Friday, November 8, 2013

ಹಸ್ತಪ್ರತಿ ಅಧ್ಯಯನ ರಾಷ್ಟ್ರೀಯ ಸಮಾವೇಶ


      ಹಸ್ತಪ್ರತಿ ಅಧ್ಯಯನ  3ನೆಯ   ರಾಷ್ಟ್ರೀಯ ಸಮಾವೇಶ 
                      ತುಮಕೂರು
                     ೦8-11-2013













  

Monday, November 4, 2013

ಕುಠೀರ ರಾಜ್ಯೋತ್ಸವ


ರಾಜ್ಯೋತ್ಸವ ಎಲ್ಲ ಕನ್ನಡಿಗರ ಸಂಭ್ರಮದ ಹಬ್ಬ, ರಾಜ್ಯ ಸರ್ಕಾರದಿಂದ ಮೊದಲುಗೊಂಡು ವಿವಿಧ ಸಂಘಸಂಸ್ಥೆಗಳು ರಾಜ್ಯೋತ್ಸವವನ್ನು ಆಚರಿಸುತ್ತವೆ. ರಾಜ್ಯೋತ್ಸವವನ್ನು ಪ್ರಪ್ರಥಮವಾಗಿ ಅದ್ಧೂರಿಯಿಂದ ಆಚರಿಸಿದ ಕೀರ್ತಿ ಹಿರಿಯಸಾಹಿತಿ ಕಾದಂಬರಿ ಸಾರ್ವಭೌಮ ಅ.ನ.ಕೃ ಮತ್ತು ಅವರ ಗೆಳೆಯ ಸಾಹಿತಿಗಳಿಗೆ ಸಲ್ಲಬೇಕು. ೧೯೬೩ ರಲ್ಲಿ ಕೆಂಪಾಂಬುಧಿ ಕೆರೆಯ ಆವರಣದದಲ್ಲಿ  { ಇಂದಿನ ಬಿ. ಎಂ..ಟಿ..ಸಿ ನಗರಸಾರಿಗೆ ನಿಲ್ದಾಣದ ಪ್ರದೇಶದಲ್ಲಿ) ಒಂದು ವಾರ ಕನ್ನಡ ಸಾಹಿತ್ಯ,  ಕಲೆ ಸಂಸ್ಕೃತಿಗಳ ವೈಭವದ ಪ್ರದರ್ಶನದೊಂದಿಗೆ ರಾಜ್ಯೋತ್ಸವ  ನಡೆಯುತಿತ್ತು. ನಂತರ ಕನ್ನಡ ಹೋರಾಟಗಾರ  ವಾಟಾಳ್‌ ನಾಗರಾಜ್‌ ಸರ್ಕಾರಿ ಕಲೆಮತ್ತು ವಿಜ್ಞಾನ ಕಾಲೇಜಿನ ಮೈದಾನದಲ್ಲಿ ತಿಂಗಳು ಗಟ್ಟಲೆ ಆಚರಿಸುತ್ತ ಬಂದಿರುವುದು ಬೆಂಗಳೂರಿನ ಎಲ್ಲರೂ ಬಲ್ಲ ಸಂಗತಿ. 




ಈಗಂತೂ ಆವರಣೆಯ ಸಂಖ್ಯೆ ಬಹಳವಾಗಿದೆ. ಇತ್ತೀಚೆಗೆ ನವಂಬರ್‌ ತಿಂಗಳ;ಲ್ಲಿ  ದೀಢೀರನೆ ಕನ್ನಡತನ ಜಾಗೃತಿಗೊಂಡು ಆಚರಣೆಗೆ ಇಳಿಯುವವರಿಗೆ ಬರಿ ಅಭಿಮಾನ ಮಾತ್ರವೇ ಕಾರಣವಾಗಿರದೇ ಇನ್ನೂ ಅನೇಕ ಸಂಗತಿಗಳು ಪ್ರಚೋದನೆ ನೀಡುತ್ತವೆ.. ಕೆಲವು ಸಲವಂತೂ ಚಂದಾವಸೂಲಿ ತಲೆ ಬೇನೆ ತರುತ್ತದೆ. ಆದರೆ ಯಾವದೇ ಪ್ರತಿಫಲಾಪೇಕ್ಷೆ ಇಲ್ಲದೆ ಕನ್ನಡದ ಪ್ರೀತಿಗೆ ಸಮಾರಂಭ ಮಾಡುವವರೂ ಹಲವರಿದ್ದಾರೆ . ಅವರಲ್ಲಿ ವಿಭಿನ್ನವಾಗಿ ಆಚರಿಸುವ ರಾಜೇಶ್‌.ಅವರು ಗಂಗಾನಗರದ ಮಹಿಳಾ ಸಹಕಾರಿ ಬ್ಯಾಂಕ್‌ನ ಉದ್ಯೋಗಿ. ಚಿಕ್ಕಂದಿನಿಂದಲೇ ತಂದೆಯವರು ಕೆಲಸದಲ್ಲಿ ಇದ್ದ  ಬಿ ಇ ಎಲ್‌ ಕಾರ್ಕಾನೆಯಲ್ಲಿ ಆಚರಿಸುತಿದ್ದ ಅದ್ಧೂರಿಯ ರಾಜ್ಯೋತ್ಸವ ನೋಡಿ ಸ್ಪೂರ್ತಿ  ಬಂದು ತಾನೂ ಏನಾದರೂ ,ಮಾಡಬೇಕೆ<ಬ ಹಂಬಲ. ಪರಿಣಾಮ ಕಳೆದ ೧೯ ವರ್ಷದಿಂದ ಮನೆಯಲ್ಲಿಯೇ ಆಚರಣೆ.  ವಿಶೇಷವೆಂದರೆ.ಅದಕ್ಕೆ ಕುಟುಂಬದ ಎಲ್ಲರ ಸಹಕಾರ.   ಮನೆಯ ಮಗುವಿನ ಹುಟ್ಟು ಹಬ್ಬದಂತೆ ಆತ್ಮೀಯತೆ ಮತ್ತು ಪ್ರೀತಿ. ಬರಿ ಬಾವುಟ ಹಾರಿಸಿ ಸಿಹಿ ಹಂಚಿದರೆ ಆಗದು ಏನಾದರೂ ಹೊಸದು ಮಾಡುವ ಬಯಕೆ. ಅದಕ್ಕೆ ಆ ವರ್ಷ ಕನ್ನಡ ಸಾಹಿತ್ಯ ಸಮ್ಮೇಳನ ನಡಯುವ ಸ್ಥಳದ ವಿಶೇಷತೆ ಪ್ರತಿಬಿಂಬಿಸುವ ಸ್ನಾರಕದ ಮಾದರಿ ನಿರ್ಮಿಸಿ ಅದರಲ್ಲಿ ತಾಯಿ ಭುವನೇಶ್ವರಿಯನ್ನು ಸ್ಥಾಪಿಸುವರು
. ಅದರಿಂದ ಕನ್ನಡ ನಾಡಿನ ವಿವಿಧ ಪ್ರದೇಶಗಳ ಹಿರಿಮೆ ಸಾರಿದ ಹೆಮ್ಮ. ಚಿತ್ರದುರ್ಗದ ಸಮ್ಮೇಳನ ನಡೆದಾಗ ಬೆಟ್ಟದ ಮಾದರಿ ಇದ್ದರೆ, ಗದಗಿನಲ್ಲಿ ಸಮ್ಮೇಳ ನಡೆದ ವರ್ಷ ವೀರಬಾರಾಯಣ ದೇವಾಲಯದಮಾದರಿ ಹೀಗೆ ಪ್ರತಿವರ್ಷವೂ ವಿಭಿನ್ನ ಹಿನ್ನೆಲೆಯಲ್ಲಿ ಭುವನೇಶ್ವರಿ ರಾರಾಜಿಸುವಳು  ಮನೆಮಂದಿ ಎಲ್ಲ ಸೇರಿ ಆಚರಿಸುವ ಈ ಹಬ್ಬಕ್ಕೆ ಗೆಳಯರು , ಬಂಧುಗಳೂ ಬರುವರು. ಜೊತೆಯಲ್ಲಿ ಯಾರಾದರೂ ಒಬ್ಬ  ಸಾಹಿತಿಯ ಹಿತವಚನೆ.. ಇದು ಸಂಪೂರ್ಣ ಖಾಸಗಿ ಸಮಾರಂಭ.  ಇದುವರೆಗ ೧೯ ರಾಜ್ಯೋತ್ಸವಗಳು ಜರುಗಿವೆ.




 ಕನ್ನಡ ರಸಪ್ರಶ್ನೆ ಪ್ರವೀಣ, ಡಾ. ರಾಜಕುಮಾರ್‌ ,ವಿಮರ್ಶಕ ಡಾ. ಮೋಹನ ಕುಮಾರ್‌. ಸಾಹಿತಿಮುಕುಂದರಾಜ್‌. ಕವಿಯತ್ರಿ ಎಚ್ ಎಲ್‌.ಪುಷ್ಪಾ ,ಸಾಹಿತ್ಯ ಪರಿಷತ್‌ನ ಪದಾಧಿಕಾರಿಗಳಾದ ಡಾ.ವೀರಣ್ಣ  ಶ್ರೀ ರಂಗ ರಾಜು ಮೊಇದಲಾದ ಕನ್ನಡದ ನಾಡು ನುಡಿಗೆ ಸೇವೆ ಸಲ್ಲಿಸಿದವರು  ಸಮಾರಂಭದಲ್ಲಿ ಭಾಗಿಯಾಗಿ ಸಮಾರಂಭಕ್ಕೆ ಕಳೆ ನೀಡಿರುವರು. ಈವರ್ಷ ಕೊಡಗಿನಲ್ಲಿಸಾಹಿತ್ಯ ಸಮ್ಮೇಳನ  ಆಗುವುದರಿಂದ  ಅಲ್ಲಿನ ರಾಜಾ ಸೀಟ್‌ ಪ್ರತಿಕೃತಿ ನಿರ್ಮಿಸಿ ಅದರಲ್ಲಿ ತಾಯಿ ಭುವನೇಶ್ವರಿ ಕೂಡಿಸಲಾಗಿದೆ.
          ಈ ಕುಠೀರ ಕನ್ನಡ ಮ್ಮನ ಉತ್ಸವ ಎಲ್ಲರ ಮೆಚ್ಚುಗೆಗೆ ಅರ್ಹವಾಗಿದೆ.

                                     ಅಭಿನಂದನೆಗಳು  ರಾಜೇಶ್‌

Saturday, November 2, 2013

ಶುಭಾಶಯಗಳು

                                          Happy Deepavali

foto of diwali lamp  - Indian festival of lights - JPG



  H. seshagiriRao

Friday, November 1, 2013

ರಾಜ್ಯೋತ್ಸವದ ಶುಭಾಶಯಗಳು









 







                       ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

Thursday, October 24, 2013

Tuesday, August 13, 2013

ಜನಮೇಜಯನ ನಾಗಯಜ್ಞ




                        ಹಳೆ ವಸ್ತು ಹೊಸ ದೃಷ್ಟಿಯ ನಾಟಕ
                                                                                ಅನುವಾದ-  ಡಾ.ವಿಜಯಾಸುಬ್ಬರಾಜ್‌
ಸಮೃದ್ಧ ಸಾಹಿತ್ಯಕ್ಕೆ ಸೃಜನ ಶೀಲ ಮತ್ತು ಸೃಜನೇತರ ಸಾಹಿತ್ಯದ ಜೊತೆಗೆ ವಿವಿಧ ಸಂಸ್ಕೃತಿ ,ಭಾಷೆ ಮತ್ತು ಜನಜೀವನದ ಪರಿಚಯಿಸುವ ಅನುವಾದಗಳೂ ಅತ್ಯಗತ್ಯ, ಈ ದಿಶೆಯಲ್ಲಿ ಗಳಗನಾಥ,ಅ,ರಾ. ಕೃಷ್ಣ ಶಾಸ್ತ್ರಿಗಳಿಂದ ಹಿಡಿದು ಇಲ್ಲಿಯವರೆಗೆ ಅನ್ಯಭಾರತೀಯ ಭಾಷೆಗಳ ಉತ್ತಮ ಕೃತಿಗಳನ್ನು ಕನ್ನಡಕ್ಕೆ ತಂದವರು ಅನೇಕರಿದ್ದಾರೆ. ಅದಕ್ಕೆ ಇತ್ತೀಚಿನ ಸೇರ್ಪಡೆ ಎಂದರೆ  ಹಿಂದಿ ನಾಟಕ,ಜನಮೇಯನ ನಾಗಯಜ್ಞ. ಹಿಂದಿ ಸಾಹಿತ್ಯ ರಂಗದಲ್ಲಿ ಜೈಶಂಕರ ಪ್ರಸಾದ ಮಹತ್ವದ ಹೆಸರು. ಚಿಕ್ಕವಯಸ್ಸಿನಲ್ಲಿಯೇ ಕಾಲವಾದರೂ ಚಿರಕಾಲ ಉಳಿಯುವಂಥಹ  ಅನೇಕ ಕೃತಿಗಳ ಕಾಣಿಕೆ ನೀಡಿರುವರು.ನಾಟಕದ ಹೆಸರೇ ಸೂಚಿಸುವಂತೆ ಇದು ಯಾಗದ ಹೆಸರಲ್ಲಿ ಜನಾಂಗ ಒಂದರ ನಾಶದ ಹುನ್ನಾರ. ಇದು ಸರ್ಪಯಾಗವಲ್ಲ ನಾಗಯಜ್ಞ.  ಹಳೆ ವಸ್ತುವಿನತ್ತ ಹೊಸ ನೋಟ ಬೀರುವ ಯತ್ನ ಈ ನಾಟಕದ ವಿಶೇಷ, ಇದರಲ್ಲಿ ಆರ್ಯ ಮತ್ತು ಬುಡಕಟ್ಟುಜನಾಂಗಗಳ  ನಡುವಣ ಸಂಘರ್ಷ , ಅಂತರ್‌ಜನಾಂಗದ ವಿವಾಹ, ವೈಯುಕ್ತಿಕ ಲಾಲಸೆಗೆ ಸಿದ್ಧಾಂತದ ಲೇಪನ,ನಗರೀಕರಣದ ದುರಂತ ಹೀಗೆ ಹಲವು ಆಯಾಮಗಳನ್ನು ಅನಾವರಣ ಗೊಳಿಸುತ್ತ ಆದುನಿಕ ಸಮಾಜ ಅನುಭವಿಸುತ್ತಿರುವ ತಲ್ಲಣಗಳನ್ನು ನಾಟಕ ಪ್ರತಿನಿಧಿಸುತ್ತದೆ,

