Sunday, December 30, 2012

ಅಮೇರಿಕಾ ಅನುಭವ-8



ಹಣವಂತ ಹಂಡತಿ ಬೇಕು
 ಜಾಹಿರಾತಿನ ಮಹಿಮೆ ಜಗತ್ತಿನಲ್ಲಿ ಅರಿಯದವರಿಲ್ಲ. ಮಾರುಕಟ್ಟೆಯಲ್ಲಿ ಉತ್ಪನ್ನವನ್ನು ಮಾರಲು ಜಾಹಿರಾತಿಗಾಗಿ ಅದರ ಉತ್ಪಾದನಾವೆಚ್ಚದ ಅರ್ಧಕ್ಕಿಂತ ಹೆಚ್ಚು ಖರ್ಚು ಮಾಡುವವರಿದ್ದಾರೆ. ಜಾಹಿರಾತಿನ ಸಹಾಯದಿಂದ ಕೊಳ್ಳುವವರಿದ್ದರೆ ಏನು ಬೇಕಾದರೂ ಮಾರಲುಸಿದ್ಧ. ಎಫೆಲ್‌ ಟವರ್‌ ಮಾರಿದ ಕುಖ್ಯಾತನ ಕಥೆ ಎಲ್ಲರಿಗೂ ಗೊತ್ತಿರಬಹುದು.ಪತ್ರಿಕೆ, ಟಿವಿ ಸಿನಿಮಾ ಮಾದ್ಯಮಗಳು ಬಂದ ಮೇಲಂತೂ ಜಾಹಿರಾತಿನ ವೈವಿಧ್ಯವನ್ನು ವರ್ಣಿಸುವುದು ಅಸದಳ. ಆದರೆ ನ್ಯೂಯಾರ್ಕನಲ್ಲಿ ಒಂದು ವಿಚಿತ್ರ ಜಾಹಿರಾತು ನೋಡಿದೆ. ಅದು ಕಾಸು ಖರ್ಚಿಲ್ಲದ ವಿಧಾನ.. ಮಾಲು ಹೇಗಿದೆ ಎಂದು ಚಿಂತೆ ಮಾಡಬೇಕಿಲ್ಲ. ಕಣ್ಣೆದುರೆ ಕಾಣುವುದು. ಯಾವ ಅನುಮಾನವಿದ್ದರೂ ಅಲ್ಲಿಯೆ ಪರಿಹಾರ. ಆದರೆ ಅದು  ಮಾರಾಟ ತಂತ್ರವಲ್ಲ ತನಗೆ ಬೇಕಾದ್ದನ್ನು ಪಡೆಯುವ ಮಂತ್ರ.
ಇಲ್ಲೊಬ್ಬ  ೫೬ ವರ್ಷದ ವ್ಯಕ್ತಿಗೆ ಮದುವೆಯ ಅಗತ್ಯಬಿದ್ದಿದೆ. ಅರ್ಧ ವಯಸ್ಸುಕಳೆದ ಮೇಲೆ ಸಂಗಾತಿಯಂದಿಗೆ  ನೆಮ್ಮದಿಯ ಜೀವನ ಕಳೆಯಬಯಸಿರುವ..ಹದಿಹರೆಯದಲ್ಲಿ ಮಜವಾಗಿ ಜೀವನ ಕಳೆದ. ಮೈ ಮುರಿಯೆ ವಾರದವರೆಗೆ ದುಡಿದ. ವಾರಾಂತ್ಯದಲ್ಲಿ ಮೋಜು ಉಡಾಯಿಸಿದ.ಈಗಲೂ ಅದೋ ಇದೂ ಕೆಲಸ ಮಾಡಿ ಸಂಪಾದನೆ ಮಾಡುವನು. ಆದರೆ ಮಧ್ಯ ವಯಸ್ಸು ಮುಟ್ಟಿದ ಮೇಲೆ ಒಂಟಿತನ ಕಾಡಿದೆ.  ತಾನೊಬ್ಬನೆ ಬದುಕಲು ತೊಂದರೆ ಏನಿಲ್ಲ. ನೆಮ್ಮದಿ ಬೇಕೆನಿಸಿದೆ. ಸಂಗಾತಿ ಬೇಕು ನೆಮ್ಮದಿಯ ಬದುಕು ಬೇಕು ಅದಕ್ಕೆ ಅಗತ್ಯವಾದಷ್ಟು ಆದಾಯ ಇಲ್ಲ ಅದಕ್ಕೆ ಅವನು ಸೂಕ್ತ ಜತೆ ಸಿಕ್ಕರೆ ಮಾತ್ರ ಮದುವೆಯಾಗಲು ನಿರ್ಧರಿಸಿದ. ಅದಕ್ಕೇನು ಮಾಡುವುದು ? . ಯಾವುದಾದರೂ ಪತ್ರಿಕೆಯಲ್ಲಿ ಜಾಹಿರಾತು ಕೊಡಬಹುದು. ಅದು ತುಸು ಖರ್ಚಿನ ಬಾಬ್ತು.  ಇಲ್ಲವಾದರೆ ಸುದ್ಧಿ ಮಾದ್ಯಮಗಳ ಮೂಲಕ ತನ್ನ ಇರಾದೆ ತಿಳಿಸಬಹುದು.ಅದೂ ಬೇಡ ಎಂದರೆ ಸಂಗಾತಿಗಳನ್ನು ಒಂದು ಗೂಡಿಸುವ ಮೆಟ್ರಿಮೊನಿ.ಕಾಲಮ್‌ಗಳಲ್ಲಿ ಅಥವ ಸಂಘಟನೆಗಳಲ್ಲಿ ನೋಂದಾವಣಿ ಮಾಡಬಹುದು. ಭಾರತದಲ್ಲಿನಂತೆ ಇಲ್ಲೂ  ವಧೂ ವರ ಹುಡುಕುವ ಅನೇಕ ಸಂಘ ಸಂಸ್ಥೆಗಳಿವೆ.ಇನ್ನೂ ಕೆಲವರು ತಮ್ಮ ಬಂಧು ಬಳಗ , ಗೆಳೆಯ ಗೆಳತಿಯರ ಮೂಲಕವೂ ಸಂಗಾತಿಯನ್ನು ಹುಡುಕುವರು. ಆದರೆ ಈ ವ್ಯಕ್ತಿ ಒಂದು ವಿಭಿನ್ನ ಹಾದಿ ಹಿಡಿದ.
ತನ್ನ ಹೃದಯದ ಅನಿಸಿಕೆಯ ರಹಸ್ಯವನ್ನು ತನ್ನ ಎದೆಯ ಮೇಲೆ ಬೆನ್ನ ಮೇಲೆ ಬಹಿರಂಗ ಪಡಿಸಿದ., ಈ ವ್ಯಕ್ತಿಯ ನ್ಯೂಯಾರ್ಕಗೆ ಹತ್ತಿರದಲ್ಲೆ ಒಂದೆ ಗಂಟೆ ಯಲ್ಲಿ ತಲುಪಬಹದಾದ ನ್ಯೂ ಜರ್ಸಿಯ ಪಟ್ಟಣದಲ್ಲಿರುವ ಎರಡು ಬೆಡ್ ರೂಮಿನ ಮನೆಯಲ್ಲಿ   ಅವನ ವಾಸ.ಅವನ ಹೆಸರು ರಾಬರ್ಟ ಡಾರ್ಲಿಂಗ್‌.ಅವನಿಗೆ ಈಗ  ಡಾರ್ಲಿಂಗ್‌ ಎಂದು ಕರೆಯುವ ಶಾಶ್ವತ ಸಂಗಾತಿ ಜೊತೆಗೆ ಇರಬೇಕೆನಿಸಿದೆ.ಅದಕ್ಕೆ, ತನ್ನ ಶಾಶ್ವತ ಸ್ವೀಟ್‌ ಹಾರ್ಟ ಅನ್ನು  ಹುಡುಕಲು ಮುಂದಾದ. ಆದರೆ ಅವನು ಬಹು ವ್ಯವಹಾರಸ್ಥ. ಬರಿ ಹೆಣ್ಣು ಮಾತ್ರ ದೊರೆತರೆ ಸಾಲದು. ಏಕೆಂದರೆ ನೆಮ್ಮದಿಯ ಜೀವನ ನಡೆಸಲು ಹೊನ್ನೂ ಬೇಕಲ್ಲ. ಅದಕ್ಕೆ ಹಣವಂತ ಹೆಂಡತಿಯೆ ಬೇಕು ಎಂದೇ ಅವನ ಬೇಡಿಕೆ. ವಿನೈಲ್‌ ಹಾಳೆಯ ಮೇಲೆ ತನ್ನ ಹೆಸರು, ವಯಸ್ಸು, ಒಂಟಿ, ಮದುವೆಯಾಗಿಲ್ಲ, ಮಕ್ಕಳೂ ಇಲ್ಲ( ಅಮೇರಿಕಾದಲ್ಲಿ  ಮಕ್ಕಳಾಗಲು ಮದುವೆಯಾಗಿರಲೇ ಬೇಕೆಂಬ ಕಡ್ಡಾಯವೇನೂ ಇಲ್ಲ) ತನ್ನ ಹವ್ಯಾಸ, ದೂರವಾಣಿ ಸಂಖ್ಯೆ , ವಿಳಾಸ,   ಎಲ್ಲವನ್ನೂ ಸ್ಪಷ್ಟವಾಗಿ ಬರೆದ. ಮೇಲೆ ದಪ್ಪ ಅಕ್ಷರದಲ್ಲಿ ಹೇ! ಹುಡುಗಿಯರೆ ಎಂದು ಸಂಬೋಧನೆ ಅವನು ನ್ಯೂಜರ್ಸಿಯ ಬ್ರಾಡಲೆ ಟೌನ್‌ ನಿವಾಸಿ, ಎರಡು ಬೆಡ್‌ರೂಮ್‌ ಸ್ವಂತ ಮನೆಯಿದೆ. ಈವರೆಗೆ ಕೆಲಸದಲ್ಲಿದ್ದ. ಈಗ ನಿರುದ್ಯೋಗಿ. ಈಗ ಕೈಗೆ ಕೆಲಸ ಮನೆಗೆ ಸಂಗಾತಿ ಅರಸಿ ಹೊರಟಿರುವ. ನ್ಯೂ ಯಾರ್ಕನಲ್ಲೂ ಮೆಟ್ರಿಮೋನಿಯಲ್‌ಬ್ಯೂರೋಗಳಿಗೆ ಬರವಿಲ್ಲ. ಆದರೆ ಇವನು ಅಲ್ಲಿ ನೊಂದಾಯಿಸಲು ಸಿದ್ದನಿಲ್ಲ. ಅವರ ಪ್ರಕಾರ ಈ ರೀತಿಎದೆಗೆ ಬೋರ್ಡು ತಗುಲಿಸಿ ಕೊಂಡುತಿರುಗಿದರೆ ಜೊತೆಗಾತಿಸಿಗುವ ಸಂಭವ ಕಡಿಮೆ. ಇನ್ನುಹಣವಂತ ಮಹಈಳೆಯಂತೂ ಹತ್ತಿರ ಸುಳಿಯುವುದಿಲ್ಲ.  ಅವರು ತಮಗೆ ಸರಿ ಸಮಾನ ಸಾಮಾಜಿಕ ಸ್ಥಾನದಲ್ಲಿರುವವರನ್ನೇ ಬಯಸುವರು.ಅಲ್ಲದೆ ಆಗಲೆ ಅವನ ವಯಸ್ಸು ನಲವತ್ತರ ಮೇಲಿದೆ. ಅವನು ತನ್ನ ಹುಡುಕುವ ವಿಧಾನ ಬದಲಿಸಿದರೆ ಸಂಗಾತಿ ಸಿಗಬಹುದು ಎಂದುಕೊಂಡ.ಅದಕ್ಕೆ ವಿನೂತನ ವಾದ ಜಾಹಿರಾತಿಗೆ ಮೊರೆಹೋದ.
“ನನಗೆ ಹಣವಂತ ಹೆಂಡತಿಯ ಅಗತ್ಯವಿದೆ  . ಅತಿ ಶ್ರೀಮಂತಳಾಗಿಲ್ಲದಿದ್ದರೂ ಪರವಾಇಲ್ಲ ಇಬ್ಬರ ಸುಖಜೀವನಕ್ಕೆ ಸಾಕಾಗುವಷ್ಟು ದುಡಿಮೆ ಇದ್ದರೂ ಪರಿಗಣಿಸಲಾಗುವುದು, ಎಂಬ ಕೊಸರು ಬೇರೆ. ಅಮೇರಿಕಾದ ಅದರಲ್ಲೂ ನ್ಯೂಯಾರ್ಕನ ಲೆಕ್ಕದಲ್ಲಿ ಅವನ ನಿರೀಕ್ಷೆ ಅತಿಯಾಗಿ ಇರಲಿಲ್ಲ. ಒಂದೂವರೆ ಲಕ್ಷ ಡಾಲರು ಸಂಪತ್ತು ಇದ್ದರೆ ಸಾಕು”  ಎಂದು ತಿಳಿಸಿದ್ದ.ತನ್ನ ಸಂಪರ್ಕ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳನ್ನೂ ನಮೂದಿದ.
ಈ ಎಲ್ಲ ವಿವರಗಳನ್ನು ಬಣ್ಣ ಬಣ್ಣ ದ ಅಕ್ಷರಗಳಲ್ಲಿ ಬರೆದ ಪ್ಳಾಸ್ಟಿಕ್‌ ಬೋರ್ಡನ್ನು ತನ್ನ ಎದೆ ಮತ್ತು ಬೆನ್ನ ಮೇಲೆ ಹಾಕಿಕೊಂಡು ನ್ಯೂಯಾರ್ಕನಲ್ಲಿ ವಾರಾಂತ್ಯದ ಎರಡು ದಿನ ,ಮೆಟ್ರೊಮ್ಯೂಜಿಯಂ, ಕೊಲಂಬಸ್‌ ಸರ್ಕಲ್, ವಾಲ್‌ಸ್ಟ್ರೀಟ್‌ , ಪಬ್ಲಿಕ್‌ಲೈಬ್ರರಿ ಹಾಗೂ ಇತರ ಜನ ನಿಬಿಡ ಪ್ರದೇಶಗಳಲ್ಲಿ ಸುತ್ತಾಡುತ್ತ ಇರುವನು. ಕಳೆದ ಹತ್ತು ವರ್ಷದಿಂದ ಇದೆ ವಿಧಾನ ಅನುಸರಿಸಿದರೂ ಅವನಿಗೆ ಇನ್ನೂ ಕಂಕಣ ಬಲ ಕೂಡಿ ಬಂದಿಲ್ಲ. ಹುಡುಗೆಯ ಅಂದದ ಬಗ್ಗೆ ಅವನ ಆಸೆ ಅತಿಯಾಗಿಲ್ಲ. ಅಲ್ಲಿ ಜಾತಿ ಮತದ ಗೋಜು ಇಲ್ಲವೆ ಇಲ್ಲ. ಅಪ್ಪ ಅಮ್ಮ ಕೌಟುಂಬಿಕ ಹಿನ್ನೆಲೆ ಯಾರಿಗೂ ಬೇಡ. ಸಾಮಾಜಿಕ ಭದ್ರತೆ ಸಂಖ್ಯೆ ಇದ್ದರೆ ಸಾಕು. ಪೋಲಿಸರಲ್ಲಿ ಅವರ ಜಾತಕ ಇರಬಾರದು..  ಹುಡುಗಿಗೆ ತನ್ನ ವಯಸ್ಸಿನ ಈಚೆ ಆಚೆ ಐದುವರ್ಷ ಇದ್ದರೂ ಸರಿ,. ಆದರೆ ಸದಾ ನಗುತ್ತಿರುವನಗಿಸುವ ಮತ್ತು ಸಂಗೀತ ಕೇಳುತ್ತಾ ಮೈಮರೆವ ಭಾವ ಜೀವಿಯೆ ಆಗ ಬೇಕೆಂದು ಅವನ ಬಯಕೆ.
ಅವನ ಪ್ರಯತ್ನಕ್ಕೆ ಪ್ರತಿಕ್ರಿಯೆ ಇಲ್ಲ ಅಂತ ಏನೂ ಇಲ್ಲ. ಅನೇಕ ಆಧುನಿಕ ಮಹಿಳೆಯರು ಇವನ ಹೃದಯದಲ್ಲಿನ ಗುಟ್ಟನ್ನು ಅವನ ಎದೆಯ ಮೇಲೆಯೇ ಬರೆದುಕೊಂಡಿರುವುದನ್ನು  ನೋಡಿ ಮೆಚ್ಚಿದ್ದಾರೆ. ಕೆಲವರು ಅವನ ಜೊತೆ ಫೋಟೋ ಸಹಾ ತೆಗೆಸಿಕೊಂಡಿದ್ದಾರೆ. ಅವನ ಸಧೃಡ ಮೈಕಟ್ಟು , ತಲೆತುಂಬ ಇರುವ ಕೆಂಚು ಕೂದಲು ಸುಕ್ಕು ಇಲ್ಲದ  ಮುಖ ಮೆಚ್ಚಿದವರು ಇದ್ದಾರೆ ಆದರೆ ಅವನಿಗೆ  ಎಲ್ಲ ಶರತ್ತುಗಳನ್ನೂ ಪೂರೈಸಬಲ್ಲ ಮಹಿಳೆ ಮಾತ್ರ ಸಿಕ್ಕಿಲ್ಲ. ಒಂದು ಸಾರಿ ಹೇಳಿ ಮಾಡಿಸಿದಂಥಹ ಹೆಣ್ಣು ಇದೆ ಎಂದು ಯಾರೋ ಒಬ್ಬರು ಸಂಪರ್ಕಿಸಿದರು. ಇಬ್ಬರೂ ಭೇಟಿಯಾದರು.ಎಲ್ಲ ಅಂದುಕೊಂಡಂತೆ ಇತ್ತು. ಮದುವೆಗೆ ದಿನ ನಿರ್ಧರಿಸುವದು ಮಾತ್ರ ಬಾಕಿ.ಆಗ ಗೊತ್ತಾಯಿತು  ಅಮೇರಿಕಾದ ನಾಗರೀಕಳು ಅಲ್ಲ. ಅವಳಿಗೆ ಗ್ರೀನ್‌ ಕಾರ್ಡು ಬೇಕೆಂದು ಇವನನ್ನು ಮದುವೆಯಾಗಲು ಸಿದ್ಧಳಾಗಿದ್ದಳು. ಆದರೆ ರಾಬರ್ಟ ಒಂದೆ ಮಾತಿನಲ್ಲಿ ಒಲ್ಲೆ ಎಂದ . ಅವಳು ಪ್ರೀತಿಯ , ನೆಮ್ಮದಿಯ ಸಂಸಾರಕ್ಕಾಗಿ ಮದುವೆಯಾಗ ಬೇಕೇ ಹೊರತೂ ಅವನಿಂದ ಗ್ರೀನ್‌ ಕಾರ್ಡು ಪಡೆಯುವ ಆಮಿಷಕ್ಕೆ ಒಳಗಾಗಿ ಮದುವೆಗೆ ಸಿದ್ಧವಾಗಬಾರದು ಎಂಬುದು ಅವನ ಸಿದ್ಧಾಂತ. ಅದರಿಂದ ಇಬ್ಬರಿಗೂ ನೆಮ್ಮದಿ ಇರದು. ಹಾಗಾಗಿ ಅವಳ  ಜತೆ  ಮದುವೆಯಾಗುವುದು ಅವನಿಗೆ ಒಪ್ಪಿಗೆಯಾಗಲಿಲ್ಲ. ಬೇಡ ಎಂದು ನಿರಾಕರಿಸಿದ.ಇದಲ್ಲದೆ ಇನ್ನೂ ಒಂದೆರಡು ಪ್ರಸ್ತಾಪಗಳು ಬಂದವು ಆದರೆ ಅವು  ಸಲಿಂಗ ವಿವಾಹದ ಪ್ರಸ್ತಾವನೆಗಳು.. ಅವನು ಅದರ ಕಟ್ಟಾ ವಿರೋಧಿ.ಮದುವೆಯಾಗದಿದ್ದರೂ ಚಿಂತೆ ಇಲ್ಲ ಆ ಸಂಬಂಧಗಳು ಬೇಡವೆ ಬೇಡ  ಎಂದ.
 ನ್ಯೂಯಾರ್ಕನಲ್ಲಿರುವ ಮೆಟ್ರಿಮೋನಿಯಲ್‌ ಸಂಘಟನೆಗಳು ಅವನಿಗೆ ಯಶ ಸಿಗುವುದು ಕಷ್ಟ ಎಂದು ಭಾವಿಸಿವೆ, ಅವನಿಗೆ ಜೊತೆ ಹುಡುಕುವುದು ಸಾಧ್ಯವಿದೆ. ಆದರೆ ಹಣವಂತ ಹೆಂಡತಿ ಕಷ್ಟ. ಅವರು ತಮ್ಮ ಸರಿ ಸಮಾನರಾದವರನ್ನೆ ಆಯ್ದು ಕೊಳ್ಳುವರು ವನು ಈಗಲೂ  ವಾರದ ಐದು ದಿನ ಕೆಲಸ ಮಾಡುವನು ರಜಾಂತ್ಯದಲ್ಲಿ ಶಾಶ್ವತ ಸಂಗಾತಿಯ ಸುಳಿವಿಗಾಗಿ  ಇನ್ನೂ  ಹುಡುಕುತ್ತಲೆ ಇದ್ದಾನೆ. ಸಿಗುವ ತನಕ ಸುಮ್ಮನಾಗುವುದಿಲ್ಲ ಎಂಬದು ಅವನ ಛಲ ಕೆಲಸ ಮತ್ತು ಕಾಮಿನ ಇಬ್ಬರನ್ನೂ ಅವನು ಹುಡುಕುತ್ತಲೆ ಇದ್ದಾನೆ . ನಿಮಗೇನಾದರೂ ಅಂತಹ ಹುಡುಗಿ ಗೊತ್ತಿದ್ದರೆ ತಿಳಿಸುವಿರಿತಾನೆ?

Your browser may not support display of this image. 

