಲಕ. ಈ ಅಂಕಣ ನನ್ನದೂ ಸೇರಿದಂತೆ ಅನೇಕರ ಬದುಕನ್ನು ಬದಲಿಸಿದೆ. ಇವರ ಅಂಕಣ ಓದಿ ಪ್ರಭಾವಿತನಾಗಿ ಇವರಿಗೆ ಪತ್ರ ಬರೆದಿದ್ದೆ, ಹಾಗೆಯೇ ಉತ್ತರವನ್ನೂ ಪಡೆದಿದ್ದೆ. ನಂತರ ಡಾ.ಕಾಮತರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಇವರಿಂದ ಹಸ್ತಾಕ್ಷರವನ್ನೂ ಪಡೆದಿದ್ದೆ.
 'ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್'ನಲ್ಲಿ ವಿಮಾನ ಸಂಶೋಧನೆ ಮತ್ತು ವಿನ್ಯಾಸ ವಿಭಾಗದಲ್ಲಿ
ಅಡಿಶನಲ್ ಜೆನರಲ್ ಮ್ಯಾನೇಜರ್ ಆಗಿರುವ ಇವರು ಬೆಳಿಗ್ಗೆ 6.30ಕ್ಕೆ ಕೆಲಸಕ್ಕಾಗಿ ಹೊರಟರೆ ಬರುವುದು ರಾತ್ರಿಯೇ. ಮನೆ, ಸಂಸಾರ ಸಾಗಿಸುವಷ್ಟರಲ್ಲಿ ಸಮಯವೇ ಇರುವುದಿಲ್ಲವೆನ್ನುವ ಎಲ್ಲರೂ ಇವರನ್ನೊಮ್ಮೆ ನೋಡಿದರೂ ಸಾಕು ಸ್ಫೂರ್ತಿ ಪಡೆಯುವುದು ಗ್ಯಾರಂಟಿ. ಸಾಹಿತ್ಯ, ಪ್ರವಾಸ. ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ, `ಅಚಲಾ' ಮಹಿಳಾ ಅಧ್ಯಯನ ಮಾಸಪತ್ರಿಕೆಯ ಸಂಪಾದಕೀಯ ಮಂಡಲಿಯ ಸದಸ್ಯೆಯಾಗಿ, ಜಾಗೃತಿ ಮಹಿಳಾ ಅಧ್ಯಯನ ಕೇಂದ್ರ, `ನೆರವು' ಹಿತರಕ್ಷಣಾ ವೇದಿಕೆಗಳ ನಿಕಟ ಸಂಪರ್ಕ ಮತ್ತು ಒಡನಾಟವಿಟ್ಟುಕೊಂಡು. ವಿಜ್ಞಾನ, ಸಾಹಿತ್ಯ, ಮಹಿಳಾ ಅಧ್ಯಯನ ಕುರಿತಂತೆ ಹಲವಾರು  ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಆಗಾಗ ಬರೆಯುತ್ತಾ, ನೊಂದ ಮಹಿಳೆಯರಿಗೆ ಸಾಂತ್ವನವನ್ನೂ ಹೇಳುತ್ತಾ ಇವರು ಸಮಯವನ್ನು ಹೊಂದಿಸಿಕೊಳ್ಳುವ ಪರಿಯೇ ಅಚ್ಚರಿ ಮತ್ತು ಅದುವೇ ನಮಗೆಲ್ಲರಿಗೂ ಸ್ಫೂರ್ತಿದಾಯಕ.
 ನೇಮಿಚಂದ್ರ ಅವರು ಕನ್ನಡದ ವೈಶಿಷ್ಟ್ಯಪೂರ್ಣ ಕತೆಗಾರ್ತಿ. ಸಣ್ಣಕತೆ, ಕಾದಂಬರಿ ಹಾಗೂ ವಿಚಾರಪೂರ್ಣ ಲೇಖನಗಳ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾಗಿದ್ದಾರೆ. ವಿಜ್ಞಾನದ ವಸ್ತಗಳನ್ನು ಒಳಗೊಂಡ ಅವರ ಕಥಾ ಹರಹು ಕನ್ನಡ ಸಾಹಿತ್ಯ ಲೋಕಕ್ಕೇ ಒಂದು ಮೆರುಗು ತಂದಿದೆ. 