ಪಾಂಡವರ ಮೊಮ್ಮಗನ ಕಾಲದ  ಕಥಾವಸ್ತು. ಮಹಾಭಾರತ  ಯುದ್ಧಾನಂತರದ ಪರಿಣಾಮ ಪ್ರತಿಬಿಂಬಿಸುತ್ತದೆ. ’ಯುದ್ಧದಲ್ಲಿ ಸೋತವನು ಸತ್ತ ಗೆದ್ದವನು ಅತ್ತ  ಎಂಬ ಮಾತಿದೆ.ಅದರ ಮುಂದುವರಿದ ಭಾಗ ಇದಾಗಿದೆ. ನಾಟಕದಲ್ಲಿ ಬಹುತೇಕ ಪಾತ್ರಗಳುಪೌರಾಣಿಕ ಹಿನ್ನೆಲೆಯವಾದರೂ ಕಥೆಯ ಸುಗಮ ಓಟಕ್ಕೆ ಅನುಕೂಲವಾಗಲು  ಒಂದೆರಡು ಹೊಸ ಪಾತ್ರಗಳೂ ಇವೆ. . ಆದರೆ ಒಂದೇ ವಿಶೇಷ. ಇಲ್ಲಿ ವೈಭವೀಕರಣ ಇಲ್ಲ. ಗುರಪತ್ನಿಗೆ ಮೇಲೆ ಶಿಷ್ಯ ಉತ್ತಂಕನ ಮೇಲಿನ ಮೋಹ,ಅಸಮವಿವಾಹವಾದ ಕುಲಪತಿ ವೇದ ಮಡದಿಯ ನಡೆಯರಿತೂ ಮನ್ನಿಸುವ ಮಾನವೀಯತೆ ಆಧುನಿಕ ದೃಷ್ಟಿಕೋನದ ಸೂಚಕಗಳಾಗಿವೆ.ನಾಟಕದ ಭಾಷೆ ತುಸು ಅಲಂಕಾರಿಕ. ಆದು ಆಕಾಲದ ಪರಿಸರಕ್ಕೆ ಸೂಕ್ತ ಎನಿಸಿದರೂ ಇಂದಿನ ಓದುಗರಿಗೆ ಕೃತಕೆನಿಸುವುದು. ಅತಿ ಹೆಚ್ಚಿನ ಸಂಖ್ಯೆಯ ಪಾತ್ರಗಳು, ಸತತ ಬದಲಾಗುವ ದೃಶ್ಯಗಳು ಮತ್ತು ಅಗತ್ಯವಾದ ರಂಗಪರಿಕರ  ರಂಗ ಪ್ರಯೋಗಮಾಡ ಬಯಸುವವರಿಗೆ ಸವಾಲೆಸೆಯುತ್ತವೆ.
ಆದರೆ ನಾಟಕದ ಮಿತಿಯೇ ಅದರ ಶಕ್ತಿಯೂ ಹೌದು. ಸಾಹಿತಿಕ ಸಾಂಸ್ಕೃತಿಕ ಮೌಲ್ಯ, ಹಳೆಯ ಘಟನೆಯ ಮರುವ್ಯಾಖ್ಯಾನ ವಿರಳವಾಗುತ್ತಿರುವ ಶಿಷ್ಟ ಸಾಹಿತ್ಯ ಪ್ರಕಾರಕ್ಕೆ ಮರುಪೂರಣ ನೀಡಿದೆ. ಇನ್ನು ಅನುವಾದಕಿ ಸಾಕಷ್ಟು ಸ್ವತಂತ್ರ್ಯ ವಹಿಸಿ ಸರಳ ಭಾಷೆ ಬಳಸಿರುವರು.ಅದರಿಂದ ನಮ್ಮ ಭಾಷೆಯ ಜಾಯಮಾನಕ್ಕೆ ಹೊಂದುವಂತಿದೆ. ಅನುವಾದ ಎನ್ನಿಸುವುದೇಇಲ್ಲ.ಇಂಥಹ ಕೃತಿಯನ್ನು ಕನ್ನಡಕ್ಕೆ ತರಲು ಎಂಟೆದೆ ಬೇಕು. ಜನಪ್ರಿಯತೆ ಮತ್ತು ವ್ಯವಹಾರಿಕತೆ  ಇದರ ಮಾನದಂಡ ಆಗಲಾರದು.ಸಾಹಿತ್ಯ ಪ್ರೀತಿ ಮತ್ತು ಸಂಸ್ಕೃತಿಯ ಅಭಿಮಾನದಿಂದ ಮಾತ್ರ ಇಂಥಹ ಕೃತಿ ಬರಲುಸಾಧ್ಯ. ಅದರಿಂದ ಲೇಖಕಿಯ ಹಿನ್ನೆಲೆಯೂ ಮುಖ್ಯವಾಗುತ್ತದೆ.
ಅನುವಾದ ಅಕ್ಕರೆಗಳಿಸಬೇಕಾದರೆ ಎರಡೂ ಭಾಷೆಯಲ್ಲಿ ಪ್ರಭುತ್ವ ಅತ್ಯಗತ್ಯ. ಅಂದಾಗ ಮಾತ್ರ ಅನ್ಯ ಭಾಷೆಯ ಸಾರ ಸೊಗಡು ಸೆರೆ ಹಿಡಿಯಲು ಸಾಧ್ಯ.ಜೊತೆಗೆ ಅನುವಾದಕರು ಸ್ವತಃ ಕವಿಯಾದರೆ ಅನುವಾದವು ಮೂಲ ಕೃತಿಯೇ ಅನಿಸಬಹುದು  .ಡಾ. ವಿಜಯಾಸುಬ್ಬರಾಜ್ ಬಹುಭಾಷಾ ಕೋವಿದೆ.  ಕನ್ನಡ ಎಂ.ಎ.ಯಲ್ಲಿ ಚಿನ್ನದ ಪದಕ ,ಜೊತೆಗೆ ಇಂಗ್ಲಿಷ್ ನಲ್ಲೂ ಸ್ನಾತಕೋತ್ತರ ಪದವಿ. ಹಿಂದಿಯ ಮೇಲೂ ಸಂಪೂರ್ಣ ಹತೋಟಿ ಫ್ರೆಂಚ್ ಮತ್ತು ತೆಲುಗುಭಾಷೆಗಳ  ಪರಿಚಯವೂ ಉಂಟು . ಕನ್ನಡದಿಂದ ಇಂಗ್ಲಿಷ್‌, ಇಂಗ್ಲಿಷ್‌ನಿಂದ ಕನ್ನಡ ಅನುವಾದ ಮಾಡುವುದು ನೀರುಕುಡಿದಂತೆ ,ಸುಮಾರು ಹನ್ನೆರಡಕ್ಕೂಹೆಚ್ಚು ಅನುವಾದ ಕೃತಿಗಳಿಗೆ ಎಂಟುವಿವಿಧ ಪ್ರಶಸ್ತಿಗಳು, “ಶಾಲ್ಮಲಿ “ಕಾದಂಬರಿ ಅನುವಾದಕ್ಕೆ ಕರ್ನಾಟಕ ಅನುವಾದ ಅಕಾಡಮಿಯ ಪ್ರಶಸ್ತಿ  ಅವರದು ಪದವಿಯಲ್ಲಿ ವಿಜ್ಞಾನದ ಅಧ್ಯಯನ. ಇದರಿಂದ ಅವರ ಕೃತಿಗಳಲ್ಲಿ ಬರಿ ಭಾವುಕತೆಗೆ ಮಣೆಹಾಕದೆ ವೈಜ್ಞಾನಿಕ ವಿಶ್ಲೇಷಣೆಗೆ ಆದ್ಯತೆ. ಇನ್ನೇನು ಬೇಕು ಉತ್ತಮ ಅನುವಾದ ಹೊರತರಲು ಅರ್ಹತೆ. ಅದರ ಮೇಲೆ ಸ್ವತಃ ಸೃಜನ ಶೀಲ ಬರಹದ ಗೀಳು.  ಕಥಾ ಸಂಕಲನ, ಕಾದಂಬರಿ , ನಾಟಕ, ಪ್ರಬಂಧ ಕಾವ್ಯ, ವಿಮರ್ಶೆ ಹೀಗೆ ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿ ಹೆಜ್ಜೆ ಗುರುತು. ಪ್ರಶಶ್ತಿ
ಪ್ರಶಸ್ತಿ ವಿಜೇತ   “ ಏನ ಹೇಳಲಿ ಗೆಳೆಯಾ,ಮತ್ತು “ ಹಾಡೇನ ಪಾಡೇನ  “,ಸೇರಿದಂತೆ ಎಂಟು ಕವನ ಸಂಕಲನ, ಹೊರತಂದಿರುವ ಹತ್ತು ಕಥಾಸಂಕಲನಗಳಲ್ಲಿ , ಕನ್ನಡ ಸಾಹಿತ್ಯ ಪರಿಷತ್‌ಪ್ರಶಸ್ತಿಯೊಂದಿಗೆ ಎಂಟು ವಿವಿಧ ಪ್ರಶಸ್ತಿಪಡೆದಿವೆ. ಅವರು ರಚಿಸಿದ ೧೦ ನಾಟಕಗಳಲ್ಲಿ  ಗೋರೂರು ಪ್ರಶಸ್ತಿಸೇರಿದಂತೆ ಸುಮಾರು ೪ ಪ್ರಶಸ್ತಿಗಳು ಬಂದಿವೆ.,  ಕಾದಂಬರಿ, ಕಥಾ ಸಂಕಲನ ಮತ್ತು ಪ್ರವಾಸಕಥನಗಳೂ  ಪ್ರಶಸ್ತಿ ಭಾಜನವಾಗಿವ.  ಸಾಹಿತ್ಯ ಸಾಧನೆಗೆ ಕೆಂಪೆ ಗೌಡ ಪ್ರಶಸ್ತಿ ಮತ್ತು ಅತ್ತಿಮಬ್ಬೆ ಪ್ರಶಸ್ತಿ ಗಳು ಸಂದಿವೆ.
ಎಪ್ಪತ್ತಕೂ ಹೆಚ್ಚು ಕೃತಿಗಳನ್ನು ರಚಿಸಿ ಅದರಲ್ಲಿ ಇಪ್ಪತ್ತಕ್ಕೂ ಅಧಿಕ ಪ್ರಶಸ್ತಿಗಳನ್ನು ಪಡೆದ ಅವರ ಸಾಧನೆಯ ಹಿನ್ನೆಲೆ ಕುರಿತು ಕುತೂಹಲ ಮೂಡುವುದು ಸಹಜ. ಅಮಿತ ಕಾವ್ಯದ್ರವ್ಯಹೊಂದಲು ಅವರ ಅಸಾಧರಣ ಜೀವ ದ್ರವ್ಯವೇ ಕಾರಣ ಎನ್ನಬಹುದು.ಅವರು ಜನಿಸಿದುದು ಬೆಂಗಳೂರಿನ ಮಧ್ಯಮ ದರ್ಜೆಯ ಕುಟುಂಬ ಒಂದರಲ್ಲಿ. ತಂದೆ ಸಿ ಟಿ ಸೀತಾರಾಂ, ತಾಯಿಲಕ್ಷ್ಮಿ ನಾಂಚಾರ್‌ ದಂಪತಿಗಳ ಮೂರನೆಯ ಮಗುವಾಗಿ ೧೯೪೭ ಏಪ್ರಿಲ್‌ನಲ್ಲಿ   ಜನನ. ಬೆನ್ನಿಗೆ ಇಬ್ಬರು ತಮ್ಮಂದಿರು, ಎಳೆ ವಯಸ್ಸಿನಲ್ಲಿಯೇ ತಂದೆ ತೀರಿದರು...ಹಿರಿಯಕ್ಕನೇ ಖಾಸಗಿ ಪಾಠ ಹೇಳಿ ಮನೆವಾರ್ತೆ ನೋಡಿಕೊಳ್ಳುವ ಪರಿಸ್ಥಿತಿ. ಪ್ರಾಥಮಿಕ ಮತ್ತು ಹೈಸ್ಕೂಲ್‌ ಶಿಕ್ಷಣ ಕಾರ್ಪೊರೇಷನ್‌ಶಾಲೆಯಲ್ಲಿ .ಗುಬ್ಬಿ ಕಂಪನಿ ರಂಗ ನಟ ಮತ್ತು ಚಿತ್ರ ನಟರಾಗಿದ್ದ ಚಿಕ್ಕಪ್ಪ ಸಿ.ಟಿ.ಶೇಷಾಚಲಂ ಅವರಿಂದ ಕಲೆಯ, ಸಾಹಿತ್ಯದ ನಂಟು. ಆಂಟಿತು. ಹೈಸ್ಕೂಲು ಓದುವಾಗಲೇ ಬಿಡುವಿನಲ್ಲಿ ಮನೆಪಾಠ ಹೇಳಿ ಸಂಸಾರ ನೊಗಕ್ಕೆ  ಹೆಗಲು ಕೊಡುವ ಕೆಲಸ ಪದವಿ ಪ್ರಾಧ್ಯಾಪಕಿಯಾಗಿ  ೨೦೦೩ ರಲ್ಲಿ ನಿವೃತ್ತರಾಗುವವರೆಗೂ ಮುಂದುವರೆದಿದೆ. ಬಿ.ಎಸ್‌.ಸಿ ಮುಗಿಸಿ ಓದಿದ ಶಾಲೆಯಲ್ಲಿ ಅರೆಕಾಲಿಕ ವಿಜ್ಞಾನ ಶಿಕ್ಷಕಿಯಾಗಿ ಕಾರ್ಯನಿರ್ವಹಣೆ .ಆದರೆ ಜ್ಞಾನ ದಾಹ ಇಂಗಿಸಲು ಎಂ ಎ. ಆದ್ಯಯನ.. ಕಲಿಕೆ ಗಳಿಕೆ ಒಟ್ಟೊಟ್ಟಿಗೆ ನಡೆಸಿ ಸೆಂಟ್ರಲ್‌ ಕಾಲೇಜಿನಲ್ಲಿ ಕನ್ನಡ ಎಂ ಎ ಯಲ್ಲಿ ಸುವರ್ಣ ಪದಕ ಪಡೆದರು. .ವಿದ್ಯಾರ್ಥಿ ಜೀವನದುದ್ದಕ್ಕೂ ಗುರುಗಳ ಕಣ್ಮಮಣಿ. ಕಾರಣ ಸಾಹಿತ್ಯ, ಸಂಗೀತ, ನಾಟಕ, ಸಂಶೋಧನೆಯಲ್ಲಿನ  ಆಸಕ್ತಿ . ಬಿ.ವಿ ಕಾರಂತರ ಗರಡಿಯಲ್ಲ ನಾಟಕರಂಗದಲ್ಲಿ ಮಿಂಚಿದರೆ ಮತ್ತು ಡಾ. ಜಿ.ಎಸ್. ಎಸ್‌ ಮಾರ್ಗದರ್ಶನದಲ್ಲಿ ಪಿ .ಎಚ್‌ಡಿ. ಪದವಿ . ಪ್ರತಿಷ್ಠಿತ ಎಂ ಇ.ಎಸ್‌. ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ ಹುದ್ದೆ ೧೯೬೯ ರಲ್ಲಿ  ದೊರೆಯಿತು. ಅಲ್ಲಿಂದ ಆರ್ಥಿಕ ಸ್ಥಿರತೆ ಬಂತೆಂದು ಸಾಹಿತ್ಯದ ತುಡಿತ ಕಡಿಮೆಯಾಗಲಿಲ್ಲ  ಎಲ್ಲ ರಂಗಗಳಲ್ಲೂ ನಾಗಾಲೋಟದ ಸಾಧನೆ . ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಶಬ್ದ ಚಿತ್ರ ,ರೂಪಕ, ನಾಟಕಗಳ ರಚನೆ ಮತ್ತು ಪ್ರಸ್ತುತಿ. ಡಾ. ವಿಜಯಾ ಅವರನ್ನು  ೧೯೭೫  ರಲ್ಲಿ ಮದುವೆಯಾದ ಶ್ರೀ. ಎಸ್‌ ಸುಬ್ಬರಾಜ್‌ ವೃತ್ತಿಯಿಂದ ಇಂಜನಿಯರ್‌ ಆದರೂ ಪ್ರವೃತ್ತಿಯಿಂದ ಸಾಹಿತ್ಯ ಪ್ರೇಮಿ. ಅದರ ಫಲ ಸಾಹಿತ್ಯ ಸಾಧನೆಯ ಹುರುಪಿನ ಹೆಚ್ಚಳ.. ಮಗಳು ಮೃಣಾಲಿನಿ ಆಗಮನವೂ ಅವರಿಗೆ ಅನುಕೂಲ ದಾಂಪತ್ಯದಿಂದಾಗಿ ಆತಂಕಕ್ಕೆ ಕಾರಣವಾಗಲಿಲ್ಲ
ಸಾಮಾಜಿಕ ರಂಗದಲ್ಲೂ ಕ್ರಿಯಾಶೀಲೆ. ಸಾಹಿತ್ಯಪರಿಷತ್ತಿನ  ’ಕನ್ನಡ ನುಡಿ’ ಪತ್ರಿಕೆಯ ಪ್ರಥಮ ಮಹಿಳಾಸಂಪಾದಕಿ. ಕರ್ನಾಟಕ ಲೇಖಕಿಯರ ಸಂಘದ ಉಪಾದ್ಯಕ್ಷೆ. ಹಲವು ಸಂಘ ಸಂಸ್ಥೆಗಳಲ್ಲಿ ಸದಸ್ಯೆ. ಸಾಮಾಜಿಕ ರಂಗದಲ್ಲೂ ಆಸಕ್ತಿ.  ಇಷ್ಟೆಲ್ಲ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗಗಳಲ್ಲಿ ನಿರಂತರ ದುಡಿಮೆಯ ದಟ್ಟವಾದ ಅನುಭವಗಳನ್ನು ದಿಟ್ಟವಾಗಿ ಬರಹದಲ್ಲಿ ಮೂಡಿಸಿರುವುದೇ ಅವರ ಸಾಹಿತ್ಯದ ಗಟ್ಟಿತನದ  ಗುಟ್ಟು. ಇಷ್ಟೆಲ್ಲ ಕಾರ್ಯಭಾರದಲ್ಲೂ  ತಮ್ಮ ಶೈಕ್ಷಣಿಕೆ ಬದ್ದತೆಗೂ ಆದ್ಯತೆ . ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಗುರು. ಕಾಲೇಜು ಶಿಕ್ಷಣ ಇಲಾಖೆಯಿಂದ ಆದರ್ಶ ಶಿಕ್ಷಕಿ ಪ್ರಶಸ್ತಿ. ನಿವೃತ್ತರಾದಮೇಲೂ ಶೇಷಾದ್ರಿಪುರಂ ಸ್ನಾತಕೋತ್ತರ ಕೇಂದ್ರದಲ್ಲಿ ಮತ್ತು ಇಂಡಿಯನ್‌ ಇನಸ್ಟಿಟ್ಯೂ ಅಫ್ ಆಯುರ್ವೇದಿಕ್‌ ಸ್ಟಡೀಸ್‌ನಲ್ಲಿ  ಅತಿಥಿ ಉಪನ್ಯಾಸಕರಾಗಿ ಸೇವೆ, ಬಿ. ಎಂ ಶ್ರೀ.ಪ್ರತಿಷ್ಠಾನದಲ್ಲಿ ಎಂ.ಫಿಲ್‌.ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಬೆಂಗಳೂರು ವಿಶ್ವವಿದ್ಯಾಲಯದ ‘ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ , ಹಲವು ಪ್ರಶಸ್ತಿ ಸಮಿತಿಗಳಲ್ಲಿ ಸೇವೆ. ಹೀಗೆ ದಣಿವರಿಯದ ದುಡಿಮೆ ಅವರದು.ಬಹುಮುಖಿ ಸಾಧಕಿಯಾದ ಡಾ. ವಿಜಯಾಸುಬ್ಬರಾಜ್‌ ಅವರ ಇತ್ತೀಚಿನ ಕೃತಿ ’ ಜನಮೇಜಯನ ನಾಗಯಜ್ಞ ಲೋಕಾರ್ಪಣೆಯಾಗುತ್ತಿದೆ.

-ಎಚ್‌..ಶೇಷಗಿರಿರಾವ್‌


Friday, August 2, 2013

ಆರರಿಂದ ಅರವತ್ತು .ನಿವೃತ್ತಿಯ ಅಂಚಿನಲ್ಲಿ

  ಕಾಲೇಜು ದಿನಾಚರಣೆ   ಅಂದರೆ ಕೇಳುವ ಹಾಗೆ ಇಲ್ಲ! 