Friday, December 28, 2012

ವಿಜಯ ಅಂಗಡಿ-ಸಾವಯವ ಕೃಷಿ- ಹರಿಕಾರ




ಜೀವನ ಪ್ರೀತಿಯ ಜೈವಿಕ ಮೇಳ



ಹಳೆಯವಿದ್ಯಾರ್ಥಿಯ ಒತ್ತಾಯದ ಕರೆಗ ಓ ಗೊಟ್ಟು ಸಾವಯವ ಮೇಳಕ್ಕೆ ಹಜರಾಗಲು ಹೊರಟಿದ್ದೆ. .ಸಕಲೇಶ ಪುರ ಹಾಸನ  ಹೈವೇ ಯಿಂದ  ಆಲೂರು ದಾಟಿದ ನಂತರ ಅಲ್ಲಿ ಹಲವು ಬ್ಯಾನರ್‌ಗಳ ನ್ನು ಕಂಡಾಗ ಇಲ್ಲಿಯೆ ಇದೆ ಕಾರ್ಯಕ್ರಮ ಅಂದುಕೊಂಡೆವು . ಬಸ್ಸಿನಿಂದ ಇಳಿದು ಒಳಗೆ ಸುಮಾರು ಇನ್ನೂರು ಮೀಟರ್ ದೂರದಲ್ಲಿನ  ಹೆಬ್ಬಾಗಿಲ ಕಡೆ ಹೊರಟಾಗ ಪಕ್ಕದಲ್ಲೆ ಕಾರೊಂದು ಬಂದು ನಿಂತಿತು. ಬನ್ನಿ ಕರೆದುಕೊಂಡುಹೋಗುವೆ , ಎಂದರು ಅದರಲ್ಲಿದ್ದ ಮಧ್ಯ ವಯಸ್ಕ ವ್ಯಕ್ತಿ.
ಬೇಡ , ವಂದನೆಗಳು. ನಡೆದೆ ಬರುವೆವು , ಎಂದಾಗ  ಕಾರು  ಮುಂದೆ ಸಾಗಿತು. ಎರಡು ನಿಮಿಷ ನಡೆದಾಗ ಪಕ್ಕದಲ್ಲೆ ಕಂಡವು ಹತ್ತಿಪ್ಪತ್ತು ತರಹೆ ವಾರಿ ಕಾರುಗಳು.
ಪರವಾಇಲ್ಲ ರೈತರಲ್ಲಿ   ಕಾರಿದ್ದವರೂ ಇದ್ದಾರೆ, ಎಂದುಕೊಂಡಾಗ ನೆನಪಾಯಿತು ಇದು ಕಾಫಿ ನಾಡೆಂದು.  ಕಾಫಿ ಪ್ಲಾಂಟರುಗಳೂ ಸಾವಯವ ಕೃಷಿಯಲ್ಲಿ ಆಸಕ್ತರಾಗಿರುವುದುಒಳ್ಳೆಯ ಬೆಳವಣಿಗೆ ಎನಿಸಿತು
ವಿಶಾಲವಾದ ಗೇಟು ದಾಟಿ ಒಳಗೆ ಹೋದಾಗ ಎಲ್ಲೆಲ್ಲು ಹಸಿರು ಮುರಿಯುತಿತ್ತು. ಆದರೆ ಷಾಮೀಯಾನಾದ ಸುಳಿವೆ ಇಲ್ಲ. ತುಸು ದೂರದಲ್ಲೆ ಅಡುಗೆಯ ಕಾಯಕ ನಡೆಯುತಿತ್ತು. ಹಲವು ಗ್ರಾಮೀಣ ಮಹಿಳೆಯರು ಒಂದಲ್ಲ ಒಂದು ಕೆಲಸ ದಲ್ಲಿ ತೊಡಗಿದ್ದರು.ದಟ್ಟವಾಗಿದ್ದ ಸಸ್ಯರಾಶಿಗಳ ನಡುವೆ ಏನೂ ಕಾಣಿಸುತ್ತಿರಲಿಲ್ಲ, ಅಲ್ಲಿರುವ ಪಾತ್ರೆಗಳ ಪ್ರಮಾಣ ನೋಡಿದರೆ ಕನಿಷ್ಟ  ಐದಾರು ನೂರು ಜನರಾದರೂ ಸೇರಿರಬಹುದು ಎನಿಸಿತು. ಆದರೆ ಅಷ್ಟುಜನ ಎಲ್ಲಿರುವರು ಎಂದೆ ಗೊತ್ತಾಗಲಿಲ್ಲ. ಬಹು ಕ್ಷೀಣವಾಗಿ ಮರಗಳ ಮರೆಯಲ್ಲಿ ಕಲರವದ ದನಿ ಕೇಳಿ ಬಂದಿತು. ಗಿಡಗಳ ನಡುವೆ ದಾರಿ ಮಾಡಿಕೊಂಡು  ಹಾಗೆ ಹೆಜ್ಜೆ ಹಾಕಿದಾಗ  ಅಲ್ಲಿ ಕುರ್ಚಿಯಲ್ಲಿ ಕುಳಿತ ನೂರಾರು ಜನ ಕಾಣಿಸಿದರು. ಆದರೆ ಯಾರೂ ಮಾತನಾಡುತ್ತಿರಲಿಲ್ಲ. ಮಧ್ಯಾಹ್ನದ ಬಿರು ಬಿಸಿಲು ಆದರೆ  ಅಲ್ಲಿ ಹಿತವಾದ ನೆರಳು. ಷಾಮೀಯಾನದ ಅಡಿಯಲ್ಲಿ ಕುಳಿತಷ್ಟೆ ನೆಮ್ಮದಿಯಾಗಿ ಅಲ್ಲಿರುವ ಗಸಗಸೆ ಹಣ್ಣಿನ  ಛತ್ರಿಯಂತೆ   ವಿಶಾಲ ವಾಗಿ ಹರಡಿದ ಎರಡು ಸಾಲು ಮರಗಳ ನಡುವಿನ ಜಾಗದಲ್ಲಿ ಕುಳಿತಿದ್ದರು. ಅಲ್ಲಲ್ಲಿ ನೆಳಲು ಬೆಳಕಿನ ಆಟ, ರೆಂಬೆಗಳು ಅಲುಗಿದಾಗ ಕಂಡುಬರುತಿತ್ತು. ಅಲ್ಲಿ  ಐದಾರು ನೂರು ಜನ ವೇದಿಕೆಯತ್ತ  ಕಣ್ಣು ಕಿವಿ ಕೀಲಿಸಿ ಕುಳಿತಿದ್ದರು.

ವೇದಿಕೆ ಬರಿ ಹಸಿರು ಮಯ. ತೆಂಗಿನ ಗರಿ ,ಅಡಕೆ ಗರಿ ಅಲ್ಲೆ ಬೆಳೆದಿರುವ ಹೂವುಗಳಿಂದ ಅದರಲ್ಲೂ ಮುತ್ತುಗದ, ಎಕ್ಕೆಯ ಕಾಡು  ಹೂಗಳಿಂದ .ಅಮಡಿಕೆ ಕುಡಿಕೆಗಳಿಂದ ಲಂಕೃತವಾಗಿತ್ತು.ಅಂಗಡಿ ಹೂವು , ಪ್ಲಾಸ್ಟಿಕ್ಹೂ  ಇಲ್ಲ. ಎಲ್ಲ ಸಹಜ ಸರಳ ಮತ್ತು ಸುಂದರ.  ವೇದಿಕೆಯ ಮೇಲೆ ಐದೆ ಕುರ್ಚಿ ಅಲ್ಲಿ ಹಸಿರಂಗಿ ಧರಿಸಿವರು ಇಬ್ಬರು
ಸುತ್ತಮುತ್ತಲೂ ಓಡಾಡುವ ಸ್ವಯಂ ಸೇವಕರೂ ಹಸಿರುಡುಗೆ ತೊಟ್ಟಿದ್ದರು..ಸರಿ ಸುಮಾರು ಮಧ್ಯಮ ಗಾತ್ರದ ಸಭೆ. ಬಣ್ಣದ ಕಾಗದದ ಬಂಟಿಂಗ್‌ ಇಲ್ಲ. ಫ್ಯಾನುಗಳಿಲ್ಲ.  ಒಂದೆ ಮರದಡಿಯಾದರೆ ಶಾಂತಿನಿಕೇತನದ ತರಗತಿ ಎನ್ನಬಹುದು.  ಯೋಜನಾ ಬದ್ದವಾಗಿ ನೆರಳಿಗೆಂದೆ ಬೆಳಸಿದ ಸಿಹಿ ಹಣ್ಣು ನೀಡುವ ಸಿಂಗಪೂರ್‌ ಚೆರಿ  ಮರಗಳೆ ಅಲ್ಲಿ ಷಾಮೀಯಾನ.ಸಾವಯವ ಮೇಳವು ನಿಸರ್ಗದ ನಡುವೆ ನಡೆಯುತ್ತಿರುವುದು ಬಹುಅರ್ಥ ಪೂರ್ಣ ವಾಗಿತ್ತು. ಅಲ್ಲೆ ಮರದಡಿ ಕುರ್ಚಿಯಲ್ಲಿ ಕುಳಿತೆ.ಕಾರ್ಯಕ್ರಮ ಏನೆಂದು ಅರಿಯುವ ಕುತೂಹಲದಿಂದ. ಪಕ್ಕದಲ್ಲಿ ಕುಳಿತವರನ್ನು “ ದಯವಿಟ್ಟು ಆಮಂತ್ರಣ ಪತ್ರಿಕೆ ಕೊಡುವಿರಾ “ ಎಂದೆ. ಅವರು ನಸು ನಗುತ್ತಾ ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ , ಕರಪತ್ರ ಯಾರಲ್ಲೂ ಇಲ್ಲ. ಹಂಚಿಯೂ ಇಲ್ಲ.ಇಲ್ಲಿ ಎಲ್ಲ ಬಾಯಿಂದ ಬಾಯಿಗೆ ಹರಡಿದ ಮಾಹಿತಿಯಿಂದ ಬಂದವರು. ಕೆಲವರಿಗೆ ಚರ ದೂರವಾಣಿಯ ಮೂಲಕ ಕಿರು ಸಂದೇಶದ ರೂಪದಲ್ಲಿ ತಿಳಿಸಿರ ಬಹುದು. ಅದನ್ನು ಅವರು ಪರಿಚಿತರಿಗೆ  ತಿಳಿಸಿಸಿದ್ದಾರೆ.  ಯಾವುದೆ ವಾಹನ ಸೌಕರ್ಯ ಒದಗಿಸಿಲ್ಲ. ಅದರ ವ್ಯವಸ್ಥೆ ಬಂದವರದೆ ,ಎಂದರು.


 ದೂರದೂರಿನ ಸಂಪನ್ಮೂಲ ವ್ಯಕ್ತಿಗಳಿಗೆ ಮತ್ತು ದಾಖಲೆಗಾಗಿ  ಐವತ್ತೋ ನೂರೋ ಮಾಡಿಸಿರಬಹುದು ಎಂದರು.ಇದು ಉಳಿತಾಯದ ವಿಧಾನವಿರಬಹುದು ಎಂದುಕೊಂಡೆ. ನಂತರ ತಿಳಿಯಿತು ಇದು ಅವರ ಸಸ್ಯ ಸಂಪತ್ತನ್ನು ರಕ್ಷಿಸುವ ನಡೆ ಎಂದು. ಪ್ರತಿ ಉಪನ್ಯಾಸದ ನಂತರ  ಪ್ರೇಕ್ಷಕರಿಗೆ ತಮಗೆ ಅಗತ್ಯ ಮಾಹಿತಿ ಪಡೆವ  ಅವಕಾಶವಿದೆ. ಆದರೆ ಯಾರೂ  ಮಾತನಾಡುವ ಹಾಗಿಲ್ಲ. ಕೇಳಿದವರಿಗೆ ಕಾಲು ಪುಟ ಬಿಳಿಹಾಳೆ ಕೊಡುವರು. ಅದರಲ್ಲಿತಮ್ಮ ಪ್ರಶ್ನೆ ಬರೆದು ಕೊಟ್ಟರೆ ಉತ್ತರಿಸುವರು. ಅದೂ ಕಾಗದ ಮರಗಳಿಂದ ಮಾಡುವರು. ದುರ್ಬಳಕೆ ಬೇಡ. ಅನಾವಶ್ಯಕ ಬರವಣಿಗೆ ಬೇಡ. ಸಂಕ್ಷಿಪ್ತವಾಗಿ ಬರೆಯಿರಿ ,ಮಿತವಾಗಿ ಬಳಸಿ ಎಂಬ ಹಿತವಚನ. ಕಾಗದದ ಚೂರು ಪಡೆದವರು ಹತ್ತಕ್ಕೂ ಹೆಚ್ಚಿರಲಿಲ್ಲ.
ಅದು ಬರಿ ಕೃಷಿ ಮೇಳ ವಾಗಿರಲಿಲ್ಲ. ಅದು ಜೈವಿಕ ಮೇಳ. ಎಲ್ಲ ಜೀವ ಜಗತ್ತಿಗೆ ಸಂಬಂಧಿಸಿದ ವಿಷಯ ಅದರ ವ್ಯಾಪ್ತಿ. ಕೃಷಿ, ಪರಿಸರ , ಆಹಾರ ಮತ್ತು ಆರೋಗ್ಯ ಮೇಳದ ಮೂಲ ಉದ್ದೇಶಗಳು. ಮೇಳವನ್ನು ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಅರಣ್ಯ ಇಲಾಖೆ ,  ರೇಷ್ಮೆ ಇಲಾಖೆ ,ಜಲಾನಯನ ಇಲಾಖೆಗಳು ಪ್ರಾಯೋಜಿಸಿದ್ದವು. ಆದರೆ ಅದರ ನೇತೃತ್ವ ಮಾತ್ರ ಪುಣ್ಯ ಭೂಮಿಯದು. ಅದು ಎರಡು ದಿನದ ಮೇಳ.ಜೈವಿಕ ಕೃಷಿ, ಜೇನು ಕೃಷಿ, ವೃಕ್ಷಾಧಾರಿತ ಕೃಷಿ,ಅರಣ್ಯೀಕರಣ , ನೆಲ ಜಲ ಸಂರಕ್ಷಣೆ, ಕೃಷಿ – ಕಾಡುಪ್ರಾಣಿಗಳು , ಆಹಾರ – ಆರೋಗ್ಯ ಮತ್ತು ಕೃಷಿ ಬರವಣಿಗೆ ವಿಷಯಗಳ ತಜ್ಞರು ಮಾರ್ಗದರ್ಶನ ನೀಡುವರು..ಜಿಲ್ಲಾದಿಕಾರಿ  ಮೊದಲು ಗೊಂಡು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ರೈತರ ಅನಿಸಿಕೆಗೆ ಸ್ದಂದಿಸಲಿದ್ದರು

ವಿವರ ತಿಳಿದಾಗ ಈ ಮೇಳದ  ವಿಭಿನ್ನತೆಯ ಅರಿವಾಯಿತು. ಯಾವುದೆ ಆಮಂತ್ರಣ ಪತ್ರಿಕೆ ಇಲ್ಲದಿದ್ದರೂ ಐದು ನೂರಕ್ಕೂ ಹೆಚ್ಚು ಜನ ಸೇರಿದ್ದರು. ವಿಶೇಷ ಎಂದರೆ ಬೀದರ್‌ , ಬಿಜಾಪುರ, ದಕ್ಷಿಣ ಕನ್ನಡ ಉತ್ತರ ಕನ್ನಡದ ರೈತರೂ ಬಂದಿದ್ದರು. ಅವರಿಗೆ ರಾತ್ರಿ ತಂಗಲು ತೋಟದಲ್ಲೆ ವ್ಯವಸ್ಥೆ ಇದ್ದಿತು. ಆದರೆ ಬಹು ಸರಳ ವ್ಯವಸ್ಥೆ. ಸಾಧಾರಣ ರೈತರು  ಇರುವ ವತಾವರಣ ಅಲ್ಲಿತ್ತು. ಆದರೆ ಅಲ್ಲಿ  ಕಾಫಿ ,ಟೀ , ಮಧ್ಯ ಪಾನ,  ಧೂಮಪಾನ ಹೊರಗಿನ ಆಹಾರ ಪಾಪನೀಯಗಳಿಗೆ   ಅವಕಾಶವಿಲ್ಲ. ಪ್ಲಾಸ್ಟಿಕ್   ಬಳಕೆ ಕೂಡದು.  ನಿಯಮ ಪಾಲನೆ ಮಾಡದವರಿಗೆ ಅವಕಾಶವಿಲ್ಲ.  ಅವರ ಗುರಿ ಜನ ಸೇರಿಸುವುದುಲ್ಲ. ಆಸಕ್ತರಿಗೆ ಮಾಹಿತಿ ಮುಟ್ಟಿಸುವುದಾಗಿತ್ತು.
ಮೇಟಿಕುರ್ಕಿಯ ಶಾಂತ ವೀರಯ್ಯಬವರು ನಿವೃತ್ತ ಉಪನನಿರ್ಧೇಶಕರು. ಜೇನು ಸಾಕಣೆಯ ತಜ್ಞರು.ಬೆಂಗಾಡಾದ ಚಿತ್ರದುರ್ಗದಲ್ಲಿ ಜೇನು ಸಾಕಣೆಮಾಡುತ್ತಾ ಆಸಕ್ತರಿಗೆ ತರಬೇತಿನೀಡುತ್ತಾ ಜೀವನವನ್ನೆ ಮುಡುಪಾಗಿಟ್ಟುಕೊಂಡವರು. ಅವರು ಜೇನುಹುಳು  ಹೇಗೆ ಕೃಷಿಯ ಅನಿವಾರ್ಯ ಅಂಗ  ಯಾವುದೆ ಸಸ್ಯ ಫಲ ಭರಿತವಾಗ ಬೇಕಾದರೆ ಪರಾಗ ಸ್ಪರ್ಶವಾಗಲೆ ಬೇಕು ಅದು ಬಹುತೇಕ ಆಗುವುದು ಜೇನು ನೊಣ ಗಳಿಂದ. ಪರಸರದ ಪರಿಶುದ್ಧತೆಯ ಸೂಚಕ ಜೇನು ಹುಳುಗಳು, ಜೇನು ಒಂದು ಸಂಪೂರ್ಣ ಸಮೃದ್ಧ ಆಹಾರ ಮತ್ತು ಅದರ ಔಷಧಿಯ ಗುಣ ಅಪಾರ ಹೀಗೆ ಪದರು ಪದರಾಗಿ ಜೇನಿನ ಮಹಿಮೆಯನ್ನು ಬಿಡಿಸಿದರು. ನಂತರ ಪ್ರಾತ್ಯಕ್ಷಿಕೆ ತೋರಿಸಲು ಸಿದ್ಧರಾದರು. ಪ್ರವೇಶ ದ್ವಾರದ ಹತ್ತಿರವಿದ್ದ ಜೇನು ಪೆಟ್ಟಿಗೆಗಳ ಹತ್ತಿರ  ಮಾಹಿತಿ ಪ್ರದರ್ಶಿಸಿದ್ದರು.  ಹತ್ತು ಜನರ  ಆಸಕ್ತ ರಿಗೆತಂಡತಂಡವಾಗಿ ಉಪನ್ಯಾಸ ಮುಗಿದ ಮೇಲೆ    ತರಬೆತಿ ಶುರು ಮಾಡಿಯೆ ಬಿಟ್ಟರು.
ಪ್ರತಿ ಭಾಷಣವಾದ ಮೇಲೆ  ವಿಷಯ ಕುರಿತು ಪ್ರಶ್ನೆ. ಉತ್ತರಿಸಿದವರಿಗೆ ಬಹುಮಾನ.
ಅದರಿಂದ ಕೇಳುಗರ ಗಮನ ಸೆಳೆದರು.ಮಧ್ಯವಿರಾಮ ವಿರಲಿಲ್ಲ ಆದರೆ  ಹೊಸ ವಿಷಯವಿರತಿತ್ತು.ಪರಿಸರ ಮತ್ತು ಅರೋಗ್ಯದ ವಿಷಯ ಬಂದಾಗ ಟಿವಿ ಹೇಗೆ ಮನೆಯ ಮಹಿಳೆಯರ ಮತ್ತು ಮಕ್ಕಳ ಸಮಯವನ್ನು ನುಂಗಿಹಾಕುತ್ತಿದೆ ಎಂಬುದರ ವಿವರಣೆ . ನೆರದಿದ್ದವರ ಮನೆ ಯಲ್ಲಿ  ಯಾರ ಮನೆಯಲ್ಲಿ ಟಿವಿ ಇಲ್ಲ ಎಂಬ ಪ್ರಶ್ನೆಗೆ ಮೆಲೆದ್ದ ಕೈಗಳು ಎರಡೆ. ಅವರಿಗೆ ಬಹುಮಾನ.
ಮೈಸೂರಿನ ಚಂದ್ರಶೇಖರ್‌ ಐಟಿ ಉದ್ಯೋಗ ಬಿಟ್ಟು ಕೃಷಿಕರಾದವರು.ಮಿತ ಬಳಕೆ ಮತ್ತು ಸಾವಯವ ಕೃಷಿಹೇಗೆ ಆಹಾರಸಮಸ್ಯೆಯನ್ನು ಪರಿಹರಿಸಬಲ್ಲವು ಎಂಬುದನ್ನು ವಿವರಿಸಿದರು.ಉತ್ಪನ್ನಗಳ ಮೌಲ್ಯವರ್ಧನೆಯ ವಿಧಾನ ತಿಳಿಸಿದರು..
ನಂತರ ಪದವಿಧರರರಾಗಿಯೂ ಮೊಬೈಲ್ ಬಳಸದವರ ಮಾಹಿತಿ ಕೇಳಿದಾಗ ಶೃತಿ ಎಂಬ ಹದಿ ಹರೆಯದ ಹುಡುಗಿ ಹಾಗೂ ಒಬ್ಬ ಮಧ್ಯವಯಸ್ಕರು ಮಾತ್ರ ಬಹುಮಾನಕ್ಕೆ ಅರ್ಹರಾದರು. ಇಪ್ಪತರ ಅಂಚಿನಲ್ಲಿದ್ದೂ ಮೊಬೈಲ್‌ ಬಳಸದ ಆ ಯುವತಿಯನ್ನಂತೂ ಜನ ಅಚ್ಚರಿಯಿಂದ ಮಿಕಿ ಮಿಕಿ ನೋಡಿದರು.
ಅಲ್ಲಿನ ಇನ್ನೊಂದು ಗಮನಾರ್ಹ ಸಂಗತಿ ಅತಿಥಿಗಳನ್ನು  ಸ್ವಾಗತಿಸಿದಂತೆ, ಸಭಾಂಗಣವನ್ನು ಪ್ರವೇಶಿಸಿದಪ್ರತಿಯೊಬ್ಬರನ್ನೂ ಹೆಸರು ಹಿಡಿದು ವಿವರದ ಸಮೇತ ಬಂದಬಂದಂತೆ ಸ್ವಾಗತಿದ್ದು.ಎಷ್ಟೊ ಸಲ ಅತಿಥಿಗಳ ಹೆಸರನ್ನೆ ತಪ್ಪುತಪ್ಪಾಗಿ ಹೇಳುವ ಜನರಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಲ್ಲಿ ಖ್ಯಾತ ಹಿಂದೂಸ್ಥಾನಿ ಗಾಯಕರಾದ ಗಣ ಪತಿ ಭಟ್ಟರನ್ನು ವಿನಾಯಕ ಭಟ್ಟ ಎಂದು ಪದೇ ಪದೇ ಸಂಬೋಧಿಸಿದ ನಿರೂಪಕರ ನೆನಪಾಯಿತು. . ಆದರೆ ಇಲ್ಲಿನ ಜೈವಿಕ ಮೇಳದ ಪ್ರತಿ ಪ್ರೇಕ್ಷಕನನ್ನೂ ಸ್ವಾಗತಿಸುವ ರೀತಿ ಅವರ ಬದ್ಧತೆಯ ಸಂಕೇತ ವಗಿತ್ತು. ನೂರಾರು ಸಂಖ್ಯೆಯ ಪರಿರಸರ ಪ್ರೇಮಿಗಳನ್ನು ಬೆಳಸುವ ಪರಿ ಇದಾಗಿತ್ತು