ಅವರ `ಯಾದ್ ವಶೇಮ್' ಕಾದಂಬರಿ ಅಪಾರವಾದ ಜನಪ್ರಿಯತೆ ಗಳಿಸಿಕೊಂಡಿದೆ. ಈ ಕಾದಂಬರಿಯ ಕಥಾ ವಸ್ತುವನ್ನು ರೂಪಿಸುವಾಗ ಅದರ ಹಿನ್ನಲೆಯನ್ನು ಅತ್ಯಂತ ಸನಿಹದಲ್ಲಿ ಅನುಭವಿಸಿ ಬರೆಯುವುದಕ್ಕಾಗಿ ಅವರು ನಡೆಸಿದ ತಿರುಗಾಟ ಮತ್ತು ಅಭಿವ್ಯಕ್ತಿಸಿರುವ ರೀತಿ ಅಚ್ಚರಿ ಹುಟ್ಟಿಸುವಂತದ್ದು. ಮಹಾಯುದ್ಧ ಕಾಲದ ಹಿನ್ನಲೆಯನ್ನು ಇಟ್ಟುಕೊಂಡು ಚಿತ್ರಿತವಾಗಿರುವ ಈ ಕಥೆಯಲ್ಲಿನ ಹುಡುಗಿ ಅಂದಿನ ನಾಜಿ ರಕ್ಕಸರ ಕೈಯಿಂದ ತಪ್ಪಿಸಿಕೊಂಡು ನಮ್ಮ ಹಳೆಯ ಬೆಂಗಳೂರಿನಲ್ಲಿ ಬೆಳೆಯುತ್ತಾಳೆ. ತನ್ನ ಕಳೆದುಹೋದ ಕುಟುಂಬವನ್ನು ಅರಸುತ್ತ ಹೊರಟ ಈ ಹುಡುಗಿ ಜರ್ಮನಿ, ಅಮೆರಿಕವನ್ನು ಸುತ್ತಿ, ಕಡೆಗೆ ಯುದ್ಧಗ್ರಸ್ಥವಾದ ಇಸ್ರೇಲ್ - ಪ್ಯಾಲೆಸ್ಟೇನಿನ ವಾತಾವರಣದಲ್ಲಿ ಬಂದಿಳಿಯುವುದು ಚಿಂತನಪೂರ್ಣ. ಅವರು ತಮ್ಮ `ಯಾದ್ ವಶೇಮ್' ಕಾದಂಬರಿಗಾಗಿ ಜರ್ಮನಿಯ ನಾಜಿ ಕ್ಯಾಂಪ್, ಆನ್‍ಫ್ರಾಂಕ್ ಅವಿತಿದ್ದ ಗುಪ್ತಗೃಹವಿರುವ ಆಮ್‍ಸ್ಟರ್‍ಡ್ಯಾಮ್, ವಾಷಿಂಗ್ಟನ್‍ನ ಹೊಲೋಕಾಸ್ಟ್ ಮ್ಯೂಸಿಯಂ, ಇಸ್ರೇಲ್‍ನ ಜೆರೂಸಲೆಂಗೆ ಭೇಟಿ ನೀಡಿದ್ದಾರೆ. ಈ ಕಾದಂಬರಿಗಾಗಿ ಅವರ ತಿರುಗಾಟ, ಅಧ್ಯಯನ ಸುಮಾರು ಹನ್ನೆರಡು ವರ್ಷಕಾಲ ನಡೆದಿತ್ತು.