ನಿವೃತ್ತನಾಗಲು ೧೦ ತಿಂಗಳು ಇರುವಾಗ ಬೆಂಗಳೂರು ಗ್ರಾಮಾಂತರದ ಸ್ವತಂತ್ರ ಪದವಿ ಪೂರ್ವ ಕಾಲೇಜಿಗೆ ವರ್ಗ ವಾಯಿತು. ಅದು ಬಹುದೊಡ್ಡ ಕಾಲೇಜು. ಅಲ್ಲಿ ೧೫೦೦ಕ್ಕು ಮಿಕ್ಕಿ ವಿದ್ಯಾರ್ಥಿಗಳು.ಹೆಚ್ಚಿನವರು  ಹಳ್ಳಿಗರು. ಅವರಲ್ಲಿ ಧಾಡಸಿತನ ಧಾರಾಳ. ಮುಗ್ದರು. ಆದರೆ ಬಹು ಬೇಗ ಇತರರ ಪ್ರಭಾವಕ್ಕೆ ಒಳಗಾಗುವರು.ನಾನು ಹೋದಕೂಡಲೆ ಗಮನಕ್ಕೆ ಬಂದಿದ್ದು ಪ್ರಾಂಶುಪಾಲರ ಹೆಸರಿನಲ್ಲಿನ ಸುಮಾರು ಎರಡು ಲಕ್ಷಕ್ಕೂ ಹೆಚ್ಚಿ ಹಣ. ದಾಖಲೆ ನೋಡಲಾಗಿ ಪ್ರತಿವರ್ಷ ಕಾಲೇಜು ಅಭಿವೃದ್ಧಿ ಶುಲ್ಕ ಎಂದು ತಲಾ ನೂರು ರೂಪಾಯಿ ಮತ್ತು ವಿದ್ಯಾರ್ಥಿ ಸಂಘಕ್ಕೆ ಅರವತ್ತು ರೂಪಾಯಿ ವಸೂಲಾಗುತಿತ್ತು. ಅಂದರೆ ಯಾವುದನ್ನೂ ನಗದು ಪುಸ್ತಕಕ್ಕೆ ತೆಗೆದು ಕೊಂಡಿಲ್ಲ ಹಾಗೂ ವೆಚ್ಚದ ಲೆಕ್ಕಪತ್ರ ಇಲ್ಲ. ಶಾಲಾಭಿವೃದ್ಧಿ ಸಮಿತಿ ಹಣ ೧.೫ ಲಕ್ಷ ಮತ್ತು ವಿದ್ಯಾರ್ಥಿ ಸಂಘದ ಹಣ ೭೫ ಸಾವಿರ. ಹಿಂದಿನವರು ಹಣ ಖರ್ಚು ಮಾಡಿದ್ದರಂತೆ. ಅವರ ವಿವೇಚನೆಗೆ ಅನುಸಾರ.
ನಾನು ಮಾಡಿದ ಮೊದಲ ಕೆಲಸವೆಂದರೆ ಸರಕಾರೇತರ ನಗದು ಪುಸ್ತಕದಲ್ಲಿ ಹಣ ನಮೂದಿಸಿದ್ದು. ನಂತರ   ಶಾಲಾಭಿವೃದ್ಧಿ ಸಮಿತಿಯ ಸಭೆ ಕರೆದು ವಿಷಯ ತಿಳಿಸಿ ಕಾಲೇಜು ಅಭಿವೃದ್ಧಿಯ ಮೊತ್ತವನ್ನು ಪ್ರಾಂಶುಪಾಲರು ಮತ್ತು ಅಭಿವೃದ್ಧಿ ಸಮಿತಿಯ ಅಧ್ಯಕ್ಷರ ಹೆಸರಲ್ಲಿ ಜಂಟಿಖಾತೆಯಲ್ಲಿ  ಬ್ಯಾಂಕಿನಲ್ಲಿ  ಇಡಲಾಯಿತು. ಕಾಲೇಜಿಗೆ ಅಗತ್ಯ ವಾದ ಬಾಬ್ತಿಗೆ ಸಿಬ್ಬಂದಿ ಮತ್ತು ಅಭಿವೃದ್ಧಿ ಸಮಿತಿಯ ಸಲಹೆ ಪಡೆದು ವೆಚ್ಚಮಾಡಲು ತೀರ್ಮಾನವಾಯಿತು. ಇದರಿಂದ ನಮ್ಮಕೆಲ ಉಪನ್ಯಾಸಕರಿಗೆ ಮತ್ತು  ಲಿಪಿಕ ನೌಕರರಿಗೆ ತುಸು ಅಸಮಾಧಾನ ವಾಯಿತು. ಇದುವರೆಗೂ ಪ್ರಾಂಶುಪಾಲರಿಗೆ ಇದ್ದ ಪೂರ್ಣ ಅಧಿಕಾರವನ್ನು ಸಾರ್ವ ಜನಿಕರೊಂದಿಗೆ ಹಂಚಿಕೊಂಡಾಗಿದೆ.. ಹಿಂದಿನವರ ವಿಧಾನವೆ ಸರಿಯಾಗಿತ್ತು. ಎಂದು ವಾದಿಸಿದರು.
ಹಣ ಸಾರ್ವ ಜನಿಕರಾದ್ದರಿಂದ ಹೊಣೆಯೂ ಅವರದೆ. ಅಲ್ಲದೆ ನಾವು  ಅವರು ಹೇಳಿದಂತೆ ವೆಚ್ಚ ಮಾಡುವುದಿಲ್ಲ. ಅವರಿಗೆ ತಿಳಿಸಿ ನಾವು ಖರ್ಚು ಮಾಡುವೆವು. ಅದರಿಂದ ದುರ್ಬಳಕೆಗೆ ಅವಕಾಶವಿಲ್ಲ. ಎಂದು ಸಮಜಾಯಿಷಿ ಹೇಳಿ ಸುಮ್ಮನಾಗಿಸಿದೆ. ಅಭಿವೃದ್ಧಿ ಸಮಿತಿಯವರಂತೂ ಈ ಪಾರದರ್ಶಕತೆಯನ್ನು ಮನಸಾರೆ ಮೆಚ್ಚಿದರು. ಅಗತ್ಯವಾದರೆ ತಾವೂ ಸಹಾಯ ಹಸ್ತ ನೀಡುವುದಾಗಿ ಭರವಸೆ ನೀಡಿದರು.
ಕೆಲವೆಎರಡೆ ತಿಂಗಳಲ್ಲೆ ಕಾಲೇಜು ದಿನಾ ಆಚರಣೆ ಬಂದಿತು. ಪ್ರತಿ ಹುಡಗರೂ ಪ್ರವೇಶ ಸಮಯದಲ್ಲೆ ಅದಕ್ಕೆ ಶುಲ್ಕ ನೀಡಿರುತಿದ್ದರು. ಲಕ್ಷದ ಮೇಲೆ ಸಂಗ್ರಹವಾದ ಮೊತ್ತವನ್ನು ಒಂದೆ ದಿನ ದಲ್ಲಿ ಚಿಂದಿ ಉಡಾಯಿಸುತಿದ್ದರು.ಅಲ್ಲಿ ಚುನಾಯಿತ ಪ್ರತಿನಿಧಿಗಳು ಇರಲಿಲ್ಲ. ಆದರೆ ತರಗತಿಯ ಪ್ರತಿನಿಧಿಗಳ ಸಭೆ ಕರೆದು ಕಾರ್ಯಕ್ರಮ ನಿಗದಿ ಮಾಡುವರು.ಅಲ್ಲಿನ ಪದ್ದತಿ ಅರಿಯಲು ಹಿಂದಿನ ವರ್ಷದ ಕಡತ ತರಿಸಿ ನೋಡಿದೆ.ಪ್ರತಿವರ್ಷ ಐದು ಸಮಿತಿ ಮಾಡುವರು. ಅದಕ್ಕೆ ಒಬ್ಬ ಉಪನ್ಯಾಸಕರ ಹಿರಿತನದಲ್ಲಿ ಐದುಜನ ವಿದ್ಯಾರ್ಥಿಪ್ರತಿನಿಧಿಗಳಿರುವರು.  ಹಣವನ್ನು ಸಮಿತಿಗಳಿಗೆ ಹಂಚಿಕೆ ಮಾಡಲಾಗುವುದು. ಅದನ್ನು ಅವರು ಬಳಸಿಕೊಂಡು ನಿಗದಿತ ಹೊಣೆ ನಿರ್ವಹಿಸ ಬೇಕಿತ್ತು ಅಯಾ ಸಮಿತಿಯದೆ ಎಲ್ಲ ಹೊಣೆ. ಅವನರನು ಯಾರೂ ಪ್ರಶ್ನಿಸುವಹಾಗಿರಲಿಲ್ಲ.  ನನಗೆ ಈ ರೀತಿಯ ಸಂಪೂರ್ಣ ಸ್ವಾತಂತ್ರ್ಯ  ಸರಿಕಾಣಲಿಲ್ಲ. ಸಾಮೂಹಿಕ ಹೊಣೆ ಗಾರಿಕೆ ಇರಬೇಕು ಜತೆಗೆ ಮಾಡಿದ ಖರ್ಚಿಗೆ ಉತ್ತರದಾಯಿತ್ವ ಇರಬೇಕೆನ್ನುವುದು ನನ್ನ ನಂಬಿಕೆ.ವಿದ್ಯಾರ್ಥಿಗಳ ಹಣ ಅವರು ಹೇಗೆ ಬೇಕಾದರೂ ಖರ್ಚುಮಾಡಲಿ ಎನ್ನುವುದು ಬೆಜವಾಬ್ದಾರಿ ಎನಿಸಿತು. ಅಲ್ಲದೆ ಸಾವಿರಾರು ಜನರ ಹಣ ವನ್ನು ಐದಾರು ಜನರು ಮನ ಬಂದತೆ ತೀರ್ಮಾನ ತೆಗೆದುಕೊಂಡು ಮಾಡುವ ವೆಚ್ಚ ಉಚಿತ ಎನಿಸಲಿಲ್ಲ.
ಎಲ್ಲ ತರಗತಿಗಳ ಪ್ರತಿನಿಧಿಗಳನ್ನು ಸಭೆ ಸೆರಿಸಲಾಯಿತು. ಪ್ರತಿತರಗತಿಗೆ ಒಬ್ಬವಿದ್ಯಾಥಿ ಮತ್ತು ಒಬ್ಬ ವಿದ್ಯಾರ್ಥಿನಿಯರನ್ನು ಅವ್ಹಾನಿಸಲಾತು ಆಹಾರ, ಕ್ರೀಡೆ, ಮನರಂಜನೆ , ರಂಗ ಮಂಟಪ  ಮತ್ತು ಸ್ವಾಗತ ಸಮಿತಿಗಳನ್ನು ಹಿಂದಿನಂತೆಯೆ ರಚಿಸಲಾಯಿತು. ಆದರೆ ಅವರೆಲ್ಲರೂ ಏನು ಮಾಡ ಬೇಕೆನ್ನುವುದನ್ನು ಸರ್ವ ಸಭೆಯಲ್ಲಿ ನಿರ್ಧರಿಸಿದೆವು. ಎಲ್ಲಕ್ಕಿಂತ ಹೆಚ್ಚಾಗಿ ಪ್ರಂಶುಪಾಲರು ಮತ್ತು ಹಿರಿಯ ಇಬ್ಬರು ಉಪನ್ಯಾಸಕರ ಸಮಿತಿಯು ಮೇಲ್ವಿಚಾರಣೆ ನಡೆಸಬೇಕು ಹಾಗೂ ಎಲ್ಲ ಯೋಜನೆಗಳೂ ಅವರಿಂದ ಮಂಜೂರಾತಿ ಪಡೆಯಬೇಕು ಕೊನೆಯಲ್ಲಿ ಲೆಕ್ಕ ಪತ್ರಗಳನ್ನು ಪರಿಶೀಲಿಸ ಬೇಕೆಂದು ನಿರ್ಧರಿಸಲಾಯಿತು.ಸುಮಾರು ಮೂರು ಗಂಟೆಗಳಕಾಲ ನಡೆದ ಸಭೆಯಲ್ಲಿ ಮುಖ್ಯವಾಗಿ ರಂಗ ಮಂಟಪದ ವೆಚ್ಚ ಅತಿ ಎನಿಸಿತು. ಸುಮಾರು ಮೂವತ್ತು ಸಾವಿರ ರೂಪಾಯಿ ಅದಕ್ಕೆ ಖರ್ಚು ಹಾಕಿದ್ದರು. ಏಕೆ ಅಷ್ಟು ಖರ್ಚು ಎಂದಾಗ ಕಾಲೇಜಿನ ಮುಂದೆಯೆ ಷಾಮಿಯಾನ ರಂಗ ಮಂಟಪ ಮತ್ತು ಮತ್ತು ಕುರ್ಚಿಗಳಿಗಾಗಿ ಅಷ್ಟು ಹಣ ಬೇಕೆ ಬೇಕು ಎಂದರು.
ನನಗೆ ಅದು ವ್ಯರ್ಥವಾದ ಖರ್ಚು ಎನಿಸಿತು. ಕಾಲೇಜಿನ ಹತ್ತಿರದಲ್ಲೆ ಒಂದು ಆಧುನಿಕ ಕಲ್ಯಾಣ ಮಂಟಪವಿದೆ. ಅದರ ಮಾಲಕರು ನಮ್ಮ ಭಿವೃದ್ಧಿಸಮಿತಿಯ ಸದಸ್ಯರು. ಅಲ್ಲಿ ಎಲ್ಲ ಸೌಕರ್ಯವಿದೆ. ಅಲ್ಲೆ ಯೇ ಏಕೆ ನಮ್ಮ ಕಾಲೇಜು ದಿನಾಚರಣೆ ಮಾಡ ಬಾರದು ಎಂಬ ಯೋಚನೆ ಬಂತು.ಹಿರಿಯ ಉಪನ್ಯಾಸಕರಜೊತೆ ಹೋಗಿ ಅವರನ್ನು ಸಂಪರ್ಕಿಸಿದೆವು. ಖಾಲಿ ಇರುವ ದಿನ ಉಚಿತ ವಾಗಿ ಕೊಡುವುದಾಗಿ ತಿಳಿಸಿದರು.ವಿದ್ಯುತ್ ಮತ್ತು ಶುಚಿ ಮಾಡುವ ವೆಚ್ಚ ನೀಡ ಬೇಕೆಂದು ತಿಳಿಸಿದರು. ಇದರಿಂದ ನಮಗೆ ಕನಿಷ್ಟ ೨೫೦೦೦ ರೂಪಾಯಿ ಉಳಿತಾಯವಾಯಿತು.
ಮತ್ತೆ ಸಭೆಕರೆದು ಎಲ್ಲರಿಗೂ ವಿಷಯತಿಳಿಸಿ ಕಲ್ಯಾಣ ಮಂಟಪದಲ್ಲಿಯೆ ನಡೆಸಲು ತೀರ್ಮಾನಿಸಲಾಯಿತು.. ನಂತರ ಅತಿಥಿಗಳ ಪ್ರಶ್ನೆ ಬಂದಿತು. ವಿದ್ಯಾರ್ಥಿಗಳು ಸಿನಿಮಾ ನಟರೊಬ್ಬರನ್ನುಮತ್ತು ಮಿಮಿಕ್ರಿ ದಯಾನಂದರನ್ನು  ಕರೆಸಲು ಬಯಸಿದರು. ನಾನು ಜೊತೆಗೆ ಸಾಹಿತಿಯೊಬ್ಬರನ್ನೂ ಕರೆಸಲು ಸಲಹೆ ಮಾಡಿದೆ. ಅದಕ್ಕೆ ಎಲ್ಲರೂ ಒಪ್ಪಿದರು..ಆತಿಥಿಗಳಿಗಾಗಿ ೧೦೦೦ರೂವೆಚ್ಚ ಮಾಡಲು ನಿರ್ಧರಿಸಲಾಯಿತು. ಆ ಹೊಣೆಯನ್ನು ಸಂಬಂಧಿಸಿದ ಸಮಿತಿಗೆ ಒಪ್ಪಿಸಿದೆವು. ಮೂರುದಿನದಲ್ಲಿ ಅವರು ಬಂದ ಹಾದಿಗೆ ಸುಂಕವಿಲ್ಲ ವೆಂದು ಬಂದರು.ಅವರ ಪ್ರಕಾರ ಅತಿಥಿಯಾಗಿ ಬರಲುಶುಲ್ಕ ಬಯಸಿದ್ದರು ಜೊತೆಗೆ ಮಿಮಿಕ್ರಿ ಕಾರ್ಯಕ್ರಮಕ್ಕೆ ಒಂದು ತಂಡವೆ ಬರುವುದಾಗಿಯೂ ಅವರ ಗೌರವ ಸಂಭಾವನೆ ಮತ್ತು ಪ್ರಯಾಣ ವೆಚ್ಚ ನಾವು ನಿಗದಿ ಪಡಿಸಿದ ಹಣಕ್ಕಿಂತ ಎರಡು ಪಟ್ಟು ಆಗುತಿತ್ತು.ಅಂದರೆ ನಮ್ಮಲ್ಲಿರುವ ಹಣದ ಅರ್ಧಕ್ಕೂ ಹೆಚ್ಚು ಭಾಗ ಅತಿಥಿಗಳಿಗೆ ಮೀಸಲಿಡಬೇಕಾಯಿತು.ಈ ರೀತಿಯವೆಚ್ಚ ವ್ಯರ್ಥವೆಂದು ಅವರಿಗೆ ಮನವರಿಕೆ ಮಾಡಿ ಖ್ಯಾತ ಜನಪದಗಾಯಕರೊಬ್ಬರನ್ನು ಹಾಗೂ ಸಾಹಿತಿಗಳೊಬ್ಬರನ್ನೂ ಅತೀಥಿಗಳಾಗಿ ಕರೆಯಲು ತೀರ್ಮಾನಿಸಿದೆವು.ಅದರಂತೆ ಬಿ.ಆರ್‌. ಲಕ್ಷ್ಮಣರಾವ್ ಮತ್ತು ಪಿಚ್ಚಳ್ಳಿ ಶ್ರೀನಿವಾಸ ಅವರು  ಬರಲು ಒಪ್ಪಿಕೊಂಡರು.ದಿನಾಂಕವನ್ನು ನಿಗದಿ ಪಡಿಸಿ ಆಮಂತ್ರಣ ಪತ್ರಿಕೆ ಮುದ್ರಣಕ್ಕೆ ನೀಡಲಾಯಿತು.
ಈ ಬಾರಿ ವಿದ್ಯಾರ್ಥೀಗಳಿಗೆ ಉಪಹಾರದ ಬದಲು ಊಟವನ್ನ ನೀಡಲು ಜತೆಗೆ ಐಸ್‌ಕ್ರೀಮ್‌ ಕೊಡಬಹುದು ಎನಿಸಿತು. ಹೇಗಿದ್ದರೂ ಹಣ ಇತ್ತು. ಅಲ್ಲದೆ ವಿವಿಧ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಉತ್ತಮವಾದ ಬಹುಮಾನಕೊಡಲೂ ಸಾಧ್ಯವಿತ್ತು. ಅದಕ್ಕಾಗಿ ಸಿಟಿ ಮಾರುಕಟ್ಟೆಯಲ್ಲಿನ ಸಗಟು ವ್ಯಾಪಾರಿಗಳ ಹತ್ತಿರ ಖರೀದಿಗೆ ಹೋದೆವು.ಮೊದಲು ಸಂಬಂಧಿಸಿದ ಉಪನ್ಯಾಸಕರು ಒಬ್ಬರೆ ಈ ಕಾರ್ಯ ನಿರ್ವಹಿಸುತಿದ್ದರು. ಆದರೆ ಈಸಲ ಇಂಗ್ಲಿಷ್‌ ಉಪನ್ಯಾಸಕರು , ಸಮಿತಿಯ ಸದಸ್ಯರು ಜತೆಗೆ ನಾನೂ ಸೇರಿ ಎಲ್ಲ ಕಡೆ ಜಾಲಾಡಿ ಕಣ್ಣಿಗೆ ಕಾಣುವಂತಿರುವ ಫಲಕಗಳನ್ನು ಕರಂಡಗಳನ್ನೂ ಬಹುಮಾನವಾಗಿ ಕೊಡಲು ಆರಿಸಿದೆವು. ಅದನ್ನು ಕಂಡ ನಮ್ಮ ಸಿಬ್ಬಂದಿ ಈ ವರೆಗೆ ಇಂಥಹ ಬಹುಮಾನ ನೀಡಲೆ ಇಲ್ಲ ಎಂದು ಬೆರಗಾದರು.
ಅತ್ಯತ್ತಮ ಉಪಹಾರ ಮತ್ತು ಬಹುಮಾನ ನೀಡಿದರೂ ಇತರೆ ಎಲ್ಲ ಖರ್ಚು ಕಳೆದರೂ ೨೦-೨೫ ಸಾವಿರ ಉಳಿತಾಯವಾಗುವದೆಂಬ ಅಂದಾಜು ಇತ್ತು ಕಾರ್ಯ ಕ್ರಮ .ಇನ್ನೂ ಒಂದು ವಾರವಿತ್ತು. ಒಂದುದಿನ ಕಾಲೇಜು ಪ್ರಾರಂಭ ವಾಗುತ್ತಲೆ ವಿದ್ಯಾರ್ಥಿಗಳ ಗುಂಪು ಗೂಡಿ ಘೋಷಣೆ ಕೂಗತೊಡಗಿದರು. ಹೋಗಿ ನೋಡಲಾಗಿ ಅವರು ಕಾಲೇಜು ದಿನಾಚರಣೆಯ ವ್ಯವಸ್ಥೆಯ ಬಗ್ಗೆ ಅಸಮಾಧಾನ ಗೊಂಡಿದ್ದರು.
ಕಾಲೇಜು ದಿನಾಚರಣೆಯನ್ನು ಹಿಂದಿನಂತೆ ಕಾಲೇಜಿನಲ್ಲೆ ಪೆಂಡಾಲು ಹಾಕಿ ಮಾಡ ಬೇಕು ,ಕಲ್ಯಾಣ ಮಂಟಪದಲ್ಲಿ ಮಾಡಿದರೆ ಅವಮಾನ, ಎಂದು ವಾದಿಸಿದರು.ಅವರ ಬೇಡಿಕೆಯನ್ನು ಪರಿಶೀಲಿಸಲು ಪ್ರತಿನಿಧಿಗಳ ಮತ್ತು ಉಪನ್ಯಾಸಕರ ಸಭೆ ಸೇರಿತು.
ಇದು ಬಹಳ ಸಂಧಿಗ್ದ ಸಂದರ್ಭ. ಸಾವಿರಾರು ಜನರನ್ನು ಎದುರುಹಾಕಿಕೊಂಡು ಕಾರ್ಯಕ್ರಮ ಮಾಡಲಾಗದು. ಆದರೆ ಇಗಾಗಲೇ ಆಮಂತ್ರಣ ಪತ್ರಿಕೆ ಮುದ್ರಣವಾಗಿದೆ. ಹಿರಿಯ ಉಪನ್ಯಾಸಕರ ಸಲಹೆ ಕೇಳಿದೆ. ಎಲ್ಲರ ಗಮನಕ್ಕೆ ತಂದು ತೀರ್ಮಾನವಾದ ಮೇಲೂ ಕೊನೆ ಗಳಿಗೆಯಲ್ಲಿ ಏಕೆ ವಿರೋಧ ಎಂದು ಅರ್ಥವಾಗಲಿಲ್ಲ. ಇದು ಒಂದಿಬ್ಬರು ಉಪನ್ಯಾಸಕರ ಕೈ ಚಳಕ ಎಂದು ಗೊತ್ತಾಯಿತು.ಅವರು ಹುಡುಗರಿಗೆ ನಿಮ್ಮ ಹಣ , ನೀವು ಮನ ಬಂದಂತೆ ಖರ್ಚು ಮಾಡಬುದು. ಅದನ್ನು ಬೇಡ ಎನ್ನಲು ಇವರು ಯಾರು? ನೀವು ಸುಮ್ಮನೆ ಇದ್ದರೆ ದಬ್ಬಾಳಿಕೆ ಹೆಚ್ಚಾಗುವುದು. ಈಗ ಪ್ರತಿಭಟಿಸಿ. ಎಂದು ಪ್ರಚೋದನೆ ಮಾಡಿದ್ದರು.ಹಣ ಹೇಗೂ ಇದೆ ಯಾಕೆ ಖರ್ಚು ಮಾಡ ಬಾರದು? ಎಂದು ಅವರ ವಾದ.ಈಗಾಗಲೆ ತಹಬದಿಗೆ ಬರುತ್ತಿರುವ ಕಾಲೇಜಿನ ಮಕ್ಕಳನ್ನು ದಾರಿ ತಪ್ಪಿಸುವ ಹುನ್ನಾರ ಇದಾಗಿತ್ತು.
ಸಭೆ ಸೇರಿತು. ವಿಷಯ ಏನೆಂದು ಕೇಳಿದದಾಗ ಒಂದಿಬ್ಬರು ವಿದ್ಯಾರ್ಥಿಗಳು ಎದ್ದು ನಿಂತು ಸಮಾರಂಭ ಕಾಲೇಜಿನ ಆವರಣದಲ್ಲಿ ಆಗಬೇಕು. ಎಂದರು. ಅವರ ಮಾತನೆಲ್ಲ ಸಾವಧಾನದಿಂದ ಲಿಸಿದೆ. ನಂತರ ಹಿಂದಿನ ಸಭೆಯ ನಡವಳಿಗಳನ್ನು ಓದಲು ಹಿರಿಯ ಉಪನ್ಯಾಸಕರಿಗೆ ಹೇಳಿದೆ. ಅದರಲ್ಲಿ ಸ್ಪಷ್ಟವಾಗಿ ಕಾಲೇಜು ದಿನಾಚರಣೆ ಸಮಾರಂಭವನ್ನು ಕಲ್ಯಾಣ ಮಂಟಪದಲ್ಲಿ ಮಾಡ ಬೇಕೆಂದು ದಾಖಲಾಗಿತ್ತು.
ಅದಕ್ಕೆ ಹಾಜರಿದ್ದ ಎಲ್ಲರ ಸಹಿ ಇತ್ತು. ಈಗ ಪ್ರತಿಭಟಿಸುತಿದ್ದವರೂ ಸಹಿ ಮಾಡಿದ್ದರು. ಆಗ ಎಲ್ಲರೂ ಒಪ್ಪಿ ಕೊನೆ ಕ್ಷಣದಲ್ಲಿ ಬದಲಾಯಿಸಲು ಕಾರಣ ಏನು?ಇದರಿಂದ ಅನುಕೂಲವಾಗಿದೆಯೆ ವಿನಃ ತೊಂದರೆ ಯಾಗಿಲ್ಲ.ಮತ್ತೆ ಯಾಕೆ ಪ್ರತಿರೋಧ ಎಂದು, ಎಂದುಕೇಳಿದೆ. ಎಲ್ಲರೂ ಸುಮ್ಮನೆ ಕುಳಿತು. ಕೊನೆಗ ಒಬ್ಬರು ಎದ್ದುನಿಂತು ನಿಜ ನಾವು ಒಪ್ಪಿ ಸಹಿ ಮಾಡಿದೆವು. ಆದರೆ ಈಗ ಬಹಳ ವಿದ್ಯಾರ್ಥಿಗಳಿಗೆ ಇದು ಸಮ್ಮತವಿಲ್ಲ , ಆದ್ದರಿಂದ ಕಾರ್ಯಕ್ರಮದ ಸ್ಥಳ ಬದಲಾಯಿಸಿ, ಹೆಚ್ಚಿಗೆ ವೆಚ್ಚವಾರೂ ಸರಿ ನಾವು ಭರಿಸಲು ಸಿದ್ಧ ಎಂದರು.
ಪರಿಸ್ಥಿತಿ ಕೈ ಮೀರಿದೆ ಎನಿಸಿತು. ಸಭೆಯಲ್ಲಿ ಸರ್ವರೂ ತೀರ್ಮಾನೆ ತೆಗೆದುಕೊಂಡ ಮೇಲೆ ಅದರಂತೆ ನಡೆಯಬೇಕಾದುದು ನ್ಯಾಯಸಮ್ಮತ. ಅಲ್ಲದೆ ಈಗಾಗಲೆ ಆಮಂತ್ರಣ ಪ[ತ್ರಿಕೆ ಮುದ್ರಿತವಾಗಿದೆ. ಕೆಲವರಿಗೆ ಹಂಚಿಯೂ ಆಗಿದೆ. ಈಗ ಸಕಾರಣವಿಲ್ಲದೆ ಬದಲಾವಣೆ ತರುವುದು ಶೋಭೆಯಲ್ಲ. ಅದು ಪ್ರಾಂಶುಪಾಲರ ದಕ್ಷತೆಯ ಬಗ್ಗೆ ಶಂಕೆ ಮೂಡಿಸುವುದು.  ಆದರೆ ಇದು ಪ್ರಜಾಪ್ರಭುತ್ವ . ಬಹುಮತಕ್ಕೆ ಮನ್ನಣೆ ಸಿಗಬೇಕು.ನೀವೆಲ್ಲ ಒಂದು ಕೆಲಸ ಮಾಡಿ. ನಮ್ಮ ಗೆಳೆಯರಿಗೆ ಹೇಳಿ.ಅವರ ಮಾತಿನಂತೆ ಕಾರ್ಯಕ್ರಮದ ಸ್ಥಳ ಬದಲಾಗ ಬೇಕಾದರೆ  ಹೊಸ ಆಮಂತ್ರಣ ಪತ್ರಿಕೆ ಮಾಡಿಸಬೇಕು.
ಅದಕ್ಕೇನು ಸಾರ್‌ ಮಾಡಿಸಿದರಾಯಿತು ಎಂದು, ಖುಷಿಯಿಂದ ಒಬ್ಬಿಬ್ಬ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಹೇಳಿದರು..
ಅದಕ್ಕೆ ನನ್ನದೇನೂ ಅಭ್ಯಂತರವಿಲ್ಲ. ಬರಿ ಸ್ಥಳ ಮಾತ್ರ ಬದಲಾಯಿಸಿದರೆ ಆಗದು. . ಅದರಲ್ಲಿ ಪ್ರಾಂಶುಪಾಲರ ಹೆಸರೂ ಇರಬಾರದು. ನಾನು ಈ ವರೆಗೆ ಎಂದೂ ಕೊಟ್ಟ ಮಾತಿಗೆ ತಪ್ಪಿ ನಡೆಯುವವನಲ್ಲ. ಆದರೆ ಈಗ ನಿಮ್ಮೆಲ್ಲರ ಒತ್ತಾಯಕ್ಕೆ ಸರ್ವಸಮ್ಮತವಾದ ತೀರ್ಮಾನ ಬದಲಾಯಿಸ ಬೇಕಾಗಿದೆ..ಅದರಂತೆ ಮಾಡೋಣ. ಆದರೆ ನಾನು ಇದರಲ್ಲಿ ಭಾಗಿಯಾಗುವುದಿಲ್ಲ. ನನಗೆ ಹೇಗೂ ನಿವೃತ್ತನಾಗಲು ಇನ್ನು ನಾಲಕ್ಕೆ ತಿಂಗಳಿದೆ. ರಜೆಯ ಮೇಲೆ ಹೋಗುವೆ. ಮತ್ತೆ ಕಾಲೇಜಿಗೆ ಬರುವುದಿಲ್ಲ. ಹಿರಿಯ ಉಪನ್ಯಾಸಕರ ನೇತೃತ್ವದಲ್ಲಿ ಹೇಗೆ ಬೇಕಾದರೂ ನಡೆಸಿ ನನಗೆ ಒಪ್ಪಿಗೆಇದೆ.. ವಿದ್ಯಾರ್ಥಿಗಳ ಸಂತೋಷ ಮುಖ್ಯ. . ಈ ವಿಷಯವನ್ನು ನಿಮ್ಮ ಗೆಳೆಯರಿಗೆ ಹೇಳಿ ನಿಮ್ಮ ಅಭಿಪ್ರಾಯ ತಿಳಿಸಿದರೆ ನನಗೆ ಇಂದೆ ಕೆಲಸದ ಕೊನೆಯ ದಿನ.’ ಇಷ್ಟು ಹೇಳಿ ನಾನು ಸುಮ್ಮನೆ ಕುಳಿತೆ
ಸಭೆಯಲ್ಲಿ ಎಲ್ಲರೂ ಗರ ಬಡಿದಂತೆ ಕುಳಿತಿದ್ದರು.ನಂತರ ತರಗತಿಯ ಉಪನ್ಯಾಸಕರನ್ನು ಕುರಿತು ಹೇಳಿದೆ. ನೀವು ತರಗತಿಯ ಪ್ರತಿನಿಧಿಯ ಜತೆ ಹೋಗಿ ಮಕ್ಕಳಿಗೆ ವಿಷಯ ತಿಳಿಸಿ. ಇದಕ್ಕಾಗಿ ಹರತಾಳ , ಚಳುವಳಿ ಅಗತ್ಯವಿಲ್ಲ.ಅವರ ಮಾತೆ ಗೆಲ್ಲಲಿ. ದಯವಿಟ್ಟು ಅರ್ಧಗಂಟೆಯಲ್ಲಿ ಈ ಕೆಲಸ ಮುಗಿಸಿ, ಎಂದೆ.
ಯಾರೂ ತಗ್ಗಿಸಿದ ತಲೆ ಎತ್ತಲಿಲ್ಲ. ಜೋರಾಗಿ ಮಾತನಾಡುತಿದ್ದ ವಿದ್ಯಾರ್ಥಿ ನಾಯಕರಿಗೆ ಹೇಳಿದೆ. ನಿಮ್ಮ ಬೇಡಿಕೆ ನೆರವೇರಿದೆ. ಹೋಗಿ ಎಲ್ಲರಿಗೂ ತಿಳಿಸಿ., ಎಂದೆ.
ಬೇಡ , ಸಾರ್‌. ನೀವಿಲ್ಲದೆ ನಾವು ಸಮಾರಂಭ ಮಾಡುವುದಿಲ್ಲ. ರಜೆ ಹಾಕ ಬೇಡಿ.ಮೊದಲಿನಂತೆಯೆ ಕಾರ್ಯಕ್ರಮ ನಡೆಯಲಿ. ಯಾರೂ ಪ್ರತಿಭಟಿಸುವುದಿಲ್ಲ. ಅದರ ಹೊಣೆ ನಮಗಿರಲಿ.ಯಾರೋ ಹೇಳಿದ ಮಾತು ಕೇಳಿ ಹೀಗಾಯಿತು. ದಯವಿಟ್ಟು ಕ್ಷಮಿಸಿ, ಎಂದು ತಲೆ ತಗ್ಗಿಸಿ ನುಡಿದರು.
ಇದು ನಿಮ್ಮ ಅಭಿಪ್ರಾಯ, ಎಲ್ಲರೂ ಏನೆನ್ನುವರು? ಎಂದೆ.
“  ಮೊದಲಿನಂತೆಯೆ ಕಾರ್ಯಕ್ರಮ ನಡೆಯಲಿ ’ ಎಂದು ಎಲ್ಲರೂ ಒಕ್ಕೊರಲಲ್ಲಿ ಹೇಳಿದರು. ಅದಕ್ಕೆ ಉಪನ್ಯಾಸಕರೂ ದನಿ ಸೇರಿಸಿದ್ದರು.
ಕಾರ್ಯಕ್ರಮ ಅತಿ ಯಶಸ್ವಿಯಾಯಿತು.ಸಮಾರಂಭದಲ್ಲಿ ಮಾತನಾಡಿದ ಶಾಸಕರು ಪ್ರಾಂಶುಪಾಲರು ಬಹುಗಟ್ಟಿ. ತಮ್ಮ ಮಾತೆ ನಡೆಸಿದರು  ಎಂದರು. ಇದೆಲ್ಲವೂ ಅವರ ಗಮನಕ್ಕೆ ಬಂದಿರುವುದು ಸ್ಪಷ್ಟವಾಗಿತ್ತು. ಅದು ಹೊಗಳಿಕೆಯೋ, ತೆಗಳಿಕೆಯೋ ತಿಳಿಯಲಿಲ್ಲ.ಇಷ್ಟೆಲ್ಲ  ಅದ್ಧೂರಿಯಾಗಿ ನಡೆದರೂ ಇನ್ನೂ ಇಪ್ಪತೈದು ಸಾವಿರ ರೂಪಾಯಿ ಉಳಿತಾಯವಾಗಿತ್ತು . ಅದೆ ಹಣದಿಂದ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿಗಾಗಿ ಆಕ್ವಾಗಾರ್ಡ ಹಾಕಿಸಿ ಶುದ್ಧವಾದ ನೀರು ಸದಾ ನಾಲಕ್ಕು ಶುದ್ಧೀಕರಿಸಿದ ನಲ್ಲಿಗಳಲ್ಲಿ ಬರುವಂತೆ ವ್ಯವಸ್ಥೆಯಾಯಿತು.ಅದೂ ಈಗಲೂ  ಇದೆ.