ನಾನು ಹೋಗಿ ಒಂದು ತಾಸಾದರೂಶಿಷ್ಯ ಗಮನಿಸದಷ್ಟು ಕಾರ್ಯಕ್ರಮದಲ್ಲಿ ತಲ್ಲೀನ. ನಾನು ಣೊಡುತ್ತಾ ಕುಳಿತಿರುವಂತೆ ನನ್ನ ಗುರುಗಳು ಬಂದಿದ್ದಾರೆ. ವೇದಿಕೆಗೆ ಬರಬೇಕು ಎಂಬ ಕರೆ ಕೇಳಿ ಬೆಚ್ಚಿದೆ. ಬಿಡದೆ ವೇದಿಕೆಯಲ್ಲಿ ಕುಳ್ಳಿರಿಸಿ,”  ಇವರು ಬಹಳ ಕಠಿನ ನಿಯಮಪಾಲಕರು.ಉಪನ್ಯಾಸಕರಾಗಿ , ಪ್ರಾಂಶುಪಾಲರಾಗಿ ವೈಯುಕ್ತಿಕವಾಗಿ  ಶಿಸ್ತಿನ ಸಿಪಾಯಿ . ಮೂವತ್ತು ವರ್ಷವಾದರೂ  ಇಂದಿಗೂ ಇವರೆ ನನ್ನ ಆದರ್ಶ “ಎಂದಾಗ ಶಿಕ್ಷಕ ವೃತ್ತಿಯ ಸಾರ್ಥಕತೆಗೆ ಚಪ್ಪಾಳೆ ಬಿದ್ದವು. .
ಸಮಾವೇಶಗಳಲ್ಲಿಯ ವೇದಿಕೆಯ ಮೇಲಿದ್ದವರು ಸರ್ವಜ್ಞರು  ಕೇಳುಗರು ತಿಳಿಯದವರು ಎಂಬ ನಡವಳಿಕೆಗೆ ಅಲ್ಲಿ ಆಸ್ಪದವೆ ಇರಲಿಲ್ಲ. ಹಸಿರಂಗಿ ತೊಟ್ಟು ಚುರಾಕಾಗಿ ಕೆಲಸ ಮಾಡುತಿದ್ದ ಯುವಕನೊಬ್ಬನ ಹೆಸರು ಕರೆದಾಗ ಅವನು ಏನೋ ಕೆಲಸವಿದೆ ಎಂದು ಕೊಂಡು ಧಾವಿಸಿ ವೇದಿಕೆಗೆ ಬಂದ. ದೇಶಿಯ ಹಸುಸಾಕಣೆಯಿಂದ ಹೇಗೆ ಚಿಕ್ಕ ಹಿಡುವಳಿಯನ್ನು ಲಾಭ ದಾಯಕ ವಾಗಿಸಿರುವನು  ಎಂಬುದನ್ನು ಕುರಿತು ಸಭೆಗೆ ವಿವರಿಸು,  ಎಂದಾಗ ಅವನು ಕಕ್ಕಾ ಬಿಕ್ಕಿ. ಮೊದಲು ಮಾತೆ ಹೊರಡಲಿಲ್ಲ. ಆದರೆ ತನ್ನಪ್ರಥಮ ಮಾತುಗಾರಿಕೆ ಪ್ರಯತ್ನವನ್ನು ಮುಂದುವರಿಸಿ ಹೇಗೆ ಗುಡ್ಡದ ಅಂಚಿನಲ್ಲಿರವ ತನ್ನ ಕುಟುಂಬ ,ನಾಲಕ್ಕುರಾಸುಗಳಿಂದ ೧೬ ರಾಸುಗಳ ವರೆಗೆಹೆಚ್ಚಿಸಿ ಅದನ್ನೆ ಸಾವಯವ ಕೃಷಿಗೆ ಪೂರಕವಾಗಿ ಬಳಸಿಕೊಂಡಿರುವುದನ್ನು ತಡವರಿಸುತ್ತಾ ತಿಳಿಸಿದಾಗ ಸಭೆಯಲ್ಲಿ ಮಿಂಚಿನ ಸಂಚಾರವಾಯಿತು.
ಇದಕ್ಕೂ ಮಿಗಿಲಾದ ದೃಶ್ಯ ಇನ್ನೂ ಕಾದಿತ್ತು. ಬಳ್ಳಾರಿಜಿಲ್ಲೆಯ ಯುವಕನೊಬ್ಬ ಬಿಫಾರ್ಮ ಮಾಡಿ ಗೊವಾದಲ್ಲಿ  ಕೈ ತುಂಬಾ ಹಣ ಬರುತಿದ್ದ ಕೆಲಸ ಬಿಟ್ಟು ತನ್ನ ಊರಿನಲ್ಲಿರುವ ಜಮೀನು ಸಾಗು ಮಾಡಲು ಮರಳಿರುವುದಕ್ಕೆ ಅಭಿನಂದನೆ ಸಲ್ಲಿಸಲಾಯಿತು .ಹೀಗೆ ಈ ಮರಳಿ ಮಣ್ಣಿಗೆಬರುವುದೆ ಇಂದಿನ ಕೃಷಿ ಸಮಸ್ಯೆಗಳಿಗೆ ಸೂಕ್ತ ಪರಿಹಾರವೆಂದು ಮನದಟ್ಟು ಮಾಡಿದರು. ಉಪನ್ಯಾಸ ಮುಗಿದ ಮೇಲೆ ಕೇಳುಗರ ಗ್ರಹಿಕೆ ಅರಿಯಲು ಆಯ್ದ ಒಬ್ಬಿಬ್ಬರಿಗೆ ಪ್ರಶ್ನೆ. ಸರಿಯುತ್ತರಕೊಟ್ಟರೆ ಹೊಗಳಿಕೆ ಬಹುಮಾನ.
ಅಲ್ಲಿ ಸನ್ಮಾನ ಪಡೆದ ನಾಲ್ವರು ಸಣ್ಣ ರೈತರೆ.ಕಡಿಮೆ ಭೂಮಿಯಲ್ಲಿ ಸಾವಯವ ಕೃಷಿವಿಧಾನ ದಿಂದ ಹೆಚ್ಚು ಬೆಳೆ ತೆಗೆದವರು.
 ಈ ಅನ್ನ ದಾತರ ಮೇಳದಲ್ಲಿ  ಉಟ ಮಾಡಲು ವಿರಾಮದ ಅವಧಿಯೆ  ಇರಲಿಲ್ಲ. ಒಂದು ಗಂಟೆಯ ಸುಮಾರಿಗೆ ಅಡಿಗೆ ಸಿದ್ಧ ವಾಗಿತ್ತು. ಮೂವತ್ತು ಜನರ ತಂಡ ತಂಡ ವಾಗಿ ಆಹಾರವನ್ನು ಅಡಕೆ ತಟ್ಟೆಗಳಲ್ಲಿ ಪಡೆದು ಹಿಂಬಾಗದಲ್ಲಿ ಹಾಕಿದ್ದು ಆಸನದಲ್ಲಿ ಕುಳಿತು ಮಾಹಿತಿಯನ್ನು  ಕಿವಿಗೆ ಸೇರಿಸುತ್ತಾ ಆಹಾರವನ್ನು ಸೇವಿಸುವ ವ್ಯವಸ್ಥೆ ಇದ್ದಿತು. ಯಾರೂ ಚಕಾರವೆತ್ತದೆ ಮೌನವಾಗಿ ಆಹಾರ ಮತ್ತು  ವಿಚಾರಗಳೆರಡನ್ಣು ಪುಷ್ಕಳವಾಗಿ  ಪಡೆದರು.
 ಇನ್ನು ಅಲ್ಲಿ ಮಾಡಿದ ಅಹಾರ ವ್ಯವಸ್ಥೆಯನ್ನು ಕುರಿತು ಸ್ಥಳೀಯ ಶಾಸಕರ ಮಾತಿನಲ್ಲೆ ಹೇಳುವುದಾದರೆ, “ ನಾವು ಚಿಕ್ಕವರಿದ್ದಾಗ  ಹಳ್ಳಿಯಲ್ಲಿನ ಸಮಾರಂಭದದ ನೆನಪು ತಂದಿದೆ. ಆಗ ಮದುವೆ ಜಾತ್ರೆ  ಏನೆ ಆದರೂ ಊಟಕ್ಕೆ ಇರುತಿದ್ದುದು ಮೂರೆ ಪದಾರ್ಥಗಳು .ಅದೂ ಕೆಂಪಕ್ಕಿ ಅನ್ನ, ತರಕಾರಿಸಾರು ಮತ್ತು ಪಾಯಸ. ಅದನ್ನೂ ಊರಿನ ಜನರೆ ಸೇರಿ ಮಾಡುತಿದ್ದರು ಈಗಿನಂತೆ ಎಲೆ ತುಂಬ ಹತ್ತಾರು ಪದಾರ್ಥಗಳುನ್ನುಬಡಿಸಿ ತುಸು ತಿಂದು ಹೆಚ್ಚಿನದನ್ನು ಚೆಲ್ಲುವ ಪದ್ದತಿ ಇರಲಿಲ್ಲ. ಪುಣ್ಯ ಭೂಮಿಯಲ್ಲಿ ನಮ್ಮ ಹಿಂದಿನ ಕಾಲದ ಸಂಪ್ರದಾಯವನ್ನೆಅನುಸರಿಸಿರುವರು. ಅದಕ್ಕೆ ಊಟ ಮಾಡಲೆಂದೆ ಬಂದಿರುವೆ.  ವಿಜಯ ಅಂಗಡಿಯವರು ಕೃಷಿಕರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡುವ ಪ್ರಯತ್ನ ಮಾಡುತ್ತಿರುವರು. ವಿಜ್ಞಾನ , ತಂತ್ರಜ್ಞಾನದಲ್ಲಿ ಮುನ್ನಡೆ ಸಾಧಿಸಿದರೂ,  ಕೃಷಿಯಲ್ಲಿ ಖಷಿ ಪಡೆಯಲು ಹಿಂದಿನ ಪದ್ದತಿ ಅನಿರ್ವಾ ವಾಗಿದೆ ಅದಕ್ಕೆ  ಬೆಂಬಲ ನೀಡುವುದು ರೈತರ ಹಿತ ದೃಷ್ಟಿಯಿಂದ ಅಗತ್ಯ “ ಎಂದರು.
ಅಡಿಗೆಯನ್ನು ಮಾಡಿದ್ದು ಸ್ವಯಂ ಸೇವಕರೆ ಅದರಲ್ಲೂ ಮಹಿಳೆಯರೆ ಹೆಚ್ಚು.. ಸಾಮಗ್ರಿಗಳೆಲ್ಲ ಸಾವಯವ ರೈತರ ಕೊಡುಗೆಯೆ.   ಪಾಲಿಷ್ ಇಲ್ಲದ ಅಕ್ಕಿಯ ಅನ್ನ, ಹುರುಳಿ ಬದನೆ , ಮೆಂತ್ಯಸೊಪ್ಪು ಹಾಕಿದ ಸಾಂಬಾರು ಮತ್ತು ಪಾಯಸ. ಬೇಕಾದಷ್ಟು ನೀರು ಮಜ್ಜಿಗೆ. ಊಟ ಬಹು ರುಚಿಕರ ವಾಗಿತ್ತು. ಆದರೆ ಒಂದು ವಿಷಯ ಪದೇ ಪದೇ ನೆನಪು ಕೊಡುತಿದ್ದರು.ಹೊಟ್ಟೆ ತುಂಬ ತಿನ್ನಿ ಆದರೆ ವ್ಯರ್ಥಮಾಡಬೇಡಿ. ಒಂದು ಹೊತ್ತಿನ  ಅನ್ನಕ್ಕೆ ಗತಿ ಇಲ್ಲದವರ ನೆನಪು ಇರಲಿ.ಮಲ್ಲಿಗೆಯ ಅರಳಿನ ತರಹದ ಅನ್ನವನ್ನೂ ತುಸು ತಿಂದು ಹೆಚ್ಚಿನಪಾಲು ಕಸದ ತೊಟ್ಟಿಗೆ ಹಾಕುತಿದ್ದವರೂ ಅಡಕೆ ಹಾಳೆ ತಟ್ಟೆಯನ್ನು ಸವರಿ ಕೊಂಡು ತಿಂದರು. ಯಾವುದುಇಲ್ಲಿ. ಊಟ ಮಾಡಿ ನಳದ ನೀರು ಕುಡಿದರು..ಬಹುತೇಕ ಜನರಿಗೆ ಇಲ್ಲಿನ ಪದ್ದತಿಯ ಗೊತ್ತಿರುವುದರಿಂದ ಕಮಕ್ ಕಿಮಕ್ ಎನ್ನದೆ ಕಾರ್ಯಕ್ರಮ ಸಾಗುತ್ತಿರುವಂತೆಯೆ  ಎಲ್ಲರ ಊಟ ವೂ ಮುಗಿಯಿತು.ಸಂಜೆಯ ಹೊತ್ತಿಗೆ ಅಲ್ಲಿಯೆ ಬೆಳೆದ ಪಪ್ಪಾಯಿ ,ಸೀಬೆ ,ಬಾಳೆಹಣ್ಣುಗಳ ರಸಾಯನ. ಅದೂ ಅಲ್ಲಿರುವ ಮರದ ಎಲೆಗಳ ಮೇಲೆ.
 ಅದೆ ಸಮಯದಲ್ಲಿ ಅಲ್ಲಿ ಹಾಜರಿದ್ದ ಜಿಲ್ಲಾಧಿಕಾರಿಗಳು ಮತ್ತು ಕೃಷಿ ಪತ್ರಿಕೆ ಸಂಪಾದಕರೂ ಕೆಲವೆ
ದಿನಗಳ ಹಿಂದೆ ನೆಡೆದಿದ್ದ ಹಳ್ಳಿ ಹಬ್ಬಕ್ಕೂ ಇದಕ್ಕೂ ತುಲನೆ ಮಾಡಿ  ಅಚ್ಚರಿ ವ್ಯಕ್ತಪಡಿಸಿದರು. ಅಲ್ಲಿ ಸಾವಿರಾರು ಜನ ಸೇರಿದ್ದರು ಅಥವ ಸೇರಿಸಲಾಗಿತ್ತು ಕೋಟಗಟ್ಟಲೆ ಖರ್ಚು ಮಾಡಿ ಎಲ್ಲ ರೀತಿಯ ಅಹಾರ ಒದಗಿಸಲಾಗಿತ್ತು ಆದರೆ  ಅಲ್ಲಿ ಏನಾಯಿತು ಎಂದು ಕೇಳಿದರೆ ಯಾರಿಗೂ ಏನೂ ಗೊತ್ತಿಲ್ಲ. ಬಂದರುಗಡದ್ದು ಊಟ ಮಾಡಿದರು ನಂತರ ಢರ್‌ ಅಂತ ತೇಗಿ ವ್ಯವಸ್ಥೆ ಮಾಡಿದ್ದ ವಾಹನಗಳಲ್ಲಿ ತಮ್ಮ ಊರಿಗೆ ಹೋದರು. ಕಾರಣ ಅದು ಸರ್ಕಾರಿ ಕಾರ್ಯಕ್ರಮ.
ಇಲ್ಲಿ ಎರಡುವಾರಗಳಿಂದ  ತಯಾರಿ ನಡೆದಿದೆ. ಆದರೆ ಯಾರೂ ಕೂಲಿಗಾಗಿ ಬಂದವರಲ್ಲ. ಬಿಡುವಿನಲ್ಲಿ  ಬಂದು ಕೈ ಜೋಡಿಸಿರುವರು. ಆದರೆ ಅವರಿಗೆ ಹಣ ನೀಡದಿದ್ದರೂ ಅವರು ಹೋಗುವಾಗ ಉತ್ತಮ ತಳಿಯ ಮಾವು ಹೆಬ್ಬೇವು, ಹಲಸಿನ ಸಸಿಗಳನ್ನು ನಿಡಲಾಗಿದೆ. ಅವರು ಅದನ್ನು ತಮ್ಮಜಮೀನಿನಲ್ಲಿ ಇಲ್ಲವಾದರೆ ಮನೆಯಂಗಳದಲ್ಲಿ ನೆಟ್ಟು ಬೆಳಸಿದರೂ ಸರಿ ಪರಿಸರ ಸೇವೆಗೆ ಕಿರುಕಾಣಿಕೆ ಸಲ್ಲಿಸಿದಂತೆ.
ಪರಿಸರ ಎಂದರೆ  ಮರ ಗಿಡ, ಹಸಿರು ಬೆಟ್ಟ ಮಾತ್ರವಲ್ಲ. ನಾವಿರುವ ಮನೆಯೂ ಒಂದು ಕಿರು ಪರಿಸರವೆ. ಅದಕ್ಕೆ ಯಾರೆ  ತಮ್ಮ ವೈಯುಕ್ತಿಕ ಕೆಲಸ ಬಿಟ್ಟು ಪುಣ್ಯ ಭೂಮಿಯನ್ನು ಬೆಳೆಸುವೆವು ಎಂದು ಯೋಚಿಸುವಂತಿಲ್ಲ. ಮೊದಲು ವ್ಯಕ್ತಿ ಬೆಳೆಯಬೇಕು ನಂತರ ಸಂಘಟನೆ. ಅದರಿಂದ ಇಲ್ಲಿ ಯಾರೂ ಪೂರ್ಣಾವಧಿ ಕೆಲಸಗಾರರಿಲ್ಲ. ಬಿಡುವಿನ ವೇಳೆಯಲ್ಲಿ  ತಾವೂ ಕಲಿತು ಅನ್ಯರಿಗೂ ಕಲಿಸುವವರೆ ಎಲ್ಲ.
ಕಾರ್ಯಕ್ರಮದ  ಹೆಗ್ಗಳಿಕೆ ಎಂದರೆ ಅಧ್ಯಕ್ಷರು ಮೊದಲು ಗೊಂಡು ಯಾರೂ ವೇದಿಕೆಯ ಮೇಲೆ ಬೇರು ಬಿಟ್ಟು ಕೂರುವ ಹಾಗಿಲ್ಲ. ಅಗತ್ಯವಿದ್ದಾಗ ವೇದಿಕೆ ಬಂದು ಕೆಲಸ ಮುಗಿಸಿ ಪುನಃ ಇತರೆ ಕೆಲಸಕ್ಕೆ ಕೈಹಾಕುವರು.
ಕಾರ್ಯಕ್ರಮಕ್ಕೆ ಬಂದ ಅತಿಥಿಗಳಿಗೆ ನೀಡಿದ ನೆನಪಿನ ಕಾಣಿಕೆಯೂ   ಪರಿಸರ ಪೂರಕ. ಅವರಿಗೆ ಅಲ್ಲಿಯ ಹೂವಿನ ಹಾರ,ಆದರೆ   ಬುಕೆ, ಹಣ್ಣಿನ ಬುಟ್ಟಿ,  ಶಾಲು , ಸ್ಮರಣಿಕೆ ಗಳು ಇಲ್ಲ , ಸಾವಯವ ಪದ್ದತಿಯಲ್ಲಿ ಬೆಳೆ ಅಕ್ಕಿ ಬೆಲ್ಲ, ಕಾಫಿಪುಡಿ ಅರಿಷಿಣ, ಕೊಬ್ಬರಿ ಮತ್ತು ಹಣ್ಣುಗಳು..ಉದ್ಧೇಶ . ಹಾರಕ್ಕಿಂತ ಆಹಾರಕ್ಕೆ ಆದ್ಯತೆ. ಸ್ಮರಣಿಕೆ ಮನೆಯಲ್ಲಿ ಇಟ್ಟು ಮರೆಯುವರು. ಆದರೆ ಹೀಗೆ ದಿನ ಬಳಕೆಯ ಆಹಾರಪದಾರ್ಥಗಳನ್ನು ನೀಡಿದರೆ ಒಂದೆರಡು ವಾರ ಮನೆ ಮಂದಿಯೆಲ್ಲ  ಸಾವಯವ ಕೃಷಿಯನ್ನು  ನೆನಸುವರು. ಕಾಣಿಕೆ ಕೊಟ್ಟದ್ದೂ ಬಟ್ಟೆಯ ಕೈ ಚೀಲದಲ್ಲಿ.
 ಸಭಾಂಗಣದ ಸುತ್ತಲೂ ಇರುವ ಗಿಡ ಮರಗಳಿಗೆ ಸಾವಯವ ಕೃಷಿ ಮಾಹಿತಿ ನೀಡುವ ಬಟ್ಟೆಯ ಫಲಕ ಕಟ್ಟಿದ್ದರು.ಜತೆಗೆ ಸಾವಯವ ಕೃಷಿ ಕುರಿತ ಪುಸ್ತಕಗಳು, ಪ್ರಕಟಣೆಗಳು, ಪರಿಕರಗಳ ಪ್ರದರ್ಶನ ಮತ್ತು ಮಾರಾಟ  , ಜೇನು ,ಬೆಲ್ಲ, ಅಕ್ಕಿ , ಮೆಕ್ಕೆ ಜೋಳದ ರವೆ, ಹಣ್ಣುಗಳು, ಜಾಮು ಜೆಲ್ಲಿ, ಮೌಲ್ಯವರ್ಧಿತವಾದ ಸಾವಯವ ಉತ್ಪನ್ನಗಳು, ಬಗೆ ಬಗೆಯ ಸುಧಾರಿತ ತಳಿಗಳ ಸಸ್ಯಗಳು  ಎಲ್ಲವೂ ಮರಗಿಡಗಳಡಿಯಲ್ಲಿ.
ಇದರ ಸೂತ್ರಧಾರ ಹಾಸನ ಆಕಾಶವಾಣಿಯ ಕೃಷಿವಿಭಾಗದ ನಿರ್ವಾಹಕ ಡಾ. ವಿಜಯ ಅಂಗಡಿ.ದಿನವೂ ಮಾತಿನಲ್ಲಿ ಕೃಷಿ ಮಾಹಿತಿನೀಡಿ, ಅದನ್ನೆ ಕೃತಿಯಲ್ಲೂ ಪುಣ್ಯಭೂಮಿ ಎಂಬ ೧ ೧/೨ ಎಕರೆ ಭೂಮಿಯಲ್ಲಿ ಸಾವಯವ ಕೃಷಿಯ ಮಾದರಿ  ತೋರಿಸಿ, ನಾಡಿನಾದ್ಯಂತ ತಮ್ಮ ಬರಹಗಳಿಂದಲೂ ಹೆಸರಾಗಿ . ಸಾವಯವ ನಿಷ್ಠ ತಂಡ ಕಟ್ಟಿರುವ ವ್ಯಕ್ತಿ. ಇವರಿಗೆ ಕೃಷಿರತ್ನ ಪ್ರಶಸ್ತಿ  ಬಂದಿರುವುದ ದೊಡ್ಡದಲ್ಲ. ಜತೆಗೆ ಸರಳ ಜೀವನ, ಶಿಸ್ತಿನ, ಕಠಿನ ನಿಯಮಗಳಿಂದ ಗಾಂಧಿಯ ತುಂಡು ಎಂದು ಮೆಚ್ಚಿಕೆಯ  ಮೂದಲಿಕೆಗೂ ಪಾತ್ರ. ಅವರ ದನಿ ಕೇಳಿದವರು ಈ ಕೆಲಸದಲ್ಲಿ  ಕೈ ಕೂಡಿಸಿರುವರು.ಪುಣ್ಯ ಭೂಮಿಯ  ಗೌರವಾಧ್ಯಕ್ಷರು ನಿವೃತ್ತ ಶಿಕ್ಷಕರಾದ ಗಿಡ್ಡೆ ಗೌಡರು, ಜತೆಗೆ ನಾನೂರಕ್ಕೂ ಮಿಗಿಲಾದ ಸಂಖ್ಯೆಯ ಕ್ರಿಯಾ ಶೀಲ ಕೃಷಿಕ ಸದಸ್ಯರು. ಅನುದಾನ ಬೇಡದೆ , ಹದಿನೈದುವರ್ಷದಲ್ಲಿ ಕಣ್ಣು ಕುಕ್ಕುವ ಸಾಧನೆಯ ಹಿರಿಮೆ ಪುಣ್ಯ ಭೂಮಿಯದು.
ಸಾರ್ವಜನಿಕ ಸೇವೆಯಲ್ಲಿ ಪ್ರಾಮಾಣಿಕತೆ ,ಪಾರದರ್ಶಕತೆ ಮತ್ತು ಪರಿಶುದ್ಧತೆಇದ್ದರೆ , ಸಾರ್ಥಕತೆ ಮತ್ತು  ಗೌರವ ತನ್ನಿಂದ ತಾನೆ ಬರುವುದು ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿತ್ತು