 ನನ್ನ ಹೃದಯಕ್ಕೆ ತಟ್ಟಿದ ಮತ್ತೊಂದು ಸಂಗತಿಯೆಂದರೆ ಈ `ಯಾದ್ ವಶೇಮ್' ಕಾದಂಬರಿಯನ್ನು ನೇಮಿಚಂದ್ರ ಅವರು ತಮ್ಮ ತಾಯಿಗೆ ಅರ್ಪಿಸಿದ್ದು. `ಬಯಲು ಸೀಮೆಯ ಹಳ್ಳಿಗಾಡಿನ ಅನಕ್ಷರಸ್ಥ ಹೆಣ್ಣುಮಕ್ಕಳ ಅನುಭವಗಳನ್ನು, ದಂತಕಥೆಗಳನ್ನು ಹಂಚಿಕೊಂಡ, ಯಾರನ್ನು ಕಂಡರೂ ತಟ್ಟನೆ ಮರುಗುವ ಈ ಕತೆಯ ತಾಯಿ ಹೃದಯದ `ಗುಂಡಮ್ಮ'ನಂತಹ ವಿಶಾಲ ಮನಸ್ಸಿನ ನನ್ನಮ್ಮನಿಗೆ... ಪ್ರೀತಿಯಿಂದ ಅರ್ಪಣೆ' ಎಂದು ಬರೆದಿದ್ದಲ್ಲದೆ, ಈ ಪುಸ್ತಕ ಬಿಡುಗಡೆಯ ಸಮಯದಲ್ಲಿ ವೇದಿಕೆಯಿಂದ ಇಳಿದು ಬಂದು ಮುಂದಿನ ಸಾಲಿನಲ್ಲಿ ಕುಳಿತಿದ್ದ ತಮ್ಮ ತಾಯಿಯನ್ನು ಅವರು ಸನ್ಮಾನಿಸಿದ್ದರು.
  ನೇಮಿಚಂದ್ರರ ವೈಜ್ಞಾನಿಕ ಬರಹಗಳಲ್ಲಿ ಜೀವನ ಚರಿತ್ರೆಗಳು ವಿಶೇಷವೆನಿಸುತ್ತವೆ. `ಮೇರಿ ಕ್ಯೂರಿ', ವೆಲ್ಲೂರು ಆಸ್ಪತ್ರೆಯ ಸಂಸ್ಥಾಪಕರಾದ `ಡಾ. ಈಡಾ ಸೋಫಿಯಾ ಸ್ಕಡರ್', `ಥಾಮಸ್ ಆಲ್ವ ಎಡಿಸನ್', `ನೊಬೆಲ್ ವಿಜೇತ ಮಹಿಳೆಯರು', `ಮಹಿಳಾ ವಿಜ್ಞಾನಿಗಳು' ಜನಪ್ರಿಯವೆನಿಸಿವೆ.
 ತಮ್ಮ ಕೃತಿಗಳಿಗಾಗಿ ಇವರು ಅನೇಕ ಸ್ಥಳಗಳನ್ನು ಹುಡುಕಿಕೊಂಡು ಹೋಗಿದ್ದಾರೆ. ಮೇರಿ ಕ್ಯೂರಿಯ ಪ್ರಯೋಗಶಾಲೆ, ಬ್ರಾಂಟೆಯ ಮೂರ್, ಪ್ರಥಮ ಸ್ತ್ರೀವಾದಿ ಲೇಖಕಿ ಆಫ್ರಾಳ ಹಳ್ಳಿ, 19ನೇ ಶತಮಾನದ ಖಗೋಳ ಶಾಸ್ತ್ರಜ್ಞೆ ಕ್ಯಾರೊಲಿನ್ ಹರ್ಷಲ್‍ಳ ಸ್ಥಳ, ವಡ್ರ್ಸ್‍ವರ್ತ್‍ನ ನೆಲ, ಕೀಟ್ಸ್‍ನ ಹ್ಯಾಂಪ್‍ಸ್ಟೆಡ್‍ಹೀತ್, ಫ್ಲಾರೆನ್ಸ್ ನೈಟಿಂಗೇಲಳ ಆಸ್ಪತ್ರೆ, ಕುಸಿದ ಬರ್ಲಿನ್ ಗೋಡೆ, ಐನ್‍ಸ್ಟೈನ್‍ನ ತಾಣ, ಡಕಾವ್‍ನ ನಾಜಿ ಕ್ಯಾಂಪ್...