Saturday, July 27, 2013

ಆರರಿಂದ ಅರವತ್ತು- ನೀರಿಗಿಂತ ಸಾರೆ ಮುಖ್ಯೆ

ನೀರಿಗಿಂತ ಸಾರೆ ಮುಖ್ಯ(ಕಾರವಾರ)                                 
ನೀರು ಜೀವ ಜಲ.ಮಾನವನ ಮೂಲಭೂತ ಅಗತ್ಯಗಳಲ್ಲಿ ಒಂದು. ಪಂಚಭೂತಗಳಲ್ಲಿ ಇದು ಪ್ರಮುಖವಾದುದೂ ಅಹುದು.ಅದನ್ನು ದೇವರು ಎಂದೂ ಪರಿಗಣಿಸುವವರು ಇರುವರು. ಆದರೆ ದಿನ ನಿತ್ಯದ ಊಟಕ್ಕೆ ಮಾತ್ರ ಬರಿ ನೀರು ಸಾಲದು ಅದಕ್ಕೆ ಸಾರೆ ಬೇಕು. ಎರಡರ ನಡುವೆ ಆಯ್ಕೆ ಮಾಡಿಕೊಳ್ಳಲು ಹೇಳಿರೆ ಬಹುತೇಕರು ಸಾರೆ  ಸರಿ ಎನ್ನುವರು. ಅನೇಕ ಬಾರಿ ಸಾರು ನೀರಿನ ಮೇಲೆ  ಮೇಲುಗೈ ಸಾಧಿಸುವುದು. ಇದು ಸಹಜವೂ ಹೌದು.  .ಅದನ್ನು ಒತ್ತಿ ಹೇಳುವ ಅಗತ್ಯ ನನಗೆ ಕಾರವಾರದಲ್ಲಿನ ಅನುಭವದಿಂದ ಬಂದಿತು. ಸತ್ಯ, ನಿಷ್ಠೆ ವೃತ್ತಿ ಧರ್ಮ ಇವೆಲ್ಲವಕ್ಕೂ ಗೌರವ ಕೊಡಬೇಕಾದುದು ಅಗತ್ಯ. ಆದರೆ ಜಾತಿ, ಬಂಧುತ್ವ ಮತ್ತು ಲಾಭದ ಪ್ರಶ್ನೆ ಬಂದಾಗ ಎಲ್ಲವೂ ಗೌಣ. ಸಾರಿನ ರುಚಿಯ ಮುಂದೆ ಅದರಲ್ಲೂ ಮೀನಿನ ಸಾರಿನ ರುಚಿಯ ಮುಂದೆ ನೀರಿನ ನೆನಪು ಯಾರಿಗೆ ಬೇಕು. ಅದೆ ಗತಿ ತತ್ವ ಮತ್ತು ನಿಷ್ಠೆಗಳಿಗೆ             
ನಾನು ಕಾರವಾರದ ಹತ್ತಿರ ದ ಕಾಲೇಜಿಗೆ ವರ್ಗವಾಗಿ ಹೋದೆ. ಅಲ್ಲಿಯೇ ಮಗನೂ ದಿನಪತ್ರಿಕೆಯೊಂದರ ಜಿಲ್ಲಾಪ್ರತಿನಿಧಿ ಆಗ ಕಾರವಾರದಲ್ಲಿ ಯುವ ಪರ್ತಕರ್ತರ ತಂಡವೆ ಇತ್ತು. ಅವರೆಲ್ಲರಿಗೂ ನಾನು ಅಪ್ಪಾಜಿ. ಅಲ್ಲಿನ ಸ್ಥಳೀಯ ದಿನಪತ್ರಿಕೆಯ ಮಾಲಕ ಮತ್ತು ಸಂಪಾದಕ ಬಹು ಕಷ್ಟ ಪಟ್ಟು  ಮೇಲೆ ಬಂದವನು. ಕರಾವಳಿಯಲ್ಲಿ ಆ ಪತ್ರಿಕೆ ತನ್ನ ನಿರ್ಭೀತ ನಿಲುವಿನಿಂದ ಹೊಸ ಅಲೆಯನ್ನೆ ಹುಟ್ಟುಹಾಕಿತ್ತು.. ಅದರ  ಸಂಸ್ಥಾಪಕ   ಸಂಪಾದಕನಿಗೆ ನಾನು ಬಂದ ಹೊಸದರಲ್ಲಿ ನಡೆದ ಎಲ್ಲ ಘಟನೆಗಳ ಮಾಹಿತಿ ಇತ್ತು. ಉಪನಿರ್ದೇಶಕರ  ರಿಯಾಯತಿ ಅನುಕೂಲ ಪಡೆಯದ ನನ್ನ ಬಗೆಗೆ ವಿಭಿನ್ನ ರಾದರು ಎಂಬ ಗೌರವ ವ್ಯಕ್ತ ಪಡಿಸಿದ. ಅವನ ಶ್ರೀ ಮತಿಯೂ ಶಿಕ್ಷಕಳೆ. ಅವಳಿಗೆ ಆಗಾಗ ನಿನ್ನ ಶಾಲೆಗೂ ಇಂಥಹವರು ಬಂದರೆ ಗೊತ್ತಾಗುವುದು ಎಂದು ಛೇಡಿಸುವನು.ಅವರ ಪತ್ರಿಕೆಯ ಸಂಪಾದಕನಂತೂ ಬಹಳ ಬೇಕಾದವರು. ಸಜ್ಜನನಾದ ವ್ಯಕ್ತಿ.
ನಮ್ಮಕಾಲೇಜಿನಲ್ಲಿ ಇರುವ ಬಹುತೇಕರು ಮೊದಲೆ ತಿಳಿಸಿದಂತೆ ಒಂದೆ ಜನಾಂಗಕ್ಕೆ ಸೇರಿದವರು. ಅದರಲ್ಲೂ   ಅವರು ಜಿಲ್ಲೆಯಲ್ಲಿ ಅಲ್ಪ ಸಂಖ್ಯಾತರಾದರೂ ಅಂಕೋಲ ಮತ್ತು ಕಾರವಾರ  ತಾಲೂಕಗಳಲ್ಲಿ ಪ್ರಬಲರು.ಬಹುತೇಕರು ಸುಶಿಕ್ಷಿತರು ಮತ್ತು ಸರಕಾರಿ ನೌಕರಿಯಲ್ಲಿರುವವರು. ಜತೆಗೆ ಹಿಂದೆ ಅವರು ಕಾದಾಡುವ ಕಲಿಗಳಾಗಿದ್ದರು ಎಂಬ ಪ್ರತೀತಿ. ಅದಕ್ಕೆ ತಕ್ಕಂತೆ ಈಗಲೂ ಮುನ್ನುಗ್ಗುವ ಸ್ವಭಾವ.. ತುಸು ದುಡುಕಿನವರಾದರೂ  ಅವರಲ್ಲಿ  ಒಗ್ಗಟ್ಟು ಬಹಳ.
ಕಾಲೇಜಿನಲ್ಲಿ ಹರತಾಳವಾದ ಮೇಲೆ ನಾನು ಪಾಠ ಮತ್ತು ಪ್ರವಚನಗಳ ಬಗ್ಗೆ ಕಾಳಜಿ ವಹಿಸಿದೆ.  ಪರಿಶೀಲನೆ ಮಾಡಿದಾಗ  ಒಬ್ಬಿಬ್ಬ ಉಪನ್ಯಾಸಕರು ಹಾಜರಿ ಸರಿಯಾಗಿ ಹಾಕುತಿಲ್ಲದಿರುವುದು ಕಂಡುಬಂದಿತು. ಇಂಗ್ಲಿಷ್ಉಪನ್ಯಾಸಕರಂತೂ ತಿಂಗಳು ಗಟ್ಟಲೆ ವಿದ್ಯಾರ್ಥಿಗಳ ಹಾಜರಿ ಹಾಕಿರಲಿಲ್ಲ. ಮಕ್ಕಳಿಗೆ ಪೂರ್ಣ ಸ್ವಾತಂತ್ರ ಕೊಟ್ಟಿದ್ದರು. ಅದರ ಪರಿಣಾಮವೆ ಅವರ ಅಪಾರ ಜನಪ್ರಿಯತೆ.. ಅವರಿಗೆ ಇನ್ನು ಮೇಲಾದರೂ ದಾಖಲೆಗಳನ್ನು ಸೂಕ್ತವಾಗಿ ನಿರ್ವಹಿಸಲು ಸೂಚಿಸಲಾಯಿತು. ಎಲ್ಲ ಶಿಕ್ಷಕರ ಸಭೆ ಕರೆದು ಪಾಠ ಪ್ರವಚನದ ದಾಖಲೆಗಳು ಮತ್ತು ಸಂಸ್ಥೆಯ ಶಾಂತಿ ಮತ್ತು ಸುವ್ಯವಸ್ಥೆಯ ಬಗ್ಗೆ ಸೂಕ್ತ ತಿಳುವಳಿಕೆ ನೀಡಿ ಈ ಮೊದಲು ನಡೆದ ಘಟನೆಯ ಪುನರಾವರ್ತನೆ ಯಾಗದಿರಲು ಕ್ರಮತೆಗೆದುಕೊಳ್ಳ ಲಾಯಿತು. ಇದಾದ ಒಂದೆ ವಾರದಲ್ಲಿ ಉಪನಿರ್ದೇಶಕರು ಭೇಟಿ ನೀಡಿದರು. ಅವರಿಗೆ ದಾಖಲೆಗಳ ಪರಿಶೀಲನೆಯಿಂದ ಸತ್ಯ ಸಂಗತಿ ಗೊತ್ತಾಯಿತು. ಎಲ್ಲರಿಗೂ ಅಶಿಸ್ತಿಗೆ ಕಾರಣರಾದರೆ ಇಲಾಖೆಯ ಕ್ರಮಕ್ಕೆ ಗುರಿಯಾಗಬಹುದೆಂದು ಎಚ್ಚರಿಸಿದರು. ಅವರು ಕಾರವಾರಕ್ಕೆ ಹೋದ ಮೇಲೆ ಅಲ್ಲಿದ್ದ ಪತ್ರಕರ್ತರು ಕಾಲೇಜಿನಲ್ಲಾದ ಘಟನೆಯ ಬಗ್ಗೆ ಕೇಳಿದಾಗ ಅವರು ತಾವು ನೀಡಿದ ಭೇಟಿಯ ವರದಿಕೊಟ್ಟಾಗ ಮಾರನೆ ದಿನ ಪತ್ರಿಕೆಯಲ್ಲಿ ಉಪನ್ಯಾಸಕರೆ ಹೇಗೆ ಪ್ರಚೋದನೆ ನೀಡಿದರು ವಿದ್ಯಾರ್ಥಿಗಳ ಅಶಿಸ್ತಿಗೆ ಕಾರಣರಾದರು ಎಂದು ಅರ್ಥ ಬರುವ ವರದಿ ಪ್ರಕಟವಾಯಿತು.ಅದರ ಬಿಸಿ ವಿಶೇಷವಾಗಿ ಪುರುಷ ಉಪನ್ಯಾಸಕರ ಮೇಲಾಯಿತು. ಅವರನ್ನು ಪರಿಚಿತರೆಲ್ಲ ನೀವು ಕಾಲೇಜಿಗೆ ಹೋಗುವುದು ಪಾಠ ಮಾಡಲೋ ಇಲ್ಲವೆ  ಗಲಭೆ ಮಾಡಿಸಲೋ ಎಂದು ವಿಚಾರಿಸಿದಾಗ ತಲೆ ತಗ್ಗಿಸುವಂತಾಯಿತು.. ಅಂತೂ ಇಂತೂ ಶೈಕ್ಷಣಿಕ ವರ್ಷ ಮುಗಿಯುತ್ತ ಬಂದಿತು.ಪರೀಕ್ಷೆಯಲ್ಲಿ ಕೆಲವರು  ಚದುರಂಗ ಅಡುವುದು ಕಂಡುಬಂದಿತು. ಅದು ಕೂಡದು ಕೊಟ್ಟಡಿ ಮೇಲ್ವಿಚಾರಣೆ ಯನ್ನು ಗಂಭಿರವಾಗಿ ಪರಿಗಣಿಸಲು ತೀಳಿಸಿದೆ. ಆದೆ ಸಮಯದಲ್ಲಿ ಪರೀಕ್ಷೆ ನಡೆಯುವಾಗಲೆ ಉಪನ್ಯಾಸಕರೊಬ್ಬರು ಉಪಹಾರದ ವ್ಯವಸ್ಥೆ ಮಾಡಿದರು. ಪರೀಕ್ಷಾ ಸಮಯ ಮುಗಿದ ಮೇಲೆ ಮಾಡಬಹುದೆಂಬ ಸಲಹೆ ತಳ್ಳಿಹಾಕಿ ನಮ್ಮ ಮಕ್ಕಳು ನಕಲು ಮಾಡುವುದಿಲ್ಲ  ಅಲ್ಲದೆ ಇದು ಪಬ್ಲಿಕ್‌ ಪರೀಕ್ಷೆಯಲ್ಲ ಎಂದು ಉಡಾಫೆಯ ಮಾತು ಕೇಳಿಬಂತು. ಎಲ್ಲರೂ ಒಟ್ಟಿಗೆ ಕುಳಿತು ತಿನ್ನ ಬೇಡಿ ಎಂದು ಸೂಚಿಸಿ ನನ್ನ ಅಸಂತೋಷ ಸೂಚಿಸಲು ನಾನು ಭಾಗಿಯಾಗಲಿಲ್ಲ.. ಬಹುಶಃ ಇದೆ ಅವರ ಅಸಮಧಾನ ಹೆಚ್ಚಲು ಕಾರಣವಾಯಿತು. ಆ ಸಮಯದಲ್ಲಿನಾನು ತುಸು ತಾಳ್ಮೆಯಿಂದ ವರ್ತಿಸಿದ್ದರೆ ವಿಷಯ ದೀರ್ಘಕ್ಕೆ ಹೋಗುತ್ತಿರಲಿಲ್ಲ.
ಹೊಸ ವರ್ಷದ ತರಗತಿಪ್ರಾರಂಭ ವಾದವು. ಯಾಕೋ ಎಲ್ಲ ಸರಿಯಾಗಿಲ್ಲ ಎನಿಸಿತು. ಒಂದೆ ವಾರದಲ್ಲಿ ಇಂಗ್ಲಿಷ್  ಉಪನ್ಯಾಸಕರೊಗೆ  ಅವರಿಗೆ ಹತ್ತಿರವಿದ್ದ ನಗರದ ಕಾಲೇಜಿಗೆ ಪೂರ್ಣವಾಗಿ ನಿಯೋಜನೆಯಾಯಿತು..ಅವರಿಗೆ ಸಂಬಳ ಇಲ್ಲಿ ಕೆಲಸ ಅಲ್ಲಿ.ಉಪನಿರ್ದೇಶಕರನ್ನು ಸಂಪರ್ಕಿಸಿದಾಗ ಹೇಗಿದ್ದರೂ ಅವರು ಅಶಿಸ್ತಿಗೆ ಪ್ರಚೋದನೆ ಕೊಡುವವರು. ಅಲ್ಲದೆ ರಾಜಕೀಯ ಪ್ರಭಾವ ಬಂದಿದೆ. ಅಲ್ಲಿ ಉಪನ್ಯಾಸಕರ ಕೊರತೆ ಇದೆ. . ಹೇಗಿದ್ದರೂ ನಿಮ್ಮವಿಷಯ ಇಂಗ್ಲಿಷ್‌. ನೀವೆ ಪಾಠ ಮಾಡಿ ಎಂದರು.ಅವರನ್ನು ಬಿಡುಗಡೆ ಮಾಡಿ. ಅಲ್ಲಿ ಹೋಗಿ ವರದಿ ಮಾಡಿಕೊಳ್ಳಲಿ ಎಂದು ತಿಳಿಸಿದರು
 ನಾನು ಇದರಿಂದ ತೊಂರೆಯಾಗುವುದು  ದಯಮಾಡಿ ನಿಯೋಜನೆ ರದ್ದು ಮಾಡಿ ಎಂದು ಮನವಿ ಮಾಡಿದೆ..
ಆದೇಶವನ್ನು ಕಳುಹಿಸಿರುವೆ. ಮರು ಮಾತನಾಡದೆ  ಅದನ್ನು ಪಾಲಿಸಿ. ಇಲ್ಲವಾದರೆ ಕ್ರಮತೆಗೆದುಕೊಳ್ಳ ಬೇಕಾಗುವುದು. ಎಂದು ತುಸು ಗಡುಸಾಗಿಯೆ ಹೇಳಿ ಫೋನು  ಕಟ್‌ ಮಾಡಿದರು.
.ನಿಜ ನಾನು ಪಾಠ ಮಾಡುತಿದ್ದೆ. ಆಧರೆ ನಾನು ಅದೆ ತಾನೆ ಶಸ್ತ್ರ ಕ್ರಿಯೆಯಯಿಂದ ಚೇತರಿಸಿಕೊಂಡಿದ್ದೆ.ನನ್ನ ಆರೋಗ್ಯವೂ ಅಷ್ಟು ಚೆನ್ನಾಗಿರಲಿಲ್ಲ.   ಅಲ್ಲದೆ ಉಪನ್ಯಾಸಕರಿಗೆ ಪಾಠ ಕಲಿಸುವ ಹೆಸರಲ್ಲಿ ಅನುಕೂಲ ಮಾಡಿಕೊಟ್ಟದ್ದರು. ಇದರ ಹಿಂದಿನ ಕಾಣದ ಕೈನ ಕೆಲಸ ಗೊತ್ತಾಯಿತು. ಇದಲ್ಲದೆ ಸದಾ ನಯವಾಗಿ ಮಾತನಾಡುವ ಅವರು ಒರಟಾಗಿ ವರ್ತಿಸಿದುದರು ಹಿಂದೆ ಏನೋ ಕಾರಣವಿದೆ ಎನ್ನಿಸಿತು. ನಾನು ಅವರೊಂದಿಗೆ ಹೆಚ್ಚು ವಾದಿಸಲು ಹೋಗಲಿಲ್ಲ. ಆದರೆ ಬೆದರಿಕೆಗೆ ಜಗ್ಗುವ ಜಾಯಮಾನ  ನನ್ನದಲ್ಲ.