Thursday, December 27, 2012

ಹೀನ ಸುಳಿ ಏನು ಮಾಡಿದರೂ ಹೋಗದು



ಮಂಡ್ಯ  ಜಿಲ್ಲೆಯಲ್ಲಿ ವರ್ಗವಾದ ಒಂದೆ  ವರ್ಷದಲ್ಲೆ ನಾನು ಪ್ರಭಾರೆ ಪ್ರಿನ್ಸಿಪಾಲನಾಗ ಬೇಕಾಯಿತು. ಆ ಹುದ್ದೆ ನನಗೆ ಹೊಸದೇನೂ ಅಲ್ಲ . 1981  ರಿಂದಲೆ ಅನೇಕ ವರ್ಷಗಳ ಕಾಲ ಕೆಲಸ ನಿರ್ವಹಿಸಿದ್ದೆಎಲ್ಲರೂ ಜತೆಯವರೆ ಆದ್ದರಿಂದ ಕೆಲಸ ಸುಗಮವಾಗಿ ಸಾಗಿತ್ತು. ಅವರೆಲ್ಲ ನಾನು ನೀತಿ ನಿಯಮ ಪಾಲನೆಯಲ್ಲಿ ಬಿಗಿ ಎಂದು ಬಲ್ಲವರಾಗಿದ್ದರು ಹಾಗಾಗಿ ತೊಂದರೆ ಏನೂ ಅಗಲಿಲ್ಲ. ಆ ವರ್ಷ ತಾಲೂಕು ಮಟ್ಟದ ಕ್ರಿಡಾಕೂಟವನ್ನು ಭಾರತಿನಗರದಲ್ಲಿ ನಡೆಸಲು ಇಲಾಖೆ ತೀರ್ಮಾನಿಸಿತ್ತು. ಮೊದಲಲ್ಲಿ ಜಿಲಾ ಮಟ್ಟದಲ್ಲಿ ಒಂದೆ ಕಡೆ ಎಲ್ಲರಿಗೂ ಕ್ರೀಡಾ ಕೂಟ ನಡೆಸುತಿದ್ದರು. ಅದು ನಮ್ಮ ಕಾಲದಲ್ಲಿ. ಆಗ ಹೈಸ್ಕೂಲುಗಳ ಸಂಖ್ಯೆ ಕಡಿಮೆ ಇತ್ತು . ಆದರೆ ಈಗ ಊರಿಗೊಂದು ಹೈಸ್ಕೂಲುಗಳಾದ್ದರಿಂದ ಮೊದಲು ತಾಲೂಕು ಮಟ್ಟದಲ್ಲಿ ನಡೆಸಿ ಅದರಲ್ಲಿ ಗೆದ್ದವರಿಗೆ ಮಾತ್ರ ಜಿಲ್ಲಾ  ಮಟ್ಟದಲ್ಲಿ  ಭಾಗವಹಿಸಲು ಅವಕಾಶ ನೀಡುವರು.
 ನಮ್ಮದು ಸಹ ಶಿಕ್ಷಣ ಶಾಲೆ . ಆದ್ದರಿಂದ ಬಾಲಕರ ಮತ್ತು ಬಾಲಕಿಯರ ಎರಡೂ ತಂಡಗಳನ್ನು ಕಳುಹಿಸಬೇಕಿತ್ತು. ನಮ್ಮಲ್ಲಿನ  ಮಕ್ಕಳು ಹಳ್ಳಿಗಾಡಿನವರಾದ್ದರಿಂದ  ಗಟ್ಟಿಮುಟ್ಟಾಗಿದ್ದರು. ನಮ್ಮಲ್ಲಿ ಒಳ್ಳೆಯ ಆಟದ ಮೈದಾನ ಇತ್ತು ಕ್ರೀಡಾ ಸಾಮಗ್ರಿಗಳೂ ಇದ್ದವು. ಆದರೆ ಒಂದೆ ಒಂದು ಕೊರತೆ. ಎಂದರೆ ದೈಹಿಕ ಶಿಕ್ಷಕರು ಇರಲಿಲ್ಲ. ಅದರಿಂದ ಆಟದ ಅವಧಿಯಲ್ಲಿ ಮಕ್ಕಳಿಗೆ ಕ್ರೀಡಾಸಾಮಗ್ರಿ ಕೊಟ್ಟರೆ ತಾವೆ ಆಡಿಕೊಳ್ಳುತಿದ್ದರು ಜತೆಗೆ ಆ ಅವಧಿಯಲ್ಲಿ ಬಿಡುವಿರುವ ಸಹ ಶಿಕ್ಷಕರೂ ಅವರಿಗೆ  ಮಾರ್ಗದರ್ಶನ ನೀಡುವರು. ನಮ್ಮಲಿನ ಶಿಕ್ಷಕೆರೆಲ್ಲ ಯುವಕರು. ಎಲ್ಲರೂ ಗುತ್ತಿಗೆ ಆಧಾರದ ಮೇಲೆ ನೇಮಕವಾದವರು. ಅವರಿಗೆ ನಿಗದಿತ ಮೊತ್ತವನ್ನು ಸಂಭಾವನೆಯಾಗಿ ಕೊಡುವರು. ಬೇರೆ ಯಾವುದೆ ಸೌಲಭ್ಯವಿರಲಿಲ್ಲ. ಆದರೆ ಅದೆ ತಾನೆ ಕಾಲೇಜಿನಿಂದ ಹೊರಬಂದವರು ಉತ್ಸಾಹದಿಂದ ಕೆಲಸ ಮಾಡುತಿದ್ದರು. ಕೆಲವುರು ಅಲ್ಲಿಯೆ ರೂಮು ಮಾಡಿಕೊಂಡು ಇದ್ದರು. ವಾರಕೊಮ್ಮೆ ತಮ್ಮೂರಿಗೆ ಹೋಗಿ ಬರುವರು.ಅವರಲ್ಲಿ ಬೆಟ್ಟೆಗೌಡ ಮತ್ತು ನಾಗರಾಜ ಎನ್ನುವ ಯುವಕರು ಮಕ್ಕಳಿಗೆ ಶಾಲೆಬಿಟ್ಟ ಮೇಲೆ ತರಬೇತಿ ನೀಡುವ ಹೊಣೆ ವಹಿಸಿಕೊಂಡರು.ಕುರುಡನಿಗೆ ಬೇಕಾದದ್ದು ಕಣ್ಣು ಯಾವ ದೇವರಿಗೆ ಕೈ ಮುಗಿದರೆ ತಾನೆ ಏನು. ? ಒಟ್ಟಿನಲ್ಲಿ ಮಕ್ಕಳಿಗೆ ಸಹಾಯವಾಗಬೇಕು ಮತ್ತು ಶಾಲೆಗೆ ಹೆಸರು ಬರಬೇಕು. ಅದರಿಂದ ಕ್ರೀಡಾಚುವಟಿಕೆಯ ಜವಾಬ್ದಾರಿ ಅವರಿಗೆ ಪೂರ್ಣ ವಾಗಿ ವಹಿಸಲಾಗಿತ್ತು. ನಮ್ಮ  ಕಾಲೇಜು ಇರುವುದು ಗೌಡರ ಪ್ರದೇಶದಲ್ಲಿ. ಅಲ್ಲಿ ಅವರದೆ ರಾಜ್ಯ. ನಮ್ಮ ಬೆಟ್ಟೆಗೌಡನು ಸಹಾ ಊರಿನ ಯಾವುದೊ  ಒಬ್ಬ  ಕುಲಬಾಂಧವನ ಮನೆಯ ಕೋಣೆಯಲ್ಲೆ ಉಳಿದು ಅಲ್ಲಿಯೆ ಊಟವನ್ನು ಮಾಡುತಿದ್ದರು. ಎಲ್ಲರೂ ಬಾಂಧವರಾದ್ದರಿಂದ ಅವರು ಬಹಳ ಸುಲಭ ವಾಗಿ ಮಕ್ಕಳನ್ನು ನಿಯಂತ್ರಿಸುವರು. ಮತ್ತು ಅವರು ಉತ್ತಮ ಗಣಿತದ ಶಿಕ್ಷಕರು. ಹಾಗಾಗಿ ನಾನು ನಿಶ್ಚಿಂತೆಯಿಂದ ಕ್ರೀಡಾ ತರಬೇತಿಯ ಹೊಣೆ ಅವರಿಗೆ ಕೊಟ್ಟೆ. ಅವರು ಅದನ್ನು ಖುಷಿ ಖುಷಿ ಯಿಂದಲೆ ಮಾಡುತಿದ್ದರು.
ಕ್ರೀಡಾ ತರಬೇತಿ ಬಲು ಜೋರಿನಿಂದಲೆ ಸಾಗಿತ್ತು. ಕೆಲವರು ತರಬೇತಿ ಸಮಯದಲ್ಲಿ ಅವರು ತುಸು ಎಲ್ಲೆ ಮೀರಿ ವರ್ತಿಸುವರು ಎಂದು ಒಬ್ಬಿಬ್ಬರು ಸೂಚ್ಯವಾಗಿ ಹೇಳಿದರು. ಮೊದಲೆ ಯುವಕರು, ಆಟದ ಉತ್ಸಾವ. ಅದರಲ್ಲೂ ಎಲ್ಲ ತಮ್ಮವರೆ ಎನ್ನುವ ಆತ್ಮ ವಿಶ್ವಾಸ.ಅದರಿಂದ ಒರಟಾಗಿ ಮಾತನಾಡಿರಬಹುದು ಎಂದು ಕೊಂಡೆ. ಅಲ್ಲದ ಯಾವುದೆ ಆಧಾರವಿಲ್ಲದೆ  ಅವರಿವರ ಮಾತಿಗೆ ಕಿವಿಗೊಟ್ಟರೆ ಸುಮ್ಮನೆ ಇಲ್ಲದ ಗುಲ್ಲಾಗುವುದು.  ಅದರೂ ತುಸು ಎಚ್ಚರಿಕೆಯೀಂದ ಇರಬೇಕು ಎಂದು ಕೊಂಡೆ. ಅವರ ಬಗ್ಗೆ ಮಾತನಾಡಿದವರೂ ಖಚಿತವಾಗಿ ಏನನ್ನು ಹೇಳಲು ಸಿದ್ದರಿರಲಿಲ್ಲ.
 ಕ್ರೀಡಾ ಸ್ಪರ್ಧೆಯು ಮೂರುದಿನ ನಡೆಯುವುದೆಂದು ವೇಳಾ ಪಟ್ಟಿ ಬಂದಿತು. ಹಾಗೆ ನೋಡಿದರೆ ಅ ಸ್ಥಳ  ನಮ್ಮ ಕಾಲೇಜಿಗೆ ಅತಿ ದೂರವೇನೂ ಇರಲಿಲ್ಲ. ಬಸ್‌ನಲ್ಲಿ  ಒಂದು ಗಂಟೆಯ ಹಾದಿ ಮಾತ್ರ. ಆದರೆ ಬಸ್ಸಿನ ಅನುಕೂಲ ಚೆನ್ನಾಗಿರಲಿಲ್ಲ.ಆದ್ದರಿಂದ ಇಲ್ಲಿಂದ ಓಡಾಡುವ ಸಾಧ್ಯತೆ ಇರಲಿಲ್ಲ. ಅದಕ್ಕೂ ಮಿಗಿಲಾಗಿ ಹಿಂದಿನ ವರ್ಷವೆಲ್ಲ ಅಲ್ಲಿಯೇ ರಾತ್ರಿ ತಂಗುತಿದ್ದರು. ಮೇಲಾಗಿ ಅಲ್ಲಿ ವಸತಿ ವ್ಯವಸ್ಥೆಯೂ ಚೆನ್ನಾಗಿತ್ತು.ನಮ್ಮ ಮನೆಯೂ ಕೂಡಾ  ಕ್ರೀಡಾ  ಕೂಟ ನಡೆವ  ಕಾಲೇಜಿಗೆ ಅತಿ ಸಮೀಪದಲ್ಲೆ ಇತ್ತು.ಹಾಗಾಗಿ ಹುಡುಗರ ಮತ್ತು ಹುಡುಗಿಯರ ಎರಡೂ ತಂಡಗಳನ್ನೂ ಕಳುಹಿಸುಲು ವ್ಯವಸ್ಥೆಯಾಯಿತು ಮತ್ತು ಬೆಟ್ಟೆಗೌಡ ನಾಯಕರಾಗಿ ಎಲ್ಲರನ್ನೂ ನೋಡಿಕೊಳ್ಳ ಬೇಕಿತ್ತು. ಆಟಗಾರರ ಪ್ರವಾಸ ಭತ್ಯ ಮತ್ತು ದಿನ ಭತ್ಯವನ್ನು ಅವರಿಗೆ ನೀಡಲಾಯಿತು.ನಮ್ಮಲ್ಲಿನ ಶಿಕ್ಷಕಿಬ್ಬರೂ ಅವರ ಜತೆ ಹೋಗಬೇಕು ಎಂದಾಗ ಅವರು ದಿನವೆಲ್ಲ ಅಲ್ಲಿರುವುದಾಗಿಯೂ ರಾತ್ರಿ ಮನೆಗೆ ಹೋಗಲೇ ಬೇಕೆಂದು ತಿಳಿಸಿದರು. ಅದಕ್ಕಾಗಿ ಇನ್ನೊಬ್ಬ ಶಿಕ್ಷಕರನ್ನೂ ನಿಯೋಜಿಸಲಾಯಿತು. ಅಲ್ಲದೆ  ಯಾವ ಮಕ್ಕಳ ಅಟವು ಮುಗಿಯುವುದೋ ಅವರನ್ನು ಅದೆ ದಿನ ವಾಪಸ್ಸು ಕಳುಹಿಸಬೇಕು ಅದರಲ್ಲೂ ಹುಡುಗಿಯರನ್ನು ಅವರಿಗಾಗಿ ಇರುವ ಪ್ರತ್ಯೇಕ ವಸತಿಯ ಸ್ಥಳದಲ್ಲೇ ಬಿಡಬೇಕೆಂದೂ ಸೂಚನೆ ನೀಡಲಾಯಿತು.ಅವರನ್ನು ಬೆಳಗ್ಗೆ ಹೊತ್ತಿಗೆ ಮುಂಚೆಯ ಭಾರತೀ ನಗರಕ್ಕೆ ಕಳುಹಿಸಲಾಯಿತು. ನಾನು ಯಥಾರೀತಿ ಕಾಲೇಜಿಗೆ ಬಂದೆ. ಅಲ್ಲಿನ ಕೆಲಸ ಮುಗಿಸಿ ಸಂಜೆ  ಮನೆಗೆ ಹಿತಿರುಗಿದೆ. ಆಗಲೆ ಆರು ಗಂಟೆಯ  ಮೇಲಾಗಿತ್ತು ನಮ್ಮ  ಹುಡುಗರು  ಹೇಗಿದ್ದಾರೆಂದು ಅರಿಯಲು  ಆಟದ ಮೈದಾನದ ಹತ್ತಿರ ಹೋದೆ.
ನಮ್ಮಹುಡುಗರು ತಂಡದ ಆಟದಲ್ಲಿ ಗೆದ್ದಿದ್ದರು.. ಹುಡುಗಿಯರು ಸೋತಿದ್ದರು.ಅಟೋಟಗಳ ಸ್ಪರ್ಧೆ ಕೊನೆಯ ದಿನ ಇತ್ತು.ನನಗೆ ಆ ದಿನ ಆಟ ಮುಗಿದವರು ಮೊದಲೆ ತಿಳಿಸಿದ ಪ್ರಕಾರ ಊರಿಗೆ ವಾಪಸ್ಸು ಏಕೆ ಹೋಗಲಿಲ್ಲ ಎಂದು ಗೊತ್ತಾಗಲಿಲ್ಲ.  ಹುಡುಗಿಯರನ್ನೆ ಕೇಳಿದಾಗ ಅವರು ಹೆದರುತ್ತಾ,” ಬೆಟ್ಟಯ್ಯಸರ್‌ ಅವರು ಈ ದಿನ ಊರಿಗೆ ಹೋಗುವುದು ಬೇಡ.ಎಲ್ಲ ಹುಡುಗಿಯರನ್ನು ಸಿನೆಮಾಕ್ಕೆ ಕರೆದು ಕೊಂಡು ಹೋಗುವುದಾಗಿ ತಿಳಿಸಿರುವರು. ರಾತ್ರಿ ಇಲ್ಲಿಯೆ ತಂಗಬೇಕಾಉ. ಆದರೆ ಇಲಾಖೆ ನೀಡಿದ ಪ್ರತ್ಯೇಕ ರೂಮಿಗೆ ಹೋಗದೆ ತಾವು ಬೇರೆ  ಕಡೆ ಮಾಡುವ ರೂಮಿಗೆ ಬರಬೇಕು “  ಎಂದು ಒತ್ತಾಯ ಮಾಡಿದ್ದರು.
ಅಲ್ಲದೆ ಇನ್ನು ಮೂರುದಿನ ಅವರು ಹೇಳಿದಂತೆ ಎಲ್ಲರೂ ಕೇಳ ಬೇಕು. ಇಲ್ಲದಿದ್ದರೆ ಅವರಿಗೆ ಗತಿ ಕಾಣಿಸುವುದಾಗಿ ಬೆದರಿಸಿದ್ದರು. ಅದರಿಂದ ಹುಡುಗಿಯರು ಗಾಬರಿಯಾಗಿದ್ದರು.   ನನ್ನನ್ನು ನೋಡಿದೊಡನೆ ಅಳ ತೊಡಗಿದರು. ಈ ಮೊದಲು ಅವರು ಅಸಭ್ಯವಾಗಿ ನಡೆದುಕೊಂಡಿದ್ದರು . ಆದರೆ ಪ್ರಾಂಶುಪಾಲರಿಗೆ ಹೇಳಿದರೆ ಫೇಲು ಮಾಡುವುದಾಗಿ ಹೆದರಿಸಿದ್ದರಂತೆ.
ಈಗ ಅವರ ವರ್ತನೆ ಎಲ್ಲೆ ಮೀರಿದ್ದರಿಂದ ಹುಡುಗಿಯರು ಗಾಬರಿಯಾಗಿದ್ದರು. ಹುಡುಗಿಯರಿಗೆ ಸಮಾಧಾನ ಮಾಡಿದೆ. ಶಿಕ್ಷಕರಿಗೆ ಬರ ಹೇಳಲಾಯಿತು.. ಅವರು ಬಂದುನನ್ನನ್ನು ಕಾಣಲು ತಯಾರಿರಲಿಲ್ಲ.  ಇನ್ನೇನು ಮಾಡುವುದು  ನನ್ನ ಮನೆಗೆ  ಹುಡುಗಿಯರನ್ನು ಕರೆದೊಯ್ದೆ. ಮತ್ತೊಮ್ಮೆ ಬಂದು ಕಾಣವಂತೆ ಅವರಿಗೆ ಮಾಹಿತಿ ಕಳುಹಿಸಿದೆ.ಅವರು ಬರಲಿಲ್ಲ. ಅವರ ಪ್ರತಿಕ್ರಿಯೆ ತಿಳಿಸಲು ಹುಡುಗ ಹಿಂದೆ ಮುಂದೆ ನೋಡಿದ. ಬಹಶಃ ಅವನಿಗೂ ಇದ್ದ ವಿಷಯ ಹೇಳಲು ಹೆದರಿಕೆ.ಸುಮಾರು ಹದಿನೈದು ಜನ ಹುಡುಗಿಯರನ್ನು ಅವರಪಾಡಿಗೆ ಅವರನ್ನು  ಬಿಡಲು ಮನ ಬಾರದಾಯಿತು. ಅವರನ್ನು ನಮ್ಮ ಮನೆಗೆ ಕೆದುಕೊಂಡು ಹೋದೆ. ಅಲ್ಲಿಯೆ ಅವರಿಗೆ ಊಟ ಹಾಕಿಸಿ . ಮಲಗಲು ವ್ಯವಸ್ಥೆ ಮಾಡಿದೆ.ಅಷ್ಟರಲ್ಲಿ ಒಬ್ಬ ಹುಡುಗ ಬಂದು ಬೆಟ್ಟಯ್ಯ ಮಾಷ್ಟ್ರು ಬರ ಹೇಳಿದ್ದಾರೆ ಎಲ್ಲ ಹುಡುಗಿಯರೂ ಬರಬೇಕೆಂದು ಕರೆದ.ಆದರೆ ಅವರು ಭಯದಿಂದ ನಡುಗತೊಡಗಿದ್ದರು.ಅವರು ಮೈದಾನದಲ್ಲಿ ಮುಂದೆ ನಿಂತು ಕೂಗಾಡುತ್ತಿರುವುದಾಗಿ ತಿಳಿಯಿತು . ತಾವು ಕರೆದುಕೊಂಡ ಬಂದ  ಹುಡುಗಿಯರ ಬಗ್ಗೆ ಮಾತನಾಡಲು ಯಾರಿಗೂ ಅಧಿಕಾರವಿಲ್ಲ ಎಂಬುದು ಅವರ ವಾದ. ಅವರು ಏನಾದರೂ ಮಾತನಾಡಲಿ ಹುಡುಗಿಯರನ್ನು ಅವರಲ್ಲಿಗೆ ಕಳುಹಿಸುವುದು ಆಗದ ಮಾತು ಎಂದು ನಿರ್ಧರಿಸಿದೆ. ಅದರಂತೆ ಅವರಿಗೆ ಮಾಹಿತಿ ಕಳುಹಿಸಲಾಯಿತು. ಪಾಪದ ಹುಡುಗಿಯರು ಇರುವ ಒಂದು ಹಾಲಿನಲ್ಲೆ  ಹೇಗೋ ಹೊಂದಾಣಿಕೆ ಮಾಡಿಕೊಂಡು ಮಲಗಿದರು. ಬೆಳಗ್ಗೆ ಎದ್ದು ಅವರ ದೈನಂದಿನ ಕೆಲಸ ಮುಗಿದ ಮೇಲೆ ಹೋಟಲಿನಿಂದ ತಿಂಡಿ ತರಿಸಿ ಕೊಟ್ಟು ನನ್ನ ಜತೆಯಲ್ಲಿಯೇ ಕಾಲೇಜಿಗೆ ಕರೆದು ಕೊಂಡು ಹೋದೆ. ಅ ದಿನ ಎಲ್ಲರೂ ಮನೆಯಲ್ಲಿ ವಿಶ್ರಾಂತಿ ಪಡೆಯಲು ಅವರಿಗೆ ತಿಳಿಸಲಾಯಿತು.