ಹೀಗೆ ಕನಸುಗಳ ಬೆನ್ನು ಹತ್ತಿ ಹೋಗಿ ಬಂದು ಸಾಹಿತ್ಯದ ಮೂಲಕ ಉಣಬಡಿಸಿದ್ದಾರೆ.


 ಇವರ `ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು' ಕೃತಿ ಸಾಮಾಜಿಕ ಚಿಂತನೆಯನ್ನು ಪ್ರತಿನಿಧಿಸಿದರೆ, `ನನ್ನ ಕಥೆ, ನಮ್ಮ ಕಥೆ' ಎಂಬುದು ಮಹಿಳೆಯೊಬ್ಬಳು ಮನೆಯಲ್ಲಿನ ದೌರ್ಜನ್ಯದ ವಿರುದ್ಧ ಬಂಡೇಳುವ ಕಥೆಯೊಂದರ ಅನುವಾದವಾಗಿದೆ. ಹೇಮಲತಾ ಮಹಿಷಿ ಅವರೊಡನೆ ಇವರು ನಿರೂಪಿಸಿರುವ `ನ್ಯಾಯಕ್ಕಾಗಿ ಕಾದ ಭಾಂವ್ರಿ ದೇವಿ ಕಥೆ' ನಮ್ಮನ್ನು ಅಲುಗಿಸುವಂತದ್ದು.
 ಸ್ವಾತಂತ್ರ ಪೂರ್ವದ ಕನ್ನಡದ ಮಹಾನ್ ಕವಯಿತ್ರಿ `ಬೆಳೆಗೆರೆ ಜಾನಕಮ್ಮ', `ನೋವಿಗದ್ದಿದ ಕುಂಚ' ಎಂಬ ಮಹಾನ್ ಡಚ್ ಕಲಾವಿದ ವ್ಯಾನ್ ಗೋನ ಅವರ ಜೀವನ ಚರಿತ್ರೆ ಇವೆಲ್ಲಾ ನೇಮಿಚಂದ್ರ ಅವರ ವಿಶಾಲ ಆಸಕ್ತಿಗಳನ್ನು ತೋರುತ್ತವೆ.
  ನೇಮಿಚಂದ್ರರ ವಿಚಾರ ಪೂರ್ಣ ಲೇಖನಗಳಾದ `ಸಾಹಿತ್ಯ ಮತ್ತು ವಿಜ್ಞಾನ', `ಬದುಕು ಬದಲಿಸಬಹುದು', `ದುಡಿವ ಹಾದಿಯಲ್ಲಿ ಜೊತೆಯಾಗಿ', `ಮಹಿಳಾ ಅಧ್ಯಯನ', `ನಿಮ್ಮ ಮನೆಗೊಂದು ಕಂಪ್ಯೂಟರ್, `ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೋಟರ್ಸ್' , `ಮಹಿಳಾ ಲೋಕ' (ಸಂಪಾದಿತ) ಇವೆಲ್ಲಾ ಇವರ ಚಿಂತನಪೂರ್ಣ ಬರಹಗಳ ವಿಶಾಲತೆ, ಆಳ, ಬದುಕಿನ ಕುರಿತಾದ ವಿಶಾಲ ದೃಷ್ಟಿಗಳನ್ನು ಅಭಿವ್ಯಕ್ತಿಸುತ್ತವೆ.