ತುಸು ಹೊತ್ತು ಯೋಚನೆ ಮಾಡಿದೆ. ಈ ಅನ್ಯಾಯಕ್ಕೆ ಮಣಿವ ಮಾತೆ ಇರಲಿಲ್ಲ. ಆದರೆ ಏನಾಗ ಬಹುದು. ರಜಾಮಂಜೂರು ಮಾಡಲಕ್ಕಿಲ್ಲ. ವೇತನ ಕೊಡದೆ ಇರಬಹುದು. ಅದಕ್ಕೆ ಸಿದ್ಧ ನಾದರೆ ಮುಗಿಯಿತು. ಅದಕ್ಕಿಂತ ಹೆಚ್ಚು ಏನಾಗಬಹುದು. ಆದರೆ ವಿದ್ಯಾರ್ಥಿಗಳಿಗೆ ನಾನು ಇದ್ಧ ಅನ್ಯಾಯವಾದರೂ ಸಹಿಸಿಕೊಂಡಿರುವುದು ಸ್ವಾಭಿಮಾನಕ್ಕೆ ಧಕ್ಕೆ ತರುವುದು. ಏನಾದರಾಗಲಿ ಧೈರ್ಯವಾಗಿ ಎದುರಿಸಬೇಕು ಎಂದು ನಿರ್ಧರಿಸಿದೆ.  ತಕ್ಷಣ    ಅಲ್ಲಿನ ಸರಕಾರಿ ಆಸ್ಪತ್ರೆಗೆ  ಹೋಗಿ ವೈದ್ಯರಿಂದ ನನ್ನ ಆರೋಗ್ಯ ಪರೀಕ್ಷಿಸಿಕೊಂಡೆ ನನಗೆ ವಿಶ್ರಾಂತಿ ಅಗತ್ಯವಿದೆ ಎಂದು ಪ್ರಮಾಣ ಪತ್ರ ಪಡೆದೆ. ಹೇಗಿದ್ದರೂ  ನನ್ನ ಖಾತೆಯಲ್ಲಿ ಸಾಕಷ್ಟು ರಜೆ ಇದ್ದವು.  ಒಂದು ವರ್ಷದಲ್ಲಿ ನಿವೃತ್ತಿ ಇತ್ತು.ಸದ್ಯಕ್ಕೆ ಮೂರುತಿಂಗಳ ರಜೆ ಅರ್ಜಿಯನ್ನು ಉಪನಿರ್ದೇಶಕರಿಗೆ ಕಳುಹಿಸಿದೆ. ಎರಡೆ ತಾಸಿನಲ್ಲೆ ಅವರಿಂದ ದೂರವಾಣಿ ಕರೆ ಬಂದಿತು. ತಕ್ಷಣವೆ ಅವರಲ್ಲಿಗೆ ಹೋಗಿ ಕಾಣಲು ಸೂಚಿಸಿದರು.ಅಂದು ಮಧ್ಯಾಹವೆ ಕಾಲೇಜಿನಿಂದ ಅವರ ಕಚೇರಿಗೆ ಹೋದೆ.. ಅವರು ಮುಖ ಕೆಂಪು ಮಾಡಿಕೊಂಡು ಕೂತಿದ್ದರು. ಏನು ಪ್ರಿನ್ಸಿಪಾಲರೆ ರಜೆಗೆ  ಅರ್ಜಿ ಹಾಕಿದ್ದೀರಿ, ಎಂದು ಗಡುಸಾಗಿ ಕೇಳಿದರು .
 ಹೌದು ಸಾರ್‌ ನನಗೆ ತೃಪ್ತಿಕರವಾಗಿ  ಎರಡು ತರಗತಿಗಳಿಗೆ ಪಾಠ ಮಾಡಿ ಕಾಲೇಜಿನ ಕೆಲಸ ನಿರ್ವಹಿಸಲು ಆಗದು. ಅದಕ್ಕೆ ಅನಾರೋಗ್ಯವಿದೆ. ಅದಕ್ಕೆ ರಜೆ ಹಾಕಿರುವೆ. ಎಂದೆ.
 ನೀವು ರಜೆ ಅರ್ಜಿ ಕೊಟ್ಟಾಕ್ಷಣ  ಆಗದು  ನಾನು ರಜೆ ಮಂಜೂರು ಮಾಡುವುದಿಲ್ಲ , ಎಂದು ಹೇಳಿದರು. ಅದು ನಿಮಗೆ ಬಿಟ್ಟದ್ದು. ಅಗತ್ಯ ಬಿದ್ದರೆ  ನಿರ್ದೇಶಕರನ್ನು ಸಂಪರ್ಕಿಸುವೆ, .ಏನೆ ಆದರೂ ಕಾಟಾಚಾರಕ್ಕೆ ಕೆಲಸ ಮಾಡುವುದು ನನಗೆ ಆಗದು .ಎಂದೆ.
ಅವರು ಪ್ರಿನ್ಸಿಪಾಲರೆ ನೀವು ಅನುಭವಸ್ಥರು ನನಗಿರುವ ಒತ್ತಡ ಅರ್ಥ ಮಾಡಿಕೊಳ್ಳಿ. ಅವರಿಗೆ ಸ್ಥಳೀಯ ಶಾಸಕರ ಬೆಂಬಲವಿದೆ.ನನ್ನ ಕೈ ಕಟ್ಟಿ ಹಾಕಿರುವುರು. ಅವರನ್ನು ಬಿಡುಗಡೆ ಮಾಡಲೆ ಬೇಕು  ನೀವೆ ಹೇಗಾದರೂ ಈ ಕಗ್ಗಂಟು ಬಿಡಿಸಿ ಎಂದರು.
 ನಾನು ತುಸು ಯೋಚನೆಗೆ ಈಡಾದೆ. ನಾನು ರಜಾ ಹಾಕಿದ ಮೇಲೆ ನೀವೆ  ಬಿಡುಗಡೆ ಮಾಡಿಸಬಹುದು. ಎಂದೆ.
ಆಗ ನಾನು ಇರುವುದಿಲ್ಲ. ಇಂಗ್ಲಿಷ್‌ ಪಾಠ ಮಾಡಲು ಇರುವವರನ್ನು ಬೇರೆ ಕಡೆ ಕಳುಹಿಸಿದರೆ ಜನ ಗಲಾಟೆ ಮಾಡುವರು.ಅದನ್ನು ಸಮರ್ಥಿಸಿಕೊಳ್ಳಲು ಆಗುವುದಿಲ್ಲ. ಎಂದರು
ಸಾರ್  ಹಾಗಿದ್ದರೆ ಒಂದು ಪರಿಹಾರವಿದೆ. ಸದರಿ ಉಪನ್ಯಾಸಕರನ್ನು ವಾರದಲ್ಲಿ ಮೂರುದಿನ ಮಾತ್ರ ನಿಯೋಜನೆ ಮಾಡಿ ಆದೇಶ ಹೊರಡಿಸಿ. ಇಲ್ಲಿ ಮೂರುದಿನ ಪಾಠ ಮಾಡಲಿ. ಇನ್ನುಳಿದ ದಿನ ಹೇಗೋ ಒಂದು ವ್ಯವಸ್ಥೆ ಮಾಡಬಹುದು. ಅದಕ್ಕೆ ನೀವು ಒಪ್ಪಿದರೆ ರಜೆಯ ಮೇಲೆ ಹೋಗದೆ ಕೆಲಸ ನಿರ್ವಹಿಸುವೆ.ಅವರ ಮಾತಿಗೂ ಬೆಲೆ ಕೊಟ್ಟ ಹಾಗಾಗುವುದು. ಜತೆಗೆ ಇಲ್ಲಿನ  ವಿದ್ಯಾರ್ಥಿಗಳಿಗೆ ತೊಂದರೆಯೂ ಆಗದು ಎಂದೆ.
ಅವರು ತುಸು ಯೋಚಿಸಿ  ಗುಮಾಸ್ತರನ್ನು ಕರೆದು ಮಾರ್ಪಡಿಸಿದ ಆದೇಶವನ್ನು ಹೊರಡಿಸಿ ಪ್ರತಿಯನ್ನುನನ್ನ  ಕೈನಲ್ಲಿ ಯೆ ಕೊಟ್ಟು  ಆ ಉಪನ್ಯಾಸಕರನ್ನು ಬಿಡುಗಡೆ ಮಾಡಲು ತಿಳಿಸಿದರು. ನನ್ನ ರಜಾ ಅರ್ಜಿ ವಾಪಸ್ಸು ಕೊಟ್ಟರು.
ಮರುದಿನ ಬಂದು ಮರು ಅದೇಶದ ಮೇರೆಗ ವಾರದಲ್ಲಿ ಮೂರುದಿನ  ಮಾತ್ರ ಅವರ ಊರಿನ ಹತ್ತಿರವೆ ಇರುವ ಕಾಲೇಜಿನಲ್ಲಿ ಕೆಲಸ ಮಾಡಿ . ಇಲ್ಲಿ ಇರುವ ಮೂರುದಿನದಲ್ಲೆ ಪಾಠಪ್ರವಚನಗಳನ್ನು ಕ್ರಮವಾಗಿ ಮಾಡಿ ಮುಗಿಸಲು ಅವರಿಗೆ ಸೂಚನೆ ನೀಡಿ ಬಿಡುಗಡೆ ಮಾಡಿದೆ.. ಅವರಿಗೆ ಇದರಿಂದ  ವಾರಪೂರ್ತಿ ೧೬ ತಾಸುಗಳ ಕೆಲಸದ ಹೊರೆ ಬಿದ್ದಿತು. ಮೊದಲು ಇಲ್ಲಿ ಮಾತ್ರ ವಾರಕ್ಕೆ ಎಂಟು ಗಂಟೆ ಕೆಲಸ ಮಾಡಿ ಆರಾಮಾಗಿದ್ದ ಅವರು ನನಗೆ ಪಾಠ ಕಲಿಸಲು ಹೋಗಿ ಹೆಚ್ಚಿನ  ಪರಿಶ್ರಮ ಪಡಬೇಕಾಯಿತು.
ಅಷ್ಟು ಹೊತ್ತಿಗೆ ನನ್ಮ ಮಗನಿಗೆ ಬೆಂಗಳುರಿಗೆ ವರ್ಗ ವಾಗಿತ್ತು. ನಾನೊಬ್ಬನೆ ಕರವಾರದಲ್ಲಿದ್ದೆ.  ದೀರ್ಘವಾದ ವಾರಾಂತ್ಯದಲ್ಲಿ ಬೆಂಗಳೂರಿಗೆ ಭೇಟಿಕೊಟ್ಟಿದ್ದೆ. ಜತೆಯಲ್ಲೆ ಕರಾವಳಿ ಪತ್ರಿಕೆಯ ಸಂಪಾದಕೃಉ ಬಂದಿದ್ದರು. ಮುಂಜಾನೆ ತಿಂಡಿತಿನ್ನುತ್ತಾ ಕುಳಿತಾಗ ಕಾರವಾರದಿಂದ ಫೋನು ಬಂದಿತು . ಅಂದು ಬೆಳಗಿನ ಪತ್ರಿಕೆಯಲ್ಲಿ ನನ್ನ ಬಗ್ಗೆ ಸತ್ಯದೂರವಾದ ಆಪಾದನೆಗಳಿಂದ ಕೂಡಿದ ವರದಿ ಪ್ರಕಟವಾಗಿತ್ತು. ನನಗೆ ಆಶ್ಚರ್ಯ, ಸಂಪಾದಕರು ಜತೆಯಲ್ಲೆ ಇದ್ದಾರೆ..” ಪ್ರಿನ್ಸಿಪಲ್ದ ಪ್ರಿನ್ಸಿಪಾಲರ ಕಾರ್ಯ ವೈಖರಿ “ ಎಂಬ ಶೀರ್ಷಿಕೆಯ ಅಡಿಯಲ್ಲಿ ಅನೇಕ ಆರೋಪಗಳನ್ನು ಹೊರಿಸಲಾಗಿತ್ತು. ಪಕ್ಕದಲ್ಲೆ ಕುಳಿತಿದ್ದ ಸಂಪಾದಕರಿಗೆ ಅಚ್ಚರಿ. ಹಿಂದಿನ ದಿನ ಬೆಂಗಳೂರಿಗೆ ಹೊರಟಾಗ ಇದರ ವಾಸನೆಯೆ ಅವರಿಗೆ ಇರಲಿಲ್ಲ. ಮಾಲಕ ಮತ್ತು ಕಾರ್ಯನಿರ್ವಾಹ ಸಂಪಾದಕರು ಅವರ ಗೈರು ಹಾಜರಿಯಲ್ಲಿ ಮತ್ತು ನಾನು ಊರಲ್ಲಿಇಲ್ಲದಾಗ ಮಾನ ಹಾನಿಕರ ವರದಿ ಪ್ರಕಟಿಸಿದ್ದರು.
ತಕ್ಷಣ ಕಾರವಾರಕ್ಕೆ  ವಾಪಸ್ಸುಹೊರಟೆ. ಅಲ್ಲಿ ಪತ್ರಿಕೆ ನೋಡಿದೆ. ಮುಖ್ಯವಾಗಿ ಕೆಲವು ಉಪನ್ಯಾಸಕರಿಗೆ ಕಿರುಕುಳ ಕುರಿತು ಬರೆಯಲಾಗಿತ್ತು ಜತೆಯಲ್ಲಿ ಅಲ್ಲಿ ಹೊಸದಾಗಿ ವರ್ಗ ವಾಗಿ ಬಂದ ಅನ್ಯ ಜಿಲ್ಲೆಯ ಶಿಕ್ಷಕಿಯರೊಂದಿಗೆ ಸಂಬಂಧ ಹೊಂದಿರುವದರಿಂದ ಅವರಿಗೆ ಹೆಚ್ಚಿನ ಸೌಲಭ್ಯ ನೀಡಿರುವುದಾಗಿ ತಿಳಿಸಿದ್ದರು. ಮುಗುಮ್ಮಾಗಿ ಹಣಕಾಸಿನ ದುರ್ಬಳಕೆಯ ಆರೋಪ ಮಾಡಲಾಗಿತ್ತು.
 ಅದೆ ದಿನ ಉಪನಿರ್ದೇಶಕರ ಕಚೇರಿಗೆ ಹೋದೆ. ಅವರು ಇದರಿಂದ ತುಸು ವಿಚಲಿತರಾದಂತೆ ಕಂಡಿತು. ಅವರ ವಿರುದ್ಧವೂ ಬರೆಯಲಾಗಿತ್ತಂತೆ. ನಾನೆ ಬಂದು ತಪಾಸಣೆ ಮಾಡಿರುವೆ. ಎಲ್ಲ ಸರಿಯಾಗೆ ಇದೆ. ಏನೂ ಆರೋಪ ಮಾಡಲಾಗದಿರುವಾಗ ಚಾರಿತ್ರ್ಯ ವಧೆ ಮಾಡುವರು. ನಾನು ಸತ್ಯ ಸಂಗತಿಯನ್ನು ಸರಕಾರಕ್ಕೆ ವರದಿ ಮಾಡುವೆ. ನೀವು ಚಿಂತಿಸಬೇಡಿ , ಎಂದು ಧೈರ್ಯ ಹೇಳಿದರು.ನಿಮ್ಮಲ್ಲಿರುವ ಒಂದುವರ್ಗದ ಉಪನ್ಯಾಸಕರ ಕುಲಬಾಂಧವರದು ಈ ಪತ್ರಿಕೆ . ಅವರ ಹಿತಾಸಕ್ತಿ ಕಾಪಾಡುವ  ಪ್ರಯತ್ನವೆ ಇದು. ಇದುವರೆಗ ನಿಮ್ಮ  ಅಭಿಮಾನಿಯಾಗಿದ್ದ ವ್ಯಕ್ತಿ ಈಗ ಧ್ವನಿ ಬದಲಾಯಿಸಲು ಕಾರಣ ಅವರ ಜಾತಿ ಬಾಂಧವರ ಒತ್ತಡವೆ ಆಗಿದೆ. ನೀವು ಅವರ ಮೇಲೆ ಮಾನ ಹಾನಿ ಮೊಕದ್ದಮೆ ಹೂಡಿ .ಹಾಗೆಯೆ ಬಿಡಬಾರದು ಎಂದು ಸಲಹೆ ನೀಡಿದರು . ನಾನ ಅದನ್ನು ಪರಿಶೀಲಿಸಿದೆ. ನಾನು ಮೊಕದ್ದಮೆ ಹೂಡಿದರೆ ಅದು ಅವರಿಗೆ ಹೊಸದೇನು ಅಲ್ಲ.  ಈ ತರಹೆಯ ಹತ್ತಾರು ಈಗಾಗಲೆ ಇವೆ. ಅವುಗಳ ಜೊತೆ ಇದೂ ಒಂದು. ಮೇಲಾಗಿ ಸ್ಥಳೀಯ. .ನಾಲ್ಕಾರುವರ್ಷ ಕೋರ್ಟಿಗೆ ಅಲೆದಾಡಿ ನಂತರ ಕ್ಷಮೆ ಕೇಳುವನು.ಅಲ್ಲಿಗೆ ಪ್ರಕರಣ ಮುಕ್ತಾಯವಾಗುವುದು. ಸುಮ್ಮನೆ ನನ್ನ ಸಮಯ  ಹಾಳುಆಗುವುದು. ಆದರೆ ನಾನು ಅನವಶ್ಯಕವಾಗಿ ಇಲ್ಲದ ಪ್ರಾಮುಖ್ಯತೆಯನ್ನು ಕೊಟ್ಟಹಾಗಾಗುವುದು. ಆಹಾಳು. ಅದರಿಂದ  ಅದನ್ನು ನಿರ್ಲಕ್ಷಿಸಲು ನಿರ್ಧರಿಸಿದೆ.ನನ್ನ ಕೆಲಸವನ್ನೂ ನಾನು ಎಂದಿನಂತೆಯೆ ನಿರ್ವಹಿಸಲು ಮುಂದಾದೆ.
 ಆದರೆ ಒಂದು ಅನುಕೂಲವಾಯಿತು ಅಭಿವೃದ್ಧಿ ಸಮಿತಿಯರು ಬೆಂಬಲಕ್ಕೆ ನಿಂತರು. ನಿರ್ಧಿಷ್ಟ ಕೋಮಿನರ ವಿರುದ್ಧ ಉಳಿದವರು ಒಂದಾಗಿ ಬಂದು ಬೆಂಬಲ ಸೂಚಿಸಿದರು. ಅವರಲ್ಲೂ  ಕೆಲವರು ಏನೂ ಅರಿಯದ ಮಳ್ಳಿಯ ತರಹ ಸಾರ್‌ ಹೀಗೆ ಬರೆಯಬರದಿತ್ತು ಎಂದು ಸಹಾನುಭೂತಿ ಸೂಚಿಸಿದರು.

 ನಾನು ಅವರ ಪತ್ರಿಕೆ ಅವರ ಮರ್ಜಿ. ಅದನ್ನು ಬೇಡ ಎನ್ನಲು ನಾವು ಯಾರು. ಸ್ವಾತಂತ್ರ್ಯವಿದೆ. ಓದುವವರಿಗೆ ನಿಜ ಗೊತ್ತೆ ಇದೆ. ಚಿಂತೆ ಮಾಡುವ ಅಗತ್ಯವೆ ಇಲ್ಲ ಎಂದೆ. ಬಹು ದಪ್ಪ ಚರ್ಮದ ಆಸಾಮಿ ಎಂದುಕೊಂಡರು. ಅದರ ಪರಿಣಾಮ ಏನೂ ಆಗಲಿಲ್ಲ. ಆದರೆ ಒಂದು ಮಾತ್ರ ಖಚಿತವಾಯಿತು. ಸತ್ಯ ,ಧರ್ಮ,  ತತ್ವ ಮಾತಿಗೆ ಮಾತ್ರ. ದಿನ ನಿತ್ಯದ ಬದುಕಿಗೆ ಜಾತಿ, ಪಂಗಡ , ಹಿತಾಸಕ್ತಿಯೆ ಅಗತ್ಯ. ಅದಕ್ಕೆ ಅಲ್ಲವೆ   ನೀರಿಗಿಂತ ಸಾರು ರುಚಿಯಾಗಿರುವುದು.