 ಪಂದ್ಯಾವಳಿ ಮುಗಿದ ಮಾರನೆಯ ದಿನ ಬೆಟ್ಟಯ್ಯ ಕಾಲೇಜಿಗೆ ಬಂದವರೆ ಕಚೇರಿಗೆ ಬಂದು ಕೂಗಾಡಲು ಶುರು ಮಾಡಿದರು.ಅವರ ಗೌರವಕ್ಕೆ ಕುಂದು  ಬಂದಿರುವುದಾಗಿ ಕೋಪಗೊಂಡಿದ್ದರು. ಅವರ ಕೆಲಸದಲ್ಲಿ ಕೈ ಹಾಕಿ ಮಧ್ಯದಲ್ಲೆ ಮಕ್ಕಳನ್ನು ಕರೆತರಲು ನನಗೆ ಯಾವ ಅಧಿಕಾರವಿದೆ. ಒಂದು ಸಲ ಜವಾಬ್ದಾರಿ ಕೊಟ್ಟ ಮೇಲೆ  ಮುಗಿಯಿತು ಮೂರುದಿನ ಯಾರೂ ಮಾತನಾಡಬಾರದು  ಎಂಬುದ ಅವರ ವಾದ.
ಇತರ ಶಿಕ್ಷಕರು ಅವರನ್ನು ಸಮಾಧಾನ ಮಾಡಲು ಬಹಳ ಪ್ರಯತ್ನಿಸಿದರು ಆದರೆ  ಸಮಾಧಾನವಾಗಲೆ ಇಲ್ಲ.ಯಾವುದೋ ಊರಿನಿಂದ ಬಂದವನಿಗೆ ಇಷ್ಟು ಅಹಂಕಾರವಿರುವಾಗ ಅದೆ ಜಿಲ್ಲೆಯವರಾದ ತಾವು ಸುಮ್ಮನಿರುವುದು ಸಾಧ್ಯವೆ ?
 ಒಂದೆ ಸಮನೆ ಅವರ ಕಿರುಚಾಟ ನಡೆದೆ ಇತ್ತು.ಮಕ್ಕಳು ಗಂಪು ಗೂಡಿದರು. ಎಲ್ಲರಿಗೂ ಬಿಟ್ಟಿ ಮನರಂಜನೆ.
 ಇತರರು ಮೂಕ ಪ್ರೇಕ್ಷಕರಾಗಿ ಮಿಕಿ ಮಿಕಿ ನೋಡುತ್ತಾ ನಿಂತರು. ಅವರದು ಒಂದೆ ಮೂಲ ಪ್ರಶ್ನೆ. ತಾವು ಏನೋ ಮಾಡುವರೆಂದು ಅನುಮಾನದಿಂದ ತಮ್ಮ ವಶದಲ್ಲಿದ್ದ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ತಮ್ಮ ಮನೆಯಲ್ಲಿ ಒಂದು ರಾತ್ರಿಯೆಲ್ಲ ಮಲಗಿಸಿ ಕೊಂಡರಲ್ಲಾ ಪ್ರಿನ್ಸಿಪಾಲರೂ ಮತ್ತು ಕಾಲೇಜಿಗೆ ಹೋಗುವ ಅವರ ಮಗನೂ ಗಂಡಸರು ತಾನೆ . ಅವರು ಮಾಡಿದರೆ ಕೆಲಸ ಸರಿ , ನಾನು  ಅದನ್ನೆ ಮಾಡಿದರೆ  ತಪ್ಪಾ?. ಎಂಬುದು ಅವರ ವಾದ. ಅದೂ ಅಲ್ಲದೆ ಪ್ರಿನ್ಸಿಪಾಲರು ಬರಿ ಪ್ರಭಾರಿ ಅಧಿಕಾರಿ. “ತೀನ್ ದಿನ  ಕಾ ಸುಲ್ತಾನ್ “
ಯಾವುದೆ ಒಂದು ಇತ್ಯರ್ಥ ವಾಗುವ ವರಗೆ ತಾವು ಸುಮ್ಮನಿರುವುದಿಲ್ಲ ಎಂದು ಶಿಕ್ಷಕರೆದರು ಸಮರ್ಥಿಸಿಕೊಂಡರು.ಇನ್ನು ಅಸಭ್ಯ ಮತ್ತು ಅವಾಚ್ಯ ಪದಗಳ ಬಳಕೆಯಂತೂ ತಡೆಯಿಲ್ಲದೆ ಸಾಗಿತ್ತು.
ಇದ್ದುದರಲ್ಲೆ ಜವಾನರು ಸಮಾಧಾನ ಮಾಡಲು ಪ್ರಯತ್ನಿಸಿದರು. ನೀವು ಜಾತಿ ತಪ್ಪಿ ಹುಟ್ಟಿರುವಿರಿ. ಇದು ನನಗಾದ ಅವಮಾನವಲ್ಲ ನಮ್ಮವರಿಗೆಲ್ಲ ಆದ ಅವಮಾನ ಎಂದು ಸಮಸ್ಯೆಯನ್ನು ಸಾರ್ವತ್ರೀಕರಣ ಗೊಳಿಸಲು ಯತ್ನಿಸಿದರು
 ಎಲ್ಲ ಮಕ್ಕಳನ್ನೂ ತಮ್ಮ ತಮ್ಮ ತರಗತಿಗಳಿಗೆ ಹೋಗುವಂತೆ ತಿಳಿಸಿದೆ. ಶಿಕ್ಷಕರನ್ನೂ ಪಾಠ ಪ್ರವಚನದಲ್ಲಿ ತೊಡಗುವಂತೆ ವಿನಂತಿಸಲಾಯಿತು. ಅವರೆಲ್ಲ ಹೋದ ಮೇಲೂ ಇವರ ಜೋರು ಒಂದು ತಾಸಿನ ತನಕ ಹಾಗೆಯೆ ಸಾಗಿತು.
ನಾನು ಏನೂ ಪ್ರತಿಕ್ರಿಯೆ ವ್ಯಕ್ತಪಡಿಸಲಿಲ್ಲ. ಮಾತನಾಡಿದರೆ ಕೈ ಕೈ ಮಿಲಾಯಿಸುವ ಸಂಭವವೂ ಇತ್ತು.
 ನಂತರ ಹಿರಿಯ ಸಹಾಯಕರನ್ನು ಕರೆದು ಸಲಹೆ ಕೇಳಿದೆ.
ಅವರು ಗಾಬರಿ ಗೊಂಡಿದ್ದರು.  “ಈ ಮನುಷ್ಯ ಒರಟ. ಸ್ಥಳಿಯ. ಪ್ರಬಲ  ಕೋಮಿಗೆ ಸೇರಿದವನು. ಯಾವುದಕ್ಕೂ ಹೇಸದವನು.ನೀವೋ ದೂರದಿಂದ ಬಂದಿದ್ದೀರಿ.ನಿಮ್ಮ ಬೆಂಬಲಕ್ಕೆ ಯಾರೂ ಬರುವುದಿಲ್ಲ. ಸುಮ್ಮನೆ ಇದ್ದುಬಿಡಿ. ಏನಾದರೂ ಒದರಿಕೊಳ್ಳಲಿ . ಕೊನೆಗೆ ತಾನೆ ಸುಮ್ಮನಾಗುವನು. . ಏನೂ ಆಗಿಲ್ಲ ಎನ್ನುವಂತೆ ಇದ್ದರೆ ತನ್ನಿಂದ ತಾನೆ  ಸರಿಯಾಗುವುದು’ ,ತಮ್ಮಲ್ಲಿನ ಹೆದರಿಕೆಯನ್ನು ನನಗೂ ಹರಡವಂತೆ ಹೇಳಿದರು.
ನಾನು ಮಧ್ಯಾಹ್ನದ ತನಕ ಯೋಚಿಸಿದೆ. ಅಷ್ಟರಲ್ಲಿ ಅವರು ಜಾಗ ಖಾಲಿ ಮಾಡಿದ್ದರು ಮಹಿಳಾ ಸಿಬ್ಬಂದಿಯಂತೂ ಕಂಗಾಲಾಗಿದ್ದರು.
 ಇದು ನನಗಾದ ಅವಮಾನವೆಂದು ಕೊಳ್ಳಲಿಲ್ಲ. ಇದು ಸಂಸ್ಥೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಹೊಣೆ ನನ್ನದಾಗಿತ್ತು. ಅಲ್ಲದೆ ಆ ಹೆಣ್ಣು ಮಕ್ಕಳು ತಮಗಾದ ಕಿರುಕಳವನ್ನು ಹೇಳಿಕೊಂಡು ಕಣ್ಣೀರು ಹಾಕಿದ್ದರು. ಈಗ ಅವರ ದುರ್ವತನೆಯನ್ನು ಕಡೆಗಣಿಸಿದರೆ, ಅವರ ದುಸ್ಸಾಹಸಕ್ಕೆ ಪುಟಸಿಗುತಿತ್ತು.ಒಂದು ಮಾತಂತೂ ನಿಜ. ಅವರು ದುಡುಕಿ ನನ್ನ ಮೇಲೆ ಹಲ್ಲೆ ಮಾಡಿದರೂ ಯಾರೂ ರಕ್ಷಣೆಗೆ ಬರುತ್ತಿರಲಿಲ್ಲ.
ಕೊನೆಗೆ ಒಂದು ತೀರ್ಮಾನಕ್ಕೆ ಬಂದೆ. ನಡೆದ ಘಟನೆಯನ್ನು ಅಧಿಕೃತವಾಗಿ  ಎಲ್ಲ ಸಿಬ್ಬಂದಿಯ ಸಭೆಯಲ್ಲಿ ಚರ್ಚಿಸಿ ಅವರ ಸಲಹೆಯಂತೆ ಮುಂದುವರಿಯಲು ತೀರ್ಮಾನಿಸಿ ಶಿಕ್ಷಕರ ಸಭೆಯನ್ನು ಕರೆಯಲಾಯಿತು.
 ಸಭೆ ಸೇರಿತು. ಎಲ್ಲರೂ ಬಂದು ಕುಳಿತರು ಆ ವ್ಯಕ್ತಿ ಸುತ್ತೋಲೆ ನೋಡಿದ್ದರೂ ಸಭೆಗೆ ಬರಲಿಲ್ಲ. ಸಭೆಯಲ್ಲಿ ಶ್ಮಶಾನ ಮೌನ.ನಾನು ವಿವರಿಸುವ ಅಗತ್ಯವೆ ಇರಲಿಲ್ಲ. ಎಲ್ಲರೂ ಪ್ರತ್ಯಕ್ಷ ದರ್ಶಿಗಳಾಗಿದ್ದರು. ಆದರೆ ಯಾರೂ ನಡೆದ ಘಟನೆಯನ್ನು ಖಂಡಿಸಲು ಅದು ಸರಿಯಲ್ಲ ಎಂದು ಹೇಳುವ ಧೈರ್ಯ ತೋರಲಿಲ್ಲ. ಸುಮ್ಮನೆ ತಲೆ ತಗ್ಗಿಸಿಕುಳಿತಿದ್ದರು.
 ನಾನೂ ಅವರಿಂದ ಏನನ್ನೂ ನಿರೀಕ್ಷಿಸುವಂತಿರಲಿಲ್ಲ. ಆದ್ದರಿಂದ ಹೆಚ್ಚು ಮಾತನಾಡಲಿಲ್ಲ ಆದರೆ ಈ ದಿನ ನೆಡೆದ ಘಟನೆಯನ್ನು ವಿವರವನ್ನು ಅದನ್ನು ಚರ್ಚಿಸಲು ಕರೆದ ಸಭೆಗೂ ಅವರು ಬಂದಿಲ್ಲ ಎಂಬುದನ್ನು ದಾಖಲು ಮಾಡಲಾಯಿತು. ಮಕ್ಕಳ ಏಳಿಗೆಗೆ ಮಾರಕವಾಗುವ ಈ  ಘಟನೆಯನ್ನು ಖಂಡಿಸಲಾಯಿತು.ಸಭಾ  ನಢೆವಳಿಯ ಪುಸ್ತಕವನ್ನು ಭದ್ರವಾಗಿಟ್ಟುಕೊಂಡು ಹಿರಿಯ ಸಹಾಯಕರೊಡನೆ ಅಂದು ಸಂಜೆ ಭಾರತಿ ನಗರದ ಆರಕ್ಷಕ ಠಾಣೆಗೆ ಹೋಗಿ ದೂರು ನೀಡಲಾಯಿತು. ಅಲ್ಲಿ ವೈಯುಕ್ತಿಕ ವಾಗಿ ಏನನ್ನೂ ನಮೂದಿಸದೆ ಶಾಂತಿ ಭಂಗವಾಗದಂತೆ ಕ್ರಮ  ತೆಗೆದುಕೊಳ್ಳಲು  ಕೋರಲಾಯಿತು.
 ಮಾರನೆ ದಿನವೂ ಆ ವ್ಯಕ್ತಿ ಗುರ್‌ ಎನ್ನತ್ತಲೆ  ಇದ್ದ. ಕೈಕಾಲು ಮುರಿಯುವ ಮಾತು ಸಿಬ್ಬಂದಿಯ ಎದುರು ಸಾಗಿತ್ತು. ನಾನು ಮಧ್ಯಾಹ್ನದ ಮೇಲೆಗೆ ವಿವರವಾದ ವರದಿಯನ್ನು ಸಿದ್ಧಮಾಡಿ ಉಪನಿರ್ದೇಶಕರು ಮತ್ತು ಸಹ ನಿರ್ದೇಶಕರಿಗೆ ರವಾನಿಸಿದೆ
 ಬೆಟ್ಟಯ್ಯನವರು ತಮ್ಮ  ವಾಗ್ದಾಳಿ ಕಡಿಮೆ ಮಾಡಿದ್ದರು ಅವರ ಯಾವುದೆ ಮಾತಿಗೂ ಪ್ರತಿಪ್ತಿಕ್ರಿಯೆ ನೀಡದಿರುವುದು ಅವರಿಗೆ ನಿರಾಸೆ ಉಂಟುಮಾಡಿತ್ತು.. ಅದೃಷ್ಟಕ್ಕೆ ಬೇರೆ ಯಾವ ಸಹೋದ್ಯೋಗಿಯೂ ಅವರಿಗೆ ಒತ್ತಾಸೆ ನೀಡಲಿಲ್ಲ.  ಮೂರೆ ದಿನದಲ್ಲಿ ಎಲ್ಲ ತಣ್ಣಗಾಯಿತು . ಬಹಶಃ ಆರಕ್ಷಕರು ಅವರನ್ನು ಕರೆದು ಎಚ್ಚರಿಸಿರಬಹುದು. ಒಂದೆ ವಾರದಲ್ಲಿ ಸಹ ನಿರ್ದೇಶಕರಿಂದ ಅವರಿಗೆ ವಿವರಣೆ ಕೇಳಿ  ನೋಟೀಸು  ಬಂದಾಗ ಅವರು ಮೆತ್ತಗಾದರು. ನಮ್ಮ ಕಾಲೇಜನ್ನು ತಂದವರಾದ , ಜಿಲ್ಲಾ ಪಂಚಾಯತ್‌ ಸದಸ್ಯರ ಬಂಗಲೆ ನಮ್ಮ ಕಾಲೇಜಿನ ಪಕ್ಕದಲ್ಲೆ ಇತ್ತು.ಅವರು ಬಹು ಪ್ರಭಾವಶಾಲಿ.. ಮೇಲಾಗಿ ಅವರ ಹೆಂಡತಿಯ ತಮ್ಮ ಮಂತ್ರಿಗಳು. ಆ ಭಾಗದಲ್ಲಿ ಅವರ ಮಾತೆ ವೇದ ವಾಕ್ಯ. ಹಿಂದಿನವರೆಲ್ಲ ಪ್ರತಿಯೊಂದಕ್ಕೂ ಅವರಲ್ಲಿಗೆ ಹೋಗುವರು. ಅವರು ನೀಡಿದ ತೀರ್ಮಾನವೆ  ಅಂತಿಮ. ನಾನು ಈ ಸಮಸ್ಯೆಯನ್ನು ಅವರ  ಗಮನಕ್ಕೆ ತರಲೆಇಲ್ಲ.ಮತ್ತು ಅವರಿಂದ ಯಾವ ಸಹಾಯವನ್ನು ಬಯಸಲಿಲ್ಲ ಇದು ನನಗೆ ವೈಯುಕ್ತಿಕ ಸಮಸ್ಯೆ ಎನಿಸಲಿಲ್ಲ. ಇದು ಸಂಸ್ಥೆಯ ಸಮಸ್ಯೆ ಅದಕ್ಕೆ ನಾನೆ ಸೂಕ್ತ  ಪರಿಹಾರ ಕಂಡುಕೊಳ್ಳ ಬೇಕು ಎಂದು ನನ್ನ ನಿಲುವು.  ಹೊರಗಿನವರ  ಹಸ್ತಕ್ಷೇಪದ ಅಗತ್ಯ ಇರಲಿಲ್ಲ. ಮೇಲಾಗಿ ಅವರು ನನ್ನ ಕೆಲಸದ ಬಗ್ಗ ಮೆಚ್ಚುಗೆ ಹೊಂದಿದ್ದರು. ಅಲ್ಲದ ಈಗಾಗಲೆ ಮುಂಬಡ್ತಿ ಯ ಅಂಚಿನಲ್ಲಿರುವ ನನ್ನನ್ನೆ ಇದೆ  ಕಾಲೇಜಿಗೆ ಹಾಕಬೇಕೆಂದು ಮಂತ್ರಿಗಳಿಂದ ಮಿನಿಟ್ಸ್ ಹಾಕಿಸಿದ್ದರಂತೆ. ನನಗೆ ಯಾವದೆ ನಿರ್ಧಿಷ್ಟ  ಜಾಗದ  ಬಯಕೆ ಇರಲಿಲ್ಲ. ಊರು ಬಿಟ್ಟು ಆರು ನೂರು ಮೈಲು ಬಂದವನಿಗೆ ಯಾವ  ಊರಾದರೇನು. ಎಲ್ಲ ಊರು ನಮ್ಮವೆ.
 ಬಹಶಃ ಆ ವ್ಯಕ್ತಿ ಯ ಅದೃಷ್ಟ ಗಟ್ಟಿಇರಬಹುದು. ನನಗೆ ಮುಂಬಡ್ತಿಯ ಆದೇಶ ಬಂದಿತು . ನನ್ನನ್ನು ಅದೆ ತಾಲೂಕು ಕೇಂದ್ರದ ದೊಡ್ಡ  ಕಾಲೇಜಿಗೆ  ನೇಮಿಸಿದ್ದರು. ಅದು ಮೈಸೂರಿಗೆ ನಿತ್ಯ ಓಡಾಡ ಬಹುದಾದ  ಸ್ಥಳ. ಬಹು ಬೇಡಿಕೆ ಇರುವ ಜಾಗ. ಆದರೆ ಒಂದು ವಿಶೇಷ ಕಾರಣಕ್ಕೆ ನನಗೆ ನೀಡಿದ್ದರು. ಅದು ಸಮಸ್ಯೆಯಸಾಗರ.  ನೀರಲ್ಲಿ ಮುಳುಗಿದವನಿಗೆ ಚಳಿಏನು ಮಳೆಏನು ಎಂದು ಹೊರಡಲುಸಿದ್ದನಾದೆ. ಒಂದು ದಿನ ಸಂಜೆ ಸದರಿ ವ್ಯಕ್ತಿಯು ಜಿಲ್ಲಾ ಪಂಚಾಯತ್‌ ಸದಸ್ಯರೊಂದಿಗೆ ನಮ್ಮ ಮನೆಯ ಹತ್ತಿರ ಬಂದರು.ಆ ನಾಯಕರು  ಅವರ ಕಾಲೇಜಿನಲ್ಲಿಯೆ  ನನಗೆ ಸಿಗದಕ್ಕೆ ವಿಷಾದಿಸಿದರು. ಹಾಗೆಯೆ ಹೋಗುವ ಮುಂದೆ  ಆ ವ್ಯಕ್ತಿಗೆ ಮುಂದೆ ತೊಂಯೊಂದರೆಯಾಗದಂತೆ ನೋಡಿಕೊಳ್ಳ ಬೇಕೆಂದು ವಿನಂತಿಸಿದರು.ಮಾತೆತ್ತಿದರೆ ಗುಡುಗುವ  ಅವರು ಮೃದುವಾಗಿ ಮಾತನಾಡಿರುವುದು ಅದೆ ಮೊದಲ ಸಲ . ನನಗೂ ಹೋಗು ವಾಗಲೂ ಹಠ ಬೇಡ ಎನಿಸಿತು. ಪೋಲೀಸರಿಗೆ ಇದನ್ನು ಕೈ ಬಿಡುವಂತೆ ಅವರೆ ಹೇಳಲು ತಿಳಿಸಿದೆ. ಇನ್ನು ಇಲಾಖೆಯಯಲ್ಲಿ ಈ ವಿಷಯವನ್ನು ನಾನು ಮುಂದುವರಿಸುವುದಿಲ್ಲ ಎಂದು ಭರವಸೆ ಕೊಟ್ಟೆ. ಅವರು ಗುತ್ತಿಗೆ ನೌಕರರಾದುದರಿಂದ ವಿಚಾರಣೆ ನಡೆದರೆ ಕಷ್ಟವಾಗತಿತ್ತು ಅವರ ಮೇಲಿನ ಅಶಿಸ್ತಿನ ಆರೋಪ ಸಾಬೀತಾಗುತಿತ್ತು.  ಹೊಸ ಹೊಣೆ ಹೊರಲು ಹೊರಟಿರುವ ನನಗೆ ಹಳೆಯ ಕೊಳೆ ಏಕೆ ಎಂದು ಕೊಂಡುಅವರ ಮಾತಿಗೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಆದರೆ ಈ ವಿಷಯದ ಎಲ್ಲ ದಾಖಲೆಗಳನ್ನು ಹೋಗುವಾಗ ನನ್ನ ವಶಕ್ಕೆ ತೆಗೆದು ಕೊಂಡೆ.
ಅಂತೂ ಎಲ್ಲವೂ ಸುಖಾಂತ್ಯವಾಯಿತು. ಮೂರು ನಾಲಕ್ಕು ವರ್ಷ ವಾಗಿರಬಹುದು ನಂತರ ಆ ವ್ಯಕ್ತಿಯ ಹೆಸರು ಪತ್ರಿಕೆಯಲ್ಲಿ ಬಂದಿತು . ಬೇರೊಂದು ಶಾಲೆಯಲ್ಲಿ  ಇದೆ ಅರೋಪದ ಮೇಲೆ ಅಮಾನತ್ತಾಗಿದ್ದರು   “ಹೀನ ಸುಳಿ ಏನು ಮಾಡಿದರೂ  ಹೋಗದು”  ಎಂಬ ಗಾದೆ ನೆನಪಿಗೆ ಬಂದಿತು