ಡಾ.ಜೋತ್ಸನಾ ಕಾಮತರೊಂದಿಗೆ ನೇಮಿಚಂದ್ರ 
 `ಒಂದು ಕನಸಿನ ಪಯಣ', `ಪೆರುವಿನ ಪವಿತ್ರ ಕಣಿವೆಯಲ್ಲಿ' ಕೃತಿಗಳು ನೇಮಿಚಂದ್ರ ಅವರ ಪ್ರಸಿದ್ಧ ಪ್ರವಾಸ ಕಥನಗಳಾಗಿವೆ. ಇವರು ತಮ್ಮ `ಪೆರುವಿನ ಪವಿತ್ರ ಕಣಿವೆಯಲ್ಲಿ' ಕೃತಿಯನ್ನು ಅರ್ಪಿಸಿರುವುದು ಡಾ.ಕೃಷ್ಣಾನಂದ ಕಾಮತರಿಗೆ. `ನನ್ನ ಪ್ರಥಮ ಪ್ರವಾಸ ಕಥನ `ಒಂದು ಕನಸಿನ ಪಯಣ' ವನ್ನು ಅತ್ಯಂತ ಪ್ರೀತಿಯಿಂದ ಬಿಡುಗಡೆ ಮಾಡಿ, ಪೆರುವಿನ ಪ್ರವಾಸ ಮಾಡಿ ಮುಗಿಸಿ ಬಂದಾಗ ನನ್ನ ಅನುಭವವನ್ನು ಉತ್ಸಾಹದಿಂದ ಹಂಚಿಕೊಂಡು, ಪುಸ್ತಕ ಹೊರಬರುವ ಮೊದಲೇ ಕಣ್ಮರೆಯಾದ ಪ್ರವಾಸ ಪ್ರಿಯ ಡಾ.ಕೃಷ್ಣಾನಂದ ಕಾಮತರಿಗೆ ಪ್ರೀತಿಯಿಂದ ಅರ್ಪಣೆ' ಎಂದಿದ್ದಾರೆ.
 ಇಬ್ಬರೇ ಮಹಿಳೆಯರು ದಕ್ಷಿಣ ಅಮೆರಿಕೆಯಲ್ಲಿರುವ ಪೆರು, ಬ್ರೆಜಿಲ್ ದೇಶಗಳನ್ನು ಸುತ್ತಾಡಿ ಭಾಷೆಯ ಸಮಸ್ಯೆಯನ್ನು ಕೈ ಬಾಯಿ ಸನ್ನೆಗಳ ಮೂಲಕ ನಿಭಾಯಿಸಿಕೊಂಡು, ಅದೇ ರೀತಿ ಆಹಾರದ ಸಮಸ್ಯೆಯನ್ನೂ ಬಗೆಹರಿಸಿಕೊಂಡು, ನಮ್ಮ ಜನರಂತೆಯೇ ಆದರಿಸುವ, ಪ್ರೀತಿಸುವ, ಸ್ನೇಹಭಾವ ತೋರಿಸುವ ಜನರನ್ನು ಭೇಟಿ ಮಾಡಿದ ಅನುಭವಗಳನ್ನು `ಪೆರುವಿನ ಪವಿತ್ರ ಕಣಿವೆಯಲ್ಲಿ' ಕೃತಿಯಲ್ಲಿ ಇವರು ಸ್ವಾರಸ್ಯಕರವಾಗಿ ವರ್ಣಿಸಿದ್ದಾರೆ.