Friday, July 19, 2013

ಡಾ.ಕೆ.ವಿ. ರಮೇಶ್‌- ನುಡಿ ನಮನ


ಪುರಾತತ್ತ್ವ  ಪರಿಣಿತ -ಡಾ.ಕೆ.ವಿ. ರಮೇಶ್‌




http://kendasampige.com/images/trans.gif
ಭಾರತದ ಇತಿಹಾಸ ಮತ್ತು ಪುರಾತತ್ತ್ವವ ರಂಗದಲ್ಲಿನ ಹಿರಿಯ ಚೇತನ ಡಾ. ಕೆ.ವಿ ರಮೇಶ್ ಅತ್ಯಂತ ಶ್ರೇಷ್ಠ ಶಾಸನ ಸಂಶೋಧಕಇತಿಹಾಸ ತಜ್ಞಸಂಸ್ಕೃತ ವಿದ್ವಾಂಸಲಿಪಿಶಾಸ್ತ್ರಜ್ಞ ಮಾತ್ರವಲ್ಲ ನಾಣ್ಯಶಾಸ್ತ್ರಮತ್ತು ಭಾಷಾತಜ್ಞರೂ ಆಗಿದ್ದರು. ರಾಷ್ಟ್ರ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಸದಾ ಹಸಿರಾಗಿರಲು ಎರಡು ಮಹತ್ವದ ಕಾರಣಗಳಿವೆ. ಮೊದಲನೆಯದೆಂದರೆ ಕರ್ನಾಟಕದಲ್ಲಿ ಹಲವಾರು ಅಶೋಕನ ಶಾಸನಗಳು ದೊರೆತಿದ್ದರೂ ಸನ್ನತಿಯಲ್ಲಿನ ಶಾಸನಗಳ ಜತೆಗೆ ಅಲ್ಲಿ ಕ್ರಿ.ಪೂ. ೩ನೇ ಶತಮಾನದ ಬೌದ್ಧ ಸ್ತೂಪದ ಅವಶೇಷಗಳ ಪತ್ತೆಗೆ ನಾಂದಿ ಹಾಡಿದ ಹೆಗ್ಗಳಿಕೆ ಅವರದ್ದು. ಅಲ್ಲದೇ ಅತ್ಯಂತ ಸೂಕ್ಷ್ಮವಾದ ಮತ್ತು ವಿವಾದಾಸ್ಪದವಾದ ಬಾಬ್ರಿಮಸೀದಿ ಮೊಕದ್ದಮೆಯಲ್ಲಿ ಅವರು ಕಟ್ಟಡ ಸಂರಚನೆಯ ಬಗೆಗೆ ನೀಡಿದ ಮೌಲಿಕ ಅಭಿಪ್ರಾಯ ಎರಡನೆಯದು.


ಡಾ.ಕೆ.ವಿ. ರಮೇಶ್‌ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮನೆತನದವರು. ಹುಟ್ಟಿದ್ದು ಕೇರಳದಲ್ಲಿ. ಜನನ ೧೯೩೫ ರ ಜೂನ್‌ ೮ ರಂದು. ತಂದೆ ಕೋಳುವೈಯಲ್‌ ವ್ಯಾಸರಾಯ ಶಾಸ್ತ್ರಿ. ಅವರು ಮದ್ರಾಸ್‌ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿದ್ದರು. ಹಾಗಾಗಿ ಬೆಳೆದದ್ದುಓದಿದ್ದು ಮದ್ರಾಸಿನಲ್ಲಿಯೇ. ಮನೆಯಲ್ಲಿ ಸುಸಂಸ್ಕೃತ ವಾತಾವರಣ. ಬಾಲ್ಯದಲ್ಲಿಯೇ ಕನ್ನಡತಮಿಳು,ತೆಲುಗುಮಲೆಯಾಳಂಗಳ ಸಂಪರ್ಕ. ತಂದೆಯಪ್ರಭಾವದಿಂದ ಸಹಜವಾಗಿ ಸಂಸ್ಕೃತ ಹತ್ತಿರವಾಯಿತು. ಅವರು ತಮ್ಮ ಸ್ನಾತಕೋತ್ತರ ಪದವಿಯನ್ನೂ ಸಂಸ್ಕೃತದಲ್ಲಿಯೇ ಸುವರ್ಣ ಪದಕ ಸಮೇತ ಪಡೆದರು . ಶಿಕ್ಷಣ ಮುಗಿದೊಡನೆಯೇ ೧೯೫೬ ರಲ್ಲಿ ಉದ್ಯೋಗವೂ ಸಿಕ್ಕಿತು. ಉದಕಮಂಡಲದಲ್ಲಿದ್ದ ಭಾರತೀಯ ಪುರಾತತ್ತ್ವ ಇಲಾಖೆಯಲ್ಲಿ ಶಾಸನ ಸಂಶೋಧನಾ ವಿಭಾಗದಲ್ಲಿ ಸಹಾಯಕ ಲಿಪಿಶಾಸ್ತ್ರಜ್ಞರಾಗಿ ನೇಮಕಾತಿ ಆಯಿತು.. ಅಲ್ಲಿಂದ ಅವರ ಸಾರಸ್ವತ ಯಾತ್ರೆ ಪ್ರಾರಂಭವಾಯಿತು. ಉದಕಮಂಡಲದ ಪರಿಸರ ಅವರ ಪ್ರತಿಭೆಗೆ ಪುಟ ಕೊಟ್ಟಿತು. ಅಲ್ಲಿ ದೇಶದ ವಿವಿಧ ಬಾಗಗಳಿಂದ ಬಂದ ವಿದ್ವಾಂಸರ ಒಡನಾಟ. ಎಷ್ಟು ಓದಿದರೂ ಮುಗಿಯದ ಶಾಸನಗಳ ಸಂಗ್ರಹವಿವಿಧ ಭಾಷಾತಜ್ಞರ ಒಡನಾಟ ಹಿರಿಯ ವಿದ್ವಾಂಸರ ಪ್ರೋತ್ಸಾಹ ಮತ್ತು ಬೆಂಬಲ ದಿಂದ ಅವರು ಬಹು ಬೇಗನೇ ಲಿಪಿಶಾಸ್ತ್ರದಲ್ಲಿ ನಿಷ್ಣಾತರಾದರು. ಜೊತೆಗೆಅವರಿಗಿದ್ದ ಬಹುಭಾಷಾಜ್ಞಾನ ಅಲ್ಲಿ ಬಹಳ ಉಪಯೋಗಕ್ಕೆ ಬಂದಿತು. ಅವರಿಗೆ ವೃತ್ತಿ ಮತ್ತು ಪ್ರವೃತ್ತಿ ಒಂದಾದವು. ಗಳಿಕೆ ಮತ್ತು ಕಲಿಕೆ ಪರಸ್ಪರ ಪೂರಕವಾದವು. ಸಹಜವಾಗಿ ಜ್ಞಾನಭಂಡಾರ ಹೆಚ್ಚಿತು. ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದಿಂದ ಡಾ. ಜಿ.ಎಸ್ ದೀಕ್ಷಿತರ ಮಾರ್ಗದರ್ಶನದಲ್ಲಿ ೧೯೬೫ ರಲ್ಲಿ ಪಿಎಚ್‌.ಡಿ ಪದವಿ ಪಡೆದರು. ಅವರು ಪರಿಣಿತಿಯಿಂದಾಗಿ ಇಂಡೊ-ಜಪಾನು ತಂಡದ ಎಂಟು ಅನ್ವೇಷಕರಲ್ಲಿ ಒಬ್ಬರಾಗಿ ಸೇವೆಸಲ್ಲಿಸಿ ಪುರಾತತ್ತ್ವ ಮತ್ತು ಭೌಗೋಳಿಕ ಅನ್ವೇಷಣೆ ಮಾಡಿದರು. ಅಲ್ಲಿ ಅನೇಕ ಐತಿಹಾಸಿಕ ನಿವೇಶನಗಳ ಭೇಟಿ ನೀಡಿ ಶಾಸನಗಳ ಪ್ರತಿ ಮಾಡಿದರು. ಅವರ ಶಾಸನ ಕೃಷಿಯು ನಿರಂತರವಾಗಿ ೧೯೯೩ ವರ್ಷಗಳವರೆಗ ನಡೆಯಿತು ಅಂದರೆ ಅಖಂಡ ೪೩ ವರ್ಷಗಳ ಸೇವೆಯಲ್ಲಿ ಹಂತ ಹಂತವಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಿದರು ಮುಖ್ಯ ಲಿಪಿತಜ್ಞ, ,ಡೈರೆಕ್ಟರ್ ಅಫ್ ಎಪಿಗ್ರಫಿ ಹುದ್ದೆಯನ್ನು ಅಲಂಕರಿಸಿದ್ದರು. ಅಂತಿಮವಾಗಿ ಭಾರತೀಯ ಪುರಾತ್ತತ್ವ ಸರ್ವೇಕ್ಷಣದಲ್ಲಿ ಎರಡನೆಯ ಅತ್ಯುನ್ನತ ಸ್ಥಾನವಾದ ಜಾಯಿಂಟ್‌ ಡೈರೆಕ್ಟರ್‌ಅಫ್ ಆರ್ಕಿಯಾಲಜಿ ಎಂಬ ಸ್ಥಾನವನ್ನು ಅಲಂಕರಿಸಿದ್ದರು.


ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಗುಲ್ಬರ್ಗ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸನ್ನತಿಯ ಅಶೋಕನ ಶಿಲಾಶಾಸಗಳ ಮತ್ತು ಅಲ್ಲಿನ ಸ್ತೂಪಗಳ ಅವಶೇಷಗಳ ಮಹತ್ವ ಪೂರ್ಣ ಅಧ್ಯಯನ ಹಾಗೂ . ಅವುಗಳು ಕರ್ನಾಟಕದಲ್ಲಿ ದೊರೆತ ಇತರೆ ಅಶೋಕನ ಶಾಶನಗಳಿಗಿಂತ ಹೇಗೆ ಭಿನ್ನವಾಗಿವೆ ಎಂದು ತೋರಿಸಿರುವುದು.ಚಂದ್ರಲಾಂಬ ದೇವಸ್ಥಾನದಲ್ಲಿರುವ ಕಾಳಿಕಾದೇವಿ ಗುಡಿಯ ಮೇಲ್ಛಾವಣೆ ೧೯೮೬ ರಲ್ಲಿ ಕುಸಿಯಿತು. ಅದರೊಡನೆ ವಿಗ್ರಹವೂ ನಾಶವಾಯಿತು. ಅಲ್ಲಿ ಉತ್ಖನನ ಮಾಡಿದಾಗ ಅಡಿಪಾಯದಲ್ಲಿ ನಾಲ್ಕು ಅಶೋಕನ ಶಾಸನಗಳು ಕಂಡವು. ಒಂದು ಶಾಸನವನ್ನೇ ದೇವಿಯ ವಿಗ್ರಹದ ಪೀಠವಾಗಿ ಬಳಸಲಾಗಿತ್ತು.ಅಲ್ಲಿ ದೊರೆತಿರುವ ಟೆರ್ರಕೋಟ,ವಸ್ತುಗಳು ಮತ್ತು ಸುಣ್ಣದ ಕಲ್ಲಿನ ಫಲಕಗಳಿಂದಅವು ನಾಶವಾದ ಮಹಾಸ್ತೂಪದ ( ಅಧೋಲೋಕ ಮಹಾಚೈತ್ಯ) ದ ಭಾಗಗಳೆಂದು ಗುರುತಿಸಲಾಯಿತು. ಅಷ್ಟೇಅಲ್ಲ ಅದರಿಂದ ಅದು ೨೧೦ ಎಕರೆ ವ್ಯಾಪ್ತಿಯ ಕೋಟೆಯಿದ್ದ ರಣಮಂಡಲ ಎಂಬ ಬೌದ್ಧ ವಸತಿ ಪ್ರದೇಶವಾಗಿತ್ತು ಎಂದು ಖಚಿತಪಡಿಸಿದರು. ಅಲ್ಲಿ ಶಾತವಾಹನ ಮತ್ತು ರೋಮನ್‌ ಕಾಲದ ಕರಿ ಶಿಲಾಫಲಕಗಳು ಮತ್ತು ಟೆರ್ರಿಕೋಟಾ ತುಣಕುಗಳು ದೊರೆತಿವೆ. ಆ ಮಹಾಬೌದ್ಧನಿವೇಶನದಲ್ಲಿ. ಇದುವರೆಗ ಕೇವಲ ೨.೫ ಎಕರೆ ಪ್ರದೇಶದ ಉತ್ಖನನ ಮಾತ್ರ ನಡೆದಿದೆ. ಇನ್ನೂ ನಡೆಸಬೇಕಾದ ಸಂಶೋಧನೆ ಮತ್ತು ಭೂಶೋಧನೆ ಬಹಳಷ್ಟಿದೆ. ಈ ಬೌದ್ಧ ನಿವೇಶನದ ಅನ್ವೇಷಣ ಕಾರ್ಯ ಡಾ.ಕೆ.ವಿ. ರಮೇಶ ಅವರ ಕಾಲಾವಧಿಯಲ್ಲಿ ಮೊದಲು ನಡೆಯಿತು. ಅಲ್ಲಿ ಅಶೋಕ ಸಾಮ್ರಾಟ ಸಿಂಹಾಸನದ ಮೇಲೆ ಕುಳಿತಿರುವ ಚಿತ್ರವಿರವ ಶಾಸದ ಏಕೈಕ ಉದಾಹರಣೆ ಇಲ್ಲಿ ಸಿಕ್ಕಿದೆ.


ಅವರಿಗೆ ವೃತ್ತಿಯಿಂದ ನಿವೃತ್ತಿಯಾಯಿತೇ ಹೊರತು ಪ್ರವೃತ್ತಿಯಿಂದ ಅಲ್ಲ. ದೆಹಲಿಯ ಪುರಾತತ್ತ್ವ ಇಲಾಖೆಯಿಂದ ನಿವೃತ್ತರಾದ ತಕ್ಷಣವೆ ಮೈಸೂರಿನಲ್ಲಿ ಕೆಲಸ ಮುಂದುವರಿಸಿದರು. ಓರಿಯಂಟಲ್ ರಿಸರ್ಚ ಇನಸ್ಟಿಟ್ಯೂಟಿನ ನಿರ್ದೇಶಕರಾಗಿ ಹೊಸ ಹುದ್ದೆ ವಹಿಸಿಕೊಂಡರು. ಹೊಸ ಹೊಣೆಯನ್ನು ೮ ವರ್ಷ ನಿರ್ವಹಿಸದರು. ಅಲ್ಲಿ ಸಮಶೋಧನಾ ಕಾರ್ಯ ರಭಸವಾಗಿ ಸಾಗಿತು. ಈ ಸುಧೀರ್ಘ ಅವಧಿಯಲ್ಲಿ ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಗಳ ಅಧ್ಯಯನಕ್ಕೆ ಅವರ ಕೊಡುಗೆ ಅಪಾರ. ಅಲ್ಲಿಂದ ನಿವೃತ್ತರಾದರೂ ಅಜೀವ ಅದರ ಗೌರವ ಸದಸ್ಯರಾಗಿ ಮಾರ್ಗದರ್ಶನ ನೀಡಿದರು. ಅವರ ಸೇವೆಯ ಅವಧಿಯಲ್ಲಿ ದಕ್ಷಿಣ ಭಾರತದ ಹಲವಾರು ರಾಜ ವಂಶಗಳ ಶಾಸನಗಳ ಬೃಹತ್‌ ಸಂಪುಟಗಳನ್ನು ಪ್ರಕಟಿಸಿದರು. ಪಶ್ಚಿಮ ಗಂಗರುಬಾದಾಮಿಯ ಚಾಲುಕ್ಯರುತುಳುನಾಡು ಶಾಸನಗಳು ಮುಖ್ಯವಾದವುಗಳು. ಭಾರತೀಯ ಶಾಸನ ಮತ್ತು ಲಿಪಿಶಾಸ್ತ್ರಗಳಿಗೆ ಸಂಬಂಧಿಸಿದ ಗ್ರಂಥಗಳುಉಪನ್ಯಾಸಗಳು ಮತ್ತು ವಿದ್ವತ್‌ ಪತ್ರಿಕೆಗಳಲ್ಲಿನ ಲೇಖನಗಳಿಂದ ಪುರಾತತ್ತ್ವ ರಂಗಕ್ಕೆ ಗಣನೀಯ ಕಾಣಿಕೆ ಸಲ್ಲಿಸಿದ್ದಾರೆ.ಡಾ. ರಮೇಶ್ ಎಪಿಗ್ರಾಫಿಯಾ ಇಂಡಿಕಾದ ೪೧ ಮತ್ತು ೪೨ ಸಂಪುಟಗಳ ಸಂಪಾದಕರಾಗಿದ್ದರು.
ಎಪಿಗ್ರಾಫಿಕಲ್‌ ಸೊಸೈಟಿ ಅಫ್ ಇಂಡಿಯಾ ಮತ್ತು ಪ್ಲೇಸ್‌ನೇಮ್ಸ್‌ ಅಫ್ ಇಂಡಿಯ ದಂಥಹ ರಾಷ್ಟ್ರೀಯ ಸಂಸ್ಥೆಗಳಲ್ಲಿ ನಿರಂತರವಾಗಿ ಮೂರುದಶಕಗಳಿಗೂ ಮೀರಿ ಹೆಚ್ಚುಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಅವುಗಳ ಬೆಳವಣಿಗೆಗೆ ಕಾರಣರಾಗಿರುವರು..
ಪುರಾತತ್ತ್ವ ಇಲಾಖೆಯ ೧೫೦ನೆಯ ವರ್ಷದ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಮನಮೋಹನ್‌ಸಿಂಗ್‌ ಶಾಸನಶಾಸ್ತ್ರದಲ್ಲಿನ ಅವರ ಕೊಡುಗೆ ಪರಿಗಣಿಸಿ ನವದೆಹಲಿಯಲ್ಲಿ ವಿಶೇಷ ಸನ್ಮಾನ ಮಾಡಿದ್ದರು.
ಅವರ ವಿದ್ವತ್‌ ಗುರುತಿಸಿದ ಭಾರತೀಯ ಪುರಾತತ್ತ್ವ ಇಲಾಖೆಯು ಅವರನ್ನು ಸೆಪ್ಟಂಬರ್‌ ೨೦೧೨ ರಂದು ಲಿಪಿ ಶಾಸ್ತ್ರದ ರಾಷ್ಟ್ರೀಯ ಪ್ರಾಧ್ಯಾಪಕರನ್ನಾಗಿ ನೇಮಕ ಮಾಡಿತು. ರಾಷ್ಟ್ರೀಯ ಪ್ರಾಧ್ಯಾಪಕರಾಗಿ ಶಾಸನ ಸಂಶೋಧನೆ ಮತ್ತು ಶಾಸನ ವಿಜ್ಞಾನಗಳಲ್ಲಿ ಪ್ರೌಢವಿದ್ಯಾರ್ಥಿಗಳನ್ನು ತರಬೇತುಗೊಳಿಸುವ ಕಾರ್ಯ ನಿರ್ವಹಿಸುವ ಹೊಣೆ ಅವರದಾಗಿತ್ತು.
ಅವರ ವಿದ್ವತ್‌ ಮತ್ತು ವಸ್ತು ನಿಷ್ಠೆಯನ್ನು ಒರೆಗೆ ಹಚ್ಚಿದ್ದು. ಬಾಬ್ರಿ ಮಸೀದಿ ವಿವಾದ. ಮೊಕದ್ದಮೆ ಇತ್ಯರ್ಥಮಾಡಲು ಅಲ್ಲಿ ದರೆತ ಪುರಾತತ್ತ್ವ ವಸ್ತುಗಳ ಅಧ್ಯಯನ ಮಾಡಿ ನ್ಯಾಯಾಲಯಕ್ಕೆ ಮಾಹಿತಿ ನೀಡಲು ಸೂಚನೆ ನೀಡಲಾಯಿತು. ಆಗ ಲಿಪಿಶಾಸ್ತ್ರ ಶಾಖೆಯ ಮುಖ್ಯಸ್ಥರಾದ ಡಾ. ರಮೇಶ್ ಅದರ ಅಧ್ಯಯನ ನಡೆಸಿ ವರದಿ ನೀಡಿದರು. ಅವರನ್ನು ಪಾಟಿ ಸವಾಲು ಮಾಡಲು ನ್ಯಾಯಾಲಯಕ್ಕೆ ಕರೆಸಲಾಯಿತು. ಅದರಲ್ಲಿ ಅವರು ಆ ಸ್ಥಳದಲ್ಲಿ ದೊರೆತ ಸಂಸ್ಕೃತಶಾಸನದ ಕಾಲ ಮತ್ತು ವಿಷಯವನ್ನು ಖಚಿತಪಡಿಸಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ವರದಿಯ ಪ್ರಕಾರ "ಆ ಸ್ಥಳದಲ್ಲಿ ಗಹಡವಾಲ ವಂಶದ ಸಾಮ್ರಾಟ ಗೋವಿಂದ ಚಂದ್ರನಿಂದ ( ಕ್ರಿ. ಶ ೧೧೧೪-೧೧೫೫) ಸಾಕೇತ ಮಂಡಲದ ( ಅಯೋಧ್ಯ) ಒಡೆತನವನ್ನು ಪಡೆದ ಮೇಘಸುತನು ಮಂದಿರ ನಿರ್ಮಿಸಿದನು. ನಂತರ ಅದರ ಮೇಲೆ ಬೃಹತ್ತ್‌ಕಟ್ಟಡ ನಿರ್ಮಾಣವಾಯಿತು. ಆದರೆ ಅದರ ಜೀವಾವಧಿ ಬಹಳ ಕಡಿಮೆಯಾಗಿತ್ತು. ಅದನ್ನು ನಾಶ ಮಾಡಿ ಅದರ ಅವಶೇಷಗಳ ಮೇಲೆ ೧೬ನೆಯ ಶತಮಾನ ಆದಿಯಲ್ಲಿ ವಿವಾದಿತ ಸಂರಚನೆ ನಿರ್ಮಾಣವಾಯಿತು." ಎಂಬುದು ಪುರಾತತ್ತ್ತ್ವ ಇಲಾಖೆಯ ನಿರ್ದೇಶಕರಾಗಿ ಅವರು ನೀಡಿದ ತಜ್ಞ ಅಭಿಪ್ರಾಯವನ್ನು ನ್ಯಾಯಾಲಯವು ಪರಿಗಣಿಸಿತು. ಆದರೆ ಈ ಬಗ್ಗೆ ವಿವಾದಗಳೆದ್ದವು. ಡಾ. ರೊಮಿಲಾ ಥಾಪರ್‌ನಂತಹ ಹಲವು ಇತಿಹಾಸತಜ್ಞರು ಇವರ ವಾದವನ್ನು ಅಲ್ಲಗೆಳೆದರು.