Monday, December 24, 2012

ಅಮೇರಿಕಾ ಅನುಭವ-7






ಥಂಡಿಯಾತ್ರೆ.
 ಇಸ್ರೇಲು ಮತ್ತು ಅರಬ್‌ ರಾಷ್ಟ್ರಗಳ ನಡುವೆ ಸದಾ ಸಂಘರ್ಷ. ಇವರ ನಡುವಿನ   ಕದನದಿಂದ ಪಾಲೆಸ್ಟೇನಿನ ಜನರು ನಿರಾಶ್ರಿತರಾದರು.  ಇಸ್ರೇಲ್ ರಾಷ್ಟ್ರದ ನಿರ್ಮಾಣದಿಂದ ಅಲ್ಲಿ ನೆಲಸಿದ್ದ ಯೇಹೂದಿಗಳಲ್ಲದವರು ಪಲಾಯನ ಮಾಡಿದರು. ಅವರನ್ನು ಪುನರ್‌ಸ್ಥಾಪಿಸಲು ನಡೆದ ಯತ್ನಗಳುಪೂರ್ಣವಾಗಿ  ಯಶಸ್ವಿಯಾಗಿಲ್ಲ. ಹೀಗೆ ನಿರಾಶ್ರಿತರಾದ ಜನರನ್ನೆಲ್ಲ ಅಲ್ಲಲ್ಲಿ  ಶಿಬಿರಗಳಲ್ಲಿ ನೆಲೆಗೊಳಿಸಿ ಯೋಗ ಕ್ಷೇಮ ನೋಡಿಕೊಳ್ಳಲಾಗುತ್ತಿದೆ.. ಅದರ ಮೇಲ್ವಚಾರಣೆಯನ್ನು ವಿಶ್ವ ಸಂಸ್ಥೆಯೆ  ನೋಡಿಕೊಳ್ಳುವುದು . ಇಲ್ಲಿನ ಒಂದು ಶಿಬಿರ ಪೂರ್ಣವಾಗಿ ಭೂ ಆವೃತವಾದ ಪ್ರದೇಶವಾಗಿದೆ. ಅಲ್ಲಿನ ಜನರಿಗೆ ಸಮುದ್ರ ನೋಡುವ ಅವಕಾಶವೆ ಇಲ್ಲ . ಬಿರು ಬಿಸಿಲಲ್ಲಿ ತಣ್ಣನೆ ನೀರಿನಲ್ಲಿ ಆಟವಾಡಲು ಅಲ್ಲಿ  ಜಲಾಶಯಗಳು ಇಲ್ಲ.  ಸಮುದ್ರ ತೀರವೇನು ಅತಿ ದೂರವಲ್ಲ. ಆದರೆ ಹೋಗುವ ಹಾಗಿಲ್ಲ. ಕಾರಣ ಇಸ್ರೇಲ್‌ ಅಕ್ರಮಿತ ಪ್ರದೇಶವೆ ಅವರ ಶಿಬಿರವನ್ನು ಸುತ್ತುವರಿದಿದೆ.  ಅವರಿಗೆ ಅಲ್ಲಿ  ಪ್ರವೇಶ ನಿಷಿದ್ಧ. ಇಸ್ರೇಲಿ ನಾಗರೀಕರು ಮುಕ್ತವಾಗಿ ಎಲ್ಲೆಡೆ ಸಂಚರಿಸಬಹುದು. ಆದರೆ ಅದೆ ಸ್ವಾತಂತ್ರ್ಯ ಶಿಬಿರವಾಸಿಗಳಿಗೆಇಲ್ಲ. ಇದು ನ್ಯಾಯ ಸಮ್ಮತವಲ್ಲ ಎಂದು ಅನೇಕರಿಗೆ ಅನಿಸಿದೆ. ಅದರಲ್ಲಿ ಇಸ್ರೇಲಿನ ನಾಗರೀಕರೂ ಇದ್ದಾರೆ. ಆದರೆ ಕಾನೂನು ಹಾಗಿದೆ ಯಾರೂ ಏನೂ ಮಾಡುವಹಾಗಿಲ್ಲ. ಅದನ್ನು ಪ್ರತಿಭಟಿಸಲು ಕೆ;ಲ ಸಹೃದಯಿ ಯಹೂದಿಗಳೆ ಹೊಸ ಮಾರ್ಗ  ಹಿಡಿದರು. ನಿರಾಶ್ರಿತ ಶಿಬಿರದಲ್ಲಿನವರಿಗೆ ಸಾಗರ ದರ್ಶನ ಮಾಡಿಸುವ ಯೋಜನೆ ಕೈ ಕೊಂಡರು. ಅದರಿಂದ ಮಹತ್ತರ ಬದಲಾವಣೆ ಬರಲಿಕ್ಕಿಲ್ಲ. ಆದರೆ ಅದೂ ಸಹಾ ಒಂದು ಸಾಂಕೇತಿಕ ಪ್ರತಿಭಟನೆಯ ಕುರುಹು ಎನ್ನಬಹುದು.
ಶಿಬಿರಾರ್ಥಿಗಳಿಗೆ ವಿಧಿಸಿದ  ಮುಕ್ತಸಂಚಾರದ ನಿರ್ಬಂಧ  ಇಸ್ರೇಲ್‌ನ ರಕ್ಷಣಾ ದೃಷ್ಟಿಯಿಂದ  ಸರಿ ಎಂದು ಅವರ ವಾದ. ಅದಕ್ಕಾಗಿ ಅವರು ಹಾಕಿದ ಹಸಿರು ಗೆರೆಯನ್ನ ಪಾಲಿಸ್ಟೇನಿನವರು ದಾಟುವಹಾಗಿಲ್ಲ. ಒಂದು ರೀತಿಯಲ್ಲಿ ಹಿಂದೆ ಜರ್ಮನಿಯಲ್ಲಿದ್ದ ಬರ್ಲಿನ್‌ ಗೋಡೆ ಇದ್ದಹಾಗೆ.
ಹನ್ನಾ ಹಮರ್‌ ಒಬ್ಬ  ಯೇಹೂದಿ  ಮಹಿಳೆ. ಅವಳು  ಲೇಖಕಿ,  ಸ್ಥಳೀಯ ಪತ್ರಿಕೆಯ ಸಂಪಾದಕಿಯೂ ಹೌದು. ಒಂದು ಜನಾಂಗದ ಸಂಸ್ಕೃತಿ ಅರಿಯಲು ಅವರ ಭಾಷೆಯ ಕಲಿಕೆ ಅಗತ್ಯ ಎಂದು ಕೊಂಡವಳು. ಅವಳು ಅನುವಾದಕಿಯಾದ್ದರಿಂದ  ಅರೇಬಿಕ್‌ ಕಲಿಯಲು  ನಿರಾಶ್ರಿತರ ಶಿಬಿರಕ್ಕೆ ಆಗಿಂದಾಗ ಭೇಟಿಕೊಡುವಳು. ಹಾಗೆ ಹೋದ  ಸಮಯದಲ್ಲಿ  ಅಲ್ಲಿನ ಹುಡುಗಿಯೊಬ್ಬಳು ತನಗೆ ಜೀವನದಲ್ಲಿ ಒಂದುದಿನದ ಮಟ್ಟಿಗಾದರೂ ಶಿಬಿರದ   ಹೊರಗಿನ ಜಗತ್ತನ್ನು ನೋಡಲು  ಅವಕಾಶ ದೊರೆತರೆ ಸಾಕೆಂಬ ಹಂಬಲಿಸುವುದನ್ನು ನೋಡಿ  ಕರುಣೆಯುಕ್ಕಿತು.
ದೇಶದ ಕಾನೂನಿನ  ಪ್ರಕಾರ ಇಸ್ರೇಲಿನ ಪ್ರಜೆಗಳು ಜೋರ್ಡಾನಿನಿಂದ ಮೆಡಿಟರೇನಿಯನ್‌ ಸಮುದ್ರದ ವರೆಗೆ ಮುಕ್ತವಾಗಿ ಸಂಚರಿಸಬಹುದು. ಆದರೆ ನಿರಾಶ್ರಿತರಿಗೆ ಆ ಸೌಲಭ್ಯವಿಲ್ಲ.. ಈ ಕಾನೂನು ಹನ್ನಾಳಿಗೆ ನ್ಯಾಯಸಮ್ಮತ ಅನಿಸಲಿಲ್ಲ. ಅದನ್ನುತನ್ನದೆ ಆದಸ ರೀತಿಯಲ್ಲಿ ಪ್ರತಿಭಟಿಸಲು ತಯಾರಾದಳು
 ಇಸ್ರೇಲು ಫಾಲೆಸ್ಟಿನಿಯರ ಮಾರ್ತಊಭೂಮಿಯೂ ಹೌದು. ಅವರ ಇತಿಹಾಸ, ಧರ್ಮ,ಪೂರ್ವಜರ  ಹುಟ್ಟು ನೆಲ, ಪರಂಪರೆಯ ಬೇರುಗಳಿರುವ ಪಟ್ಟಣ , ನಗರಗಳಿರುವುದ ಇಲ್ಲಿಯೆ . ಆದರೆ ಅಲ್ಲಿ ಹೋಗಲು  ಅವರಿಗೆ ಅವಕಾಶವಿಲ್ಲ. ಎನ್ನುವುದು ಅಮಾನವೀಯ ಎನಿಸಿತು. ಅದಕ್ಕೆ ಅವರನ್ನು ಮಾರು ವೇಷದಲ್ಲಿ ಕರೆದೊಯ್ಯಲು ಯೋಜನೆ ಹಾಕಿದಳು. ಇಸ್ರೇಲಿನ ನಾಗರೀಕರು ಕಡಲ ತೀದಲ್ಲಿ ವಿಹರಿಸಲು ಮುಕ್ತವಕಾಶವಿದೆ. ಅದನ್ನೆ ಬಳಸಿ ನಿರಾಶ್ರೀತರಿಗೂ ಅವಕಾಸ ಒದಗಿಸಿದಳು..ನಿರಾಶ್ರಿತ  ಯುವತಿಯನ್ನು ತನ್ನ  ಕಾರಿನ  ಹಿಂದಿನ ಸೀಟಿನಲ್ಲಿ  ಕೂರಿಸದೆ  ಪಕ್ಕದಲ್ಲೆ ಕೂರಿಸಿದಳು  ಮೈ ಮುಖ ಮುಚ್ಚಿ , ಇಲ್ಲವೆ ವೇಷ ಮರೆಸಿ ಕುಳಿತುಕೊಳ್ಳಲಿಲ್ಲ. ಬಟ್ಟೆ ಬಿಚ್ಚಿ ತುಂಡು ತೊಟ್ಟು ಖುಷಿಯಾಗಿ ಕೈ ಬೀಸುತ್ತಾ ಕುಳಿತರು ವಾಹನವನ್ನು ಮಧ್ಯವಯಸ್ಕಳಾದ ಹನ್ನಾ ತನ್ನ ಸಂಪ್ರದಾಯಿಕ ಉಡುಗೆ ಬಿಟ್ಟು ಪ್ರವಾಸಿಯಂತೆ ಹೊರಟಳು. ಮಧ್ಯ ಬರುವ ಅಲ್ಲಲ್ಲಿ ಅನೇಕ ಮಿಲಿಟರಿ ಚೆಕ್‌ಪೋಸ್ಟುಗಳು.ಅವರು ಕಾನೂನು ಮುರಿಯುವ ನಿರಾಶ್ರಿತರನ್ನು ತಡೆಯಲು ಸನ್ನದ್ಧರು. ಆದರೆ ಕಾರಿನಲ್ಲಿರುವ ಹುಡುಗಿಯರು  ಆರಾಮಾಗಿರಲು  ಸಾಗರ ತೀರಕ್ಕೆಹೋಗುವ ಪ್ರವಾಸಿಗಳು.  ಅವರು ಹಾದು ಹೋಗುವಾಗ.ಸಾಂಪ್ರದಾಯಕ  ಉಡುಪು ಇದ್ದರೆ ಇವರು ಯೇಹೂದಿ, ಅವರು ಪಾಲೆಸ್ಟೇನ  ಎಂದು ಗುರುತಿಸಬಹುದು. ಆದರೆ  ಬರಿ ಮೈನಲ್ಲಿರುವಾಗ  ಎಲ್ಲ ಹೆಂಗಸರೂ ಒಂದೆ ತಾನೆ.ಅದರಿಂದ ಯಾವುದೆ ತೊಂದರೆ ಇಲ್ಲದೆ  ಸಮುದ್ರ ತೀರ ಸೇರಿದರು. ಸಂಜೆಯ ತನಕ ಜಲಕ್ರೀಡೆಯಾಡಿದರು ವಹಿಸಿದರು  ಸಂಜೆ ಜಾಫ ತೀರದಲ್ಲಿರುವ ನಗರದ ಐದನೆ ಮಹಡಿಯ ಮೇಲೆ ಅವರಿಗೆ ಔತಣ ಕೂಟ ನೀಡಲಾಗಿತ್ತು. ಅಲ್ಲಿ . ತಿಂದು ,ಕುಡಿದುಪಾಲೆಸ್ಟೈನ್ ಸಂಗೀತಕ್ಕೆ ಕುಣಿದು ಕುಪ್ಪಳಿಸಿದರು. ಕೊನೆಗೆ ಸಿಗರೇಟಿನ ಹೊಗೆ ಬಿಟ್ಟು ಸಂಭ್ರಮಿಸಿದರು. ಧೂಮಪಾನ ಅರಬ ಹೆಂಗಸರು ಕನಸಲ್ಲೂ ಅದರಲ್ಲೂ   ನಿರಾಶ್ರಿತರು  ಜೀವಮಾನದಲ್ಲಿ ಮಾಡಲಾಗದ ಮಹಾಕಾರ್ಯ.  ನಂತರ ಹೇಗೆ ಹೋದರೋ ಹಾಗೆ ಹಿಂತಿರುಗಿದರು. ಶಿಬಿರದಲ್ಲಿರುವ ಕುಟುಂಬದವರು ಇದು ವಿರೋಧಿಗಳ ಜತೆ ಕೈ ಜೋಡಿಸುವ ಕೆಲಸ  ಎಂದು ಗೊಣಗಿದರೂ ಹುಡುಗಿ  ತಲೆ ಕೆಡಿಸಿಕೊಳ್ಳಲಿಲ್ಲ. ಈ ಸಾಹಸ ಕಾರ್ಯ ಬಾಯಿಂದ ಬಾಯಿಗೆ ಹರಡಿ ಒಂದು ಚಿಕ್ಕ ಸಂಘಟನೆಯೆ ನಿರ್ಮಾಣ ಅನೇಕ ಹುಡುಗೆಯರಿಗೆ ಥಂಡಿ ಪ್ರವಾಸ ಸಾಧ್ಯವಾಯಿತು. ಪೋಲಿಸರು ಅನುಮಾನದ ಮೇಲೆ ಕೆಲವರನ್ನು ಪ್ರಶ್ನಿಸಿದರು. . ಆದರೆ ಈ ವರೆಗೆ ಅತಿಕ್ರಮಿಸಿದವರನ್ನು  ಕಡಲ ತೀರದಲ್ಲೆ ಬಂಧಿಸುವುದು ಆವರಿಗೆ ಸಾಧ್ಯವಾಗಿಲ್ಲ. ನಮ್ಮಲ್ಲಿನ ದಂಡಿ ಯಾತ್ರೆ ನಡೆಸಿದರು . ದೇಶದ ಸ್ವಾತಂತ್ರ್ಯಕ್ಕಾಗಿಆದರೆ ಇಸ್ರೇಲಿನಲ್ಲಿ  ಥಂಡಿ ಯಾತ್ರೆ  ನಡೆದಿದೆ ವ್ಯಕ್ತಿ ಅದೂ ಸ್ವಾತಂತ್ರ್ಯಕ್ಕಾಗಿ . ಆದರೆ ಮುಕ್ತವಾಗಿ ಅಲ್ಲ ಗುಪ್ತವಾಗಿ.

Friday, December 21, 2012

ಅಮೇರಿಕಾ ಅನುಭವ-೫








ಧರ್ಮ- ಮನಸ್ಸಿಗೆ ನೆಮ್ಮದಿ, ದೇಹಕ್ಕೆ ಆರೋಗ್ಯ.
ಎಲ್ಲ ಧರ್ಮದ ಪೂಜಾ ಮಂದಿರಗಳು ಭಕ್ತರಿಗೆ ಮನಶ್ಯಾಂತಿ ನೀಡುವ ತಾಣಗಳಾಗಿವೆ. ಅವು ಜೀವನದಲ್ಲಿ ನಂಬಿಕೆಯ ಮಹತ್ವವನ್ನು  ಸಾರುತ್ತವೆ.ಸಮುದಾಯದ ಧಾರ್ಮಿಕ ಅಗತ್ಯಗಳನ್ನು ಪೂರೈಸುತ್ತವೆ. ಅ  ಸಮುದಾಯದ ಸದಸ್ಯರ ನಾಮಕರಣ, ಮದುವೆ , ಧಾರ್ಮಿಕ ಆಚರಣೆ ಮೊದಲಾದ ಜೀವನದ ಅಗತ್ಯ ಕಾರ್ಯಕ್ರಮಗಳಿಗೆ ಅನುವು ಮಾಡಲು ಸೌಕರ್ಯವನ್ನೂ ಒದಗಿಸತೊಡಗಿವೆ.ಪ್ರವಚನ ಮಂದಿರ, ಧ್ಯಾನ ಮಂದಿರಗಳು ಸನ್ಮಾರ್ಗದತ್ತ ಸಾಗಲು , ಜೀವನದ  ಜಂಜಡದಿಂದ ದೂರವಾಗಲು ಮನಸ್ಸಿಗೆ ಶಾಂತಿ ನೀಡಲುಸಹಾಯಕವಾಗಿವೆ.
ಎಲ್ಲ ಧರ್ಮಗಳಲ್ಲೂ  ಆಹಾರದ  ವಿಷಯದಲ್ಲಿಅವರವೆ ಆದ ಇತಿಮಿತಿಗಳನ್ನು ವಿಧಿಸಿವೆ. ಧರ್ಮ ಸಾಧನೆಗೆ ದೇಹದ ಆರೋಗ್ಯ ಮುಖ್ಯ ಎಂದು ಸಾರಿ ಹೇಳಿದರೂ  ಅಲ್ಲಿ ದೈಹಿಕ ವಿಷಯಗಳಿಗೆ , ಚಟುವಟಿಕೆಗಗೆ ಮಹತ್ವ ಬಹು ಕಡಿಮೆ.
ಆದರೆ ಅಮೇರಿಕಾದ  ಧಾರ್ಮಿಕ ಕೇಂದ್ರಗಳಲ್ಲಿ ಹೊಸ ಅಲೆ ಎದ್ದಿದೆ.ತಮ್ಮ ಸಮುದಾಯದ ಆರೋಗ್ಯದ ಬಗ್ಗೆಯೂ ಕಾಳಜಿ ಶುರುವಾಗಿದೆ.ಆರೋಗ್ಯವನ್ನು ಕಾಪಾಡು ಎಂದು ಪ್ರಾರ್ಥನೆ ಮಾಡುವುದಕ್ಕೆ ಮಾತ್ರ ಚರ್ಚು ಸೀಮಿತವಾಗದೆ ಆರೋಗ್ಯಕ್ಕೆ ಪೂರಕವಾದ ಚಟುವಟಿಕೆಗಳನ್ನೂ ಹಮ್ಮಿಕೊಂಡಿದೆ.
 ಅಮೇರಿಕಾದಲ್ಲಿ ಇತ್ತೀಚೆಗೆ ಆಹಾರದ ಬಗ್ಗೆ ಅರಿವು ಮೂಡಿಸುವ ಚಳುವಳಿಯನ್ನು ಕೆಲ ಧಾರ್ಮಿಕ ಕೇಂದ್ರಗಳು ಕೈಗೆತ್ತಿಕೊಂಡಿವೆ. ಅದರಲ್ಲು ಮಿಸ್ಸಿಸಿಪಿರಾಜ್ಯದಲ್ಲಿ ಸೂಕ್ತ ಆಹಾರದ ಬಗ್ಗೆ ಬರಿ ಬೋಧನೆ ,ಮಾತ್ರವಲ್ಲ  ಅಚರಣೆಗೂ ಒತ್ತು ಕೊಡುತ್ತಲಿವೆ. ಅದಕ್ಕೆ ಕಾರಣವೂ ಇದೆ.ಅಮೇರಿಕಾ ಧಡಿಯರ ದೇಶ ಎಂದೆ ಹೆಸರಾಗಿದೆ.. ಜಗತ್ತಿನ ಬಹುಭಾಗದಲ್ಲಿ ಪೌಷ್ಟಿಕ ಆಹಾರದ ಕೊರತೆ  ದೊಡ್ಡ ಸಮಸ್ಯೆಯಾಗಿದ್ದರೆ,  ಇಲ್ಲಿ ಅತಿಯಾದ ಪೌಷ್ಟಿಕಾಹಾರವೆ ಸಮಸ್ಯೆಯ ಮೂಲವಾಗಿದೆ.ಜನರ ಅನಿಯಮಿತವಾದ ಆಹಾರಸೇವನೆಯಿಂದ ಅದೂ ಅತಿಯಾದ  ಮಾಂಸಾಹಾರದಿಂದ ದಿನದಿಂದ ದಿನಕ್ಕೆ ರೋಗಕ್ಕೆ ತುತ್ತಾಗುತ್ತಿದ್ದಾರೆ.
 ದೇಹದ ಗಾತ್ರ ಹಿಗ್ಗುತ್ತಿದೆ.ಎಲ್ಲಕಡೆ ಹಸಿವಿನಿಂದ ಜನ ಬಳಲುತ್ತಿದ್ದರೆ ಇಲ್ಲಿನ ಜನರು ಅತಿ  ಆಹಾರದಿಂದ ನರಳುತಿದ್ದಾರೆ
. ಮಿಸ್ಸಿಸಿಪಿರಾಜ್ಯವು ಸ್ಥೂಲ ಕಾಯಸ ಮಕ್ಕಳ ಸಂಖ್ಯೆಯಲ್ಲಿ ರಾಷ್ಟ್ರಕ್ಕೆ ಮೊದನೆಯದು. ಅಲ್ಲಿನ ಶಾಲೆಗಳಲ್ಲಿ  ಪೀಠೋಪಕರಣಗಳುವಿಶೇಷವಾಗಿವೆ.ಇನ್ನು ವಯಸ್ಕರ ವಿಷಯಕ್ಕೆಬಂದರೆ ಅದು ಭಾರಿಗಾತ್ರದವರಲ್ಲಿ ಅದಕ್ಕೆ ಎರಡನೆ ಸ್ಥಾನದಲ್ಲಿದೆ. ಅಲ್ಲಿನ ಮಾಲ್‌ಗಳಲ್ಲಿ ಉಡುಪುಗಳ ವಿಭಾಗದಲ್ಲಿ ಎಲ್ಲಿ ನೋಡಿದರೂ ಎಕ್ಸಟ್ರಾಲಾರ್ಜ ಅಳತೆಯವೆ ರಾರಾಜಿಸುತ್ತವೆ ಹೋಟೇಲುಗಳಲ್ಲಿ.ಚಿಕ್ಕ ಪ್ರಮಾಣದ  ತಂಡಿ ತಿನಿಸುಗಳಿಗೆ ಬೇಡಿಕೆಯೆ ಇಲ್ಲ
ಅಲ್ಲಿ ಕರಿದ ಪದಾರ್ಥಗಳಿಗೆ ಬಹಳ ಆದ್ಯತೆ. ಅದರಲ್ಲೂ ಮಾಂಸಾಹಾರಿಗಳಿಗಂತೂ ಮಜವೆ ಮಜ. ಅಷ್ಟು ವೈವಿದ್ಯಮಯ . ಧಾರಾಳವಾಗಿ ಕರಿದ ಹುರಿ ಭಕ್ಷ್ಯಗಳು  ಅದರಜೊತೆ ಸಮೃದ್ಧವಾಗಿ ಚೀಸು ಮತ್ತು ಬೆಣ್ಣೆ.ರಸ್ತೆಯಲ್ಲಿ ಎಲ್ಲಿ  ನೋಡಿದರೂ ಬಲ ಭೀಮರೆ.ಬದುಕು ಇರುವುದೆ ತಿನ್ನುವುದಕ್ಕಾಗಿ ಎಂಬಂತಿದೆ ಅಲ್ಲಿನ ಜೀವನ ಶೈಲಿ.  ವಯಸ್ಕರಾದ ಮೇಲೂ ಜೀವನ ಶೈಲಿಯ ಬದಲಾವಣೆ ಕಾಣದೆ  ಜತೆಗೆ  ಮದ್ಯಪಾನವೂ ಸೇರುವುದರಿಂದ ಪರಿಸ್ಥಿತಿ ಸುಧಾರಿಸಲು ಅವಕಾಶವೆ ಇಲ್ಲ
.ದೇಶದ 2-5 ವರ್ಷದ.ಮಕ್ಕಳಲ್ಲಿ  14% ರು ದಪ್ಪಗಿದ್ದರೆ, 6-11 ವರ್ಷದವರಲ್ಲಿ 19 % ಸ್ಥೂಲಕಾಯರು. 12-19 ವರ್ಷದವರಲ್ಲಿ  ಅವರ ಸಂಖ್ಯೆ 17%  ಆಗಿದೆ.  ಮಕ್ಕಳು ಬೆಳೆದಂತೆತೂಕವೂ , ಗಾತ್ರವೂ ಬೆಳೆಯುವುದು. ನಲವತ್ತು ದಾಟಿದ ಮೇಲೆ ಬಹುತೇಕರು ಭಾರಿ ತೂಕದ ಅಸಾಮಿಗಳೆ..
ಇದಕ್ಕೆ ಕಾರಣ ದೈಹಿಕ ಚಟುವಟಕೆಯ ಕೊರತೆ. ಟಿವಿ ಮತ್ತು ವಿಡಿಯೋ ಆಟದ ಗೀಳು. ಗಂಟೆಗಟ್ಟಲೆ ಟಿವಿ ನೋಡುತ್ತಾ, ವಿಡಿಯೋ ಗೇಮ್‌ಆಡುತ್ತಾ ಕುರುಕುಲುತಿಂಡಿ ತಿನ್ನುವುದರಿಂದ ಸ್ವಾಭಾವಿಕವಾಗಿ ತೂಕ ಹೆಚ್ಚುವುದು
 ದೈಹಿಕ ಚಟುವಟಿಕೆಯಲ್ಲಿ ಮಿಸ್ಸಿಸಿಪಿಯದು ಕೊನೆಯಸ್ಥಾನ.ಅದರ ಪರಿಣಾಮ ಹೃದಯರೋಗದಲ್ಲಿ ಪ್ರಥಮಸ್ಥಾನ ಪಡೆದರೆ,  ಮಧುಮೇಹದಲ್ಲಿ ದ್ವಿತಿಯ ಸ್ಥಾನ. ಇನ್ನು  ಹಣ್ಣು ತರಕಾರಿ ಸೇವನೆಯಲ್ಲಿ ಕಟ್ಟಕಡೆಯವರು. ಮಧ್ಯವಯಸ್ಕರಲ್ಲಿ ಅನಾರೋಗ್ಯ ಹೆಚ್ಚಿದೆ. ಇಳಿವಯಸ್ಸಿನಲ್ಲಿ ವೈದ್ಯಕೀಯ ವೆಚ್ಚ  ಅಧಿಕವಾಗಿದೆ. , ಅವರ ಆರೈಕೆ ದೊಡ್ಡ ಹೊರೆಯಾಗಿದೆ.ಮೆಡಿಕೇರ್‌ವೆಚ್ಚ ಮುಗಿಲು ಮುಟ್ಟಿದೆ.
ಇದರಿಂದ ಅಲ್ಲಿನ ಜನನಾಯಕರು ಗಾಬರಿಯಾದರು. ಅದರಲ್ಲೂ ಬ್ಯಾಪಿಟಿಸ್ಟ ಕನವೆನ್‌ಷನ್ಸೆಂಟರ್‌ನವರು ಪರಿಹಾರ ಮಾರ್ಗ ಹುಡುಕತೊಡಗಿದರು.ಸರಿ ಸುಮಾರು ೧೦೦೦ ಚರ್ಚಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದವು.ಅದರಲ್ಲಿ ಮುನ್ನೆಡೆ ಸಾಧಿಸಿದವರು ಓಕ್‌ಹಿಲ್‌ನ ಹೆರ್ನಾಂಡೊದ ಚರ್ಚಿನ ಪಾದ್ರಿ ಶ್ರೀ. ಮ್ಯಾನರ್‌. ಅವರು ಹುಟ್ಟಿ ಬೆಳೆದಿದ್ದು ಮಿಸ್ಸಿಸಿಪಿಯಲ್ಲೆ. ನಂತರ ಹೆಚ್ಚಿನ ಶಿಕ್ಷಣಕ್ಕಾಗಿ ಬಾಸ್ಟನ್‌ಗೆ ಹೋದರು. ಅಲ್ಲಿ ಹಾರ್ವರ್ಡ ಕಾಲೇಜಿನಲ್ಲಿ ಕಲಿಯುವಾಗ ಗೊತ್ತಾಯಿತು ತಮ್ಮ ಪ್ರದೇಶದ ಜನರು ಭೀಮಕಾಯರು ಎಂದು.ಮೊದಲು ಅದು ಹೆಮ್ಮೆಯ ವಿಷಯವಾದರೂ ವಯಸ್ಸಾದಂತೆ ಅದರ ದುಷ್ಪರಿಣಾಮ ಎದ್ದು ಕಾಣತೊಡಗಿತು.ಚರ್ಚಿನಲ್ಲಿ ಪಾದ್ರಿಯಾದ ನಂತರ ಜನರ ನಿಕಟ ಸಂಪರ್ಕದಿಂದ ಸಮಸ್ಯೆಯ ತೀವ್ರತೆ ತಿಳಿಯಿತು..
ಮನಸ್ಸಿಗೆ ನೆಮ್ಮದಿ ಬರಲು ದೇಹದ ಆರೋಗ್ಯವೂ ಅಗತ್ಯ ಎನಿಸಿತು.ಅದರ ಫಲವಾಗಿ ಧಾರ್ಮಿಕ ಬೋಧನೆಯ ಜತೆ ಆಹಾರಾಭ್ಯಾಸದ ಬದಲಾವಣೆಗೆ ಒತ್ತು ಕೊಡತೊಡಗಿದರು.ಜನ ಮೊದ ಮೊದಲು ಅವರ ಪ್ರಚಾರಕ್ಕೆ ಕಿವಿಗೊಡಲಿಲ್ಲ. ನಮ್ಮ ಊಟ ತಿಂಡಿಯ ಗೊಡವೆ ಇವರಿಗೆ ಏಕೆ ಎಂದವರೂ ಉಂಟು. ಅಲ್ಲದೆ ಹೆಚ್ಚಾಗಿ ಮಹಿಳೆಯರು ನಮ್ಮ ಆಹಾರ ಪದ್ದತಿಯನ್ನು ಅನಾಚೂನವಾಗಿ ಅನುಸರಿಸಿ ಕೊಂಡು ಬಂದಿದ್ದೇವೆ. ನಮ್ಮ ತಾತ ಮುತ್ತಾತಂದಿರೂ ಇದೆ ರೀತಿ ಇದ್ದರು. ಹಿಂದೆ ಇಲ್ಲದ ಸಮಸ್ಯಗೆ ಇಂದು ಅದು ಕಾರಣ ವಾಗಲಾರದು ಎಂದು ವಾದ ಮಂಡಿಸಿದರು. ಅವರ ಮಾತಿನಲ್ಲಿ ಸತ್ಯವಿದೆ. ಆಹಾರಪದ್ದತಿ ಇಂದು ನಿನ್ನೆಯದಲ್ಲ. ಪರಂಪರಾಗತವಾದದ್ದು. ಅವರಿಗೆ ಆಹಾರ ಪದ್ದತಿ ಹಳೆಯದೆ ಆದರೂ ಜೀವನ ಶೈಲಿ ಬದಲಾಗಿರುವುದನ್ನು ಮನದಟ್ಟು ಮಾಡಲಾಯಿತು.ಹಿಂದೆ ಮೈಮುರಿಯೆ ದುಡಿಮೆ ಮಾಡುತ್ತಿದ್ದರು. ಕಾರುಬಂದ ಮೇಲೆ ಕಾಲು ಇರವುದು ಷೂ ಹಾಕಿಕೊಳ್ಳಲು ಮಾತ್ರಎನ್ನುವ ಹಂತ ಜನ ತಲುಪಿರುವರು.. . ಜತೆಗೆ ಆಗ ಮಾಂಸದೂಟ ಮಾಡಲು ಕುರಿ ತಂದು ಕತ್ತರಿಸಿ ಶುಚಿ ಮಾಡಿ ಅಡುಗೆ ಮಾಡಬೇಕಿತ್ತು. ಅದಕ್ಕೆ ಬಹಳ ಶ್ರಮ ಮತ್ತು ಸಮಯ ಬೇಕಿತ್ತು. ಅದರಿಂದ ಹದಿನೈದು ದಿನಕ್ಕೋ ತಿಂಗಳಿಗೋ ಒಮ್ಮೆ ಮಾಂಸದೂಟ ಇರುತಿತ್ತು. ಅಧೂ ಒಂದೊ ಎರಡೋ ಬಗೆಯ ಭಕ್ಷ್ಯಗಳು. ಕೆಡುವ ಮುನ್ನವೆ ತಿನ್ನ ಬೇಕಿತ್ತು. ಆದರೆ ಈಗ ಹಾಗಲ್ಲ.ವೈವಿದ್ಯಮಯ ಮಾಂಸದ ಭಕ್ಷ್ಯಗಳು ಸಿದ್ಧವಾಗಿ ಸಿಗುತ್ತವೆ. ಅಂಗಡಿಗೆ ಹೋಗುವುದೂ ಬೇಕಿಲ್ಲ ಒಂದು ಫೋನು ಮಾಡಿದರೂ ಸಾಕು ಊಟದ ಮೇಜಿನ ಮೇಲೆ ಅರ್ಧ ಗಂಟೆಯಲ್ಲಿ ಹಾಜರು .ಅದೂ ಬಿಸಬಿಸಿ ಮತ್ತು ಬಾಯಿಗೆ ಬೇಕಾದ  ಬಗೆ ಬಗೆಯ ರುಚಿ 
ಇದರಿಂದ ತಿನ್ನು ಬಾಕತನೆ ಹೆಚ್ಚಿದೆ. ಮನೆಯಲ್ಲೂ ಎಲ್ಲ ಕೆಲಸಕ್ಕೂ ಯಂತ್ರಗಳು.ದಣಿವಾಗುವ ಮಾತೆ ಇಲ್ಲ. ದಣಿವಾಗುವುದು ಊಟ ಮಾಡುವಾಗ ಮಾತ್ರ.. ಈ ವಿಷಯವನ್ನು ತನ್ನ ಸಮುದಾಯಕ್ಕೆ ಪದೇಪದೇ ಪ್ರಾರ್ಥನಾ ಸಮಯದಲ್ಲಿ  ಈ ವಿಷಯ  ತಿಳಿ ಹೇಳಿದರು..
ಹೆಚ್ಚಾಗಿ ಹಣ್ಣು ತರಕಾರಿ ಬಳಕೆಗೆ ಒತ್ತು ಕೊಡಲಾಯಿತು. ಅದು ಮಾತ್ರವಲ್ಲ ಚರ್ಚು ಪ್ರಾರ್ಥನಾ ನಂತರ ಏರ್ಪಡಿಸುವ ಭೋಜನ ಕೂಟದಲ್ಲಿ ಕರಿದ ಹುರಿದ ಮಾಂಸ  ಕೈಬಿಡಲಾಯಿತು. ಬರಿ ಹಣ್ಣು ತರಕಾರಿಗಳನ್ನು ಮಾತ್ರ  ನೀಡಲು ಮೊದಲು ಮಾಡಿದರು.. ಅವರಲ್ಲೆ ಕೆಲವರು ಸಸ್ಯಾಹಾರವೆಂದರೆ ಬರಿ ಸೊಪ್ಪು ಸದೆ ತಿನ್ನುವದು , ಸಪ್ಪನೆಯ ಆಹಾರ ಎನ್ನುವ ಭಾವನೆ ಬರದಿರುವಂತೆ   ಹಣ್ಣುಗಳಿಂದ ವೈವಿದ್ಯಮಯ  ತಿನಿಸುಗಳನ್ನು ರುಚಿಕಟ್ಟಾಗಿ ತಯಾರಿಸಲಾಯಿತು. ಪರಿಣಾವಾಗಿ ಆಹಾರಾಭ್ಯಾಸದಲ್ಲಿ ಸುಧಾರಣೆ ಕಂಡಿತು. ಜನರ ಆರೋಗ್ಯವೂ ಸುಧಾರಿಸ ತೊಡಗಿತು.
ಬರಿ ಆಹಾರಾಭ್ಯಾಸದ ಕಡೆ ಮಾತ್ರವೆ  ಗಮನ ಕೊಡದೆ ದೈಹಿಕ ಆರೋಗ್ಯ ಸುಧಾರಿಸಲು ಅಗತ್ಯವಾದ ಚಟುವಟಕೆಗಳ ಕಡೆಯೂ ಗಮನ ಹರಿಸಲಾಯಿತು. ಚರ್ಚಿನ ಸುತ್ತಲೂ ನಡಿಗೆಯನ್ನು ಉತ್ತೇಜಿಸಲು ಸಮತಟ್ಟಾದ ಕಾಲು ದಾರಿ ನಿರ್ಮಾಣವಾಯಿತು. ಅದನ್ನು ಐದು ಸಲ ಸುತ್ತುಹಾಕಿದರೆ ಒಂದು ಮೈಲಿಯಾಗುವುದು..ಬಹುಶಃ ಈ ಕ್ರಮವು ನಮ್ಮ ಭಾರತಲ್ಲಿನ  ದೇಗುಲಗಳ ಪ್ರದಕ್ಷಣೆಗೆ ಸಂವಾದಿಯಾಗಿದೆ  ಎನ್ನಬಹುದು. ಪ್ರಾರ್ಥನೆಗೆ ಬಂದವರನ್ನು ಸಾಧ್ಯವಾದಷ್ಟು  ಸಲ ಸುತ್ತುಹಾಕಲು ಉತ್ತೇಜಿಸಲಾಯಿತು. ಕೆಲವೆ ತಿಂಗಳಲ್ಲಿ ಹೆಚ್ಚಿನ ಜನರಲ್ಲಿ ಲವಲವಕೆ ಮೂಡಿತು. ಇದೆ ಮಾದರಿಯನ್ನು ಸುತ್ತಮುತ್ತಲಿನವರೂ ಅನುಸರಿಸತೊಡಗಿದರು.
ಮಕ್ಕಳಿಗೂ ಅರಿವು ಮೂಡಿಸಲು ಶಾಲೆಯಲ್ಲಿ ಮಧ್ಯಾಹ್ನದ ಉಪಹಾರ ಯೋಜನೆಯ ಸ್ವರೂಪ ಬದಲಾಸಿದರು. ಸಿದ್ಧ ಪಪೊಟ್ಟಣಗಳಲ್‌ಇ ೧೯ ವೈಟಮಿನ್ ಮತ್ತು ಲವಣಾಂಶಗಳಿಂದ ಕೂಡಿದ ರುಚಿಕಟ್ಟಾದ ಸಿಧ್ಧ ಮಾಂಸದ ಬಳಕೆ ಬಂದಾಗಿನಿಂದ ಮುಚ್ಚಿ ಹೋದ ಶಾಲಾ ಪಾಕ ಶವಿಭಾಗ ಬಾಗಿಲು ತೆರದು ಅಲ್ಲಿಯೆ ಆಹಾರ ತಯಾರಿಸಲು ತೊಡಗಿದರು. ಇದರಿಂದ ತಾಜಾ ಮತ್ತು ಸರಳ ಸಹಝ ಆಹಾರ ದೊರೆಯತೊಡಗಿತು. ಅಲ್ಲದೆ ಆಹಾರಕ್ಕಾಗಿ ಮಾಡುತಿದ್ದ ಖರ್ಚು ಕಡಿಮೆಯಾಯಾಯಿತು. ಈ ಆಹಾರದಲ್ಲಿ ಮಿತವಾದ ಪೌಟಿಕಾಂಶ. ಲವಣ ಮತ್ತು ವ=ಜೀವಸತ್ವ ದ ಬಳಕೆಯಿಂದ  ದೇಹದ ಕೊಬ್ಬಿನ ಬೆಳವಣಿಗೆಯ ಪ್ರಮಾನ ತಗ್ಗ ತೊಡಗಿದೆ.ತಂದೆ ತಾಯಂದಿರ ಮಕ್ಕಳ ಆರೋಗ್ಯ ಚಿಂತೆಯೂ ಕಡಿಮೆ ಯಾಗಿದೆ.
ಮಾನಸಿಕ ನೆಮ್ಮದಿಯ ಜೊತೆಗೆ ದೈಹಿಕ ಸುಸ್ಥಿತಯನ್ನೂ ಕಾಪಾಡಿಕೊಳ್ಳಲು ಸಹಾಯಕವಾದ ಈ ನಡೆ ಎಲ್ಲರ ಮೆಚ್ಚಿಗೆಗೆ ಪಾತ್ರವಾಗಿದೆ.