 ಅಮೆರಿಕದ ಕೊಳ್ಳುಬಾಕತನ, ಪ್ರತಿ ಕ್ಷಣವನ್ನೂ ಹಣವಾಗಿ ಬದಲಿಸುವ ಬದುಕಿನ ಪರಿ, ಬಡ ಪೆರು ದೇಶದ ಹೃದಯವಂತ ಜನ, ಕಾಗೆಗಳನ್ನೆಲ್ಲಾ ಕೊಲ್ಲುತ್ತಾ ಸ್ವಚ್ಛತೆಗಾಗಿ ಶ್ರಮಿಸುವ ಹಾಗೂ ಪ್ರತಿಯೊಂದಕ್ಕೂ ದಂಡ ವಿಧಿಸುತ್ತಾ ಫೈನ್ ಸಿಟಿಯೆಂದೇ ಪ್ರಸಿದ್ಧವಾದ ಸಿಂಗಾಪೂರಿನ ನಗಲು ಕೂಡ ಒದ್ದಾಡುವ ಜನ, ನಿರ್ಮಲ ಸ್ವಚ್ಛ ನಗುವಿನಿಂದ ಆತ್ಮೀಯವಾಗಿ ಕಾಣುವ ಬಡ ರಾಷ್ಟ್ರ ಕಾಂಬೋಡಿಯಾದ ಜನ ... ಹೀಗೆ ಅವರು ತಿರುಗಾಟದಲ್ಲಿ ಕಂಡ ಮಾನವೀಯ ಮೌಲ್ಯಗಳನ್ನು ದಾಖಲಿಸಿದ್ದಾರೆ.


ಪ್ರಶಸ್ತಿ ಗೌರವಗಳು:

ನೇಮಿಚಂದ್ರ ಅವರ 'ಬೆಳಕಿನೊಂದು ಕಿರಣ ಮೇರಿ ಕ್ಯೂರಿ', 'ಪೆರುವಿನ ಪವಿತ್ರ ಕಣಿವೆಯಲ್ಲಿ' ಮತ್ತು 'ಯಾದ್ ವಶೇಮ್' ಪುಸ್ತಕಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಲಭಿಸಿದೆ. 'ಸಾಹಿತ್ಯ ಮತ್ತು ವಿಜ್ಞಾನ' ಹಾಗೂ 'ಒಂದು ಕನಸಿನ ಪಯಣ' ಪುಸ್ತಕಗಳಿಗೆ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, `ಯಾದ್ ವಶೇಮ್' ಕೃತಿಗೆ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಪ್ರತಿಷ್ಠಾನದ 2009 `ಅಕ್ಕ' ಪ್ರಶಸ್ತಿ, ಮತ್ತೆ ಬರೆದ ಕಥೆಗಳು ಕಥಾಸಂಕಲನಕ್ಕೆ ಆರ್ಯಭಟ ಪ್ರಶಸ್ತಿ, 'ಬದುಕು ಬದಲಿಸಬಹುದು' ಪುಸ್ತಕಕ್ಕೆ ಶಿವಮೊಗ್ಗದ 'ಕರ್ನಾಟಕ ಸಂಘ'ದ ಡಾ.ಹಾ.ಮಾ.ನಾಯಕ ಪ್ರಶಸ್ತಿ, 'ಪೆರುವಿನ ಪವಿತ್ರ ಕಣಿವೆಯಲ್ಲಿ' ಪುಸ್ತಕಕ್ಕೆ ಶಿವರಾಮ ಕಾರಂತ ಪುರಸ್ಕಾರ,
ವಿಜ್ಞಾನ, ಸಾಹಿತ್ಯ, ಮಹಿಳಾ ಅಧ್ಯಯನವನ್ನು ಕುರಿತಂತೆ ಮಂಗಳೂರಿನ 'ಸಂದೇಶ ಪ್ರಶಸ್ತಿ' ಹಾಗೂ ಗದಗದ 'ಕಲಾಚೇತನ' ಪ್ರಶಸ್ತಿ. ಕಥಾಸಾಹಿತ್ಯಕ್ಕೆ 'ಇಂದಿರಾತನಯ' ಪ್ರಶಸ್ತಿ ಲಭಿಸಿದೆ.
ಈಗ ದೊರೆತಿರುವ ಡಾ. ಕೃಷ್ಣಾನಂದ ಪ್ರಶಸ್ತಿ ಅವರ ಮುಡಿಗೆಏರಿದ ಇನ್ನೊಂದು ಗರಿ
                                       ********
                     (   ಚಿತ್ರ ಕೃಪೆ  ಅಂತರ್‌ಜಾಲ ತಾಣ)
.