ಡಾ. ರಮೇಶ್‌ ಅವರ ಇತ್ತೀಚಿನ ಕೊಡುಗೆ ಎಂದರೆ ನವದೆಹಲಿಯ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್‌ನ ಯೋಜನೆಯಡಿಯಲ್ಲಿ ಸಿದ್ಧಪಡಿಸಿರುವ ಬಹು ಸಂಫುಟಗಳ ದಕ್ಷಿಣ ಭಾರತದ ಶಾಸನಗಳಲ್ಲಿನ ಸಾಮಾಜಿಕ. ಆರ್ಥಿಕಮತ್ತು ಆಡಳಿತ ಪಾರಿಭಾಷಿಕ. ಶಬ್ದ ಕೋಶ. ಇದರ ಪ್ರಥಮ ಸಂಪುಟ ಪ್ರಕಟವಾಗಿದೆ. ಅವರು ನಿಘಂಟುವಿನ ಯೋಜನಾ ಕಾರ್ಯದಲ್ಲಿ ಸಕ್ರಿಯವಾಗಿದ್ದರು ಎರಡನೆಯ ಸಂಪುಟ ಸಿದ್ಧ ಮಾಡುತ್ತಿರುವಾಗಲೇ ಇತಿಹಾಸದ ಪುಟ ಸೇರಿದರು...
ಸುಮಾರು ಒಂದುಲಕ್ಷ ಶಾಸನಗಳ ಸಂಗ್ರಹವಾಗಿರುವಾಗ ಈವರೆಗಿನ ಕಾರ್ಯವು ಕೇವಲ 25 ರಿಂದ30 ಶತಾಂಶವಾಗಿದೆ ಇಂಥಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಅವರ ಮಾರ್ಗದರ್ಶನವು ಇಲ್ಲದಾಗಿರುವುದು ಇತಿಹಾಸ ಲೋಕಕ್ಕೆ ತುಂಬಲಾರದ ನಷ್ಟ ಎಂದು ಪುರಾತತ್ತ್ವ ಇಲಾಖೆಯ ನಿರ್ದೇಶಕರು ಅಭಿಪ್ರಾಯ ವ್ಯಕ್ತಪಡಿಸಿರುವರು. ಪುರಾತನ ದಾಖಲೆಗಳ ಅರ್ಥೈಸುವಿಕೆಗೆ ಇದೊಂದು ಹಿನ್ನೆಡೆಯಾಗಿದೆ. ಡಾ. ರಮೇಶ್‌ ಅವರು ಕಳೆದ ಬುಧವಾರ ಕಾಲವಶರಾದರು ಅವರ ಹೆಂಡತಿ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ..
ಅವರು ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳೆರಡರಲ್ಲೂ ಕೃತಿ ರಚನೆ ಮಾಡಿರುವರು. ಅವುಗಳಲ್ಲಿ ಪ್ರಮುಖವಾದವುಗಳು ಹೀಗಿವೆ.
1. Indian Epigraphy, 1984.
2. Chalukyas of Vaataapi, 1984.
3. Inscriptions of Western Gangas, 1984, Indian Council of Historical Research, Delhi.
4. A Copper Plate Hoard of the Gupta Period from ‘Bagh', Madhyapradesh, (With others), 1990, Archaeological Survey of India.
5. South Indian Inscriptions, 1990, Published by Director General, Archaeological Survey of India.
6. A History of South Kanara from the earliest times to the fall of Vijayanagara, Research Publication Series, 1970, Karnatak University.
7. TuLunADina itihAsa, 1969, Geetha Book House, Mysore.
8. Karnataka Shasana Sameekshe, 1971, Bangalore University, Bangalore.
9. South Indian Inscriptions, Vol 16, Telugu Inscriptions of the Vijayanagara Dynasty, Archaeological Survey of India.
10. Dynastic List of Copper Plate Inscriptions noticed in Annual reports on Indian Epigraphy from 1887-1969, by G.S. Gai and K.V. Ramesh, 1986.
11. Archaeological Survey of India.
ಇವಲ್ಲದೇ ಅವರು ತತ್ವನಿಧಿ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಗ್ರಂಥದ ಸಂಪಾದಕರು ಜೊತೆಗೆ ಹಿರಿಯ ಲಿಪಿತಜ್ಞ ಮತ್ತು ವಿದ್ವಾಂಸರಾದ ಜಿಎಸ್ ಗಾಯಿ,ಬಿ.ಕೆ ಗುರುರಾಜರಾವ್ಬಿ.ಸಿ. ಛಾಬ್ರ,ಮತ್ತು ಜಿ.ಎಸ್ ದೀಕ್ಷಿತ್‌ರ ಗೌರವ ಸಂಭಾವನಾ ಗ್ರಂಥಗಳ ಸಹ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವರು. ಶಾಸನ ಅಧ್ಯಯನವನ್ನು ಕೊನೆಯುಸಿರು ಎಳೆಯುವವರೆಗೆ ಕೈ ಗೊಂಡಿದ್ದರು..
http://kendasampige.com/images/trans.gif