Tuesday, December 4, 2012

ಅಮೇರಿಕಾ ಅನುಭ -೪







ಕ್ಯಾಷ್‌ಕ್ಯಾಬ್‌
ಅಮಿತಾಬ್‌ಬಚನ್‌ನಿಂದಾಗಿ ಮನೆ ಮಾತಾದ  ಟಿವಿ ಸರಣಿ “ಕೌನ್‌ಬನೇಗಾ ಕರೋಡ್‌ಪತಿಯ”  ಮಿನಿ ಮಾದರಿ ನ್ಯೂಯಾರ್ಕನ ರಸ್ತೆಯಲ್ಲಿ ಕಂಡೆ. ನೀವೇನಾದರೂ ನ್ಯೂಯಾರ್ಕನಲ್ಲಿ  ಕ್ಯಾಬ್‌ಹಿಡಿದು ಓಡಾಡಲು ಹೋದರೆ ಈ ಅವಕಾಶ ಸಿಕ್ಕರೂ ಸಿಕ್ಕೀತು ಈ ಕಂಪನಿಯ . ಹದಿನೈದು ಸಾವಿರ ಕ್ಯಾಬ್‌ಗಳಿವೆ. ಅದರಲ್ಲಿ ಯಾವುದೋ ಒಂದರಲ್ಲಿ ಮಾತ್ರ ಈ ಸೌಲಭ್ಯವಿದೆ. ಹೊರ ನೋಟಕ್ಕೆ ಯಾವದು ಎಂದು ಗೊತ್ತಾಗುವುದೆ ಇಲ್ಲ.  ಎಲ್ಲಿಗೋ ಹೋಗಲು  ಟ್ಯಾಕ್ಸಿಗೆ  ಕೈ ಮಾಡಿ ಕರೆಯುವವಿರಿ.
 ಕ್ಯಾಬ್‌ಒಳಗೆ ಹತ್ತಿದೊಡನೆ ಚಾಲಕ ಕೇಳುವನು . "ನೀವು ಹಾದಿ ಸವೆಸುತ್ತಾ ಹಣ ಗೆಲ್ಲಲು ಬಯಸುವಿರಾ ?
 ಸ್ಪರ್ಧೆಯಲ್ಲಿ  ಭಾಗವಹಿಸಲು ಬಯಸಿದರೆ ಸರಿ  . ಇಲ್ಲವಾದರೆ  ಮುಲಾಜೆ ಇಲ್ಲ. ಇಳಿದು ಇನ್ನೊಂದು ಟ್ಯಾಕ್ಸಿ ಹುಡುಕಬೇಕು.
ಹತ್ತಿದ ಕೂಡಲೆ   ಹೇಳುವನು ರಸ ಪ್ರಶ್ನೆಯ ನಿಯಾಮಾವಳಿ .ನಿಮ್ಮ ಗಮ್ಯಸ್ಥಾನ ಸೇರುವವರೆಗೆ ಪ್ರಶ್ನೆ ಕೇಳುತ್ತಾ ಹೋಗುವನು .  ಒಂದೊಂದು ಸರಿ ಉತ್ತರಕ್ಕೆ ಐವತ್ತು ಡಾಲರ್‌ಬಹುಮಾನ. ನಾಲಕ್ಕು ಪ್ರಶ್ನೆಗಳಾದ ಮೇಲೆ ೧೦೦ ಡಾಲರ್‌. ನಂತರ ೨೫೦ ಡಾಲರ್‌,  ಪ್ರತಿ ಪ್ರ ಶ್ನೆಗೆ ಮೂರು ನಿಮಿಷ ಕಾಲಾವಧಿ. ಅಷ್ಟರೊಳಗೆ ಹೇಳದಿದ್ದರೆ ನಿಮಗೆ ಒಂದು ಕ್ರಾಸ ಗುರುತು. ಆ ರೀತಿಯ ಮೂರು ಗುರುತು ಬಂದರೆ ಆಟ ಮುಗಿಯಿತು. ನೀವು ಸೋತಂತೆ. ತಕ್ಷಣ ಕ್ಯಾಬ್‌ನಿಲ್ಲಿಸುವನು ಅಲ್ಲಿಯೆ ಇಳಿದು ಬಿಡಬೇಕು. ಆದರೆ ಟ್ಯಾಕ್ಸಿಗೆ ಯಾವುದೆ ಹಣ ಕೊಡ ಬೇಕಿಲ್ಲ. ಬೇರೊಂದು ಟ್ಯಾಕ್ಸಿ ಹಿಡಿದು ಹೋಗಬೇಕು.

   ಪ್ರಯಾಣ ಮಾಡುವಾಗ ಉತ್ತರ ಹೊಳೆಯದಿದ್ದರೆ  ನಿಮಗೆ ಬೇಕೆಂದರೆ ಸಹಾಯ ಪಡೆಯಲು ಎರಡು ಅವಕಾಶಗಳಿವೆ. ಯಾರಿಗೆ ಬೇಕಾದರೂ ದೂರವಾಣಿ ಕರೆ ಮಾಡಿ ಅವರಿಂದ ಸರಿಯುತ್ತರ ಪಡೆಯಬಹುದು.   ಇನ್ನೊಂದು  ಸಲ ಟ್ಯಾಕ್ಸಿ ನಿಲ್ಲಿಸಿ  ಅಲ್ಲಿ ಓಡಾಡುವ ಯಾರ ಜೊತೆ ಬೇಕಾದರೂ  ಮಾತನಾಡಿ ಉತ್ತರ ಪಡೆಯಬಹುದು.ವಿಶೇಷ ವೆಂದರೆ ನೀವು ಸರಿ ಉತ್ತರ ಕೊಡುತ್ತಾ ಹೋದಂತೆ ಪ್ರತಿ ಪ್ರಶ್ನೆಯ ಹಣದ ಮೊತ್ತ ಹೆಚ್ಚುತ್ತಾ ಹೋಗುವುದು. ಅಕಸ್ಮಾತ್‌ಟ್ರಾಫಿಕ್‌ನಲ್ಲಿ ಕೆಂಪುದೀಪ ಬಂದು ಅಲ್ಲಿ ಟ್ಯಾಕ್ಸಿ  ನಿಂತರೆ ಉತ್ತರದ ಮೌಲ್ಯ ಇನ್ನೂ ಹೆಚ್ಚು.ಅದಕ್ಕೆ ಕೆಂಪು ದೀಪದ ಸವಾಲುಎನ್ನುವರು. ಆದರೆ ಅದಕ್ಕೂ ಒಂದು ಶರತ್ತು ಇದೆ . ಅಷ್ಟರೊಳಗೆ ೨೦೦ ಡಾಲರ್‌ನಿಮ್ಮಖಾತೆಯಲ್ಲಿದ್ದರೆ ಮಾತ್ರ ನೀವು ಅದಕ್ಕೆ ಅರ್ಹರು.ಆ ಪ್ರಶ್ನೆ ಚಿಕ್ಕ ಚಿಕ್ಕ ಐದು ಉತ್ತರ ಬಯಸುವುದು. ಸರಿ ಉತ್ತರ ಕೊಟ್ಟರೆ ೨೦೦ ಡಾಲರ್‌, ತಪ್ಪಾದರೆ ಅದರೆ ಏನೂ ತೊಂದರೆ  ಇಲ್ಲ. ಕ್ರಾಸ್‌ಮಾರ್ಕ ಬರುವುದಿಲ್ಲ.

 ನಾವು ತಲುಪಬೇಕಾದ ಸ್ಥಳವು ಪ್ರಶ್ನಾವಳಿ ಮುಗಿರಯುವುದಕ್ಕಿಂತ ಮುಂಚೆಯೆ ಬಂದರೆ  ಮೂರಕ್ಕಿಂತ ಕಡಿಮೆ ಸಲ ಉತ್ತರ ಹೇಳಲಾಗದಿದ್ದರೂ ಪ್ರಯಾಣಿಕರು ಗೆದ್ದಂತೆ. ತಾವು ಇಳಿಯುವ ಜಾಗದಲ್ಲಿ ಹಣ ಪಡೆಯಬಹುದು. ಆಗಲೂ ಒಂದು ವಿಶೇಷ ಅವಕಾಶ.ನಿಮ್ಮ   ಬಹುಮಾನದ ಹಣ ದ್ವಿಗುಣ ಗೊಳಿಸಿಕೊಳ್ಳಬಹುದು. ಅದೂ ಒಂದು ಶರತ್ತಿನ ಮೇಲೆ. ಸರಿ ಉತ್ತರ ನೀಡಿದರೆ ಎರಡು ಪಟ್ಟು ಹಣ.  ಉತ್ತರ  ತಪ್ಪಾದರೆ ಗೆದ್ದದ್ದೂ  ಗೋವಿಂದ. ಬಿಟ್ಟಿ ಟ್ಯಾಕ್ಸಿ  ಪ್ರಯಾಣವಾಯಿತು ಎಂದುಕೊಳ್ಳಬೇಕು.. ಜತೆಗೆ  ಗೆಲ್ಲಲಿ ಸೋಲಲಿ ಟ್ಯಾಕ್ಸಿ ಬಾಡಿಗೆ ಕೊಡಬೇಕಿಲ್ಲ.
ಒಂದಂತೂ ಖಚಿತ. ಈ ಪ್ರಯಾಣ ಟಿವಿಯಲ್ಲಿ ಪ್ರಸಾರವಾಗುವುದು. ಎಲ್ಲ  ಕಡೆ  ನಿಮ್ಮನ್ನು ನೋಡುವ  ವಿಡಿಯೋ ಬೋನಸ್‌
ಇದನ್ನು ಡಿಸ್‌ಕವರಿ ಛಾನಲ್‌ನವರು ನಡೆಸುವರು ನಂತರ ಪ್ರಸಾರ ಮಾಡುವರು. ಈಗ ನ್ಯೂಯಾರ್ಕ ಮತ್ತು ಚಿಕಾಗೊದಲ್ಲಿ ನಡೆಯುತ್ತಿದೆ.ನ್ಯೂಯಾರ್ಕನಲ್ಲಿ ಬೆನ್‌ಬೆಯಲಿ ಎಂಬ ಸಿನಿಮಾ ನಟ ನಡೆಸಿಕೊಡುವನು ಅವನು ಹಾಲಿವುಡ್‌ನ ಹಾಸ್ಯ ನಟ. ಆದರೆ ಅವನು ಡ್ರೈವಿಂಗ್‌ಲೈಸೆನ್ಸು ಪಡೆದು ಅಧಿಕೃತವಾಗಿ ಟ್ಯಾಕ್ಸಿ ಚಾಲಕನಾಗಿದ್ದಾನೆ. ಈ ಮೊಬೈಲ್‌ಗೇಮ್‌ಷೋನಲ್ಲಿ ಭಾಗವಹಿಸುವವರನ್ನು  ಹಲವರನ್ನು ಅನಾಮತ್ತಾಗಿ ಆಯ್ಕೆ ಮಾಡುವರು. ಕೆಲವರಿಗೆ ಆಡಿಷನ್‌ಮಾಡಿರುವರು. ಆದರೆ ಟಿವಿ ಕಾರ್ಯ ಕ್ರಮಕ್ಕೆ ಅವರು ಸೂಕ್ತವೆಂದು ಕಂಡುಬಂದರೆ  ಅವರನ್ನು  ಫೂರ್ವ ಮಾಹಿತಿ ನೀಡದೆ ಆರಿಸಿ ಕೊಳ್ಳುವರು
ಪ್ರಶ್ನೆಗಳಿಗೆ ಯಾವುದೆ ನಿಗದಿತ ವಿಷಯ ಎಂದು ಇರದು ರಾಜಕೀಯ, ಇತಿಹಾಸ, ಭೂಗೋಳ , ಸಾಮಾನ್ಯ ಜ್ಞಾನ ಯಾವುದೆ ಆಗಿಬಹುದು. ಸಾಧಾರಣ ಅಮೇರಿಕಾಕ್ಕೆ ಸಂಬಂಧಿಸಿದ ವಿಷಯವೆ ಆಗಿರುವುದು.
 ಇಲ್ಲಿ ಇನ್ನೊಂದು ಅನುಮಾನ ಬರುವುದು  ಸಹಜ . ಅವನು ಪ್ರಶ್ನೆಗಳನ್ನು ಕೇಳಲು , ಅವನ ಮುಂದೆ  ಇರುವ  ಕಾಗದದಲ್ಲಿನದನ್ನು  ಓದವನೋ , ಇಲ್ಲವೆ ಕಂಠ ಪಾಠ ಮಾಡಿರುವನೋ ಎಂದು. ಎರಡೂ ಅಲ್ಲ ಚಾಲಕನು ಕಿವಿಯಲ್ಲಿ ಚಿಕ್ಕ ಮೈಕ್ರೋ ಫೋನು ಇರುವುದು. ಅದರ ಮೂಕ ಬಂದ ಪ್ರಶ್ನೆಗಳನ್ನು  ಅವನು ಕೇಳುವನು. ನಮ್ಮ ಜತೆ ಮಾತನಾಡುತ್ತಾ ಚಾಲನೆ ಮಾಡುವಾಗ ಅಫಘಾತ ವಾದರೆ ಗತಿ ಏನು ಎಂಬ ಗಾಬರಿ ಬೇಕಿಲ್ಲ.ಅದರಿಂದ ವಾಹನ ಚಾಲನೆಗೆ ಯಾವುದೆ ತೊಂದರೆಯಾಗದು.ಇದರ ಜೊತೆಗ ಪ್ರಶ್ನೆಗೆ ಪ್ರಯಾಣಿಕರಿಂದ  ಬಂದ ಉತ್ತರ ಸರಿಯೋ? ತಪ್ಪೋ? ಅವರು ಉತ್ತರಿಸಲು ತೆಗೆದು ಕೊಂಡ ಸಮಯ ಎಲ್ಲವನ್ನೂ ಹಸಿರು , ಕೆಂಪು ದೀಪಗಳು ಸೂಚಿಸುವವು. ಅವನ್ನೂ ಸಹ ನೋಡಕೊಳ್ಳಲು ವ್ಯವಸ್ಥೆ ಇದೆ. ಪ್ರಯಾಣಿಕರು ಟ್ಯಾಕ್ಸಿ  ಹತ್ತಿದನಂತರ. ಕಾರ್ಯ ಕ್ರಮದಲ್ಲಿ ಭಾಗವಹಿಸಿಲು ಒಪ್ಪಿದರೆ ಅವರ ಜತೆ ಇನ್ನೊಬ್ಬರೂ ಏರಿ ಎಲ್ಲವನ್ನೂ ಗಮನಿಸುವರು. ಅಲ್ಲದೆ ಇದರ ನೇರ ಪ್ರಸಾರ ಟಿವಿಯಲ್ಲಿ ಆಗುವುದಿಲ್ಲ..ವಿತ್ರೀಕರಣದಲ್ಲಿ  ಯಾವುದೆ ತೊಂದರೆ ಬಂದರೆ ನಂತರ ಅದನ್ನು ಎಡಿಟ್‌ಮಾಡುವರು.  ಇದು ಅಮೇರಿಕಾದ ಒಂದೆರಡು ನಗರಗಳಲ್ಲೂ ನಡೆಯುವುದು.
ಈ ಮೊಬೈಲ್‌ಷೋ ಪ್ರಾರಂಭ ವಾದ್ದು  ಬ್ರಿಟನ್‌ನಲ್ಲಿ. . ಆಡಮ್‌ವುಡ್‌೨೦೦೫ರಲ್ಲಿ ಮೂಲ ಕಾರ್ಯಕ್ರಮ ರೂಪಿಸಿದ. ನಂತರ ಅದು ಯುರೋಪಿನ ಅನೇಕ ದೇಶಗಳಿಗೂ ಹರಡಿತು. ಆಷ್ಟ್ರೇಲಿಯಾ,ಕೆನಡಾ, ಜಪಾನ್‌ಮತ್ತು ನ್ಯೂಜಿಲೆಂಡ್‌ಗಳಲ್ಲೂ ಜನಪ್ರಿಯವಾಗಿದೆ.ಭಾರತದಲ್ಲಿ ಇನ್ನೂ ಪಾದಾರ್ಪಣೆ ಮಾಡಿಲ್ಲ
ಅದರಲ್ಲಿ ನೀಡುವ ಹಣ ನಿಜವಾದದಲ್ಲ. ಅದು ಕೇವಲ ಕ್ಯಾಮರಾ ಕಣ್ಣಿಗೆ  ಮಾತ್ರ.  ಹಣವನ್ನು ನಂತರ ಚೆಕ್‌ಮೂಲಕ  ಗೆದ್ದವರ ವಿಳಾಸಕ್ಕೆ ಕಳುಹಿಸುವರು. ನ್ಯೂಯಾರ್ಕ ನಗರದದಲ್ಲಿ ಚಲಿಸುವ ಸಾವಿರಾರು ಎಲ್ಲೋ ಟ್ಯಾಕ್ಸಿಗಳಲ್ಲಿ ಇದು ಯಾವುದು ಎಂದು ತಿಳಿಯದು. ಅದರ ವೀಶೇಷ ವೆಂದರೆ ಪ್ರಯಾಣಿಕರಲ್ಲಿ ಅಚ್ಚರಿ ಮೂಡಿಸುವುದು. ಅಲ್ಲದೆ ಎಲ್ಲ ಪ್ರಯಾಣಿಕರ ಪ್ರಸಂಗಗಳು ಪ್ರಸಾರ ವಾಗುವ ಖಾತ್ರಿ ಇಲ್ಲ.ಜನರಿಗೆ ಖುಷಿಕೊಡುವ ಹಾಗಿದ್ದರೆ ಮಾತ್ರ  ಪ್ರಸಾರ ವಾಗುವವು.ದಿನವೂ ಅದೃಷ್ಟವಿದ್ದ ಪ್ರಯಾಣಿಕ ಚುರುಕಾಗಿದ್ದರೆ ಬಹುಮಾನ ಪಡೆಯಬಹುದು.

Saturday, December 1, 2012

ಅಮೇರಿಕಾ ಅನುಭವ-೩












ಲಂಪಟನಿಗೆ ಲಲನೆಯರೇ  ಕಲಿಸಿದ ಪಾಠ    


ಒಂದು ಹೆಣ್ಣು ಒಂದು ಗಂಡು ಹೇಗೋ ಏನೋ ಸೇರಿ ಕೊಂಡು ಒಂದಾಗಿ  ನಡೆಸುವ ಸಂಸಾರವೆ ಜೀವನದ ಸಾರ ಎನ್ನುವರು. ಆದರೆ ಬಹು ಪತ್ನಿತ್ವ  ಅನಾದಿ ಕಾಲದಲ್ಲಿ ಇತ್ತಲ್ಲ  ಎನ್ನುವ ಜನರೂ ಈಗ ಬದಲಾದ ಕಾಲದಲ್ಲಿ   ’ಹೆಂಡತಿಯೊಬ್ಬಳು ಮನೆಯಲ್ಲಿದ್ದರೆ  ನಾನು ಒಬ್ಬ ಶಿಪಾಯಿ,  ಹೆಂಡತಿಯೊಬ್ಬಳು ಜತೆಯಲ್ಲಿದ್ದರೆ ನನಗದೆ ಕೋಟಿ ರೂಪಾಯಿ”  ಎಂಬ  ಕವಿ ಮಾತನ್ನು ಹೆಚ್ಚು ಕಡಿಮೆ  ಒಪ್ಪಿಕೊಂಡಿದ್ದಾರೆ. ಮುಕ್ತ ಲೈಂಗಿಕ ಸ್ವಾತಂತ್ರ್ಯವಿರುವ ಅಮೇರಿಕಾದಲ್ಲೂ  ಈ ಭಾವನೆ ಒಂದಲ್ಲ ಒಂದು ರೀತಿಯಲ್ಲಿ ಆಗಾಗ ವ್ಯಕ್ತವಾಗುತ್ತಿರುತ್ತದೆ.  ಹೆಣ್ಣೇ ನಿನ್ನ ಇನ್ನೊಂದು   ಹೆಸರೇ ಅಸೂಯೆ , ಎಂಬ ಇಂಗ್ಲಿಷ್‌ ನಾಟಕ ಪಿತಾಮಹ ಷೇಕ್‌ಸ್ಪಿಯರ್‌ನ   ಮಾತು ಕಾಲಾತೀತ  ಹಾಗೂ ದೇಶಾತೀತ ವಾದ ಸರ್ವಕಾಲಿಕ ಸತ್ಯ    ಇದು ಮತ್ತೊಮ್ಮೆ ಅಮೇರಿಕದಲ್ಲಿ ಬಹು ಗಂಭೀರರೂಪದಲ್ಲಿ ಪ್ರಯೋಗವಾಗಿದೆ.
ರಾಬರ್ಟ್  ನಲವತ್ತೈದರ ಕಟ್ಟು ಮಸ್ತಾದ ಗಂಡಸು.ಜೂಲಿ ಅವನ ನಲ್ವತ್ತೆರಡರ  ಮಜಭೂತಾದ ಹೆಂಡತಿ .  ಅವನಿಗೆ  ಇದು  ಮೂರನೇ ಮದುವೆ. ಇವಳಿಗೆ  ಇವನು  ಎರಡನೆ  ಗಂಡ. ಇದು ಇಲ್ಲಿನ ಒಪ್ಪಿತ ವಿಧಾನ.ಇವರದು ಹೇಳಿ ಕೇಳಿ ಆಧುನಿಕ ಜೋಡಿ.'ನನ್ನ ಮಕ್ಕಳು, ನಿನ್ನ ಮಕ್ಕಳು  ಮತ್ತು  ನಮ್ಮ ಮಕ್ಕಳ  ನಡುವೆ ವಿವಾದ ಇರಬಾರದು' ಎಂಬ ಮುನ್ನೆಚರಿಕೆ ತೆಗೆದುಕೊಂಡೆ ಪ್ರೀತಿಸಿ ಮದುವೆಯಾದವರು.ಈ ಮದುವೆಯಿಂದಲೂ  ಒಂದು ಮಗುವೂ ಇದೆ. ಒಟ್ಟು ನಾಲಕ್ಕು ಮಕ್ಕಳು.ಆರು ವರ್ಷವಾದರೂ  ತಂಟೆ ತಕರಾರಿಲ್ಲದೆ ಜೀವನ ಸಾಗಿದೆ.ಇವರದು ದುಡಿಯುವ ಜೋಡಿ. ಅವನೊಂದು  ಕಡೆ ಕೆಲಸ ಮಾಡುವನು. ಇವಳೊಂದು ಕಡೆ ಕೆಲಸ  ಮಾಡುವಳು. ಎರಡು ಆದಾಯ. ಎರಡು ಕಾರು. ಮನೆ ಮಾತ್ರ ಒಂದೇ. ವಾರದ ಉದ್ದಕ್ಕೂ ದುಡಿಮೆಯ ಗಡಿಬಿಡಿಯಾದರೂ ವಾರಾಂತ್ಯಕ್ಕಂತೂ  ಒಟ್ಟಿಗೆ ಸೇರುತ್ತಾರೆ.  ಯಾವುದಕ್ಕೂ ಅತಿ ಅವಲಂಬನೆ ಇಲ್ಲದ ಅನುಕೂಲದ  ದಾಂಪತ್ಯ.
 
ಗಂಡ  ಹಲವು ಹೆಣ್ಣಿನ ಸಂಗ ಮಾಡಿದವ.  ಚಪಲ ಚೆನ್ನಿಗ ರಾಯ.ಮೂರನೇ ಮದುವೆಯಾದರೂ ಆಗಲೇ ಮದುವೆಯಾದ ಆರು ವರ್ಷಕ್ಕೆ ಸಂಗಾತಿ ಹಳಬಳೆಂದು ಅನಿಸಿದೆ. ಹೊಸ ಅನುಭವಕ್ಕೆ  ಮನಸ್ಸು ಹಾತೊರೆಯುತ್ತಿದೆ.ಸಪ್ತವಾರ್ಷಿಕ ತೀಟೆ ತಲೆ ಎತ್ತುವುದು ಎಂಬ ಮಾತಿದೆ.  ಆದರೆ ಇವನಿಗೆ ಆರನೇ ವರ್ಷಕ್ಕೆ ಮನದಲ್ಲಿ ತುಡಿತ ಮೊದಲಾಗಿದೆ.ಹೊಸತನಕ್ಕೆ ಮನ ಹಂಬಲಿಸಿದೆ.ವಿವಾಹ ಬಾಹಿರ ಸಂಬಂಧಗಳ ಬಗ್ಗೆ ಅಮೇರಿಕಾ ಅಷ್ಟೇನೂ ನಿಷ್ಠೂರವಲ್ಲದ ಸಮಾಜ. ಶ್ರೀ ರಾಮಚಂದ್ರನಂತೆ ಗಂಡ ,  ಸತಿ ಸಾವಿತ್ರಿಯಂತೆ ಹೆಂಡತಿ  ಇರಬೇಕೆಂಬ ಕಟ್ಟು ನಿಟ್ಟು  ಇಲ್ಲ. ಆದರೆ ಸಂಸಾರದಲ್ಲಿನ ಸಾಮರಸ್ಯ ಕಾಪಾಡಲು ಮತ್ತು ಹೊಂದಾಣಿಕೆಯ ದೃಷ್ಟಿಯಿಂದ ಹೊರ ಚಾಳಿಗೆ ಅವಕಾಶ ಕೊಡುವುದಿಲ್ಲ. ಆದರೂ ಕದ್ದು ಮುಚ್ಚಿ ಹೆಂಡತಿ ಊರಲ್ಲಿ ಇಲ್ಲದಾಗ, ತಾನು ಹೊರ ಪ್ರವಾಸಕ್ಕೆ ಹೋದಾಗ ಬೇಲಿ ಹಾರಿ ಅನ್ಯರ    ಹೊಲದಲ್ಲಿನ ಮೇವು ಮೆದ್ದದು ಉಂಟು.ಜೂಲಿಗೆ ಅನುಮಾನ ಬಂದಿಲ್ಲ ಎಂತಲ್ಲ. ಆದರೆ ಇದೊಂದು ಸಂಚಾರಿ ಭಾವ ಎಂದು ಕೊಂಡು ನೆಮ್ಮದಿಯಿಂದ ಇದ್ದಾಳೆ.ರಾಬರ್ಟನಿಗೆ ಅವಳ ಮೌನದಿಂದ ಹುಮ್ಮಸು ಹೆಚ್ಚಾಗಿದೆ. ಮನೆಗೆ ಬರುತ್ತಿದ್ದ ಹೆಂಡತಿಯ ಗೆಳತಿಯರಿಗೆ ಬಲೆ ಬೀಸ ಬಯಸಿದ್ದಾನೆ. ಪಕ್ಕದ ಮನೆ ಪಾರ್ವತಮ್ಮನ ಅಡುಗೆ ಬಹಳ ರುಚಿ. ಎನ್ನುವ ಹಾಗೆ ಅವನಿಗೆ ಹೆಂಡತಿಯ ಗೆಳತಿಯರೆಲ್ಲ ಅಪ್ಸರೆಯರೆ ಎನಿಸಿದೆ.ಮೊದ ಮೊದಲು  ಹುಡುಗಾಟ ಎಂದು ಅವರೂ  ಸುಮ್ಮನಾಗಿದ್ದಾರೆ.  ಒಬ್ಬಳಲ್ಲ, ಇಬ್ಬರಲ್ಲ  ಮೂವರು ಗೆಳತಿಯರಿಗೂ ಇದೆ ಅನುಭವ  ಆಗಿದೆ . ಆ ಗೆಳೆತಿಯರದು  ಇಂದು ನಿನ್ನೆಯ ಪರಿಚಯ ಅಲ್ಲ. ಶಾಲಾ  ದಿನಗಳಿಂದಲೂ  ಗೆಳತಿಯರು.ಅವರ ನುಡುವೆ  ಗುಟ್ಟು ಎಂಬುದು ಗೊತ್ತೇ  ಇಲ್ಲದ ವಿಷಯ. ಅವರು ಒಟ್ಟಾಗಿ ಕುಳಿತಾಗ ಆಮಾತು ಈ ಮಾತು ಆಡುತ್ತಾ ಈ ವಿಷಯ ಬಂದಿದೆ. ಎಲ್ಲರದೂ ಅದೆ ಅನುಭವ ಆಗಿದೆ. ಗೆಳತಿಯ ಗಂಡನ ಉದ್ದೇಶ ಅವರಿಗೆ ಅರ್ಥವಾಗಿದೆ. ಏನಾದರು ಮಾಡಿ ಗೆಳತಿಗೆ ಆಗಬಹುದಾದ  ಅನ್ಯಾಯ   ತಡೆಗಟ್ಟಲು ಮನಸು ಮಾಡಿದ್ದಾರೆ. ಒಬ್ಬಳು ಅವನಿಗೆ ಅನಿವಾರ್ಯವಾಗಿ   ಒಲಿದಂತೆ ನಟಿಸಿದ್ದಾಳೆ.ಅವನಿಗೆ ಸಾಮ್ರಾಜ್ಯ ಗೆದ್ದಷ್ಟು ಸಂಭ್ರಮ. ಹತ್ತಿರದ ಮೋಟೆಲ್ ಒಂದರಲ್ಲಿ ಸೇರಲು ಸಮಯ ನಿಗದಿಯಾಗಿದೆ. ಇಬ್ಬರೂ ನಿಗದಿತ ಸಮಯಕ್ಕೆ ಮೊಟೆಲ್‌ನ ಕೋಣೆ ಸೇರಿದ್ದಾರೆ. ಅವನು ವಿಜಯೋತ್ಸಾಹದಿಂದ ಸರಸ ಸಲ್ಲಾಪ ಶುರು ಮಾಡಿದ್ದಾನೆ. ಪ್ರೇಮಿಗಳಿಗೆ ಯಾವ ಹಂಗು ಯಾಕೆ ಬೇಕು. ಮೈ ಮೇಲಿನ ಬಟ್ಟೆಗಳ ತೊಂದರೆ ನಿವಾರಿಸಿ ನಗು ನಗುತ್ತ ಖುಷಿಯಲ್ಲಿರುವಾಗ, ಬಾಗಿಲನ್ನು ದಡ್  ದಡ್ ಬಡಿದ ಸದ್ದು. ಅವನು ಗಾಬರಿಯಾಗಿದ್ದಾನೆ.  ನಿದ್ದೆ ಹೋದವನಂತೆ  ನಟಿಸುತ್ತಾ ಹೊದಿಕೆ ಹೊದೆದು ಹಾಸಿಗೆಯಲ್ಲಿ ಒರಗಿದ್ದಾನೆ. ಅವಳು  ಗಂಭೀರವಾಗಿ ಬಾಗಿಲು ತೆಗೆದಾಗ ಇನ್ನಿಬ್ಬರು ಸುಂದರಾಂಗಿಯರು ಒಳಗೇ   ಬಂದಿದ್ದಾರೆ.  ಅವನಿಗೆಗಾಬರಿ ಯಾಗಿದೆ. ಇದೇನು ಒಬ್ಬರು ಬದಲು ಮೂವರು ಬಂದಿದ್ದಾರಲ್ಲ ಎಂದು  ದಿಗ್ಮೂಢನಾಗಿದ್ದಾನೆ. ಅವರಾದರೋ  ಹುಟ್ಟು ಉಡುಗೆಯಲ್ಲಿ ಇದ್ದ  ಅವನನ್ನು  ಸುತ್ತುವರೆದು ಯಾರು ಬೇಕು ಯಾರು ಬೇಕು ಎಂದು ಕಿಚಾಯಿಸಿದ್ದಾರೆ.  ಅಷ್ಟರಲ್ಲಿ ಹೆಂಡತಿಯದೂ ಪ್ರವೇಶವಾಗಿದೆ.ಎಲ್ಲರೂ ಸೇರಿ ಅವನ ಮೈ ಮೆತ್ತಗೆ ಮಾಡಿದ್ದಾರೆ.  ಯಾರನ್ನಾದರು  ಆರಿಸಿಕೋ. ಜೀವನ  ಸಂಗಾತಿಯಾಗಲು ತುದಿಗಾಲಲ್ಲಿ ನಿಂತಿದ್ದೇವೆ. ನಿನ್ನಂತಹ ಗಂಡು ಇನ್ನೊಬ್ಬರಿಲ್ಲ  ಎಂದೆಲ್ಲ ಹಿಯಾಳಿಸಿದ್ದಾರೆ. ಪೆಚ್ಚಾಗಿದ್ದ ಅವನನ್ನು ಆ ಸ್ಥಿತಿಯಲ್ಲಿಯೇ ಮಂಚಕ್ಕೆ ಬಿಗಿದು, ಬಾಯಿಗೆ,  ಗುಪ್ತಾಂಗಕ್ಕೆ ಪ್ಲಾಸ್ಟರ್ ಅಂಟಿಸಿ   ಜಾಗ ಖಾಲಿ ಮಾಡಿದ್ದಾರೆ
.ಅವನು ಗಂಟೆ ಗಟ್ಟಲೆ ಒದ್ದಾಡಿ ಬಾಯಿಗೆ ಅಂಟಿಸಿದ್ದ ಪ್ಲಾಸ್ಟರ್ ಅಗಿದು ನುಂಗಿ ಸಹಾಯಕ್ಕಾಗಿ ಕೂಗಿದ್ದಾನೆ. ಮೋಟೆಲ್ ಸಿಬ್ಬಂದಿ ಅವನ ಕಿರುಚಾಟ  ಕೇಳಿ ಬಂದು ಅವನನ್ನು  ಬಂಧನದಿಂದ ಬಿಡುಗಡೆ ಮಾಡಿದ್ದಾರೆ.ಈಗ ಪೊಲೀಸರು   ಕ್ರಮಕ್ಕೆ ಮುಂದಾಗಿದ್ದಾರೆ.  ಮಹಿಳೆಯರ ಮೇಲೆ ಲೈಂಗಿಕ ಹಿಂಸೆಯ ಆರೋಪ ಹೊರಸಿ ಮೊಕದ್ದಮೆ ಹೂಡಲಾಗಿದೆ.ಇದು ಅವನ ಮೋಹದ ಮಬ್ಬೋ, ಅವಳ  ಮನದಲ್ಲಿ ಹಸಿರು ಕಣ್ಣಿನ ಹಾವು ಹೆಡೆ ಎತ್ತಿದ  ಪರಿಣಾಮವೋ, ಗೆಳತಿಯರ ಕಾಳಜಿಯ ಕಳಕಳಿಯೋ  ತಿಳಿಯದು.ಆದರೆ ಎಲ್ಲರೂ ಕಾನೂನಿನ ಕೈಗೆ ಸಿಲುಕಿ ಕಷ್ಟಕ್ಕೆ ಸಿಕ್ಕಿಹಾಕಿಕೊಂಡಿರಿವುದು ಸತ್ಯ. ಮುಕ್ತ ಕಾಮದ ಸಮಾಜದಲ್ಲಿ  ಈ ರೀತಿಯ ಪತಿ ಪ್ರೇಮದ ಅಭಿವ್ಯಕ್ತಿಯ ಫಲವಾಗಿ ಎಲ್ಲರು ನ್ಯಾಯಾಲಯ ಅಲೆಯುತ್ತಿದ್ದಾರೆ
ಇದು ನಮ್ಮ ಮಹಾಭಾರತದ .ಕೀಚಕನ ಕಥೆಯನ್ನು  ತುಸು ಮಟ್ಟಿಗೆ  ನೆನಪಿಸುತ್ತದೆ. ಒಂದೆ ವ್ಯತ್ಯಾಸ. ಅಲ್ಲಿ ಕೀಚಕ ದ್ರೌಪದಿ ಒಬ್ಬಳನ್ನೆ ಬಯಸಿದ. ಅವಳ ಪತಿಗಳಲ್ಲಿ  ಒಬ್ಬನಿಂದ  ಹತನಾದ. ಆದರೆ ಈ ಆಧುನಿಕ ಹೆಣ್ಣುಬಾಕ ಹಲವಾರು ಹೆಂಗಳೆಯರ ಜತೆ ಸಂಗ ಬೆಳಸ ಬಯಸಿದ.ಅವನಿಗೆ ಶಿಕ್ಷಿಸಿದವರು ಬೇರೆ ಯಾವ ಗಂಡಸೂ ಅಲ್ಲ. ಅವನು ಬಯಸಿದ ಮಹಿಳೆಯರೆ ಅವನಿಗೆ ಮುಳುವಾದರು. ಒಂದು ರೀತಿಯಲ್ಲಿ ಮಹಿಳೆಯು ಅಬಲೆಯಲ್ಲ ಸಬಲೆ ಯಾಗಿದ್ದಾಳೆ ಎಂಬುದರ ಸಂಕೇತ ಇದು ಎನ್ನಬಹುದು


(ಅಮೇರಿಕಾ ಪತ್ರಿಕೆಯೊಂದರಿಂದ ಎಳೆ ಪಡೆದಿದೆ )