Thursday, July 18, 2013

ಕಟ್ಟ ಕಡ ಕಟ್ಟ -.- ಕೊನೆಯ ಸಂದೇಶ






ಸುಮಾರು ಒಂದೂವರೆ ಶತಮಾನ ಹಿಂದೆ ಸಂಪರ್ಕ ಮಾಧ್ಯಮದಲ್ಲಿ ಸಂಚಲನ ಉಂಟುಮಾಡಿ ರಾಷ್ಟ್ರ ರಾಷ್ಟ್ರಗಳನ್ನು ಹತ್ತಿರ ತಂದ, ಹಳ್ಳಿ ಹಳ್ಳಿಗಳನ್ನೂ ತಲುಪುತಿದ್ದ  ಟೆಲಿಗ್ರಾಫ್  ಎಂಬ   ಸಂಪರ್ಕ  ಸಾಧನ  ಭಾನುವಾರ ದಿನಾಂಕ ೧೪-೭-೨೦೧೩ ರಂದು ಹಂಸಗೀತೆ ಹಾಡಿತು. ಸಂವಹನ ಮತ್ತು ಸಂಪರ್ಕ ನಾಗರೀಕ ಜಗತ್ತಿನ  ಹೆಗ್ಗುರುತುಗಳು. ಮೊದಲಲ್ಲಿ  ಮಾನವನು ಸಂದೇಶಗಳನ್ನು ಕಳುಹಿಸಲು ಪಾರಿವಾಳಗಳನ್ನು ಬಳಸುತಿದ್ದನು. ಆಫ್ರಿಕಾದಲ್ಲಿ ಎತ್ತರದ ಸ್ಥಾನದಲ್ಲಿ ನಿಂತು ನಗಾರಿ ಬಾರಿಸಿ ಆ ಮೂಲಕ ಬಾರಿಸಿ ಸಂದೇಶ ಪ್ರಸಾರಮಾಡುತಿದ್ದರು.. ರಾತ್ರಿಯ ಹೊತ್ತು ಬೆಂಕಿಹಾಕಿ ದೊಂದಿಹಚ್ಚಿ  ಬೆಳಕಿನಮೂಲಕ  ಸಂದೇಶಗಳ ಸಾಗಣಿಕೆ ಯಾಗುತಿತ್ತು.  ಹಗಲಲ್ಲಿ ಹೊಗೆ ಹಾಕುವುದರಿಂದ ಸಂದೇಶ  ರವಾನೆಯಾಗುತ್ತಿತ್ತು. ಆದರೆ ಇವೆಲ್ಲಕ್ಕೂ ತಮ್ಮದೇ ಆದ  ಮಿತಿ ಇತ್ತು ಇವೆಲ್ಲಕ್ಕೂ ಮೀರಿದ ಸಂದೇಶವನ್ನು ವೇಗವಾಗಿ ಕಳುಹಿಸುವ ಸಾಧನವನ್ನು ಹುಡುಕುತ್ತಲೇಇದ್ದರು. ದೂತನೊಬ್ಬನು ಓಡುತ್ತಾ ನೂರಾರು ಮೈಲು ಕ್ರಮಿಸಿ ಸಂದೇಶ ತಲುಪಿಸಿ ಪ್ರಾಣ ಬಿಟ್ಟ ಘಟನೆಗಳು ಇತಿಹಾಸದಲ್ಲಿ ಇವೆ. ಕುದರೆ ಸವಾರರೂ ಸಂದೇಶವಾಹಕಕರಾಗಿ ಬಳಕೆಯಾಗುತಿದ್ದರು. ಯುರೋಪು ಮತ್ತು ಅಮೇರಿಕಾದಲ್ಲಿ ಕುದರೆಗಾಡಿಗಳೂ ಬಳಕೆಯಾಗಿದ್ದವು ದೂರದ ಸ್ಥಳಕ್ಕೆ ಹೋಗಲು ಅವುಗಳಿಗೆ ಒಂದು ಮಿತಿ ಇತ್ತು.  ಮಧ್ಯ ಮಧ್ಯ ವಿಶ್ರಾಂತಿ ಪಡೆದು ಸಾಗಬೇಕಿತ್ತು. ಹಾಗಾಗಿ  ಎಷ್ಟೇ ತುರ್ತು ಇದ್ದರೂ   ಸಂದೇಶ ತಲುಪಿಸಲು ಹಲವಾರು ದಿಗಳು ಹಿಡಿಯುತಿದ್ದವು. ಅದಕ್ಕೆಂದೇ ಹಿಂದಿನಕಾಲದಲ್ಲಿ ಭಾರತದಲ್ಲಿ ಕಾಶಿಯಾತ್ರೆಗ ಹೋಗುವವರುಮನೆ ನಡೆಸಲು ಸರ್ವ ವ್ಯವಸ್ಥೆ ಮಾಡಿ ಹೊಗುವರು. ಅವರು ಇರುವರೋ ಇಲ್ಲವೋ ಎಂಬ ಸುದ್ಧಿ ಸಹಾ ಸಿಗುತ್ತಿರಲಿಲ್ಲ. ಆರೇಳುತಿಂಗಳಾದ ಮೇಲೆ ತಿರುಗಿ ಬಂದರೆ ಊರಿಗೆ ಊರೇ ಸಂಭ್ರಮದಿಂದ ಅವರನ್ನುಸ್ವಾಗತಿಸಿ ಹಬ್ಬ ಮಾಡುತಿದ್ದರು ಈ ಎಲ್ಲ ಅಡಚಣೆಗಳಿಗೆ ಮಂಗಲ ಹಾಡಿದ ಮಹಾನ್‌ಅನ್ವೇಷಣೆ ಎಂದರೆ ಟೆಲಿಗ್ರಫಿ , . ಜನರ ಬಾಲ್ಲಿ ತಂತಿ ಅಥವ ತಾರು .
ಟೆಲಿಗ್ರಫಿ ಎಂದರೆ  ದೂರಬರಹ .ಸಂದೇಶದಲ್ಲಿ  ಭಾಷೆಯನ್ನು  ಸಂಕೇತಗಳಾಗಿ ಪರಿವರ್ತಿಸಿ ತಂತಿಯ  ಮೂಲಕ ಕಳುಹಿಸುವ ವಿಧಾನ.ಅದನ್ನು ಪಡೆಯುವವರು ಸಂಕೇತಗಳನ್ನು ಭಾಷೆಯಾಗಿ ಪರಿವರ್ತಿಸಿ ಸಂಬಂಧಿಸಿದವರಿಗೆ ತಲುಪಿಸುವರು..ವಿದ್ಯುತ್‌ ಅನ್ವೇಷಣೆಯಾದಾಗ  ದ್ವನಿತರಂಗಗಳನ್ನು ವಿದ್ಯುತ್‌ ತರಂಗಗಳಾಗಿ ತಂತಿಯ ಮೂಲಕ ಕಳುಹಿಸುವುದರಿಂದ ತಂತಿ ಎಂಬ ಹೆಸರು ಪ್ರಚಾರದಲ್ಲಿ ಬಂದಿತು.ಸುಮಾರು ಐವತ್ತು ವರ್ಷಗಳವರೆಗೆ ಅದೇ ಪದ್ದತಿ ಜಾರಿಯಲ್ಲಿದ್ದಿತು. ನಂತರ  ರೇಡಿಯೋಗ್ರಫಿ ಬಳಕೆಗೆ ಬಂದಿತು. ಅಂದರೆ ನಿಸ್ತಂತು ಸೇವೆ ಬಳಕೆಗೆ ಬಂದಿತುಅಂದರೆ ತಂತಿಇಲ್ಲದ ಎಸಂದೇಶ ರವಾನಿಸುವ ಪದ್ದತಿ.  ಮೊದಲಿನಂತೆ ಕಟ್‌ ಕಡ  ಕಡ ಕಟ್ಟ್ ಎಂದು ಕುಟ್ಟುತ್ತಾ ಕೂಡುವ ಅಗತ್ಯ ವಿರಲಿಲ್ಲ..ಆದರೆ ಈಗಿನನ ವಿದ್ಯುನ್ಮಾನ ಯುಗದಲ್ಲಿ ಮೊಬೈಲ್‌ ಇಂಟರ್‌ನೆಟ್‌ ಯುಗದಲ್ಲಿ ಕ್ಷಣ  ಮಾತ್ರದಲ್ಲಿ ಸಂದೇಶವನ್ನು ಕಳುಹಿಸಬಹುದಾಗಿದೆ.
..ಅಮೇರಿಕಾದಲ್ಲಿ  ಸ್ಯಾಮ್ಯುಯಲ್ ಮೋರ್ಸ್‌ನು  ೧೧ ನೆಯ ಜನವರಿ ೧೮೩೮ ರಲ್ಲಿ  ಕಂಡು ಹಿಡಿದರೂ ಅದು ಪೂರ್ಣಪ್ರಮಾದಲ್ಲಿ ಬಳಕೆಗೆ ಬಂದದ್ದು ರ ಮೇ ೧೮೪೪ರಂದು.ವಾಷಿಂಗ್ಟನ್ನಿಂದ ಬಾಲ್ಟಿ ಮೋರ್‌ಗೆ ಮೊದಲ ಟೆಲಿಗ್ರಾಫಿಕ್‌ ಸಂದೇಶ ಹೋಯಿತು.ಅದು- what hath God wrought ?  ಎಂದಾಗಿತ್ತು. ಆಗ ಎಲ್ಲವೂ ಕ್ಯಾಪಿಟಲ್‌ ಅಕ್ಷರಗಳಲ್ಲಿಯೇ ಇರುತಿದ್ದವು ಲೇಖನ ಚಿಹ್ನೆಗಳೇ ಇರಲಿಲ್ಲ.ಎರಡೇವರ್ಷದಲ್ಲಿ
ಅಮೇರಿಕಾದ  ಎಲ್ಲ ಭೂಭಾಗದಲ್ಲೂ ಅದನ್ನು ಅಳವಡಿಸಲಾಯಿತುಪೂರ್ವ ಮತ್ತು ಪಶ್ಚಿಮತೀರಗಳಿಗೂ ಸಂಪರ್ಕ ಬಂದಿತು. ಕುದುರೆ ಗಾಡಿ ಮೂಲಕ ಅಂಚೆ ಕಳುಹಿಸುವ ಪದ್ದತಿ ಕೊನೆ ಗೊಂಡಿತು ಆಗ ತುರ್ತು ಸಂದೇಶವೆಂದರೂ  ತಲುಪಲು  ಕನಿಷ್ಠ ೧೦ ದಿನ ಬೇಕಾಗುತಿತ್ತು  ಟೆಲಿಗ್ರಫಿ ಬಂದನಂತರ  ಕೆಲವೇ ನಿಮಿಷಗಳಲ್ಲಿ  ಸುದ್ಧಿ ತಲುಪುವಂತಾಯಿತು.ಇದರಿಂದ ಸರ್ಕಾರಕ್ಕ ಆಡಳಿತ ಮತ್ತು ಸೈನಿಕ ಚಟುವಟಿಕೆಯಮೆಲೆ ನಿಯಂತ್ರಣ ಬಂದಿತು
ಅದೂಅಲ್ಲದೆ ವ್ಯಾಪಾರ ವ್ಯವಹಾರಗಳಿಗೂ ಬಹಳ ಅನು ಕೂಲವಾಯಿತು.  ಹಿಂದೆ ಇದ್ದ ಪೋನಿ ಎಕ್ಷ ಪ್ರೆಸ್‌ ಪದ್ದತಿ ಕೊನೆ ಗೊಂಡಿತು. ಇದರ
ಅಮೇರಿಕಾ ಮತ್ತು ಯುರೋಪಿನ ಇಂಗ್ಲೆಂಡ್‌ ನಡುವೆ ಪ್ರಥಮ ತಂತಿ ಸಂಪರ್ಕವು  ೧೮೫೮ರಲ್ಲಿ ಆಯಿತು. ಇದು ಸಾಧ್ಯವಾದುದು ಅಟ್ಲಾಂಟಿಕ್‌ ಸಾಗರದ ಅಡಿಯಲ್ಲಿ ಕೇಬಲ್ ಹಾಕಿದ್ದರಿಂದ ಹಡಗಿನಲ್ಲಿ  ಹಲವು ದಿನದಲ್ಲಿ ತಲುಪಬಹುದಾದ ಮಾಹಿತಿಯನ್ನು ಕೆಲವೇ ನಿಮಿಷಗಳಲ್ಲಿ ಕಳುಹಿಸಲು ಸಾಧ್ಯವಾಯಿತು, ಅದರಿಂದ
“ ಯುರೋಪ್‌ಮತ್ತು ಅಮೇರಿಕಾ ಟೆಲಿಗ್ರಫಿ ಯಿಂದ ಒಂದಾದವು”  ಎಂದು ಬ್ರಿಟಿಷ್‌ರಾಣಿ ಘೋಷಿಸಿದಳು
ತಂತಿ ಸೇವೆಯಿಂದ ಶಾಂತಿ ಮತ್ತು ಸುವ್ಯವಸ್ಥೆಗೆ ಬಹಳ ಶಕ್ತಿಯುತವಾಯಿತು. ಆ ಕಾಲದದಲ್ಲಿ ಯುರೋಪಿನ  ಪಾತಕಿಗಳು ಘೋರ ಅಪರಾಧ ಮಾಡಿ ಹಡಗಿನ ಮೂಲಕ ಅಮೇರಿಕಾಕ್ಕೆ ಹೋಗಿ ಬಿಡುತಿದ್ದರು ಅವರನ್ನು ಕಂಡು ಹಿಡಿಯಲು  ತಿಂಗಳುಗಳೇ ಬೇಕಾದ್ದರಿಂದ ತಪ್ಪಿಸಿಕೊಳ್ಳುವುದು ಸುಲಭವಾಗುತಿತ್ತು. ಆದರೆ ಮೊದಲಬಾರಿಗೆ ಪಾತಕಿಯೊಬ್ಬನು ಅಮೇರಿಕಾದಲ್ಲಿ ಹಡಗಿನಿಂದ ಇಳಿದ ತಕ್ಷಣ ಅವನನ್ನುಬಂಧಿಸಿದಾಗ ಅಚ್ಚರಿಯೊ ಅಚ್ಚರಿ ಕಾರಣ ಅವನ ಅಪರಾಧದ ಪೂರ್ಣ ವಿವರ ತಂತಿ ಸಂದೇಶದ ಮೂಲಕ ಅಮೇರಿಕಾಕ್ಕೆ ಅವನು ಬರುವ ಮೊದಲೇ ತಲುಪಿತ್ತು.
ಟೆಲಿಗ್ರಫಿಯ ನೇರ ಪರಿಣಾಮ ವಾರ್ತಾ ಪತ್ರಿಕೆಗಳ ಗುಣಮಟ್ಟದ ಮೇಲೆ ಆಯಿತು. ಈ ಮೊದಲು ನೈಸರ್ಗಿಕ ಅವಘಡಗಳು, ಯುದ್ಧ , ದಂಗೆ ಮೊದಲಾದವುಗಳನ್ನು ವರದಿಮಾಡಲು ವರದಿಗಾರರು ಖುದ್ದಾಗಿ ಸ್ಥಳಕ್ಕೆ ಹೋಗಿ ಮಾಹಿತಿ ಸಂಗ್ರಹಿಸಿಕೊಂಡು ಕಾರ್ಯಾಲಯಕ್ಕೆ ಬಂದು ಬರೆದು ನಂತರ ಪ್ರಕಟಿಸ ಬೇಕಿತ್ತು .  ಇಲ್ಲವೆ ಬರೆದುದನ್ನು ಹೇಗಾದರೂ ಮಾಡಿ ಕಚೇರಿಗೆ ಮುಟ್ಟಿಸಲು ಹರಸಹಾಸ ಪಡಬೇಕಿತ್ತು ಆದರೆ ಟೆಲಿಗ್ರಫಿ ಬಂದ ಮೇಲೆ  ಹತ್ತಿರದ ಟೆಲಿಗ್ರಾಫಿಕ್‌  ಕಚೇರಿಗೆ ಹೋಗಿ ನೂರಾರು ಮೈಲು ಏಕೆ ಸಾವಿರಾರು ಮೈಲು ದೂರದಿಂದಲೂ ಸುದ್ದಿ ರವಾನೆ ಮಾಡುವ ಸೌಲಭ್ಯ ದೊರೆಯಿತು.  .
ಭಾರತದಲ್ಲಿ ಮೊಟ್ಟ ಮೊದಲ ಸಂದೇಶವು ೧೮೫೦ ರಲ್ಲಿ ಭಾರತದಲ್ಲಿ ಬ್ರಿಟಿಷ್‌  ಸಾಮ್ರಾಜ್ಯದ ರಾಜಧಾನಿಯಾದ ಕಲಕತ್ತಾ ದಿಂದ ಡೈಮಂಡ್ ಹಾರ್ಬರ್‌ ರವಾನೆಯಾಗಿತ್ತು ಆಗ . ಭಾರತದ ಗೌರ್ನರ್‌ಆಗಿದ್ದ  ಲಾರ್ಡ ಡಾಲ್‌ಹೌಸಿಯು ಟೆಲಿಗ್ರಾಮ್‌ಗಳ  ಪ್ರಾಮುಖ್ಯತೆಯನ್ನು ಗಮನಿಸಿ  ಕಲಕತ್ತಾದ ಹತ್ತಿರ ೨೭ ಮೈಲು  ಸಂಪರ್ಕ ಒದಗಿಸಲು ಅನುಮತಿ ನೀಡಿದ . ಅದು ಕ್ರಮೇಣ ೧೮೫೬ ರ ಹೊತ್ತಿಗೆ ಬ್ರಿಟಿಷ್‌ ಆಡಳಿತವಿರುವ ಪ್ರದೇಶಗಳ  ಪ್ರಮುಖ ನಗರಗಳಾದ  ಕಲಕತ್ತಾ,  ಆಗ್ರಾ, ಬಾಂಬೆ,ಪೆಷಾವರ್‌ ಮತ್ತು ಮದ್ರಾಸ್‌ಗೆ ಸಂಪರ್ಕ ಕಲ್ಪಿಸಲಾಯಿತು ಈ ತಂತಿಜಾಲವು ಸುಮಾರು ೪೦೦೦ ಮೈಲು ಉದ್ದವಾಗಿತ್ತು.  .
ಅದೇ ತಂತಿ ಜಾಲವು ೧೮೮೧೦ರ ಹೊತ್ತಿಗೆ ಲಂಡನ್‌ ಯುರೋಪು ಮೊದಲಾದ ವುಗಳನ್ನು ಪ್ರಮುಖ ಸ್ಥಳ ಗಳನ್ನು ಜೋಡಿಸುವ   20000 ಮೈಲು ಉದ್ದ  ಸಂಪರ್ಕ ಜಾಲವವನ್ನುಹೊಂದಿತ್ತು.ಭಾರತದಲ್ಲಿ ಈಸ್ಟ ಇಂಡಿಯಾ ಕಂಪನಿಯವರು ತಂತಿ ಸೇವೆಯನ್ನು ಪ್ರಥಮವಾಗಿ ಉಪಯೋಗಿಸಿದ  ಹಿರಿಮೆ ಅವರದಾಯಿತು.ಅದರ ಉಪಯುಕ್ತತೆಯನ್ನು ಗಮನಿಸಿದ ಅವರು ತಂತಿ ಸೇವಾ  ವ್ಯವಸ್ಥೆಯನ್ನುಭಾರತಾದ್ಯಂತ ವಿಸ್ತರಿಸಿದರು
ಅದರಿಂದ ಅವರ ಆಡಳಿತ ಮತ್ತು ಸೈನಿಕ ಕಾರ್ಯಗಳಿಗೆ  ತುಂಬ ಅನುಕೂಲವಾಯಿತು.ಆದಕ್ಕೆ ಅಂಚೆ ಮತ್ತು ತಂತಿಕಚೇರಿಗಳು ಪೂರ್ಣವಾಗಿ ಅವರ ಹತೋಟಿಯಲ್ಲಿದ್ದವು ..
 ಒಂದು ರೀತಿಯಲ್ಲಿ ೧೮೫೭ ರಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ  ಬ್ರಿಟಿಷರ ಗೆಲುವಿಗೆ ಟೆಲಿಗ್ರಫಿಯೇ ಕಾರಣ.ಅದರಿಂದ  ಅವರಿಗೆದೇಶಾದ್ಯಂತದ ಪರಿಸ್ಥಿತಿಯನ್ನು ತಕ್ಷಣವೇತಂತಿಯ ಮೂಲಕ ತಿಳಿದುಕೊಂಡು ಸೂಕ್ತ ಕ್ರಮಕೈಗೊಳ್ಳು ಅವಕಾಸವಿರುತಿತ್ತು ಅದೇ ಸ್ವಾತಂತ್ರ್ಯ ಹೋರಾಟಗಾರರು ಸಂದೇಶಗಳನ್ನು ಗುಟ್ಟಾಗಿ ಕಳುಹಿಸಲು ವ್ಯಕ್ತಿಯೊಬ್ಬನ ಕೈನಲ್ಲಿನ ಬುತ್ತಿಯಲ್ಲಿ ಸಂದೇಶ ಅಡಗಿಸಿ ಕಳೂಹಿಸುತಿದ್ದರು ಅಂದ ಮೇಲೆ ಅವರ  ಮಿತಿಯನ್ನು ಅರ್ಥ ಮಾಡಿಕೊಳ್ಳಬಹುದು. ಯಾವಾಗ ಸೈನಿಕರು ದಂಗೆ ಎದ್ದರೋ ತಕ್ಷಣ ತಂತಿ ಸಂದೇಶವನ್ನು ಎಲ್ಲಕಡೆ ಕಳುಹಿಸಿ ಸೈನ್ಯ ಜಮಾವಣೆ ಮಾಡಿದರು ಇಂಗ್ಲೇಂಡಿಗೆ ಕಳುಹಿಸಿ ಅಲ್ಲಿಫ್ರೆಂಚರೊಡನೆ ಯುದ್ಧ ನಿರತರಾಗಿದ್ದ ಸೈನ್ಯವನ್ನು ಭಾರತಕ್ಕೆ ಕರಸಿಕೊಂಡರು.
ಕೆಲವೇ ವರ್ಷದ ಹಿಂದೆ ಸ್ಥಾಪಿಸಿದ ಈ ಸಂಪರ್ಕಜಾಲವು ಬ್ರಟಿಷರಿಗೆ ಸಿಪಾಯಿ ದಂಗೆ ಯನ್ನು ಹತ್ತಿಕ್ಕಲು ಬಹಳ ಸಹಾಯ ಮಾಡಿತು.ಭಾರತಾದ್ಯಂತ ವಿವಿಧ ಕಡೆಗಳಲ್ಲಿ ಬ್ರಿಟಿಷರ  ವಿರುದ್ಧ ಒಟ್ಟಿಗೆ ಹೋರಾಟ ನಡೆಸಿದರೂ ಆಂಗ್ಲರಿಗೆ ಇರುವ  ಅತ್ಯುತ್ಯತ್ತಮ ಸಂಪರ್ಕ ಜಾಲದಿಂದ ಸೈನ್ಯ ಜಮಾವಣೆಗೆ ಅವಕಾಶ ದೊರೆತು ಹೋರಾಟಗಾರರನ್ನು ಹಿಮ್ಮೆಟ್ಟಿಸಲಾಯಿತು. ಸ್ವಾತಂತ್ರ ಹೋರಾಟಗಾರರನ್ನು  ನೇಣಿಗೆ ಏರಿಸುವಾಗ ಅವರಲ್ಲಿ ಒಬ್ಬನಾಯಕನು  ಟೆಲಿಗ್ರಾಫಿಕ್‌  ಕಂಬಗಳನ್ನು ನೊಡಿ  “ ಈ ಪಾಪಿ ತಂತಿಗಳೇ ನಮ್ಮ ಕೊರಳಿಗೆ ಉರುಳಾದವು” ಎಂಬ ಅವನ  ಉದ್ಗಾರವು  ಸಂವಹನಶಕ್ತಿಯ ಪ್ರಾಮುಖ್ಯತೆಯ  ಪಾತ್ರವನ್ನು ಎತ್ತಿ ತೋರುತ್ತದೆ.
 ವಿಶೇಷವಾಗಿ ಇದು ಸಮುದ್ರಯಾನ ದಲ್ಲಿ ಹಡಗುಗಳಲ್ಲಿ ಬಹಳ ಅನುಕೂಲ ಒದಗಿದಸಿತು ಯಾವುದೇ ತೊಂದರೆ ಇದ್ದರೆ ಅವರು ಕಳುಹಿಸುವ S-O-S   •••---••• (SOS) ಎಂಬ ತಂತಿ ಸಂದೇಶವು ಸಹಸ್ರಾರು ಜನರ ಪ್ರಾಣಗಳನ್ನು ಕಾಪಾಡುವ ಮಂತ್ರವಾಯಿತು
.
ಒಂದು ರೀತಿಯಲ್ಲಿ ಟೆಲಿಗ್ರಾಫಿಕ್‌ ತಂತಿಗಳು ಬ್ರಿಟಿಷರ ಏಕಸ್ವಾಮ್ತತ್ವದ, ಅಧಿಕಾರದ  ಸಂಕೇತವೂ ಆಗಿದ್ದವು ಅದರಿಂದಲೇ ಕ್ರಾಂತಿ ಕಾರಿ ಸ್ವತಂತ್ರ್ಯ ಹೋರಾಟಗಾರರು ಟೆಲಗ್ರಾಫಿಕ್‌ ತಂತಿಗಳನ್ನು ಕಡಿದುಹಾಕುವುದು ಮತ್ತು ಸೈನ್ಯ ಸಾಗಣಿಕೆಗೆ ಸಹಾಯ ಮಾಡುತಿದ್ದ ರೈಲ್ವೇಸ್ಠೇಷನ್‌ಗಳನ್ನು ಸುಟ್ಟು ಹಾಕುವುದು ಪ್ರತಿಭಟನೆಯ ಅಂಗವಾಗಿ ಪರಿಗಣಿಸಿದ್ದರು ಕರ್ನಾಟಕದ ಲ್ಲಿಯೂ ಸ್ವಾತಂತ್ರ್ಯ ಹೋರಾಟಗಾರರಾದ ಹಳ್ಳಿಕೇರಿ ಗುದ್ಲೆಪ್ಪ ಮತ್ತು ಮೈಲಾರ ಮಹದೇವ ಇದೇ ಅಪಾದನೆಯ ಮೇಲೆ ಶಿಕ್ಷೆಗೆ ಗುರಿಯಾಗಿದ್ದರು.
ಗಾಂಧೀಜಿಯವರು ತಮ್ಮ ದಕ್ಷಿಣ ಆಫ್ರಿಕಾ ಹೋರಾಟದ ಸಮಯದಿಂದಲೆ ಬ್ರಿಟಿಷ್‌ಅದಿಕಾರಶಾಹಿಗೆ ಮೇಲಿಂದ ಮೇಲೆ ತಂತಿಯ ಮೂಲಕ ತಮ್ಮ ಪ್ರತಿಭಟನೆ  ಸೂಚಿಸುತಿದ್ದರು. ತಮ್ಮ ಸಂಗಾತಿಗಳೊಡನೆ ಸತತಸಂಪರ್ಕದಲ್ಲಿರಲು ತಂತಿಯ ಮೂಲಕವೇ ಮಾರ್ಗದರ್ಶನ ನೀಡಿ ಚಳುವಳಿಯನ್ನು  ಮುನ್ನೆಡೆಸುತಿದ್ದರು .ತಮ್ಮ ಹೋರಾಟದ ಮುನ್ಸೂಚನೆಯನ್ನು ತಂತಿ ಸಂದೇಶದ ಮೂಲಕ ಸರ್ಕಾರಕ್ಕೆ ತಿಳಿಸಿಯೇ ಹೋರಾಟ ಪ್ರಾರಂಭಿಸುತಿದ್ದರು.
ಸ್ವಾತ್ರ್ಯ ಬಂದನಂತರ ತಂತಿಕಚೇರಿಯ ವಿಸ್ತರಣೆ ಅಗಾದವಾಗಿತ್ತು ಅದು ಗರಿಷ್ಟ ಮಟ್ಟ ಮುಟ್ಟಿದುದು ೧೯೮೫ರಲ್ಲಿ. ಆಗ ೪೫,೦೦ ತಂತಿಕಚೇರಿಗಳಿದ್ದವು ಅವುಗಳ ಮೂಲಕ ಆವರ್ಷ  ೬ ಕೋಟಿ ಟೆಲಿಗ್ರಾಮ್‌ಗಳ ವಿತರಣೆ ಯಾಗಿತ್ತು.
.
ಸಾರಿಗೆ ಸೌಲಭ್ಯವಿಲ್ಲದ ಭಾರತದಲ್ಲಿ ತಂತಿ ಸೇವೆಯು ವರದಾನವಾಗಿ ಬಂದಿತು ಮೊದಲು ನಗರಗಳಿಗೆ ಮಾತ್ರ ಇದ್ದ ಸಂಪರ್ಕವು ಬರಬರುತ್ತಾ ಪಟ್ಟಣ ಮತ್ತು ಹಳ್ಳಿಗಳಿಗೂ ವಿಸ್ತರಿಸಿತು ಇದು ಅಂವೆ ಸೇವೆಯ ಭಾಗವಾಗಿದ್ದುದರಿಂದ ಎಲ್ಲಿ ಅಂಚೆ ಕಚೇರಿಗಳಿವೆಯೋ ಅಲ್ಲಿ ತಂತಿಸೌಲಭ್ಯವೂ ಸಿಗುತಿತ್ತು ಅಂಚೆಕಚೇರಿಗೆ ಬಂದ ತಂತಿ ಸಂದೇಶವನ್ನು ಸಂದೇಶವಾಹಕರು ಸೈಕಲ್‌ಮೇಲೆ ಹೋಗಿ ಸಂಬಂಧಪಟ್ಟವರಿಗೆ ತಲುಪಿಸುತಿದ್ದರು. ಬರಿ ಸರ್ಕಾರದ ಕೆಲಸಕ್ಕೆ ಬಳಕೆಯಾಗುತಿದ್ದ ತಂತಿಸೇವೆ ಸಾಮಾನ್ಯರ ಸೇವೆಗೂ ಲಭ್ಯವಾಯಿತು ಆದರೂ ಬಹಳ ಕಾಲದ ತನಕ ತಂತಿ ಬಂದಿತೆಂದರೆ ಅದು ಸಾವಿನ ಸುದ್ದಿ ಎಂದೇ ತಿಳಿದುಕೊಂಡು ಗಾಬರಿಯಾಗುತಿದ್ದರು
.
ಈಗ ಹಲವಾರು ಟಿ.ವಿ ಚಾನಲ್‌ಗಳು24x7  ಎಂದು ಹೆಮ್ಮೆಯಿಂದಹೇಳಿಕೊಂಡು ಕೆಲಸ ಮಾಡುತ್ತಿವೆ. ಆದರೆ ಬಹಳ ಮೂಚೆಯೇ ಹಗಲು ಮತ್ತು ತಡ ರಾತ್ರಿಯವರೆಗೆ ಕಟ್‌ಕಟಕ ಕಟ್‌ ಎಂದು ಶಬ್ದ ಮಾಡುತಿದ್ದು ಎಂದರೆ ತಂತಿಕಚೇರಿ ಮಾತ್ರ.. ನೀರವರಾತ್ರಿಯಲ್ಲಿಯು ದರ ಶಬ್ದ ಕಟ್ಟಡದ ಆಸು ಪಾಸಿನಲ್ಲಿ ಕೇಳಬಹುದಾಗಿತ್ತು
ಭಾರತದಲ್ಲಿ ಬ್ರಿಟಷರು ಅದನ್ನು ಸ್ತಾಪಿಸಿದುದು ತಮ್ಮ ಆಡಳಿತ ಮತ್ತುಸೈನಿಕ ಕಾರಣಗಳಿಗಾಗಿ. ಆದರೆ ಅದು ಸ್ವಾತಂತ್ರ್ಯ ಹೋರಾಟದ ಚಾಲಕ ಶಕ್ತಿಯಾಗಿಯು ಕೆಲಸ ಮಾಡಿತು
ಟೆಲಿಗ್ರಾಫಿಕ್  ಇಂಗ್ಲಿಷ್ ಎಂಬುದು ಒಂದು  ವಿಶೇಷ ರೀತಿಯ  ಇಂಗ್ಲಿಷ್‌ ಬರಹ. ಅದರಲ್ಲಿ ನಾಮಪದ ಮತ್ತು ಕ್ರಿಯಾಪದಗಳು ಮಾತ್ರ ಇರುತ್ತವೆ. ಇಂಗ್ಲಿಷ್‌ನ  helping verb, adjective , adverb article preposion ಗಳಿಗೆ ಪ್ರಾಮುಖ್ಯತೆ ಇಲ್ಲ. ಕಾರಣ ಪ್ರತಿ ಪದಕ್ಕೂ ನಿಗದಿತ ಮೊತ್ತದ ಹಣ ಕೊಡಬೇಕು ಆದ್ದರಿಂದ ಕಡಿಮೆ ಪದಗಳಲ್ಲಿ ಹೆಚ್ಚು ಮಾಹಿತಿ ಕೊಡಲುಪ್ರಯತ್ನಿಸುವರು.ಇದನ್ನು ಅಡಕ  ಬರಹ ಎನ್ನಬಹುದು. ಮೊದಲುಇಂಗ್ಲಿಷ್‌ನಲ್ಲಿ ಮಾತ್ರ ಸಂದೇಶ ಇರಬೇಕಿತ್ತುಬ ಆದರೆ ನಂತರ ಲಿಪ್ಯಾಂತರ ಮಾಡಿದರೆ ಸಾಕಿತ್ತು ವಿಶೇಷ ಸಂದರ್ಭ ಲ್ಲಿ ಆಯ್ದ ಶುಭಾಶಯಗಳಿಗೆ ನಿಗದಿತ ಸಂಖ್ಯೆಬರೆದರೆ ಸಾಕಿತ್ತು ಮತ್ತು ಒಂದೆ ವಿಷಯವನ್ನು ಅನೇಕರಿಗೆ ಪ್ರತಿಹಾಕಿದರೆ ರಿಯಾತಿಯ  ಸೌಲಭ್ಯವೂ ಇತ್ತು.  
 ಜೊತೆಗೆ ರಿಪ್ಲೈ ಪೇಡ್‌  ತಂತಿ ಕಳುಹಿಸುವ ಸೌಲಭ್ಯವಿತ್ತು.  ನ್ಯಾಯಾಲಯದಲ್ಲಿ ತಂತಿಯನ್ನು ಸಾಕ್ಷಿವಾಗಿ ಪರಿಗಣಿಸುವ ಅವಕಾಶವೂಇತ್ತು.
ಅತಿ ಚಿಕ್ಕ ಸಂದೇಶ ಕಳುಹಿಸಿದ ಹಿರಿಮೆ ಇಂಗ್ಲಿಷ್‌ಲೇಖಕ ಅಸ್ಕರ್‌ವೈಲ್ಡ್‌ನದು. ಅವನ ಹೊಸ ಪುಸ್ತ ಒಂದು ಇಂಗ್ಲೆಂಡಿನಲ್ಲಿ ಪ್ರಕಟವಾದಾಗ ಅವನು ಪ್ಯಾರಿಸ್‌ನಲ್ಲಿದ್ದ. ಅದರ ಮಾರಾಟ ಹೇಗಿದೆ ಎಂದು ತಿಳಿಯಲು ಪ್ರಕಾಶರಿಗೆ ಕಳುಹಿಸಿದ ತಂತಿಯಲ್ಲ್ಲಿ  ?   ಚಿಹ್ನೆ ಮಾತ್ರ ಇತ್ತು.ಅವನಿಗೆ ಬಂದ ಉತ್ತರವೂ ಅಷ್ಟೇ ಚಿಕ್ಕದಾಗಿತ್ತು. ಅದರಲ್ಲಿಯೂ  !   ಗುರುತ ಮಾತ್ರ ಇತ್ತು . ಅತ್ಯಂತ ದೊಡ್ಡ ಸಂದೇಶವನ್ನು ಕಳುಹಿಸಿರುವುದು  ಜವಹರ್‌ಲಾಲ್‌ನೆಹರೂ ಅವರು. ೧೯೪೭ ರಲ್ಲಿ ಬ್ರಿಟಿಷ್‌ ಪ್ರಧಾನಿ ಕ್ಲೆಮೆಂಟ್‌ ಆಟ್ಲಿ ಯವರಿಗೆ ೧೬೩ ಪದದ ಸಂದೇಶ ಕಳುಹಿಸಿದ್ದರು.
ಮೊಬೈಲ್‌ಫೋನುಗಳ ಸಂಖ್ಯೆಯು ಕಳೆದ ದಶಕದಲ್ಲಿ ಸ್ಪೋಟಕವಾಗಿ ಹೆಚ್ಚಿದೆ,ಅದು ಒಂದುರೀತಿಯಲ್ಲಿ ಸಂಪರ್ಕಕ್ರಾಂತಿಯನ್ನು ತಂದಿದೆ. ಎಸ್ ಎಂಎಸ್ ಅಂತೂ ತಂತಿ ಸಂದೇಶಕ್ಕೆ ಮಾರಣಾಂತಿಕ ಹೊಡೆತ ನೀಡಿತು. ಅದರ ಫಲವಾಗಿ ನೂರು ಕೋಟಿ ಇದ್ದವ್ಯವಹಾರ ೭೦ ಲಕ್ಷ ಕ್ಕೆ ಇಳಿಯಿತು. ಅನಿವಾರ್ಯವಾಗಿ ಮಹಾ ಸೇವೆಯೊಂದಕ್ಕೆ ಮಂಗಳ ಹಾಡ ಬೇಕಾಯಿತು